Homeಎಕಾನಮಿಮನೆಯಲಿ ಇದ್ದರೆ ಚಿನ್ನ ಚಿಂತೆ ಯಾಕೆ ಅಣ್ಣ?! ರಿಸರ್ವ್ ಬ್ಯಾಂಕ್ ಮೀಸಲು ನಿಧಿಗೆ ಸರಕಾರದ ಕನ್ನ!!

ಮನೆಯಲಿ ಇದ್ದರೆ ಚಿನ್ನ ಚಿಂತೆ ಯಾಕೆ ಅಣ್ಣ?! ರಿಸರ್ವ್ ಬ್ಯಾಂಕ್ ಮೀಸಲು ನಿಧಿಗೆ ಸರಕಾರದ ಕನ್ನ!!

ಹಿರಿಯರು ಮುಂದಿನ ಪೀಳಿಗೆಯ ಭದ್ರತೆಗಾಗಿ ಚಿನ್ನವನ್ನು ಕೂಡಿಡುತ್ತಾರೆ. ಯಾವುದೇ 'ಚಿಂತೆ' ಇಲ್ಲದೇ ಹೆಂಡತಿ ಮಕ್ಕಳ ಚಿನ್ನವನ್ನು ಅಡವಿಟ್ಟು, ಮಾರಿ ಶೋಕಿ ಮಾಡುವ 'ಅಣ್ಣಂದಿರ' ಖಯಾಲಿಯನ್ನೇ ಸರಕಾರದ ಈ ಕ್ರಮ ಅನುಸರಿಸುತ್ತಿವೆ. 

- Advertisement -
- Advertisement -

ದೇಶದ ಅತ್ಯುನ್ನತ ಬ್ಯಾಂಕ್ ಆಗಿರುವ ರಿಸರ್ವ್ ಬ್ಯಾಂಕಿನಿಂದ ಒಂದು ಲಕ್ಷ ಇಪ್ಪತ್ತಮೂರು ಸಾವಿರ ಕೋಟಿ ರೂ.ಗಳ ಭಾರಿ ಮೊತ್ತದ ಲಾಭಾಂಶ (ಡಿವಿಡೆಂಟ್) ಪಡೆದಿರುವುದರ ಹೊರತಾಗಿಯೂ, ಬ್ಯಾಂಕಿನ ಮೀಸಲು ನಿಧಿಗೆ ಕನ್ನಹಾಕಿರುವ ಕೇಂದ್ರ ಸರಕಾರವು
ನಿಧಿಯ 52,640 ಕೋಟಿ ರೂ.ಗಳನ್ನು ತನ್ನದಾಗಿಸಿಕೊಂಡಿದೆ. ರಿಸರ್ವ್ ಬ್ಯಾಂಕ್ 28,000 ಕೋಟಿ ರೂ. ಡಿವಿಡೆಂಟನ್ನು ಮುಂಚಿತವಾಗಿಯೇ ಫೆಬ್ರವರಿಯಲ್ಲಿ ಪಾವತಿ ಮಾಡಿತ್ತು. ಜನಸಾಮಾನ್ಯರಿಗೆ ಈ ಮೊತ್ತದ ಅಗಾಧತೆ ಗೊತ್ತಾಗಲು ಕಾಗದದಲ್ಲಿ ಬರೆದೇ ನೋಡಬೇಕಷ್ಟೆ.

