Homeಅಂಕಣಗಳುಬಾಯ್ಕಟ್‌ ಚೀನಾ ಅಭಿಯಾನ: ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಗೊತ್ತೆ?

ಬಾಯ್ಕಟ್‌ ಚೀನಾ ಅಭಿಯಾನ: ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಗೊತ್ತೆ?

- Advertisement -
- Advertisement -

ಈ ಸಮಾಜ ವಿರೋಧಿ ಮಾಧ್ಯಮಗಳಲ್ಲಿ (ಎಂಟಿ-ಸೋಷಿಯಲ್ ಮೀಡಿಯಾಗಳಲ್ಲಿ) ಒಂದು ಸಂದೇಶ ಓಡಾಡಾಕ ಹತ್ತೇತಿ. ಅದೇನೆಂದರ “ಈ ಆಪ್‍ನ ನಿಮ್ಮ ಮೊಬೈಲಿನಾಗ ಹಾಕ್ಕೋರಿ, ಅದರಾಗ ಇರಬಹುದಾದ ಎಲ್ಲಾ ಚೈನಾ ಆಪುಗಳನ್ನೂ ತಗೀರಿ, ದೇಶಪ್ರೇಮದ ರಸದಿಂದ ನಿಮ್ಮ ಫೋನನ್ನ ಸ್ವಚ್ಛ ಮಾಡರಿ” ಅಂತ. ಅದನ್ನ ಸುಮಾರು ಒಂದು ಕೋಟಿ ಜನ ಹಾಕಿಕೊಂಡು ಅದು ತೋರಿಸಿದಂತೆ ಚೈನಾ ಆಪುಗಳನ್ನ ತಗದಾರು.

ಕೆಲವರು ಪೇಟಿ ಎಮ್ಮು, ಬಿಗ್ ಬಾಸ್ಕೆಟಿನಂಥಾ ಆಪು ತಗದು, ಒದ್ಯಾಡಿದಾರು.

ಇದರಾಗ ಜೋಕು ಏನಪಾ ಅಂದರ, ಭಾಳ ಮಂದಿ ಈ ದೇಶಪ್ರೇಮದ ಕೆಲಸಾ ಮಾಡಾಕ ತಮ್ಮ ಚೀನಾ ಫೋನು ಉಪಯೋಗ ಮಾಡಿದಾರು. ಭಾರತದಾಗ ಒಂದು ನೂರು ಫೋನು ಅದಾವು ಅಂದರ ಅದರಾಗ 70 ಫೋನು ಚೀನಾ ಕಂಪನಿವು ಅದಾವು. ಭಾಳ ಜನರಿಗೆ ತಮ್ಮ ಫೋನು ಯಾವ ದೇಶದ್ದೂ ಅಂತ ಗೊತ್ತಿರೋದಿಲ್ಲ. ಖರೇ ಹೇಳಬೇಕಂದರ, ಫ್ರೀಡಂ ಅನ್ನೋ ಕಂಪನಿ ಒಂದು ಬಿಟ್ಟರ ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಇಲ್ಲ. ಅಂದಂಗ ಮೊನ್ನೆ ನಮ್ಮ ಪಂಥ ಪ್ರಧಾನ ಸೇವಕ ಅವರು ಲೋಕಲ್ ವೋಕಲ್ ಅಂತ ಹೇಳೋ ತನಕಾ ಅಂತೂ ಇರಲಿಲ್ಲ. ಕಳೆದ ಒಂದು ವಾರದಾಗ ಯಾವುದರ ಕಂಪನಿ ಹುಟ್ಟಿಕೊಂಡಿದ್ದರ ನಮಗ ಗೊತ್ತಿಲ್ಲ ಮತ್ತ.

ಯಾಕ ಹಂಗಂತೇನಪಾ ಅಂದರ, ಅದಕ್ಕೊಂದು ಕಾರಣ ಐತಿ.

