Homeಚಳವಳಿಭಗತ್ ಸಿಂಗ್, ಗೌರಿ ಲಂಕೇಶ್ ವಿಚಾರಗಳು ಚಿರಂತನವಾಗಿರುತ್ತವೆ. : ಪ್ರೊ. ಜಗಮೋಹನ್ ಸಿಂಗ್

ಭಗತ್ ಸಿಂಗ್, ಗೌರಿ ಲಂಕೇಶ್ ವಿಚಾರಗಳು ಚಿರಂತನವಾಗಿರುತ್ತವೆ. : ಪ್ರೊ. ಜಗಮೋಹನ್ ಸಿಂಗ್

- Advertisement -
- Advertisement -

ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಜಗಮೋಹನ್ ಸಿಂಗ್, ಹುತಾತ್ಮ ಭಗತ್‍ಸಿಂಗ್‍ರ ಕುಟುಂಬಕ್ಕೆ ಸೇರಿದವರು. ಭಗತ್‍ಸಿಂಗರ ಚಿಂತನೆಗಳ ಪ್ರಸಾರಕ್ಕೆ ಬದ್ಧರಾಗಿದ್ದು, ಅವರ ಬಹುತೇಕ ಬರಹಗಳನ್ನು ಡಿಜಿಟೈಸ್ ಮಾಡಿದ್ದಾರೆ. ಪಂಜಾಬಿನ ಜಮೂರಿ ಅಧಿಕಾರಿ ಸಭಾ ಮತ್ತು ಪ್ರಜಾತಾಂತ್ರಿಕ ಹಕ್ಕುಗಳ ಸಂಘದ ಸ್ಥಾಪಕ ಸದಸ್ಯರಲ್ಲೊಬ್ಬರು. ಜನಪರ ಚಳವಳಿಗಳ ಸಕ್ರಿಯ ಸಂಗಾತಿ ಪ್ರೊ.ಜಗಮೋಹನ್ ಸಿಂಗ್. ಈ ಲೇಖನವನ್ನು ಕನ್ನಡಕ್ಕೆ ನಿಖಿಲ್ ಕೋಲ್ಪೆಯವರು ಅನುವಾದಿಸಿದ್ದಾರೆ.

ನಮಗಿಂದು ಅತ್ಯಂತ ಸವಾಲಿನ ಕಾಲ ಎದುರಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಬರ್ಬರ ಬಲಪ್ರಯೋಗವೇ ಅತ್ಯಂತ ಮುಖ್ಯ ಎನಿಸಿರುವ ಕಾಲವಿದು – ಸರಕಾರಿ ವ್ಯವಸ್ಥೆಯಲ್ಲಿ ಇರುವವರಿಗೂ, ಭಕ್ತರಿಗೂ. ಆದರೆ, ಇದು ಹೊಸದಾಗಿ ಚಿಂತಿಸಿ, ಹೊಸ ಚಿಂತನೆಗಳ ಜೊತೆಯಲ್ಲಿ ಧೈರ್ಯದಿಂದ ನಿಲ್ಲುವ ಅವಕಾಶ ಮತ್ತು ಶಕ್ತಿ ನೀಡುವಂತಹ ಸವಾಲು ಕೂಡಾ ಹೌದು. ಆದರೆ, ನಮಗೆ ರಾಷ್ಟ್ರವಾದ ಮತ್ತು ದೇಶಪ್ರೇಮದ ನಡುವಿನ ವ್ಯತ್ಯಾಸ ತಿಳಿಯುವ ಮೂಲಭೂತ ವಿಷಯದ ಬಗ್ಗೆ ಸ್ಪಷ್ಟತೆ ಬೇಕು.

ಈಗ ಬೋಧಿಸಲಾಗುತ್ತಿರುವ ರಾಷ್ಟ್ರವಾದವು ಆರ್ಥಿಕ ಬಿಕ್ಕಟ್ಟಿನ ಕಾಲದಲ್ಲಿ ಪಶ್ಚಿಮದಿಂದ ಎರವಲು ಪಡೆದದ್ದಾಗಿದೆ. ಈ ಪರಿಕಲ್ಪನೆಯನ್ನು ಜಪಾನ್, ಸ್ಪೇನ್, ಇಟಲಿ ಮತ್ತು ಜರ್ಮನಿಯಲ್ಲಿ ಅಧಿಕಾರ ಕಬಳಿಕೆಯ ಉದ್ದೇಶದಿಂದ ಹರಡಲಾಗಿತ್ತು. ಆದುದರಿಂದ, ಅಧಿಕಾರವೇ ಅದರ ಮೂಲ ಉದ್ದೇಶ. ಅದಕ್ಕೆ ತನ್ನೆಲ್ಲಾ ವೈಫಲ್ಯ ಮತ್ತು ಕೆಡುಕಿಗೆ ಹೊಣೆಮಾಡಲು ಒಂದು ಶತ್ರುವನ್ನು ಹುಟ್ಟುಹಾಕುವ ಅಗತ್ಯವಿರುತ್ತದೆ. ಅದೇ ಹೊತ್ತಿಗೆ ದೇಶಪ್ರೇಮ ಎಂಬುದು ಸಾಮಾನ್ಯವಾಗಿ ಪ್ರಜೆಗಳ ಸಮಸ್ಯೆಗಳನ್ನು ಪರಿಹರಿಸುವುದರ ಮೇಲೆ ಕೇಂದ್ರಿತವಾಗಿದೆ. ರಾಷ್ಟ್ರವಾದದ ಪ್ರೇರಕಶಕ್ತಿ ಎಂದರೆ ದ್ವೇಷ ಮತ್ತು ದೇಶಪ್ರೇಮದ ಪ್ರೇರಕಶಕ್ತಿ ಪ್ರೇಮ.

