Homeಮುಖಪುಟಪುಲ್ವಾಮ ದಾಳಿಯನ್ನು ಸಂಭ್ರಮಿಸಿದ್ದ ಅರ್ನಾಬ್: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಪುಲ್ವಾಮ ದಾಳಿಯನ್ನು ಸಂಭ್ರಮಿಸಿದ್ದ ಅರ್ನಾಬ್: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಬಾಲಾಕೋಟ್ ದಾಳಿಯ ಬಗ್ಗೆಯೂ ಮೂರು ದಿನಗಳ ಮೊದಲೇ ಅರ್ನಾಬ್‌ಗೆ ಗೊತ್ತಿತ್ತು ಎಂಬ ವಿಷಯ ಲೀಕ್ ಆಗಿರುವ ವಾಟ್ಸಾಪ್ ಚಾಟ್‌ಗಳಿಂದ ತಿಳಿದುಬಂದಿದೆ.

- Advertisement -
- Advertisement -

2019ರ ಫೆಬ್ರವರಿ ತಿಂಗಳಿನಲ್ಲಿ ಕಾಶ್ಮೀರದ ಪುಲ್ವಾಮ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯನ್ನು ಪತ್ರಕರ್ತ ಅರ್ನಾಬ್ ಗೋಸ್ವಾಮಿ ಸಂಭ್ರಮಿಸಿದ್ದ ಎಂಬ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಆ ದಾಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ತದನಂತರ ಭಾರತದ ಸೈನಿಕರು ನಡೆಸಿದ ಬಾಲಾಕೋಟ್ ದಾಳಿಯ ಬಗ್ಗೆಯೂ ಮೂರು ದಿನಗಳ ಮೊದಲೇ ಅರ್ನಾಬ್‌ಗೆ ಗೊತ್ತಿತ್ತು ಎಂಬ ವಿಷಯ ಲೀಕ್ ಆಗಿರುವ ವಾಟ್ಸಾಪ್ ಚಾಟ್‌ಗಳಿಂದ ತಿಳಿದುಬಂದಿದೆ. ಈ ಕುರಿತು ದೇಶಾದ್ಯಂತ ಅರ್ನಾಬ್ ಗೋಸ್ವಾಮಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಟಿಆರ್‌ಪಿ ಹಗರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ರಿಪಬ್ಲಿಕ್ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಮತ್ತು BARC ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ನಡುವಿನ ವಾಟ್ಸಾಪ್‌ ಚಾಟ್‌ಗಳ ಸುಮಾರು 500 ಪುಟಗಳನ್ನು ಬಹಿರಂಗಗೊಳಿಸಿದ್ದಾರೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಆದರೆ ಈ ಕುರಿತು ಯಾವುದೇ ಮುಖ್ಯವಾಹಿನಿ ಮಾಧ್ಯಮಗಳು ಸುದ್ದಿ ಮಾಡಿಲ್ಲವಾದರೂ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಮಂದಿ ಕಿಡಿಕಾರಿದ್ದಾರೆ.

This attack we have won like crazy… ಇದು ಇಡೀ ದೇಶವನ್ನು ನಡುಗಿಸಿದ ಪುಲ್ವಾಮ ದಾಳಿಯ ಬಗ್ಗೆ ಅರ್ನಾಬ್ ಗೋಸ್ವಾಮಿ ಆಡಿದ ಮಾತುಗಳು. ಇವು ಲೀಕ್‌ ಆದ ವಾಟ್ಸಾಪ್ ಚಾಟ್‌ಗಳಲ್ಲಿ ದಾಖಲಾಗಿದೆ. ನೇಷನ್ ವಾಂಟ್ಸ್‌ ಟು ನೋ ಎಂದು ಅರಚುತ್ತಿದ್ದ ಅರ್ನಾಬ್ ಗೋಸ್ವಾಮಿಯ ದೇಶಪ್ರೇಮವೆ ಇದು? ಎಂದು ಹಲವರು ಟೀಕೆ ಮಾಡಿದ್ದಾರೆ.

