Homeಕರ್ನಾಟಕಕರ್ನಾಟಕದಲ್ಲಿ ನೆರೆಯಿಂದಾದ ಕೃಷಿ ನಷ್ಟ ಎಷ್ಟು?

ಕರ್ನಾಟಕದಲ್ಲಿ ನೆರೆಯಿಂದಾದ ಕೃಷಿ ನಷ್ಟ ಎಷ್ಟು?

- Advertisement -
- Advertisement -

ಈ ಬಾರಿಯ ಮಳೆ ಮತ್ತು ಪ್ರವಾಹಕ್ಕೆ ರಾಜ್ಯದ 2/3 ಜಿಲ್ಲೆ ಮತ್ತು ತಾಲೂಕುಗಳು ಬಲಿಯಾಗಿವೆ. ನೇರವಾಗಿ ಮಳೆ ಬಿದ್ದು ಅದರಿಂದುಂಟಾದ ಪ್ರವಾಹಕ್ಕೆ ತುತ್ತಾದ ತಾಲೂಕುಗಳು ಒಂದೆಡೆಯಾದರೆ, ಅಂಥಾ ಅನಾಹುತಕಾರಿ ಮಳೆ ಇಲ್ಲದೆಯೂ, ಮಲೆನಾಡು ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಸುರಿದ ನೀರು ಹರಿಯಬಿಟ್ಟ ಕಾರಣ ಉಂಟಾದ ನೆರೆಗೆ ಬಲಿಯಾದ ತಾಲೂಕುಗಳು ಇನ್ನೊಂದೆಡೆ. ರಸ್ತೆ, ಸೇತುವೆ ಮುಂತಾದವುಗಳು ಕೊಚ್ಚಿಹೋದ ಕಾರಣಕ್ಕುಂಟಾದ ಮೂಲ ಸಂರಚನೆಯ ನಷ್ಟ, ಖಾಸಗಿ ಮನೆ ಮಠ, ಪಂಪ್‍ಸೆಟ್ ಇತ್ಯಾದಿಗಳ ನಷ್ಟ ಸಾವಿರಾರು ಕೋಟಿ ರೂಪಾಯಿಗಳು. ಇದಕ್ಕಿಂತಲೂ ಘೋರವೆಂದರೆ ಲಕ್ಷಾಂತರ ಎಕರೆಗಳಲ್ಲಿ ಸಾಗುವಳಿ ಆದ ಬೆಳೆ ನಾಶ. ಪ್ರವಾಹ ಮತ್ತು ಕುಂಭದ್ರೋಣ ಮಳೆಗೆ ತುತ್ತಾದ ಜಿಲ್ಲೆಗಳ ಸಾಗುವಳಿ ಜಮೀನಿನ ಪ್ರಮಾಣ ನೋಡಿ. ಇದರಲ್ಲಿ ಶೇ. 50-70ರಷ್ಟು ಬೆಳೆ ನಾಶವಾಗುವುದು ಖಂಡಿತ. ಕೃಷಿ ವಿಜ್ಞಾನಿಗಳು ಹೇಳಿದ ಹಾಗೆ ಒಂದು ವಾರ ಬಿಡಿ; ಕೇವಲ ಮೂರು ದಿನ ನೀರು ನಿಂತರೆ ಭತ್ತ ಮತ್ತು ಸ್ವಲ್ಪಮಟ್ಟಿಗೆ ರಾಗಿ ಮಾತ್ರ ತಾಳಿಕೊಳ್ಳಬಲ್ಲುದು. ಉಳಿದ ಬೆಳೆಗಳು ಪೋಷಕಾಂಶ ಹೀರಲಾಗದೇ ನಲುಗುತ್ತವೆ. ಅದೇರೀತಿ ಮೋಡ ಮುಸುಕಿದ ವಾತಾವರಣ ವಾರ ಕಾಲ ಇದ್ದರೆ ದ್ಯುತಿ ಸಂಶ್ಲೇಷಣೆ ಮಾಡಲಾಗದೇ ಗಿಡಗಳು ಸೊರಗುತ್ತವೆ. ಈ ಕಾರಣಕ್ಕೇ ಇಳುವರಿ ಶೇ.50-70ರಷ್ಟು ನಷ್ಟವಾಗುತ್ತದೆ.

