Homeಅಂಕಣಗಳುಬಾಯ್ಕಟ್‌ ಚೀನಾ ಅಭಿಯಾನ: ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಗೊತ್ತೆ?

ಬಾಯ್ಕಟ್‌ ಚೀನಾ ಅಭಿಯಾನ: ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಗೊತ್ತೆ?

- Advertisement -
- Advertisement -

ಈ ಸಮಾಜ ವಿರೋಧಿ ಮಾಧ್ಯಮಗಳಲ್ಲಿ (ಎಂಟಿ-ಸೋಷಿಯಲ್ ಮೀಡಿಯಾಗಳಲ್ಲಿ) ಒಂದು ಸಂದೇಶ ಓಡಾಡಾಕ ಹತ್ತೇತಿ. ಅದೇನೆಂದರ “ಈ ಆಪ್‍ನ ನಿಮ್ಮ ಮೊಬೈಲಿನಾಗ ಹಾಕ್ಕೋರಿ, ಅದರಾಗ ಇರಬಹುದಾದ ಎಲ್ಲಾ ಚೈನಾ ಆಪುಗಳನ್ನೂ ತಗೀರಿ, ದೇಶಪ್ರೇಮದ ರಸದಿಂದ ನಿಮ್ಮ ಫೋನನ್ನ ಸ್ವಚ್ಛ ಮಾಡರಿ” ಅಂತ. ಅದನ್ನ ಸುಮಾರು ಒಂದು ಕೋಟಿ ಜನ ಹಾಕಿಕೊಂಡು ಅದು ತೋರಿಸಿದಂತೆ ಚೈನಾ ಆಪುಗಳನ್ನ ತಗದಾರು.

ಕೆಲವರು ಪೇಟಿ ಎಮ್ಮು, ಬಿಗ್ ಬಾಸ್ಕೆಟಿನಂಥಾ ಆಪು ತಗದು, ಒದ್ಯಾಡಿದಾರು.

ಇದರಾಗ ಜೋಕು ಏನಪಾ ಅಂದರ, ಭಾಳ ಮಂದಿ ಈ ದೇಶಪ್ರೇಮದ ಕೆಲಸಾ ಮಾಡಾಕ ತಮ್ಮ ಚೀನಾ ಫೋನು ಉಪಯೋಗ ಮಾಡಿದಾರು. ಭಾರತದಾಗ ಒಂದು ನೂರು ಫೋನು ಅದಾವು ಅಂದರ ಅದರಾಗ 70 ಫೋನು ಚೀನಾ ಕಂಪನಿವು ಅದಾವು. ಭಾಳ ಜನರಿಗೆ ತಮ್ಮ ಫೋನು ಯಾವ ದೇಶದ್ದೂ ಅಂತ ಗೊತ್ತಿರೋದಿಲ್ಲ. ಖರೇ ಹೇಳಬೇಕಂದರ, ಫ್ರೀಡಂ ಅನ್ನೋ ಕಂಪನಿ ಒಂದು ಬಿಟ್ಟರ ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಇಲ್ಲ. ಅಂದಂಗ ಮೊನ್ನೆ ನಮ್ಮ ಪಂಥ ಪ್ರಧಾನ ಸೇವಕ ಅವರು ಲೋಕಲ್ ವೋಕಲ್ ಅಂತ ಹೇಳೋ ತನಕಾ ಅಂತೂ ಇರಲಿಲ್ಲ. ಕಳೆದ ಒಂದು ವಾರದಾಗ ಯಾವುದರ ಕಂಪನಿ ಹುಟ್ಟಿಕೊಂಡಿದ್ದರ ನಮಗ ಗೊತ್ತಿಲ್ಲ ಮತ್ತ.

ಯಾಕ ಹಂಗಂತೇನಪಾ ಅಂದರ, ಅದಕ್ಕೊಂದು ಕಾರಣ ಐತಿ.

