Homeಚಳವಳಿಮರೆತಹೋದ ಸ್ವಾತಂತ್ರ್ಯ ಸಂಗ್ರಾಮದ ರತ್ನ: ಮೌಲಾನಾ ಮುಹಮ್ಮ‍ದ್‌ ಅಲೀ ಜೌಹರ್

ಮರೆತಹೋದ ಸ್ವಾತಂತ್ರ್ಯ ಸಂಗ್ರಾಮದ ರತ್ನ: ಮೌಲಾನಾ ಮುಹಮ್ಮ‍ದ್‌ ಅಲೀ ಜೌಹರ್

ಮೌಲಾನಾರು 1911 ಜನವರಿ 11 ರಂದು "ಕಾಮ್ರೇಡ್" ಎಂಬ ಆಂಗ್ಲ ಪತ್ರಿಕೆಯೊಂದನ್ನು ಕಲ್ಕತ್ತಾದಿಂದ ಪ್ರಾರಂಭಿಸಿ ವಸಾಹತುಶಾಹಿಗಳ ವಿರುದ್ಧ ಅಕ್ಷರ ಸಮರಕ್ಕಿಳಿದಿದ್ದರು.

- Advertisement -
- Advertisement -

ಭಾರತದ ಸ್ವಾತಂತ್ರ್ಯ ಹೋರಾಟಗಾರರ ಅಗ್ರಪಂಕ್ತಿಯ ಹೆಸರುಗಳಲ್ಲೊಂದು ಮೌಲಾನಾ ಮುಹಮ್ಮದ್ ಅಲೀ ಜೌಹರ್. ಇಂದು ಡಿಸೆಂಬರ್ 10 ಅವರ ನೂರ ನಲ್ವತ್ತಮೂರನೆಯ ಜನ್ಮ ದಿನ. ಈ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜೀವ ತೇಯ್ದ ಮಹಾನುಭಾವರನ್ನು ದೇಶ ಆಗಾಗ ನೆನಪಿಸಿಕೊಳ್ಳುತ್ತಿರುತ್ತದೆ. ಆದರೆ ದೇಶದ ಸ್ವಾತಂತ್ರ್ಯಕ್ಕೆ ಸಾಟಿಯಿಲ್ಲದ ಕೊಡುಗೆ ನೀಡಿ ದೇಶ ವಸಾಹತುಶಾಹಿಗಳ ಕಪಿಮುಷ್ಟಿಯಿಂದ ಬಿಡುಗಡೆಯಾಗುವುದಕ್ಕಿಂತ ಹದಿನಾರು ವರ್ಷ ಮುಂಚಿತವಾಗಿ ಲಂಡನ್ನಿನ ಬ್ರಿಟಿಷ್ ರಾಣಿಯ ಸಿಂಹಾಸನವೇ ಗುಡುಗುವಂತೆ ಗರ್ಜಿಸುತ್ತಾ ಹುತಾತ್ಮರಾದ ಈ ಅಪ್ರತಿಮ ಸ್ವಾತಂತ್ರ್ಯ ಸೇನಾನಿಯನ್ನು ದೇಶ ಮರೆತೇ ಬಿಟ್ಟಿರುವುದು ವಿಷಾದನೀಯ. ಮೌಲಾನಾ ಮುಹಮ್ಮದ್ ಅಲಿಯವರ ಹೊರತಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆ ನಿಸ್ಸಂದೇಹವಾಗಿಯೂ ಅಪೂರ್ಣ.

ಮುಹಮ್ಮದ್ ಅಲಿ ಓರ್ವ ಶ್ರೇಷ್ಠ ಇಸ್ಲಾಮಿಕ್ ವಿದ್ವಾಂಸರಾಗಿದ್ದುದರಿಂದ ಅವರ ಹೆಸರಿನೊಂದಿಗೆ ಮೌಲಾನಾ ಎಂಬ ಪದವಿ ಅಂಟಿಕೊಂಡಿತ್ತು.ಅವರ ದೇಶ ನಿಷ್ಟೆಯನ್ನು ಅಂದಿನ ಆರೆಸ್ಸೆಸ್ ಮುಖಂಡರು ಪ್ರಶ್ನಿಸಿ ನಿಮಗೆ ದೇಶ ಮೊದಲೋ, ಧರ್ಮ ಮೊದಲೋ ಎಂದು ಚೇಡಿಸಿದಾಗ ಮೌಲಾನಾ ಕೊಟ್ಟ ಉತ್ತರ “ನಾನು ಮೊದಲನೆಯದಾಗಿ ಮುಸ್ಲಿಂ, ಎರಡನೆಯದಾಗಿಯೂ ಮುಸ್ಲಿಂ ಮತ್ತು ಮೂರನೆಯದಾಗಿಯೂ ಮುಸ್ಲಿಂ. ದೇಶದ ವಿಚಾರಕ್ಕೆ ಬಂದಾಗ ನಾನು ಮೊದಲನೆಯದಾಗಿ ಭಾರತೀಯ, ಎರಡನೆಯದಾಗಿಯೂ ಭಾರತೀಯ ಮತ್ತು ಮೂರನೆಯದಾಗಿಯೂ ಭಾರತೀಯ” ಎಂಬುದಾಗಿತ್ತು.

