Homeಆರೋಗ್ಯವಂಶವಾಹಿಗಳ (ಜೀನ್ಸ್) ತಿಳಿವಳಿಕೆ ಮೂಡಿಸುತ್ತಿರುವ ಹೊಸ ಸತ್ಯಗಳು: ಹರ್ಷಕುಮಾರ್ ಕುಗ್ವೆ

ವಂಶವಾಹಿಗಳ (ಜೀನ್ಸ್) ತಿಳಿವಳಿಕೆ ಮೂಡಿಸುತ್ತಿರುವ ಹೊಸ ಸತ್ಯಗಳು: ಹರ್ಷಕುಮಾರ್ ಕುಗ್ವೆ

ಈ ಡಿಎನ್‍ಎ ಸಂಶೋಧನೆಗಳು ಮನುಷ್ಯನಿಗೆ ಮನುಷ್ಯ ಗತಚರಿತ್ರೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಬುಡಮೇಲು ಮಾಡಬಲ್ಲವು. ಹಾಗೆಯೇ ಚರಿತ್ರೆಯ ಸರಿಯಾದ ತಿಳುವಳಿಕೆಗೆ ಅಧಿಕೃತತೆಯ ಮುದ್ರೆ ಒತ್ತಬಲ್ಲವು, ಇಲ್ಲವೇ ಮನುಕುಲ ಸಾಗಿಬಂದ ದಾರಿಯಲ್ಲಿ ಚಾರಿತ್ರಿಕ ಸತ್ಯಗಳನ್ನು ಕಂಡುಕೊಳ್ಳಲು ಕರಾರುವಕ್ಕಾದ ತಿಳಿವನ್ನು ಸಹ  ನಮಗೆ ನೀಡಬಲ್ಲವು.

- Advertisement -
- Advertisement -

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಎರಡು ಪ್ರತಿಷ್ಠಿತ ಅಂತರರಾಷ್ಟ್ರೀಯ ವಿಜ್ಞಾನ ಪತ್ರಿಕಗೆಳಾದ ‘ಸೈನ್ಸ್’ ಮತ್ತು ‘ಸೆಲ್’ ಪತ್ರಿಕೆಗಳು ಭಾರತೀಯರ ಪುರಾತನ ಇತಿಹಾಸಕ್ಕೆ ಸಂಬಂಧಿಸಿದ ಬಹುಮುಖ್ಯವಾದ ಎರಡು ವರದಿಗಳನ್ನು ಪ್ರಕಟಿಸಿದವು. ದುರದೃಷ್ಟವಶಾತ್ ಇದು ನಮ್ಮ ಮಾಧ್ಯಮಗಳಲ್ಲಿ ಮತ್ತು ಅಕಡೆಮಿಕ್ ವಲಯಗಳಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದುಕೊಳ್ಳಬೇಕಿತ್ತೋ ಅಷ್ಟನ್ನು ಪಡೆದುಕೊಳ್ಳಲೇ ಇಲ್ಲ. ಇದರಲ್ಲಿ ಹಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡಿರುವುದು ಮೇಲ್ನೋಟಕ್ಕೇ ತಿಳಿಯುತ್ತದೆ.

