ಜಾತಿ ದೌರ್ಜನ್ಯ ಪ್ರಕರಣದ ಕುರಿತು ದೂರು ನೀಡಲು ಹೋದ ಇಬ್ಬರು ದಲಿತ ಯುವಕರನ್ನು ಪೊಲೀಸ್ ಸಬ್ಇನ್ಸ್ಪೆಕ್ಟರ್ ಕೂಡಿ ಹಾಕಿದ್ದ ಆರೋಪ ಕೇಳಿಬಂದಿದೆ.
ದೂರು ನೀಡಲು ಬಂದ ಇಬ್ಬರು ದಲಿತ ಯುವಕರನ್ನು ಬಾಣಾವರ ಪೊಲೀಸ್ ಠಾಣೆಯ ಪಿಎಸ್ಐ ಠಾಣೆಯಲ್ಲೇ ಕೂಡಿ ಹಾಕಿರುವ ಬಗ್ಗೆ ವರದಿಯಾಗಿದೆ.
ತಮ್ಮ ತಂದೆ ಹಾಗೂ ತಾಯಿಗೆ ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಇಬ್ಬರು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಯುವಕರಿಬ್ಬರು ಬಾಣಾವರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಆ ವೇಳೆ ಕೂಡಿ ಹಾಕಲಾಗಿತ್ತು ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ಮಾಹಿತಿ ತಿಳಿದ ಕೆಲವು ದಲಿತ ಮುಖಂಡರು ಪೊಲೀಸ್ ಠಾಣೆಗೆ ತೆರಳಿ, ಯುವಕರನ್ನು ಬಿಟ್ಟು ಕಳುಹಿಸುವಂತೆ ಪಿಎಸ್ಐ ಅಭಿಜಿತ್ಗೆ ಒತ್ತಾಯಿಸಿದ್ದಾರೆ.
ಮಾರಣಾಂತಿಕ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.
ಬಾಣಾವರ ಹೋಬಳಿಯ ಹಿರಿಯೂರು ಗ್ರಾಮದ ಜಯಣ್ಣ ಮತ್ತು ಅವರ ಪತ್ನಿ ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಅದೇ ಗ್ರಾಮದ ಸ್ವಾಮಿ ಮತ್ತು ಅವರ ಪತ್ನಿ ದಾಳಿ ಮಾಡಿದ್ದಾರೆ.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜಯಣ್ಣ ಮತ್ತು ಅವರ ಪತ್ನಿಗೆ ಮಚ್ಚಿನಿಂದ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿದ್ದಾರೆ ಎಂದು ವರದಿಗಳಾಗಿವೆ.
ಹಲ್ಲೆಗೊಳಗಾದ ಜಯಣ್ಣ ಮತ್ತು ಅವರ ಪತ್ನಿ ಸರ್ಕಾರಿ ಆಸ್ಪತ್ರೆ ಅರಸೀಕೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ದಂಪತಿಯ ಮಕ್ಕಳಾದ ಅರುಣ್ ಮತ್ತು ನಿರಂಜನ್ ದೂರು ನೀಡಲು ಬಾಣಾವರ ಪೊಲೀಸ್ ಠಾಣೆಗೆ ಹೋಗಿದ್ದಾಗ, ಪಿಎಸ್ಐ ಅನುಚಿತವಾಗಿ ವರ್ತಿಸಿರುವ ಆರೋಪ ಬಂದಿದೆ.
ಪಿಎಸ್ಐ ಅಭಿಜಿತ್ ದೂರು ನೀಡಲು ಬಂದ ಇಬ್ಬರು ಯುವಕರನ್ನು ಬೆದರಿಸಿ ಠಾಣೆಯಲ್ಲಿ ಆರೋಪಿಗಳಂತೆ ಸುಮಾರು 10 ಗಂಟೆಯಿಂದ ಸಂಜೆ 4 ಗಂಟೆಗಳವರೆಗೆ ಕೂಡಿ ಹಾಕಿದ್ದರು ಎಂದು ಆಕ್ರೋಶ ವ್ಯಕ್ತವಾಗಿದೆ.



ಈ ದೌರ್ಜನ್ಯ ಕಂಡನಾರ್ಹ. ಆ ಪಿ.ಎಸ್. ಐ.ಅನ್ನು ಅಮಾನತುಗೊಳಿಸಬೇಕು.
ಬಿಡಬೆಡಿ ಅಮನತ್ತು ಆಗುವವರಿಗೆ ಸರ್
ಆ ಪೊಲೀಸ ಸಬ್ ಇನ್ಸ್ಪೆಕ್ಟರ್ ಮೇಲೆ ಖಾಸಗಿ ದೂರು ದಾಖಲು ಮಾಡಿ ಕೆಲಸದಿಂದ ವಜಾ ಮಾಡಬೇಕು