Homeಆರೋಗ್ಯವಂಶವಾಹಿಗಳ (ಜೀನ್ಸ್) ತಿಳಿವಳಿಕೆ ಮೂಡಿಸುತ್ತಿರುವ ಹೊಸ ಸತ್ಯಗಳು: ಹರ್ಷಕುಮಾರ್ ಕುಗ್ವೆ

ವಂಶವಾಹಿಗಳ (ಜೀನ್ಸ್) ತಿಳಿವಳಿಕೆ ಮೂಡಿಸುತ್ತಿರುವ ಹೊಸ ಸತ್ಯಗಳು: ಹರ್ಷಕುಮಾರ್ ಕುಗ್ವೆ

ಈ ಡಿಎನ್‍ಎ ಸಂಶೋಧನೆಗಳು ಮನುಷ್ಯನಿಗೆ ಮನುಷ್ಯ ಗತಚರಿತ್ರೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಬುಡಮೇಲು ಮಾಡಬಲ್ಲವು. ಹಾಗೆಯೇ ಚರಿತ್ರೆಯ ಸರಿಯಾದ ತಿಳುವಳಿಕೆಗೆ ಅಧಿಕೃತತೆಯ ಮುದ್ರೆ ಒತ್ತಬಲ್ಲವು, ಇಲ್ಲವೇ ಮನುಕುಲ ಸಾಗಿಬಂದ ದಾರಿಯಲ್ಲಿ ಚಾರಿತ್ರಿಕ ಸತ್ಯಗಳನ್ನು ಕಂಡುಕೊಳ್ಳಲು ಕರಾರುವಕ್ಕಾದ ತಿಳಿವನ್ನು ಸಹ  ನಮಗೆ ನೀಡಬಲ್ಲವು.

- Advertisement -
- Advertisement -

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಎರಡು ಪ್ರತಿಷ್ಠಿತ ಅಂತರರಾಷ್ಟ್ರೀಯ ವಿಜ್ಞಾನ ಪತ್ರಿಕಗೆಳಾದ ‘ಸೈನ್ಸ್’ ಮತ್ತು ‘ಸೆಲ್’ ಪತ್ರಿಕೆಗಳು ಭಾರತೀಯರ ಪುರಾತನ ಇತಿಹಾಸಕ್ಕೆ ಸಂಬಂಧಿಸಿದ ಬಹುಮುಖ್ಯವಾದ ಎರಡು ವರದಿಗಳನ್ನು ಪ್ರಕಟಿಸಿದವು. ದುರದೃಷ್ಟವಶಾತ್ ಇದು ನಮ್ಮ ಮಾಧ್ಯಮಗಳಲ್ಲಿ ಮತ್ತು ಅಕಡೆಮಿಕ್ ವಲಯಗಳಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದುಕೊಳ್ಳಬೇಕಿತ್ತೋ ಅಷ್ಟನ್ನು ಪಡೆದುಕೊಳ್ಳಲೇ ಇಲ್ಲ. ಇದರಲ್ಲಿ ಹಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡಿರುವುದು ಮೇಲ್ನೋಟಕ್ಕೇ ತಿಳಿಯುತ್ತದೆ.

