Homeಆರೋಗ್ಯವಂಶವಾಹಿಗಳ (ಜೀನ್ಸ್) ತಿಳಿವಳಿಕೆ ಮೂಡಿಸುತ್ತಿರುವ ಹೊಸ ಸತ್ಯಗಳು: ಹರ್ಷಕುಮಾರ್ ಕುಗ್ವೆ

ವಂಶವಾಹಿಗಳ (ಜೀನ್ಸ್) ತಿಳಿವಳಿಕೆ ಮೂಡಿಸುತ್ತಿರುವ ಹೊಸ ಸತ್ಯಗಳು: ಹರ್ಷಕುಮಾರ್ ಕುಗ್ವೆ

ಈ ಡಿಎನ್‍ಎ ಸಂಶೋಧನೆಗಳು ಮನುಷ್ಯನಿಗೆ ಮನುಷ್ಯ ಗತಚರಿತ್ರೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಬುಡಮೇಲು ಮಾಡಬಲ್ಲವು. ಹಾಗೆಯೇ ಚರಿತ್ರೆಯ ಸರಿಯಾದ ತಿಳುವಳಿಕೆಗೆ ಅಧಿಕೃತತೆಯ ಮುದ್ರೆ ಒತ್ತಬಲ್ಲವು, ಇಲ್ಲವೇ ಮನುಕುಲ ಸಾಗಿಬಂದ ದಾರಿಯಲ್ಲಿ ಚಾರಿತ್ರಿಕ ಸತ್ಯಗಳನ್ನು ಕಂಡುಕೊಳ್ಳಲು ಕರಾರುವಕ್ಕಾದ ತಿಳಿವನ್ನು ಸಹ  ನಮಗೆ ನೀಡಬಲ್ಲವು.

- Advertisement -
- Advertisement -

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಎರಡು ಪ್ರತಿಷ್ಠಿತ ಅಂತರರಾಷ್ಟ್ರೀಯ ವಿಜ್ಞಾನ ಪತ್ರಿಕಗೆಳಾದ ‘ಸೈನ್ಸ್’ ಮತ್ತು ‘ಸೆಲ್’ ಪತ್ರಿಕೆಗಳು ಭಾರತೀಯರ ಪುರಾತನ ಇತಿಹಾಸಕ್ಕೆ ಸಂಬಂಧಿಸಿದ ಬಹುಮುಖ್ಯವಾದ ಎರಡು ವರದಿಗಳನ್ನು ಪ್ರಕಟಿಸಿದವು. ದುರದೃಷ್ಟವಶಾತ್ ಇದು ನಮ್ಮ ಮಾಧ್ಯಮಗಳಲ್ಲಿ ಮತ್ತು ಅಕಡೆಮಿಕ್ ವಲಯಗಳಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದುಕೊಳ್ಳಬೇಕಿತ್ತೋ ಅಷ್ಟನ್ನು ಪಡೆದುಕೊಳ್ಳಲೇ ಇಲ್ಲ. ಇದರಲ್ಲಿ ಹಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡಿರುವುದು ಮೇಲ್ನೋಟಕ್ಕೇ ತಿಳಿಯುತ್ತದೆ.