ಭಾರತದ ಪ್ರಾಚೀನ ಇತಿಹಾಸದ ಬಗ್ಗೆ ಇದುವರೆಗೂ ಇತಿಹಾಸಕಾರರಲ್ಲಿ ಒಮ್ಮತವಿಲ್ಲ. ಇಲ್ಲಿ ಎಡ-ಬಲ ದೃಷ್ಟಿಕೋನಗಳು ಇತಿಹಾಸ ರಚನೆಯ ಮೇಲೆ ಗಾಢವಾದ ಪ್ರಭಾವ ಹೊಂದಿವೆ. ಬಲಪಂಥೀಯ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ಬಹಳ ಆದ್ಯತೆಯ ಮೇಲೆ ಇತಿಹಾಸ ರಚನೆಯ ಅಂಗಗಳ ಮೇಲೆ ಕೆಂಗಣ್ಣು ಬೀರುತ್ತದೆ. ಹಿಂದೆ 2002-03ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಆರ್‌ಎಸ್‍ಎಸ್ ಸೂತ್ರಧಾರಿಗಳು ಉನ್ನತ ಮಟ್ಟದ ಇತಿಹಾಸದ ಅಂಗಗಳಲ್ಲಿದ್ದ, ತಮ್ಮ ದೃಷ್ಟಿಕೋನಕ್ಕೆ ಸರಿ ಹೊಂದದವರನ್ನೆಲ್ಲಾ ಬದಲಿಸಿದ್ದರು. ಈಗ ನರೇಂದ್ರ ಮೋದಿಯ ಅಧಿಕಾರದಲ್ಲಿ ಇನ್ನೂ ಹತ್ತು ಹೆಜ್ಜೆ ಮುಂದೆ ಹೋಗಿದ್ದಾರೆ. ವೇದಕಾಲದಲ್ಲಿ ಇತ್ತೆಂದು ಹೇಳಲಾಗುವ ‘ಸರಸ್ವತಿ’ ನದಿಯ ಕುರಿತು ಸಂಶೋಧನೆ ನಡೆಸಲು ಇವರು ಕೈಗೊಂಡಿರುವ ಕ್ರಮ ಇದಕ್ಕೆ ಇತ್ತೀಚಿನ ನಿದರ್ಶನ.

ಆದರೆ ಇದುವರೆಗೆ ಯಾವುದನ್ನು ಇತಿಹಾಸಕಾರರಿಂದ, ಪ್ರಾಕ್ತನಶಾತ್ರಜ್ಞರಿಂದ, ಭಾಷಾತಜ್ಞರಿಂದ ಮಾಡಲು ಸಾಧ್ಯವಿರಲಿಲ್ಲವೋ ಅದನ್ನು ಇಂದಿನ ತಳಿ ವಿಜ್ಞಾನ ಬಹುತೇಕ ಸಾಧಿಸಿದೆ ಎನ್ನಬಹುದು. ಅದು ಮನುಷ್ಯನ ಇತಿಹಾಸಕ್ಕೆ ವಿಜ್ಞಾನದ ಸ್ಪರ್ಶ ನೀಡಿಯಾದರೂ ಅಲ್ಲಗಳೆಯಲಾಗದಂತಹ ಮಾನವ ಇತಿಹಾಸವನ್ನು ನಿರೂಪಿಸುವ ಕೆಲಸ. ವಂಶವಾಹಿಗಳ ಸಂಶೋಧನೆಯಲ್ಲಿ ಇದು ಇಂದು ಸಾಧ್ಯವಾಗಿದೆ.

