Homeಮುಖಪುಟಒಳಮೀಸಲಾತಿಯೆಂಬುದು ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರ - ಅಂಬಣ್ಣ...

ಒಳಮೀಸಲಾತಿಯೆಂಬುದು ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರ – ಅಂಬಣ್ಣ ಅರೋಲಿಕರ್

ಬಲಾಢ್ಯರು ಹಾಗೂ ಬಡಕಲು ವ್ಯಕ್ತಿಗಳ ನಡುವೆ ಸ್ಪರ್ಧೆಗೆ ಅವಕಾಶ ನೀಡಿದರೆ ಅಂತಿಮವಾಗಿ ಅನ್ಯಾಯವಾಗುವುದು ಮಾತ್ರ ಬಡಕಲು ವ್ಯಕ್ತಿಗಳಿಗೆ ಎಂಬ ಸರಳ ಸತ್ಯವು ಬಹುತೇಕರಿಗೆ ಅರ್ಥವಾಗದಿರುವುದು ಈ ದೇಶದ ದೌರ್ಭಾಗ್ಯವೇ ಸರಿ.

- Advertisement -
- Advertisement -

ಸ್ವಾತಂತ್ರ್ಯ ನಂತರದ 70 ವರ್ಷಗಳ ಅವಧಿಯಲ್ಲಿ ಸರಿ ಸುಮಾರು ಮೂವತ್ತೈದು ವರ್ಷಗಳ ಕಾಲ, ಪರಿಶಿಷ್ಟ ಜಾತಿಗಳಿಗೆ ಮೀಸಲಿಟ್ಟ 15% ಮೀಸಲಾತಿಯನ್ನು ಆದ್ಯತೆಯನುಸಾರ ಬಲಹೀನರಿಗೆ ಹಾಗೂ ಅವಕಾಶ ವಂಚಿತರಿಗೆ ಅವರವರ ಆರ್ಥಿಕ ಅಸಮಾನತೆಗಳ ಆಧಾರದ ಮೇಲೆ, ವಿದ್ಯೆ ಹಾಗೂ ಉದ್ಯೋಗವಕಾಶಗಳಿಗೆ ಮಾತ್ರ ಉಪಯುಕ್ತವಾಗುವಂತೆ ಹಂಚುವಂತೆ ಹೋರಾಡುತ್ತಿರುವುದೇ ಬಹುದೊಡ್ಡ ಅಪರಾಧವೆಂಬಂತೆ ಚಿತ್ರೀಕರಿಸಲಾಗುತ್ತಿದೆ. ಬಹುತೇಕ ಎಲ್ಲಾ ನ್ಯಾಯಪಾಲಕರು ಹಾಗೂ ಬುದ್ಧಿಜೀವಿಗಳೆನಿಸಿಕೊಂಡ ಅಕ್ಷರಸ್ಥರು ತಮ್ಮ ತಮ್ಮ ಅವಗಾಹನೆಗೆ ತಕ್ಕಂತೆ ವಿಶ್ಲೇಷಣೆ ಮಾಡುತ್ತಾ, ಹಸಿದು ಹೌಹಾರಿದ ಸಮುದಾಯಗಳ ಮೇಲೆ ಅತಿಕ್ರಮಣ ನಡೆಸಿರುವುದು ಬಿಟ್ಟರೆ, ಆ ಸಮುದಾಯಗಳ ಹಸಿವಿನ ಬೇಗುದಿಯನ್ನು ಯಾವ ರೀತಿಯಾಗಿ ಶಮನ ಮಾಡಬೇಕೆಂಬುದರ ಬಗ್ಗೆ ಚಿಂತಿಸಲೇ ಇಲ್ಲ. ಇದು ‘ಸೋತವರ ಮೇಲೆ ಬಲಿತವರು ಬಿದ್ದರು’ ಎಂಬಂತಾಗಿದೆ. ಇದು ಈ ದೇಶದ ಪ್ರಗತಿಪರ, ಜೀವಪರ, ಜನಪರತೆಯ ಕಾಳಜಿಗೆ ಬಹುದೊಡ್ಡ ನಿದರ್ಶನವಾಗಿದೆ.