ಮೂರು ವರ್ಷದ ಹಿಂದ ಅವರು ಫ್ರಾನ್ಸಿಗೆ ಹೋಗಿದ್ದರು. ಆವಾಗ ಅವರ ಸ್ನೇಹಿತರು ಹಾಗೂ ಖಜಾಂಚಿಗಳೂ ಆದ ಆತ್ಮ ನಿರ್ಭರ ಸಹೋದರು ಬರೇ ಹತ್ತು ದಿನದಾಗ ಒಂದು ರಕ್ಷಣಾ ತಂತ್ರಜ್ಞಾನದ ಕಂಪನಿ ಹುಟ್ಟು ಹಾಕಿದರು. ಅದನ್ನ ನೋಡಿ ಇವರು ಯಾವುದೋ ಮ್ಯಾಗಿ ನೂಡಲ್ ಕಂಪನಿ ಯೊಳಗ ಕೆಲಸ ಮಾಡಿರಬೇಕು ಬಾರಲೇ ಅಂತ ಹೇಳಿ ಇವರು ಅವರಿಗೆ ಯುದ್ಧ ವಿಮಾನ ತಯಾರು ಮಾಡೋ ಕೆಲಸ ಕೊಟ್ಟರು. “ಅಯ್ಯೋ ಅದನ್ನ ಯಾಕ ಅವರಿಗೆ ಕೊಟ್ಟರಿ, ನಾವ ಮಾಡತಿದ್ದೆವಲ್ಲ. ಎಪ್ಪತ್ತು ವರ್ಷದಿಂದ ನಾವನ ವಿಮಾನ ತಯಾರು ಮಾಡಾಕ ಹತ್ತೇವಿ. ನಿಮಗೂ ಗೊತ್ತೈತೆಲ್ಲಾ” ಅಂತ ಬೆಂಗಳೂರಿನ ಎಚ್‍ಎಎಲ್ ಅನ್ನೋ ಕಂಪನಿಯವರು ಸಣ್ಣಕ ದನಿ ತಗದಿದ್ದರಂತ. ಅದಕ್ಕ ಇವರು “ಹೋಗ ಹೋಗರಿ, ಎಲ್ಲಾ ನಿಮಗ ಏನು? ಹಳಬರಿಗೆ ಅವಕಾಶ ಸಾಕು, ಹೊಸಬರಿಗೆ ಅವಕಾಶ ಇರಲಿ. ರಾಜಕೀಯದಾಗೂ ಈ ನಿಯಮ ತಂದೇವಿ, ಇನ್ನ ಯುದ್ಧ ವಿಮಾನ ತಯಾರಿಗೆ ಬಿಡತೇವೇನು” ಅಂತ ಅಂದರು. ಈಗ ಆ ಹೊಸಾ ಕಂಪನಿ ಹಳೇ ಕಂಪನಿಯ ವಜ್ಜಾ ತಡಕೊಳ್ಳಲಾರದ ಮುಚ್ಚಾಕ ಬಂದೇತಿ. ಅದು ಬ್ಯಾರೆ ವಿಷಯ.

