Homeಅಂಕಣಗಳುಬಾಯ್ಕಟ್‌ ಚೀನಾ ಅಭಿಯಾನ: ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಗೊತ್ತೆ?

ಬಾಯ್ಕಟ್‌ ಚೀನಾ ಅಭಿಯಾನ: ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಗೊತ್ತೆ?

- Advertisement -
- Advertisement -

ಈ ಸಮಾಜ ವಿರೋಧಿ ಮಾಧ್ಯಮಗಳಲ್ಲಿ (ಎಂಟಿ-ಸೋಷಿಯಲ್ ಮೀಡಿಯಾಗಳಲ್ಲಿ) ಒಂದು ಸಂದೇಶ ಓಡಾಡಾಕ ಹತ್ತೇತಿ. ಅದೇನೆಂದರ “ಈ ಆಪ್‍ನ ನಿಮ್ಮ ಮೊಬೈಲಿನಾಗ ಹಾಕ್ಕೋರಿ, ಅದರಾಗ ಇರಬಹುದಾದ ಎಲ್ಲಾ ಚೈನಾ ಆಪುಗಳನ್ನೂ ತಗೀರಿ, ದೇಶಪ್ರೇಮದ ರಸದಿಂದ ನಿಮ್ಮ ಫೋನನ್ನ ಸ್ವಚ್ಛ ಮಾಡರಿ” ಅಂತ. ಅದನ್ನ ಸುಮಾರು ಒಂದು ಕೋಟಿ ಜನ ಹಾಕಿಕೊಂಡು ಅದು ತೋರಿಸಿದಂತೆ ಚೈನಾ ಆಪುಗಳನ್ನ ತಗದಾರು.

ಕೆಲವರು ಪೇಟಿ ಎಮ್ಮು, ಬಿಗ್ ಬಾಸ್ಕೆಟಿನಂಥಾ ಆಪು ತಗದು, ಒದ್ಯಾಡಿದಾರು.

ಇದರಾಗ ಜೋಕು ಏನಪಾ ಅಂದರ, ಭಾಳ ಮಂದಿ ಈ ದೇಶಪ್ರೇಮದ ಕೆಲಸಾ ಮಾಡಾಕ ತಮ್ಮ ಚೀನಾ ಫೋನು ಉಪಯೋಗ ಮಾಡಿದಾರು. ಭಾರತದಾಗ ಒಂದು ನೂರು ಫೋನು ಅದಾವು ಅಂದರ ಅದರಾಗ 70 ಫೋನು ಚೀನಾ ಕಂಪನಿವು ಅದಾವು. ಭಾಳ ಜನರಿಗೆ ತಮ್ಮ ಫೋನು ಯಾವ ದೇಶದ್ದೂ ಅಂತ ಗೊತ್ತಿರೋದಿಲ್ಲ. ಖರೇ ಹೇಳಬೇಕಂದರ, ಫ್ರೀಡಂ ಅನ್ನೋ ಕಂಪನಿ ಒಂದು ಬಿಟ್ಟರ ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಇಲ್ಲ. ಅಂದಂಗ ಮೊನ್ನೆ ನಮ್ಮ ಪಂಥ ಪ್ರಧಾನ ಸೇವಕ ಅವರು ಲೋಕಲ್ ವೋಕಲ್ ಅಂತ ಹೇಳೋ ತನಕಾ ಅಂತೂ ಇರಲಿಲ್ಲ. ಕಳೆದ ಒಂದು ವಾರದಾಗ ಯಾವುದರ ಕಂಪನಿ ಹುಟ್ಟಿಕೊಂಡಿದ್ದರ ನಮಗ ಗೊತ್ತಿಲ್ಲ ಮತ್ತ.

ಯಾಕ ಹಂಗಂತೇನಪಾ ಅಂದರ, ಅದಕ್ಕೊಂದು ಕಾರಣ ಐತಿ.

