Homeಮುಖಪುಟಜಿಗ್ನೇಶ್‌ ಬಂಧನ; ಗುಜರಾತ್‌ನಾದ್ಯಂತ ಪ್ರತಿಭಟನೆಯ ಕಾವು- ದಲಿತ ಹೋರಾಟಗಾರರ ಮೇಲೂ ಪೊಲೀಸ್‌ ಕಾರ್ಯಾಚರಣೆ

ಜಿಗ್ನೇಶ್‌ ಬಂಧನ; ಗುಜರಾತ್‌ನಾದ್ಯಂತ ಪ್ರತಿಭಟನೆಯ ಕಾವು- ದಲಿತ ಹೋರಾಟಗಾರರ ಮೇಲೂ ಪೊಲೀಸ್‌ ಕಾರ್ಯಾಚರಣೆ

- Advertisement -
- Advertisement -

ಗುಜರಾತ್‌ನ ವಡ್ಗಾಮ್ ಶಾಸಕ, ದಲಿತ ನಾಯಕ ಜಿಗ್ನೇಶ್ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ಬನಸ್ಕಾಂತದ ಪಾಲನ್‌ಪುರ ಸರ್ಕ್ಯೂಟ್ ಹೌಸ್‌ನಿಂದ ಬಂಧಿಸಿದ ಒಂದು ದಿನದ ನಂತರ, ಗುಜರಾತ್‌ನಾದ್ಯಂತ ದಲಿತರು ಪ್ರತಿಭಟನೆಗೆ ಇಳಿದಿದ್ದಾರೆ.

ಏಪ್ರಿಲ್ 21 ರಂದು, ಅಹಮದಾಬಾದ್‌ನ ಧೋಲ್ಕಾ ತಾಲೂಕಿನ ಸರೋಡಾ ಗ್ರಾಮದಲ್ಲಿ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ (ಆರ್‌‌ಡಿಎಎಂ) ಸದಸ್ಯರಾದ ಲಕ್ಷಿಂಬೆನ್ ಮೆಹರಿಯಾ ಮತ್ತು ಹೇಮಾಬೆನ್ ನೇತೃತ್ವದಲ್ಲಿ ದಲಿತ ಮಹಿಳೆಯರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಬಂಧಿಸಿ ಅದೇ ದಿನ ಬಿಡುಗಡೆ ಮಾಡಲಾಯಿತು.

ಅದೇ ದಿನ ಆರ್‌ಡಿಎಎಂನ ದಲಿತ ಕಾರ್ಯಕರ್ತರು ರಾಜ್‌ಕೋಟ್‌ನ ಕೊತ್ತಸಂಗನಿ ತಾಲೂಕಿನಲ್ಲಿ ಪ್ರತಿಭಟನೆಯ ಸಂಕೇತವಾಗಿ ‘ರಸ್ತಾ ರೋಕೋ’ ನಡೆಸಿದರು. ಏಪ್ರಿಲ್ 22 ಮತ್ತು 23ರಂದು ಭಾವನಗರ, ಗಧ್ರಾ, ಗಿರ್ ಸೋಮನಾಥ್‌ನ ಸೂತ್ರಪದ, ಕಚ್‌ನ ರಾಪರ್, ಬನಸ್ಕಾಂತದ ಧನೇರಾ ಮತ್ತು ಬೋಟಾಡ್‌ನಲ್ಲಿ ಪ್ರತಿಭಟನೆಗಳನ್ನು ನಡೆಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಏಪ್ರಿಲ್ 22 ರಂದು ಅಹಮದಾಬಾದ್‌ನ ಯಶೋದಾನಗರ, ಅಸರ್ವ, ಬಾಪುನಗರ ಪ್ರದೇಶಗಳಲ್ಲಿ ದಲಿತ ಕಾರ್ಯಕರ್ತರು ರ್‍ಯಾಲಿ ನಡೆಸಿದ್ದಾರೆ.

