Homeಚಳವಳಿಭಗತ್ ಸಿಂಗ್, ಗೌರಿ ಲಂಕೇಶ್ ವಿಚಾರಗಳು ಚಿರಂತನವಾಗಿರುತ್ತವೆ. : ಪ್ರೊ. ಜಗಮೋಹನ್ ಸಿಂಗ್

ಭಗತ್ ಸಿಂಗ್, ಗೌರಿ ಲಂಕೇಶ್ ವಿಚಾರಗಳು ಚಿರಂತನವಾಗಿರುತ್ತವೆ. : ಪ್ರೊ. ಜಗಮೋಹನ್ ಸಿಂಗ್

- Advertisement -
- Advertisement -

ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಜಗಮೋಹನ್ ಸಿಂಗ್, ಹುತಾತ್ಮ ಭಗತ್‍ಸಿಂಗ್‍ರ ಕುಟುಂಬಕ್ಕೆ ಸೇರಿದವರು. ಭಗತ್‍ಸಿಂಗರ ಚಿಂತನೆಗಳ ಪ್ರಸಾರಕ್ಕೆ ಬದ್ಧರಾಗಿದ್ದು, ಅವರ ಬಹುತೇಕ ಬರಹಗಳನ್ನು ಡಿಜಿಟೈಸ್ ಮಾಡಿದ್ದಾರೆ. ಪಂಜಾಬಿನ ಜಮೂರಿ ಅಧಿಕಾರಿ ಸಭಾ ಮತ್ತು ಪ್ರಜಾತಾಂತ್ರಿಕ ಹಕ್ಕುಗಳ ಸಂಘದ ಸ್ಥಾಪಕ ಸದಸ್ಯರಲ್ಲೊಬ್ಬರು. ಜನಪರ ಚಳವಳಿಗಳ ಸಕ್ರಿಯ ಸಂಗಾತಿ ಪ್ರೊ.ಜಗಮೋಹನ್ ಸಿಂಗ್. ಈ ಲೇಖನವನ್ನು ಕನ್ನಡಕ್ಕೆ ನಿಖಿಲ್ ಕೋಲ್ಪೆಯವರು ಅನುವಾದಿಸಿದ್ದಾರೆ.

ನಮಗಿಂದು ಅತ್ಯಂತ ಸವಾಲಿನ ಕಾಲ ಎದುರಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಬರ್ಬರ ಬಲಪ್ರಯೋಗವೇ ಅತ್ಯಂತ ಮುಖ್ಯ ಎನಿಸಿರುವ ಕಾಲವಿದು – ಸರಕಾರಿ ವ್ಯವಸ್ಥೆಯಲ್ಲಿ ಇರುವವರಿಗೂ, ಭಕ್ತರಿಗೂ. ಆದರೆ, ಇದು ಹೊಸದಾಗಿ ಚಿಂತಿಸಿ, ಹೊಸ ಚಿಂತನೆಗಳ ಜೊತೆಯಲ್ಲಿ ಧೈರ್ಯದಿಂದ ನಿಲ್ಲುವ ಅವಕಾಶ ಮತ್ತು ಶಕ್ತಿ ನೀಡುವಂತಹ ಸವಾಲು ಕೂಡಾ ಹೌದು. ಆದರೆ, ನಮಗೆ ರಾಷ್ಟ್ರವಾದ ಮತ್ತು ದೇಶಪ್ರೇಮದ ನಡುವಿನ ವ್ಯತ್ಯಾಸ ತಿಳಿಯುವ ಮೂಲಭೂತ ವಿಷಯದ ಬಗ್ಗೆ ಸ್ಪಷ್ಟತೆ ಬೇಕು.

ಈಗ ಬೋಧಿಸಲಾಗುತ್ತಿರುವ ರಾಷ್ಟ್ರವಾದವು ಆರ್ಥಿಕ ಬಿಕ್ಕಟ್ಟಿನ ಕಾಲದಲ್ಲಿ ಪಶ್ಚಿಮದಿಂದ ಎರವಲು ಪಡೆದದ್ದಾಗಿದೆ. ಈ ಪರಿಕಲ್ಪನೆಯನ್ನು ಜಪಾನ್, ಸ್ಪೇನ್, ಇಟಲಿ ಮತ್ತು ಜರ್ಮನಿಯಲ್ಲಿ ಅಧಿಕಾರ ಕಬಳಿಕೆಯ ಉದ್ದೇಶದಿಂದ ಹರಡಲಾಗಿತ್ತು. ಆದುದರಿಂದ, ಅಧಿಕಾರವೇ ಅದರ ಮೂಲ ಉದ್ದೇಶ. ಅದಕ್ಕೆ ತನ್ನೆಲ್ಲಾ ವೈಫಲ್ಯ ಮತ್ತು ಕೆಡುಕಿಗೆ ಹೊಣೆಮಾಡಲು ಒಂದು ಶತ್ರುವನ್ನು ಹುಟ್ಟುಹಾಕುವ ಅಗತ್ಯವಿರುತ್ತದೆ. ಅದೇ ಹೊತ್ತಿಗೆ ದೇಶಪ್ರೇಮ ಎಂಬುದು ಸಾಮಾನ್ಯವಾಗಿ ಪ್ರಜೆಗಳ ಸಮಸ್ಯೆಗಳನ್ನು ಪರಿಹರಿಸುವುದರ ಮೇಲೆ ಕೇಂದ್ರಿತವಾಗಿದೆ. ರಾಷ್ಟ್ರವಾದದ ಪ್ರೇರಕಶಕ್ತಿ ಎಂದರೆ ದ್ವೇಷ ಮತ್ತು ದೇಶಪ್ರೇಮದ ಪ್ರೇರಕಶಕ್ತಿ ಪ್ರೇಮ.