ಭಾರತದ ಪ್ರಾಚೀನ ಇತಿಹಾಸದ ಬಗ್ಗೆ ಇದುವರೆಗೂ ಇತಿಹಾಸಕಾರರಲ್ಲಿ ಒಮ್ಮತವಿಲ್ಲ. ಇಲ್ಲಿ ಎಡ-ಬಲ ದೃಷ್ಟಿಕೋನಗಳು ಇತಿಹಾಸ ರಚನೆಯ ಮೇಲೆ ಗಾಢವಾದ ಪ್ರಭಾವ ಹೊಂದಿವೆ. ಬಲಪಂಥೀಯ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ಬಹಳ ಆದ್ಯತೆಯ ಮೇಲೆ ಇತಿಹಾಸ ರಚನೆಯ ಅಂಗಗಳ ಮೇಲೆ ಕೆಂಗಣ್ಣು ಬೀರುತ್ತದೆ. ಹಿಂದೆ 2002-03ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಆರ್‌ಎಸ್‍ಎಸ್ ಸೂತ್ರಧಾರಿಗಳು ಉನ್ನತ ಮಟ್ಟದ ಇತಿಹಾಸದ ಅಂಗಗಳಲ್ಲಿದ್ದ, ತಮ್ಮ ದೃಷ್ಟಿಕೋನಕ್ಕೆ ಸರಿ ಹೊಂದದವರನ್ನೆಲ್ಲಾ ಬದಲಿಸಿದ್ದರು. ಈಗ ನರೇಂದ್ರ ಮೋದಿಯ ಅಧಿಕಾರದಲ್ಲಿ ಇನ್ನೂ ಹತ್ತು ಹೆಜ್ಜೆ ಮುಂದೆ ಹೋಗಿದ್ದಾರೆ. ವೇದಕಾಲದಲ್ಲಿ ಇತ್ತೆಂದು ಹೇಳಲಾಗುವ ‘ಸರಸ್ವತಿ’ ನದಿಯ ಕುರಿತು ಸಂಶೋಧನೆ ನಡೆಸಲು ಇವರು ಕೈಗೊಂಡಿರುವ ಕ್ರಮ ಇದಕ್ಕೆ ಇತ್ತೀಚಿನ ನಿದರ್ಶನ.

ಆದರೆ ಇದುವರೆಗೆ ಯಾವುದನ್ನು ಇತಿಹಾಸಕಾರರಿಂದ, ಪ್ರಾಕ್ತನಶಾತ್ರಜ್ಞರಿಂದ, ಭಾಷಾತಜ್ಞರಿಂದ ಮಾಡಲು ಸಾಧ್ಯವಿರಲಿಲ್ಲವೋ ಅದನ್ನು ಇಂದಿನ ತಳಿ ವಿಜ್ಞಾನ ಬಹುತೇಕ ಸಾಧಿಸಿದೆ ಎನ್ನಬಹುದು. ಅದು ಮನುಷ್ಯನ ಇತಿಹಾಸಕ್ಕೆ ವಿಜ್ಞಾನದ ಸ್ಪರ್ಶ ನೀಡಿಯಾದರೂ ಅಲ್ಲಗಳೆಯಲಾಗದಂತಹ ಮಾನವ ಇತಿಹಾಸವನ್ನು ನಿರೂಪಿಸುವ ಕೆಲಸ. ವಂಶವಾಹಿಗಳ ಸಂಶೋಧನೆಯಲ್ಲಿ ಇದು ಇಂದು ಸಾಧ್ಯವಾಗಿದೆ.