ಜಾರ್ಜ್ ಆರ್ವೆಲ್ ಗುರುತಿಸಿರುವಂತೆ, “ಋಣಾತ್ಮಕ ರಾಷ್ಟ್ರವಾದಿಯು ಇತಿಹಾಸವನ್ನು ಮಹಾನ್ ಶಕ್ತಿ ಘಟಕಗಳ ಕೊನೆಯಿಲ್ಲದ ಉನ್ನತಿ ಮತ್ತು ಅವನತಿಯನ್ನಾಗಿ ನೋಡುತ್ತಾನೆ ಮತ್ತು ಪ್ರತಿಯೊಂದು ಘಟನೆಯು ಅವನಿಗೆ ತನ್ನ ಪಕ್ಷವು ಉತ್ಕೃಷ್ಟ ಮತ್ತು ಎದುರಾಳಿಯು ನಿಕೃಷ್ಟ ಎಂದು ತೋರಿಸುತ್ತದೆ… ತನ್ನ ಪಕ್ಷವನ್ನು ಆಯ್ಕೆ ಮಾಡಿದ ಬಳಿಕ ಅವನು ಅದುವೇ ಬಲಶಾಲಿ ಎಂದು ತನಗೆ ತಾನೇ ಮನವರಿಕೆ ಮಾಡಿಕೊಳ್ಳುತ್ತಾನೆ. ರಾಷ್ಟ್ರವಾದವು ಆತ್ಮವಂಚನೆಯಿಂದ ಬಲಗೊಂಡಂತಹ ಅಧಿಕಾರದಾಹವಾಗಿರುತ್ತದೆ. ರಾಷ್ಟ್ರವಾದಿಯು ವಾಸ್ತವಕ್ಕೆ ಕುರುಡಾಗಿರುತ್ತಾನೆ. ಆತ ತನ್ನ ಪಕ್ಷವು ನಡೆಸಿದ ದೌರ್ಜನ್ಯವನ್ನು ನಿರಾಕರಿಸುತ್ತಾನೆ ಮತ್ತು ಅದರ ಕುರಿತು ಏನನ್ನೂ ಕೇಳಿಸಿಕೊಳ್ಳದೆ ಕಿವುಡಾಗಿರುವಂತಹ ಅಸಾಧಾರಣ ಸಾಮರ್ಥ್ಯವನ್ನೂ ಹೊಂದಿರುತ್ತಾನೆ. ಗತಕಾಲದಲ್ಲಿ ನಡೆದಿರುವುದನ್ನು ಬದಲಿಸಬಹುದು ಎಂಬ ನಂಬಿಕೆ ಅಥವಾ ಭ್ರಮೆಯಿಂದ ಆತ ಪೀಡಿತನಾಗಿರುತ್ತಾನೆ. ಘಟನೆಗಳು ಅವು ನಡೆಯಬೇಕಾದ ರೀತಿಯಲ್ಲಿಯೇ ನಡೆಯುವ ಭ್ರಮಾಲೋಕದಲ್ಲಿ ಆತ ಬದುಕುತ್ತಿರುತ್ತಾನೆ.” ಇಂದಿನ ಇಂಥಾ ಪರಿಸ್ಥಿತಿಯು ಎಂತಹ ಸವಾಲುಗಳನ್ನು ನಮ್ಮ ಮುಂದೆ ಒಡ್ಡುತ್ತಿದೆ ಎಂಬುದನ್ನು ನಮಗೆ ಸ್ಪಷ್ಟಪಡಿಸುವಂತಹ ಕೆಲವು ರೋಗಲಕ್ಷಣಗಳಿವು.

