Homeಅಂಕಣಗಳುಹೊಸ ಮಾಧ್ಯಮ: ಮೂರನೇ ಬೆಲ್ ಬಾರಿಸಿದೆ, ಇನ್ನೀಗ ಶುರು ಮಾಡಲೇಬೇಕು

ಹೊಸ ಮಾಧ್ಯಮ: ಮೂರನೇ ಬೆಲ್ ಬಾರಿಸಿದೆ, ಇನ್ನೀಗ ಶುರು ಮಾಡಲೇಬೇಕು

- Advertisement -
- Advertisement -

ಭಾರತದಲ್ಲಿ ಮಾಧ್ಯಮ ಕ್ಷೇತ್ರ ತನ್ನ ಕೆಲಸ ನಿಲ್ಲಿಸಿ ಪ್ರಜಾತಂತ್ರ ವಿರೋಧಿ ಪಯಣ ಆರಂಭಿಸಿ ಬಹಳ ಕಾಲವೇ ಆಯಿತು. ಆದರೆ ತೀರಾ ಇತ್ತೀಚೆಗೆ ತನ್ನ ಜೀವವಿರೋಧಿತನವನ್ನು ಸಾಬೀತುಪಡಿಸಿಕೊಂಡಿತು. ಜಗತ್ತಿನೆಲ್ಲೆಡೆ ಮನುಷ್ಯರನ್ನು ಅತ್ಯಂತ ಕ್ಷುದ್ರವಾಗಿಸಿಬಿಟ್ಟ ಕಣ್ಣಿಗೆ ಕಾಣದ ಕೊರೊನಾ ಆವರಿಸುತ್ತಾ ಬಂದಂತೆ, ಕೆಲವರಾದರೂ ಭಿನ್ನವಾಗಿ ಆಲೋಚಿಸಲು ಶುರು ಮಾಡಿದ್ದರು. ಬದುಕು ಇಷ್ಟೇನಾ, ಹಾಗಿದ್ದ ಮೇಲೆ ಈ ಜಗಳ, ಈ ದ್ವೇಷ, ಈ ತಾರತಮ್ಯ ಏಕೆ ಎಂಬುದು ಅದರ ತಿರುಳಾಗಿತ್ತು. ಆದರೆ ಎಲ್ಲರೂ ಗಾಬರಿಗೊಳ್ಳುವ ಹಾಗೆ ನಮ್ಮ ಬಹುತೇಕ ಮಾಧ್ಯಮಗಳು ಇನ್ನಷ್ಟು ಉಲ್ಟಾ ದಿಕ್ಕಿನಲ್ಲಿ ಹೊರಟಿದ್ದವು.

ಕೊರೊನಾ ಸೋಂಕನ್ನು ಧರ್ಮವೊಂದಕ್ಕೆ ತಳುಕುಹಾಕಲು ಹೊರಟಾಗಲೇ ಮೊದಲ ಗಂಟೆ ಮೊಳಗಿತ್ತು. ದೇಶಕ್ಕೆ ದೇಶವೇ ದಿಗ್ಭ್ರಾಂತವಾಗಿ ಹೊಸಪರಿಸ್ಥಿತಿಗೆ ಹೊಂದಿಕೊಳ್ಳಲು ಒದ್ದಾಡುತ್ತಿದ್ದರೆ, ಬಡವರು ಬೀದಿಯ ಮೇಲೆ ಬಂದರೆ ಅವರನ್ನು ಬಡಿಯಲು ಪೊಲೀಸರ ಮೇಲೆ ಒತ್ತಡ ಹಾಕುವುದರಲ್ಲಿ ಮಾಧ್ಯಮಗಳು ನಿರತವಾಗಿದ್ದವು. ಮತ್ತೀಗ ದೇಶ ಕಳೆದೊಂದು ಶತಮಾನದಲ್ಲೇ ಅತೀ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಅದಕ್ಕೆ ಕೇಂದ್ರ ಸರ್ಕಾರವು ಒಂದು ಮೋಸದ ಪ್ಯಾಕೇಜನ್ನು ಬಿಡುಗಡೆ ಮಾಡಿದೆ; ಅದನ್ನು ಕನಿಷ್ಠ ವಿಮರ್ಶಾತ್ಮಕವಾಗಿ ನೋಡುವ ಕೆಲಸವನ್ನೂ ಬಹುತೇಕ ಮಾಧ್ಯಮಗಳು ಮಾಡಲಿಲ್ಲ. ಈ ಮೂರು ಸಂಗತಿಗಳು ಕಡೆಯ ಮೂರು ಬೆಲ್‍ಗಳು ಬಡಿದ ಹಾಗೆ ಎಂದು ದೇಶದ ಪ್ರಜ್ಞಾವಂತ ಸಮಾಜ ಭಾವಿಸಬೇಕಿತ್ತು; ಭಾವಿಸಿಯೂ ಇದೆ.