ಇನ್ನ ನಮ್ಮವರಿಗೆ ಚೀನಾದ ಮ್ಯಾಲೆ ಕೆಂಗಣ್ಣು ಬಿಡೋ ಅಷ್ಟು ಸಿಟ್ಟು ಯಾಕ ಬಂತು? ಅದಕ್ಕ ಒಂದಿಷ್ಟು ಹಿಂದ ಹೋಗಬೇಕಾಗತೇತಿ. ನಿಮಗೆ “ಹೋಕೆ ಮಜಬೂರ ಮುಝೆ ಉಸನೆ ಭುಲಾಯಾ ಹೋಗಾ” (‘ಅನಿವಾರ್ಯವಾಗಿ ಅಕಿ ನನ್ನ ಮರತಿರಬೇಕು’) ಅನ್ನೋ ಹಾಡು ನೆನಪು ಇರಬೇಕು. ಅದು ಒಂದು ಕರೇ – ಬಿಳೇ ಹಳೇ ಹಿಂದಿ ಸಿನಿಮಾದ ಹಾಡು. ಅದರಾಗ ಭಾರತೀಯ ಸೈನಿಕರು ಹೋಗಿ ಚೀನಾದ ಮ್ಯಾಲೆ ಯುದ್ಧ ಮಾಡಿ ಗೆದ್ದು ಬರತಾರ. ಸಿನಿಮಾದಾಗ ಗೆದ್ದರು ಆದರ ಅದನ್ನ ಚೀನಾದವರು ಇನ್ನೂ ಒಪ್ಪಾಕ ತಯಾರು ಇಲ್ಲ. ಭಾರತ- ಚೀನಾ ಗಡಿ ಮೂರು ಸಾವಿರದ ಎಂಟು ನೂರು ಕಿಲೋಮಿಟರ್ ಅಂತ ನಮ್ಮ ವಿದೇಶಾಂಗ ಮಂತ್ರಿ ಅಂದಿದ್ದಕ್ಕ ಚೀನಾದವರು ಎಲ್ಲಾಸುಳ್ಳ. ಅದು ಬರೇ ಎರಡು ಸಾವಿರ ಕಿಲೋಮೀಟರ್ ಅಂತ ಹೇಳಿ ಆಟ ಗೂಟ ಜೈ ಅಂತ ಹೇಳಿ ನಮ್ಮ ಮ್ಯಾಲೆ ಜಗಳಾ ಆಡಾಕ ಬಂದಾರ. ನಮ್ಮ ಹಳ್ಳೀ ಒಳಗ ಒಂದ ಕ್ರಿಕೆಟ್ ಪಿಚ್ಚಿನ್ಯಾಗ ಸಣ್ಣ ಹುಡುಗರು ಆಡಾಕ ಹತ್ತಿದಾಗ ದೊಡ್ಡವರು ಬಂದು ಅವರ ಸ್ಟಂಪು – ಬಾಲು ಕಸಗೊಂಡರ ಹೆಂಗ ಸಣ್ಣ ಹುಡುಗರು, ಯೆಣ್ಣಾ ನೀವು ಹೋಗರಿ ಯಣ್ಣಾ, ನಾವು ಒಂದೀಟ ಆಡತೇವಿ. ನೀವು ಆಮ್ಯಾಕ ಬರೀರೆಂತ ಅಂತ ಹೇಳಿ ಅವರಿಗೆ ಆಗ್ರಹ ಮಾಡತಾರಲ್ಲಾ ಹಂಗ ನಮ್ಮ ಭಾರತೀಯರು ಅದನ್ನ ಕೇಳಿಕೊಂಡರು. ಒಂದಿಬ್ಬರು ಹೊಡದಾಡಿಕೊಂಡರು ಅಂತನೂ ಸುದ್ದಿ ಬಂದವು.

ಇದು ನಿಮಗ ರೊಮ್ಯಾಂಟಿಕ್ ಚಿತ್ರಣ ಅನ್ನಿಸಿದರ ನೀವು ಅದಕ್ಕ ಸಂಬಂಧ ಪಟ್ಟ ವಿಡಿಯೋ ಸುದ್ದಿ ನೋಡರಿ, ಅಲ್ ಜಜೀರಾ ಅವರ ವೆಬ್ ಸೈಟಿನೊಳಗ.

ಇದು ಯಾಕಪಾ ಅಂದರ ಭಾರತದ ಮಾಧ್ಯಮಗಳು ತೋರಿಸಲಾರದ್ದನ್ನ ಹೊರಗಿನವು ತೋರಿಸಿದವು. ಯಾಕಂದರ ನಮ್ಮವರು ಸುದ್ದಿ ವ್ಯಾಪಾರಸ್ಥರಾಗಿ ಬಿಟ್ಟಾರ. ಅವರು ಇನ್ನೂ ಪತ್ರಕರ್ತರಾಗಿ ಉಳದಾರ.

“ಇಲ್ಲಾ. ನಮಗೂ ಅವರಿಗೂ ಜಗಳ ಆಗಿಲ್ಲ. ಬರೇ ಒಂದಿಷ್ಟು ಮಾತು ಆಗಿದಾವು” ಅಂತ ನಮ್ಮ ಕೇಂದ್ರ ಸರಕಾರ ಹೇಳಿಕೊಂಡೇತಿ.

ಹಂಗಾರ ಅಲ್ಲಿ ಆಗಿದ್ದೇನು. ದೇಶಗಳ ನಡುವೆ ಮೂರು ಥರದ ಗೆರಿ ಇರತಾವು. ಅಂತರರಾಷ್ಟ್ರೀಯ ಗಡಿ, ನಿಯಂತ್ರಣ ರೇಖೆ ಮತ್ತು ಖರೆ ಖರೆ ನಿಯಂತ್ರಣ ರೇಖೆ (ಬಾರ್ಡರು, ಎಲ್‍ಓಸಿ, ಎಲ್‍ಏಸಿ) ಚೀನಾ ಹಾಗೂ ಭಾರತದ ನಡುವೆ ಎಲ್ಲರೂ ಒಪ್ಪುವಂಥಾ ಗಡಿ ಇಲ್ಲ. ನಾವು ಒಂದು ಅಂತೇವಿ ಅವರು ಇಲ್ಲ ಅಂತಾರ. ಅವರು ಒಂದು ಅಂತಾರ ನಾವು ಇಲ್ಲಾ ಅಂತೇವಿ.

