Homeಕರ್ನಾಟಕಅಣ್ಣಾ ಮಲೈ ಮಧುಕರ ಶೆಟ್ಟಿಯಲ್ಲಾ! - ಪ್ರಜ್ಞಾವಂತ ಪ್ರಜೆಯೊಬ್ಬರ ಅಭಿಪ್ರಾಯ

ಅಣ್ಣಾ ಮಲೈ ಮಧುಕರ ಶೆಟ್ಟಿಯಲ್ಲಾ! – ಪ್ರಜ್ಞಾವಂತ ಪ್ರಜೆಯೊಬ್ಬರ ಅಭಿಪ್ರಾಯ

ಎಸ್ಪಿ ಆದ ಬಳಿಕ ಕೊನೆ ಕೊನೆಗೆ ಸೆಲೆಬ್ರೆಟಿಯಂತೆ ಕಂಡುಬಂದಿದ್ದೂ ಸುಳ್ಳಲ್ಲಾ.

- Advertisement -
- Advertisement -

| ಡಿ.ಎಸ್.ಬಿ |

ಪೊಲೀಸ್ ಇಲಾಖೆಯಲ್ಲಿದ್ದೂ ಪ್ರಾಮಾಣಿಕ ಮತ್ತು ಕರ್ತವ್ಯದಲ್ಲಿ ದಕ್ಷನಾಗಿರುವುದರ ಜೊತೆಗೆ ಮಾನವೀಯ ಮನಸ್ಸುಳ್ಳ ಸಮಾಜವಾದಿಯಾಗಿದ್ದರು ಮಧುಕರ ಶೆಟ್ಟಿ. ಅವರ ಅಸೌಖ್ಯದ ಸಾವಿನ ಬಳಿಕ ಜ್ಞಾನೋದಯ ಉಂಟಾಗಿದ್ದರಿಂದ ಅಣ್ಣಾ ಮಲೈ ರಾಜಿನಾಮೆಗೆ ಮುಂದಾಗಿರುವಂತಿದೆ ಎಂಬ ಪ್ರಚಾರ ವ್ಯಾಪಕವಾಗುವ ಲಕ್ಷಣಗಳ ಹಿನ್ನೆಲೆಯಲ್ಲಿ ಈ ಶೀರ್ಷಿಕೆ ನೀಡಲಾಗಿದೆ. ಇಬ್ಬರೂ ಒಂದೇ ಇಲಾಖೆಯವರಾದರೂ ಇಬ್ಬರದ್ದೂ ಪ್ರತ್ಯೇಕ ವ್ಯಕ್ತಿತ್ವ!
ವೃತ್ತಿ ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಹಂಬಲದಲ್ಲೇ ಕೆಲಸ ನಿರ್ವಹಿಸಿದ್ದು ಅಣ್ಣಾ ಮಲೈ ಎಂದರೇ ಅತಿಶಯೋಕ್ತಿಯಾಗಲಾರದು
ಸಾಮಾಜಿಕ ತುಡಿತ ಇದ್ದರೂ ಉಡುಪಿಯ ಸೇವೆಯ ಅವಧಿಯಲ್ಲಿ ಕೋಮುವಾದಿಗಳಿಂದ ಕಂಗೆಟ್ಟಿದ್ದೂ ಇದೇ ಅಣ್ಣಾ ಮಲೈ.
ಮಟ್ಕಾ ನಿರ್ಮೂಲನೆ ಮಾಡಲು ಮಟ್ಕಾ ದೊರೆಯ ಮನೆಗೆ ನುಗ್ಗಿ ದೊರೆಸಾನಿಯನ್ನೇ ಎಸ್ಪಿ ಕಚೇರಿಗೆ ತಂದಿರಿಸಿಕೊಂಡು ಮಟ್ಕಾ ದೊರೆಗೆ ಬಂಧನದ ಭೀತಿ ಹುಟ್ಟಿಸಿದ್ದ ಅಣ್ಣಾ ಮಲೈ. ಪರಿಸರ ರಕ್ಷಣೆಯ ಹೆಸರಿನ ಸೈಕಲ್ ಸವಾರಿಯ ಕಾರ್ಯಕ್ರಮಕ್ಕೆ ಉಡುಪಿಯ ಪರಿಸರ ವಿರೋಧಿ ಯುಪಿಸಿಎಲ್ ನ ಮಾಲಿಕತ್ವದ ಅದಾನಿ ಫೌಂಡೇಶನ್‍ನ ನೆರವು ಪಡೆದು ವಿಸ್ಮಯ ಹುಟ್ಟಿಸಿದ್ದರು.
ಉಡುಪಿಯ ಎಸ್ಪಿಯಾಗಿ ಪ್ರಭಾರಕ್ಕೆ ಬಂದಾಗಲೇ ದಲಿತ ಸಂಘಟನೆಯವರನ್ನು ಏಕ ವಚನದಲ್ಲಿ ಗದರಿಸಿ, ಸಂಘಟನೆಯನ್ನು ಹೀಯಾಳಿಸಿ ಕೊನೆಗೆ ತನ್ನ ಕನ್ನಡ ಭಾಷೆಯ ತಿಳಿವಳಿಕೆಯ ಕೊರತೆಯ ನೆರವಿನಲ್ಲಿ ಅದನ್ನು ಮರೆಯಾಗಿಸುವಲ್ಲಿ ಯಶಸ್ವಿಯಾಗಿದ್ದರು.