ಈ ಸಲದ ಬಜೆಟ್‌ನಲ್ಲಿ ಭಾರತವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ (ಟ್ರಿಲಿಯನ್ ಎಂದರೆ ಒಂದು ಲಕ್ಷ ಕೋಟಿ)ಯಾಗುವ ಬೊಗಳೆ ಬಿಟ್ಟಿರುವ ಸರಕಾರವು, ಈ ಕ್ರಮಕ್ಕೆ ಮುಂದಾಗಿರುವುದನ್ನು ನೋಡಿದರೆ ಒಂದು ಮಾತು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅದೆಂದರೆ, ಆರ್ಥಿಕ ಹಿಂಜರಿತದ ಮಾತುಗಳು ಮತ್ತು ಆರ್ಥಿಕ ಕುಸಿತದ ಭಯ-ಎರಡೂ ನಿಜ ಎಂಬುದು. ಇದನ್ನು ಸಾಬೀತುಪಡಿಸುವ ಅಗತ್ಯವೇ ಇರಲಿಲ್ಲ. ಬಜೆಟಿನಲ್ಲಿಯೇ ಸಾರ್ವಜನಿಕ ರಂಗದ ಉದ್ದಿಮೆಗಳಲ್ಲಿ ಇರುವ ಶೇರುಗಳನ್ನು ಮಾರಿ ಖಾಸಗಿಯವರಿಗೆ ತಟ್ಟೆಯಲ್ಲಿಟ್ಟು ದಾನ ಮಾಡಿ ಹಣ ಸಂಗ್ರಹಿಸುವ ಸರಕಾರದ ಉದ್ದೇಶದಿಂದಲೇ ಈ ಆರ್ಥಿಕ ಮುಗ್ಗಟ್ಟಿನ ಸುಳಿವು ಸಿಕ್ಕಿತ್ತು. ಅದನ್ನು ಸಾಬೀತುಪಡಿಸುವಂತೆ, ಅಟೋಮೊಬೈಲ್, ಜವಳಿ, ನಿರ್ಮಾಣ ಸೇರಿದಂತೆ ಹಲವಾರು ಉದ್ದಿಮೆಗಳು ಭಾರೀ ನಷ್ಟ ಅನುಭವಿಸುತ್ತಿದ್ದು, ಉದ್ಯೋಗ ಕಡಿತ ಮಾಡುತ್ತಿವೆ.

ಕಾರ್ಮಿಕರು ಮತ್ತು ನೌಕರರು ದಿನವೂ ಸಾವಿರ ಸಾವಿರ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಂಡು ಮನೆಗೆ ಹೋಗುತ್ತಿದ್ದರೂ, ಅದನ್ನು ಕಾಟಾಚಾರಕ್ಕೆಂಬಂತೆ ವರದಿ ಮಾಡುವ ಅಥವಾ ವರದಿ ಮಾಡದೆಯೇ ಇರುವ ಸರಕಾರಿ ಕೃಪಾಪೋಷಿತ ಭಟ್ಟಂಗಿ ಮಾಧ್ಯಮಗಳು, ಅದರಲ್ಲೂ ದೃಶ್ಯ ಮಾಧ್ಯಮಗಳು, ಸರಕಾರದ ಈ ಕ್ರಮವನ್ನು ಭಾರೀ ಕ್ರಾಂತಿಕಾರಿ ಕ್ರಮವೆಂದು ಬಣ್ಣಿಸುತ್ತಾ, ಇದು ಭಾರತದ ಎಲ್ಲಾ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿ, ಪವಾಡವನ್ನು ಸಾಧಿಸುತ್ತದೆ ಎಂಬಂತೆ ಬಣ್ಣಿಸುತ್ತಾ, ಪರೋಕ್ಷವಾಗಿ ಗೊತ್ತಿದ್ದೋ, ಗೊತ್ತಿಲ್ಲದೆಯೋ, ಸಮಸ್ಯೆ ಇರುವುದು ನಿಜ ಎಂದು ಒಪ್ಪಿಕೊಳ್ಳುತ್ತಿವೆ. ಎಲ್ಲೆಲ್ಲೂ ‘ಚಿಪ್ಪು’ ಅರ್ಥಶಾಸ್ತ್ರಜ್ಞರು ಗಟ್ಟಿದನಿಯಲ್ಲಿ ಅರಚುತ್ತಿದ್ದಾರೆ.

