Homeಮುಖಪುಟಒಳಮೀಸಲಾತಿಯೆಂಬುದು ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರ - ಅಂಬಣ್ಣ...

ಒಳಮೀಸಲಾತಿಯೆಂಬುದು ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರ – ಅಂಬಣ್ಣ ಅರೋಲಿಕರ್

ಬಲಾಢ್ಯರು ಹಾಗೂ ಬಡಕಲು ವ್ಯಕ್ತಿಗಳ ನಡುವೆ ಸ್ಪರ್ಧೆಗೆ ಅವಕಾಶ ನೀಡಿದರೆ ಅಂತಿಮವಾಗಿ ಅನ್ಯಾಯವಾಗುವುದು ಮಾತ್ರ ಬಡಕಲು ವ್ಯಕ್ತಿಗಳಿಗೆ ಎಂಬ ಸರಳ ಸತ್ಯವು ಬಹುತೇಕರಿಗೆ ಅರ್ಥವಾಗದಿರುವುದು ಈ ದೇಶದ ದೌರ್ಭಾಗ್ಯವೇ ಸರಿ.

- Advertisement -
- Advertisement -

ಸ್ವಾತಂತ್ರ್ಯ ನಂತರದ 70 ವರ್ಷಗಳ ಅವಧಿಯಲ್ಲಿ ಸರಿ ಸುಮಾರು ಮೂವತ್ತೈದು ವರ್ಷಗಳ ಕಾಲ, ಪರಿಶಿಷ್ಟ ಜಾತಿಗಳಿಗೆ ಮೀಸಲಿಟ್ಟ 15% ಮೀಸಲಾತಿಯನ್ನು ಆದ್ಯತೆಯನುಸಾರ ಬಲಹೀನರಿಗೆ ಹಾಗೂ ಅವಕಾಶ ವಂಚಿತರಿಗೆ ಅವರವರ ಆರ್ಥಿಕ ಅಸಮಾನತೆಗಳ ಆಧಾರದ ಮೇಲೆ, ವಿದ್ಯೆ ಹಾಗೂ ಉದ್ಯೋಗವಕಾಶಗಳಿಗೆ ಮಾತ್ರ ಉಪಯುಕ್ತವಾಗುವಂತೆ ಹಂಚುವಂತೆ ಹೋರಾಡುತ್ತಿರುವುದೇ ಬಹುದೊಡ್ಡ ಅಪರಾಧವೆಂಬಂತೆ ಚಿತ್ರೀಕರಿಸಲಾಗುತ್ತಿದೆ. ಬಹುತೇಕ ಎಲ್ಲಾ ನ್ಯಾಯಪಾಲಕರು ಹಾಗೂ ಬುದ್ಧಿಜೀವಿಗಳೆನಿಸಿಕೊಂಡ ಅಕ್ಷರಸ್ಥರು ತಮ್ಮ ತಮ್ಮ ಅವಗಾಹನೆಗೆ ತಕ್ಕಂತೆ ವಿಶ್ಲೇಷಣೆ ಮಾಡುತ್ತಾ, ಹಸಿದು ಹೌಹಾರಿದ ಸಮುದಾಯಗಳ ಮೇಲೆ ಅತಿಕ್ರಮಣ ನಡೆಸಿರುವುದು ಬಿಟ್ಟರೆ, ಆ ಸಮುದಾಯಗಳ ಹಸಿವಿನ ಬೇಗುದಿಯನ್ನು ಯಾವ ರೀತಿಯಾಗಿ ಶಮನ ಮಾಡಬೇಕೆಂಬುದರ ಬಗ್ಗೆ ಚಿಂತಿಸಲೇ ಇಲ್ಲ. ಇದು ‘ಸೋತವರ ಮೇಲೆ ಬಲಿತವರು ಬಿದ್ದರು’ ಎಂಬಂತಾಗಿದೆ. ಇದು ಈ ದೇಶದ ಪ್ರಗತಿಪರ, ಜೀವಪರ, ಜನಪರತೆಯ ಕಾಳಜಿಗೆ ಬಹುದೊಡ್ಡ ನಿದರ್ಶನವಾಗಿದೆ.

