Homeದಲಿತ್ ಫೈಲ್ಸ್ಮಾತು ಮರೆತ ಭಾರತ; ಇದು ದಲಿತ ಭಾರತದ ಕಥನ

ಮಾತು ಮರೆತ ಭಾರತ; ಇದು ದಲಿತ ಭಾರತದ ಕಥನ

- Advertisement -
- Advertisement -

ಮಾತು ಮರೆಯುವುದರಲ್ಲಿ ಎರಡು ವಿಧ. ಒಂದು, ಕೊಟ್ಟ ಮಾತು ಮರೆಯುವುದು. ಇನ್ನೊಂದು ಮಾತಾಡಲೇಬೇಕಾದಾಗ ಮಾತಾಡದೇ ಇರುವುದು. ಎರಡು ಸನ್ನಿವೇಶದಲ್ಲಿಯೂ ಸಹ ಮಾತುಗಳನ್ನು ಮರೆಯಲಾಗುತ್ತದೆ. ಮರೆಯುವುದು ಸಹಜವಲ್ಲವೆ? ಹೌದು ಸಹಜ. ಒಮ್ಮೆಯಾದರೆ ಸಹಜ. ಮತ್ತೊಮ್ಮೆಯಾದರೂ ಸಹಜವೆನ್ನೋಣ. ಆದರೆ ಶತಮಾನಗಳ ಕಾಲದ ಮರೆವಿಗೆ ಏನೆನ್ನೋಣ? ಜಾಣ ಮರೆವು ಎಂದುಬಿಡಬಹುದು. ಆದರೆ ಭಾರತದಲ್ಲಿ ಜಾಣ ಮರೆವನ್ನೂ ಮೀರಿಸಿದ ಕ್ರೂರ ಮರೆವಿದೆ. ಈ ಕ್ರೂರ ಮರೆವಿಗೆ ಕಾರಣ ಒಂದು ಭಾರತವಿಲ್ಲದ್ದಾಗಿದೆ. ಇಲ್ಲಿ ನೂರಾರು ಭಾರತಗಳಿವೆ. ಅನ್ಯ ದೇಶಗಳಿಗೆ ಹೋಲಿಸಿಕೊಂಡಾಗ ಇಲ್ಲಿ ಹಲವು ಜಾತಿಗಳಿಂದ ಒಡೆದುಹೋಗಿರುವ ಹಲವು ಭಾರತಗಳಿವೆ. 1950ರಲ್ಲಿ ಸಂವಿಧಾನ ಈ ಭಾರತವನ್ನು ಒಂದು ಮಾಡುವ ಪ್ರಯತ್ನಕ್ಕೆ ಮುಂದಾಯಿತಾದರೂ ಆಳುವ ವರ್ಗ ಇಂದಿಗೂ ಅದು ಸಫಲವಾಗದಂತೆ ನೋಡಿಕೊಂಡು ಮತ್ತಷ್ಟು ಛಿದ್ರಗೊಂಡು ಮತ್ತಷ್ಟು ಭಾರತಗಳಾಗುವಂತೆ ಮಾಡಿದೆ.