ವಂಶವಾಹಿಗಳ (ಜೀನ್ಸ್) ಕುರಿತ ಮನುಷ್ಯನ ತಿಳಿವಳಿಕೆಗೆ ಶತಮಾನಗಳ ಇತಿಹಾಸವಿದ್ದರೂ ಅವುಗಳಲ್ಲಿ ಅಡಗಿರುವ ಅಗಾಧ ಮಾಹಿತಿಯನ್ನು ಮನುಕುಲದ ಇತಿಹಾಸ ಶೋಧನೆಗೆ ಬಳಸುವ ಪ್ರಕ್ರಿಯೆ ಶುರುವಾಗಿದ್ದು ಮಾತ್ರ ತೀರಾ ಇತ್ತೀಚೆಗೆ. ನಮ್ಮ ಜೀವಕೋಶಗಳ ನ್ಯೂಕ್ಲಿಯಸ್ ಒಳಗಿನ ವರ್ಣತಂತುಗಳನ್ನು ರೂಪಿಸಿರುವ ನಾಲ್ಕು ರಾಸಾಯನಿಕ ನ್ಯೂಕ್ಲಿಯೋಟೈಡ್‍ಗಳಿಂದ (ಎ-ಸಿ-ಟಿ-ಜಿ- ಅಡೆನೈನ್, ಸೈಟೊಸಿನ್, ಥೈಮೈನ್, ಗುವಾನಿನ್) ರಚಿತವಾದ ಸುರುಳಿಯಾಕಾರದ ಡಿಎನ್‍ಎ ಎಳೆಗಳು ತಮ್ಮೊಳಗೆ ಲಕ್ಷಾಂತರ ವರ್ಷಗಳ ಇತಿಹಾಸವನ್ನೇ ಅಡಗಿಸಿಕೊಂಡಿರುತ್ತವೆ ಎಂಬುದು ವಿಸ್ಮಯವೆನಿಸಿದರೂ ಸತ್ಯ ಸಂಗತಿ. ಇದನ್ನು ಮನುಷ್ಯ ಸರಿಯಾಗಿ ಮನವರಿಕೆ ಮಾಡಿಕೊಂಡಿದ್ದು ಕೇವಲ ಎರಡು ದಶಕಗಳ ಈಚೆಗೆ ಎನ್ನಬಹುದು. 2001ರಲ್ಲಿ ವಿಜ್ಞಾನಿಗಳು ಮಾನವ ಜಿನೋಮ್ ಯೋಜನೆಯ (ಜಿನೋಮ್ ಎಂದರೆ ಒಂದು ಜೀವಿಯ ವಂಶವಾಹಿಗಳ ಒಟ್ಟು ಜೋಡಣೆ) ಮೂಲಕ ಅಧ್ಯಯನ ನಡೆಸಲು ತೊಡಗಿದಂದಿನಿಂದ ನಂತರದ ಈ ಎರಡು ದಶಕಗಳಲ್ಲಿ ಅಗಾಧ ಮಾಹಿತಿಯನ್ನು ತಳಿ ವಿಜ್ಞಾನಿಗಳು ಕಲೆಹಾಕಿದ್ದಾರೆ. ಕಳೆದ ಏಳೆಂಟು ವರ್ಷಗಳಲ್ಲಿ ಪ್ರಪಂಚದ ಬಹುತೇಕ ಎಲ್ಲಾ ಜನಾಂಗೀಯ ಹಾಗೂ ಪ್ರಾದೇಶಿಕ ಭಿನ್ನತೆಗಳ ಜನರ ಡಿಎನ್‍ಎ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಅವು ಒದಗಿಸಿರುವ ಮಾಹಿತಿ, ತಿಳುವಳಿಕೆಯನ್ನು ತಳಿ ವಿಜ್ಞಾನಿ ಡೇವಿಡ್ ರೀಚ್ ಡಿಎನ್‍ಎಯನ್ನು ಮನುಷ್ಯನ ಗತ ಇತಿಹಾಸದ ವಿವಿಧ ಹಂತಗಳ ಕುರಿತು ಮಾಹಿತಿಯನ್ನು ಒದಗಿಸುವ ‘ಪುರಾತನ ಡಿಎನ್‍ಎ’ ಎಂದೇ ಕರೆದಿದ್ದಾರೆ. ಈ ‘ಪುರಾತನ ಡಿಎನ್‍ಎ’ ನಮ್ಮ ಗತ ಇತಿಹಾಸವನ್ನು ಶೋಧಿಸಿ ಒರೆಗೆ ಹಚ್ಚಲು ಬೇಕಾದ ಅಮೂಲ್ಯ ಸಾಮಗ್ರಿಯನ್ನು ಒದಗಿಸುತ್ತದೆ. ಸದ್ಯದ ಮಟ್ಟಿಗೆ ಇಡೀ ಜಗತ್ತಿನಲ್ಲಿ ಮನುಷ್ಯನ ಚರಿತ್ರೆಯಲ್ಲಿ ನಡೆದಿರುವ ಎಲ್ಲಾ ವಲಸೆಗಳ ಇತಿಹಾಸವನ್ನು, ವಲಸೆಗಳ ಸ್ವರೂಪಗಳನ್ನು, ಜನಾಂಗೀಯ ಸಂಬಂಧಗಳನ್ನು ಸ್ಪಷ ರೂಪದಲ್ಲಿ ಮುಂದಿಡಲು ಈ ‘ಪುರಾತನ ಡಿಎನ್‍ಎ’ ಯಶಸ್ವಿಯಾಗಿದೆ ಎನ್ನಬಹುದು.