ವಂಶವಾಹಿಗಳ (ಜೀನ್ಸ್) ಕುರಿತ ಮನುಷ್ಯನ ತಿಳಿವಳಿಕೆಗೆ ಶತಮಾನಗಳ ಇತಿಹಾಸವಿದ್ದರೂ ಅವುಗಳಲ್ಲಿ ಅಡಗಿರುವ ಅಗಾಧ ಮಾಹಿತಿಯನ್ನು ಮನುಕುಲದ ಇತಿಹಾಸ ಶೋಧನೆಗೆ ಬಳಸುವ ಪ್ರಕ್ರಿಯೆ ಶುರುವಾಗಿದ್ದು ಮಾತ್ರ ತೀರಾ ಇತ್ತೀಚೆಗೆ. ನಮ್ಮ ಜೀವಕೋಶಗಳ ನ್ಯೂಕ್ಲಿಯಸ್ ಒಳಗಿನ ವರ್ಣತಂತುಗಳನ್ನು ರೂಪಿಸಿರುವ ನಾಲ್ಕು ರಾಸಾಯನಿಕ ನ್ಯೂಕ್ಲಿಯೋಟೈಡ್‍ಗಳಿಂದ (ಎ-ಸಿ-ಟಿ-ಜಿ- ಅಡೆನೈನ್, ಸೈಟೊಸಿನ್, ಥೈಮೈನ್, ಗುವಾನಿನ್) ರಚಿತವಾದ ಸುರುಳಿಯಾಕಾರದ ಡಿಎನ್‍ಎ ಎಳೆಗಳು ತಮ್ಮೊಳಗೆ ಲಕ್ಷಾಂತರ ವರ್ಷಗಳ ಇತಿಹಾಸವನ್ನೇ ಅಡಗಿಸಿಕೊಂಡಿರುತ್ತವೆ ಎಂಬುದು ವಿಸ್ಮಯವೆನಿಸಿದರೂ ಸತ್ಯ ಸಂಗತಿ. ಇದನ್ನು ಮನುಷ್ಯ ಸರಿಯಾಗಿ ಮನವರಿಕೆ ಮಾಡಿಕೊಂಡಿದ್ದು ಕೇವಲ ಎರಡು ದಶಕಗಳ ಈಚೆಗೆ ಎನ್ನಬಹುದು. 2001ರಲ್ಲಿ ವಿಜ್ಞಾನಿಗಳು ಮಾನವ ಜಿನೋಮ್ ಯೋಜನೆಯ (ಜಿನೋಮ್ ಎಂದರೆ ಒಂದು ಜೀವಿಯ ವಂಶವಾಹಿಗಳ ಒಟ್ಟು ಜೋಡಣೆ) ಮೂಲಕ ಅಧ್ಯಯನ ನಡೆಸಲು ತೊಡಗಿದಂದಿನಿಂದ ನಂತರದ ಈ ಎರಡು ದಶಕಗಳಲ್ಲಿ ಅಗಾಧ ಮಾಹಿತಿಯನ್ನು ತಳಿ ವಿಜ್ಞಾನಿಗಳು ಕಲೆಹಾಕಿದ್ದಾರೆ. ಕಳೆದ ಏಳೆಂಟು ವರ್ಷಗಳಲ್ಲಿ ಪ್ರಪಂಚದ ಬಹುತೇಕ ಎಲ್ಲಾ ಜನಾಂಗೀಯ ಹಾಗೂ ಪ್ರಾದೇಶಿಕ ಭಿನ್ನತೆಗಳ ಜನರ ಡಿಎನ್‍ಎ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಅವು ಒದಗಿಸಿರುವ ಮಾಹಿತಿ, ತಿಳುವಳಿಕೆಯನ್ನು ತಳಿ ವಿಜ್ಞಾನಿ ಡೇವಿಡ್ ರೀಚ್ ಡಿಎನ್‍ಎಯನ್ನು ಮನುಷ್ಯನ ಗತ ಇತಿಹಾಸದ ವಿವಿಧ ಹಂತಗಳ ಕುರಿತು ಮಾಹಿತಿಯನ್ನು ಒದಗಿಸುವ ‘ಪುರಾತನ ಡಿಎನ್‍ಎ’ ಎಂದೇ ಕರೆದಿದ್ದಾರೆ. ಈ ‘ಪುರಾತನ ಡಿಎನ್‍ಎ’ ನಮ್ಮ ಗತ ಇತಿಹಾಸವನ್ನು ಶೋಧಿಸಿ ಒರೆಗೆ ಹಚ್ಚಲು ಬೇಕಾದ ಅಮೂಲ್ಯ ಸಾಮಗ್ರಿಯನ್ನು ಒದಗಿಸುತ್ತದೆ. ಸದ್ಯದ ಮಟ್ಟಿಗೆ ಇಡೀ ಜಗತ್ತಿನಲ್ಲಿ ಮನುಷ್ಯನ ಚರಿತ್ರೆಯಲ್ಲಿ ನಡೆದಿರುವ ಎಲ್ಲಾ ವಲಸೆಗಳ ಇತಿಹಾಸವನ್ನು, ವಲಸೆಗಳ ಸ್ವರೂಪಗಳನ್ನು, ಜನಾಂಗೀಯ ಸಂಬಂಧಗಳನ್ನು ಸ್ಪಷ ರೂಪದಲ್ಲಿ ಮುಂದಿಡಲು ಈ ‘ಪುರಾತನ ಡಿಎನ್‍ಎ’ ಯಶಸ್ವಿಯಾಗಿದೆ ಎನ್ನಬಹುದು.