ಭಾರತದ ಪ್ರಾಚೀನ ಇತಿಹಾಸದ ಬಗ್ಗೆ ಇದುವರೆಗೂ ಇತಿಹಾಸಕಾರರಲ್ಲಿ ಒಮ್ಮತವಿಲ್ಲ. ಇಲ್ಲಿ ಎಡ-ಬಲ ದೃಷ್ಟಿಕೋನಗಳು ಇತಿಹಾಸ ರಚನೆಯ ಮೇಲೆ ಗಾಢವಾದ ಪ್ರಭಾವ ಹೊಂದಿವೆ. ಬಲಪಂಥೀಯ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ಬಹಳ ಆದ್ಯತೆಯ ಮೇಲೆ ಇತಿಹಾಸ ರಚನೆಯ ಅಂಗಗಳ ಮೇಲೆ ಕೆಂಗಣ್ಣು ಬೀರುತ್ತದೆ. ಹಿಂದೆ 2002-03ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಆರ್‌ಎಸ್‍ಎಸ್ ಸೂತ್ರಧಾರಿಗಳು ಉನ್ನತ ಮಟ್ಟದ ಇತಿಹಾಸದ ಅಂಗಗಳಲ್ಲಿದ್ದ, ತಮ್ಮ ದೃಷ್ಟಿಕೋನಕ್ಕೆ ಸರಿ ಹೊಂದದವರನ್ನೆಲ್ಲಾ ಬದಲಿಸಿದ್ದರು. ಈಗ ನರೇಂದ್ರ ಮೋದಿಯ ಅಧಿಕಾರದಲ್ಲಿ ಇನ್ನೂ ಹತ್ತು ಹೆಜ್ಜೆ ಮುಂದೆ ಹೋಗಿದ್ದಾರೆ. ವೇದಕಾಲದಲ್ಲಿ ಇತ್ತೆಂದು ಹೇಳಲಾಗುವ ‘ಸರಸ್ವತಿ’ ನದಿಯ ಕುರಿತು ಸಂಶೋಧನೆ ನಡೆಸಲು ಇವರು ಕೈಗೊಂಡಿರುವ ಕ್ರಮ ಇದಕ್ಕೆ ಇತ್ತೀಚಿನ ನಿದರ್ಶನ.

ಆದರೆ ಇದುವರೆಗೆ ಯಾವುದನ್ನು ಇತಿಹಾಸಕಾರರಿಂದ, ಪ್ರಾಕ್ತನಶಾತ್ರಜ್ಞರಿಂದ, ಭಾಷಾತಜ್ಞರಿಂದ ಮಾಡಲು ಸಾಧ್ಯವಿರಲಿಲ್ಲವೋ ಅದನ್ನು ಇಂದಿನ ತಳಿ ವಿಜ್ಞಾನ ಬಹುತೇಕ ಸಾಧಿಸಿದೆ ಎನ್ನಬಹುದು. ಅದು ಮನುಷ್ಯನ ಇತಿಹಾಸಕ್ಕೆ ವಿಜ್ಞಾನದ ಸ್ಪರ್ಶ ನೀಡಿಯಾದರೂ ಅಲ್ಲಗಳೆಯಲಾಗದಂತಹ ಮಾನವ ಇತಿಹಾಸವನ್ನು ನಿರೂಪಿಸುವ ಕೆಲಸ. ವಂಶವಾಹಿಗಳ ಸಂಶೋಧನೆಯಲ್ಲಿ ಇದು ಇಂದು ಸಾಧ್ಯವಾಗಿದೆ.