ಇಂತಹ ಭಾರತದ ಪ್ರಾಚೀನ ಕಾಲದಲ್ಲಿ ಅಸ್ಪೃಶ್ಯ ಭಾರತವೂ ಇತ್ತು. ಆಧುನಿಕ ಭಾರತದಲ್ಲಿ ಪರಿಶಿಷ್ಟ ಜಾತಿಗಳಾಗಿ ಗುರುತಿಸಿಕೊಂಡು ಇಂದು ದಲಿತ ಭಾರತವಾಗಿದೆ. ಆದರೆ ಅಸ್ಪೃಶ್ಯ ಭಾರತ ಅವರ ಪಾಲಿಗೆ ಇಂದಿಗೂ ಜೀವಂತವಿದೆ. ಸಂವಿಧಾನ ಸಭೆಯಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಿ, ಇನ್ನು ಮುಂದೆ ಮನುಷ್ಯರಾದ ಅಸ್ಪೃಶ್ಯರನ್ನು ದೆವ್ವಗಳಂತೆ ಕಾಡುವುದಿಲ್ಲವೆಂದು ಮಾತು ಕೊಟ್ಟ ದಲಿತೇತರರು ತಾವು ಕೊಟ್ಟ ಮಾತನ್ನು ಉಳಿಸಿಕೊಂಡರೆ? ’ಹಿಂದೂ ನಾವೆಲ್ಲ ಒಂದು’ ಎಂದ ಸ್ವಯಂ ಸೇವಕರು ದಲಿತರನ್ನು ಸಮಾನವಾಗಿ ಕಂಡರೆ? ವಸುದೈವ ಕುಟುಂಬಕಂ ಎಂದ ಸಾಧು ಸಂತರು ದಲಿತರೊಂದಿಗೆ ಕಳ್ಳುಬಳ್ಳಿ ಸಂಬಂಧ ಬೆಳೆಸಿದರೆ? ದ್ವೈತ, ಅದ್ವೈತ್ಯ, ವಿಶಿಷ್ಟಾದ್ವೈತಗಳು ದಲಿತರಿಗೆ ದೇಗುಲ ಪ್ರವೇಶ ನೀಡಿದವೇ? ಆಧ್ಯಾತ್ಮದ ಭಾಗವಾಗಿಸಿಕೊಂಡವೆ? ಆಮ್ ಆದ್ಮಿ ಕೆ ಸಾಥ್ ಅಂದವರು ದಲಿತ ಕೇರಿಗಳನ್ನು ಮುಟ್ಟಿದರೆ? ’ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎಂದವರು ದಲಿತರ ವಿಕಾಸಕ್ಕೆ ಕೈ ಹಾಕಿದರೇ? ಹೀಗೆ ಸಾಲುಸಾಲು ಪ್ರಶ್ನೆಗಳಿಗೆ ಉತ್ತರ ಇಲ್ಲವೆಂದೇ ತೋರುತ್ತಿದೆ.

’ರೀ ಈಗ ಮೊದಲಿನಂತಿಲ್ಲ. ಎಲ್ಲಾ ಬದಲಾಗುತ್ತಿದೆ’ ಎಂದವರ ಮುಂದೆ ಲೆಕ್ಕವಿಲ್ಲದಷ್ಟು ದಲಿತರ ಹೆಣಗಳ ಪಟ್ಟಿ ಇಟ್ಟಾಗ ಮಾತನ್ನೇ ಮರೆತುಬಿಡುತ್ತಾರೆ. ೨೦೨೦ರಲ್ಲಿ ದಲಿತರ ಮೇಲೆ 58,563 ದೌರ್ಜನ್ಯಗಳನ್ನು ಎಸಗಲಾಗಿದೆ. ಸ್ವತಂತ್ರ ಭಾರತ ಲೆಕ್ಕವಿಲ್ಲದಷ್ಟು ದಲಿತರ ಹತ್ಯಾಕಾಂಡಗಳಿಗೆ ನ್ಯಾಯವೇ ಸಿಗದೆ ನರಳುತ್ತಿವೆ. ಪ್ರತಿ ದಿನದ ಪತ್ರಿಕೆಗಳ ಮೂಲೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ವರದಿಯಾಗುತ್ತವೆ. ಇದರಲ್ಲಿ ಕೊಲೆ ಅತ್ಯಾಚಾರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಆದರೂ ದಲಿತೇತರರ ಉತ್ತರ ಸಿದ್ಧವಾಗಿರುತ್ತದೆ. ’ಈಗ ಮೊದಲಿನಂತಲ್ಲ ಬಿಡ್ರಿ’.