ಬಹುಸಂಖ್ಯಾತ ಅಸ್ಪೃಶ್ಯ ಸಮುದಾಯಗಳು ಕಳೆದ 35 ವರ್ಷಗಳಲ್ಲಿ ಸತತವಾಗಿ ಹೋರಾಡಿದ ಪರಿಣಾಮದಿಂದ ಕಾಂಗ್ರೆಸ್ ಸರ್ಕಾರವು ನ್ಯಾಯಮೂರ್ತಿ ಎ.ಜೆ ಸದಾಶಿವರವರ ಏಕಸದಸ್ಯ ಆಯೋಗವನ್ನು ನೇಮಿಸಿದರೆ, ಬಿಜೆಪಿ ಸರ್ಕಾರವು ಆಯೋಗದ ಸಮೀಕ್ಷೆಗೆ ಅನುದಾನವನ್ನು ನೀಡಿದೆ. ಇನ್ನು ಜೆಡಿಎಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವುದಾಗಿ ಲಿಖಿತ ಭರವಸೆಯನ್ನು ನೀಡಿದೆ. ಹೀಗಿರುವಾಗ ಈ ರಾಜ್ಯದ 224 ಶಾಸಕರು ಈ ಆಯೋಗದ ಶಿಫಾರಸ್ಸುಗಳನ್ನು ಸರ್ವಾನುಮತದಿಂದ ಅಂಗೀಕರಿಸಿ ಜಾರಿಗೊಳಿಸಲು ಯಾವ ಸೀಮೆಯ ಸಾಮಾಜಿಕ ನ್ಯಾಯ ಅಡ್ಡ ಬರುತ್ತದೆಯೋ? ಉತ್ತರಿಸಬೇಕಾದ ಜವಾಬ್ದಾರಿ ಸರ್ವ ಪಕ್ಷಗಳಿಗೆ ಸೇರಿದ ವಿಚಾರವಾಗಿದೆ.

ಇದನ್ನೂ ಓದಿ: ಒಳಮೀಸಲಾತಿಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯ ಎನು? – ಡಾ.ನರಸಿಂಹ ಗುಂಜಹಳ್ಳಿ

ಹೌದು ಇಂತಹ ಅಭಿಪ್ರಾಯವು ಒಂದಷ್ಟು ಜನರಿಗೆ ಅತಿಶಯೋಕ್ತಿ ಎನಿಸಿದರೂ ಅಕ್ಷರಶಃ ಅಸ್ಪೃಶ್ಯ ಸಮುದಾಯಗಳ ಪಾಲಿಗೆ ಹಾಗೂ ಅವಕಾಶ ವಂಚಿತರಿಗೆ ಅತಿ ಹತ್ತಿರವಾದ ಅನುಭವದ ಮಾತಾಗಿದೆ. ದೇಶದ ಯಾವುದೇ ರಾಜ್ಯಗಳಲ್ಲೂ ಅಸ್ಪೃಶ್ಯ ಸಮುದಾಯಗಳ ಪಟ್ಟಿಯಲ್ಲಿ ಅಸ್ಪೃಶ್ಯೇತರರು ಸೇರ್ಪಡೆಯಾಗದೆ ಕರ್ನಾಟಕದಲ್ಲಿ ಮಾತ್ರ ಇದು ಸಾಧ್ಯವಾಗಿದೆ. ಸ್ಪೃಶ್ಯರು ಸಹ ಆರ್ಥಿಕವಾಗಿ ಅತ್ಯಂತ ಸಬಲರು ಎನ್ನುತ್ತಿಲ್ಲ, ಆದರೆ ಬಲಾಢ್ಯರು ಹಾಗೂ ಬಡಕಲು ವ್ಯಕ್ತಿಗಳ ನಡುವೆ ಸ್ಪರ್ಧೆಗೆ ಅವಕಾಶ ನೀಡಿದರೆ ಅಂತಿಮವಾಗಿ ಅನ್ಯಾಯವಾಗುವುದು ಮಾತ್ರ ಬಡಕಲು ವ್ಯಕ್ತಿಗಳಿಗೆ ಎಂಬ ಸರಳ ಸತ್ಯವು ಅತ್ತ ಸರ್ಕಾರ ಹಾಗೂ ಸರ್ವೋಚ್ಚ ನ್ಯಾಯಾಲಯಗಳಿಗೆ ಇತ್ತ ಸಾಮಾಜಿಕ ನ್ಯಾಯದ ಪರ ಶತಮಾನಗಳ ಕಾಲ ಬೊಗಳೆ ಬಿಡುವ ಬುದ್ಧಿವಂತರಿಗೂ ಅರ್ಥವಾಗದೆ ಇರುವುದು ಈ ದೇಶದ ದೌರ್ಭಾಗ್ಯವೇ ಸರಿ. ಆರ್ಥಿಕವಾಗಿ ಬಲಹೀನರಾದವರಿಗೆಲ್ಲಾ ಮೀಸಲಾತಿಯನ್ನು ನೀಡಿದಂತೆ ಸ್ಪೃಶ್ಯ ಸಮುದಾಯಗಳಿಗೂ ಅವರ ಆರ್ಥಿಕ, ಶೈಕ್ಷಣಿಕ ಆದ್ಯತೆಗಳ ಅನುಸಾರ ವಿಶೇಷವಾದ ಮೀಸಲಾತಿಯನ್ನು ನೀಡಲು ಯಾರ ಅಭ್ಯಂತರವೂ ಇಲ್ಲ. ಆದರೆ ಇಲ್ಲಿ ಆಗಿರುವುದೆ ಬೇರೆ – ರಾಜಕೀಯ ಪಕ್ಷಗಳು ತಮ್ಮ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಡಜನ್‍ಗೂ ಅಧಿಕ ಜಾತಿಗಳನ್ನು ತಮ್ಮ ಮನಸೋ ಇಚ್ಚೆ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಮೂಲಕ ಮೂಲ ಪರಿಶಿಷ್ಟರಿಗೆ ಆಗಬಹುದಾದ ಸಹಜ ಅನ್ಯಾಯದ ಅಪಾಯವನ್ನು ಲೆಕ್ಕಿಸದೆ ಇರುವುದು ದುರಂತ.