ಜಾರ್ಜ್ ಆರ್ವೆಲ್ ಗುರುತಿಸಿರುವಂತೆ, “ಋಣಾತ್ಮಕ ರಾಷ್ಟ್ರವಾದಿಯು ಇತಿಹಾಸವನ್ನು ಮಹಾನ್ ಶಕ್ತಿ ಘಟಕಗಳ ಕೊನೆಯಿಲ್ಲದ ಉನ್ನತಿ ಮತ್ತು ಅವನತಿಯನ್ನಾಗಿ ನೋಡುತ್ತಾನೆ ಮತ್ತು ಪ್ರತಿಯೊಂದು ಘಟನೆಯು ಅವನಿಗೆ ತನ್ನ ಪಕ್ಷವು ಉತ್ಕೃಷ್ಟ ಮತ್ತು ಎದುರಾಳಿಯು ನಿಕೃಷ್ಟ ಎಂದು ತೋರಿಸುತ್ತದೆ… ತನ್ನ ಪಕ್ಷವನ್ನು ಆಯ್ಕೆ ಮಾಡಿದ ಬಳಿಕ ಅವನು ಅದುವೇ ಬಲಶಾಲಿ ಎಂದು ತನಗೆ ತಾನೇ ಮನವರಿಕೆ ಮಾಡಿಕೊಳ್ಳುತ್ತಾನೆ. ರಾಷ್ಟ್ರವಾದವು ಆತ್ಮವಂಚನೆಯಿಂದ ಬಲಗೊಂಡಂತಹ ಅಧಿಕಾರದಾಹವಾಗಿರುತ್ತದೆ. ರಾಷ್ಟ್ರವಾದಿಯು ವಾಸ್ತವಕ್ಕೆ ಕುರುಡಾಗಿರುತ್ತಾನೆ. ಆತ ತನ್ನ ಪಕ್ಷವು ನಡೆಸಿದ ದೌರ್ಜನ್ಯವನ್ನು ನಿರಾಕರಿಸುತ್ತಾನೆ ಮತ್ತು ಅದರ ಕುರಿತು ಏನನ್ನೂ ಕೇಳಿಸಿಕೊಳ್ಳದೆ ಕಿವುಡಾಗಿರುವಂತಹ ಅಸಾಧಾರಣ ಸಾಮರ್ಥ್ಯವನ್ನೂ ಹೊಂದಿರುತ್ತಾನೆ. ಗತಕಾಲದಲ್ಲಿ ನಡೆದಿರುವುದನ್ನು ಬದಲಿಸಬಹುದು ಎಂಬ ನಂಬಿಕೆ ಅಥವಾ ಭ್ರಮೆಯಿಂದ ಆತ ಪೀಡಿತನಾಗಿರುತ್ತಾನೆ. ಘಟನೆಗಳು ಅವು ನಡೆಯಬೇಕಾದ ರೀತಿಯಲ್ಲಿಯೇ ನಡೆಯುವ ಭ್ರಮಾಲೋಕದಲ್ಲಿ ಆತ ಬದುಕುತ್ತಿರುತ್ತಾನೆ.” ಇಂದಿನ ಇಂಥಾ ಪರಿಸ್ಥಿತಿಯು ಎಂತಹ ಸವಾಲುಗಳನ್ನು ನಮ್ಮ ಮುಂದೆ ಒಡ್ಡುತ್ತಿದೆ ಎಂಬುದನ್ನು ನಮಗೆ ಸ್ಪಷ್ಟಪಡಿಸುವಂತಹ ಕೆಲವು ರೋಗಲಕ್ಷಣಗಳಿವು.