ಮೂರು ವರ್ಷದ ಹಿಂದ ಅವರು ಫ್ರಾನ್ಸಿಗೆ ಹೋಗಿದ್ದರು. ಆವಾಗ ಅವರ ಸ್ನೇಹಿತರು ಹಾಗೂ ಖಜಾಂಚಿಗಳೂ ಆದ ಆತ್ಮ ನಿರ್ಭರ ಸಹೋದರು ಬರೇ ಹತ್ತು ದಿನದಾಗ ಒಂದು ರಕ್ಷಣಾ ತಂತ್ರಜ್ಞಾನದ ಕಂಪನಿ ಹುಟ್ಟು ಹಾಕಿದರು. ಅದನ್ನ ನೋಡಿ ಇವರು ಯಾವುದೋ ಮ್ಯಾಗಿ ನೂಡಲ್ ಕಂಪನಿ ಯೊಳಗ ಕೆಲಸ ಮಾಡಿರಬೇಕು ಬಾರಲೇ ಅಂತ ಹೇಳಿ ಇವರು ಅವರಿಗೆ ಯುದ್ಧ ವಿಮಾನ ತಯಾರು ಮಾಡೋ ಕೆಲಸ ಕೊಟ್ಟರು. “ಅಯ್ಯೋ ಅದನ್ನ ಯಾಕ ಅವರಿಗೆ ಕೊಟ್ಟರಿ, ನಾವ ಮಾಡತಿದ್ದೆವಲ್ಲ. ಎಪ್ಪತ್ತು ವರ್ಷದಿಂದ ನಾವನ ವಿಮಾನ ತಯಾರು ಮಾಡಾಕ ಹತ್ತೇವಿ. ನಿಮಗೂ ಗೊತ್ತೈತೆಲ್ಲಾ” ಅಂತ ಬೆಂಗಳೂರಿನ ಎಚ್‍ಎಎಲ್ ಅನ್ನೋ ಕಂಪನಿಯವರು ಸಣ್ಣಕ ದನಿ ತಗದಿದ್ದರಂತ. ಅದಕ್ಕ ಇವರು “ಹೋಗ ಹೋಗರಿ, ಎಲ್ಲಾ ನಿಮಗ ಏನು? ಹಳಬರಿಗೆ ಅವಕಾಶ ಸಾಕು, ಹೊಸಬರಿಗೆ ಅವಕಾಶ ಇರಲಿ. ರಾಜಕೀಯದಾಗೂ ಈ ನಿಯಮ ತಂದೇವಿ, ಇನ್ನ ಯುದ್ಧ ವಿಮಾನ ತಯಾರಿಗೆ ಬಿಡತೇವೇನು” ಅಂತ ಅಂದರು. ಈಗ ಆ ಹೊಸಾ ಕಂಪನಿ ಹಳೇ ಕಂಪನಿಯ ವಜ್ಜಾ ತಡಕೊಳ್ಳಲಾರದ ಮುಚ್ಚಾಕ ಬಂದೇತಿ. ಅದು ಬ್ಯಾರೆ ವಿಷಯ.

