Homeಮುಖಪುಟಕಾಶ್ಮಿರದ ವಸ್ತುಸ್ಥಿತಿ: ಭಾರತದ ಮಾಧ್ಯಮದ ವರದಿಗೆ ವಿರುದ್ಧವಾಗಿ ಅಂತರಾಷ್ಟ್ರೀಯ ಮಾಧ್ಯಮದ ವರದಿಗಳು

ಕಾಶ್ಮಿರದ ವಸ್ತುಸ್ಥಿತಿ: ಭಾರತದ ಮಾಧ್ಯಮದ ವರದಿಗೆ ವಿರುದ್ಧವಾಗಿ ಅಂತರಾಷ್ಟ್ರೀಯ ಮಾಧ್ಯಮದ ವರದಿಗಳು

- Advertisement -
- Advertisement -

ಗೃಹ ಸಚಿವ ಅಮಿತ್ ಶಾ 370ನೇ ವಿಧಿಯ ರದ್ದು ಮಾಡಿ ಎಂಟ್ಹತ್ತು ದಿನಗಳು ಕಳೆದಿವೆ. ‘ಇದೊಂದು ಐತಿಹಾಸಿಕ ನಿರ್ಧಾರ’ ಎಂದು ದೇಶಾದ್ಯಂತ ಸಂಭ್ರಮವಿದೆ ಎಂದು ನಮ್ಮ ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿದವಷ್ಟೇ. ಆದರೆ ಕಾಶ್ಮೀರದ ನಿವಾಸಿಗಳು ಮತ್ತು ಹೊರಗಡೆ ಇರುವ ಕಾಶ್ಮೀರಿಗಳ ಧ್ವನಿ, ಅಭಿಪ್ರಾಯಗಳ ಸುದ್ದಿ ಕಾಣಲೇ ಇಲ್ಲ, ಕೇಳಿಸಲೇ ಇಲ್ಲ. ಕಾಶ್ಮೀರದಲ್ಲಿನ ಸಂಪರ್ಕ ವ್ಯವಸ್ಥೆಯನ್ನೇ ಬರಖಾಸ್ತು ಮಾಡಲಾಗಿತ್ತು. ಮೊಬೈಲ್, ಲ್ಯಾಂಡ್‍ಲೈನ್, ಇಂಟರ್‍ನೆಟ್ ಸಂಪರ್ಕಗಳನ್ನೆಲ್ಲ ಕಡಿತಗೊಳಿಸಲಾಗಿತ್ತು. ಮೊದಲೇ ವಿಶ್ವದ ಅತಿದೊಡ್ಡ ಮಿಲಿಟರಿ ಪ್ರದೇಶವೆಂದು ಗುರುತಿಸಲ್ಪಟ್ಟ ಕಾಶ್ಮೀರದೊಳಕ್ಕೆ, 370 ವಿಧಿ ರದ್ದು ಘೋಷಿಸುವ ಪೂರ್ವದಲ್ಲಿ ಮತ್ತೆ 46 ಸಾವಿರ ಸೈನಿಕರನ್ನು ನುಗ್ಗಿಸಿ ಪಹರೆಗೆ ಬಿಡಲಾಯಿತು.