ಈ ಡಿಎನ್‍ಎ ಸಂಶೋಧನೆಗಳು ಮನುಷ್ಯನಿಗೆ ಮನುಷ್ಯ ಗತಚರಿತ್ರೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಬುಡಮೇಲು ಮಾಡಬಲ್ಲವು. ಹಾಗೆಯೇ ಚರಿತ್ರೆಯ ಸರಿಯಾದ ತಿಳುವಳಿಕೆಗೆ ಅಧಿಕೃತತೆಯ ಮುದ್ರೆ ಒತ್ತಬಲ್ಲವು, ಇಲ್ಲವೇ ಮನುಕುಲ ಸಾಗಿಬಂದ ದಾರಿಯಲ್ಲಿ ಚಾರಿತ್ರಿಕ ಸತ್ಯಗಳನ್ನು ಕಂಡುಕೊಳ್ಳಲು ಕರಾರುವಕ್ಕಾದ ತಿಳಿವನ್ನು ಸಹ  ನಮಗೆ ನೀಡಬಲ್ಲವು.

ಭಾರತದ ಮಟ್ಟಿಗೆ ಹೇಳುವುದಾದರೆ ಇದುವರೆಗೆ ನಡೆದಿರುವ ಪುರಾತನ ಡಿಎನ್‍ಎ ಸಂಶೋಧನೆಗಳು ಭಾರತದ ಪ್ರಾಚೀನ ಜನಾಂಗೀಯ ವಲಸೆಗಳ ಕುರಿತು, ಇಲ್ಲಿ ಸಂಭವಿಸಿರುವ ಜನಾಂಗೀಯ ಸಂಕರಗಳ ಕುರಿತು, ಯಾವಜನಾಂಗೀಯ, ಭಾಷಿಕ ಸಮುದಾಯಗಳು ಯಾರ ಮೇಲೆ ಯಾವ ಕಾಲಘಟ್ಟದಲ್ಲಿ ಆಕ್ರಮಣಕಾರಿಯಾಗಿ ವರ್ತಿಸಿದವು ಎಂಬ ಕುರಿತು, ಇಲ್ಲಿ ಜಾತಿಗಳು ಯಾವಾಗ, ಹೇಗೆ ಹುಟ್ಟಿಕೊಂಡವು ಎಂಬ ಕುರಿತು, ಈ ಜಾತಿಕಟ್ಟು ಕಟ್ಟಳೆಗಳು ಉಂಟು ಮಾಡಿರುವ ಜೈವಿಕ ಪರಿಣಾಮಗಳ ಕುರಿತು, ಹೀಗೆ ನಾನಾ ಚಾರಿತ್ರಿಕ ಸಂಗತಿಗಳ ಕುರಿತು ಬೆಳಕು ಚೆಲ್ಲಿವೆ. ಈ ಸಂಶೋಧನೆಗಳ ಬೆಳಕಿನಲ್ಲಿ ನಾವು ನಮ್ಮ ದೇಶದ ಚರಿತ್ರೆಯನ್ನು ಮತ್ತಷ್ಟು ನಿಖರವಾಗಿ ಕಟ್ಟಿಕೊಳ್ಳಬಹುದಾಗಿದೆ.