ಇನ್ನ ನಮ್ಮವರಿಗೆ ಚೀನಾದ ಮ್ಯಾಲೆ ಕೆಂಗಣ್ಣು ಬಿಡೋ ಅಷ್ಟು ಸಿಟ್ಟು ಯಾಕ ಬಂತು? ಅದಕ್ಕ ಒಂದಿಷ್ಟು ಹಿಂದ ಹೋಗಬೇಕಾಗತೇತಿ. ನಿಮಗೆ “ಹೋಕೆ ಮಜಬೂರ ಮುಝೆ ಉಸನೆ ಭುಲಾಯಾ ಹೋಗಾ” (‘ಅನಿವಾರ್ಯವಾಗಿ ಅಕಿ ನನ್ನ ಮರತಿರಬೇಕು’) ಅನ್ನೋ ಹಾಡು ನೆನಪು ಇರಬೇಕು. ಅದು ಒಂದು ಕರೇ – ಬಿಳೇ ಹಳೇ ಹಿಂದಿ ಸಿನಿಮಾದ ಹಾಡು. ಅದರಾಗ ಭಾರತೀಯ ಸೈನಿಕರು ಹೋಗಿ ಚೀನಾದ ಮ್ಯಾಲೆ ಯುದ್ಧ ಮಾಡಿ ಗೆದ್ದು ಬರತಾರ. ಸಿನಿಮಾದಾಗ ಗೆದ್ದರು ಆದರ ಅದನ್ನ ಚೀನಾದವರು ಇನ್ನೂ ಒಪ್ಪಾಕ ತಯಾರು ಇಲ್ಲ. ಭಾರತ- ಚೀನಾ ಗಡಿ ಮೂರು ಸಾವಿರದ ಎಂಟು ನೂರು ಕಿಲೋಮಿಟರ್ ಅಂತ ನಮ್ಮ ವಿದೇಶಾಂಗ ಮಂತ್ರಿ ಅಂದಿದ್ದಕ್ಕ ಚೀನಾದವರು ಎಲ್ಲಾಸುಳ್ಳ. ಅದು ಬರೇ ಎರಡು ಸಾವಿರ ಕಿಲೋಮೀಟರ್ ಅಂತ ಹೇಳಿ ಆಟ ಗೂಟ ಜೈ ಅಂತ ಹೇಳಿ ನಮ್ಮ ಮ್ಯಾಲೆ ಜಗಳಾ ಆಡಾಕ ಬಂದಾರ. ನಮ್ಮ ಹಳ್ಳೀ ಒಳಗ ಒಂದ ಕ್ರಿಕೆಟ್ ಪಿಚ್ಚಿನ್ಯಾಗ ಸಣ್ಣ ಹುಡುಗರು ಆಡಾಕ ಹತ್ತಿದಾಗ ದೊಡ್ಡವರು ಬಂದು ಅವರ ಸ್ಟಂಪು – ಬಾಲು ಕಸಗೊಂಡರ ಹೆಂಗ ಸಣ್ಣ ಹುಡುಗರು, ಯೆಣ್ಣಾ ನೀವು ಹೋಗರಿ ಯಣ್ಣಾ, ನಾವು ಒಂದೀಟ ಆಡತೇವಿ. ನೀವು ಆಮ್ಯಾಕ ಬರೀರೆಂತ ಅಂತ ಹೇಳಿ ಅವರಿಗೆ ಆಗ್ರಹ ಮಾಡತಾರಲ್ಲಾ ಹಂಗ ನಮ್ಮ ಭಾರತೀಯರು ಅದನ್ನ ಕೇಳಿಕೊಂಡರು. ಒಂದಿಬ್ಬರು ಹೊಡದಾಡಿಕೊಂಡರು ಅಂತನೂ ಸುದ್ದಿ ಬಂದವು.

ಇದು ನಿಮಗ ರೊಮ್ಯಾಂಟಿಕ್ ಚಿತ್ರಣ ಅನ್ನಿಸಿದರ ನೀವು ಅದಕ್ಕ ಸಂಬಂಧ ಪಟ್ಟ ವಿಡಿಯೋ ಸುದ್ದಿ ನೋಡರಿ, ಅಲ್ ಜಜೀರಾ ಅವರ ವೆಬ್ ಸೈಟಿನೊಳಗ.

ಇದು ಯಾಕಪಾ ಅಂದರ ಭಾರತದ ಮಾಧ್ಯಮಗಳು ತೋರಿಸಲಾರದ್ದನ್ನ ಹೊರಗಿನವು ತೋರಿಸಿದವು. ಯಾಕಂದರ ನಮ್ಮವರು ಸುದ್ದಿ ವ್ಯಾಪಾರಸ್ಥರಾಗಿ ಬಿಟ್ಟಾರ. ಅವರು ಇನ್ನೂ ಪತ್ರಕರ್ತರಾಗಿ ಉಳದಾರ.

“ಇಲ್ಲಾ. ನಮಗೂ ಅವರಿಗೂ ಜಗಳ ಆಗಿಲ್ಲ. ಬರೇ ಒಂದಿಷ್ಟು ಮಾತು ಆಗಿದಾವು” ಅಂತ ನಮ್ಮ ಕೇಂದ್ರ ಸರಕಾರ ಹೇಳಿಕೊಂಡೇತಿ.

ಹಂಗಾರ ಅಲ್ಲಿ ಆಗಿದ್ದೇನು. ದೇಶಗಳ ನಡುವೆ ಮೂರು ಥರದ ಗೆರಿ ಇರತಾವು. ಅಂತರರಾಷ್ಟ್ರೀಯ ಗಡಿ, ನಿಯಂತ್ರಣ ರೇಖೆ ಮತ್ತು ಖರೆ ಖರೆ ನಿಯಂತ್ರಣ ರೇಖೆ (ಬಾರ್ಡರು, ಎಲ್‍ಓಸಿ, ಎಲ್‍ಏಸಿ) ಚೀನಾ ಹಾಗೂ ಭಾರತದ ನಡುವೆ ಎಲ್ಲರೂ ಒಪ್ಪುವಂಥಾ ಗಡಿ ಇಲ್ಲ. ನಾವು ಒಂದು ಅಂತೇವಿ ಅವರು ಇಲ್ಲ ಅಂತಾರ. ಅವರು ಒಂದು ಅಂತಾರ ನಾವು ಇಲ್ಲಾ ಅಂತೇವಿ.

