Homeದಲಿತ್ ಫೈಲ್ಸ್ಮಾತು ಮರೆತ ಭಾರತ; ಇದು ದಲಿತ ಭಾರತದ ಕಥನ

ಮಾತು ಮರೆತ ಭಾರತ; ಇದು ದಲಿತ ಭಾರತದ ಕಥನ

- Advertisement -
- Advertisement -

ಮಾತು ಮರೆಯುವುದರಲ್ಲಿ ಎರಡು ವಿಧ. ಒಂದು, ಕೊಟ್ಟ ಮಾತು ಮರೆಯುವುದು. ಇನ್ನೊಂದು ಮಾತಾಡಲೇಬೇಕಾದಾಗ ಮಾತಾಡದೇ ಇರುವುದು. ಎರಡು ಸನ್ನಿವೇಶದಲ್ಲಿಯೂ ಸಹ ಮಾತುಗಳನ್ನು ಮರೆಯಲಾಗುತ್ತದೆ. ಮರೆಯುವುದು ಸಹಜವಲ್ಲವೆ? ಹೌದು ಸಹಜ. ಒಮ್ಮೆಯಾದರೆ ಸಹಜ. ಮತ್ತೊಮ್ಮೆಯಾದರೂ ಸಹಜವೆನ್ನೋಣ. ಆದರೆ ಶತಮಾನಗಳ ಕಾಲದ ಮರೆವಿಗೆ ಏನೆನ್ನೋಣ? ಜಾಣ ಮರೆವು ಎಂದುಬಿಡಬಹುದು. ಆದರೆ ಭಾರತದಲ್ಲಿ ಜಾಣ ಮರೆವನ್ನೂ ಮೀರಿಸಿದ ಕ್ರೂರ ಮರೆವಿದೆ. ಈ ಕ್ರೂರ ಮರೆವಿಗೆ ಕಾರಣ ಒಂದು ಭಾರತವಿಲ್ಲದ್ದಾಗಿದೆ. ಇಲ್ಲಿ ನೂರಾರು ಭಾರತಗಳಿವೆ. ಅನ್ಯ ದೇಶಗಳಿಗೆ ಹೋಲಿಸಿಕೊಂಡಾಗ ಇಲ್ಲಿ ಹಲವು ಜಾತಿಗಳಿಂದ ಒಡೆದುಹೋಗಿರುವ ಹಲವು ಭಾರತಗಳಿವೆ. 1950ರಲ್ಲಿ ಸಂವಿಧಾನ ಈ ಭಾರತವನ್ನು ಒಂದು ಮಾಡುವ ಪ್ರಯತ್ನಕ್ಕೆ ಮುಂದಾಯಿತಾದರೂ ಆಳುವ ವರ್ಗ ಇಂದಿಗೂ ಅದು ಸಫಲವಾಗದಂತೆ ನೋಡಿಕೊಂಡು ಮತ್ತಷ್ಟು ಛಿದ್ರಗೊಂಡು ಮತ್ತಷ್ಟು ಭಾರತಗಳಾಗುವಂತೆ ಮಾಡಿದೆ.