ವಾಸ್ತವವಾಗಿ ಭಾರತೀಯ ರಿಸರ್ವ್‌ ಬ್ಯಾಂಕ್, ಭಾರತೀಯ ಚುನಾವಣಾ ಆಯೋಗದಂತೆಯೇ ಒಂದು ಸ್ವಾಯತ್ತ ಸಂಸ್ಥೆ. ಅದರ ವ್ಯವಹಾರಗಳಲ್ಲಿ ಸರಕಾರ ನೇರವಾಗಿ ಕೈಹಾಕುವಂತಿಲ್ಲ. ಸರಕಾರವು ರಿಸರ್ವ್ ಬ್ಯಾಂಕಿನನ ಮೀಸಲು ನಿಧಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಹಣವಿದೆ ಎಂದು ಪ್ರತಿಪಾದಿಸುತ್ತಾ, ಅದರ ಮೇಲೆ ಹಿಂದಿನಿಂದಲೇ ಕಣ್ಣಿಟ್ಟಿತ್ತು. ಕಳೆದ ಡಿಸೆಂಬರ್‌ನಲ್ಲಿ ಊರ್ಜಿತ್ ಪಟೇಲ್ ಅವರು ರಾಜೀನಾಮೆ ನೀಡಿದ್ದು ಇದೇ ಕಾರಣಕ್ಕಾಗಿ. ಇದೀಗ ತಮಗೆ ಬೇಕಾದವರನ್ನು ನೇಮಿಸಿ, ಮಾಜಿ ಗವರ್ನರ್ ಬಿಮಲ್ ಜಲಾನ್ ನೇತೃತ್ವದ ಸಮಿತಿಯ ಮೂಲಕ ಈ ಕೆಲಸ ಮಾಡಿಸಿ, ರಿಸರ್ವ್ ಬ್ಯಾಂಕಿನ ಸ್ವಾಯತ್ತತೆಗೂ ಧಕ್ಕೆ ಮಾಡಲಾಗಿದೆ.

ವಾಸ್ತವವಾಗಿ ಇಡೀ ವಿದ್ಯಮಾನವನ್ನು ಅರ್ಥ ಮಾಡಿಕೊಳ್ಳಲು ಆರ್ಥಿಕ ತಜ್ಞರಾಗಬೇಕಾದ ಅಗತ್ಯವಿಲ್ಲ. ಮೂಲಭೂತ ಮತ್ತು ಸಾಮಾನ್ಯ ಜನಜೀವನದ ಜ್ಞಾನ ಇದ್ದರೆ ಸಾಕಾಗುತ್ತದೆ. ಕಬ್ಬಿಣದ ಕಡಲೆಯಂತಹ ಹೆಸರುಗಳಿರುವ ಪರಿಕಲ್ಪನೆಗಳ ಅಗತ್ಯವೂ ಇಲ್ಲ. ಇವುಗಳನ್ನು ಸಾಮಾನ್ಯವಾಗಿ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರು ಜನರಲ್ಲಿ ಗೊಂದಲ ಉಂಟುಮಾಡಲು ಬಳಸುವುದೂ ಉಂಟು- ಈಗ ಇದೇ ಮೀಸಲು (reserve) ನಿಧಿಯನ್ನು ‘ಹೆಚ್ಚುವರಿ’ (surplus) ನಿಧಿ ಎಂದು ಕರೆದು ದಾರಿತಪ್ಪಿಸಲಾಗುತ್ತಿದೆ.