ಇವತ್ತಿಗೆ (ಮಂಗಳವಾರ) ಅಲ್ಲಿ ಸ್ಥಳಿಯ ಸುದ್ದಿ ಪತ್ರಿಕೆಗಳು ಬಿಡುಗಡೆ ಆಗದೇ 10 ದಿನ ಕಳೆದವು. ಕೊನೆಯ ಬಾರಿ ಅಲ್ಲಿ ಸ್ಥಳೀಯ ಪತ್ರಿಕೆ ಪ್ರಕಟವಾಗಿದ್ದು ಆಗಸ್ಟ್ 4ರಂದು. ಸರ್ಕಾರ ನೀಡಿದ ಪ್ರಕಟಣೆಗಳಷ್ಟೇ ಕಾಶ್ಮೀರದಲ್ಲಿ ಎಲ್ಲ ಸರಿಯಾಗಿದೆ ಎಂಬ ವಿವರ ನೀಡುತ್ತಿದ್ದವು. ಆ ಪ್ರದೇಶದಲ್ಲಿರುವ ಭಾರತೀಯ ಪತ್ರಕರ್ತರಿಗೂ ಫೋಟೋ ತೆಗೆಯಲೂ ಅವಕಾಶ ನೀಡಿರಲಿಲ್ಲ. ಆದರೆ ಪರಿಸ್ಥಿತಿಯ ಚರ್ಚೆ ಕಡಿಮೆ ಆಗತೊಡಗಿದಂತೆ ಹಲವು ಮಾಧ್ಯಮ ಧ್ವನಿಗಳು ಸತ್ಯ ಹೇಳತೊಡಗಿದವು. ಆಗ ಗೊತ್ತಾಗಿದ್ದು ಕೇಂದ್ರ ಸರ್ಕಾರ ಮಾತ್ತು ಭಾರತದ ಮುಖ್ಯವಾಹಿನಿಗಳು ಹೇಳಿದಂತೆ ಪರಿಸ್ಥಿತಿ ನಾರ್ಮಲ್ ಆಗಿರಲೇ ಇಲ್ಲ! ಸತ್ಯ ಏನಾಗಿತ್ತೆಂದರೆ, ಜನರಲ್ಲಿ ಆಕ್ರೋಶ ತುಂಬಿತ್ತು, ಆಹಾರ ಮತ್ತು ಔಷಧಿಗಳ ಕೊರತೆಯಾಗಿತ್ತು, ತುರ್ತು ಚಿಕಿತ್ಸೆಯ ನೆರವೂ ಸಿಗದೇ ಜನ ಪ್ರಾಣಾಪಾಯ ಎದುರಿಸಿದರು, ಕೆಲವು ಕಿಲೋಮೀಟರ್ ಪ್ರಯಾಣಿಸಲೂ ಸಾರಿಗೆ ವ್ಯವಸ್ಥೆ ಇಲ್ಲದೇ ಜನ ಗಂಟೆಗಟ್ಟಲೇ ಕಾದಿದ್ದರು….ಆದರೆ, ಸರ್ಕಾರಿ ವಾಹನಗಳು ಸಂಚರಿಸುತ್ತಿದ್ದ ಕೆಲವೇ ಕೆಲವು ರಸ್ತೆಗಳನ್ನು ತೋರಿಸಿದ ಮುಖ್ಯ ವಾಹಿನಿ ಮಾಧ್ಯಮಗಳು ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿದೆ ಎಂಬಂತೆ ತೋರಿಸುವ ಮೂಲಕ ಆತ್ಮವಂಚನೆ ಮಾಡಿಕೊಂಡು , ವೃತ್ತಿದ್ರೋಹವನ್ನೂ ಎಸಗಿದ್ದವು.

370ನೇ ವಿಧಿ ರದ್ದಾದ ಎರಡು ದಿನಗಳ ನಂತರ ರಕ್ಷಣಾ ಸಲಹೆಗಾರ ಅಜಿತ್ ದೋವಲಲ್ ಕಾಶ್ಮೀರಕ್ಕೆ ಹೋಗಿ ಕೆಲವು ಜನರ ಜೊತೆ ಬಿರ್ಯಾನಿ ತಿನ್ನುವ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿದ ಮಾಧ್ಯಮಗಳು, ‘ನೋಡಿ ಕಾಶ್ಮೀರದಲ್ಲಿ ಎಲ್ಲವೂ ಶಾಂತವಾಗಿದೆ. 370ನೇ ವಿಧಿ ರದ್ಧತಿಯ ನಂತರವೂ ಜನತೆ ಯಾವ ಪ್ರತಿರೋಧ ಮಾಡದೇ ಸಮ್ಮತಿಸಿದ್ದಾರೆ’ ಎಂಬ ಚಿತ್ರಣ ಕೊಡಲು ನಮ್ಮ ಮಾಧ್ಯಮಗಳು ಯತ್ನಿಸಿದವು.

ಕಾಶ್ಮೀರದ ಈ ‘ಸಹಜ’ ಪರಿಸ್ಥಿತಿಯನ್ನು ಮತ್ತು ‘ಸಂತೋಷ’ವಾಗಿರುವ ಕಾಶ್ಮೀರಿಗಳನ್ನು ಖುದ್ದಾಗಿ ನೋಡಿ ಅನುಭವಿಸಉ ಹೊರಟ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಯನ್ನು ಶ್ರೀನಗರದ ವಿಮಾನ ನಿಲ್ದಾಣದಲ್ಲೇ ತಡೆದು ದಹಲಿಗೆ ವಾಪಸ್ ಕಳಿಸಲಾಯಿತು. ಮರುದಿನ ಸಿಪಿಎಂನ ಸೀತಾರಾಂ ಯೆಚೂರಿ ಮತ್ತು ಡಿ. ರಾಜಾ ಇಂಥದ್ದೇ ಪ್ರಯತ್ನ ಮಾಡಿದಾಗ ಅವರನ್ನು ಶ್ರೀನಗರ ಪ್ರವೇಶಿಸದಂತೆ ತಡೆದು ದೆಹಲಿಗೆ ವಾಪಸ್ ಕಳಿಸಲಾಯಿತು.