ಅಪ್ರತಿಮ ಮಾತುಗಾರ, ನಿರ್ಭೀತ ಬರಹಗಾರ, ಸ್ವಾತಂತ್ರ್ಯ ಯೋಧ ಮುಹಮ್ಮದ್ ಅಲಿ. ಮೌಲಾನಾರದ್ದು ನೆಪೋಲಿಯನ್‌ನ ಹೃದಯ, ಮೆಕಾಲೆಯ ಲೇಖನಿ ಮತ್ತು ಬರ್ಕ್‌ನ ಮಾತುಗಾರಿಕೆ ಎಂದು ಬ್ರಿಟಿಷರೇ ಅಂದು ಹೇಳುತ್ತಿದ್ದರು. ದೇಶ ಮತ್ತು ಇಸ್ಲಾಮ್ ಎರಡಕ್ಕೂ ನಿಸ್ವಾರ್ಥವಾಗಿ ದುಡಿದವರು ಮೌಲಾನಾ.

ಬರೋಡಾ ನವಾಬರ ಮಂತ್ರಿಯಾಗಿದ್ದ ಅಬ್ದುಲ್ ಅಲಿ ಖಾನ್ ಮತ್ತು ಆಬಿದಾ ಬೇಗಂ (ಬೀ ಅಮ್ಮಾ) ದಂಪತಿಗಳ ಕಿರಿಯ ಪುತ್ರನಾಗಿ ಉತ್ತರ ಪ್ರದೇಶದ ರಾಂಪುರದಲ್ಲಿ 1878 ಡಿಸೆಂಬರ್ 10ರಂದು ಮುಹಮ್ಮದ್ ಅಲಿ ಜನಿಸಿದರು. ಮುಹಮ್ಮದ್ ಅಲಿಯವರಿಗೆ ಎರಡು ವರ್ಷ ಪ್ರಾಯವಾಗುವಾಗಲೇ ಪಿತೃ ವಿಯೋಗವಾಯಿತು. ಮಕ್ಕಳ ಶಿಕ್ಷಣದ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಆಬಿದಾ ಬೇಗಂ ತನ್ನ ಒಡವೆಗಳನ್ನು ಮಾರಿ ಮಕ್ಕಳಿಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ನೀಡಿದರು. ಬಿ.ಎ.ಪದವಿಯಲ್ಲಿ ಅಲಹಾಬಾದ್ ವಿಶ್ವವಿದ್ಯಾನಿಲಯಕ್ಕೆ ಮುಹಮ್ಮದ್ ಅಲಿ ಪ್ರಥಮ ಸ್ಥಾನ ಗಳಿಸಿದರು. ಆ ಬಳಿಕ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದರು. ಆಕ್ಸ್‌ಫರ್ಡ್ ಯುನಿವರ್ಸಿಟಿಯಿಂದ ಆಧುನಿಕ ಇತಿಹಾಸದ ವಿಷಯದಲ್ಲಿ ಆನರ್ಸ್ ಪದವಿ ಪಡೆದರು. ಆನರ್ಸ್ ಪದವಿಗಾಗಿ ಆಕ್ಸ್‌ಫರ್ಡ್‌ನಲ್ಲಿ ಕಲಿಯುತ್ತಿರುವಾಗ ಇಸ್ಲಾಮ್‌ನ ಕುರಿತಂತೆ ಗಾಢ ಅಧ್ಯಯನ ನಡೆಸಿದರು. ಇಂಗ್ಲಿಷ್ ಭಾಷೆಯಲ್ಲಿ ಅದ್ಭುತ ಹಿಡಿತ ಹೊಂದಿದ್ದ ಮುಹಮ್ಮದ್ ಅಲಿ ಆಕ್ಸ್‌ಫರ್ಡ್ ಯುನಿವರ್ಸಿಟಿ ಸಾಹಿತ್ಯ ವೇದಿಕೆಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದರು. ಆಕ್ಸ್‌ಫರ್ಡ್ ಯುನಿವರ್ಸಿಟಿ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾದ ಮೊದಲ ಏಷ್ಯನ್ ವ್ಯಕ್ತಿ ಎಂಬ ಹೆಗ್ಗಳಿಕೆ ಮುಹಮ್ಮದ್ ಅಲಿಯವರದ್ದಾಗಿತ್ತು.
………………..

