Homeಕರ್ನಾಟಕಐದು ದಶಕಗಳ ರಾಜ್ಯ ರಾಜಕಾರಣದ ಅಪರೂಪದ ಸಾಕ್ಷಿಪ್ರಜ್ಞೆ: ಎ.ಕೆ.ಸುಬ್ಬಯ್ಯ

ಐದು ದಶಕಗಳ ರಾಜ್ಯ ರಾಜಕಾರಣದ ಅಪರೂಪದ ಸಾಕ್ಷಿಪ್ರಜ್ಞೆ: ಎ.ಕೆ.ಸುಬ್ಬಯ್ಯ

- Advertisement -
- Advertisement -

ತಮ್ಮ ಪ್ರಖರ ಮಾತಿನ ವೈಖರಿಯಿಂದ ಗಮನ ಸೆಳೆಯುತ್ತಿದ್ದ ಸುಬ್ಬಯ್ಯ ಹೋರಾಟ, ಪ್ರಾಮಾಣಿಕತೆ, ಜಾತ್ಯತೀತ ಮೌಲ್ಯಗಳ ಪ್ರತೀಕದಂತಿದ್ದರು. ಮಾತಿನ ಮನೆಯನ್ನು ಮಾತಿನ ಮೂಲಕವೇ ವಶಕ್ಕೆ ಪಡೆದ ಸುಬ್ಬಯ್ಯ ತರಹದ ನಾಯಕರು ಅಪರೂಪ. ನಾಲ್ಕು ಬಾರಿ ಮೇಲ್ಮನೆ ಸದಸ್ಯರಾಗಿದ್ದ ಸುಬ್ಬಯ್ಯ ಅವರು ಆಡಲು ನಿಂತರೆ ಆಡಳಿತ ಪಕ್ಷದವರಿಗೆ ಆತಂಕ, ಗಾಬರಿ ಉಂಟಾಗುತ್ತಿತ್ತು.

ಸದಾ ವಿರೋಧ ಪಕ್ಷದವರಾಗಿಯೇ ಇರಲು ಬಯಸಿದ ಸುಬ್ಬಯ್ಯ ಬಯಸಿದ್ದರೆ ‘ಅಧಿಕಾರ’ ಅವರಿಂದ ದೂರ ಉಳಿಯುತ್ತಿರಲಿಲ್ಲ. ಹಲವು ಬಾರಿ ಅಧಿಕಾರ ಅವರ ಸಮೀಪ ಬಂದು ಹೋದದ್ದಿದೆ. ಅವರು ಅದಕ್ಕಾಗಿ ಆಸೆ ಪಟ್ಟವರಲ್ಲ. ಆಡಳಿತಾರೂಢ ಪಕ್ಷದ ಲೋಪ ಎತ್ತಿ ತೋರಿಸುವ ಯಾವ ಅವಕಾಶವನ್ನೂ ಸುಬ್ಬಯ್ಯ ಕೈ ಬಿಡುತ್ತಿರಲಿಲ್ಲ. ಮಾತಿನ ಚಟಾಕಿಯ ಮೂಲಕ ತಿವಿಯುತ್ತಿದ್ದರು. ಪ್ರಭುತ್ವದ ಅರೆಕೊರೆಗಳನ್ನು ಅವರ ಹಾಗೆ ದಾಖಲಿಸಿದವರು ವಿರಳ.

ಕಾನೂನು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ರಾಜಕೀಯದ ರುಚಿ ಕಂಡವರು ಸುಬ್ಬಯ್ಯ. ಪ್ರಬಲ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿದ್ದ ಪ್ರಜಾ ಸೋಷಲಿಸ್ಟ್ ಪಾರ್ಟಿ (ಪಿಎಸ್‍ಪಿ)ಯ ಅಭ್ಯರ್ಥಿಯ ಪರವಾಗಿ ಭಾಷಣ ಮಾಡುತ್ತಿದ್ದರು. ವೇದಿಕೆಯಲ್ಲಿ ಗಮನ ಸೆಳೆಯುತ್ತಿದ್ದ ಯುವಕ ಸುಬ್ಬಯ್ಯ ಅವರು ಇಂದಿರಾಗಾಂಧಿ ಎಮರ್ಜೆನ್ಸಿ ಹೇರಿದಾಗ ಮೊದಲಿಗೆ ಜೈಲಿಗೆ ಹೋಗಿದ್ದರು. ಮತ್ತು ಕೊನೆಯವರಾಗಿ ಹೊರ ಬಂದರು. ಜೈಲಿನಲ್ಲಿ ಮಾಂಸಾಹಾರ-ಶಾಖಾಹಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಬಂದಾಗ ಸುಬ್ಬಯ್ಯನವರು ‘ಆಹಾರ ಸ್ವಾತಂತ್ರ್ಯ’ದ ಪರವಾಗಿ ನಿಂತಿದ್ದರು.