ಪ್ರತಿದಿನವೂ ದೆಹಲಿಯಿಂದ ಬಿಡುಗಡೆಗೊಳ್ಳುತ್ತಿದ್ದ ಜನರಿರುವ ಮಾರ್ಕೆಟ್‍ಗಳು, ಜನ ತುಂಬಿರುವ ರಸ್ತೆಗಳು, ಹಬ್ಬಕ್ಕೂ ಮೊದಲೇ ತೆರೆದ ಮಸೀದಿಗಳ ಚಿತ್ರ ಮತ್ತು ವಿಡಿಯೋಗಳನ್ನೇ ಸತ್ಯ ಎಂಬಂತೆ ಚಾನೆಲ್‍ಗಳು ಪ್ರಸಾರ ಮಾಡಿದವು. ಕೆಲವು ಮಾಧ್ಯಮಗಳಂತೂ ಅಲ್ಲಿ 144ನೇ ಸೆಕ್ಷನ್ ಅನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಸುಳ್ಳು ವರದಿ ಮಾಡಿಬಿಟ್ಟವೂ ಕೂಡ.

ಕಾಶ್ಮೀರದಲ್ಲಿ ‘ಎಲ್ಲವೂ ಸರಿಯಿದೆ’; ಆದರೆ ನಿಜವಾಗಿಯೂ ಅಲ್ಲ….

ಆಗಸ್ಟ್ 8ರಂದು ದಿ ವೈರ್ ಸುದ್ದಿ ಪೋರ್ಟಲ್‍ನ ಸಂಪಾದಕ ಸಿದ್ದಾರ್ಥ ವರದರಾಜನ್ ಕಾಶ್ಮೀರದ ಕೆಲವು ಫೂಟೇಜ್‍ಗಳನ್ನು ಬಿಡುಗಡೆ ಮಾಡುವ ಮೂಲಕ ಸತ್ಯದ ದರ್ಶನ ಮಾಡಿಸಿದರು. ಪೆಲೆಟ್ ಗುಂಡುಗಳಿಂದ ಕಣ್ಣುಗಳಿಗೆ ಗಾಯ ಮಾಡಿಕೊಂಡು ಆಸ್ಪತ್ರೆಯಲ್ಲಿದ್ದ ಹಲವರೊಂದಿಗೆ ಸಿದ್ದಾರ್ಥರು ಮಾತಾಡಿದ್ದರು. ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟಿಸಿದ್ದಕ್ಕೆ ಈ ಗತಿ ಎಂದು ಕೆಲವರು ಹೇಳಿದರೆ, ಸುಮ್ಮನೇ ಇದ್ದ ನಮ್ಮ ಮೇಲೂ ಮಿಲಿಟರಿಯವರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಹೇಳಿದ್ದರು. ಮರುದಿನ ಆಗಸ್ಟ್ 8ರಂದು ಎನ್‍ಡಿಟಿವಿ ಪ್ರಸಾರ ಮಾಡಿದ ಪ್ರತ್ಯಕ್ಷ ವರದಿಯ ಪ್ರಕಾರ, ಕಾರ್ಗಿಲ್ ಪ್ರದೇಶದಲ್ಲಿ 370 ವಿಧಿ ರದ್ದತಿ ವಿರೋಧಿಸಿ ಹಲವು ಪ್ರತಿಭಟನೆಗಳು ನಡೆದಿದ್ದವು ಮತ್ತು ಬಹುಪಾಲು ಪ್ರದೇಶದಲ್ಲಿ ಕಫ್ರ್ಯೂ ಇನ್ನೂ ಜಾರಿಯಲ್ಲಿತ್ತು.