80 ರ ದಶಕದ ಆರಂಭದಲ್ಲಿ ನಡುಮನಿ ನಾರಾಯಣ ಎಂಬ ಎಸ್ಪಿಯ ಬಳಿಕ ಅಕ್ರಮ ದಂಧೆಯವರಲ್ಲಿ ಭೀತಿ ಹುಟ್ಟುವಂತೆ ಮಾಡಿದ್ದೂ ಇದೇ ಅಣ್ಣಾ ಮಲೈ.
ಎಸ್ಪಿಯಾಗುವ ಮೊದಲು ಕಾರ್ಕಳದ ಎಸ್ಪಿಯಾಗಿ ಬಂದಾಗ ಮಾಡಿದ ಸದ್ದೇ ಅವರನ್ನು ಉಡುಪಿ ಎಸ್ಪಿ ಗಾದಿಯಲ್ಲಿ ಕುಳ್ಳಿರಿಸುವಂತೆ ಮಾಡಿತ್ತು!
ಎಸ್ಪಿ ಆದ ಬಳಿಕ ಕೊನೆ ಕೊನೆಗೆ ಸೆಲೆಬ್ರೆಟಿಯಂತೆ ಕಂಡುಬಂದಿದ್ದೂ ಸುಳ್ಳಲ್ಲಾ.
ಮಹತ್ವಾಕಾಂಕ್ಷೆಯಿಂದ ಇಲಾಖೆಗೆ ಬಂದಿದ್ದ ಅಣ್ಣಾ ಮಲೈ ಪ್ರಚಾರ ಬಯಸುವ ಅಧಿಕಾರಿಯಾಗಿ ಇಲ್ಲಿಂದ ವರ್ಗಾವಣೆಯಾಗಿದ್ದನ್ನು ಯಾರೂ ನಿರಾಕರಿಸಲಾರರು.
ಪೊಲೀಸ್ ಇಲಾಖೆಯಲ್ಲಿ ಇದೂ ಅಗತ್ಯ ಇದೆಯೇನೋ ಅನ್ನಿಸುವುದೂ ಸುಳ್ಳಲ್ಲ. ಜನರಲ್ಲಿ ಇಲಾಖೆಯ ಬಗ್ಗೆ ಬರೇ ಭಯ ತುಂಬಿಕೊಂಡಿದ್ದರೇ ಬದಲಾವಣೆ ಆಗದೇನೋ?!
ಕಾರ್ಕಳ ಎಎಸ್ಪಿಯಾಗಿದ್ದಾಗ ಎಸ್ಪಿ ಅವರ ರಿವ್ಯೂ ಮೀಟಿಂಗಿನಲ್ಲಿ ಮಟ್ಕಾ ಹಾವಳಿ ನಿಗ್ರಹಿಸಿದ್ದೇನೆಂದು ಬಡಾಯಿ ಕೊಚ್ಚಿದ್ದ ಅಂದಿನ ಉಡುಪಿ ಡಿವೈಎಸ್ಪಿ ಪ್ರಭುದೇವ ಮಾನೆಯ ಸುಳ್ಳನ್ನು ಬಯಲಾಗಿಸಲು ತಾನು ಆ ಹುದ್ದೆಯ ಪ್ರಭಾರಕ್ಕೆ ಬಂದಾಗ ಮುಂದಾಗಿದ್ದು ಪ್ರಚಾರ ಪ್ರಿಯತೆಯೋ? ಇಲಾಖೆಯನ್ನು ಸರಿಪಡಿಸುತ್ತೇನೆಂಬ ಆಕಾಂಕ್ಷೆಯೋ? ವೃತ್ತಿಯ ವೈ ಮನಸ್ಸೋ ಅರ್ಥವಾಗಿಲ್ಲಾ. ಆದರೂ ಎಸ್ಪಿಯಾಗಿದ್ದಾಗ ಮಟ್ಕಾ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಂಡಿದ್ದನ್ನು ಅಲ್ಲಗಳೆಯಲಾಗದು.
ಗಂಗೊಳ್ಳಿಯಲ್ಲಿ ಹುಟ್ಟಿಕೊಂಡ ಮತೀಯವಾದದ ನಿಗ್ರಹಕ್ಕೆ ನಿಯೋಜಿತರಾದಾಗ ತನ್ನ ಸಿಂಗಂ ಗಿರಿ ಧರ್ಮಾಂಧರ ಗುಂಪಿನ ಎದುರು ನಡೆಯಲಾರದು ಎಂಬ ವಾಸ್ತವ ಅರಿತ ಅಣ್ಣಾ ಮಲೈ ಮತಾಂಧರ ಒತ್ತಾಯಕ್ಕೆ ಮಣಿದು ಆರೋಪಿಗಳ ಬಂಧ ಮುಕ್ತತೆ ಮಾಡುವಂತಾಗಿತ್ತು.
ಅದಕ್ಕಾಗಿಯೇ ಹೇಳಿದ್ದು ಅಣ್ಣಾ ಮಲೈನೇ ಬೇರೆ : ಮಧುಕರ ಶೆಟ್ಟರೇ ಬೇರೆ ಅಂತ.