ಮೂರು ವರ್ಷದ ಹಿಂದ ಅವರು ಫ್ರಾನ್ಸಿಗೆ ಹೋಗಿದ್ದರು. ಆವಾಗ ಅವರ ಸ್ನೇಹಿತರು ಹಾಗೂ ಖಜಾಂಚಿಗಳೂ ಆದ ಆತ್ಮ ನಿರ್ಭರ ಸಹೋದರು ಬರೇ ಹತ್ತು ದಿನದಾಗ ಒಂದು ರಕ್ಷಣಾ ತಂತ್ರಜ್ಞಾನದ ಕಂಪನಿ ಹುಟ್ಟು ಹಾಕಿದರು. ಅದನ್ನ ನೋಡಿ ಇವರು ಯಾವುದೋ ಮ್ಯಾಗಿ ನೂಡಲ್ ಕಂಪನಿ ಯೊಳಗ ಕೆಲಸ ಮಾಡಿರಬೇಕು ಬಾರಲೇ ಅಂತ ಹೇಳಿ ಇವರು ಅವರಿಗೆ ಯುದ್ಧ ವಿಮಾನ ತಯಾರು ಮಾಡೋ ಕೆಲಸ ಕೊಟ್ಟರು. “ಅಯ್ಯೋ ಅದನ್ನ ಯಾಕ ಅವರಿಗೆ ಕೊಟ್ಟರಿ, ನಾವ ಮಾಡತಿದ್ದೆವಲ್ಲ. ಎಪ್ಪತ್ತು ವರ್ಷದಿಂದ ನಾವನ ವಿಮಾನ ತಯಾರು ಮಾಡಾಕ ಹತ್ತೇವಿ. ನಿಮಗೂ ಗೊತ್ತೈತೆಲ್ಲಾ” ಅಂತ ಬೆಂಗಳೂರಿನ ಎಚ್‍ಎಎಲ್ ಅನ್ನೋ ಕಂಪನಿಯವರು ಸಣ್ಣಕ ದನಿ ತಗದಿದ್ದರಂತ. ಅದಕ್ಕ ಇವರು “ಹೋಗ ಹೋಗರಿ, ಎಲ್ಲಾ ನಿಮಗ ಏನು? ಹಳಬರಿಗೆ ಅವಕಾಶ ಸಾಕು, ಹೊಸಬರಿಗೆ ಅವಕಾಶ ಇರಲಿ. ರಾಜಕೀಯದಾಗೂ ಈ ನಿಯಮ ತಂದೇವಿ, ಇನ್ನ ಯುದ್ಧ ವಿಮಾನ ತಯಾರಿಗೆ ಬಿಡತೇವೇನು” ಅಂತ ಅಂದರು. ಈಗ ಆ ಹೊಸಾ ಕಂಪನಿ ಹಳೇ ಕಂಪನಿಯ ವಜ್ಜಾ ತಡಕೊಳ್ಳಲಾರದ ಮುಚ್ಚಾಕ ಬಂದೇತಿ. ಅದು ಬ್ಯಾರೆ ವಿಷಯ.