ಆನರ್ಸ್ ಪದವಿ ಪಡೆದು ಸ್ವದೇಶಕ್ಕೆ ಮರಳಿದ ಮೌಲಾನಾ ಬರೋಡಾದಲ್ಲಿ ಸರಕಾರಿ ಹುದ್ದೆಗೆ ಸೇರಿದರು. ಆದರೆ ಬ್ರಿಟಿಷ್ ಸಾಮ್ರಾಜ್ಯಶಾಹಿಯು ತನ್ನ ದೇಶವಾಸಿಗಳ ಮೇಲೆ ನಡೆಸುತ್ತಿದ್ದಂತಹ ದೌರ್ಜನ್ಯವನ್ನು ಕಂಡು ರೋಸಿಹೋದ ಅವರು ಬ್ರಿಟಿಷ್ ಸರಕಾರದ ಉದ್ಯೋಗದಲ್ಲಿದ್ದುಕೊಂಡೇ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಬೆಂಕಿಯುಗುಳುವಂತಹ Thoughts on present discontents ಎಂಬ ಲೇಖನಮಾಲಿಕೆಯನ್ನು Times of India ದಲ್ಲಿ ಬರೆಯಲಾರಂಭಿಸಿದರು. ಸರಕಾರದ ಹುದ್ದೆಯಲ್ಲಿದ್ದು ಸರಕಾರದ ವಿರುದ್ಧ ಬರೆಯುವುದರ ಪರಿಣಾಮ ನೆಟ್ಟಗಿರಲ್ಲ ಎಂದು ಬ್ರಿಟಿಷರು ಎಚ್ಚರಿಸಿದಾಗ ಮೌಲಾನಾ ತನ್ನ ಹುದ್ದೆಗೆ ರಾಜೀನಾಮೆ ಎಸೆದು ಹೊರಬಂದು ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಣಕ್ಕೆ ದುಮುಕಿದರು.

ಮೌಲಾನಾರು 1911 ಜನವರಿ 11 ರಂದು “ಕಾಮ್ರೇಡ್” ಎಂಬ ಆಂಗ್ಲ ಪತ್ರಿಕೆಯೊಂದನ್ನು ಕಲ್ಕತ್ತಾದಿಂದ ಪ್ರಾರಂಭಿಸಿ ವಸಾಹತುಶಾಹಿಗಳ ವಿರುದ್ಧ ಅಕ್ಷರ ಸಮರಕ್ಕಿಳಿದರು.