ಬಹುಸಂಖ್ಯಾತ ಅಸ್ಪೃಶ್ಯ ಸಮುದಾಯಗಳು ಕಳೆದ 35 ವರ್ಷಗಳಲ್ಲಿ ಸತತವಾಗಿ ಹೋರಾಡಿದ ಪರಿಣಾಮದಿಂದ ಕಾಂಗ್ರೆಸ್ ಸರ್ಕಾರವು ನ್ಯಾಯಮೂರ್ತಿ ಎ.ಜೆ ಸದಾಶಿವರವರ ಏಕಸದಸ್ಯ ಆಯೋಗವನ್ನು ನೇಮಿಸಿದರೆ, ಬಿಜೆಪಿ ಸರ್ಕಾರವು ಆಯೋಗದ ಸಮೀಕ್ಷೆಗೆ ಅನುದಾನವನ್ನು ನೀಡಿದೆ. ಇನ್ನು ಜೆಡಿಎಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವುದಾಗಿ ಲಿಖಿತ ಭರವಸೆಯನ್ನು ನೀಡಿದೆ. ಹೀಗಿರುವಾಗ ಈ ರಾಜ್ಯದ 224 ಶಾಸಕರು ಈ ಆಯೋಗದ ಶಿಫಾರಸ್ಸುಗಳನ್ನು ಸರ್ವಾನುಮತದಿಂದ ಅಂಗೀಕರಿಸಿ ಜಾರಿಗೊಳಿಸಲು ಯಾವ ಸೀಮೆಯ ಸಾಮಾಜಿಕ ನ್ಯಾಯ ಅಡ್ಡ ಬರುತ್ತದೆಯೋ? ಉತ್ತರಿಸಬೇಕಾದ ಜವಾಬ್ದಾರಿ ಸರ್ವ ಪಕ್ಷಗಳಿಗೆ ಸೇರಿದ ವಿಚಾರವಾಗಿದೆ.

ಇದನ್ನೂ ಓದಿ: ಒಳಮೀಸಲಾತಿಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯ ಎನು? – ಡಾ.ನರಸಿಂಹ ಗುಂಜಹಳ್ಳಿ

ಹೌದು ಇಂತಹ ಅಭಿಪ್ರಾಯವು ಒಂದಷ್ಟು ಜನರಿಗೆ ಅತಿಶಯೋಕ್ತಿ ಎನಿಸಿದರೂ ಅಕ್ಷರಶಃ ಅಸ್ಪೃಶ್ಯ ಸಮುದಾಯಗಳ ಪಾಲಿಗೆ ಹಾಗೂ ಅವಕಾಶ ವಂಚಿತರಿಗೆ ಅತಿ ಹತ್ತಿರವಾದ ಅನುಭವದ ಮಾತಾಗಿದೆ. ದೇಶದ ಯಾವುದೇ ರಾಜ್ಯಗಳಲ್ಲೂ ಅಸ್ಪೃಶ್ಯ ಸಮುದಾಯಗಳ ಪಟ್ಟಿಯಲ್ಲಿ ಅಸ್ಪೃಶ್ಯೇತರರು ಸೇರ್ಪಡೆಯಾಗದೆ ಕರ್ನಾಟಕದಲ್ಲಿ ಮಾತ್ರ ಇದು ಸಾಧ್ಯವಾಗಿದೆ. ಸ್ಪೃಶ್ಯರು ಸಹ ಆರ್ಥಿಕವಾಗಿ ಅತ್ಯಂತ ಸಬಲರು ಎನ್ನುತ್ತಿಲ್ಲ, ಆದರೆ ಬಲಾಢ್ಯರು ಹಾಗೂ ಬಡಕಲು ವ್ಯಕ್ತಿಗಳ ನಡುವೆ ಸ್ಪರ್ಧೆಗೆ ಅವಕಾಶ ನೀಡಿದರೆ ಅಂತಿಮವಾಗಿ ಅನ್ಯಾಯವಾಗುವುದು ಮಾತ್ರ ಬಡಕಲು ವ್ಯಕ್ತಿಗಳಿಗೆ ಎಂಬ ಸರಳ ಸತ್ಯವು ಅತ್ತ ಸರ್ಕಾರ ಹಾಗೂ ಸರ್ವೋಚ್ಚ ನ್ಯಾಯಾಲಯಗಳಿಗೆ ಇತ್ತ ಸಾಮಾಜಿಕ ನ್ಯಾಯದ ಪರ ಶತಮಾನಗಳ ಕಾಲ ಬೊಗಳೆ ಬಿಡುವ ಬುದ್ಧಿವಂತರಿಗೂ ಅರ್ಥವಾಗದೆ ಇರುವುದು ಈ ದೇಶದ ದೌರ್ಭಾಗ್ಯವೇ ಸರಿ. ಆರ್ಥಿಕವಾಗಿ ಬಲಹೀನರಾದವರಿಗೆಲ್ಲಾ ಮೀಸಲಾತಿಯನ್ನು ನೀಡಿದಂತೆ ಸ್ಪೃಶ್ಯ ಸಮುದಾಯಗಳಿಗೂ ಅವರ ಆರ್ಥಿಕ, ಶೈಕ್ಷಣಿಕ ಆದ್ಯತೆಗಳ ಅನುಸಾರ ವಿಶೇಷವಾದ ಮೀಸಲಾತಿಯನ್ನು ನೀಡಲು ಯಾರ ಅಭ್ಯಂತರವೂ ಇಲ್ಲ. ಆದರೆ ಇಲ್ಲಿ ಆಗಿರುವುದೆ ಬೇರೆ – ರಾಜಕೀಯ ಪಕ್ಷಗಳು ತಮ್ಮ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಡಜನ್‍ಗೂ ಅಧಿಕ ಜಾತಿಗಳನ್ನು ತಮ್ಮ ಮನಸೋ ಇಚ್ಚೆ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಮೂಲಕ ಮೂಲ ಪರಿಶಿಷ್ಟರಿಗೆ ಆಗಬಹುದಾದ ಸಹಜ ಅನ್ಯಾಯದ ಅಪಾಯವನ್ನು ಲೆಕ್ಕಿಸದೆ ಇರುವುದು ದುರಂತ.

