Homeಕರ್ನಾಟಕಮುರುಘಾ ಶರಣರು ಕಾನೂನಿಗಿಂತ ದೊಡ್ಡವರೇ?: ಬಂಧನಕ್ಕೆ ದಲಿತ ಮುಖಂಡರ ಆಗ್ರಹ

ಮುರುಘಾ ಶರಣರು ಕಾನೂನಿಗಿಂತ ದೊಡ್ಡವರೇ?: ಬಂಧನಕ್ಕೆ ದಲಿತ ಮುಖಂಡರ ಆಗ್ರಹ

- Advertisement -
- Advertisement -

“ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದರೂ ಯಾಕಿನ್ನೂ ಸ್ವಾಮೀಜಿಯ ಬಂಧನವಾಗಿಲ್ಲ?” ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ ಅವರನ್ನು ಕೇಳಿದರೆ, ‘ತನಿಖೆಯಾಗುತ್ತಿದೆ. ಕ್ರಮ ಜರುಗಿಸುತ್ತೇವೆ’ ಎನ್ನುತ್ತಾರೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಸ್ವಾಮೀಜಿಯನ್ನು ಯಾವಾಗ ಬಂಧಿಸುತ್ತೀರಿ? ಪೋಕ್ಸೋ ಪ್ರಕರಣದಲ್ಲಿ ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕಲ್ಲ, ಬೇರೆಯವರಾಗಿದ್ದರೆ ಹೀಗೆಯೇ ವಿಳಂಬವಾಗುತ್ತಿತ್ತೇ ಎಂದು ಕೇಳಿದರೆ, “ಆರೋಪಗಳನ್ನು ಪರಿಶೀಲನೆ ಮಾಡಬೇಕು. ಏಕಾಏಕಿ ಬಂಧಿಸಲು ಆಗುವುದಿಲ್ಲ. ತನಿಖೆ ನಡೆಸುತ್ತಿದ್ದೇವೆ. ಮೈಸೂರಿನಿಂದ ನಿನ್ನೆಯಷ್ಟೇ ಪ್ರಕರಣ ಚಿತ್ರದುರ್ಗಕ್ಕೆ ವರ್ಗಾವಣೆಯಾಗಿದೆ” ಎನ್ನುತ್ತಾರೆ ಎಸ್.ಪಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅತ್ಯಂತ ಶೋಷಿತ ಸಮುದಾಯಕ್ಕೆ ಸೇರಿದ, ಅಸಹಾಯಕ, ಬಡ ಬಾಲಕಿಯರು ಪೊಲೀಸ್ ಠಾಣೆಯ ಮೆಟ್ಟಿಲೇರಿರುವುದೇ ದೊಡ್ಡ ಸಂಗತಿ. ಈ ಸಂತ್ರಸ್ತ ಮಕ್ಕಳಿಗೆ ಸಹಾಯ ಮಾಡಿರುವ ಒಡನಾಡಿ ಸಂಸ್ಥೆಯ ಪರಶು ಹೇಳುವಂತೆ, “ತಮಗೆ ನ್ಯಾಯ ದೊರಕದೆಂದು ಭಾವಿಸಿ ಈ ಮಕ್ಕಳು ಆತ್ಯಹತ್ಯೆಗೂ ಯೋಚಿಸಿದ್ದರು” ಎಂಬುದು ಆಘಾತಕಾರಿ ಸಂಗತಿ.

ಇದೆಲ್ಲದರ ನಡುವೆ ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜಕಾರಣಿಗಳು ಹೇಗೆ ವರ್ತಿಸಬೇಕು? ಸ್ವಾಮೀಜಿ ಯಾವುದೇ ತಪ್ಪು ಮಾಡಿರಲಿಕ್ಕಿಲ್ಲ ಎಂಬ ಅಭಿಪ್ರಾಯ ತಾಳುವುದು ಸಂತ್ರಸ್ತ ಶೋಷಿತ ಮಕ್ಕಳಿಗೆ ತೋರುವ ಅಗೌರವ ತಾನೇ? ಆದರೆ ಆಘಾತಕಾರಿ ಸಂಗತಿಗಳೆಂದರೆ- ಪ್ರಕರಣವನ್ನು ಸಂಧಾನದ ಮೂಲಕ ಮುಚ್ಚಿಹಾಕುವ ಯತ್ನಗಳು ನಡೆಯುತ್ತಿರುವುದು ತಿಳಿದುಬಂದಿದೆ. ಶೋಷಿತ ಸಮುದಾಯದ ಜನಪ್ರತಿನಿಧಿಗಳು ಹಾಗೂ ಶಾಸಕರನ್ನೇ ಈ ಸಂಧಾನಕ್ಕೆ ಬಳಸಲಾಗುತ್ತಿದೆ ಎಂಬ ಆರೋಪಗಳು ಬರುತ್ತಿವೆ.