ಈ ಡಿಎನ್‍ಎ ಸಂಶೋಧನೆಗಳು ಮನುಷ್ಯನಿಗೆ ಮನುಷ್ಯ ಗತಚರಿತ್ರೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಬುಡಮೇಲು ಮಾಡಬಲ್ಲವು. ಹಾಗೆಯೇ ಚರಿತ್ರೆಯ ಸರಿಯಾದ ತಿಳುವಳಿಕೆಗೆ ಅಧಿಕೃತತೆಯ ಮುದ್ರೆ ಒತ್ತಬಲ್ಲವು, ಇಲ್ಲವೇ ಮನುಕುಲ ಸಾಗಿಬಂದ ದಾರಿಯಲ್ಲಿ ಚಾರಿತ್ರಿಕ ಸತ್ಯಗಳನ್ನು ಕಂಡುಕೊಳ್ಳಲು ಕರಾರುವಕ್ಕಾದ ತಿಳಿವನ್ನು ಸಹ  ನಮಗೆ ನೀಡಬಲ್ಲವು.

ಭಾರತದ ಮಟ್ಟಿಗೆ ಹೇಳುವುದಾದರೆ ಇದುವರೆಗೆ ನಡೆದಿರುವ ಪುರಾತನ ಡಿಎನ್‍ಎ ಸಂಶೋಧನೆಗಳು ಭಾರತದ ಪ್ರಾಚೀನ ಜನಾಂಗೀಯ ವಲಸೆಗಳ ಕುರಿತು, ಇಲ್ಲಿ ಸಂಭವಿಸಿರುವ ಜನಾಂಗೀಯ ಸಂಕರಗಳ ಕುರಿತು, ಯಾವಜನಾಂಗೀಯ, ಭಾಷಿಕ ಸಮುದಾಯಗಳು ಯಾರ ಮೇಲೆ ಯಾವ ಕಾಲಘಟ್ಟದಲ್ಲಿ ಆಕ್ರಮಣಕಾರಿಯಾಗಿ ವರ್ತಿಸಿದವು ಎಂಬ ಕುರಿತು, ಇಲ್ಲಿ ಜಾತಿಗಳು ಯಾವಾಗ, ಹೇಗೆ ಹುಟ್ಟಿಕೊಂಡವು ಎಂಬ ಕುರಿತು, ಈ ಜಾತಿಕಟ್ಟು ಕಟ್ಟಳೆಗಳು ಉಂಟು ಮಾಡಿರುವ ಜೈವಿಕ ಪರಿಣಾಮಗಳ ಕುರಿತು, ಹೀಗೆ ನಾನಾ ಚಾರಿತ್ರಿಕ ಸಂಗತಿಗಳ ಕುರಿತು ಬೆಳಕು ಚೆಲ್ಲಿವೆ. ಈ ಸಂಶೋಧನೆಗಳ ಬೆಳಕಿನಲ್ಲಿ ನಾವು ನಮ್ಮ ದೇಶದ ಚರಿತ್ರೆಯನ್ನು ಮತ್ತಷ್ಟು ನಿಖರವಾಗಿ ಕಟ್ಟಿಕೊಳ್ಳಬಹುದಾಗಿದೆ.