ಈ ಪ್ರಕ್ರಿಯೆ ಯಾವುದೇ ಪ್ರಗತಿಪರ ಕಾಳಜಿಯುಳ್ಳ ಮತಿವಂತರಿಗೆ ಅರ್ಥವಾಗದೇ ಇರುವುದು ಅತ್ಯಂತ ಘೋರ ಅಪರಾಧವೆಂದೆ ಹೇಳಬೇಕಿದೆ. ಇದ್ಯಾವುದು ಕಾನೂನಿನ ಪ್ರಕಾರ ಅಪರಾಧವಲ್ಲ. ಆದರೆ ಇರುವ ಮೀಸಲಾತಿಯನ್ನು ಕಟ್ಟಕಡೆಯ ಜನರಿಗೆ ಪ್ರಾಮಾಣಿಕವಾಗಿ ಹಂಚಬೇಕೆಂಬ ಪರಿಕಲ್ಪನೆಯನ್ನೇ ಸಂವಿಧಾನಬಾಹಿರವೆನ್ನುವ ಆಷಾಡಭೂತಿತನ ಮಾತ್ರ ಮನುವಾದ, ಕೋಮವಾದಕ್ಕಿಂತಲೂ ಕ್ರ್ರೂರತನದ್ದಾಗಿದೆ. ಇನ್ನು ಮೇಲ್ಜಾತಿಗಳಿಗೆ ಮೀಸಲಾತಿಯ ಹೆಚ್ಚಳವಾಗುವುದು ಇರಲಿ, ಎಲ್ಲಾ ವಲಯಗಳು ಕಾರ್ಪೋರೇಟ್ ಕಬಂದಬಾಹುಗಳಿಗೆ ಸಿಲುಕಿ ಖಾಸಗೀಕರಣವಾಗಿರುವುದಾಗಲಿ ಇವರಿಗೆ ಅಪಾಯಕಾರಿ ಎನಿಸುವುದಿಲ್ಲ. ಹಳ್ಳಿಗಾಡಿನ, ಅನಕ್ಷರಸ್ಥ ಸಮುದಾಯಗಳು ನಡೆಸುವ ಹಳ್ಳಿಕಟ್ಟೆ ಪಂಚಾಯ್ತಿಯಲ್ಲಿ ಬಗೆಹರಿಯಬಹುದಾದ ಪಿತ್ರಾರ್ಜಿತ ಅಸ್ತಿಯ ಹಂಚಿಕೆಯಂತೆ ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರವು ದೆಹಲಿ ಹಂತದ ಪಂಚಾಯಿತಿಯಲ್ಲಿ ಕಳೆದ 70 ವರ್ಷಗಳಿಂದಲೂ ಬಗೆಹರಿಯದೆ, ಅನಿರ್ಧಿಷ್ಟ ಕಾಲದವರೆಗೂ ವಾದ ವಿವಾದಗಳಲ್ಲೇ ಕಾಲಹರಣವಾಗುತ್ತಿದೆ. ಇದು ಎರಡು ತಲೆಮಾರುಗಳ ಕೋಟ್ಯಾಂತರ ಜನಗಳ ವಿದ್ಯೆ ಹಾಗೂ ಉದ್ಯೋಗದ ವಂಚನೆಗೆ ಕಾರಣವಾಗಿದೆ.