“ಜಿಗ್ನೇಶ್ ಮೇವಾನಿಯವರ ಬಂಧನದಿಂದ ದಲಿತರು ನಿರಾಶೆಗೊಂಡಿದ್ದಾರೆ. ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ. ಆದರೆ ರಾಜ್ಯದ ವಿಧಾನಸಭೆಯ ಚುನಾಯಿತ ಸದಸ್ಯರಿಗೆಯೇ ಇಂತಹ ಸ್ಥಿತಿ ಬಂದರೆ ಇತರ ದಲಿತ ಕಾರ್ಯಕರ್ತರ ಪರಿಸ್ಥಿತಿ ಬಂದೆ ಯೋಚಿಸಿದರೂ ಭಯವಾಗುತ್ತದೆ. ಅವರು (ಮೇವಾನಿ) ನಮಗೆ ಶಾಸಕರಿಗಿಂತ ಹೆಚ್ಚು; ಅವರು ನಮ್ಮ ಸಹ ಕಾರ್ಯಕರ್ತ. ಗುಜರಾತ್‌ನ ದಲಿತರು ಮೇವಾನಿ ಬಂಧನದಿಂದ ಮಾತ್ರವಲ್ಲ, ನಮ್ಮ ಆರ್‌‌ಡಿಎಎಂ ಸದಸ್ಯರಾದ ಜಗದೀಶ್ ಚಾವ್ಡಾ ಮತ್ತು ಕಮಲೇಶ್ ಕಟಾರಿಯಾ ಅವರಿಗೆ ಗುಜರಾತ್ ಪೊಲೀಸರು ನೀಡಿರುವ ಕಿರುಕುಳದಿಂದಲೂ ವಿಚಲಿತರಾಗಿದ್ದಾರೆ” ಎಂದು ಆರ್‌‌ಡಿಎಎಂನ ಸದಸ್ಯ ಯಶ್ ಮಕ್ವಾನಾ ‘ನ್ಯೂಸ್‌ಕ್ಲಿಕ್‌’ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿರಿ: ಜಾಮೀನು ದೊರೆತ ಬಳಿಕ ಮತ್ತೊಮ್ಮೆ ಜಿಗ್ನೇಶ್‌ ಮೇವಾನಿಯ ಬಂಧನ

“ಯಶೋದಾನಗರದಲ್ಲಿ ನಡೆದ ನಮ್ಮ ಪ್ರತಿಭಟನೆಯ ನಂತರ ಸುಮಾರು 150 ಪ್ರತಿಭಟನಾಕಾರರನ್ನು ಸ್ಥಳೀಯ ಪೊಲೀಸರು ಬಂಧಿಸಿದರು. ಕೆಲವು ಗಂಟೆಗಳ ನಂತರ ಬಿಡುಗಡೆ ಮಾಡಿದರು. ಆದರೆ, ಪ್ರತಿಭಟನೆಗಳು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿವೆ. 2016ರ ಊನಾ ಘಟನೆಯ ಬಳಿಕ ಬೀದಿಗಿಳಿದಂತೆ ಮತ್ತೊಮ್ಮೆ ದೊಡ್ಡ ಸಂಖ್ಯೆಯಲ್ಲಿ ದಲಿತರು ಮತ್ತೆ ಹೋರಾಟಕ್ಕೆ ಧುಮುಕಬಹುದು” ಎಂದು ಮಕ್ವಾನಾ ಎಚ್ಚರಿಸಿದ್ದಾರೆ.

PC: NewsClick

ಮೆವಾನಿಯ ಆಪ್ತ ಸಹಾಯಕ ಮತ್ತು ಆರ್‌ಡಿಎಎಂ ಸದಸ್ಯ ಕಮಲೇಶ್ ಕಟಾರಿಯಾ ಅವರನ್ನು ಯಶೋದಾನಗರದಲ್ಲಿ ನಡೆದ ಪ್ರತಿಭಟನೆಯ ನಡುವೆ ಅಹಮದಾಬಾದ್ ಕ್ರೈಂ ಬ್ರಾಂಚ್ ವಶಕ್ಕೆ ಪಡೆದಿತ್ತು. ಅದೇ ಸಮಯದಲ್ಲಿ, ಅಹಮದಾಬಾದ್‌ನ ರಾಖಿಯಾಲ್‌ನಲ್ಲಿರುವ ಕಮಲೇಶ್‌ ಅವರ ಮನೆಯನ್ನು ಪೊಲೀಸರ ತಂಡ ಶೋಧಿಸಿದೆ.