ವಂಶವಾಹಿಗಳ (ಜೀನ್ಸ್) ಕುರಿತ ಮನುಷ್ಯನ ತಿಳಿವಳಿಕೆಗೆ ಶತಮಾನಗಳ ಇತಿಹಾಸವಿದ್ದರೂ ಅವುಗಳಲ್ಲಿ ಅಡಗಿರುವ ಅಗಾಧ ಮಾಹಿತಿಯನ್ನು ಮನುಕುಲದ ಇತಿಹಾಸ ಶೋಧನೆಗೆ ಬಳಸುವ ಪ್ರಕ್ರಿಯೆ ಶುರುವಾಗಿದ್ದು ಮಾತ್ರ ತೀರಾ ಇತ್ತೀಚೆಗೆ. ನಮ್ಮ ಜೀವಕೋಶಗಳ ನ್ಯೂಕ್ಲಿಯಸ್ ಒಳಗಿನ ವರ್ಣತಂತುಗಳನ್ನು ರೂಪಿಸಿರುವ ನಾಲ್ಕು ರಾಸಾಯನಿಕ ನ್ಯೂಕ್ಲಿಯೋಟೈಡ್‍ಗಳಿಂದ (ಎ-ಸಿ-ಟಿ-ಜಿ- ಅಡೆನೈನ್, ಸೈಟೊಸಿನ್, ಥೈಮೈನ್, ಗುವಾನಿನ್) ರಚಿತವಾದ ಸುರುಳಿಯಾಕಾರದ ಡಿಎನ್‍ಎ ಎಳೆಗಳು ತಮ್ಮೊಳಗೆ ಲಕ್ಷಾಂತರ ವರ್ಷಗಳ ಇತಿಹಾಸವನ್ನೇ ಅಡಗಿಸಿಕೊಂಡಿರುತ್ತವೆ ಎಂಬುದು ವಿಸ್ಮಯವೆನಿಸಿದರೂ ಸತ್ಯ ಸಂಗತಿ. ಇದನ್ನು ಮನುಷ್ಯ ಸರಿಯಾಗಿ ಮನವರಿಕೆ ಮಾಡಿಕೊಂಡಿದ್ದು ಕೇವಲ ಎರಡು ದಶಕಗಳ ಈಚೆಗೆ ಎನ್ನಬಹುದು. 2001ರಲ್ಲಿ ವಿಜ್ಞಾನಿಗಳು ಮಾನವ ಜಿನೋಮ್ ಯೋಜನೆಯ (ಜಿನೋಮ್ ಎಂದರೆ ಒಂದು ಜೀವಿಯ ವಂಶವಾಹಿಗಳ ಒಟ್ಟು ಜೋಡಣೆ) ಮೂಲಕ ಅಧ್ಯಯನ ನಡೆಸಲು ತೊಡಗಿದಂದಿನಿಂದ ನಂತರದ ಈ ಎರಡು ದಶಕಗಳಲ್ಲಿ ಅಗಾಧ ಮಾಹಿತಿಯನ್ನು ತಳಿ ವಿಜ್ಞಾನಿಗಳು ಕಲೆಹಾಕಿದ್ದಾರೆ. ಕಳೆದ ಏಳೆಂಟು ವರ್ಷಗಳಲ್ಲಿ ಪ್ರಪಂಚದ ಬಹುತೇಕ ಎಲ್ಲಾ ಜನಾಂಗೀಯ ಹಾಗೂ ಪ್ರಾದೇಶಿಕ ಭಿನ್ನತೆಗಳ ಜನರ ಡಿಎನ್‍ಎ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಅವು ಒದಗಿಸಿರುವ ಮಾಹಿತಿ, ತಿಳುವಳಿಕೆಯನ್ನು ತಳಿ ವಿಜ್ಞಾನಿ ಡೇವಿಡ್ ರೀಚ್ ಡಿಎನ್‍ಎಯನ್ನು ಮನುಷ್ಯನ ಗತ ಇತಿಹಾಸದ ವಿವಿಧ ಹಂತಗಳ ಕುರಿತು ಮಾಹಿತಿಯನ್ನು ಒದಗಿಸುವ ‘ಪುರಾತನ ಡಿಎನ್‍ಎ’ ಎಂದೇ ಕರೆದಿದ್ದಾರೆ. ಈ ‘ಪುರಾತನ ಡಿಎನ್‍ಎ’ ನಮ್ಮ ಗತ ಇತಿಹಾಸವನ್ನು ಶೋಧಿಸಿ ಒರೆಗೆ ಹಚ್ಚಲು ಬೇಕಾದ ಅಮೂಲ್ಯ ಸಾಮಗ್ರಿಯನ್ನು ಒದಗಿಸುತ್ತದೆ. ಸದ್ಯದ ಮಟ್ಟಿಗೆ ಇಡೀ ಜಗತ್ತಿನಲ್ಲಿ ಮನುಷ್ಯನ ಚರಿತ್ರೆಯಲ್ಲಿ ನಡೆದಿರುವ ಎಲ್ಲಾ ವಲಸೆಗಳ ಇತಿಹಾಸವನ್ನು, ವಲಸೆಗಳ ಸ್ವರೂಪಗಳನ್ನು, ಜನಾಂಗೀಯ ಸಂಬಂಧಗಳನ್ನು ಸ್ಪಷ ರೂಪದಲ್ಲಿ ಮುಂದಿಡಲು ಈ ‘ಪುರಾತನ ಡಿಎನ್‍ಎ’ ಯಶಸ್ವಿಯಾಗಿದೆ ಎನ್ನಬಹುದು.