ವಾಟ್ಸಾಪ್ ಚಾಟ್ ಪ್ರಕಾರ ಅರ್ನಾಬ್ ಗೋಸ್ವಾಮಿಗೆ ಬಾಲಾಕೋಟ್ ದಾಳಿಯ ಬಗ್ಗೆ ಮೂರು ದಿನಗಳ ಮೊದಲೇ ಗೊತ್ತಿತ್ತು. ಈ ಬಾರಿ ದೊಡ್ಡದೇನೋ ನಡೆಯುತ್ತದೆ ಎಂದು ಅರ್ನಾಬ್ ಹೇಳಿದರೆ, ಇದರಿಂದಾಗಿ ದೊಡ್ಡ ಮನುಷ್ಯನಿಗೆ (big man) ತುಂಬಾ ಒಳ್ಳೆಯದಾಗುತ್ತದೆ ಎನ್ನುತ್ತಾನೆ ಪಾರ್ಥೋ ದಾಸ್ ಗುಪ್ತ. ಅಷ್ಟೇ ಅಲ್ಲ, ಇದರಿಂದಾಗಿಯೇ ದೊಡ್ಡ ಮನುಷ್ಯ ಈ ಚುನಾವಣೆಯನ್ನು ಗುಡಿಸಿಕೊಂಡು (ದೊಡ್ಡ ಗೆಲುವು) ಬರುತ್ತಾನೆ ಎನ್ನುತ್ತಾನೆ. ಇದು ಮಾಮೂಲಿ ಸರ್ಜಿಕಲ್ ಸ್ಟ್ರೈಕ್ ಥರ ಅಲ್ಲ, ಅದಕ್ಕಿಂತ ದೊಡ್ಡದು. ಅಷ್ಟೇ ಅಲ್ಲ, ಕಾಶ್ಮೀರದಲ್ಲೂ ಸದ್ಯದಲ್ಲೇ ದೊಡ್ಡದೇನೋ ನಡೆಸಲಾಗುವುದು. ಜನ‌ರು ನಿಜಕ್ಕೂ ಖುಷಿಯಾಗುತ್ತಾರೆ ಎನ್ನುತ್ತಾನೆ ಅರ್ನಾಬ್.

ದೇಶದ ರಕ್ಷಣೆ, ಮಿಲಿಟರಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಅತ್ಯಂತ ರಹಸ್ಯ‌ ಮಾಹಿತಿಗಳೆಲ್ಲ ಅರ್ನಾಬ್ ಗೋಸ್ವಾಮಿಗೆ ಹೇಗೆ ಗೊತ್ತಾಗುತ್ತಿತ್ತು? ಇದು Official secrets Act ಪ್ರಕಾರ ಕ್ರಿಮಿನಲ್ ಅಪರಾಧವಲ್ಲವೇ?
ಬೇರೆ ದೇಶಗಳಲ್ಲಿ ಇಂಥದ್ದೇನಾದರೂ ನಡೆದಿದ್ದರೆ, ಇಷ್ಟೊತ್ತಿಗೆ ಅರ್ನಾಬ್ ಜೈಲಿನಲ್ಲಿರುತ್ತಿದ್ದ. ಆದರೆ ಅವನು ದೊಡ್ಡ ಮನುಷ್ಯರ‌ ಮುದ್ದಿನ ಕೂಸು. ಅವನು ಕಿಯ್ಯೋ ಎಂದು ಕೂಗಿದರೆ ಉನ್ನತ ನ್ಯಾಯಾಲಯಗಳ ಕರುಳು ಚುರುಕ್ ಎಂದು ರಕ್ಷಣೆಗೆ ನಿಲ್ಲುತ್ತವೆ! ಒಂದಂತೂ ಸತ್ಯ. ಇಡೀ ದೇಶದಲ್ಲಿ ಅತಿ ದೊಡ್ಡ AntiNational ಪತ್ರಕರ್ತ ಒಬ್ಬನಿದ್ದರೆ ಅದು ಅರ್ನಾಬ್ ಗೋಸ್ವಾಮಿಯೇ. ನಲವತ್ತು ಸೈನಿಕರ ಸಾವನ್ನು ತನ್ನ ಚಾನಲ್ ವಿಜಯಕ್ಕಾಗಿ ಸಂಭ್ರಮಿಸುವ ಇಂಥ ದೇಶದ್ರೋಹಿ ಇನ್ನೊಬ್ಬನಿರಲು ಸಾಧ್ಯವಿಲ್ಲ ಎಂದು ದಿನೇಶ್ ಕುಮಾರ್ ಎಸ್‌.ಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