ಹೀಗಾಗಿಯೇ ಪರ್ಯಾಯ ಮಾಧ್ಯಮದ ಚರ್ಚೆಯೂ ಈ ಅವಧಿಯಲ್ಲಿ ಆರಂಭವಾಯಿತು. ಅದೇ ಕೆಲಸದಲ್ಲಿ ನಿರತರಾಗಿದ್ದ ಗೌರಿ ಮೀಡಿಯಾ ತಂಡವೂ ಅದಕ್ಕೆ ಪ್ರತಿಕ್ರಿಯಿಸುವುದರ ಭಾಗವಾಗಿ ಹೊಸ ಮಾಧ್ಯಮದ ಕುರಿತಾದ ತನ್ನ ಪರಿಕಲ್ಪನೆಯ ಪ್ರಸ್ತಾಪವೊಂದನ್ನು ಮುಂದಿಟ್ಟಿತು. ನ್ಯಾಯಪಥ ಮತ್ತು ನಾನುಗೌರಿ.ಕಾಂನಲ್ಲಿ ಪ್ರಕಟವಾದ ಆ ಪರಿಕಲ್ಪನೆಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದವು. ನಮ್ಮ ಬಳಗದಲ್ಲಿನ ಉಮೇದು ನಮಗೂ ಉತ್ಸಾಹ ತಂದಿತು.

ಆ ಬರಹದಲ್ಲಿ ಮುಖ್ಯವಾಹಿನಿ ಮಾಧ್ಯಮ ಎಂದು ಬಳಸಿದ್ದು ಕೆಲವರಲ್ಲಿ ಗೊಂದಲ ಮೂಡಿಸಿತ್ತು. ಇನ್ನೊಂದು ಚಾನೆಲ್ ಆರಂಭಿಸುವುದು ಅಥವಾ ದೊಡ್ಡ ರಾಜ್ಯ ಮಟ್ಟದ ಪತ್ರಿಕೆಯನ್ನು ತರುವುದು ಸಾಧ್ಯವೇ ಎಂಬುದು ಆ ಗೊಂದಲಕ್ಕೆ ಕಾರಣವಾಗಿತ್ತು. ಚಾನೆಲ್ ಅಥವಾ ದೊಡ್ಡ ಪತ್ರಿಕೆ ಯಾರಾದರೂ ಮಾಡಿದರೆ ಅದಕ್ಕೆ ನಮ್ಮ ತಕರಾರೇನೂ ಇಲ್ಲ; ಆದರೆ ನಮ್ಮ ಪರಿಕಲ್ಪನೆಯ ಮುಖ್ಯವಾಹಿನಿ ಮಾಧ್ಯಮ ಅದಲ್ಲ ಎಂದು ಸ್ಪಷ್ಟಪಡಿಸಬೇಕಾಗಿ ಬಂದಿತು. ಮುಖ್ಯವಾಹಿನಿ ಎಂದಾಗ ಕಣ್ಣಮುಂದೆ ಬರುವ ಕಲ್ಪನೆಯು ಹಾಗೇ ಇರುತ್ತದಾದ್ದರಿಂದ, ಅದು ನನ್ನ ಬರಹದಲ್ಲೇ ಇದ್ದ ಸಮಸ್ಯೆಯಾಗಿತ್ತು ಎಂಬುದನ್ನು ವಿನಮ್ರವಾಗಿ ಒಪ್ಪಿಕೊಳ್ಳಬಯಸುತ್ತೇನೆ.

ಹೊಸ ಮುಖ್ಯವಾಹಿನಿ ಎಂದರೆ ಜನಸಾಮಾನ್ಯರೆಲ್ಲರೂ ತಮ್ಮದೆಂದು ಭಾವಿಸಿ ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮಾಧ್ಯಮದ ಹೊಸರೂಪವಾಗಿರುತ್ತದೆ. ನೂರಾರು ಸಣ್ಣ ಪ್ರಯತ್ನಗಳು ಸ್ವಾಯತ್ತವಾಗಿ ಉಳಿದುಕೊಂಡೂ ಸಮಷ್ಟಿಯಾಗಿ ಸಮಷ್ಟಿ ಹಿತಕ್ಕಾಗಿ ಕೆಲಸ ಮಾಡುವ ಸಂಘಟನಾ ರೂಪ ಹಾಗೂ ಉದ್ದೇಶ ಹೊಂದಿರುತ್ತವೆ.