ಈ ಡಿಎನ್‍ಎ ಸಂಶೋಧನೆಗಳು ಮನುಷ್ಯನಿಗೆ ಮನುಷ್ಯ ಗತಚರಿತ್ರೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಬುಡಮೇಲು ಮಾಡಬಲ್ಲವು. ಹಾಗೆಯೇ ಚರಿತ್ರೆಯ ಸರಿಯಾದ ತಿಳುವಳಿಕೆಗೆ ಅಧಿಕೃತತೆಯ ಮುದ್ರೆ ಒತ್ತಬಲ್ಲವು, ಇಲ್ಲವೇ ಮನುಕುಲ ಸಾಗಿಬಂದ ದಾರಿಯಲ್ಲಿ ಚಾರಿತ್ರಿಕ ಸತ್ಯಗಳನ್ನು ಕಂಡುಕೊಳ್ಳಲು ಕರಾರುವಕ್ಕಾದ ತಿಳಿವನ್ನು ಸಹ  ನಮಗೆ ನೀಡಬಲ್ಲವು.

ಭಾರತದ ಮಟ್ಟಿಗೆ ಹೇಳುವುದಾದರೆ ಇದುವರೆಗೆ ನಡೆದಿರುವ ಪುರಾತನ ಡಿಎನ್‍ಎ ಸಂಶೋಧನೆಗಳು ಭಾರತದ ಪ್ರಾಚೀನ ಜನಾಂಗೀಯ ವಲಸೆಗಳ ಕುರಿತು, ಇಲ್ಲಿ ಸಂಭವಿಸಿರುವ ಜನಾಂಗೀಯ ಸಂಕರಗಳ ಕುರಿತು, ಯಾವಜನಾಂಗೀಯ, ಭಾಷಿಕ ಸಮುದಾಯಗಳು ಯಾರ ಮೇಲೆ ಯಾವ ಕಾಲಘಟ್ಟದಲ್ಲಿ ಆಕ್ರಮಣಕಾರಿಯಾಗಿ ವರ್ತಿಸಿದವು ಎಂಬ ಕುರಿತು, ಇಲ್ಲಿ ಜಾತಿಗಳು ಯಾವಾಗ, ಹೇಗೆ ಹುಟ್ಟಿಕೊಂಡವು ಎಂಬ ಕುರಿತು, ಈ ಜಾತಿಕಟ್ಟು ಕಟ್ಟಳೆಗಳು ಉಂಟು ಮಾಡಿರುವ ಜೈವಿಕ ಪರಿಣಾಮಗಳ ಕುರಿತು, ಹೀಗೆ ನಾನಾ ಚಾರಿತ್ರಿಕ ಸಂಗತಿಗಳ ಕುರಿತು ಬೆಳಕು ಚೆಲ್ಲಿವೆ. ಈ ಸಂಶೋಧನೆಗಳ ಬೆಳಕಿನಲ್ಲಿ ನಾವು ನಮ್ಮ ದೇಶದ ಚರಿತ್ರೆಯನ್ನು ಮತ್ತಷ್ಟು ನಿಖರವಾಗಿ ಕಟ್ಟಿಕೊಳ್ಳಬಹುದಾಗಿದೆ.