ಇನ್ನ ನಮ್ಮವರಿಗೆ ಚೀನಾದ ಮ್ಯಾಲೆ ಕೆಂಗಣ್ಣು ಬಿಡೋ ಅಷ್ಟು ಸಿಟ್ಟು ಯಾಕ ಬಂತು? ಅದಕ್ಕ ಒಂದಿಷ್ಟು ಹಿಂದ ಹೋಗಬೇಕಾಗತೇತಿ. ನಿಮಗೆ “ಹೋಕೆ ಮಜಬೂರ ಮುಝೆ ಉಸನೆ ಭುಲಾಯಾ ಹೋಗಾ” (‘ಅನಿವಾರ್ಯವಾಗಿ ಅಕಿ ನನ್ನ ಮರತಿರಬೇಕು’) ಅನ್ನೋ ಹಾಡು ನೆನಪು ಇರಬೇಕು. ಅದು ಒಂದು ಕರೇ – ಬಿಳೇ ಹಳೇ ಹಿಂದಿ ಸಿನಿಮಾದ ಹಾಡು. ಅದರಾಗ ಭಾರತೀಯ ಸೈನಿಕರು ಹೋಗಿ ಚೀನಾದ ಮ್ಯಾಲೆ ಯುದ್ಧ ಮಾಡಿ ಗೆದ್ದು ಬರತಾರ. ಸಿನಿಮಾದಾಗ ಗೆದ್ದರು ಆದರ ಅದನ್ನ ಚೀನಾದವರು ಇನ್ನೂ ಒಪ್ಪಾಕ ತಯಾರು ಇಲ್ಲ. ಭಾರತ- ಚೀನಾ ಗಡಿ ಮೂರು ಸಾವಿರದ ಎಂಟು ನೂರು ಕಿಲೋಮಿಟರ್ ಅಂತ ನಮ್ಮ ವಿದೇಶಾಂಗ ಮಂತ್ರಿ ಅಂದಿದ್ದಕ್ಕ ಚೀನಾದವರು ಎಲ್ಲಾಸುಳ್ಳ. ಅದು ಬರೇ ಎರಡು ಸಾವಿರ ಕಿಲೋಮೀಟರ್ ಅಂತ ಹೇಳಿ ಆಟ ಗೂಟ ಜೈ ಅಂತ ಹೇಳಿ ನಮ್ಮ ಮ್ಯಾಲೆ ಜಗಳಾ ಆಡಾಕ ಬಂದಾರ. ನಮ್ಮ ಹಳ್ಳೀ ಒಳಗ ಒಂದ ಕ್ರಿಕೆಟ್ ಪಿಚ್ಚಿನ್ಯಾಗ ಸಣ್ಣ ಹುಡುಗರು ಆಡಾಕ ಹತ್ತಿದಾಗ ದೊಡ್ಡವರು ಬಂದು ಅವರ ಸ್ಟಂಪು – ಬಾಲು ಕಸಗೊಂಡರ ಹೆಂಗ ಸಣ್ಣ ಹುಡುಗರು, ಯೆಣ್ಣಾ ನೀವು ಹೋಗರಿ ಯಣ್ಣಾ, ನಾವು ಒಂದೀಟ ಆಡತೇವಿ. ನೀವು ಆಮ್ಯಾಕ ಬರೀರೆಂತ ಅಂತ ಹೇಳಿ ಅವರಿಗೆ ಆಗ್ರಹ ಮಾಡತಾರಲ್ಲಾ ಹಂಗ ನಮ್ಮ ಭಾರತೀಯರು ಅದನ್ನ ಕೇಳಿಕೊಂಡರು. ಒಂದಿಬ್ಬರು ಹೊಡದಾಡಿಕೊಂಡರು ಅಂತನೂ ಸುದ್ದಿ ಬಂದವು.

ಇದು ನಿಮಗ ರೊಮ್ಯಾಂಟಿಕ್ ಚಿತ್ರಣ ಅನ್ನಿಸಿದರ ನೀವು ಅದಕ್ಕ ಸಂಬಂಧ ಪಟ್ಟ ವಿಡಿಯೋ ಸುದ್ದಿ ನೋಡರಿ, ಅಲ್ ಜಜೀರಾ ಅವರ ವೆಬ್ ಸೈಟಿನೊಳಗ.

ಇದು ಯಾಕಪಾ ಅಂದರ ಭಾರತದ ಮಾಧ್ಯಮಗಳು ತೋರಿಸಲಾರದ್ದನ್ನ ಹೊರಗಿನವು ತೋರಿಸಿದವು. ಯಾಕಂದರ ನಮ್ಮವರು ಸುದ್ದಿ ವ್ಯಾಪಾರಸ್ಥರಾಗಿ ಬಿಟ್ಟಾರ. ಅವರು ಇನ್ನೂ ಪತ್ರಕರ್ತರಾಗಿ ಉಳದಾರ.

“ಇಲ್ಲಾ. ನಮಗೂ ಅವರಿಗೂ ಜಗಳ ಆಗಿಲ್ಲ. ಬರೇ ಒಂದಿಷ್ಟು ಮಾತು ಆಗಿದಾವು” ಅಂತ ನಮ್ಮ ಕೇಂದ್ರ ಸರಕಾರ ಹೇಳಿಕೊಂಡೇತಿ.

ಹಂಗಾರ ಅಲ್ಲಿ ಆಗಿದ್ದೇನು. ದೇಶಗಳ ನಡುವೆ ಮೂರು ಥರದ ಗೆರಿ ಇರತಾವು. ಅಂತರರಾಷ್ಟ್ರೀಯ ಗಡಿ, ನಿಯಂತ್ರಣ ರೇಖೆ ಮತ್ತು ಖರೆ ಖರೆ ನಿಯಂತ್ರಣ ರೇಖೆ (ಬಾರ್ಡರು, ಎಲ್‍ಓಸಿ, ಎಲ್‍ಏಸಿ) ಚೀನಾ ಹಾಗೂ ಭಾರತದ ನಡುವೆ ಎಲ್ಲರೂ ಒಪ್ಪುವಂಥಾ ಗಡಿ ಇಲ್ಲ. ನಾವು ಒಂದು ಅಂತೇವಿ ಅವರು ಇಲ್ಲ ಅಂತಾರ. ಅವರು ಒಂದು ಅಂತಾರ ನಾವು ಇಲ್ಲಾ ಅಂತೇವಿ.