‘ಮನೆಯಲಿ ಇದ್ದರೆ ಚಿನ್ನ ಚಿಂತೆ ಯಾಕೆ ಅಣ್ಣ?’ ಇದು ಚಿನ್ನ ಅಡವಿಟ್ಟು ಸಾಲ ನೀಡುವ ಹಣಕಾಸು ಸಂಸ್ಥೆಯೊಂದರ ಸ್ಲೋಗನ್. ಈ ಸಂಸ್ಥೆ ಪ್ರಪಂಚದ ಹಲವಾರು ದೇಶಗಳು ಹೊಂದಿರುವುದಕ್ಕಿಂತ ಹೆಚ್ಚು ಚಿನ್ನದ ದಾಸ್ತಾನು ಹೊಂದಿದೆ. ಸಾಮಾನ್ಯವಾಗಿ ಹಿರಿಯರು ಮುಂದಿನ ಪೀಳಿಗೆಯ ಭದ್ರತೆಗಾಗಿ ಚಿನ್ನವನ್ನು ಕೂಡಿಡುತ್ತಾರೆ. ಯಾವುದೇ ‘ಚಿಂತೆ’ ಇಲ್ಲದೇ ಹೆಂಡತಿ ಮಕ್ಕಳ ಚಿನ್ನವನ್ನು ಅಡವಿಟ್ಟು, ಮಾರಿ ಶೋಕಿ ಮಾಡುವ ‘ಅಣ್ಣಂದಿರ’ ಖಯಾಲಿಯನ್ನೇ ಸರಕಾರದ ಈ ಕ್ರಮ ಅನುಸರಿಸುತ್ತಿವೆ.

ಯಾಕೆಂದರೆ, ರಿಸರ್ವ್ ಬ್ಯಾಂಕ್ ಪ್ರತೀ ವರ್ಷ ತನ್ನ ಲಾಭಾಂಶದ ಪಾಲನ್ನು (ಡಿವಿಡೆಂಟ್) ಸರಕಾರಕ್ಕೆ ಸಲ್ಲಿಸುತ್ತದೆ. ಆದರೆ, ಮೀಸಲು ನಿಧಿಯು ಹಿರಿಯರ ಚಿನ್ನದಂತೆ ಜನತೆ ಹಿತಾಸಕ್ತಿಗಳ ಭದ್ರತೆಗಾಗಿ ಇರುತ್ತದೆ. ಸರಕಾರಿ ಬಾಂಡ್‌ಗಳು, ಜನರು ಬ್ಯಾಂಕುಗಳಲ್ಲಿ ಉಳಿಸಿರುವ ಮತ್ತು ಠೇವಣಿ ಇರಿಸಿರುವ ಹಣಕ್ಕೆ ಭದ್ರತೆ ಒದಗಿಸುವುದು ಇದೇ ನಿಧಿ. ನಾವು ನಮ್ಮ ಕೈಯಲ್ಲಿರುವ ಕಾಗದದ ನೋಟುಗಳನ್ನು ನಂಬುತ್ತಿರುವುದೇ ರಿಸರ್ವ್ ಬ್ಯಾಂಕಿನ ಖಾತರಿಯಿಂದ. ಅದರಲ್ಲಿ I promise to pay… ಎಂದು ಗವರ್ನರರ ಸಹಿ ಇರುತ್ತದೆ!  ಸರಕಾರ ಅದಕ್ಕೂ ಮೊತ್ತ ಮೊದಲ ಬಾರಿಗೆ ಕೈ ಹಾಕಿದೆ. ಹಿಂದೊಮ್ಮೆ 1991ರಲ್ಲಿ ಚಂದ್ರಶೇಖರ್ ಸರಕಾರ ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ ಭಾರತದ ಮೀಸಲು ಚಿನ್ನವನ್ನು ಅಡವಿಟ್ಟು ಸಾಲಪಡೆದುದನ್ನು ಬಿಟ್ಟರೆ, ಯಾವ ಸರಕಾರವೂ ಇಂತಹಾ ಕೆಲಸಕ್ಕೆ ಕೈಹಾಕಿರಲಿಲ್ಲ. ಆ ಚಿನ್ನವನ್ನು ಬಿಡಿಸಿತಂದದ್ದು ಮನಮೋಹನ್ ಸಿಂಗ್ ಅವಧಿಯಲ್ಲಿ.