ಇದನ್ನೂ ಓದಿರಿ: ಮಕ್ಕಳ ಮೇಲೆ ಮುರುಘಾ ಶರಣರಿಂದ ಅತ್ಯಾಚಾರ ಆರೋಪ: ಪ್ರಕರಣ ಬಯಲಿಗೆಳೆದ ಒಡನಾಡಿ ಸಂಸ್ಥೆ ಹೇಳಿದ್ದೇನು?

ಇಷ್ಟೆಲ್ಲದರ ನಡುವೆ ಚಿತ್ರದುರ್ಗದ ಆತ್ಮಸಾಕ್ಷಿ ಸುಮ್ಮನಿಲ್ಲ. ಆಗುತ್ತಿರುವ ಬೆಳವಣಿಗೆಗಳು ಆಘಾತಕಾರಿ ಹಾಗೂ ತಕ್ಷಣವೇ ಸ್ವಾಮೀಜಿಯ ಬಂಧನವಾಗಬೇಕಿರುವುದು ಸಾಂವಿಧಾನಿಕ ನಡೆ ಎಂಬ ಆಗ್ರಹಗಳೂ ಬರುತ್ತಿವೆ. ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆಯನ್ನೂ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆಯನ್ನು ಪ್ರಜ್ಞಾವಂತರು ನೀಡುತ್ತಿದ್ದಾರೆ.

ಚಿತ್ರದುರ್ಗದಲ್ಲಿ ಸಕ್ರಿಯವಾಗಿರುವ ದಲಿತ ಹಾಗೂ ಶೂದ್ರ ಸಮುದಾಯಗಳ ಸಾಮಾಜಿಕ ಸಂಘರ್ಷ ಸಮಿತಿಯು ಪ್ರಕರಣದ ಸುತ್ತ ಆಗುತ್ತಿರುವ ಬೆಳವಣಿಗೆಯನ್ನು ಖಂಡಿಸಿದೆ. ತಕ್ಷಣವೇ ಸ್ವಾಮೀಜಿ ಸಂವಿಧಾನಕ್ಕೆ ಗೌರವಕ್ಕೆ ಕೊಟ್ಟು ಬಂಧನಕ್ಕೊಳಗಾಗಿ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ದಲಿತ ಚಿಂತಕ ಸಿ.ಕೆ.ಮಹೇಶ್, “ಪೋಕ್ಸೋ ಪ್ರಕರಣ ದಾಖಲಾಗಿದೆ. ಸ್ವಾಮೀಜಿಯಾಗಲೀ, ಮತ್ತೆ ಯಾವನೇ ಆಗಿರಲಿ, ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಒಂದೇ. ಇದು ಮಠಕ್ಕೂ ಅನ್ವಯಿಸುತ್ತದೆ. ಸಾಮಾನ್ಯ ಮನುಷ್ಯನಿಗೆ ಅನ್ವಯವಾಗುವ ಕಾನೂನು ಈ ದೇಶದ ಪ್ರಭಾವಿಗೂ ಅನ್ವಯವಾಗುತ್ತದೆ” ಎಂದರು.