ಜಲಿಯನ್‍ವಾಲಾಬಾಗ್ ಹತ್ಯಾಕಾಂಡದ ನೂರನೆಯ ವರ್ಷದಲ್ಲಿ ನಾವು ಕೆಲವು ವಿಷಯಗಳನ್ನು ಮರೆಯದಿರೋಣ. ಅವೆಂದರೆ, ಮೈಕೆಲ್ ಓ’ಡ್ವಾಯರ್ ಮತ್ತು ಜನರಲ್ ಡಯರ್ ಬ್ರಿಟಿಷ್ ರಾಷ್ಟ್ರವಾದಿಗಳಾಗಿ ಕಾರ್ಯಾಚರಿಸಿದ್ದರೆ, ಭಾರತೀಯ ದೇಶಪ್ರೇಮಿಗಳು ಎಲ್ಲಾ ಜಾತಿ, ಧರ್ಮಗಳವರಿಗೆ ತೆರೆದಿರುವಂತಹ ಸಾರ್ವಜನಿಕ ಅಡುಗೆಮನೆ (ಲಂಗರ್)ಯನ್ನು ನಡೆಸಿ, ಆಹಾರ ವಸ್ತುಗಳ ಬೆಲೆ ಏರಿಕೆಯ ಸಮಸ್ಯೆಯನ್ನು ನಿವಾರಿಸುವ ಮೂಲಕ ದೇಶಪ್ರೇಮವನ್ನು ಗಟ್ಟಿಗೊಳಿಸಲು ಯತ್ನಿಸಿದ್ದರು. ಆ ಮೂಲಕ ಹಿಂದೂ ಮುಸ್ಲಿಂ ಏಕತೆಯನ್ನು ಸಾಧಿಸಿದ್ದರು – ಎಲ್ಲಿಯತನಕ ಎಂದರೆ, ಏಪ್ರಿಲ್ 9ರಂದು ಬಂದಿದ್ದ ರಾಮನವಮಿಯನ್ನು ಹಿಂದೂ-ಮುಸ್ಲಿಮರು ಜೊತೆಯಲ್ಲಿ ಆಚರಿಸಿದ್ದರು. ರಾಮನವಮಿ ಮೆರವಣಿಗೆಯ ನೇತೃತ್ವ ವಹಿಸಿದ್ದವರು ಡಾ. ಬಶೀರ್. ಈ ರೀತಿಯ ಒಗ್ಗಟ್ಟು ಬ್ರಿಟಿಷ್ ಆಡಳಿತಗಾರರಿಗೆ 1857ನ್ನು ನೆನಪಿಸಿತ್ತು ಮತ್ತು ಅದಕ್ಕಾಗಿಯೇ ಅವರು ಅಷ್ಟೊಂದು ಕ್ರೂರವಾಗಿ ವರ್ತಿಸಿದರು.

ಶಹೀದ್ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ತರು 1929ರ ಡಿಸೆಂಬರ್‍ನಲ್ಲಿ ‘ಮಾಡರ್ನ್ ರಿವ್ಯೂ’ ಪತ್ರಿಕಾ ಸಂಪಾದಕರಿಗೆ ಬರೆದ ಪತ್ರದಲ್ಲಿ ಏನು ಹೇಳಿದ್ದರೆಂದು ನೆನಪಿಸಿಕೊಳ್ಳೋಣ.