BARC ಮಾಜಿ ಮುಖ್ಯಸ್ಥ ಮತ್ತು ಅರ್ನಾಬ್ ಗೋಸ್ವಾಮಿ ನಡುವೆ ನಡೆದ ವಾಟ್ಸಪ್ ಹರಟೆಗಳು ಅನೇಕ ಕಳವಳಕಾರಿ ವಿಷಯಗಳನ್ನು ಬಯಲಿಗೆಳೆದಿವೆ. ಕೆಲ ಪತ್ರಕರ್ತರು ಮತ್ತು ಸರಕಾರದ ನಡುವಣ ಅನೈತಿಕ ಸಂಬಂಧದ ಮೇಲೆ (ರಾಡಿಯಾ ಟೇಪ್ ಬಳಿಕ) ಮತ್ತೊಮ್ಮೆ ಬೆಳಕು ಚೆಲ್ಲಿದೆ. ಅರ್ನಾಬ್ ಮತ್ತು ಪ್ರಧಾನಿ ಕಚೇರಿಯ ನಡುವಣ ಸುಮಧುರ ಸಂಬಂಧ, ಅರ್ನಾಬ್ ಗೆ ಸರಕಾರದ ಮೇಲಿದ್ದ ನಿಯಂತ್ರಣ ಇವಷ್ಟೇ ಅಲ್ಲ, ನ್ಯಾಯಾಧೀಶರನ್ನು ಖರೀದಿಸುವ ಬಗ್ಗೆಯೂ ಅದರಲ್ಲಿ ಪ್ರಸ್ತಾಪವಿದೆ. ! ಇದು ತುಂಬಾ ಗಂಭೀರ ವಿಚಾರ. ಇದರ ಬಗ್ಗೆ ನ್ಯಾಯಾಲಯ ಏನು ಕ್ರಮ ತೆಗೆದುಕೊಳ್ಳುತ್ತದೆ ನೋಡಬೇಕು ಎಂದು ಶ್ರೀನಿವಾಸ ಕಾರ್ಕಳರವರು ಅಭಿಪ್ರಾಯಪಟ್ಟಿದ್ದಾರೆ.

ಬಾಲಾಕೋಟ್ ದಾಳಿ ಮೂರು ದಿನ ಮೊದಲೇ ಅರ್ನಾಬ್‌ಗೆ ಗೊತ್ತಿದ್ದರೆ, ಈ ದೇಶದ ಪ್ರಧಾನಿ, ರಕ್ಷಣಾ ಮಂತ್ರಿ, ಗೃಹಮಂತ್ರಿ ಯಾರು? ಎಂದು ಪ್ರಸಾದ್ ರಕ್ಷಿಧಿಯವರು ಪ್ರಶ್ನಿಸಿದ್ದಾರೆ.

ಅರ್ನಾಬ್ ವಾಟ್ಸಾಪ್ ಚಾಟ್ ಲೀಕ್ ಹೊಲಸು ರಾಡಿಯಾ ಟೇಪ್‌ಗಿಂತ ಹೆಚ್ಚು ಅಪಾಕಾರಿಯಾದುದು. ಆದರೆ ಆಗ ವಿಚಾರಗಳನ್ನು ಆಲಿಸುವ ಮತ್ತು ವಿಮರ್ಶಿಸುವ ಜನರಿದ್ದರು ಅವರು ಕಣ್ಮರೆಯಾಗಿದ್ದಾರೆ ಅಷ್ಟೇ ವ್ಯತ್ಯಾಸ ಎಂದು ಆದಿತ್ಯ ಭಾರದ್ವಾಜ್ ಆತಂಕ ವ್ಯಕ್ತಪಡಿಸಿದ್ದಾರೆ.

ಹಿಂದೆಯೂ ಹೇಳಿದ್ವಿ, ಇಂದೂ ಹೇಳ್ತೀವಿ, ಮುಂದೆಯೂ ಹೇಳ್ತಾನೇ ಇರ್ತೀವಿ.. ಪುಲ್ವಾಮಾ ದಾಳಿ ಒಂದು ಪೂರ್ವ ನಿಯೋಜಿತ ಕೃತ್ಯ. ಇದರಲ್ಲಿ ದೇಶದ ಪ್ರಮುಖ ವ್ಯಕ್ತಿಗಳು ಭಯೋತ್ಪಾದಕರ ಜೊತೆಗೆ ಶಾಮೀಲಾಗಿದ್ದಾರೆ. ಅದರಲ್ಲೂ ಒಂದು ನಿರ್ದಿಷ್ಟ ಪಕ್ಷದ ಪ್ರಮುಖರು ಈ ಸಂಚಿಗೆ ಮತ್ತವರ ರಾಜಕೀಯ ಹಿತಾಸಕ್ತಿಗಾಗಿ 40 ಮಂದಿ ಸೈನಿಕರನ್ನು ಬಲಿ ಪಡೆದಿದ್ದಾರೆ. 2019 ರ ಚುನಾವಣೆಯ ಗೆಲುವಿನ ಕಾರಣಕ್ಕೆ, ದೇಶದಲ್ಲಿ ಯುದ್ಧೋನ್ಮಾದ ಸೃಷ್ಟಿಸುವುದರಿಂದ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಅಂಶವನ್ನೇ ಪ್ರಮುಖವಾಗಿ ಇಟ್ಟುಕೊಂಡು ಈ ದಾಳಿಗೆ ಮುಹೂರ್ತ ಇಟ್ಟಿದ್ದಾರೆ. ಪುಲ್ವಾಮಾ ದಾಳಿಯ ನಂತರದ ಬೆಳವಣಿಗೆ ಇವೆಲ್ಲಾ ಅನುಮಾನಗಳನ್ನು ಹುಟ್ಟು ಹಾಕಿತ್ತು ಮತ್ತು ಆ ಅನುಮಾನ ಬಹುತೇಕ ನಿಜ ಕೂಡಾ ಆಗಿವೆ. ಈಗ ಸಿಕ್ಕಿರುವ ಅರ್ನಬ್ ಗೋಸ್ವಾಮಿ ಚಾಟ್ ಹಿಸ್ಟರಿ ಇವೆಲ್ಲ ಆರೋಪ, ಅನುಮಾನಗಳಿಗೆ ಪುಷ್ಟಿ ಕೊಡುವಂತಿದೆ.