“ಇಲ್ಲಿ ದೌರ್ಜನ್ಯಕ್ಕೊಳಗಾಗಿರುವ ಮಕ್ಕಳು ಶೋಷಿತ ಸಮುದಾಯಕ್ಕೆ ಸೇರಿದವರೋ, ಬೇರೆಯ ಸಮುದಾಯಕ್ಕೆ ಸೇರಿದವರೋ ಬೇಕಿಲ್ಲ. ಎಳೆಯ ಹೆಣ್ಣುಮಕ್ಕಳನ್ನು ಪೋಷಣೆ ಮಾಡುವುದಾಗಿ ಸೇರಿಸಿಕೊಂಡು ಲೈಂಗಿಕ ಕ್ರಿಯೆಗೆ ಬಳಸಿದ್ದರೆ ಅದು ಅಕ್ಷಮ್ಯ ಅಪರಾಧ. ಅಂತಹ ಅಪರಾಧ ಮಾಡಿರುವ ವ್ಯಕ್ತಿಗೆ ಶಿಕ್ಷೆಯಾಗಲೇಬೇಕು. ಪೋಕ್ಸೋ ಕಾನೂನಿನ ಪ್ರಕಾರ, ಎಫ್‌ಐಆರ್‌ ಆದ ತಕ್ಷಣವೇ ಅರೆಸ್ಟ್ ಮಾಡಿ ಮುಂದಿನ ಕ್ರಮಗಳನ್ನು ಜರುಗಿಸಬೇಕು” ಎಂದರು.

ಇದನ್ನೂ ಓದಿರಿ: ಮುರುಘಾ ಮಠ: ಮಕ್ಕಳ ಪ್ರಕರಣದಲ್ಲಿ ಆರೋಪಿಯಾದ ಮಹಿಳಾ ವಾರ್ಡನ್‌ ದೂರು; ಮಠದ ಮಾಜಿ ಆಡಳಿತಾಧಿಕಾರಿ ವಿರುದ್ಧ ಅತ್ಯಾಚಾರ ಯತ್ನ ಪ್ರಕರಣ ದಾಖಲು

“ಇಲ್ಲಿ ಆರೋಪಿಯು ಸ್ವಾಮೀಜಿಯಾಗಿರುವ ಕಾರಣಕ್ಕಾಗಿಯೋ, ಅಥವಾ ಅವರು ಪ್ರಭಾವಿಯಾಗಿರುವ ಕಾರಣಕ್ಕಾಗಿಯೋ ಪೋಕ್ಸೋ ಕೂಡ ನಿಷ್ಕ್ರಿಯವಾದಂತೆ ಕಾಣುತ್ತಿದೆ. ಸಾಮಾನ್ಯ ವ್ಯಕ್ತಿ ಏನಾದರೂ ಈ ಕೆಲಸ ಮಾಡಿದ್ದರೆ ತಕ್ಷಣವೇ ಅರೆಸ್ಟ್ ಮಾಡಲಾಗುತ್ತಿತ್ತು” ಎಂದು ತಿಳಿಸಿದರು.

‘ಬುದ್ಧ, ಬಸವಣ್ಣನವರ ಅನುಯಾಯಿಯಾಗಿದ್ದರೆ ಬಂಧನಕ್ಕೊಳಗಾಗಲಿ’

“ಮುರುಘಾ ಶರಣರು ಇಡೀ ರಾಜ್ಯದಲ್ಲಿ ಗುರುತಿಸಿಕೊಂಡವರು. ಬುದ್ಧ, ಯೇಸು, ಪೈಗಂಬರ್‌ ಮೇಲೆಯೂ ಆರೋಪಗಳು ಬಂದಿದ್ದವು ಎಂದು ಸ್ವಾಮೀಜಿ ಹೇಳಿಕೊಳ್ಳುತ್ತಿದ್ದಾರೆ. ಆ ಮೂಲಕ ಮಹಾನೀಯರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುತ್ತಿದ್ದಾರೆ. ತಮ್ಮ ಮೇಲೆ ಆರೋಪಗಳು ಬಂದಾಗ ಬಸವಣ್ಣ ಹಾಗೂ ಬುದ್ಧ ಮುಕ್ತ ತನಿಖೆಗೆ ಒಳಪಟ್ಟಿದ್ದರು ಎಂಬುದನ್ನು ಮುರುಘಾ ಶರಣರು ಮರೆಯಬಾರದು” ಎಂದು ಸಿ.ಕೆ.ಮಹೇಶ್ ಆಗ್ರಹಿಸಿದರು.