ಅಂಥಾದರಾಗ ನಮ್ಮ ದೊಡ್ಡಣ್ಣಾರು, ಬಿಳಿಮನಿ ಟ್ರಂಪಣ್ಣನವರ್ ಅವರು “ಇವರು ಇಬ್ಬರೂ ಕಿತ್ಯಾಡಾಕ ಹತ್ಯಾರು. ನಾನು ನೋಡಾ ಹತ್ತೇನಿ. ನನ್ನ ಕಡೆ ಬಂದರ ನಾ ಜಗಳಾ ಬಿಡಸತೇನಿ,” ಅಂತ ಟ್ವಿಟರಿನ್ಯಾಗ ಕಾರಿಕೊಂಡರು. ನೀವು ಬರೋದು ಬ್ಯಾಡ. ನಿಮ್ಮ ಎಲ್ಯಾಗ ಕತ್ತಿ ಸತ್ತು ಬಿದ್ದೇತಿ, ನಮ್ಮ ನೊಣಾ ಯಾಕ ಝಾಡಸಾಕ ಬರತೀರಿ ಅಂತ ಇಬ್ಬರೂ ದೂರಾದರು. ಆ ಬೆಕ್ಕಿನ ಪ್ರೀತಿಯಿಂದ ಕೊಸರಾಡಿಕೊಂಡು ಬಿಡಿಸಿಕೊಂಡರು.

ಕೆಲವರ ಪ್ರಕಾರ ಚೀನಾ ಸೈನಿಕರು ಲಡಾಖಿನ ಹತ್ತಿರ ಭಾರತದ ಗಡಿಯೊಳಗ ಸುಮಾರು ಒಂಬೈನೂರು ಚದುರ ಕಿಲೋಮೀಟರ್ ಕ್ಷೇತ್ರದೊಳಗ ಒಳಗ ಬಂದಾರ. ಚೀನಾದವರು ಅದು ನಮ್ಮದ ಜಾಗ. ಅದರಾಗ ನಾವು ಹೆಂಗ ಬೇಕಾದಂಗ ಅಡ್ಯಾಡತೇವಿ. ನೀವು ಯಾರು ಅಂತ ಹೇಳ್ಯಾರು. ಭಾರತೀಯ ಗಡಿ ರಸ್ತೆ ಸಂಸ್ಥೆಯವರು ಚೀನಾ ಪ್ರದೇಶದೊಳಗ ರಸ್ತೆ ಮಾಡಾಕ ಬಂದಾರು. ಅದು ತಪ್ಪು ಅಂತ ಹೇಳ್ಯಾರು. ಒಂದು ಸಣ್ಣ ಗ್ರಾಮ ಪಂಚಾಯಿತಿ ರಸ್ತೆ ಮಾಡೋದರಾಗ ಕಳಪೆ ಕಾಮಗಾರಿ – ಲಂಚ ಎಲ್ಲಾ ನಡೀತಾವು. ಇನ್ನ ಹಿಮಾಲಯದಾಗ ಏನು ಮಾಡತಾರ ಇವರು ಅಂತ ಯಾರೋ ಅವರಿಗೆ ಮೂಗರ್ಜಿ ಬರದಿರಬೇಕು. ಅದಕ್ಕ ಅವರು ಬ್ಯಾಡ ಹೋಗರಿ ಅಂದಿರಬೇಕು.

ಇವು ಎಲ್ಲಾ ನಡಿಯೋವ. ಇದಕ್ಕ ಯುದ್ಧಕ್ಕ ಹೋಗಲಾರದ ಹಂಗ ಒಂದ ಕಡೆ ಕುತಗೊಂಡು ಮಾತಾಡಿ ಮುಗಿಸಿಕೊಳ್ಳೋ ವಿಚಾರ ಇವು. ಇದರಾಗ ವಿಶೇಷ ಏನು ಅಂದರ ನಮ್ಮನ್ನ ಆಳುವವರ ಪ್ರತಿಕ್ರಿಯೆ.

