Homeಮುಖಪುಟಅಂಗನವಾಡಿ ಕಾರ್ಯಕರ್ತೆಯರು ಗ್ರಾಚ್ಯುಟಿಗೆ ಅರ್ಹರು: ಸುಪ್ರೀಂ ಮಹತ್ವದ ತೀರ್ಪು

ಅಂಗನವಾಡಿ ಕಾರ್ಯಕರ್ತೆಯರು ಗ್ರಾಚ್ಯುಟಿಗೆ ಅರ್ಹರು: ಸುಪ್ರೀಂ ಮಹತ್ವದ ತೀರ್ಪು

- Advertisement -
- Advertisement -

ಹೊಸದಿಲ್ಲಿ: ದೇಶದಾದ್ಯಂತ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ 25 ಲಕ್ಷಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರಿಗೆ ಸುಪ್ರೀಂ ಕೋರ್ಟ್ ಸಹಿಸುದ್ದಿ ನೀಡಿದೆ. ಇವರು ಗ್ರಾಚ್ಯುಟಿ ಪಡೆದುಕೊಳ್ಳಲು ಅರ್ಹರು ಎಂದು ಕೋರ್ಟ್ ತೀರ್ಪು ನೀಡಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದಿರುವ ಕೋರ್ಟ್, “ವಿವಿಧ ಕಲ್ಯಾಣ ಯೋಜನೆಗಳ ಬೆನ್ನೆಲುಬಾಗಿರುವ ಮತ್ತು ಸಮಾಜಕ್ಕೆ ಪ್ರಮುಖ ಸೇವೆಗಳನ್ನು ಸಲ್ಲಿಸುತ್ತಿರುವ ಈ ವರ್ಗಕ್ಕೆ ಕಡಿಮೆ ಸಂಭಾವನೆ ಕೊಡಲಾಗುತ್ತಿದೆ” ಎಂಬುದನ್ನು ಗಮನಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಅಭಯ್ ಎಸ್ ಓಕಾ ಅವರ ಪೀಠವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮನವಿಯನ್ನು ತಿರಸ್ಕರಿಸಿದೆ. ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು ಗ್ರಾಚ್ಯುಟಿಗೆ ಅರ್ಹರಲ್ಲ ಎಂದು ಸರ್ಕಾರಗಳು ವಾದಿಸಿದ್ದವು. ಗುಜರಾತ್‌ನ ಐವರು ಅಂಗನವಾಡಿ ಕಾರ್ಯಕರ್ತೆಯರು ನಡೆಸಿದ 16 ವರ್ಷಗಳ ಕಾನೂನು ಹೋರಾಟಕ್ಕೆ ತಾರ್ಕಿಕ ಅಂತ್ಯ ದೊರೆತಿದೆ.

ಇದನ್ನೂ ಓದಿರಿ: ದಾದಾಗಿರಿ ಮಾಡಲು ಬಂದರೆ ‘ಮಹಾರುದ್ರ’ ತೋರಿಸಿ ಕೊಡುತ್ತೇವೆ: ಬಿಜೆಪಿಗೆ ಶಿವಸೇನೆ ಎಚ್ಚರಿಕೆ

ಸರ್ವೋಚ್ಚ ನ್ಯಾಯಾಲಯವು ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ತೀರ್ಪನ್ನು ನೀಡಿದೆ. “ಧ್ವನಿಯಿಲ್ಲದವರಿಗೆ ಅವರ ಕೆಲಸದ ಸ್ವರೂಪಕ್ಕೆ ಅನುಗುಣವಾಗಿ ಉತ್ತಮ ಸೇವಾ ಪರಿಸ್ಥಿತಿಗಳನ್ನು ಒದಗಿಸುವ ವಿಧಾನಗಳನ್ನು ಕಂಡುಕೊಳ್ಳಿರಿ” ಎಂದು ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.

2017ರಲ್ಲಿ ಗುಜರಾತ್ ಹೈಕೋರ್ಟ್‌ನಲ್ಲಿ ನಡೆದ ಹೋರಾಟದಲ್ಲಿ ಸೋತ ನಂತರ, ಅಂಗನವಾಡಿ ಕಾರ್ಯಕರ್ತೆಯರು ಸುಪ್ರೀಂ ಮೆಟ್ಟಿಲೇರಿದ್ದರು.

“ಅವರು ಪೂರ್ಣಾವಧಿ ನೌಕರರಲ್ಲ” ಎಂಬ ಸರ್ಕಾರಗಳ ಮನವಿಯನ್ನು ಸುಪ್ರೀಂ ತಿರಸ್ಕರಿಸಿದೆ. ಇಬ್ಬರೂ ನ್ಯಾಯಾಧೀಶರು ಈ ವಿಷಯದ ಬಗ್ಗೆ ಒಮ್ಮತವನ್ನು ಹೊಂದಿದ್ದರು. ಆದರೆ ಪ್ರತ್ಯೇಕ ತೀರ್ಪುಗಳನ್ನು ನೀಡಿದರು. ಸಾಮಾಜಿಕ ಭದ್ರತಾ ಶಾಸನಗಳನ್ನು ಯಾವಾಗಲೂ ಉದಾರವಾಗಿ ಅರ್ಥೈಸಬೇಕು ಎಂದಿರುವ ನ್ಯಾಯಮೂರ್ತಿ ರಸ್ತೋಗಿ ಅಭಿಪ್ರಾಯಪಟ್ಟರು.