ಅಂಥಾದರಾಗ ನಮ್ಮ ದೊಡ್ಡಣ್ಣಾರು, ಬಿಳಿಮನಿ ಟ್ರಂಪಣ್ಣನವರ್ ಅವರು “ಇವರು ಇಬ್ಬರೂ ಕಿತ್ಯಾಡಾಕ ಹತ್ಯಾರು. ನಾನು ನೋಡಾ ಹತ್ತೇನಿ. ನನ್ನ ಕಡೆ ಬಂದರ ನಾ ಜಗಳಾ ಬಿಡಸತೇನಿ,” ಅಂತ ಟ್ವಿಟರಿನ್ಯಾಗ ಕಾರಿಕೊಂಡರು. ನೀವು ಬರೋದು ಬ್ಯಾಡ. ನಿಮ್ಮ ಎಲ್ಯಾಗ ಕತ್ತಿ ಸತ್ತು ಬಿದ್ದೇತಿ, ನಮ್ಮ ನೊಣಾ ಯಾಕ ಝಾಡಸಾಕ ಬರತೀರಿ ಅಂತ ಇಬ್ಬರೂ ದೂರಾದರು. ಆ ಬೆಕ್ಕಿನ ಪ್ರೀತಿಯಿಂದ ಕೊಸರಾಡಿಕೊಂಡು ಬಿಡಿಸಿಕೊಂಡರು.

ಕೆಲವರ ಪ್ರಕಾರ ಚೀನಾ ಸೈನಿಕರು ಲಡಾಖಿನ ಹತ್ತಿರ ಭಾರತದ ಗಡಿಯೊಳಗ ಸುಮಾರು ಒಂಬೈನೂರು ಚದುರ ಕಿಲೋಮೀಟರ್ ಕ್ಷೇತ್ರದೊಳಗ ಒಳಗ ಬಂದಾರ. ಚೀನಾದವರು ಅದು ನಮ್ಮದ ಜಾಗ. ಅದರಾಗ ನಾವು ಹೆಂಗ ಬೇಕಾದಂಗ ಅಡ್ಯಾಡತೇವಿ. ನೀವು ಯಾರು ಅಂತ ಹೇಳ್ಯಾರು. ಭಾರತೀಯ ಗಡಿ ರಸ್ತೆ ಸಂಸ್ಥೆಯವರು ಚೀನಾ ಪ್ರದೇಶದೊಳಗ ರಸ್ತೆ ಮಾಡಾಕ ಬಂದಾರು. ಅದು ತಪ್ಪು ಅಂತ ಹೇಳ್ಯಾರು. ಒಂದು ಸಣ್ಣ ಗ್ರಾಮ ಪಂಚಾಯಿತಿ ರಸ್ತೆ ಮಾಡೋದರಾಗ ಕಳಪೆ ಕಾಮಗಾರಿ – ಲಂಚ ಎಲ್ಲಾ ನಡೀತಾವು. ಇನ್ನ ಹಿಮಾಲಯದಾಗ ಏನು ಮಾಡತಾರ ಇವರು ಅಂತ ಯಾರೋ ಅವರಿಗೆ ಮೂಗರ್ಜಿ ಬರದಿರಬೇಕು. ಅದಕ್ಕ ಅವರು ಬ್ಯಾಡ ಹೋಗರಿ ಅಂದಿರಬೇಕು.

ಇವು ಎಲ್ಲಾ ನಡಿಯೋವ. ಇದಕ್ಕ ಯುದ್ಧಕ್ಕ ಹೋಗಲಾರದ ಹಂಗ ಒಂದ ಕಡೆ ಕುತಗೊಂಡು ಮಾತಾಡಿ ಮುಗಿಸಿಕೊಳ್ಳೋ ವಿಚಾರ ಇವು. ಇದರಾಗ ವಿಶೇಷ ಏನು ಅಂದರ ನಮ್ಮನ್ನ ಆಳುವವರ ಪ್ರತಿಕ್ರಿಯೆ.