ಬ್ರಿಟಿಷ್ ಪ್ರಭುತ್ವದ ವಿರುದ್ಧ ಬೆಂಕಿ ಚೆಂಡುಗಳಂತಹ ತೀಕ್ಷ್ಣ ಬರಹಗಳನ್ನು ಬರೆದು ಸ್ವಾತಂತ್ರ್ಯ ಹೋರಾಟಗಾರರಲ್ಲಿ‌ ಅದಮ್ಯ ಸ್ಪೂರ್ತಿಯನ್ನು ತುಂಬಿದರು. ಮೊದಲು ಕಲ್ಕತ್ತಾವನ್ನು ಕೇಂದ್ರವಾಗಿರಿಸಿಕೊಂಡು ಪ್ರಕಟಗೊಳ್ಳುತ್ತಿದ್ದ ‘ ಕಾಮ್ರೇಡ್ ‘ ಪತ್ರಿಕೆ ಹೆಚ್ಚು ಹೆಚ್ಚು ಜನರನ್ನು ತಲುಪಬೇಕೆಂದು ಅದನ್ನು ದೆಹಲಿಗೆ ಸ್ಥಳಾಂತರಿಸಿದರು. ಇಂಗ್ಲಿಷ್ ಜನಸಾಮಾನ್ಯರನ್ನು ತಲುಪಲಾರದು ಎಂದು ಮತ್ತೊಂದು ಉರ್ದು ಪತ್ರಿಕೆ ಹಮ್‌ದರ್ದ್ ಸ್ಥಾಪಿಸಿದರು. ಇವೆರಡೂ ಪತ್ರಿಕೆಗಳ ಮೂಲಕ‌ ನಿರಂತರವಾಗಿ ನಿರ್ಬಿಡೆಯ ಬರಹಗಳನ್ನು ಪ್ರಕಟಿಸಿ ಬ್ರಿಟಿಷರ ಎದೆಯಲ್ಲಿ ನಡುಕವನ್ನು ಹುಟ್ಟಿಸಿದರು. ಇದೇ ಸಾಮ್ರಾಜ್ಯಶಾಹಿ ಶಕ್ತಿಗಳು ಅತ್ತ ಯುರೋಪ್‌ನಲ್ಲಿ ತುರ್ಕಿಯ ಮೇಲೆ ನಡೆಸುತ್ತಿದ್ದಂತಹ ದಬ್ಬಾಳಿಕೆಯನ್ನು ವಿರೋಧಿಸಿಯೂ ಮೌಲಾನಾ ಪ್ರಚೋದನಕಾರಿಯಾಗಿ ಬರೆಯಲಾರಂಭಿಸಿದರು. ಖಿಲಾಫತ್ ಚಳುವಳಿಯು ಭಾರತದಲ್ಲಿ ಹುಟ್ಟಿಕೊಳ್ಳವ ನಿಟ್ಟಿನಲ್ಲಿ ಪ್ರಧಾನ ಭೂಮಿಕೆ ನಿರ್ವಹಿಸಿದ್ದ ಅವರು ತನ್ನ ಬರಹಗಳ ಮೂಲಕ ಚಳವಳಿಗೆ ಶಕ್ತಿ ತುಂಬುವುದರೊಂದಿಗೆ ಅದ್ವಿತೀಯ ನೇತೃತ್ವ ನೀಡಿದರು.

ಬ್ರಿಟಿಷ್ ಪ್ರಭುತ್ವದ ದಬ್ಬಾಳಿಕೆಯ ವಿರುದ್ಧ ಪ್ರಬಲ ಧ್ವನಿಯಾದ ಮೌಲಾನಾ ಬ್ರಿಟಿಷರಿಗೆ ಸಿಂಹಸ್ವಪ್ನವಾದರು. ಇದರಿಂದ ಕಂಗೆಟ್ಟ ಬ್ರಿಟಿಷ್ ಪ್ರಭುತ್ವ 1914 ರಲ್ಲಿ ಅವರ ಎರಡೂ ಪತ್ರಿಕೆಗಳಿಗೆ ನಿಷೇಧ ಹೇರಿ ಅವರನ್ನು ಮತ್ತು ಅವರ ಸಹೋದರ ಶೌಕತ್ ಅಲಿಯವರನ್ನು ಬಂಧಿಸಿ ಜೈಲಿಗೆ ತಳ್ಳಿತು. ಐದು ವರ್ಷಗಳ ದೀರ್ಘ ಸೆರೆವಾಸದ ಬಳಿಕ 1919 ರ ಡಿಸೆಂಬರ್‌ನಲ್ಲಿ ಬಿಡುಗಡೆಗೊಳಿಸಲಾಯಿತು. ಸ್ವಾತಂತ್ರ್ಯದೆಡೆಗಿನ ಮೌಲಾನಾರ ತುಡಿತವನ್ನು ಅರ್ಥೈಸಿದ ಮುಸ್ಲಿಂ ಲೀಗ್ 1917 ರಲ್ಲಿ ಅಂದರೆ ಮೌಲಾನಾ ಜೈಲಿನಲ್ಲಿರುವಾಗಲೇ ಮುಸ್ಲಿಂ ಲೀಗ್‌ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಿತು. ಜೈಲಿನಿಂದ ಬಿಡುಗಡೆಯಾದ ಬಳಿಕವೂ ಅವರು ತಮ್ಮ ಅದೇ ಉರಿಭಾಷೆಯಲ್ಲಿ ಬ್ರಿಟಿಷರ ವಿರುದ್ಧ ಸಮರ ಘೋಷ ಮೊಳಗಿಸಿದರು. 1921ರಲ್ಲಿ ಬ್ರಿಟಿಷರು ಅವರನ್ನು ಮತ್ತೆ ಕಂಬಿಯೊಳಕ್ಕೆ ತಳ್ಳಿದರು. 1923ರಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಮೌಲಾನಾ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕೊಕ್ಕನಾಡ ಅಧಿವೇಶನದ ಅಧ್ಯಕ್ಷತೆ ವಹಿಸಿ ಅವರು ಸ್ವಾತಂತ್ರ್ಯ ಯೋಧರಿಗೆ ನೀಡಿದ ಕರೆ ಸ್ವಾತಂತ್ರ್ಯ ವಾಂಛೆ ಇಮ್ಮಡಿಗೊಳ್ಳುವಂತೆ ಮಾಡಿತು. “ನಾವೆಲ್ಲ ಐಕ್ಯದಿಂದ ಹೋರಾಡೋಣ, ಅಗತ್ಯ ಬಿದ್ದರೆ ಪ್ರಾಣಾರ್ಪಣೆಗೂ ಸಿದ್ಧರಾಗೋಣ. ಒಂದು ವರ್ಷದೊಳಗೆ ಬ್ರಿಟಿಷರು ದೇಶಬಿಟ್ಟು ತೊಲಗದಿದ್ದರೆ ನಾವೇ ಸ್ವಾತಂತ್ರ್ಯ ಘೋಷಿಸೋಣ.” ಮೌಲಾನಾರ ಈ ಕರೆಗೆ ಓಗೊಟ್ಟು ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿ ಯುವ ಸಮೂಹ ಹೋರಾಟದ ಕಣಕ್ಕೆ ದುಮುಕಿತು.