ಈ ಪ್ರಕ್ರಿಯೆ ಯಾವುದೇ ಪ್ರಗತಿಪರ ಕಾಳಜಿಯುಳ್ಳ ಮತಿವಂತರಿಗೆ ಅರ್ಥವಾಗದೇ ಇರುವುದು ಅತ್ಯಂತ ಘೋರ ಅಪರಾಧವೆಂದೆ ಹೇಳಬೇಕಿದೆ. ಇದ್ಯಾವುದು ಕಾನೂನಿನ ಪ್ರಕಾರ ಅಪರಾಧವಲ್ಲ. ಆದರೆ ಇರುವ ಮೀಸಲಾತಿಯನ್ನು ಕಟ್ಟಕಡೆಯ ಜನರಿಗೆ ಪ್ರಾಮಾಣಿಕವಾಗಿ ಹಂಚಬೇಕೆಂಬ ಪರಿಕಲ್ಪನೆಯನ್ನೇ ಸಂವಿಧಾನಬಾಹಿರವೆನ್ನುವ ಆಷಾಡಭೂತಿತನ ಮಾತ್ರ ಮನುವಾದ, ಕೋಮವಾದಕ್ಕಿಂತಲೂ ಕ್ರ್ರೂರತನದ್ದಾಗಿದೆ. ಇನ್ನು ಮೇಲ್ಜಾತಿಗಳಿಗೆ ಮೀಸಲಾತಿಯ ಹೆಚ್ಚಳವಾಗುವುದು ಇರಲಿ, ಎಲ್ಲಾ ವಲಯಗಳು ಕಾರ್ಪೋರೇಟ್ ಕಬಂದಬಾಹುಗಳಿಗೆ ಸಿಲುಕಿ ಖಾಸಗೀಕರಣವಾಗಿರುವುದಾಗಲಿ ಇವರಿಗೆ ಅಪಾಯಕಾರಿ ಎನಿಸುವುದಿಲ್ಲ. ಹಳ್ಳಿಗಾಡಿನ, ಅನಕ್ಷರಸ್ಥ ಸಮುದಾಯಗಳು ನಡೆಸುವ ಹಳ್ಳಿಕಟ್ಟೆ ಪಂಚಾಯ್ತಿಯಲ್ಲಿ ಬಗೆಹರಿಯಬಹುದಾದ ಪಿತ್ರಾರ್ಜಿತ ಅಸ್ತಿಯ ಹಂಚಿಕೆಯಂತೆ ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರವು ದೆಹಲಿ ಹಂತದ ಪಂಚಾಯಿತಿಯಲ್ಲಿ ಕಳೆದ 70 ವರ್ಷಗಳಿಂದಲೂ ಬಗೆಹರಿಯದೆ, ಅನಿರ್ಧಿಷ್ಟ ಕಾಲದವರೆಗೂ ವಾದ ವಿವಾದಗಳಲ್ಲೇ ಕಾಲಹರಣವಾಗುತ್ತಿದೆ. ಇದು ಎರಡು ತಲೆಮಾರುಗಳ ಕೋಟ್ಯಾಂತರ ಜನಗಳ ವಿದ್ಯೆ ಹಾಗೂ ಉದ್ಯೋಗದ ವಂಚನೆಗೆ ಕಾರಣವಾಗಿದೆ.