ವಾಚ್ ಕಟ್ಟಿದ್ದಕ್ಕೆ, ಮೀಸೆ ಬಿಟ್ಟದ್ದಕ್ಕೆ, ಕುದುರೆ ಹತ್ತಿದ್ದಕ್ಕೆ, ಅಂಬೇಡ್ಕರ್ ರಿಂಗ್‌ಟೋನ್ ಇಟ್ಟುಕೊಂಡಿದ್ದಕ್ಕೆ ದಲಿತರನ್ನ ಕೊಲೆ ಮಾಡಿಬಿಡುವಷ್ಟು ಕ್ರೂರಿಗಳು ಇಂದಿಗೂ ಈ ನೆಲದಲ್ಲಿರುವಾಗ ಭಾರತ ಸ್ವಾತಂತ್ರ್ಯಗೊಂಡಿದೆ ಎಂದು ಹೇಗೆ ಹೇಳುವುದು? ಆಗಿರುವ ಗಾಯಕ್ಕೆ ಮುಲಾಮು ಹಚ್ಚಬೇಕಾದ ಸಮಾಜ ಪದೇಪದೇ ಅದೇ ಗಾಯದ ಮೇಲೆ ಬರೆ ಹಾಕುತ್ತಾ ’ನೋಡು ಈಗ ಹಳೆಯ ಗಾಯ ಕಾಣುತ್ತಿಲ್ಲ’ ಎಂದರೆ ದಲಿತರು ನಂಬಿ ಕೂರಬೇಕೆ? ಕಾಲ ಬದಲಾಗಿದೆ ಹಾಗೂ ಸಮಾಜ ಬದಲಾಗಿದೆ ಎಂದು ಬೊಗಳೆ ಬಿಡುವ ಜಾತಿವಾದಿಗಳಿಗೆ ತಾವು ಮರೆತ ಮಾತುಗಳನ್ನು ನೆನಪಿಸಬೇಕಿದೆ. ಅಷ್ಟೇ ಅಲ್ಲ. ಭಾರತದ ಇತಿಹಾಸದಲ್ಲಿ ದಲಿತರ ಮೇಲೆ ಮೇಲ್ಜಾತಿಗಳು ನಡೆಸಿರುವ ದೌರ್ಜನ್ಯವನ್ನು ನೆನಪಿಸಬೇಕಿದೆ. ಇದರ ಜೊತೆಗೆ ದಲಿತರಲ್ಲಿಯೇ ತಮ್ಮ ಸಹಬಾಂಧವರ ಕೊಲೆಗಳನ್ನು ಮರೆತು ಮೈಮರೆತಿರುವವರಿಗೂ ದಲಿತ ಭಾರತದ ಮೇಲೆ ದಲಿತೇತರ ಭಾರತ ನಡೆಸಿರುವ ಭಯೋತ್ಪಾದನೆಯನ್ನು ನೆನಪಿಸಬೇಕಿದೆ. ಜಾತಿಯೆಂಬ ದೇಶದ್ರೋಹದ ವಿವಿಧ ಮುಖಗಳನ್ನು ಹಾಗೂ ಅದರ ಕ್ರೂರ ಮುಖವನ್ನು ತೋರಿಸಬೇಕಿದೆ.

ಬಹುದೊಡ್ಡ ವಿಸ್ಮೃತಿಯನ್ನು ಭಾರತಕ್ಕೆ ಪರಿಚಯಿಸಿ ಅಲ್ಲೆಲ್ಲ ತುಟಕ್ ಪಿಟಕ್ ಎನ್ನದೆ ಬಾಯಿ-ಮನಸ್ಸುಗಳಿಗೆ ಬೀಗ ಜಡಿದುಕೊಂಡು ಕುಳಿತಿದ್ದ, ಈಗಲೂ ಸುದೀರ್ಘ ಜೀವಂತ ಶವಗಳಾಗಿಯೇ ಉಳಿದಿರುವ ಮೂಳೆ ಮಾಂಸದ ತಡಿಕೆಗಳ ಮುಂದೆ ದಲಿತರ ಸುಟ್ಟ ಬೂದಿ, ಹೆಪ್ಪುಗಟ್ಟಿದ ನೆತ್ತರನ್ನು ತೋರಿಸಬೇಕಿದೆ.

ಅದಕ್ಕಾಗಿಯೇ ಈ ಅಂಕಣ. ಮಾತು ಮರೆತ ಭಾರತ. ಮಹಾಮರೆವಿನಲ್ಲಿ ಮುಳುಗಿ ತೇಲುತ್ತಿರುವ ದಲಿತರಿಗೂ ಹಾಗೂ ದಲಿತೇತರರಿಬ್ಬರಿಗೂ ಸಮರ್ಪಣೆ.

ಸಾಕ್ಯ ಸಮಗಾರ


ಇದನ್ನೂ ಓದಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...