ಅಂಥಾದರಾಗ ನಮ್ಮ ದೊಡ್ಡಣ್ಣಾರು, ಬಿಳಿಮನಿ ಟ್ರಂಪಣ್ಣನವರ್ ಅವರು “ಇವರು ಇಬ್ಬರೂ ಕಿತ್ಯಾಡಾಕ ಹತ್ಯಾರು. ನಾನು ನೋಡಾ ಹತ್ತೇನಿ. ನನ್ನ ಕಡೆ ಬಂದರ ನಾ ಜಗಳಾ ಬಿಡಸತೇನಿ,” ಅಂತ ಟ್ವಿಟರಿನ್ಯಾಗ ಕಾರಿಕೊಂಡರು. ನೀವು ಬರೋದು ಬ್ಯಾಡ. ನಿಮ್ಮ ಎಲ್ಯಾಗ ಕತ್ತಿ ಸತ್ತು ಬಿದ್ದೇತಿ, ನಮ್ಮ ನೊಣಾ ಯಾಕ ಝಾಡಸಾಕ ಬರತೀರಿ ಅಂತ ಇಬ್ಬರೂ ದೂರಾದರು. ಆ ಬೆಕ್ಕಿನ ಪ್ರೀತಿಯಿಂದ ಕೊಸರಾಡಿಕೊಂಡು ಬಿಡಿಸಿಕೊಂಡರು.

ಕೆಲವರ ಪ್ರಕಾರ ಚೀನಾ ಸೈನಿಕರು ಲಡಾಖಿನ ಹತ್ತಿರ ಭಾರತದ ಗಡಿಯೊಳಗ ಸುಮಾರು ಒಂಬೈನೂರು ಚದುರ ಕಿಲೋಮೀಟರ್ ಕ್ಷೇತ್ರದೊಳಗ ಒಳಗ ಬಂದಾರ. ಚೀನಾದವರು ಅದು ನಮ್ಮದ ಜಾಗ. ಅದರಾಗ ನಾವು ಹೆಂಗ ಬೇಕಾದಂಗ ಅಡ್ಯಾಡತೇವಿ. ನೀವು ಯಾರು ಅಂತ ಹೇಳ್ಯಾರು. ಭಾರತೀಯ ಗಡಿ ರಸ್ತೆ ಸಂಸ್ಥೆಯವರು ಚೀನಾ ಪ್ರದೇಶದೊಳಗ ರಸ್ತೆ ಮಾಡಾಕ ಬಂದಾರು. ಅದು ತಪ್ಪು ಅಂತ ಹೇಳ್ಯಾರು. ಒಂದು ಸಣ್ಣ ಗ್ರಾಮ ಪಂಚಾಯಿತಿ ರಸ್ತೆ ಮಾಡೋದರಾಗ ಕಳಪೆ ಕಾಮಗಾರಿ – ಲಂಚ ಎಲ್ಲಾ ನಡೀತಾವು. ಇನ್ನ ಹಿಮಾಲಯದಾಗ ಏನು ಮಾಡತಾರ ಇವರು ಅಂತ ಯಾರೋ ಅವರಿಗೆ ಮೂಗರ್ಜಿ ಬರದಿರಬೇಕು. ಅದಕ್ಕ ಅವರು ಬ್ಯಾಡ ಹೋಗರಿ ಅಂದಿರಬೇಕು.

ಇವು ಎಲ್ಲಾ ನಡಿಯೋವ. ಇದಕ್ಕ ಯುದ್ಧಕ್ಕ ಹೋಗಲಾರದ ಹಂಗ ಒಂದ ಕಡೆ ಕುತಗೊಂಡು ಮಾತಾಡಿ ಮುಗಿಸಿಕೊಳ್ಳೋ ವಿಚಾರ ಇವು. ಇದರಾಗ ವಿಶೇಷ ಏನು ಅಂದರ ನಮ್ಮನ್ನ ಆಳುವವರ ಪ್ರತಿಕ್ರಿಯೆ.