ಕಳೆದ ಒಂದು ದಶಕಕ್ಕೂ ಹೆಚ್ಚಿನ ಕಾಲಾವಧಿಯಲ್ಲಿ ನಡೆದಿರುವ ಭಾರತೀಯರ ಕುರಿತ ಡಿಎನ್‍ಎ ಸಂಶೋಧನಗೆಳನ್ನು ಆಳವಾಗಿ ಅಧ್ಯಯನ ನಡೆಸಿ ಅದರ ಸಾರವನ್ನು ಸೊಗಸಾಗಿ ನಿರೂಪಿಸಿದವರು ಟೋನಿ ಜೋಸೆಫ್. ಅವರುತಮ್ಮ ‘ಅರ್ಲಿ ಇಂಡಿಯನ್ಸ್” ಎಂಬ ಕೃತಿಯಲ್ಲಿ ಈ ತಳಿ ವಿಜ್ಞಾನ ಭಾರತೀಯರ ಇತಿಹಾಸದ ಕುರಿತು ಏನು ಹೇಳುತ್ತದೆ ಎಂಬುದನ್ನು ಸರಳವಾಗಿ ವಿವರಿಸಿದ್ದಾರೆ. ಹಾಗೆಯೇ ಈ ಎಲ್ಲಾ ಸಂಶೋಧನೆಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿರುವ ಡೇವಿಡ್ ರೀಚ್ ಬರೆದ “ಹೂ ವಿ ಆರ್ ಅಂಡ್ ಹೌ ವಿ ಗಾಟ್ ಹಿಯರ್’ ಎಂಬ ಕೃತಿಯಲ್ಲಿ ಇಡೀಜಗತ್ತಿನ ವಲಸೆಗಳ ಕುರಿತು ಡಿಎನ್‍ಎ ಸಂಶೋಧನೆ ಅರುಹಿದ ಮಾಹಿತಿಗಳನ್ನು ನೀಡಿದ್ದಾರೆ. ಇದರಲ್ಲಿ ಭಾರತದ ಪ್ರಾಚೀನ ಕಾಲದ ವಲಸೆಗಳ ಕುರಿತು ಸಹ ವಿವರವಾಗಿ ಒಂದು ಅಧ್ಯಾಯದಲ್ಲಿ ಬರೆದಿದ್ದಾರೆ.

ಈ ಪುಸ್ತಕ ಪ್ರಕಟವಾದ ನಂತರದಲ್ಲಿಯೇ ಆರಂಭದಲ್ಲಿ ಹೇಳಿದ ವರದಿಗಳು ಬಿಡುಗಡೆಯಾಗಿರುವುದು.

ಇಂದು ನಮ್ಮ ಸಮಾಜದಲ್ಲಿನ ಅನೇಕ ಸಂಕ್ಷೋಭೆಗಳಿಗೆ, ಜನಾಂಗೀಯ ಮತ್ತು ಧಾರ್ಮಿಕ ಹಿಂಸೆಗಳಿಗೆ ಭಾರತದ ‘ಚರಿತ್ರೆಯನ್ನು ತಿರುಚಿ, ವಿಕೃತಗೊಳಿಸಿ’ ಅವುಗಳನ್ನೇ ಸತ್ಯವೆಂದು ಜನರಿಗೆ ನಂಬಿಸಿರುವುದು ಮುಖ್ಯಕಾರಣ. ಬಲಪಂಥೀಯ ಶಕ್ತಿಗಳು ಚರಿತ್ರೆಯನ್ನು ಒಂದು ಹತಾರವಾಗಿ ಬಳಸಿಕೊಂಡ ಪರಿ ಇದು. ಹೀಗಾಗಿ ಜನರಿಗೆ ಚರಿತ್ರೆಯ ಕುರಿತ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ವಾಸ್ತವ ಚರಿತ್ರೆಯನ್ನು ಹೇಳುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಇತ್ತೀಚಿನ ಡಿಎನ್‍ಎ ಸಂಶೋಧನೆಗಳು ಹೆಚ್ಚಿನ ಬಲವನ್ನು ನೀಡಿವೆ. ಅವುಗಳನ್ನು ಜನರ ಬಳಿಗೆ ಹೇಗೆ ಕೊಂಡೊಯ್ಯುತ್ತೇವೆ ಎನ್ನುವುದೇ ಈಗ ನಮ್ಮ ಮುಂದಿರುವ ಪ್ರಶ್ನೆ.

(ಮುಂದಿನ ವಾರದ ನ್ಯಾಯಪಥ ಸಂಚಿಕೆಯಲ್ಲಿ ನಿರೀಕ್ಷಿಸಿ: ಡೇವಿಡ್ ರೀಚ್ ಅವರ ಜೊತೆಗೆ ಗಣೇಶ್ ದೇವಿ ಸಂವಾದ)


ಇದನ್ನು ಓದಿ: ದಿನವೊಂದರಲ್ಲಿ 62,538 ಪ್ರಕರಣಗಳ ವರದಿ: 20 ಲಕ್ಷ ದಾಟಿದ ಭಾರತ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...