“ಬುದ್ಧನ ಮೇಲೆ ಬ್ರಾಹ್ಮಣರು ಆರೋಪಗಳನ್ನು ಮಾಡಿದಾಗ ಸ್ವಯಃ ಬುದ್ಧ ಗುರುವೇ ತನಿಖೆಗೆ ಒಳಗಾಗುತ್ತಾರೆ. ತನಿಖೆಯಾದ ಬಳಿಕ ಹೊರಗೆ ಬರುತ್ತಾರೆ. ಬುದ್ಧನ ಬಗ್ಗೆ ಮಾತನಾಡುವ ಮುರುಘಾ ಶರಣರು, ತನಿಖೆಗೆ ಒಳಗಾಗಬೇಕು. ನೀವು ಎಷ್ಟೇ ಶುದ್ಧರಾಗಿರಿ, ಪ್ರಾಮಾಣಿಕರಾಗಿರಿ, ಆ ಸರ್ಟಿಫಿಕೇಟ್‌ಗಳನ್ನು ನೀವಾಗಿಯೇ ತೆಗೆದುಕೊಳ್ಳಬಾರದು. ನಿಮ್ಮ ಕ್ರಿಯೆಗಳನ್ನು ಗುರುತಿಸಿದ ಬಳಿಕ ಜನರು ಆ ಸರ್ಟಿಫಿಕೇಟ್‌ಗಳನ್ನು ದೃಢೀಕರಿಸಬೇಕು” ಎಂದು ಆಶಿಸಿದರು.

“ಬುದ್ಧನ ಹೆಸರನ್ನು ಬಳಸಿಯೋ, ಮತ್ತ್ಯಾರೋ ಮಹನೀಯರ ಹೆಸರು ಮುಂದೆ ತರುವ ಮೂಲಕವೋ ರಕ್ಷಣೆ ಮಾಡಿಕೊಳ್ಳುವುದು ಖಂಡನೀಯ. ಬಸವಣ್ಣನವರ ಮೇಲೆ ದ್ರವ್ಯದ ಆರೋಪ ಬಂದಾಗಲೂ ತಾವು ಬಿಜ್ಜಳನ ತನಿಖೆಗೆ ಒಳಪಟ್ಟರು. ತಾವು ಸ್ವಚ್ಛ ಇದ್ದೇವೆ ಎಂಬುದನ್ನು ಸಾಬೀತು ಮಾಡಿದರು. ಆದರೆ ಇಲ್ಲಿ ಮುರುಘಾ ಶರಣರು ಕಾನೂನು ಪಾಲಿಸದೆ ತಮ್ಮ ಕ್ರಿಯೆಗಳ ಮೂಲಕ ತಾವು ತಪ್ಪಿತಸ್ಥರು ಎಂಬುದನ್ನು ಒಪ್ಪಿಕೊಳ್ಳುತ್ತಿದ್ದಾರೆ; ಬಾಯಿಮಾತಿನಲ್ಲಿ ಆರೋಪಿಯಲ್ಲ ಎನ್ನುತ್ತಿದ್ದಾರೆ” ಎಂದರು.

“ಘಟನೆಯನ್ನು ಖಂಡಿಸಿ ಸಾಮಾಜಿಕ ಸಂಘರ್ಷ ಸಮಿತಿ ಹೋರಾಟ ಹಮ್ಮಿಕೊಳ್ಳಲಿದೆ. ಸಂತ್ರಸ್ತ ಮಕ್ಕಳಿಗೆ ನ್ಯಾಯ ದೊರಕಬೇಕಿದೆ” ಎಂದ ಅವರು, “ಪ್ರಭುತ್ವ ಎನ್ನುವುದೇ ಒಂದು ಕೂಟ. ಅಲ್ಲಿ ಪ್ರಭಾವಿಗಳು, ಅಧಿಕಾರಿಗಳು, ಮಠಗಳು ಇರುತ್ತವೆ. ಈ ಕೂಟದ ಸದಸ್ಯನೊಬ್ಬನಿಗೆ ತೊಂದರೆಯಾದಾಗ ಮತ್ತೊಬ್ಬ ಸದಸ್ಯ ಸಂಧಾನಕ್ಕೆ ಬರುತ್ತಾನೆ. ಸಿಎಂ, ಎಂಎಲ್‌ಎ, ಮಂತ್ರಿಗಳು ಈ ಕೂಟದ ಭಾಗವಾಗಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಪ್ರಗತಿಪರ ಚಿಂತಕ ಶಿವಣ್ಣ, “ಅಂಬೇಡ್ಕರ್‌ ಕೊಟ್ಟ ಸಂವಿಧಾನ ಉಳಿಯಬೇಕು. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಸ್ವಾಮೀಜಿ ಬಂಧನಕ್ಕೆ ಒಳಗಾಗಬೇಕು. ಇದಕ್ಕಾಗಿ ದಲಿತ ಶೋಷಿತರ ಬಳಗದಿಂದ ಹೋರಾಟ ರೂಪಿಸುತ್ತಿದ್ದೇವೆ” ಎಂದು ಮಾಹಿತಿ ನೀಡಿದರು.