ಇಂತಹ ಭಾರತದ ಪ್ರಾಚೀನ ಕಾಲದಲ್ಲಿ ಅಸ್ಪೃಶ್ಯ ಭಾರತವೂ ಇತ್ತು. ಆಧುನಿಕ ಭಾರತದಲ್ಲಿ ಪರಿಶಿಷ್ಟ ಜಾತಿಗಳಾಗಿ ಗುರುತಿಸಿಕೊಂಡು ಇಂದು ದಲಿತ ಭಾರತವಾಗಿದೆ. ಆದರೆ ಅಸ್ಪೃಶ್ಯ ಭಾರತ ಅವರ ಪಾಲಿಗೆ ಇಂದಿಗೂ ಜೀವಂತವಿದೆ. ಸಂವಿಧಾನ ಸಭೆಯಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಿ, ಇನ್ನು ಮುಂದೆ ಮನುಷ್ಯರಾದ ಅಸ್ಪೃಶ್ಯರನ್ನು ದೆವ್ವಗಳಂತೆ ಕಾಡುವುದಿಲ್ಲವೆಂದು ಮಾತು ಕೊಟ್ಟ ದಲಿತೇತರರು ತಾವು ಕೊಟ್ಟ ಮಾತನ್ನು ಉಳಿಸಿಕೊಂಡರೆ? ’ಹಿಂದೂ ನಾವೆಲ್ಲ ಒಂದು’ ಎಂದ ಸ್ವಯಂ ಸೇವಕರು ದಲಿತರನ್ನು ಸಮಾನವಾಗಿ ಕಂಡರೆ? ವಸುದೈವ ಕುಟುಂಬಕಂ ಎಂದ ಸಾಧು ಸಂತರು ದಲಿತರೊಂದಿಗೆ ಕಳ್ಳುಬಳ್ಳಿ ಸಂಬಂಧ ಬೆಳೆಸಿದರೆ? ದ್ವೈತ, ಅದ್ವೈತ್ಯ, ವಿಶಿಷ್ಟಾದ್ವೈತಗಳು ದಲಿತರಿಗೆ ದೇಗುಲ ಪ್ರವೇಶ ನೀಡಿದವೇ? ಆಧ್ಯಾತ್ಮದ ಭಾಗವಾಗಿಸಿಕೊಂಡವೆ? ಆಮ್ ಆದ್ಮಿ ಕೆ ಸಾಥ್ ಅಂದವರು ದಲಿತ ಕೇರಿಗಳನ್ನು ಮುಟ್ಟಿದರೆ? ’ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎಂದವರು ದಲಿತರ ವಿಕಾಸಕ್ಕೆ ಕೈ ಹಾಕಿದರೇ? ಹೀಗೆ ಸಾಲುಸಾಲು ಪ್ರಶ್ನೆಗಳಿಗೆ ಉತ್ತರ ಇಲ್ಲವೆಂದೇ ತೋರುತ್ತಿದೆ.

’ರೀ ಈಗ ಮೊದಲಿನಂತಿಲ್ಲ. ಎಲ್ಲಾ ಬದಲಾಗುತ್ತಿದೆ’ ಎಂದವರ ಮುಂದೆ ಲೆಕ್ಕವಿಲ್ಲದಷ್ಟು ದಲಿತರ ಹೆಣಗಳ ಪಟ್ಟಿ ಇಟ್ಟಾಗ ಮಾತನ್ನೇ ಮರೆತುಬಿಡುತ್ತಾರೆ. ೨೦೨೦ರಲ್ಲಿ ದಲಿತರ ಮೇಲೆ 58,563 ದೌರ್ಜನ್ಯಗಳನ್ನು ಎಸಗಲಾಗಿದೆ. ಸ್ವತಂತ್ರ ಭಾರತ ಲೆಕ್ಕವಿಲ್ಲದಷ್ಟು ದಲಿತರ ಹತ್ಯಾಕಾಂಡಗಳಿಗೆ ನ್ಯಾಯವೇ ಸಿಗದೆ ನರಳುತ್ತಿವೆ. ಪ್ರತಿ ದಿನದ ಪತ್ರಿಕೆಗಳ ಮೂಲೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ವರದಿಯಾಗುತ್ತವೆ. ಇದರಲ್ಲಿ ಕೊಲೆ ಅತ್ಯಾಚಾರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಆದರೂ ದಲಿತೇತರರ ಉತ್ತರ ಸಿದ್ಧವಾಗಿರುತ್ತದೆ. ’ಈಗ ಮೊದಲಿನಂತಲ್ಲ ಬಿಡ್ರಿ’.