“ಕ್ರಾಂತಿ…ಒಂದು ಚೈತನ್ಯ, ಒಳ್ಳೆಯದರತ್ತ ಬದಲಾವಣೆಯ ತುಡಿತ. ಜನರು ಸಾಮಾನ್ಯವಾಗಿ ಸ್ಥಾಪಿತ ವ್ಯವಸ್ಥೆಗೆ ಒಗ್ಗಿಕೊಂಡುಬಿಡುತ್ತಾರೆ ಮತ್ತು ಬದಲಾವಣೆಯ ಕಲ್ಪನೆ ಮಾತ್ರಕ್ಕೇ ನಡುಗಲಾರಂಭಿಸುತ್ತಾರೆ. ಈ ಜಡಚೇತನವನ್ನೇ ಕ್ರಾಂತಿಕಾರಿ ಚೈತನ್ಯದಿಂದ ಬದಲಿಸಬೇಕಾಗಿರುವುದು. ಇಲ್ಲವಾದಲ್ಲಿ ಈ ಅವನತಿಯು ಮೇಲುಗೈ ಪಡೆಯುತ್ತದೆ ಮತ್ತು ಇಡೀ ಮಾನವೀಯತೆಯನ್ನೇ ಪ್ರತಿಗಾಮಿ ಶಕ್ತಿಗಳು ಅಡ್ಡದಾರಿಗೆಳೆಯುತ್ತವೆ. ಇಂತಹ ಪರಿಸ್ಥಿತಿಯು ಸ್ಥಗಿತತೆಗೆ ದಾರಿಮಾಡಿಕೊಟ್ಟು, ಮಾನವ ಪ್ರಗತಿಗೇ ಲಕ್ವಾ ಹೊಡೆದಂತಾಗುತ್ತದೆ. ಕ್ರಾಂತಿಕಾರಿ ಚೈತನ್ಯವು ಯಾವತ್ತೂ ಮಾನವೀಯ ಆತ್ಮವನ್ನು ಉನ್ನತಿಗೊಳಿಸಬೇಕು. ಈ ನಿರಂತರ ಚೈತನ್ಯ ಯಾತ್ರೆಯನ್ನು ತಡೆಯಲಿಕ್ಕಾಗಿ ಪ್ರತಿಗಾಮಿ ಶಕ್ತಿಗಳು ತಮ್ಮ ಶಕ್ತಿ ಸಂಚಯ ಮಾಡುವುದನ್ನು ತಡೆಯಲು ಸಾಧ್ಯವಾಗುತ್ತದೆ. ಹಳೆಯ ವ್ಯವಸ್ಥೆ ಯಾವತ್ತೂ ನಿರಂತರವಾಗಿ ಬದಲಾಗುತ್ತಾ ಹೊಸದಕ್ಕೆ ಜಾಗಮಾಡಿಕೊಡಬೇಕು. ಒಂದು ‘ಒಳ್ಳೆಯ’ ವ್ಯವಸ್ಥೆ ಪ್ರಪಂಚವನ್ನು ಭ್ರಷ್ಟಗೊಳಿಸದಂತೆ ತಡೆಯಲು ಈ ಚೈತನ್ಯ ಅತ್ಯಗತ್ಯ. ಈ ದೃಷ್ಟಿಯಿಂದಲೇ ನಾವು “ಕ್ರಾಂತಿ ಚಿರಾಯುವಾಗಲಿ” ಎಂಬ ಘೋಷಣೆ ಹಾಕುತ್ತೇವೆ.

ಈ ಚೈತನ್ಯವನ್ನೇ ನಮ್ಮ ಪ್ರೀತಿಯ ಗೌರಿ ಲಂಕೇಶ್ ಪ್ರೇರೇಪಿಸುತ್ತಿದ್ದುದು. ಭಗತ್ ಸಿಂಗ್ ಹೇಳಿದಂತೆ, ಅವರು ವ್ಯಕ್ತಿಯನ್ನು ಕೊಲ್ಲಬಹುದು; ಆದರೆ ವಿಚಾರಗಳು ಚಿರಂತನವಾಗಿರುತ್ತವೆ.

ಕ್ರಾಂತಿಕಾರಿ ವಿಚಾರಗಳ ಮೂಲಕ ಯುವಜನರು ಮತ್ತು ಜನಸಾಮಾನ್ಯರನ್ನು ಸಶಕ್ತಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಭಗತ್ ಸಿಂಗ್ ಅವರ ಈ ಮಾತುಗಳು ನಮಗೆ ದಾರಿ ತೋರಿಸಲಿ.

“ನಾಯಕರು ಲೋಕೋಪಕಾರಿ ಕಾರ್ಯಗಳನ್ನು ಮಾಡಬಹುದು. ಆದರೆ, ಅದು ಸಾಮಾಜಿಕ ಬದಲಾವಣೆಯನ್ನು ತರುವುದಿಲ್ಲ. ಸಾಮಾಜಿಕ ಬದಲಾವಣೆಗೆ ವೈಜ್ಞಾನಿಕತೆ ಕೇಂದ್ರಿತವಾದ, ಸಾಮಾಜಿಕವಾಗಿ ಚಲನಶೀಲವಾದ ಶಕ್ತಿಯನ್ನು ಹುಟ್ಟುಹಾಕುವ ಅಗತ್ಯವಿದೆ”. ಇದು ನಮ್ಮ ಮುಂದಿರುವ ಹಾದಿ. ಒಂದು ಚಾರಿತ್ರಿಕ ಕಾಲಘಟ್ಟದ ಜನರ ಅಗತ್ಯಗಳಿಗೆ ಪೂರಕವಾದ ಮಾನವ ಪ್ರಗತಿಯನ್ನು ವಿಚ್ಛಿದ್ರಕಾರಿ ಶಕ್ತಿಗಳು ವಿಳಂಬಿಸಬಹುದು; ಆದರೆ, ಮಾನವ ಪ್ರಗತಿಯನ್ನು ತಡೆಯಲು ಸಾಧ್ಯವಿಲ್ಲ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಆದುದರಿಂದ ನಾವು ದೃಢವಾಗಿ ಮುಂದುವರಿಯೋಣ ಮತ್ತು ನಮ್ಮ ವಿಚಾರಗಳಲ್ಲಿ ಸ್ಪಷ್ಟತೆ ತಂದುಕೊಳ್ಳೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...