ಪಂಥ ಪ್ರಧಾನ ಸೇವಕರು ಎಂದಿನಂತೆ ಇದರ ಬಗ್ಗೆ ಮಾತಾಡಿಲ್ಲ. ನೀವು ಯಾವ ನೆಗಟಿವ್ ವಿಷಯ ಮಾತಾಡಬಾರದು. ಸರಕಾರದ ಯಾವ ತಪ್ಪೂ ಒಪ್ಪಿಕೊಳ್ಳಬಾರದು, ಯಾವುದೇ ನಿಖರವಾದ ಆಶ್ವಾಸನೆ ಕೊಡಬಾರದು. ಯಾವಾಗಲೂ ಪಾಸಿಟಿವ್ ಆಗಿ, ಎಲ್ಲರನ್ನೂ ಹುರಿದುಂಬಿಸುವ ಮಾತಾಡಬೇಕು ಅಂತ ಅವರಿಗೆ ಚುನಾವಣ ಪಂಡಿತ ಪ್ರಶಾಂತ ಕಿಶೋರ ಹೇಳಿದ್ದರಂತ. ಅದನ್ನ ಅವರು ಚಾಚೂ ತಪ್ಪದೇ ಪಾಲಿಸತಾರ. ಹೋಗಲಿ, ಭಾರತದಲ್ಲಿ ಮೊದಲಿಗೆ ವಿದೇಶಾಂಗ ಸಚಿವನಾಗಿದ್ದು ನಂತರ ವಿದೇಶ ಮಂತ್ರಿ ಆದ ಏಕೈಕ ವ್ಯಕ್ತಿ ಜಯಶಂಕರ ಅವರೂ ಮಾತಾಡಿಲ್ಲ. ಗೃಹ ಖಾತೆ ಸಚಿವ ಅಮಿತ ಷಾ ಅವರು ಎಂಟು ವರ್ಷದ ಹಿಂದೆ ಚೀನಾ ಸೈನಿಕರು ಭಾರತವನ್ನ ಪಿಕ್ ನಿಕ್ ತಾಣ ಅಂತ ತಿಳಕೊಂಡಾರು. ತಮಗ ಬೇಕಾದಾಗ ಬಂದು, ಮಜಾ ಮಾಡಿ ಹೋಗತಾರು. ನಮ್ಮ ಸರಕಾರ ಸುಮ್ಮನೇ ಕೂಡತೇತಿ ಅಂತ ಹೇಳಿದ್ದರು. ಅದನ್ನು ಯಾರೋ ಪುಣ್ಯಾತ್ಮರು ಟ್ವಿಟರ್ ನ್ಯಾಗಿಂದ ಹೊರಗ ತಗದು ತೋರಸಾಕ ಹತ್ಯಾರು.

ಅವ್ವ ಮಾಡಿದ ಅಡಿಗಿಗೆ ಹೆಸರು ಇಡಬ್ಯಾಡ್ರಿ ಅಂತ ಒಂದು ಶಾಯರಿ ಐತಿ. ‘ನಿಮಗ ಮಾಡಾಕ ಬರತಿದ್ದರ ಅಕೀ ಕೆಲಸ ತಪ್ಪಿಸಿ ನೀವು ಮಾಡರಿ. ಅಕಿ ಮಾಡೋ ಕೆಲಸಾ ಮಾಡೋದು ಕಷ್ಟ. ಅದಕ್ಕ ಹೆಸರು ಇಡೋದು ಸುಲಭ’ ಅಂತ.

ಹಂಗ, ಬ್ಯಾರೆದವರು ಸರಕಾರ ನಡೆಸೋವಾಗ ಟೀಕಾ ಮಾಡೋದು ವಿರೋಧ ಪಕ್ಷದವರಿಗೆ ಸುಲಭ. ಅದನ್ನ ನಂಬಿ ಜನಾ ಅವರಿಗೇ ಅಧಿಕಾರ ಕೊಟ್ಟರ ಸರಕಾರ ನಡೆಸೋದು ಕಷ್ಟ. ಆ ಶಾಯರಿ ಗೊತ್ತಿರಲಾರದವರಿಗೂ ಇದು ಗೊತ್ತಿರಬೇಕು.


ಇದನ್ನು ಓದಿ: ಹೊಸ ಮಾಧ್ಯಮ: ಮೂರನೇ ಬೆಲ್ ಬಾರಿಸಿದೆ, ಇನ್ನೀಗ ಶುರು ಮಾಡಲೇಬೇಕು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...