ಸೆರೆಯಿಂದ ಹೊರ ಬಂದ ನಂತರ ಕೆಲಕಾಲ ಜನತಾ ಪಕ್ಷದ ಜೊತೆಗಿದ್ದ ಅವರು ನಂತರ ಭಾರತೀಯ ಜನ ಸಂಘದ ಮುಖ್ಯಸ್ಥರಾದರು. ಮುಂದೆ ಅದು ಭಾರತೀಯ ಜನತಾ ಪಕ್ಷ (ಬಿಜೆಪಿ) ಆದಾಗ ರಾಜ್ಯದಲ್ಲಿ ಅದರ ಚುಕ್ಕಾಣಿ ಹಿಡಿದಿದ್ದರು. ಬಲಪಂಥೀಯ (?) ಪಕ್ಷದ ಜೊತೆಗೆ ಗುರುತಿಸಿಕೊಳ್ಳುವಾಗ ಸುಬ್ಬಯ್ಯ ಅವರಿಗೆ ಕಾಣಿಸಿದ್ದು ಅದರ ಭ್ರಷ್ಟಾಚಾರ ವಿರೋಧಿ ನಿಲುವು. ಬಿಜೆಪಿಯ ಪ್ರಮುಖ-ಹಿರಿಯ ನಾಯಕರ ಜೊತೆ ಹತ್ತಿರದ ಒಡನಾಟ ಹೊಂದಿದ್ದ ಸುಬ್ಬಯ್ಯ ಅವರು ರಾಜ್ಯ ಅಧ್ಯಕ್ಷರಾಗುವುದಕ್ಕೆ ಅಡೆತಡೆಗಳೇ ಇರಲಿಲ್ಲ. 1983ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸರ್ಕಾರದ ಭಾಗವಾಗದೇ ಹೊರಗಿನಿಂದ ಬೆಂಬಲ ನೀಡುವ ನಿಲುವು ತಳೆಯುವುದಕ್ಕೆ ಸುಬ್ಬಯ್ಯ ಅವರೇ ಕಾರಣರಾಗಿದ್ದರು.

ಸುಬ್ಬಯ್ಯ ಚುನಾವಣಾ ರಾಜಕೀಯದಲ್ಲಿ ಕಾಣಿಸಿಕೊಂಡದ್ದು ಬಹಳ ಕಡಿಮೆ. ಒಮ್ಮೆ ಮಾತ್ರ ಅವರು 1979ರಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಕರ್ನಾಟಕದಲ್ಲಿ ಬಿಜೆಪಿಗೆ ಆರಂಭದಲ್ಲೇ ಭದ್ರ ನೆಲೆ ಒದಗಿಸಿದವರಲ್ಲಿ ಸುಬ್ಬಯ್ಯ ಪ್ರಮುಖರು ಎಂಬುದರಲ್ಲಿ ಎರಡು ಮಾತಿಲ್ಲ. ರಾಜ್ಯದಲ್ಲಿ ಪಕ್ಷದ ಅಧ್ಯಕ್ಷರಾದ ನಂತರ ಆರ್‍ಎಸ್‍ಎಸ್ ಮೂಗು ತೂರಿಸುವುದಕ್ಕೆ ಅಡ್ಡಿಯುಂಟು ಮಾಡಿದರು. ಆರ್‍ಎಸ್‍ಎಸ್ ಜೊತೆಗಿನ ಅವರ ಸಂಘರ್ಷ ಪಕ್ಷ ತೊರೆಯುವುದಕ್ಕೂ ಕಾರಣವಾಯಿತು. ‘ಆರ್‍ಎಸ್‍ಎಸ್. ಅಂತರಂಗ’ ಕೃತಿ ಸುಬ್ಬಯ್ಯನವರ ಪ್ರಖರ ವೈಚಾರಿಕತೆಗೆ ಹಿಡಿದ ಕನ್ನಡಿಯಂತಿದೆ.

