Homeಮುಖಪುಟಜಿಗ್ನೇಶ್‌ ಬಂಧನ; ಗುಜರಾತ್‌ನಾದ್ಯಂತ ಪ್ರತಿಭಟನೆಯ ಕಾವು- ದಲಿತ ಹೋರಾಟಗಾರರ ಮೇಲೂ ಪೊಲೀಸ್‌ ಕಾರ್ಯಾಚರಣೆ

ಜಿಗ್ನೇಶ್‌ ಬಂಧನ; ಗುಜರಾತ್‌ನಾದ್ಯಂತ ಪ್ರತಿಭಟನೆಯ ಕಾವು- ದಲಿತ ಹೋರಾಟಗಾರರ ಮೇಲೂ ಪೊಲೀಸ್‌ ಕಾರ್ಯಾಚರಣೆ

- Advertisement -
- Advertisement -

ಗುಜರಾತ್‌ನ ವಡ್ಗಾಮ್ ಶಾಸಕ, ದಲಿತ ನಾಯಕ ಜಿಗ್ನೇಶ್ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ಬನಸ್ಕಾಂತದ ಪಾಲನ್‌ಪುರ ಸರ್ಕ್ಯೂಟ್ ಹೌಸ್‌ನಿಂದ ಬಂಧಿಸಿದ ಒಂದು ದಿನದ ನಂತರ, ಗುಜರಾತ್‌ನಾದ್ಯಂತ ದಲಿತರು ಪ್ರತಿಭಟನೆಗೆ ಇಳಿದಿದ್ದಾರೆ.

ಏಪ್ರಿಲ್ 21 ರಂದು, ಅಹಮದಾಬಾದ್‌ನ ಧೋಲ್ಕಾ ತಾಲೂಕಿನ ಸರೋಡಾ ಗ್ರಾಮದಲ್ಲಿ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ (ಆರ್‌‌ಡಿಎಎಂ) ಸದಸ್ಯರಾದ ಲಕ್ಷಿಂಬೆನ್ ಮೆಹರಿಯಾ ಮತ್ತು ಹೇಮಾಬೆನ್ ನೇತೃತ್ವದಲ್ಲಿ ದಲಿತ ಮಹಿಳೆಯರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಬಂಧಿಸಿ ಅದೇ ದಿನ ಬಿಡುಗಡೆ ಮಾಡಲಾಯಿತು.

ಅದೇ ದಿನ ಆರ್‌ಡಿಎಎಂನ ದಲಿತ ಕಾರ್ಯಕರ್ತರು ರಾಜ್‌ಕೋಟ್‌ನ ಕೊತ್ತಸಂಗನಿ ತಾಲೂಕಿನಲ್ಲಿ ಪ್ರತಿಭಟನೆಯ ಸಂಕೇತವಾಗಿ ‘ರಸ್ತಾ ರೋಕೋ’ ನಡೆಸಿದರು. ಏಪ್ರಿಲ್ 22 ಮತ್ತು 23ರಂದು ಭಾವನಗರ, ಗಧ್ರಾ, ಗಿರ್ ಸೋಮನಾಥ್‌ನ ಸೂತ್ರಪದ, ಕಚ್‌ನ ರಾಪರ್, ಬನಸ್ಕಾಂತದ ಧನೇರಾ ಮತ್ತು ಬೋಟಾಡ್‌ನಲ್ಲಿ ಪ್ರತಿಭಟನೆಗಳನ್ನು ನಡೆಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಏಪ್ರಿಲ್ 22 ರಂದು ಅಹಮದಾಬಾದ್‌ನ ಯಶೋದಾನಗರ, ಅಸರ್ವ, ಬಾಪುನಗರ ಪ್ರದೇಶಗಳಲ್ಲಿ ದಲಿತ ಕಾರ್ಯಕರ್ತರು ರ್‍ಯಾಲಿ ನಡೆಸಿದ್ದಾರೆ.