ಈ ಮಳೆ ಹಾನಿಗೊಳಗಾದ ಭೂಪ್ರದೇಶದಲ್ಲಿ ಮೂರು ವಿಧವಿದೆ.
1. ಮಲೆನಾಡಿನ ವ್ಯಾಪಾರಿ ಬೆಳೆಗಳಾದ ಅಡಿಕೆ, ಕಾಫಿ ಬೆಳೆಯುವ ಪ್ರದೇಶ; ಇಲ್ಲಿ ಕಡುಬೇಸಿಗೆಯಿಂದಲೇ ಕಾಫಿ ಮತ್ತು ಅಡಿಕೆ ನಲುಗಿದ್ದು, ಈಗಿನ ಮಳೆಯಿಂದಾಗಿ ಕೊಳೆರೋಗ ಸಹಿತ ತೀವ್ರ ರೋಗ ಬಾಧೆಗೆ ತುತ್ತಾಗಿ ಬೆಳೆ ನಷ್ಟವಾಗುವ ಸಾಧ್ಯತೆ ದಟ್ಟವಾಗಿದೆ. ಈ ಪ್ರದೇಶದ ಸಾವಿರಾರು ಎಕರೆಗಳಲ್ಲಿ ಬಡ ಸಣ್ಣರೈತರು ಉಣ್ಣುವ ಸಲುವಾಗಿಯೇ ಮಳೆಆಶ್ರಿತ ಭತ್ತ ಬೆಳೆಯುತ್ತಾರೆ. (ಭತ್ತ ಬಿಟ್ಟು ಬೇರೆ ಯಾವ ಧಾನ್ಯವನ್ನೂ ಇವರು ಬೆಳೆಯುವುದಿಲ್ಲ) ಆರಂಭದಲ್ಲಿ ಮಳೆ ಇಲ್ಲದ ಕಾರಣ ಈ ರೈತರ ಭತ್ತದ ನಾಟಿ ಈ ಬಾರಿ ತಡವಾಗಿದೆ. ಈಗ ಭೀಷಣ ಮಳೆಯಿಂದಾಗಿ ಭತ್ತದ ಇಳುವರಿ ಕುಂಠಿತ/ ನಾಶವಾಗಲಿದೆ.

2. ಭೀಕರ ಮಳೆ ಮತ್ತು ಪ್ರವಾಹ ಎರಡಕ್ಕೂ ತುತ್ತಾದ ಪ್ರದೇಶಗಳು: ಬೆಳಗಾವಿ, ಗದಗ, ಭಾಗಶಃ ಶಿವಮೊಗ್ಗ, ಬಾಗಲಕೋಟೆಯಂಥಾ ಪ್ರದೇಶಗಳು ಪ್ರವಾಹ ಮತ್ತು ಹನಿ ಕಡಿಯದ ಮಲೇ ಎರಡರಿಂದಲೂ ಬಾಧೆ ಅನುಭವಿಸಿವೆ. ಇಲ್ಲಿನ ಬೆಳೆಗಳು ನಾನು ಮೇಲೆ ಹೇಳಿದ ಎರಡೂ ಕಾರಣಗಳಿಂದ ನಾಶವಾಗಲಿವೆ.

3. ಮಳೆ ಇಲ್ಲದಿದ್ದರೂ ತುಂಗೆ, ಭೀಮಾ, ಮಲಪ್ರಭ, ಕೃಷ್ಣಾಗಳ ಭರಪೂರ ನೀರಿನ ಪ್ರವಾಹದಿಂದ ನಲುಗಿದ ಜಿಲ್ಲೆಗಳಲ್ಲೂ ಬೆಳೆ ಸಂಪೂರ್ಣ ನಾಶವಾಗುವ ಸಾಧ್ಯತೆ ಇದೆ.

ಸುಮ್ಮನೆ ಲೆಕ್ಕ ಹಾಕಿ, ಈ ಕೃಷಿ ಪ್ರದೇಶ ಕರ್ನಾಟಕದ ಒಟ್ಟಾರೆ ಕೃಷಿ ಪ್ರದೇಶದ ಶೇ..70ರಷ್ಟಿದೆ. ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದ ಹಾಗೆ 40 ಲಕ್ಷ ಹೆಕ್ಟೇರ್ ಜಮೀನು ಬಾಧೆಗೊಳಗಾಗಿದೆ ಎಂದೇ ಇಟ್ಟುಕೊಂಡು; ಹೆಕ್ಟೇರಿಗೆ ಕನಿಷ್ಠ 25 ಸಾವಿರ ನಷ್ಟದಂತೆ ಅಂದಾಜು ಮಾಡಿದರೂ, ಒಟ್ಟಾರೆ ನಷ್ಟ 15 ಸಾವಿರ ಕೋಟಿ ಮೀರಲಿದೆ.