ಸಿಂಗಂ ಹೆಸರು ಅಂಟಿಕೊಂಡಿದ್ದು ಉಡುಪಿಯಿಂದ!
ಅಣ್ಣಾ ಮಲೈ ಎಂಬ ತಮಿಳಿಗ ಕಾರ್ಕಳ ದ ಎಎಸ್ಪಿಯಾಗಿ ಬಂದಾಗ .ಮಾಡಿದ ಖದರು ಅವರೇ ಉಡುಪಿ ಎಸ್ಪಿಯಾಗಬೇಕು ಅಂತ ಮಾಡಿತ್ತು. ಮುಖ್ಯವಾಗಿ ಆಗ ಜನಪರ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಮಧ್ಯಾವಧಿಯ ಸಂಸದಗಿರಿಯಲ್ಲಿದ್ದರು. ಸಮಾಜವಾದಿ ಸಿದ್ಧರಾಮಯ್ಯರ ಮುಖ್ಯಮಂತ್ರಿತ್ವದಲ್ಲಿ ಕೆಲಸÀಗಾರ ವಿನಯಕುಮಾರ ಸೊರಕೆಯ ಉಸ್ತುವಾರಿ ಗಿರಿಯಲ್ಲಿದ್ದ ಉಡುಪಿಗೆ ಒಬ್ಬ ಖಡಕ್ ಖಾಕಿಯನ್ನು ತರಬೇಕೆಂಬ ನಿರ್ಧಾರ ಮಾಡಲಾಯಿತು. ಅದರಿಂದಲೇ ಜಿಲ್ಲೆಯಲ್ಲೇ ಪ್ರೊಬೇಷನ್ ಗಿರಿಯ ಎಎಸ್ಪಿ ಹುದ್ದೆ ನಿರ್ವಹಿಸಿದ್ದ ಅಣ್ಣಾ ಮಲೈ ಅದೇ ಜಿಲ್ಲೆಯ ಎಸ್ಪಿಯಾಗುವಂತಾಗಿತ್ತು.
ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದಾಗ ಮೊದಲಿಗೆ ಇಲಾಖೆಯ ಒಳಗೇ ಸ್ವಚ್ಛತೆಗೆ ಮುಂದಾಗಿದ್ದರು. ಅದು ಆರಂಭದಲ್ಲೇ ಆಯಕಟ್ಟಿನಲ್ಲಿದ್ದವರಿಗೆ ಅಪಾಯ ತಂದಿರಿಸಿತ್ತು. ಎರಡನೆಯದಾಗಿ ಕ್ರೈಮ್ ಮಟ್ಟಹಾಕಲು ಫೀಲ್ಡಿಗಿಳಿವಾಗಲೂ ಅದು ಎಲ್ಲೂ ಸುದ್ದಿಯಾಗದಂತೆ ಮಾಡಿದರು. ಹಾಗಾಗಿ ಎಸ್ಪಿ ಚಡ್ಡಿ ಹಾಕಿಕೊಂಡು ಸೈಕಲಲ್ಲಿ ಬಂದರಂತೆ. ಜುಗಾರಿಯಲ್ಲಿಗೆ ಸಾಮಾನ್ಯರಂತೆ ಬಂದರಂತೆ. ಫ್ರೋಟೋಕಾಲ್ ನ ಹಂಗು ಹರಿದು ಏಕಾಂಗಿಯಾಗಿ ಓಡಾಡಿದ್ದ ಅಣ್ಣಾ ಮಲೈ ಅಪರಾಧ ಕೃತ್ಯದವರ ಎದೆಯಲ್ಲಿ ಒಂದಷ್ಟು ಭೀತಿಯನ್ನು ಆರಂಭದಲ್ಲಿ ಹುಟ್ಟು ಹಾಕಿದ್ದಂತೂ ನಿಜ. ಆಗಲೇ ಸಿಂಗಂ ಸಿನೆಮಾ ದ ಪ್ರಭಾವಕ್ಕೆ ಒಳಗಾಗುವ ಭಾವುಕ ಜೀವಿಗಳು ಅಣ್ಣಾ ಮಲೈರಲ್ಲೂ ಸಿಂಗಂ ಅನ್ನು ಕಂಡು ಉಡುಪಿಯ ಸಿಂಗಂ ಅನ್ನಲಾರಂಭಿಸಿದ್ದು.
ಮತಾಂಧತೆ ಅಳಿಸುವ ನಿಟ್ಟಿನಲ್ಲಿ ನಿಯೋಜಿತರಾದ ಇವರು ಮತ್ತೆ ಸುಧಾರಣೆಗಾಗಿ ಎಲ್ಲರನ್ನೂ ಒಲೈಸುವಂತಾಗಿದ್ದು ಕೂಡಾ ಇಲ್ಲದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...