“ಜಿಗ್ನೇಶ್ ಮೇವಾನಿಯವರ ಬಂಧನದಿಂದ ದಲಿತರು ನಿರಾಶೆಗೊಂಡಿದ್ದಾರೆ. ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ. ಆದರೆ ರಾಜ್ಯದ ವಿಧಾನಸಭೆಯ ಚುನಾಯಿತ ಸದಸ್ಯರಿಗೆಯೇ ಇಂತಹ ಸ್ಥಿತಿ ಬಂದರೆ ಇತರ ದಲಿತ ಕಾರ್ಯಕರ್ತರ ಪರಿಸ್ಥಿತಿ ಬಂದೆ ಯೋಚಿಸಿದರೂ ಭಯವಾಗುತ್ತದೆ. ಅವರು (ಮೇವಾನಿ) ನಮಗೆ ಶಾಸಕರಿಗಿಂತ ಹೆಚ್ಚು; ಅವರು ನಮ್ಮ ಸಹ ಕಾರ್ಯಕರ್ತ. ಗುಜರಾತ್‌ನ ದಲಿತರು ಮೇವಾನಿ ಬಂಧನದಿಂದ ಮಾತ್ರವಲ್ಲ, ನಮ್ಮ ಆರ್‌‌ಡಿಎಎಂ ಸದಸ್ಯರಾದ ಜಗದೀಶ್ ಚಾವ್ಡಾ ಮತ್ತು ಕಮಲೇಶ್ ಕಟಾರಿಯಾ ಅವರಿಗೆ ಗುಜರಾತ್ ಪೊಲೀಸರು ನೀಡಿರುವ ಕಿರುಕುಳದಿಂದಲೂ ವಿಚಲಿತರಾಗಿದ್ದಾರೆ” ಎಂದು ಆರ್‌‌ಡಿಎಎಂನ ಸದಸ್ಯ ಯಶ್ ಮಕ್ವಾನಾ ‘ನ್ಯೂಸ್‌ಕ್ಲಿಕ್‌’ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿರಿ: ಜಾಮೀನು ದೊರೆತ ಬಳಿಕ ಮತ್ತೊಮ್ಮೆ ಜಿಗ್ನೇಶ್‌ ಮೇವಾನಿಯ ಬಂಧನ

“ಯಶೋದಾನಗರದಲ್ಲಿ ನಡೆದ ನಮ್ಮ ಪ್ರತಿಭಟನೆಯ ನಂತರ ಸುಮಾರು 150 ಪ್ರತಿಭಟನಾಕಾರರನ್ನು ಸ್ಥಳೀಯ ಪೊಲೀಸರು ಬಂಧಿಸಿದರು. ಕೆಲವು ಗಂಟೆಗಳ ನಂತರ ಬಿಡುಗಡೆ ಮಾಡಿದರು. ಆದರೆ, ಪ್ರತಿಭಟನೆಗಳು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿವೆ. 2016ರ ಊನಾ ಘಟನೆಯ ಬಳಿಕ ಬೀದಿಗಿಳಿದಂತೆ ಮತ್ತೊಮ್ಮೆ ದೊಡ್ಡ ಸಂಖ್ಯೆಯಲ್ಲಿ ದಲಿತರು ಮತ್ತೆ ಹೋರಾಟಕ್ಕೆ ಧುಮುಕಬಹುದು” ಎಂದು ಮಕ್ವಾನಾ ಎಚ್ಚರಿಸಿದ್ದಾರೆ.

PC: NewsClick

ಮೆವಾನಿಯ ಆಪ್ತ ಸಹಾಯಕ ಮತ್ತು ಆರ್‌ಡಿಎಎಂ ಸದಸ್ಯ ಕಮಲೇಶ್ ಕಟಾರಿಯಾ ಅವರನ್ನು ಯಶೋದಾನಗರದಲ್ಲಿ ನಡೆದ ಪ್ರತಿಭಟನೆಯ ನಡುವೆ ಅಹಮದಾಬಾದ್ ಕ್ರೈಂ ಬ್ರಾಂಚ್ ವಶಕ್ಕೆ ಪಡೆದಿತ್ತು. ಅದೇ ಸಮಯದಲ್ಲಿ, ಅಹಮದಾಬಾದ್‌ನ ರಾಖಿಯಾಲ್‌ನಲ್ಲಿರುವ ಕಮಲೇಶ್‌ ಅವರ ಮನೆಯನ್ನು ಪೊಲೀಸರ ತಂಡ ಶೋಧಿಸಿದೆ.