ಭಾರೀ ಆರ್ಥಿಕ ಬಿಕ್ಕಟ್ಟನ್ನು ಎದುರುನೋಡುತ್ತಿರುವ ಸಂದರ್ಭದಲ್ಲಿ ಸರಕಾರವು ಲಕ್ಷಾಂತರ ಕೋಟಿಯ ಪ್ರಮಾಣದಲ್ಲಿ ಬ್ಯಾಂಕುಗಳ ದುಡಿಯದ ಆಸ್ತಿ (NPA-ವಾಸ್ತವವಾಗಿ ಭಾರೀ ಕುಳಗಳು ಮುಳುಗಿಸಿ, ವಸೂಲು ಮಾಡಲಾಗದ ಸಾಲ)ಯನ್ನು ಮನ್ನಾ ಮಾಡಿ, ಹೆಚ್ಚುವರಿಯಾಗಿ ಕೆಲವು ಲಕ್ಷ ಕೋಟಿ ರೂ.ಗಳ ಹೊಸ ಬಂಡವಾಳ ಒದಗಿಸಿದರೂ, ಹೆಚ್ಚಿನ ಬ್ಯಾಂಕುಗಳು ನಷ್ಟದಲ್ಲಿವೆ. ಎಟಿಎಂಗಳಲ್ಲಿ ಹಣವಿಲ್ಲ; ಹಣವಿಲ್ಲ, ನಾಳೆಬನ್ನಿ ಎಂದು ಕೆಲವು ಬ್ಯಾಂಕ್ ಶಾಖೆಗಳು ಗ್ರಾಹಕರನ್ನು ಹಿಂದೆ ಕಳಿಸುತ್ತಿರುವ ವರದಿಗಳೂ ಚದರಿದಂತೆ ಬರುತ್ತಿವೆ. ಈ ಬಾರಿಯ ಬಜೆಟ್‌ನಲ್ಲಿ ಭಾರೀ ಹಣಕಾಸು ಕೊರತೆ ಇದ್ದು, ಅದನ್ನು ಜಿಡಿಪಿಯ 3.3 ಶೇಕಡಾದ ಮಟ್ಟದಲ್ಲಿ ಉಳಿಸಿಕೊಳ್ಳಲು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಹೆಣಗುತ್ತಿದ್ದಾರೆ. ಆರ್ಥಿಕ ಬೆಳವಣಿಗೆಯ ದರ ಕಳೆದ ಐದು ವರ್ಷಗಳಲ್ಲೇ ತಳಮಟ್ಟದಲ್ಲಿದೆ. ಚಿಕ್ಕ ಕೈಗಾರಿಕೆಗಳು ನಷ್ಟ ಅನುಭವಿಸುತ್ತಿರುವುದರಿಂದ ಬಜೆಟ್‌ನಲ್ಲಿ ತೋರಿಸಲಾಗಿರುವಷ್ಟು ತೆರಿಗೆ ಸಂಗ್ರಹವಾಗದು ಎಂಬ ಭಯವೂ ಸರಕಾರವನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ 70,000 ಕೋಟಿ ರೂ. ಹೊಸ ಬಂಡವಾಳ ಒದಗಿಸುವ ಮಾತನ್ನು ನಿರ್ಮಲಾ ಸೀತಾರಾಮನ್ ಈಗಾಗಲೇ ಆಡಿದ್ದಾರೆ.

ಜನಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ, ರಿಸರ್ವ್ ಬ್ಯಾಂಕಿನ ಮೀಸಲು ನಿಧಿಯಿಂದ ಹಣ ತೆಗೆಯುವ ಸರಕಾರದ ಕ್ರಮವು, ಜನರ ಸಾಮೂಹಿಕ ಹಣವನ್ನು ಬ್ಯಾಂಕುಗಳ ಮೂಲಕ ಶ್ರೀಮಂತ ಉದ್ಯಮಿಗಳಿಗೆ ಒದಗಿಸುವ ಕ್ರಮವಲ್ಲದೇ ಬೇರೇನಲ್ಲ. ಸರಕಾರ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ದ ಹೆಚ್ಚಳಕ್ಕೆ ಗಮನಹರಿಸಿದೆಯೇ ಹೊರತು ಅದರ ನ್ಯಾಯಬದ್ಧ ಹಂಚಿಕೆಯ ಬಗ್ಗೆ ಅಲ್ಲ. ಜಿಡಿಪಿ ಹೆಚ್ಚಳದ ಅಂಕಿ ಅಂಶದಿಂದ ದೇಶವು ಪ್ರಗತಿಯಲ್ಲಿದೆ ಎಂಬ ಭ್ರಮೆಯನ್ನು ಹುಟ್ಟಿಸಲು ಸಾಧ್ಯವಿದೆ. ಆದರೆ, ಜಿಡಿಪಿ ದೇಶದ ಸರ್ವಾಂಗೀಣ ಪ್ರಗತಿಗೆ ಮಾನದಂಡವಲ್ಲ ಎಂದು ಹಲವಾರು ಅರ್ಥಶಾಸ್ತ್ರಜ್ಞರು ಪ್ರತಿಪಾದಿಸಿದ್ದಾರೆ.