ವಾಚ್ ಕಟ್ಟಿದ್ದಕ್ಕೆ, ಮೀಸೆ ಬಿಟ್ಟದ್ದಕ್ಕೆ, ಕುದುರೆ ಹತ್ತಿದ್ದಕ್ಕೆ, ಅಂಬೇಡ್ಕರ್ ರಿಂಗ್‌ಟೋನ್ ಇಟ್ಟುಕೊಂಡಿದ್ದಕ್ಕೆ ದಲಿತರನ್ನ ಕೊಲೆ ಮಾಡಿಬಿಡುವಷ್ಟು ಕ್ರೂರಿಗಳು ಇಂದಿಗೂ ಈ ನೆಲದಲ್ಲಿರುವಾಗ ಭಾರತ ಸ್ವಾತಂತ್ರ್ಯಗೊಂಡಿದೆ ಎಂದು ಹೇಗೆ ಹೇಳುವುದು? ಆಗಿರುವ ಗಾಯಕ್ಕೆ ಮುಲಾಮು ಹಚ್ಚಬೇಕಾದ ಸಮಾಜ ಪದೇಪದೇ ಅದೇ ಗಾಯದ ಮೇಲೆ ಬರೆ ಹಾಕುತ್ತಾ ’ನೋಡು ಈಗ ಹಳೆಯ ಗಾಯ ಕಾಣುತ್ತಿಲ್ಲ’ ಎಂದರೆ ದಲಿತರು ನಂಬಿ ಕೂರಬೇಕೆ? ಕಾಲ ಬದಲಾಗಿದೆ ಹಾಗೂ ಸಮಾಜ ಬದಲಾಗಿದೆ ಎಂದು ಬೊಗಳೆ ಬಿಡುವ ಜಾತಿವಾದಿಗಳಿಗೆ ತಾವು ಮರೆತ ಮಾತುಗಳನ್ನು ನೆನಪಿಸಬೇಕಿದೆ. ಅಷ್ಟೇ ಅಲ್ಲ. ಭಾರತದ ಇತಿಹಾಸದಲ್ಲಿ ದಲಿತರ ಮೇಲೆ ಮೇಲ್ಜಾತಿಗಳು ನಡೆಸಿರುವ ದೌರ್ಜನ್ಯವನ್ನು ನೆನಪಿಸಬೇಕಿದೆ. ಇದರ ಜೊತೆಗೆ ದಲಿತರಲ್ಲಿಯೇ ತಮ್ಮ ಸಹಬಾಂಧವರ ಕೊಲೆಗಳನ್ನು ಮರೆತು ಮೈಮರೆತಿರುವವರಿಗೂ ದಲಿತ ಭಾರತದ ಮೇಲೆ ದಲಿತೇತರ ಭಾರತ ನಡೆಸಿರುವ ಭಯೋತ್ಪಾದನೆಯನ್ನು ನೆನಪಿಸಬೇಕಿದೆ. ಜಾತಿಯೆಂಬ ದೇಶದ್ರೋಹದ ವಿವಿಧ ಮುಖಗಳನ್ನು ಹಾಗೂ ಅದರ ಕ್ರೂರ ಮುಖವನ್ನು ತೋರಿಸಬೇಕಿದೆ.

ಬಹುದೊಡ್ಡ ವಿಸ್ಮೃತಿಯನ್ನು ಭಾರತಕ್ಕೆ ಪರಿಚಯಿಸಿ ಅಲ್ಲೆಲ್ಲ ತುಟಕ್ ಪಿಟಕ್ ಎನ್ನದೆ ಬಾಯಿ-ಮನಸ್ಸುಗಳಿಗೆ ಬೀಗ ಜಡಿದುಕೊಂಡು ಕುಳಿತಿದ್ದ, ಈಗಲೂ ಸುದೀರ್ಘ ಜೀವಂತ ಶವಗಳಾಗಿಯೇ ಉಳಿದಿರುವ ಮೂಳೆ ಮಾಂಸದ ತಡಿಕೆಗಳ ಮುಂದೆ ದಲಿತರ ಸುಟ್ಟ ಬೂದಿ, ಹೆಪ್ಪುಗಟ್ಟಿದ ನೆತ್ತರನ್ನು ತೋರಿಸಬೇಕಿದೆ.

ಅದಕ್ಕಾಗಿಯೇ ಈ ಅಂಕಣ. ಮಾತು ಮರೆತ ಭಾರತ. ಮಹಾಮರೆವಿನಲ್ಲಿ ಮುಳುಗಿ ತೇಲುತ್ತಿರುವ ದಲಿತರಿಗೂ ಹಾಗೂ ದಲಿತೇತರರಿಬ್ಬರಿಗೂ ಸಮರ್ಪಣೆ.

ಸಾಕ್ಯ ಸಮಗಾರ


ಇದನ್ನೂ ಓದಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...