“ಮಧ್ಯಾಹ್ನ 3.30ರ ಸುಮಾರಿಗೆ ನನ್ನ ಮನೆಗೆ ಪೊಲೀಸರು ಬಂದಿದ್ದಾರೆ ಎಂದು ನನ್ನ ಹೆಂಡತಿ ಕರೆ ಮಾಡಿ ನನಗೆ ತಿಳಿಸಿದಳು. ಆದರೆ ನಾನು ಮನೆಗೆ ತಲುಪುವ ಮೊದಲೇ ನನ್ನನ್ನು ಪೋಲೀಸರು ಅಸರ್ವಾ ಬಳಿ ಕರೆದೊಯ್ದರು. ಅದೇ ರಾತ್ರಿ ನನ್ನನ್ನು ಬಿಡುಗಡೆ ಮಾಡಲಾಯಿತು. ನನ್ನ ಸುರಕ್ಷತೆಯನ್ನು ನೆನೆಸಿಕೊಂಡು ನನ್ನ ಮನೆಯವರು ಹೆದರುತ್ತಿದ್ದರು. ಪೊಲೀಸರು ನನ್ನ ಮನೆಯ ಪ್ರತಿಯೊಂದು ಮೂಲೆಯನ್ನು ಪರಿಶೀಲಿಸಿದ್ದಾರೆ ಎಂದು ನನಗೆ ತಿಳಿಸಲಾಯಿತು. ಗೋಡೆಗಳು ಟೊಳ್ಳಾಗಿವೆಯೇ ಎಂದು ಪರೀಕ್ಷಿಸಲು ಅವರು ಗೋಡೆಗಳನ್ನು ಬಡಿದರು, ಹಾಸಿಗೆಯನ್ನು ಹೊರತೆಗೆದರು. ಸ್ನಾನಗೃಹ, ಪಾತ್ರೆಗಳು ಮತ್ತು ನಮ್ಮ ಮಕ್ಕಳ ಶಾಲಾ ಬ್ಯಾಗ್‌ಗಳನ್ನು ಸಹ ಬಿಡದೆ ಪರಿಶೀಲಿಸಿದರು” ಎಂದು ಕಮಲೇಶ್ ಕಟಾರಿಯಾ ‘ನ್ಯೂಸ್‌ಕ್ಲಿಕ್‌’ಗೆ ತಿಳಿಸಿದ್ದಾರೆ.

ಅಹಮದಾಬಾದ್ ಕ್ರೈಂ ಬ್ರಾಂಚ್ ಆವರಣದಲ್ಲಿ ನಾನು ಕುಳಿತಿರುವಾಗಲೇ ಅವರು ನನ್ನ ಮೊಬೈಲ್ ವಶಕ್ಕೆ ಪಡೆದಿದ್ದಾರೆ ಎಂದು ಕಟಾರಿಯಾ ಮಾಹಿತಿ ಹಂಚಿಕೊಂಡಿದ್ದಾರೆ. ಪೊಲೀಸರ ಮತ್ತೊಂದು ತಂಡವು ಅದೇ ಸಮಯದಲ್ಲಿ, ಅದೇ ದಿನ ಮೇಘನಿನಗರದಲ್ಲಿರುವ ಜಗದೀಶ್ ಚಾವ್ಡಾ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದೆ.

ಇದನ್ನೂ ಓದಿರಿ: ಗ್ರೌಂಡ್‌ ರಿಪೋರ್ಟ್: ಪೆದ್ದನಹಳ್ಳಿಯಲ್ಲಿ ದಲಿತರ ಹತ್ಯೆ; ನೊಂದ ಕುಟುಂಬಗಳ ನೋವಿನ ಕಥೆ ಇದು

“ನಾನು ಕೆಲವು ಕೆಲಸದ ನಿಮಿತ್ತ ನೆರೆಹೊರೆಯಲ್ಲಿದ್ದೆ. ನಮ್ಮ ಮನೆಗೆ ಸುಮಾರು 18 ರಿಂದ 20 ಪೊಲೀಸ್ ಸಿಬ್ಬಂದಿ ಬಂದಿದ್ದಾರೆ ಎಂದು ನನ್ನ ಸಹೋದರ ನಮಗೆ ತಿಳಿಸಲು ಕರೆ ಮಾಡಿದ. ನನ್ನ ಮನೆಗೆ ಬರುವ ಪೊಲೀಸರ ದೊಡ್ಡ ಸಂಖ್ಯೆಯನ್ನು ನೋಡಿ ನನ್ನ ಕುಟುಂಬ ಮತ್ತು ನೆರೆಹೊರೆಯವರು ಭಯಗೊಂಡರು. ಪೊಲೀಸರು ನನ್ನ ಮನೆಯಲ್ಲಿ ಹುಡುಕಾಟ ನಡೆಸಿದರು. ಸುಮಾರು 40 ನಿಮಿಷಗಳ ಕಾಲ ನಾವು ಕೇಳಿದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಜಿಗ್ನೇಶ್ ಮೇವಾನಿ, ಕಮಲೇಶ್ ಕಟಾರಿಯಾ ಮತ್ತು ನನ್ನ ಹೆಸರನ್ನು ಹೊಂದಿರುವ ಸರ್ಚ್‌ ಆರ್ಡರ್‌‌ ಮಾತ್ರ ನನಗೆ ತೋರಿಸಲಾಯಿತು. ಅವರು ನನ್ನ ಚಂದ್‌ಖೇಡಾದ ಮನೆಯ ಪ್ರತಿಯೊಂದು ಮೂಲೆಯನ್ನು ಹುಡುಕಿದರು. ಕಂಪ್ಯೂಟರ್ ವಶಪಡಿಸಿಕೊಂಡರು” ಎಂದು ಜಗದೀಶ್ ಚಾವ್ಡಾ ಮಾಹಿತಿ ನೀಡಿದ್ದಾರೆ.