ಸಾಮಾಜಿಕ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಿ.ದುರ್ಗೇಶ್‌ ಮಾತನಾಡಿ, “ಈ ಸ್ವಾಮೀಜಿ ಮಾಡಿರುವ ಕೆಲಸ ಅಕ್ಷಮ್ಯ ಅಪರಾಧ. ಸಾಮಾನ್ಯ ಪ್ರಜೆಯಾಗಿದ್ದರೆ ತಕ್ಷಣವೇ ಬಂಧನಕ್ಕೊಳಗಾಗುತ್ತಿದ್ದ. ಆದರೆ ಮಠಾಧಿಪತಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ ಅನಿಸುತ್ತಿದೆ. ಮುರುಘಾ ಶರಣರನ್ನು ಮೊದಲು ಬಂಧಿಸಬೇಕಾಗಿದೆ” ಎಂದು ಆಗ್ರಹಿಸಿದರು.

“ಸಂತ್ರಸ್ತರ ಬಾಯಿ ಮುಚ್ಚಿಸುವ ಕುತಂತ್ರಗಳನ್ನು ಮಾಡಿಯೇ ಮಾಡುತ್ತಾರೆ. ಕೆಲವರು ಹೇಳೋದೊಂದು ಮಾಡೋದೊಂದು. ಇಂಥವರಿಂದ ದೇಶ ಹಾಳಾಗಿದೆ” ಎಂದು ವಿಷಾದಿಸಿದರು.

ಇದನ್ನೂ ಓದಿರಿ: ಮುರುಘಾ ಶರಣರ ಮೇಲಿನ ಪೋಕ್ಸೋ ಪ್ರಕರಣ ಚಿತ್ರದುರ್ಗಕ್ಕೆ ವರ್ಗಾವಣೆ

ಸಮಿತಿಯ ಜಿಲ್ಲಾಧ್ಯಕ್ಷರಾದ ಕೆ.ಕುಮಾರ್‌ ಮಾತನಾಡಿ, “ಬಹಳ ನೋವಾಗುವ ಕೆಲಸವಿದು. ರಾಜಕೀಯ ಪಕ್ಷಗಳು ಸ್ವಾಮೀಜಿಯ ಪರ ಮಾತನಾಡುತ್ತಿವೆ. ಸಾಮಾನ್ಯ ವ್ಯಕ್ತಿಯಾಗಿದ್ದರೆ ಎನ್‌ಕೌಂಟರ್ ವಿಷಯ ಪ್ರಸ್ತಾಪಿಸುತ್ತಿದ್ದರು. ಈಗ ಎಲ್ಲಿ ಹೋಗಿದ್ದಾರೆ ಆ ರಾಜಕಾರಣಿಗಳು?” ಎಂದು ಪ್ರಶ್ನಿಸಿದರು.

“ಮಾಜಿ ಶಾಸಕ ಬಸವರಾಜನ್‌ ಮತ್ತು ಮುರುಘಾ ಶರಣರ ನಡುವಿನ ವೈಯಕ್ತಿಕ ವೈಷಮ್ಯವನ್ನು ಪೋಕ್ಸೋ ಪ್ರಕರಣಕ್ಕೆ ಥಳುಕುಹಾಕುವುದು ಬೇಡ. ಅಮಾಯಕ ಹೆಣ್ಣು ಮಕ್ಕಳು ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ. ಬಸವರಾಜನ್‌ ಮೇಲೆಯೂ ತನಿಖೆಯಾಗಲಿ” ಎಂದು ಒತ್ತಾಯಿಸಿದರು.

ದಲಿತ ಸಮುದಾಯದ ಮುಖಂಡರಾದ ರಾಮು ಘೋಸೆ, ಡಾ.ವಿ.ಬಸವರಾಜು, ಶ್ರೀನಿವಾಸ್‌, ಸಿ.ಕೆ.ಗೋಪಾಲಕೃಷ್ಣ, ತಮ್ಮಣ್ಣ, ಶಿವಕುಮಾರ್‌, ಮಾಯಣ್ಣ ಮೊದಲಾದವರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...