“ಮಧ್ಯಾಹ್ನ 3.30ರ ಸುಮಾರಿಗೆ ನನ್ನ ಮನೆಗೆ ಪೊಲೀಸರು ಬಂದಿದ್ದಾರೆ ಎಂದು ನನ್ನ ಹೆಂಡತಿ ಕರೆ ಮಾಡಿ ನನಗೆ ತಿಳಿಸಿದಳು. ಆದರೆ ನಾನು ಮನೆಗೆ ತಲುಪುವ ಮೊದಲೇ ನನ್ನನ್ನು ಪೋಲೀಸರು ಅಸರ್ವಾ ಬಳಿ ಕರೆದೊಯ್ದರು. ಅದೇ ರಾತ್ರಿ ನನ್ನನ್ನು ಬಿಡುಗಡೆ ಮಾಡಲಾಯಿತು. ನನ್ನ ಸುರಕ್ಷತೆಯನ್ನು ನೆನೆಸಿಕೊಂಡು ನನ್ನ ಮನೆಯವರು ಹೆದರುತ್ತಿದ್ದರು. ಪೊಲೀಸರು ನನ್ನ ಮನೆಯ ಪ್ರತಿಯೊಂದು ಮೂಲೆಯನ್ನು ಪರಿಶೀಲಿಸಿದ್ದಾರೆ ಎಂದು ನನಗೆ ತಿಳಿಸಲಾಯಿತು. ಗೋಡೆಗಳು ಟೊಳ್ಳಾಗಿವೆಯೇ ಎಂದು ಪರೀಕ್ಷಿಸಲು ಅವರು ಗೋಡೆಗಳನ್ನು ಬಡಿದರು, ಹಾಸಿಗೆಯನ್ನು ಹೊರತೆಗೆದರು. ಸ್ನಾನಗೃಹ, ಪಾತ್ರೆಗಳು ಮತ್ತು ನಮ್ಮ ಮಕ್ಕಳ ಶಾಲಾ ಬ್ಯಾಗ್‌ಗಳನ್ನು ಸಹ ಬಿಡದೆ ಪರಿಶೀಲಿಸಿದರು” ಎಂದು ಕಮಲೇಶ್ ಕಟಾರಿಯಾ ‘ನ್ಯೂಸ್‌ಕ್ಲಿಕ್‌’ಗೆ ತಿಳಿಸಿದ್ದಾರೆ.

ಅಹಮದಾಬಾದ್ ಕ್ರೈಂ ಬ್ರಾಂಚ್ ಆವರಣದಲ್ಲಿ ನಾನು ಕುಳಿತಿರುವಾಗಲೇ ಅವರು ನನ್ನ ಮೊಬೈಲ್ ವಶಕ್ಕೆ ಪಡೆದಿದ್ದಾರೆ ಎಂದು ಕಟಾರಿಯಾ ಮಾಹಿತಿ ಹಂಚಿಕೊಂಡಿದ್ದಾರೆ. ಪೊಲೀಸರ ಮತ್ತೊಂದು ತಂಡವು ಅದೇ ಸಮಯದಲ್ಲಿ, ಅದೇ ದಿನ ಮೇಘನಿನಗರದಲ್ಲಿರುವ ಜಗದೀಶ್ ಚಾವ್ಡಾ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದೆ.

ಇದನ್ನೂ ಓದಿರಿ: ಗ್ರೌಂಡ್‌ ರಿಪೋರ್ಟ್: ಪೆದ್ದನಹಳ್ಳಿಯಲ್ಲಿ ದಲಿತರ ಹತ್ಯೆ; ನೊಂದ ಕುಟುಂಬಗಳ ನೋವಿನ ಕಥೆ ಇದು

“ನಾನು ಕೆಲವು ಕೆಲಸದ ನಿಮಿತ್ತ ನೆರೆಹೊರೆಯಲ್ಲಿದ್ದೆ. ನಮ್ಮ ಮನೆಗೆ ಸುಮಾರು 18 ರಿಂದ 20 ಪೊಲೀಸ್ ಸಿಬ್ಬಂದಿ ಬಂದಿದ್ದಾರೆ ಎಂದು ನನ್ನ ಸಹೋದರ ನಮಗೆ ತಿಳಿಸಲು ಕರೆ ಮಾಡಿದ. ನನ್ನ ಮನೆಗೆ ಬರುವ ಪೊಲೀಸರ ದೊಡ್ಡ ಸಂಖ್ಯೆಯನ್ನು ನೋಡಿ ನನ್ನ ಕುಟುಂಬ ಮತ್ತು ನೆರೆಹೊರೆಯವರು ಭಯಗೊಂಡರು. ಪೊಲೀಸರು ನನ್ನ ಮನೆಯಲ್ಲಿ ಹುಡುಕಾಟ ನಡೆಸಿದರು. ಸುಮಾರು 40 ನಿಮಿಷಗಳ ಕಾಲ ನಾವು ಕೇಳಿದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಜಿಗ್ನೇಶ್ ಮೇವಾನಿ, ಕಮಲೇಶ್ ಕಟಾರಿಯಾ ಮತ್ತು ನನ್ನ ಹೆಸರನ್ನು ಹೊಂದಿರುವ ಸರ್ಚ್‌ ಆರ್ಡರ್‌‌ ಮಾತ್ರ ನನಗೆ ತೋರಿಸಲಾಯಿತು. ಅವರು ನನ್ನ ಚಂದ್‌ಖೇಡಾದ ಮನೆಯ ಪ್ರತಿಯೊಂದು ಮೂಲೆಯನ್ನು ಹುಡುಕಿದರು. ಕಂಪ್ಯೂಟರ್ ವಶಪಡಿಸಿಕೊಂಡರು” ಎಂದು ಜಗದೀಶ್ ಚಾವ್ಡಾ ಮಾಹಿತಿ ನೀಡಿದ್ದಾರೆ.