ಜಲಿಯನ್‍ವಾಲಾಬಾಗ್ ಹತ್ಯಾಕಾಂಡದ ನೂರನೆಯ ವರ್ಷದಲ್ಲಿ ನಾವು ಕೆಲವು ವಿಷಯಗಳನ್ನು ಮರೆಯದಿರೋಣ. ಅವೆಂದರೆ, ಮೈಕೆಲ್ ಓ’ಡ್ವಾಯರ್ ಮತ್ತು ಜನರಲ್ ಡಯರ್ ಬ್ರಿಟಿಷ್ ರಾಷ್ಟ್ರವಾದಿಗಳಾಗಿ ಕಾರ್ಯಾಚರಿಸಿದ್ದರೆ, ಭಾರತೀಯ ದೇಶಪ್ರೇಮಿಗಳು ಎಲ್ಲಾ ಜಾತಿ, ಧರ್ಮಗಳವರಿಗೆ ತೆರೆದಿರುವಂತಹ ಸಾರ್ವಜನಿಕ ಅಡುಗೆಮನೆ (ಲಂಗರ್)ಯನ್ನು ನಡೆಸಿ, ಆಹಾರ ವಸ್ತುಗಳ ಬೆಲೆ ಏರಿಕೆಯ ಸಮಸ್ಯೆಯನ್ನು ನಿವಾರಿಸುವ ಮೂಲಕ ದೇಶಪ್ರೇಮವನ್ನು ಗಟ್ಟಿಗೊಳಿಸಲು ಯತ್ನಿಸಿದ್ದರು. ಆ ಮೂಲಕ ಹಿಂದೂ ಮುಸ್ಲಿಂ ಏಕತೆಯನ್ನು ಸಾಧಿಸಿದ್ದರು – ಎಲ್ಲಿಯತನಕ ಎಂದರೆ, ಏಪ್ರಿಲ್ 9ರಂದು ಬಂದಿದ್ದ ರಾಮನವಮಿಯನ್ನು ಹಿಂದೂ-ಮುಸ್ಲಿಮರು ಜೊತೆಯಲ್ಲಿ ಆಚರಿಸಿದ್ದರು. ರಾಮನವಮಿ ಮೆರವಣಿಗೆಯ ನೇತೃತ್ವ ವಹಿಸಿದ್ದವರು ಡಾ. ಬಶೀರ್. ಈ ರೀತಿಯ ಒಗ್ಗಟ್ಟು ಬ್ರಿಟಿಷ್ ಆಡಳಿತಗಾರರಿಗೆ 1857ನ್ನು ನೆನಪಿಸಿತ್ತು ಮತ್ತು ಅದಕ್ಕಾಗಿಯೇ ಅವರು ಅಷ್ಟೊಂದು ಕ್ರೂರವಾಗಿ ವರ್ತಿಸಿದರು.

ಶಹೀದ್ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ತರು 1929ರ ಡಿಸೆಂಬರ್‍ನಲ್ಲಿ ‘ಮಾಡರ್ನ್ ರಿವ್ಯೂ’ ಪತ್ರಿಕಾ ಸಂಪಾದಕರಿಗೆ ಬರೆದ ಪತ್ರದಲ್ಲಿ ಏನು ಹೇಳಿದ್ದರೆಂದು ನೆನಪಿಸಿಕೊಳ್ಳೋಣ.