ಪರಿಶಿಷ್ಟ ಜಾತಿಗಳು ಇದುವರೆಗೂ ಎತ್ತಿರುವ ಪ್ರಶ್ನೆ ಮೀಸಲಾತಿ ಹೆಚ್ಚಳವಾಗಬೇಕಂದಲ್ಲ. ಈಗಾಗಲೇ ಅಸ್ಪೃಶ್ಯರಲ್ಲೇ ಅತೀ ಬುದ್ಧಿವಂತರಾದ ಪ್ರಭಾವಿ ರಾಜಕಾರಣಿಗಳು ಹಾಗೂ ಅಕ್ರಮವಾಗಿ ನುಸುಳಲ್ಪಟ್ಟ ಅಸ್ಪೃಶ್ಯೇತರರು ಇರುವ ಎಲ್ಲಾ ಅವಕಾಶಗಳನ್ನು ಬಾಚಿ ತಿಂದು ಬಲಾಢ್ಯರಾಗಿ ಮೆರೆಯುತ್ತಿರುವಾಗ, ಇದ್ದ ಬಿದ್ದ ಹಳಸಲು ಅನ್ನವನ್ನಾದರು ನಮ್ಮ ಹಸಿದ ಹೊಟ್ಟೆಗೆ ನೀಡಿ ಎಂದು ಈ ನೆಲದ ಸಫಾಯಿ ಕರ್ಮಚಾರಿಗಳು ಹಾಗೂ ಮಲ ಬಳೆಯುವ ಪೌರಕಾರ್ಮಿಕರು ಕಳೆದ ಮೂರು ದಶಕಗಳಿಂದ ಅಂಗಲಾಚಿ ಪರಿತಪಿಸುತ್ತಿದ್ದರೂ ಯಾವ ಸರ್ಕಾರಗಳಿಗೂ ಹಾಗೂ ಯಾವ ನ್ಯಾಯಾಲಯಗಳಿಗೂ ಕಿಂಚಿತ್ತೂ ಅಲುಗಾಡುತ್ತಿಲ್ಲ. ಇದರ ಹಿಂದೆ ಅಸ್ಪೃಶ್ಯತೆಯು ಇನ್ನು ಹಲವಾರು ಶತಮಾನಗಳ ಕಾಲ ಅಸ್ತಿತ್ವದಲ್ಲಿರಬೇಕೆಂಬ ಉದ್ದೇಶ ಅಡಗಿದೆ ಎಂದು ಎನಿಸುತ್ತಿದೆ. ಕಸ ಬಳಿಯುವವರು ಕಾಲಾನುಕಾಲದಿಂದ ಕಸಬಳಿಯುತ್ತಲೇ ಇರಬೇಕೆಂಬ ಶ್ರೇಣಿಕೃತ ವ್ಯವಸ್ಥೆಯ ಹುನ್ನಾರದ ಮುಂದುವರೆದ ಭಾಗವೇ ಇದು ಎಂಬುದನ್ನು ಈ ದೇಶದ ಪ್ರಜಾತಂತ್ರವಾದಿಗಳು ಹಾಗೂ ಪ್ರಗತಿಪರವಾದದ ಪೊರೆ ಆವರಿಸಿದ ಅಣ್ಣಂದಿರು ಅರ್ಥಮಾಡಿಕೊಂಡರೆ, ಅರೆಗಳಿಗೆಯಲ್ಲಿ ಹಸಿದ ಜನಗಳಿಗೆ ಹಳಸಿದ ಅನ್ನವನ್ನಾದರೂ ನೀಡಿ, ಅರೆ ಜೀವದಲ್ಲಿರುವ ಅಸಂಖ್ಯಾತ ಅಸ್ಪೃಶ್ಯ ಸಮುದಾಯಗಳನ್ನು ಅರೆಕಾಲಿಕವಾಗಿಯಾದರೂ ಐಸಿಯುನಿಂದ ಜನರಲ್ ವಾರ್ಡ್‍ಗೆ ಸ್ಥಳಾಂತರಿಸಬಹುದಾಗಿದೆ ಎಂದು ನಂಬಿದ್ದೇನೆ.

ಅಂಬಣ್ಣ ಅರೋಲಿಕರ್

(ತಮ್ಮ ಹೋರಾಟದ ಹಾಡುಗಳ ಗಾಯನದಿಂದ ಪ್ರಖ್ಯಾತವಾಗಿದ್ದ ಅಂಬಣ್ಣ ಅರೋಲಿಕರ್ ಈಗ ಮಾದಿಗ ಮೀಸಲಾತಿ ಹೋರಾಟದ ರಾಜ್ಯ ಮಟ್ಟದ ನಾಯಕರಲ್ಲೊಬ್ಬರು. ರಾಯಚೂರಿನಲ್ಲಿ ಜನಬಲ ಟೈಮ್ಸ್ ದಿನಪತ್ರಿಕೆಯನ್ನು ನಡೆಸುತ್ತಿರುವ ಅಂಬಣ್ಣ ಕಳೆದ ಮೂರು ದಶಕಗಳಿಗಿಂತ ಹೆಚ್ಚು ಸಮಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಕ್ರಿಯಾಶೀಲ ವ್ಯಕ್ತಿ.)


ಇದನ್ನೂ ಓದಿ: ಒಳ ಮೀಸಲಾತಿ: ಕಣ್ಣ ಗಾಯವನರಿಯುವ ಕ್ರಮ – ಹುಲಿಕುಂಟೆ ಮೂರ್ತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...