ಕಳೆದ ಒಂದು ದಶಕಕ್ಕೂ ಹೆಚ್ಚಿನ ಕಾಲಾವಧಿಯಲ್ಲಿ ನಡೆದಿರುವ ಭಾರತೀಯರ ಕುರಿತ ಡಿಎನ್‍ಎ ಸಂಶೋಧನಗೆಳನ್ನು ಆಳವಾಗಿ ಅಧ್ಯಯನ ನಡೆಸಿ ಅದರ ಸಾರವನ್ನು ಸೊಗಸಾಗಿ ನಿರೂಪಿಸಿದವರು ಟೋನಿ ಜೋಸೆಫ್. ಅವರುತಮ್ಮ ‘ಅರ್ಲಿ ಇಂಡಿಯನ್ಸ್” ಎಂಬ ಕೃತಿಯಲ್ಲಿ ಈ ತಳಿ ವಿಜ್ಞಾನ ಭಾರತೀಯರ ಇತಿಹಾಸದ ಕುರಿತು ಏನು ಹೇಳುತ್ತದೆ ಎಂಬುದನ್ನು ಸರಳವಾಗಿ ವಿವರಿಸಿದ್ದಾರೆ. ಹಾಗೆಯೇ ಈ ಎಲ್ಲಾ ಸಂಶೋಧನೆಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿರುವ ಡೇವಿಡ್ ರೀಚ್ ಬರೆದ “ಹೂ ವಿ ಆರ್ ಅಂಡ್ ಹೌ ವಿ ಗಾಟ್ ಹಿಯರ್’ ಎಂಬ ಕೃತಿಯಲ್ಲಿ ಇಡೀಜಗತ್ತಿನ ವಲಸೆಗಳ ಕುರಿತು ಡಿಎನ್‍ಎ ಸಂಶೋಧನೆ ಅರುಹಿದ ಮಾಹಿತಿಗಳನ್ನು ನೀಡಿದ್ದಾರೆ. ಇದರಲ್ಲಿ ಭಾರತದ ಪ್ರಾಚೀನ ಕಾಲದ ವಲಸೆಗಳ ಕುರಿತು ಸಹ ವಿವರವಾಗಿ ಒಂದು ಅಧ್ಯಾಯದಲ್ಲಿ ಬರೆದಿದ್ದಾರೆ.

ಈ ಪುಸ್ತಕ ಪ್ರಕಟವಾದ ನಂತರದಲ್ಲಿಯೇ ಆರಂಭದಲ್ಲಿ ಹೇಳಿದ ವರದಿಗಳು ಬಿಡುಗಡೆಯಾಗಿರುವುದು.

ಇಂದು ನಮ್ಮ ಸಮಾಜದಲ್ಲಿನ ಅನೇಕ ಸಂಕ್ಷೋಭೆಗಳಿಗೆ, ಜನಾಂಗೀಯ ಮತ್ತು ಧಾರ್ಮಿಕ ಹಿಂಸೆಗಳಿಗೆ ಭಾರತದ ‘ಚರಿತ್ರೆಯನ್ನು ತಿರುಚಿ, ವಿಕೃತಗೊಳಿಸಿ’ ಅವುಗಳನ್ನೇ ಸತ್ಯವೆಂದು ಜನರಿಗೆ ನಂಬಿಸಿರುವುದು ಮುಖ್ಯಕಾರಣ. ಬಲಪಂಥೀಯ ಶಕ್ತಿಗಳು ಚರಿತ್ರೆಯನ್ನು ಒಂದು ಹತಾರವಾಗಿ ಬಳಸಿಕೊಂಡ ಪರಿ ಇದು. ಹೀಗಾಗಿ ಜನರಿಗೆ ಚರಿತ್ರೆಯ ಕುರಿತ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ವಾಸ್ತವ ಚರಿತ್ರೆಯನ್ನು ಹೇಳುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಇತ್ತೀಚಿನ ಡಿಎನ್‍ಎ ಸಂಶೋಧನೆಗಳು ಹೆಚ್ಚಿನ ಬಲವನ್ನು ನೀಡಿವೆ. ಅವುಗಳನ್ನು ಜನರ ಬಳಿಗೆ ಹೇಗೆ ಕೊಂಡೊಯ್ಯುತ್ತೇವೆ ಎನ್ನುವುದೇ ಈಗ ನಮ್ಮ ಮುಂದಿರುವ ಪ್ರಶ್ನೆ.

(ಮುಂದಿನ ವಾರದ ನ್ಯಾಯಪಥ ಸಂಚಿಕೆಯಲ್ಲಿ ನಿರೀಕ್ಷಿಸಿ: ಡೇವಿಡ್ ರೀಚ್ ಅವರ ಜೊತೆಗೆ ಗಣೇಶ್ ದೇವಿ ಸಂವಾದ)


ಇದನ್ನು ಓದಿ: ದಿನವೊಂದರಲ್ಲಿ 62,538 ಪ್ರಕರಣಗಳ ವರದಿ: 20 ಲಕ್ಷ ದಾಟಿದ ಭಾರತ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...