ಇದನ್ನು ಸರಳವಾಗಿ ಹೀಗೆ ವಿವರಿಸಬಹುದು. ನೂರು ಕುಟುಂಬಗಳ ಒಂದು ಹಳ್ಳಿಯನ್ನು ಊಹಿಸಿಕೊಳ್ಳೋಣ. ಅವುಗಳ ಒಟ್ಟು ಉತ್ಪನ್ನ (ಆದಾಯ)ವೇ ಅಲ್ಲಿನ ಜಿಡಿಪಿ. ಇದರಲ್ಲಿ ಒಂದು ಕುಟುಂಬ ಶೇಕಡಾ 20ರಷ್ಟು ಆದಾಯ ಹೊಂದಿದೆ. ಉಳಿದ ಒಂಭತ್ತು ಕುಟುಂಬಗಳು ಇನ್ನೂ 20 ಶೇಕಡಾ ಆದಾಯ ಹೊಂದಿವೆ ಎನ್ನೋಣ. ಉಳಿದ 60 ಶೇಕಡಾ ಆದಾಯ ಉಳಿದ 90 ಕುಟುಂಬಗಳಲ್ಲಿ ಬೇರೆಬೇರೆ ಪ್ರಮಾಣದಲ್ಲಿ ಹಂಚಿಕೆಯಾಬೇಕು. ಮೊದಲಿನ ಹತ್ತು ಕುಟುಂಬಗಳ ಆದಾಯ ಹೆಚ್ಚಾದರೂ ಜಿಡಿಪಿ ಏರುತ್ತದೆ. ಇದರ ಲಾಭ ಉಳಿದ 90 ಕುಟುಂಬಗಳಿಗೆ ಸಿಗವುದಿಲ್ಲ. ವಾಸ್ತವವಾಗಿ ಹಣದುಬ್ಬರದಿಂದ ಅವರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಇದುವೇ ಬಂಡವಾಳಶಾಹಿ ವ್ಯವಸ್ಥೆ ಮತ್ತು ಇದುವೇ ಭಾರತದ ಸ್ಥಿತಿ.

ಇಂತಹ ಆರ್ಥಿಕ ವೈಫಲ್ಯಗಳನ್ನು ಮುಚ್ಚಿಟ್ಟು ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿಯೇ ಅಯೋಧ್ಯೆ, ಕಾಶ್ಮೀರ, ಪಾಕಿಸ್ತಾನ, ಗಡಿ, ಗೋವು, ಮುಸ್ಲಿಮರು, ಹಿಂದೂತ್ವ ಇತ್ಯಾದಿ ಭಾವನಾತ್ಮಕ ಪ್ರಶ್ನೆಗಳನ್ನು ಎತ್ತಲಾಗುತ್ತದೆ. ಮತ್ತು ಜನರ ಸಮಸ್ಯೆಗಳನ್ನೆತ್ತಿ ಸರಕಾರವನ್ನು ಟೀಕಿಸುವವರಿಗೆ ದೇಶದ್ರೋಹಿ ಪಟ್ಟಕಟ್ಟಲಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. RBI has supported due diligence since 2005-06 of banks in bulk loan that damage BJP government is setting right. Banks violating RBI Prudential norms, for the sake of asset restructuring company . Bankers acting like asset mafia. Msme and sme are torched by bank officers. Filling wrong affidavit to COME and DM.