 

 

 

 

 

ಮೊನ್ನೆ ಶುಕ್ರವಾರದ ಪ್ರಾರ್ಥನೆಯ ನಂತರ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಶ್ರೀನಗರದ ರಸ್ತೆಗಳಲ್ಲಿ ಕಾಶ್ಮೀರದ ಧ್ವಜಗಳನ್ನು ಹಿಡಿದು, ಸ್ವಾತಂತ್ರ್ಯದ ಘೋಷಣೆಗಳನ್ನು ಕೂಗುತ್ತ ಶಾಂತಿಯುತ ಪ್ರತಿಭಟನೆಯಲ್ಲಿ ಸಾಗುವಾಗ ಭಾರತೀಯ ಸೇನೆ ಅವರತ್ತ ಗುಂಡು ಹಾರಿಸಿತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

 

ಶುಕ್ರವಾರದ ಪ್ರಾರ್ಥನೆಯ ನಂತರ ಶ್ರೀನಗರ ಸೇರಿ ಹಲವು ಕಡೆ ವಿಧಿ ರದ್ದತಿ ವಿರೋಧಿಸಿ ಬೃಹತ್ ಪ್ತಿಭಟನೆಗಳು ಜರುಗಿದ ಫೂಟೇಜ್‍ಗಳನ್ನು ಮರುದಿನ ಬಿಬಿಸಿ ಪ್ರಸಾರ ಮಾಡಿತು. ಶುಕ್ರವಾರದ ಪ್ರಾರ್ಥನೆಯ ನಂತರ ಬೃಹತ್ ಪ್ರತಿಭಟನೆಗಳು ನಡೆದಿದ್ದನ್ನು, ಪ್ರತಿಭಟನಾಕಾರರನ್ನು ಚದುರಿಸಲು ಟಿಯರ್ ಗ್ಯಾಸ್ ಸಿಡಿಸಿದ್ದನ್ನು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದನ್ನು ಫೋಟೊ ಮತ್ತು ವಿಡಿಯೋಗಳ ಮೂಲಕ ಅಲ್ ಜಝೀರಾ, ವಾಶಿಂಗ್ಟನ್ ಪೋಸ್ಟ್, ರ್ಯೂಟರ್ಸ್ ಸುದ್ದಿಸಂಸ್ಥೆಗಳು ಮಾಡಿದವು. ಬಿಬಿಸಿ, ಅಲ್ ಜಝೀರಾ, ರ್ಯೂಟರ್ಸ್‍ಗಳ ಸುದ್ದಿಗಳನ್ನು ಅಲ್ಲಗಳೆದ ಕೇಂದ್ರ ಸರ್ಕಾರ ನಂತರದಲ್ಲಿ, ಕೆಲವು ಕಲ್ಲು ತೂರುವ ಘಟನೆಗಳು ಸಂಭವಿಸಿವೆ , ಆದರೆ ಅವರ ಮೇಲೆ ಬಲ ಪ್ರಯೋಗಿಸಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಕಾಶ್ಮೀರ ಕಣಿವೆಯ ಮೂಲೆಮೂಲೆಯಲ್ಲೂ ಅಪಾರ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ, ಪುಟ್ಟ ಹಳ್ಳಿಗಳ ಪ್ರತಿ ಮನೆಯ ಮುಂದೆಯೂ ಒಬ್ಬೊಬ್ಬ ಸೈನಿಕನನ್ನು ಪಹರೆಗೆ ನಿಲ್ಲಿಸಲಾಗಿದೆ ಎಂದು ವರದಿ ಮಾಡಿರುವ ನ್ಯೂಯಾರ್ಕ್ ಟೈಮ್ಸ್, ಬಹಳಷ್ಟು ಕಡೆ ಕಲ್ಲು ತೂರಾಟದ ಮೂಲಕ ಆಕ್ರೋಶ ವ್ಯಕ್ತವಾಗುತ್ತಲೇ ಇದೆ ಮತ್ತು ಕಾಶ್ಮೀರದ ಜನರಲ್ಲಿ ಈಗ ದೊಡ್ಡ ಅಸಹನೆ ತುಂಬಿದೆ ಎಂಬುದನ್ನು ಹಲವು ಸೈನಿಕರೇ ಒಪ್ಪಿಕೊಂಡಿರುವುದನ್ನು ನಿರೂಪಿಸಿದೆ.

ಆದರೆ, ಇದೇ ಹೊತ್ತಲ್ಲಿ ಭಾರತೀಯ ಮಾಧ್ಯಮಗಳು ವಿಷಯಾಂತರ ಮಾಡಿ, ಪಾಕಿಸ್ತಾನದ ಕೋಪಿತ ನಡವಳಿಕೆಯ ಕುರಿತು ಸುದ್ದಿ ಮಾಡುತ್ತ, ಭಾರತ ತಕ್ಷಣದ ಸಂಭಾವ್ಯ ಯುದ್ಧಕ್ಕೆ ಸಿದ್ಧವಾಗಿರಬೇಕು ಎಂದು ಸುದ್ದಿ ಮಾಡುತ್ತಿದ್ದವು. ‘ಸೇನೆ ಎಂತಹ ಪರಿಸ್ಥಿತಿಯನ್ನೂ ಎದುರಿಸಲು ಸನ್ನದ್ಧವಾಗಿದೆ ಎಂದು ಮೇಜರ್ ಜನರಲ್ ಬಿಪಿನ್ ರಾವತ್ ಹೇಳುವ ವಿಡಿಯೋವನ್ನು ರಿಪಬ್ಲಿಕ್ ಟಿವಿ ಪ್ರಸಾರ ಮಾಡಿತು. ಜೀ ನ್ಯೂಸ್, ಆಜ್‍ತಕ್ ಮತ್ತು ರಿಪಬ್ಲಿಕ್ ಟಿವಿಗಳು ಸೈನಿಕರನ್ನು ಮಾತಾಡಿಸಿ, ‘ನೋಡಿ ಜೋಶ್ ಹೇಗಿದೆ’ ಎಂದೆಲ್ಲ ಅಪ್ರಬುದ್ಧ ವರದಿಗಳನ್ನು ಮಾಡುತ್ತಿವೆ. ಇದೊಂದು ಭಾರತೀಯ ಮೀಡಿಯಾದ ಸಹಜ ಹುಚ್ಚಾಟದ ಪ್ರದರ್ಶನದಂತಿದೆ: ಸರ್ಕಾರದ ವಕ್ತಾರರಂತೆ ಕೆಲಸ ಮಾಡಲು ಸುಳ್ಳನ್ನು ಹರಡುವುದು, ಅದು ಬಯಲಾದಾಗ ವಿಷಯಾಂತರ ಮಾಡಿ ಜನರ ಗಮನವನ್ನು ಬೇರೆಡೆ ಸೆಳೆಯುವುದು….

ಮೊದಲೇ ಸಮಸ್ಯಾತ್ಮಕವಾಗಿದ್ದ ಪ್ರದೇಶದಲ್ಲಿ ಭಾರತ ಸರ್ಕಾರವು ಈಗ ಬೆಂಕಿಯನ್ನು ಹಾಕಿದೆ. ಕಾಲವಷ್ಟೇ ಉತ್ತರ ಹೇಳಲಿದೆ: ಇದು ಐತಿಹಾಸಿಕ ಜಯವೋ ಅಥವಾ ಐತಿಹಾಸಿಕ ಪ್ರಮಾದವೋ ಎಂಬುದನ್ನು. ಆದರೆ ಸದ್ಯದ ಪ್ರತಿಭಟನೆ, ಪ್ರತಿರೋಧಗಳನ್ನು ನೋಡಿದರೆ, ಕಾಶ್ಮೀರ ನನ್ನ ಪ್ರದೇಶ, ಆದರೆ ಅಲ್ಲಿನ ಜನ ನಮ್ಮವರಲ್ಲ ಎಂಬ ಭಾವ ಪ್ರದರ್ಶಿಸುತ್ತಿರುವ ದೇಶವು ಕಾಶ್ಮೀರದಲ್ಲಿ ಮುಳ್ಳಿನ ಹಾದಿಯನ್ನು ಸವೆಸಬೇಕಾಗಲಿದೆ. ಈಗ ಮಾತುಕತೆ ಮತ್ತು ಸಹನೆಯ ಅಗತ್ಯತೆಯ ಕಾಲ, ‘ಜೋಶ್’ನ ಕಾಲವಲ್ಲ. ಏಕೆಂದರೆ, ಜೋಶ್‍ನಲ್ಲಿ ಜೀವಗಳು ಮತ್ತು ಹಕ್ಕುಗಳು ಮರಣಕ್ಕೀಡಾಗುತ್ತವೆ…..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...