ಅರ್ನಬ್ ಕ್ಯಾಮೆರಾ ಮುಂದೆ ಕೂತಾಗ ದೇಶ, ಸೈನ್ಯ, ಸೈನಿಕರು, ಪಾಕಿಸ್ತಾನ, ಭಯೋತ್ಪಾದಕ, ತುಕ್ಡೆ ತುಕ್ಡೆ ಅಂತ ಅರಚಾಡುವವನು ಕ್ಯಾಮೆರಾ ಹಿಂದೆ ನಿಜವಾದ ಭಯೋತ್ಪಾದಕನಂತೆಯೇ ವರ್ತಿಸಿದ್ದಾನೆ. ಇಡೀ ದೇಶಕ್ಕೆ ದೇಶವೇ 40 ಮಂದಿ ಸೈನಿಕರ ಸಾವಿಗೆ ಮರುಗುತ್ತಿರುವಾಗ ಈತ ಇದನ್ನು “ವಿಕ್ಟರಿ” ಎಂಬಂತೆ ಸಂಭ್ರಮಿಸಿದ್ದಾನೆ. ಇಲ್ಲಿ ಅರ್ನಬ್ ಗೋಸ್ವಾಮಿ, ಆತನ ಬೆಂಬಲಿಸುವವರು, ಆತನ ಧೋರಣೆಗಳನ್ನು ಒಪ್ಪುವ ಪಕ್ಷದವರ ಉದ್ದೇಶ ಸ್ಪಷ್ಟವಾಗಿದೆ ಎಂದು ಪ್ರಗತ್ ಕೆ.ಆರ್ ಅಭಿಪ್ರಾಯಪಟ್ಟಿದ್ದಾರೆ.

ಸೋರಿಕೆಯಾದ ಚಾಟ್‌ಗಳು ಸುಮಾರು 500 ಪುಟಗಳು ಮತ್ತು 80MB ಡೇಟಾವನ್ನು ಹೊಂದಿವೆ. ಚಾಟ್‌ಗಳಲ್ಲಿ, ಪಾರ್ಥೋ ದಾಸ್ ಗುಪ್ತಾ ಅರ್ನಾಬ್‌ಗೆ ಪಿಎಂಒ ಸಹಾಯವನ್ನು ಕೇಳುವಂತೆ ಮತ್ತು ಅವರ ವ್ಯವಹಾರಕ್ಕೆ ಸಹಾಯ ಮಾಡಲು ಉನ್ನತ ಮಂತ್ರಿಗಳೊಂದಿಗೆ ಭೇಟಿಯಾಗುವಂತಗೆ ಮಾತುಕತೆ ನಡೆಸಿದ ವಿವರಗಳಿವೆ.


ಇದನ್ನೂ ಓದಿ: PMO ಕಚೇರಿಯಿಂದಲೇ ಸಹಾಯ ಕೇಳಿದ್ದ ಅರ್ನಾಬ್?: BARC ಸಿಇಒ ಜೊತೆಗಿನ ವಾಟ್ಸಾಪ್ ಚಾಟ್‌ಗಳು ಲೀಕ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಯಾವುದೇ ದೇಶದ್ರೋಹಿ ಕೆಲಸ ಮಾಡಿದರೂ ಪರವಾಗಿಲ್ಲ ……
    ಆದರೆ ಅವನು BJP ಗೆ ಬಕೆಟ್ ಹಿಡಿದ್ರೆ ಅವನು ದೇಶಪ್ರೇಮಿ…
    RSS..BJP…ಆಟವಿದು…

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...