ವಿಚಾರದ ಖಚಿತತೆ ಸುಬ್ಬಯ್ಯನವರ ವೈಶಿಷ್ಟ್ಯ. ಅದರ ಜೊತೆಗೆ ನೇರಾನೇರ ಹೇಳುವ ಗುಣ ಅವರಿಗೆ ಮಿತ್ರರಿಗಿಂತ ಶತ್ರುಗಳ ಸಂಖ್ಯೆ ಹೆಚ್ಚುವುದಕ್ಕೆ ಕಾರಣವಾಗಿತ್ತು. ಮಾತು ಅವರ ಶಕ್ತಿಯಾಗಿತ್ತು. ಹಾಗೆಯೇ ಅದೇ ಅವರ ಮಿತಿಯೂ ಆಗಿತ್ತು. ಮಾತಿನ ಮೂಲಕ ಬಹಳಷ್ಟನ್ನು ಪಡೆದ ಸುಬ್ಬಯ್ಯ ಅದೇ ಮಾತಿನಿಂದ ಹಲವನ್ನು ಕಳೆದುಕೊಂಡರು. ಆ ಬಗ್ಗೆ ಅವರಿಗೆ ವಿಷಾದವೇನಿರಲಿಲ್ಲ.

ಅಧಿಕಾರಕ್ಕಾಗಿ ಹಪಾಹಪಿಸದ ಅವರ ನಿಲುವು ಅವರ ವ್ಯಕ್ತಿತ್ವದ ಗಟ್ಟಿತನಕ್ಕೆ ಕಾರಣವಾಗಿತ್ತು. ಯಾರೂ ಅವರಿಗೆ ಆಮಿಷ ಒಡ್ಡುವುದು ಸಾಧ್ಯವಿರಲಿಲ್ಲ. ಅಂತಹ ಎದೆಗಾರಿಕೆ ಆಡಳಿತ ಪಕ್ಷದ ಯಾವ ನಾಯಕನ ಬಳಿಯಲ್ಲಿಯೂ ಇರಲಿಲ್ಲ.

ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮೇಲ್ಮನೆಯ ಅಖಾಡದಲ್ಲಿ ಸುಬ್ಬಯ್ಯನವರ ಮಾತಿನ ವೈಖರಿ ಆರಂಭವಾಯಿತು. ಅದು ಎಷ್ಟರ ಮಟ್ಟಿಗೆ ಪ್ರಭಾವಶಾಲಿ ಆಗಿತ್ತೆಂದರೆ ಅರಸು ಮೇಲ್ಮನೆಯನ್ನು ‘ಇಲ್ಲ’ವಾಗಿಸುವ ಯೋಚನೆ ಮಾಡಿದ್ದರು.

ಅರಸು ನಂತರ ಮುಖ್ಯಮಂತ್ರಿಯಾದ ಗುಂಡೂರಾವ್ ಅವರಿಗೂ ಹಾಗೂ ಅವರ ಸಂಪುಟದ ಸದಸ್ಯರಿಗೂ ಸುಬ್ಬಯ್ಯ ದುಃಸ್ವಪ್ನವಾಗಿದ್ದರು. ದೀರ್ಘ ಕಾಲದ ಕಾಂಗ್ರೆಸ್ ಆಡಳಿತದ ಅವಧಿ ಮುಗಿದು ಕಾಂಗ್ರೇಸ್ಸೇತರ ಜನತಾ ಸರ್ಕಾರ ಅಧಿಕಾರಕ್ಕೆ ಬಂದರೂ ಸುಬ್ಬಯ್ಯನವರ ಆರ್ಭಟವೇನೂ ಕಡಿಮೆಯಾಗಲಿಲ್ಲ. ಹೆಗಡೆ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವಲ್ಲಿ ಸುಬ್ಬಯ್ಯನವರ ಪಾತ್ರ ಗಮನಾರ್ಹವಾದದ್ದು.

ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ನೆಲೆ ನಿಲ್ಲಲು ಕಾರಣರಾದ ಕಾನ್ಶಿರಾಮ್ ಅವರ ಪ್ರೀತಿ-ಆಗ್ರಹಕ್ಕೆ ಮಣಿದು ಪಕ್ಷ ಸೇರಿದ ಸುಬ್ಬಯ್ಯ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದರು. ವಿಧಾನಸಭೆಯಲ್ಲಿ ಪಕ್ಷದ ಪ್ರತಿನಿಧಿ ಕಾಣಿಸಿಕೊಳ್ಳಲು ಕಾರಣರಾಗಿದ್ದರು. ಪಕ್ಷದೊಳಗಿನ ಅಸಹನೆ-ಧೋರಣೆಯಿಂದ ಹೆಚ್ಚು ಕಾಲ ಬಿಎಸ್‍ಪಿಯಲ್ಲಿಯೂ ಉಳಿಯಲಿಲ್ಲ. ಕಾಂಗ್ರೆಸ್ ಪಕ್ಷ ಸೇರಿದ ಸುಬ್ಬಯ್ಯ ಅವರು ಅಲ್ಲಿದ್ದದ್ದು ತೀರಾ ಕಡಿಮೆ ಅವಧಿಗೆ.

ಬಲಪಂಥೀಯರು ಪ್ರಭುತ್ವದ ಚುಕ್ಕಾಣಿ ಹಿಡಿಯುವುದರ ವಿರುದ್ಧ ಸುಬ್ಬಯ್ಯ ಅವರು ಬಹುತ್ವದ ನೆಲೆಯಿಂದ ದೇಶ ಕಟ್ಟಬಯಸುವ ಧೋರಣೆ ಉಳ್ಳವರಾಗಿದ್ದರು. ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ-ಧರ್ಮ ನಿರಪೇಕ್ಷ ನಿಲುವು ಅವರ ಆಸಕ್ತಿ ಹಾಗೂ ಕಾಳಜಿಗಳಾಗಿದ್ದವು. ಅದಕ್ಕಾಗಿ ಅವರು ಬೀದಿಗೆ ಇಳಿಯಲು ಎಂದೂ ಹಿಂದೇಟು ಹಾಕಿದವರಲ್ಲ. ‘ಸಮೂಹ ಸನ್ನಿ’ಯ ವಿರುದ್ಧದ ನಿಲುವು ತಳೆಯುವ ಧಾಷ್ಟ್ರ್ಯ ಮತ್ತು ಎದೆಗಾರಿಕೆಗಳೆರಡೂ ಅವರಿಗಿದ್ದವು. ರಾಜ್ ಅಭಿಮಾನಿಗಳನ್ನು ಎದುರಿಸಿದ ರೀತಿಯೇ ಅದಕ್ಕೆ ಸಾಕ್ಷಿ.

ಸುಬ್ಬಯ್ಯನವರ ರಾಜಕೀಯ-ಸಾಮಾಜಿಕ ಬದುಕು ಕರ್ನಾಟಕದ ರಾಜಕೀಯ-ಸಾಮಾಜಿಕ ಬದುಕಿನೊಂದಿಗೆ ತಳುಕು ಹಾಕಿಕೊಂಡಿದೆ. ಸುಬ್ಬಯ್ಯನವರ ಗೆಲುವು ರಾಜ್ಯ ರಾಜಕಾರಣದ ದಿಕ್ಕು ಬದಲಿಸುವುದಕ್ಕೆ ಕಾರಣವಾಗಿದೆ. ಹಾಗೆಯೇ ಅವರ ‘ಸೋಲು’ ಇಂದಿನ ದುಸ್ಥಿತಿಗೆ ದಾರಿ ಮಾಡಿಕೊಟ್ಟಿದೆ. ಕರ್ನಾಟಕದ ಸಾಕ್ಷಿಪ್ರಜ್ಞೆಯಂತಿದ್ದ ಸುಬ್ಬಯ್ಯ ಅವರು ಜೀವಪರ-ಜನಪರ ಕಾಳಜಿಯಿದ್ದ ಅಪರೂಪದ ನಾಯಕ. ‘ಮಾದರಿ’ ನಾಯಕರಾಗಿದ್ದ ಸುಬ್ಬಯ್ಯ ಅವರ ನಿರ್ಗಮನದಿಂದ ತೆರವಾದ ಸ್ಥಳವನ್ನು ಯಾರೂ ತುಂಬಲು ಸಾಧ್ಯವಿಲ್ಲ. ತುಂಬದ-ತುಂಬಲಾಗದ ‘ಸ್ಥಿತಿ’ ಕರ್ನಾಟಕದ ಸಾರ್ವಜನಿಕ ಬದುಕು ತಲುಪಿರುವ ದುಸ್ಥಿತಿಯ ದ್ಯೋತಕ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...