“ಅದಾದ ನಂತರ, ಅವರು ನನ್ನನ್ನು ಅಹಮದಾಬಾದ್‌ನ ಗಾಯಕ್ವಾಡ್ ಹವೇಲಿಯಲ್ಲಿರುವ ಅಪರಾಧ ವಿಭಾಗದ ಆವರಣಕ್ಕೆ ಕರೆದೊಯ್ದರು. ನನ್ನನ್ನು ಕತ್ತಲೆಯ ಕೋಣೆಯಲ್ಲಿ ದೀರ್ಘಕಾಲ ಕೂರಿಸಿದರು. ಸುಮಾರು ಒಂದು ಗಂಟೆಯ ನಂತರ ಕೆಲವು ಪೊಲೀಸ್ ಸಿಬ್ಬಂದಿ ಪ್ರಶ್ನೆಗಳನ್ನು ಕೇಳಿದರು. ಮೇವಾನಿಯವರ ಜೊತೆಗಿನ ನನ್ನ ಒಡನಾಟದ ಬಗ್ಗೆ ವಿಚಾರಿಸಿದರು. ಮೊಬೈಲ್‌ ವಶಕ್ಕೆ ಪಡೆದುಕೊಂಡರು” ಎಂದು ತಿಳಿಸಿದ್ದಾರೆ.

ತಮ್ಮ ಮೊಬೈಲ್ ಫೋನ್‌ಗಳು, ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡಿರುವುದನ್ನು ಅಂಗೀಕರಿಸುವ ದಾಖಲೆಗಳಿಗೆ ಕಟಾರಿಯಾ ಮತ್ತು ಚಾವ್ಡಾ ಇಬ್ಬರೂ ಸಹಿ ಹಾಕಬೇಕಾಯಿತು. ಸುಮಾರು ಒಂದು ತಿಂಗಳ ನಂತರ ಫೋನ್‌ಗಳನ್ನು ಅಸ್ಸಾಂನಿಂದ ವಾಪಸ್‌ ಪಡೆಯುವಂತೆ ಸೂಚಿಸಲಾಗಿದೆ.

“ನಾಳೆ, ನಾವು ಅಹಮದಾಬಾದ್‌ನಲ್ಲಿ ಮತ್ತೊಂದು ಪ್ರತಿಭಟನೆಯನ್ನು ಯೋಜಿಸುತ್ತಿದ್ದೇವೆ. ನಾವು ವಡಾಜ್‌ನಲ್ಲಿರುವ ಕಲೆಕ್ಟರ್ ಕಚೇರಿಗೆ ಮೆರವಣಿಗೆ ಮಾಡುತ್ತೇವೆ, ಧರಣಿ ನಡೆಸುತ್ತೇವೆ” ಎಂದು ಯಶ್ ಮಕ್ವಾನಾ ತಿಳಿಸಿದ್ದಾರೆ.

ಜಾಮೀನು ದೊರೆತ ಬಳಿಕವೂ ಪೊಲೀಸರು ಮತ್ತೆ ಜಿಗ್ನೇಶ್ ಅವರನ್ನು ಬಂಧಿಸಿದ್ದಾರೆ. ಗುಜರಾತ್‌ನಲ್ಲಿ ದಲಿತ ಸಂಘಟನೆಗಳು ಬೃಹತ್‌ ಪ್ರತಿಭಟನೆಗೆ ಮುಂದಾಗಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...