“ಕ್ರಾಂತಿ…ಒಂದು ಚೈತನ್ಯ, ಒಳ್ಳೆಯದರತ್ತ ಬದಲಾವಣೆಯ ತುಡಿತ. ಜನರು ಸಾಮಾನ್ಯವಾಗಿ ಸ್ಥಾಪಿತ ವ್ಯವಸ್ಥೆಗೆ ಒಗ್ಗಿಕೊಂಡುಬಿಡುತ್ತಾರೆ ಮತ್ತು ಬದಲಾವಣೆಯ ಕಲ್ಪನೆ ಮಾತ್ರಕ್ಕೇ ನಡುಗಲಾರಂಭಿಸುತ್ತಾರೆ. ಈ ಜಡಚೇತನವನ್ನೇ ಕ್ರಾಂತಿಕಾರಿ ಚೈತನ್ಯದಿಂದ ಬದಲಿಸಬೇಕಾಗಿರುವುದು. ಇಲ್ಲವಾದಲ್ಲಿ ಈ ಅವನತಿಯು ಮೇಲುಗೈ ಪಡೆಯುತ್ತದೆ ಮತ್ತು ಇಡೀ ಮಾನವೀಯತೆಯನ್ನೇ ಪ್ರತಿಗಾಮಿ ಶಕ್ತಿಗಳು ಅಡ್ಡದಾರಿಗೆಳೆಯುತ್ತವೆ. ಇಂತಹ ಪರಿಸ್ಥಿತಿಯು ಸ್ಥಗಿತತೆಗೆ ದಾರಿಮಾಡಿಕೊಟ್ಟು, ಮಾನವ ಪ್ರಗತಿಗೇ ಲಕ್ವಾ ಹೊಡೆದಂತಾಗುತ್ತದೆ. ಕ್ರಾಂತಿಕಾರಿ ಚೈತನ್ಯವು ಯಾವತ್ತೂ ಮಾನವೀಯ ಆತ್ಮವನ್ನು ಉನ್ನತಿಗೊಳಿಸಬೇಕು. ಈ ನಿರಂತರ ಚೈತನ್ಯ ಯಾತ್ರೆಯನ್ನು ತಡೆಯಲಿಕ್ಕಾಗಿ ಪ್ರತಿಗಾಮಿ ಶಕ್ತಿಗಳು ತಮ್ಮ ಶಕ್ತಿ ಸಂಚಯ ಮಾಡುವುದನ್ನು ತಡೆಯಲು ಸಾಧ್ಯವಾಗುತ್ತದೆ. ಹಳೆಯ ವ್ಯವಸ್ಥೆ ಯಾವತ್ತೂ ನಿರಂತರವಾಗಿ ಬದಲಾಗುತ್ತಾ ಹೊಸದಕ್ಕೆ ಜಾಗಮಾಡಿಕೊಡಬೇಕು. ಒಂದು ‘ಒಳ್ಳೆಯ’ ವ್ಯವಸ್ಥೆ ಪ್ರಪಂಚವನ್ನು ಭ್ರಷ್ಟಗೊಳಿಸದಂತೆ ತಡೆಯಲು ಈ ಚೈತನ್ಯ ಅತ್ಯಗತ್ಯ. ಈ ದೃಷ್ಟಿಯಿಂದಲೇ ನಾವು “ಕ್ರಾಂತಿ ಚಿರಾಯುವಾಗಲಿ” ಎಂಬ ಘೋಷಣೆ ಹಾಕುತ್ತೇವೆ.

ಈ ಚೈತನ್ಯವನ್ನೇ ನಮ್ಮ ಪ್ರೀತಿಯ ಗೌರಿ ಲಂಕೇಶ್ ಪ್ರೇರೇಪಿಸುತ್ತಿದ್ದುದು. ಭಗತ್ ಸಿಂಗ್ ಹೇಳಿದಂತೆ, ಅವರು ವ್ಯಕ್ತಿಯನ್ನು ಕೊಲ್ಲಬಹುದು; ಆದರೆ ವಿಚಾರಗಳು ಚಿರಂತನವಾಗಿರುತ್ತವೆ.

ಕ್ರಾಂತಿಕಾರಿ ವಿಚಾರಗಳ ಮೂಲಕ ಯುವಜನರು ಮತ್ತು ಜನಸಾಮಾನ್ಯರನ್ನು ಸಶಕ್ತಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಭಗತ್ ಸಿಂಗ್ ಅವರ ಈ ಮಾತುಗಳು ನಮಗೆ ದಾರಿ ತೋರಿಸಲಿ.

“ನಾಯಕರು ಲೋಕೋಪಕಾರಿ ಕಾರ್ಯಗಳನ್ನು ಮಾಡಬಹುದು. ಆದರೆ, ಅದು ಸಾಮಾಜಿಕ ಬದಲಾವಣೆಯನ್ನು ತರುವುದಿಲ್ಲ. ಸಾಮಾಜಿಕ ಬದಲಾವಣೆಗೆ ವೈಜ್ಞಾನಿಕತೆ ಕೇಂದ್ರಿತವಾದ, ಸಾಮಾಜಿಕವಾಗಿ ಚಲನಶೀಲವಾದ ಶಕ್ತಿಯನ್ನು ಹುಟ್ಟುಹಾಕುವ ಅಗತ್ಯವಿದೆ”. ಇದು ನಮ್ಮ ಮುಂದಿರುವ ಹಾದಿ. ಒಂದು ಚಾರಿತ್ರಿಕ ಕಾಲಘಟ್ಟದ ಜನರ ಅಗತ್ಯಗಳಿಗೆ ಪೂರಕವಾದ ಮಾನವ ಪ್ರಗತಿಯನ್ನು ವಿಚ್ಛಿದ್ರಕಾರಿ ಶಕ್ತಿಗಳು ವಿಳಂಬಿಸಬಹುದು; ಆದರೆ, ಮಾನವ ಪ್ರಗತಿಯನ್ನು ತಡೆಯಲು ಸಾಧ್ಯವಿಲ್ಲ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಆದುದರಿಂದ ನಾವು ದೃಢವಾಗಿ ಮುಂದುವರಿಯೋಣ ಮತ್ತು ನಮ್ಮ ವಿಚಾರಗಳಲ್ಲಿ ಸ್ಪಷ್ಟತೆ ತಂದುಕೊಳ್ಳೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...