“ಅದಾದ ನಂತರ, ಅವರು ನನ್ನನ್ನು ಅಹಮದಾಬಾದ್‌ನ ಗಾಯಕ್ವಾಡ್ ಹವೇಲಿಯಲ್ಲಿರುವ ಅಪರಾಧ ವಿಭಾಗದ ಆವರಣಕ್ಕೆ ಕರೆದೊಯ್ದರು. ನನ್ನನ್ನು ಕತ್ತಲೆಯ ಕೋಣೆಯಲ್ಲಿ ದೀರ್ಘಕಾಲ ಕೂರಿಸಿದರು. ಸುಮಾರು ಒಂದು ಗಂಟೆಯ ನಂತರ ಕೆಲವು ಪೊಲೀಸ್ ಸಿಬ್ಬಂದಿ ಪ್ರಶ್ನೆಗಳನ್ನು ಕೇಳಿದರು. ಮೇವಾನಿಯವರ ಜೊತೆಗಿನ ನನ್ನ ಒಡನಾಟದ ಬಗ್ಗೆ ವಿಚಾರಿಸಿದರು. ಮೊಬೈಲ್‌ ವಶಕ್ಕೆ ಪಡೆದುಕೊಂಡರು” ಎಂದು ತಿಳಿಸಿದ್ದಾರೆ.

ತಮ್ಮ ಮೊಬೈಲ್ ಫೋನ್‌ಗಳು, ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡಿರುವುದನ್ನು ಅಂಗೀಕರಿಸುವ ದಾಖಲೆಗಳಿಗೆ ಕಟಾರಿಯಾ ಮತ್ತು ಚಾವ್ಡಾ ಇಬ್ಬರೂ ಸಹಿ ಹಾಕಬೇಕಾಯಿತು. ಸುಮಾರು ಒಂದು ತಿಂಗಳ ನಂತರ ಫೋನ್‌ಗಳನ್ನು ಅಸ್ಸಾಂನಿಂದ ವಾಪಸ್‌ ಪಡೆಯುವಂತೆ ಸೂಚಿಸಲಾಗಿದೆ.

“ನಾಳೆ, ನಾವು ಅಹಮದಾಬಾದ್‌ನಲ್ಲಿ ಮತ್ತೊಂದು ಪ್ರತಿಭಟನೆಯನ್ನು ಯೋಜಿಸುತ್ತಿದ್ದೇವೆ. ನಾವು ವಡಾಜ್‌ನಲ್ಲಿರುವ ಕಲೆಕ್ಟರ್ ಕಚೇರಿಗೆ ಮೆರವಣಿಗೆ ಮಾಡುತ್ತೇವೆ, ಧರಣಿ ನಡೆಸುತ್ತೇವೆ” ಎಂದು ಯಶ್ ಮಕ್ವಾನಾ ತಿಳಿಸಿದ್ದಾರೆ.

ಜಾಮೀನು ದೊರೆತ ಬಳಿಕವೂ ಪೊಲೀಸರು ಮತ್ತೆ ಜಿಗ್ನೇಶ್ ಅವರನ್ನು ಬಂಧಿಸಿದ್ದಾರೆ. ಗುಜರಾತ್‌ನಲ್ಲಿ ದಲಿತ ಸಂಘಟನೆಗಳು ಬೃಹತ್‌ ಪ್ರತಿಭಟನೆಗೆ ಮುಂದಾಗಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...