“ಎಡಬ್ಲ್ಯೂಡಬ್ಲ್ಯೂಗಳು ಮತ್ತು ಎಡಬ್ಲ್ಯೂಎಚ್‌ಗಳಿಗೆ ಎಲ್ಲಾ ವ್ಯಾಪಕ ಕರ್ತವ್ಯಗಳನ್ನು ನಿಯೋಜಿಸಲಾಗಿದೆ. ಫಲಾನುಭವಿಗಳ ಗುರುತಿಸುವಿಕೆ, ಪೌಷ್ಠಿಕಾಂಶದ ಆಹಾರವನ್ನು ಬೇಯಿಸುವುದು, ಮಕ್ಕಳಿಗೆ ಪ್ರಿಸ್ಕೂಲ್ ನಡೆಸುವುದು, ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸಂಬಂಧಿಸಿದ ಪ್ರಮುಖ ನಿಬಂಧನೆಗಳ ಅನುಷ್ಠಾನವನ್ನು ಇವರಿಗೆ ವಹಿಸಲಾಗಿದೆ. ಆದ್ದರಿಂದ ಎಡಬ್ಲ್ಯೂಡಬ್ಲ್ಯೂ ಮತ್ತು ಎಡಬ್ಲ್ಯೂಎಚ್‌ಗಳಿಗೆ ನಿಯೋಜಿಸಲಾದ ಕೆಲಸವು ಅರೆಕಾಲಿಕ ಕೆಲಸ ಎಂಬ ವಾದವನ್ನು ಒಪ್ಪಿಕೊಳ್ಳುವುದು ಅಸಾಧ್ಯ” ಎಂದು ಜಸ್ಟೀಸ್ ಓಕಾ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿರಿ: ಜಿಗ್ನೇಶ್‌ ಬಂಧನ; ಗುಜರಾತ್‌ನಾದ್ಯಂತ ಪ್ರತಿಭಟನೆಯ ಕಾವು- ದಲಿತ ಹೋರಾಟಗಾರರ ಮೇಲೂ ಪೊಲೀಸ್‌ ಕಾರ್ಯಾಚರಣೆ

“ಎಡಬ್ಲ್ಯೂಡಬ್ಲ್ಯೂ ಮತ್ತು ಎಡಬ್ಲ್ಯೂಎಚ್‌ಗಳಿಗೆ ಕಾಡುತ್ತಿರುವ ಸಮಸ್ಯೆಗಳ ಕಡೆಗೆ ನಾವು ನೋಡಿದರೆ ಅವರು ಸಂಬಳದಿಂದ ವಂಚಿತರಾಗಿದ್ದಾರೆ ಮತ್ತು ರಾಜ್ಯದ ಉದ್ಯೋಗಿಗಳಿಗೆ ಇತರ ಪ್ರಯೋಜನಗಳು ಲಭ್ಯವಿವೆ” ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಅಂಗನವಾಡಿ ಕಾರ್ಯಕರ್ತೆಯರ ಉದ್ಯೋಗ ಸ್ವರೂಪದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದು, ಗುಜರಾತ್, ದೆಹಲಿ ಮತ್ತು ಬಾಂಬೆ ಹೈಕೋರ್ಟ್‌ಗಳು ವ್ಯತಿರಿಕ್ತ ತೀರ್ಪುಗಳನ್ನು ನೀಡಿವೆ. ಈಗ ಸುಪ್ರೀಂ ತೀರ್ಪು ನೀಡುವ ಮೂಲಕ ಕಾನೂನನ್ನು ಇತ್ಯರ್ಥಪಡಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜೀನಾಮೆ ಪರ್ವ; ಎಎಪಿ ಮೈತ್ರಿ ವಿರೋಧಿಸಿ ಪಕ್ಷ ತೊರೆದ ಮತ್ತಿಬ್ಬರು...

0
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಲವ್ಲಿ ನಂತರ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಷ್ಟ್ರ ರಾಜಧಾನಿಯ ಎರಡು ಲೋಕಸಭಾ ಸ್ಥಾನಗಳಿಗೆ ನೇಮಿಸಿದ್ದ ಅದರ ಇಬ್ಬರು ನಾಯಕರು, ವೀಕ್ಷಕರಾದ ನೀರಜ್ ಬಸೋಯಾ ಮತ್ತು ನಸೀಬ್...