ಈ ಕುರಿತು ನಮ್ಮ ಪತ್ರಿಕಾ ಬಳಗದಲ್ಲೂ ಚರ್ಚೆ ಶುರುವಾಗಿದ್ದು, ಇನ್ನೊಂದೆರಡು ವಾರಗಳಲ್ಲಿ ಅಂತಿಮಗೊಳ್ಳಲಿದೆ. ಅದನ್ನು ನಿಮ್ಮೆಲ್ಲರ ಮುಂದಿಡಲಾಗುತ್ತದೆ. ಎಲ್ಲರೂ ಮುಕ್ತವಾದ ಚರ್ಚೆ ನಡೆಸೋಣ. ಅಲ್ಲಿಂದಾಚೆಗೆ ನಾವೆಲ್ಲರೂ ಜೊತೆಗೂಡಿ ಈ ಕಾಲದ ಬಹುಮುಖ್ಯ ಅಗತ್ಯವಾದ ಹೊಸ ಮಾಧ್ಯಮವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲಿದ್ದೇವೆ ಎಂಬ ವಿಶ್ವಾಸ ನಮಗಂತೂ ಇದೆ. ಕಡೆಯ ಮೂರು ಗಂಟೆ ಹೊಡೆದ ಮೇಲೂ ನಮ್ಮ ಕೆಲಸಕ್ಕೆ ಚಾಲನೆ ಕೊಡದಿದ್ದರೆ ಹೇಗೆ, ಅಲ್ಲವೇ?


ಇದನ್ನು ಓದಿ: ಮದುವೆಗೆ ಉಳಿಸಿದ ಹಣದಿಂದ ವಲಸೆ ಕಾರ್ಮಿಕರ ಹಸಿವು ನೀಗಿಸುತ್ತಿರುವ ’ರಿಕ್ಷಾ ಚಾಲಕ’
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ: ಸರ್ಕಾರಿ ಶಾಲಾ ಬಿಸಿಯೂಟದ ಜವಾಬ್ದಾರಿ ಇಸ್ಕಾನ್‌ಗೆ, ಊಟದಿಂದ ‘ಮೊಟ್ಟೆ’ ಔಟ್

ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳ ಬಿಸಿಯೂಟದ ಮೆನುವಿನಲ್ಲಿ ಇನ್ಮೇಲೆ ಮೊಟ್ಟೆಗಳು ಇರುವುದಿಲ್ಲ. ಅವುಗಳ ಬದಲಿಗೆ ಮಕ್ಕಳಿಗೆ ಪನೀರ್ ಮತ್ತು ರಾಜ್ಮಾವನ್ನು ನೀಡಲಾಗುತ್ತದೆ. ಕೋಲ್ಕತ್ತಾ ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ...

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...

ಯುಪಿ: ಮೊಹರಂ ಮೆರವಣಿಗೆಯಲ್ಲಿ ಪಿತೂರಿ: ಪಾಕ್ ಪರ ಘೋಷಣೆಯ ಸುಳ್ಳು ವಿಡಿಯೋ ಹರಿಬಿಟ್ಟ ಇಬ್ಬರು ಹಿಂದುತ್ವವಾದಿಗಳ ಬಂಧನ 

ಬರೇಲಿ (ಉತ್ತರ ಪ್ರದೇಶ): ಮೊಹರಂ ಮೆರವಣಿಗೆಯೊಂದರಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಎಂದು ದೇಶವಿರೋಧಿ ಘೋಷಣೆ ಕೂಗಲಾಗಿದೆ ಎಂಬ ನಕಲಿ ವೀಡಿಯೋ ಸೃಷ್ಟಿಸಿ, ಮುಸ್ಲಿಂ ಸಮುದಾಯದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿದ ಇಬ್ಬರು ಹಿಂದುತ್ವವಾದಿ...

ಮಕ್ಕಳಿಗೆ ಆರ್‌ಎಸ್‌ಎಸ್‌ ತರಬೇತಿ ನೀಡುವುದನ್ನು ಟೀಕಿಸಿ ವಿಡಿಯೋ ಹಂಚಿಕೆ : ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ರಾಜಸ್ಥಾನದ ಜುಂಜುನು ಜಿಲ್ಲೆಯ ನವೀನ್ ಚೌಧರಿ ಎಂಬ 25 ವರ್ಷದ ಯುವಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. 'ಜುಂಜುನು ಎಕ್ಸ್‌ಪ್ರೆಸ್' ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ...

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...