ಪಂಥ ಪ್ರಧಾನ ಸೇವಕರು ಎಂದಿನಂತೆ ಇದರ ಬಗ್ಗೆ ಮಾತಾಡಿಲ್ಲ. ನೀವು ಯಾವ ನೆಗಟಿವ್ ವಿಷಯ ಮಾತಾಡಬಾರದು. ಸರಕಾರದ ಯಾವ ತಪ್ಪೂ ಒಪ್ಪಿಕೊಳ್ಳಬಾರದು, ಯಾವುದೇ ನಿಖರವಾದ ಆಶ್ವಾಸನೆ ಕೊಡಬಾರದು. ಯಾವಾಗಲೂ ಪಾಸಿಟಿವ್ ಆಗಿ, ಎಲ್ಲರನ್ನೂ ಹುರಿದುಂಬಿಸುವ ಮಾತಾಡಬೇಕು ಅಂತ ಅವರಿಗೆ ಚುನಾವಣ ಪಂಡಿತ ಪ್ರಶಾಂತ ಕಿಶೋರ ಹೇಳಿದ್ದರಂತ. ಅದನ್ನ ಅವರು ಚಾಚೂ ತಪ್ಪದೇ ಪಾಲಿಸತಾರ. ಹೋಗಲಿ, ಭಾರತದಲ್ಲಿ ಮೊದಲಿಗೆ ವಿದೇಶಾಂಗ ಸಚಿವನಾಗಿದ್ದು ನಂತರ ವಿದೇಶ ಮಂತ್ರಿ ಆದ ಏಕೈಕ ವ್ಯಕ್ತಿ ಜಯಶಂಕರ ಅವರೂ ಮಾತಾಡಿಲ್ಲ. ಗೃಹ ಖಾತೆ ಸಚಿವ ಅಮಿತ ಷಾ ಅವರು ಎಂಟು ವರ್ಷದ ಹಿಂದೆ ಚೀನಾ ಸೈನಿಕರು ಭಾರತವನ್ನ ಪಿಕ್ ನಿಕ್ ತಾಣ ಅಂತ ತಿಳಕೊಂಡಾರು. ತಮಗ ಬೇಕಾದಾಗ ಬಂದು, ಮಜಾ ಮಾಡಿ ಹೋಗತಾರು. ನಮ್ಮ ಸರಕಾರ ಸುಮ್ಮನೇ ಕೂಡತೇತಿ ಅಂತ ಹೇಳಿದ್ದರು. ಅದನ್ನು ಯಾರೋ ಪುಣ್ಯಾತ್ಮರು ಟ್ವಿಟರ್ ನ್ಯಾಗಿಂದ ಹೊರಗ ತಗದು ತೋರಸಾಕ ಹತ್ಯಾರು.

ಅವ್ವ ಮಾಡಿದ ಅಡಿಗಿಗೆ ಹೆಸರು ಇಡಬ್ಯಾಡ್ರಿ ಅಂತ ಒಂದು ಶಾಯರಿ ಐತಿ. ‘ನಿಮಗ ಮಾಡಾಕ ಬರತಿದ್ದರ ಅಕೀ ಕೆಲಸ ತಪ್ಪಿಸಿ ನೀವು ಮಾಡರಿ. ಅಕಿ ಮಾಡೋ ಕೆಲಸಾ ಮಾಡೋದು ಕಷ್ಟ. ಅದಕ್ಕ ಹೆಸರು ಇಡೋದು ಸುಲಭ’ ಅಂತ.

ಹಂಗ, ಬ್ಯಾರೆದವರು ಸರಕಾರ ನಡೆಸೋವಾಗ ಟೀಕಾ ಮಾಡೋದು ವಿರೋಧ ಪಕ್ಷದವರಿಗೆ ಸುಲಭ. ಅದನ್ನ ನಂಬಿ ಜನಾ ಅವರಿಗೇ ಅಧಿಕಾರ ಕೊಟ್ಟರ ಸರಕಾರ ನಡೆಸೋದು ಕಷ್ಟ. ಆ ಶಾಯರಿ ಗೊತ್ತಿರಲಾರದವರಿಗೂ ಇದು ಗೊತ್ತಿರಬೇಕು.


ಇದನ್ನು ಓದಿ: ಹೊಸ ಮಾಧ್ಯಮ: ಮೂರನೇ ಬೆಲ್ ಬಾರಿಸಿದೆ, ಇನ್ನೀಗ ಶುರು ಮಾಡಲೇಬೇಕು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...