ಕಳೆದ ಒಂದು ದಶಕಕ್ಕೂ ಹೆಚ್ಚಿನ ಕಾಲಾವಧಿಯಲ್ಲಿ ನಡೆದಿರುವ ಭಾರತೀಯರ ಕುರಿತ ಡಿಎನ್‍ಎ ಸಂಶೋಧನಗೆಳನ್ನು ಆಳವಾಗಿ ಅಧ್ಯಯನ ನಡೆಸಿ ಅದರ ಸಾರವನ್ನು ಸೊಗಸಾಗಿ ನಿರೂಪಿಸಿದವರು ಟೋನಿ ಜೋಸೆಫ್. ಅವರುತಮ್ಮ ‘ಅರ್ಲಿ ಇಂಡಿಯನ್ಸ್” ಎಂಬ ಕೃತಿಯಲ್ಲಿ ಈ ತಳಿ ವಿಜ್ಞಾನ ಭಾರತೀಯರ ಇತಿಹಾಸದ ಕುರಿತು ಏನು ಹೇಳುತ್ತದೆ ಎಂಬುದನ್ನು ಸರಳವಾಗಿ ವಿವರಿಸಿದ್ದಾರೆ. ಹಾಗೆಯೇ ಈ ಎಲ್ಲಾ ಸಂಶೋಧನೆಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿರುವ ಡೇವಿಡ್ ರೀಚ್ ಬರೆದ “ಹೂ ವಿ ಆರ್ ಅಂಡ್ ಹೌ ವಿ ಗಾಟ್ ಹಿಯರ್’ ಎಂಬ ಕೃತಿಯಲ್ಲಿ ಇಡೀಜಗತ್ತಿನ ವಲಸೆಗಳ ಕುರಿತು ಡಿಎನ್‍ಎ ಸಂಶೋಧನೆ ಅರುಹಿದ ಮಾಹಿತಿಗಳನ್ನು ನೀಡಿದ್ದಾರೆ. ಇದರಲ್ಲಿ ಭಾರತದ ಪ್ರಾಚೀನ ಕಾಲದ ವಲಸೆಗಳ ಕುರಿತು ಸಹ ವಿವರವಾಗಿ ಒಂದು ಅಧ್ಯಾಯದಲ್ಲಿ ಬರೆದಿದ್ದಾರೆ.

ಈ ಪುಸ್ತಕ ಪ್ರಕಟವಾದ ನಂತರದಲ್ಲಿಯೇ ಆರಂಭದಲ್ಲಿ ಹೇಳಿದ ವರದಿಗಳು ಬಿಡುಗಡೆಯಾಗಿರುವುದು.

ಇಂದು ನಮ್ಮ ಸಮಾಜದಲ್ಲಿನ ಅನೇಕ ಸಂಕ್ಷೋಭೆಗಳಿಗೆ, ಜನಾಂಗೀಯ ಮತ್ತು ಧಾರ್ಮಿಕ ಹಿಂಸೆಗಳಿಗೆ ಭಾರತದ ‘ಚರಿತ್ರೆಯನ್ನು ತಿರುಚಿ, ವಿಕೃತಗೊಳಿಸಿ’ ಅವುಗಳನ್ನೇ ಸತ್ಯವೆಂದು ಜನರಿಗೆ ನಂಬಿಸಿರುವುದು ಮುಖ್ಯಕಾರಣ. ಬಲಪಂಥೀಯ ಶಕ್ತಿಗಳು ಚರಿತ್ರೆಯನ್ನು ಒಂದು ಹತಾರವಾಗಿ ಬಳಸಿಕೊಂಡ ಪರಿ ಇದು. ಹೀಗಾಗಿ ಜನರಿಗೆ ಚರಿತ್ರೆಯ ಕುರಿತ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ವಾಸ್ತವ ಚರಿತ್ರೆಯನ್ನು ಹೇಳುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಇತ್ತೀಚಿನ ಡಿಎನ್‍ಎ ಸಂಶೋಧನೆಗಳು ಹೆಚ್ಚಿನ ಬಲವನ್ನು ನೀಡಿವೆ. ಅವುಗಳನ್ನು ಜನರ ಬಳಿಗೆ ಹೇಗೆ ಕೊಂಡೊಯ್ಯುತ್ತೇವೆ ಎನ್ನುವುದೇ ಈಗ ನಮ್ಮ ಮುಂದಿರುವ ಪ್ರಶ್ನೆ.

(ಮುಂದಿನ ವಾರದ ನ್ಯಾಯಪಥ ಸಂಚಿಕೆಯಲ್ಲಿ ನಿರೀಕ್ಷಿಸಿ: ಡೇವಿಡ್ ರೀಚ್ ಅವರ ಜೊತೆಗೆ ಗಣೇಶ್ ದೇವಿ ಸಂವಾದ)


ಇದನ್ನು ಓದಿ: ದಿನವೊಂದರಲ್ಲಿ 62,538 ಪ್ರಕರಣಗಳ ವರದಿ: 20 ಲಕ್ಷ ದಾಟಿದ ಭಾರತ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...