ಮುಂಬೈ: 2 ದಿನಗಳಿಂದ ಹೊತ್ತಿ ಉರಿಯುತ್ತಿರುವ ಪೊವೈ ಬೆಟ್ಟಗಳು: ನಿವಾಸಿಗಳಿಂದ ಅಧಿಕಾರಿಗಳ ನಿಷ್ಕ್ರಿಯತೆಯ ಆರೋಪ 

ಮುಂಬೈನ ಪೊವೈ ಬೆಟ್ಟಗಳ ಪ್ರದೇಶದಲ್ಲಿ ಸಂಭವಿಸಿದ ಬೆಂಕಿ ಕಳೆದ ಎರಡು ದಿನಗಳಿಂದ ಉರಿಯುತ್ತಿದೆ ಎಂದು ವರದಿಯಾಗಿದೆ. ನಿವಾಸಿಗಳು ಬೆಂಕಿಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ನಾಗರಿಕ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆಯು ಸಿಕ್ಕಿಲ್ಲ...

‘ದಲಿತ ಕ್ರೈಸ್ತ’ರನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಬೇಕು: ಮಾನವ ಹಕ್ಕುಗಳ ಕಾರ್ಯಕರ್ತ ವಿನ್ಸೆಂಟ್ ಕಥಿರ್

"ದಲಿತ ಕ್ರೈಸ್ತರನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಬೇಕು, ಇದರಿಂದಾಗಿ ಜಾತಿ ಹಿಂಸಾಚಾರದ ಬಲಿಪಶುಗಳು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳ ಪ್ರಕಾರ ಸರ್ಕಾರದಿಂದ ಪರಿಹಾರವನ್ನು ಪಡೆಯಬಹುದು" ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ...

ಪಶ್ಚಿಮ ಏಷ್ಯಾ ಬಿಕ್ಕಟ್ಟು : ಇರಾನ್ ವಿದೇಶಾಂಗ ಸಚಿವರ ಜೊತೆ ಜೈಶಂಕರ್ ಚರ್ಚೆ

ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಅವರೊಂದಿಗೆ ಮಂಗಳವಾರ (ಮಾ.10) ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಈ ವೇಳೆ ಪಶ್ಚಿಮ ಏಷ್ಯಾದ ಬೆಳವಣಿಗೆಗಳು...

ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ಆರೋಪ : ನೌಕಾಪಡೆಯ ಲ್ಯಾನ್ಸ್ ನಾಯಕ್ ಆದರ್ಶ್ ಕುಮಾರ್ ಬಂಧನ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ 24 ವರ್ಷದ ಭಾರತೀಯ ನೌಕಾಪಡೆಯ ಲ್ಯಾನ್ಸ್ ನಾಯಕ್ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮಂಗಳವಾರ (ಮಾ.10)...

ಅಮೆರಿಕದ ತೈಲ ಸಂಸ್ಕರಣಾ ಘಟಕಕ್ಕೆ ರಿಲಯನ್ಸ್ ಹೂಡಿಕೆ : ಟ್ರಂಪ್ ಘೋಷಣೆ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಹೂಡಿಕೆಯ ಸಹಾಯದಿಂದ 50 ವರ್ಷಗಳಲ್ಲಿ ಅಮೆರಿಕ ತನ್ನ ಮೊದಲ ಹೊಸ ತೈಲ ಸಂಸ್ಕರಣಾಗಾರವನ್ನು ಪಡೆಯಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 'ಅಮೆರಿಕ ಫಸ್ಟ್ ರಿಫೈನಿಂಗ್ ಸಂಸ್ಥೆ'ಯು ಟೆಕ್ಸಾಸ್‌ನ...