ಪಂಥ ಪ್ರಧಾನ ಸೇವಕರು ಎಂದಿನಂತೆ ಇದರ ಬಗ್ಗೆ ಮಾತಾಡಿಲ್ಲ. ನೀವು ಯಾವ ನೆಗಟಿವ್ ವಿಷಯ ಮಾತಾಡಬಾರದು. ಸರಕಾರದ ಯಾವ ತಪ್ಪೂ ಒಪ್ಪಿಕೊಳ್ಳಬಾರದು, ಯಾವುದೇ ನಿಖರವಾದ ಆಶ್ವಾಸನೆ ಕೊಡಬಾರದು. ಯಾವಾಗಲೂ ಪಾಸಿಟಿವ್ ಆಗಿ, ಎಲ್ಲರನ್ನೂ ಹುರಿದುಂಬಿಸುವ ಮಾತಾಡಬೇಕು ಅಂತ ಅವರಿಗೆ ಚುನಾವಣ ಪಂಡಿತ ಪ್ರಶಾಂತ ಕಿಶೋರ ಹೇಳಿದ್ದರಂತ. ಅದನ್ನ ಅವರು ಚಾಚೂ ತಪ್ಪದೇ ಪಾಲಿಸತಾರ. ಹೋಗಲಿ, ಭಾರತದಲ್ಲಿ ಮೊದಲಿಗೆ ವಿದೇಶಾಂಗ ಸಚಿವನಾಗಿದ್ದು ನಂತರ ವಿದೇಶ ಮಂತ್ರಿ ಆದ ಏಕೈಕ ವ್ಯಕ್ತಿ ಜಯಶಂಕರ ಅವರೂ ಮಾತಾಡಿಲ್ಲ. ಗೃಹ ಖಾತೆ ಸಚಿವ ಅಮಿತ ಷಾ ಅವರು ಎಂಟು ವರ್ಷದ ಹಿಂದೆ ಚೀನಾ ಸೈನಿಕರು ಭಾರತವನ್ನ ಪಿಕ್ ನಿಕ್ ತಾಣ ಅಂತ ತಿಳಕೊಂಡಾರು. ತಮಗ ಬೇಕಾದಾಗ ಬಂದು, ಮಜಾ ಮಾಡಿ ಹೋಗತಾರು. ನಮ್ಮ ಸರಕಾರ ಸುಮ್ಮನೇ ಕೂಡತೇತಿ ಅಂತ ಹೇಳಿದ್ದರು. ಅದನ್ನು ಯಾರೋ ಪುಣ್ಯಾತ್ಮರು ಟ್ವಿಟರ್ ನ್ಯಾಗಿಂದ ಹೊರಗ ತಗದು ತೋರಸಾಕ ಹತ್ಯಾರು.

ಅವ್ವ ಮಾಡಿದ ಅಡಿಗಿಗೆ ಹೆಸರು ಇಡಬ್ಯಾಡ್ರಿ ಅಂತ ಒಂದು ಶಾಯರಿ ಐತಿ. ‘ನಿಮಗ ಮಾಡಾಕ ಬರತಿದ್ದರ ಅಕೀ ಕೆಲಸ ತಪ್ಪಿಸಿ ನೀವು ಮಾಡರಿ. ಅಕಿ ಮಾಡೋ ಕೆಲಸಾ ಮಾಡೋದು ಕಷ್ಟ. ಅದಕ್ಕ ಹೆಸರು ಇಡೋದು ಸುಲಭ’ ಅಂತ.

ಹಂಗ, ಬ್ಯಾರೆದವರು ಸರಕಾರ ನಡೆಸೋವಾಗ ಟೀಕಾ ಮಾಡೋದು ವಿರೋಧ ಪಕ್ಷದವರಿಗೆ ಸುಲಭ. ಅದನ್ನ ನಂಬಿ ಜನಾ ಅವರಿಗೇ ಅಧಿಕಾರ ಕೊಟ್ಟರ ಸರಕಾರ ನಡೆಸೋದು ಕಷ್ಟ. ಆ ಶಾಯರಿ ಗೊತ್ತಿರಲಾರದವರಿಗೂ ಇದು ಗೊತ್ತಿರಬೇಕು.


ಇದನ್ನು ಓದಿ: ಹೊಸ ಮಾಧ್ಯಮ: ಮೂರನೇ ಬೆಲ್ ಬಾರಿಸಿದೆ, ಇನ್ನೀಗ ಶುರು ಮಾಡಲೇಬೇಕು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...