ಮೌಲಾನಾರ ಬಂಧನದ ಕುರಿತಂತೆ ಯಂಗ್ ಇಂಡಿಯಾದ 1923ರ ಸೆಪ್ಟೆಂಬರ್ ಸಂಚಿಕೆಯಲ್ಲಿ ಗಾಂಧೀಜಿ ತನ್ನ ಲೇಖನದಲ್ಲಿ “ಮೌಲಾನಾರ ಬಂಧನ ಸ್ವಾತಂತ್ರ್ಯ ಸ್ಥಾಪನೆಯ ಮೊದಲ ನಡೆ” ಎಂದು ಬರೆದಿದ್ದರು.

1930ರ ಕೊನೆಯಲ್ಲಿ ಲಂಡನ್‌ನಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನಕ್ಕೆ ಗಾಂಧೀಜಿಯ ಜೊತೆಗೆ ಮೌಲಾನಾ ತೆರಳಿದ್ದರು. ಆ ಸಮ್ಮೇಳನದಲ್ಲಿ ಮೌಲಾನಾ ಮಾಡಿದ ಭಾಷಣ ಬ್ರಿಟಿಷ್ ಪ್ರಭುತ್ವದ ಎದೆಗೆ ಇರಿದಂತಿತ್ತು. “ಭಾರತದಲ್ಲಿ ನಾವು ಮೂವತ್ತೆರಡು ಕೋಟಿ ಜನ ಅನಕ್ಷರತೆ, ಬಡತನ, ಹಸಿವು ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದೇವೆ. ಆದರೂ ನಮ್ಮ ಸ್ವಾತಂತ್ರ್ಯ ದಾಹ ಕಿಂಚಿತ್ತೂ ಕಡಿಮೆಯಾಗದು. ಸ್ವಾತಂತ್ರ್ಯ ನೀವು ಕೊಡುವ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು. ನಮ್ಮ ಸ್ವಾತಂತ್ರ್ಯಕ್ಕಾಗಿ ನಾವು ನಿಮ್ಮ ಫಿರಂಗಿ, ಗುಂಡುಗಳಿಗೆ ಎ‍ದೆಯೊಡ್ಡಲೂ‌ ಸಿದ್ಧ. ಮೂವತ್ತೆರಡು ಕೋಟಿ ಭಾರತೀಯರನ್ನು ಕೊಲ್ಲುವ ತಾಕತ್ತು ಮತ್ತು ಧೈರ್ಯವಿರುವ ನೂರು ಜನರೂ ಇಡೀ ಬ್ರಿಟನ್‌ನಲ್ಲಿ ಹುಡುಕಿದರೆ ಸಿಗಲಾರರು..” ಎಂದು ಗುಡುಗಿದ್ದರು.

ತೀವ್ರ ಜ್ವರದಿಂದ ಬಳಲುತ್ತಿದ್ದರೂ ದೇಶ ವಿಮೋಚನೆಯ ಕೆಲಸಕ್ಕಾಗಿ ಹೊರಡುವಾಗ ಅವರ ಕುಟುಂಬಿಕರು ಅವರನ್ನು ತಡೆಯಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಮಹಾತಾಯಿ ಮುಹಮ್ಮದ್ ಅಲಿಯವರ ಮಾತೆ ಬೀ ಅಮ್ಮಾ ತನ್ನ ದುಃಖಗಳನ್ನು ಮನದೊಳಗೆ ಅದುಮಿಟ್ಟು ಮಗನನ್ನು ಬೀಳ್ಕೊಟ್ಟಿದ್ದರು. ಲಂಡನ್‌ನಲ್ಲಿ ತಂಗಿದ್ದ ಹೋಟೆಲ್‌ನಿಂದ ದುಂಡು ಮೇಜಿನ ಸಮ್ಮೇಳನಕ್ಕೆ ಹೊರಡುವಾಗ ಮೌಲಾನಾರ ಆರೋಗ್ಯ ಸ್ಥಿತಿ ಕಂಡು ಗಾಂಧೀಜಿ ಕಂಗಾಲಾಗಿದ್ದರು. ಔಷಧಿ ಸೇವಿಸಿ ಮೌಲಾನಾ ಹೊರಟೇ ಬಿಟ್ಟರು. ಅಂದು ಅವರಾಡಿದ ಕೊನೆಯ ವಾಕ್ಯಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದಂತಹದ್ದು.. ” I want to go my country.. If I can go back with the substance of freedom in my hand; and if you do not give us freedom you have to give me a grave here…”

ಮೌಲಾನಾರ ಆರೋಗ್ಯ ತೀವ್ರ ಸ್ವರೂಪದಲ್ಲಿ ಹದಗೆಟ್ಟಿತು. ಅವರು ಗಾಂಧೀಜಿಯವರನ್ನು ಕರೆದು ತನ್ನ ಕೊನೆಯ ಆಶೆಯನ್ನು ಅರುಹಿದರು. ” ನನ್ನ ಕೊನೆ ಸಮೀಪಿಸಿತು. ಆದರೆ ಸ್ವಾತಂತ್ರ್ಯ ವಿಲ್ಲದ ಮಣ್ಣಲ್ಲಿ ನಾನು ಮಣ್ಣಾಗಲಾರೆ.. ನನ್ನ ಮೃತದೇಹವನ್ನು ಇಸ್ಲಾಮಿನ ಅನೇಕ ಪ್ರವಾದಿಗಳು ಮಣ್ಣಾಗಿರುವ ಮತ್ತು ಇಸ್ಲಾಮಿನ ಮೂರನೇ ಅತೀ ದೊಡ್ಡ ಪವಿತ್ರವಾಗಿರುವ ಮಸ್ಜಿದುಲ್ ಅಕ್ಸಾದ ಕಬರ್ ಸ್ಥಾನದಲ್ಲಿ ನನ್ನನ್ನು ದಫನ ಮಾಡಬೇಕು…”

ಮೌಲಾನಾ 1931ರ ಜನವರಿ ನಾಲ್ಕರಂದು ತನ್ನ ಐವತ್ತ ಮೂರನೇ ವಯಸ್ಸಿನಲ್ಲಿ ಚಿರನಿದ್ರೆಗೆ ಜಾರಿದರು.‌ ಅವರ ಇಚ್ಚೆಯಂತೆಯೇ ಅವರ ಮೃತದೇಹವನ್ನು ಫ್ಯಾಲೆಸ್ತೀನಿಗೆ ಕೊಂಡೊಯ್ದು ಮಸ್ಜಿದುಲ್ ಅಕ್ಸಾದ ದಫನ ಭೂಮಿಯಲ್ಲಿ ದಫನ ಮಾಡಲಾಯಿತು.

ಫ್ಯಾಲೆಸ್ತೀನ್‌ನಲ್ಲಿರುವ ಅವರ ಸಮಾಧಿ

ಉರ್ದು ಭಾಷೆಯ ಶ್ರೇಷ್ಠ ಕವಿಯೂ ಆಗಿದ್ದ ಅವರು ಜೌಹರ್ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದರು. ಜೌಹರ್ ಅರ್ಥಾತ್ ಅಮೂಲ್ಯ ರತ್ನ. ಅವರು ಈ ದೇಶದ ಸ್ವಾತಂತ್ರ್ಯ ಚಳವಳಿ ಕಂಡ ನಿಜವಾದ ಜೌಹರ್…

  • ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...