ಪರಿಶಿಷ್ಟ ಜಾತಿಗಳು ಇದುವರೆಗೂ ಎತ್ತಿರುವ ಪ್ರಶ್ನೆ ಮೀಸಲಾತಿ ಹೆಚ್ಚಳವಾಗಬೇಕಂದಲ್ಲ. ಈಗಾಗಲೇ ಅಸ್ಪೃಶ್ಯರಲ್ಲೇ ಅತೀ ಬುದ್ಧಿವಂತರಾದ ಪ್ರಭಾವಿ ರಾಜಕಾರಣಿಗಳು ಹಾಗೂ ಅಕ್ರಮವಾಗಿ ನುಸುಳಲ್ಪಟ್ಟ ಅಸ್ಪೃಶ್ಯೇತರರು ಇರುವ ಎಲ್ಲಾ ಅವಕಾಶಗಳನ್ನು ಬಾಚಿ ತಿಂದು ಬಲಾಢ್ಯರಾಗಿ ಮೆರೆಯುತ್ತಿರುವಾಗ, ಇದ್ದ ಬಿದ್ದ ಹಳಸಲು ಅನ್ನವನ್ನಾದರು ನಮ್ಮ ಹಸಿದ ಹೊಟ್ಟೆಗೆ ನೀಡಿ ಎಂದು ಈ ನೆಲದ ಸಫಾಯಿ ಕರ್ಮಚಾರಿಗಳು ಹಾಗೂ ಮಲ ಬಳೆಯುವ ಪೌರಕಾರ್ಮಿಕರು ಕಳೆದ ಮೂರು ದಶಕಗಳಿಂದ ಅಂಗಲಾಚಿ ಪರಿತಪಿಸುತ್ತಿದ್ದರೂ ಯಾವ ಸರ್ಕಾರಗಳಿಗೂ ಹಾಗೂ ಯಾವ ನ್ಯಾಯಾಲಯಗಳಿಗೂ ಕಿಂಚಿತ್ತೂ ಅಲುಗಾಡುತ್ತಿಲ್ಲ. ಇದರ ಹಿಂದೆ ಅಸ್ಪೃಶ್ಯತೆಯು ಇನ್ನು ಹಲವಾರು ಶತಮಾನಗಳ ಕಾಲ ಅಸ್ತಿತ್ವದಲ್ಲಿರಬೇಕೆಂಬ ಉದ್ದೇಶ ಅಡಗಿದೆ ಎಂದು ಎನಿಸುತ್ತಿದೆ. ಕಸ ಬಳಿಯುವವರು ಕಾಲಾನುಕಾಲದಿಂದ ಕಸಬಳಿಯುತ್ತಲೇ ಇರಬೇಕೆಂಬ ಶ್ರೇಣಿಕೃತ ವ್ಯವಸ್ಥೆಯ ಹುನ್ನಾರದ ಮುಂದುವರೆದ ಭಾಗವೇ ಇದು ಎಂಬುದನ್ನು ಈ ದೇಶದ ಪ್ರಜಾತಂತ್ರವಾದಿಗಳು ಹಾಗೂ ಪ್ರಗತಿಪರವಾದದ ಪೊರೆ ಆವರಿಸಿದ ಅಣ್ಣಂದಿರು ಅರ್ಥಮಾಡಿಕೊಂಡರೆ, ಅರೆಗಳಿಗೆಯಲ್ಲಿ ಹಸಿದ ಜನಗಳಿಗೆ ಹಳಸಿದ ಅನ್ನವನ್ನಾದರೂ ನೀಡಿ, ಅರೆ ಜೀವದಲ್ಲಿರುವ ಅಸಂಖ್ಯಾತ ಅಸ್ಪೃಶ್ಯ ಸಮುದಾಯಗಳನ್ನು ಅರೆಕಾಲಿಕವಾಗಿಯಾದರೂ ಐಸಿಯುನಿಂದ ಜನರಲ್ ವಾರ್ಡ್‍ಗೆ ಸ್ಥಳಾಂತರಿಸಬಹುದಾಗಿದೆ ಎಂದು ನಂಬಿದ್ದೇನೆ.

ಅಂಬಣ್ಣ ಅರೋಲಿಕರ್

(ತಮ್ಮ ಹೋರಾಟದ ಹಾಡುಗಳ ಗಾಯನದಿಂದ ಪ್ರಖ್ಯಾತವಾಗಿದ್ದ ಅಂಬಣ್ಣ ಅರೋಲಿಕರ್ ಈಗ ಮಾದಿಗ ಮೀಸಲಾತಿ ಹೋರಾಟದ ರಾಜ್ಯ ಮಟ್ಟದ ನಾಯಕರಲ್ಲೊಬ್ಬರು. ರಾಯಚೂರಿನಲ್ಲಿ ಜನಬಲ ಟೈಮ್ಸ್ ದಿನಪತ್ರಿಕೆಯನ್ನು ನಡೆಸುತ್ತಿರುವ ಅಂಬಣ್ಣ ಕಳೆದ ಮೂರು ದಶಕಗಳಿಗಿಂತ ಹೆಚ್ಚು ಸಮಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಕ್ರಿಯಾಶೀಲ ವ್ಯಕ್ತಿ.)


ಇದನ್ನೂ ಓದಿ: ಒಳ ಮೀಸಲಾತಿ: ಕಣ್ಣ ಗಾಯವನರಿಯುವ ಕ್ರಮ – ಹುಲಿಕುಂಟೆ ಮೂರ್ತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...