ನೆನಪಿಡಿ. ಇದು ಈ ಮುಂಗಾರು ಬೆಳೆಯ ನಷ್ಟ. ನೆನಪಿಡಬೇಕಾದ್ದು ಈ ಬಾರಿ ಮುಂಗಾರು ಕೈಕೊಟ್ಟ ಕಾರಣ ರೈತರು ಎರಡೆರಡು ಬಾರಿ ಬಿತ್ತನೆ ಮಾಡಿದ್ದಿದೆ. ಮಳೆಯಿಲ್ಲದೇ ಆದ ನಷ್ಟ ಮತ್ತು ಅತಿವೃಷ್ಟಿಯಿಂದಾದ ನಷ್ಟ ಲೆಕ್ಕ ಹಾಕಿದರೆ ತಲೆ ತಿರುಗುತ್ತದೆ.

ಈ ಮಳೆ ಈಗ ಒಮ್ಮೆ ಕಮ್ಮಿ ಆಗಿ ಮತ್ತೆ ಶುರು ಹಚ್ಚಿಕೊಂಡು, ನಾಡಿದ್ದು ಹಿಂಗಾರಿನಲ್ಲಿ ಒಂದೆರಡು ಅಧಿಕ ಮಳೆ ಬಂದರೂ ಹಿಂಗಾರು ಬೆಳೆಯೂ ಕೈಗೆ ದಕ್ಕುವುದು ಕಷ್ಟ. ತೀವ್ರ ನೀರು ನಿಂತಾಗ ಮಣ್ಣಿನ ಜೈವಿಕ ಚಟುವಟಿಕೆ ಬಂದ್ ಆಗಿ ಮಣ್ಣಿನ ಸ್ವರೂಪವೇ ಬದಲಾಗುತ್ತದೆ. ಇದು ಮೊದಲಿನ ಮಟ್ಟಕ್ಕೆ ಬರಲು ಎರಡು ವರ್ಷ ಬೇಕು.

ಮೂರು R – Relief, Rehabilitation and Reconstruction ಎಂಬ ಸೂತ್ರ ಇದೆ. ನಮ್ಮ ಸರ್ಕಾರ ಮೊದಲನೆಯದ್ದನ್ನು ನಿಭಾಯಿಸೀತು. ಎರಡನೆಯದಕ್ಕೆ ಗಮನಾರ್ಹ ಹಣ ಬೇಕು. ಮತ್ತು ಇದನ್ನು ಕಾಲಮಿತಿಯಲ್ಲಿ ಮಾಡಬೇಕು.

ಮೂರನೆಯ- ಪುನರ್ರಚನೆ ಎಂಬುದು ಒಟ್ಟಾರೆ ಕೃಷಿಯನ್ನು ಸುಸ್ಥಿರಗೊಳಿಸಲು ಬೇಕಾದ ದೀರ್ಘಕಾಲೀನ ಮಾರ್ಗೋಪಾಯಗಳ ಬಗ್ಗೆ. ಈ ಕುರಿತಂತೆ ಸರ್ಕಾರದ ಮಿದುಳು ಸಂಪೂರ್ಣ ಖಾಲಿಯಾಗಿರುವುದು ಈಗಾಗಲೇ ಬಂದಿರುವ ನೀತಿ ಪತ್ರಗಳಲ್ಲಿ ಗೋಚರಿಸುವ ಕಾರಣ ಆ ಬಗ್ಗೆ ಹೆಚ್ಚೇನು ನಿರೀಕ್ಷಿಸುವಂತಿಲ್ಲ. ಆದರೆ ಹವಾಮಾನ ಬದಲಾವಣೆ ಈಗ ಮನೆ ಬಾಗಿಲು ತಟ್ಟುತ್ತಿರುವ ಮಾರಿ ಎಂಬುದು ಸರ್ಕಾರಕ್ಕೆ ಗೊತ್ತಾದರೆ ಆಮೂಲಾಗ್ರವಾಗಿ ಹೊಸ ಕಾರ್ಯಸೂಚಿಗೆ ಅದು ತಯಾರಾಗಬೇಕು. ಹವಾಮಾನ ಬದಲಾವಣೆ ಎಂದರೆ ವಯಸ್ಸಾದಂತೆ ಚಳಿಯಾಗುವ ಸಂಗತಿ ಎಂದು ಭಾವಿಸುವ ಪ್ರಧಾನಿ ಇರುವಾಗ ನಮ್ಮ ನಾಯಕರು ಇನ್ನೇನು ಯೋಚಿಸಿಯಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...