  2. ನಾಲಾಯಕ್ ಪ್ರಧಾನಿ ಈಗ್ಗೆ ಆದರೆ ಜನ ದಂಗ್ಗೆ ಹೇಳುವ ಕಾಲ ದೂರವಿಲ್ಲ

LEAVE A REPLY

Please enter your comment!
Please enter your name here

- Advertisment -

ಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ ‘ಬಿಟ್ಟು ಬಜರಂಗಿ’

ಹರಿಯಾಣದಲ್ಲಿ "ಲವ್ ಜಿಹಾದ್" ಮತ್ತು ಅಂತರ್ಧರ್ಮೀಯ ವಿವಾಹಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ತನ್ನದೇ ಆದ ಸಾರ್ವಜನಿಕ ಪ್ರಭಾವ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ತನಗೆ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದು ಎಂಬ...

ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಸಾಮೂಹಿಕ ಅಕ್ರಮ’ ಆರೋಪ: ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಎನ್‌ಡಿಎ ನಿಯೋಗ

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಸಾಂಸ್ಥಿಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು...

SIR: ಮತದಾರರ ಹಕ್ಕು ರಕ್ಷಣೆಗೆ ಕಣಕ್ಕಿಳಿದ ‘ನಾಗರಿಕ ಮತ ಕಾವಲು ಸಮಿತಿ’

ರಾಜ್ಯದ ಶೋಷಿತ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ತಡೆಯಲು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಎಸ್‌ಐಆರ್...

ಮೋಹನ್‌ಲಾಲ್ ‘ದಂತ’ ಕಥೆ: ಅರಣ್ಯ ಇಲಾಖೆ ಮುಂದೆ 10 ಆನೆ ದಂತ, 13 ಮೂರ್ತಿಗಳ ಅಚ್ಚರಿಯ ಘೋಷಣೆ!

ನಟ ಮೋಹನ್‌ಲಾಲ್ ಅವರು ತಾವೇ ಕಾನೂನುಬಾಹಿರವಾಗಿ ವನ್ಯಜೀವಿ ವಸ್ತುಗಳನ್ನು ಹೊಂದಿರುವ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದರೂ, ತಮ್ಮ ಬಳಿ 10 ಆನೆ ದಂತಗಳು ಮತ್ತು 13 ದಂತದ ಮೂರ್ತಿಗಳು ಇರುವುದಾಗಿ ಕೇರಳ ಅರಣ್ಯ...

ಅಯೋಧ್ಯೆ ರಾಮಮಂದಿರ ಹಗರಣ: ‘ಕದ್ದ ಹಣ’ ಹಂಚಿಕೆಯ ಮೊಬೈಲ್ ಚಾಟ್‌ಗಳು ಬಹಿರಂಗ; ತೀವ್ರಗೊಂಡ ತನಿಖೆ

ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ತನಿಖೆ ತೀವ್ರಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳ ಮೊಬೈಲ್ ಫೋನ್‌ಗಳ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಕೊಲೆ ಆರೋಪ : ಪ. ಬಂಗಾಳದ ಬಾರುಯಿಪುರದಲ್ಲಿ ಹಿಂಸಾಚಾರ ; ಶಂಕಿತ ಆರೋಪಿಯ ಗುಂಪು ಹತ್ಯೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಶನಿವಾರ (ಜು.4) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಶವ ಭಾನುವಾರ (ಜು.5) ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಅಲ್ಲಿ ತೀವ್ರ ಹಿಂಸಾತ್ಮಕ...

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...

ಮ್ಯಾಚ್ ಮಧ್ಯೆ ಕಾಂಡೊಮ್ ಜಾಹೀರಾತು: ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ, TMC ಸಂಸದ ಕೀರ್ತಿ ಆಜಾದ್

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ...