Homeಚಳವಳಿಗಳಿಸಿಕೊಂಡಿದ್ದನ್ನೂ ಕಳೆದುಕೊಳ್ಳಬೇಕಿರುವ ಟ್ರಾನ್ಸ್-ಕ್ವಿಯರ್ ಸಮುದಾಯ : ಕಾರ್ತಿಕ್ ಬಿಟ್ಟು

ಗಳಿಸಿಕೊಂಡಿದ್ದನ್ನೂ ಕಳೆದುಕೊಳ್ಳಬೇಕಿರುವ ಟ್ರಾನ್ಸ್-ಕ್ವಿಯರ್ ಸಮುದಾಯ : ಕಾರ್ತಿಕ್ ಬಿಟ್ಟು

- Advertisement -
- Advertisement -

ಪಾದರಸದಂತಹ ವ್ಯಕ್ತಿತ್ವದ ಕಾರ್ತಿಕ್ ಬಿಟ್ಟು ಹುಟ್ಟಿದ್ದು ಬೆಂಗಳೂರಿನಲ್ಲಿ. ದೆಹಲಿಯಲ್ಲಿ ಬೆಳೆದು ಹಾರ್ವರ್ಡ್‍ನಲ್ಲಿ ನ್ಯೂರೋ ಬಿಹೇವಿಯರ್ ವಿಜ್ಞಾನದಲ್ಲಿ ಪಿಎಚ್‍ಡಿ ಮಾಡಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಸಿಡಿಯುವ ಸಂಗಾತಿ, ಸ್ಥಳೀಯ ದುರ್ಬಲ ಸಮುದಾಯಗಳ ಪರವಾಗಿ ಕೆಲಸ ಮಾಡಲು ಆದ್ಯತೆ. ರೋಹಿತ್ ವೇಮುಲಾ ಆತ್ಮಹತ್ಯೆಯಾದಾಗ ಅದೇ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಿದ್ದು, ದನಿಯೆತ್ತಿದ್ದರು. ಇದೀಗ ಅಶೋಕಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರು ಮತ್ತು ವಿಜ್ಞಾನಿ. ಕರ್ನಾಟಕ ಜನಶಕ್ತಿ, ಡಬ್ಲ್ಯುಎಸ್‍ಎಸ್ ಮತ್ತು ಟ್ರಾನ್ಸ್‍ಜೆಂಡರ್ ಸಂಘಟನೆಗಳ ಸದಸ್ಯರು. ಇವರ ಈ ಲೇಖನವನ್ನು ಕನ್ನಡಕ್ಕೆ ರಾಜಶೇಖರ್ ಅಕ್ಕಿಯವರು ಅನುವಾದ ಮಾಡಿದ್ದಾರೆ.

ಇಂದು ಭಾರತದ ಟ್ರಾನ್ಸ್‌ಜೆಂಡರ್ ಮತ್ತು ಕ್ವೀಯರ್ (ಲೈಂಗಿಕ ಅಲ್ಪಸಂಖ್ಯಾತ) ಸಮುದಾಯಗಳು ಸಂದಿಗ್ಧದಲ್ಲಿ ಇದ್ದಾರೆ. ಒಂದೆಡೆ ಭಾರತೀಯ ನ್ಯಾಯಾಲಯಗಳು ಎನ್‍ಎಎಲ್‍ಎಸ್‍ಏ ತೀರ್ಪಿನ ಅಡಿಯಲ್ಲಿ ನಮಗೆ ಹಿಂದೆಂದೂ ಇಲ್ಲದಂತಹ ನಮ್ಮನ್ನು ನಾವು ನಾವೇ ಇಚ್ಛಿಸಿದ ಲಿಂಗದೊಂದಿಗೆ ಗುರುತಿಸಿಕೊಳ್ಳುವ ಹಕ್ಕನ್ನು ನೀಡಿದ್ದಾರೆ. ಇದರಿಂದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ನಮ್ಮ ದೇಹಗಳು ಹೇಗೆ ಕಾಣಿಸಿಕೊಂಡರೂ ನಮ್ಮ ಗುರುತಿನ ದಾಖಲೆಗಳಲ್ಲಿಯೂ ನಮ್ಮ ಆಯ್ಕೆಯ ಲಿಂಗದೊಂದಿಗೆ ಗುರುತಿಸಕೊಳ್ಳಬಹುದಾಗಿದೆ. ಈ ತೀರ್ಪಿನ ಮುಖಾಂತರ ಉಚ್ಚ ನ್ಯಾಯಾಲಯವು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಈ ದೇಶದಲ್ಲಿ ಆದ ಅನ್ಯಾಯವನ್ನು ಗುರುತಿಸಿದೆ ಹಾಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ, ಉಚಿತ ಆರೋಗ್ಯ ಸೇವೆ, ವಸತಿ ಮುಂತಾದ ಸವಲತ್ತುಗಳನ್ನು ನೀಡಬೇಕೆಂದು ಹೇಳಿದೆ. ಸೆಕ್ಷನ್ 377ಅನ್ನು ತೆಗೆದುಹಾಕುವುದರಿಂದ ನ್ಯಾಯಾಲಯಗಳು ಒಂದು ಬಲವಾದ ಸಂದೇಶವನ್ನೂ ನೀಡಿದಂತಾಗಿದೆ.

ಇದೇ ಹೊತ್ತಿನಲ್ಲಿ ಶಾಸಕಾಂಗವು ಟ್ರಾನ್ಸ್‌ಜೆಂಡರ್ ಸಮುದಾಯವನ್ನು ಅಪರಾಧೀಕರಿಸುವ ಮಸೂದೆಗಳನ್ನು ಅತ್ಯಂತ ತ್ವರಿತ ಗತಿಯಲ್ಲಿ ಜಾರಿ ಮಾಡುತ್ತಿದೆ; ಇದರಿಂದ ಪರಿಸ್ಥಿತಿ ಮೊದಲಿಗಿಂತಲೂ ಹದಗೆಡಲಿದೆ. ಬಿಜೆಪಿ ಸರಕಾರವು 2015ರಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ರಕ್ಷಣೆ) ಮಸೂದೆ ರಚಿಸಿತು. ಈ ಮಸೂದೆಯ ಹೆಸರೇ ಅತ್ಯಂತ ಗೊಂದಲಮಯವಾಗಿದೆ; ಏಕೆಂದರೆ, ರಾಜ್ಯಸಭೆಯಲ್ಲಿ ಡಿಎಮ್‍ಕೆಯ ತಿರುಚಾ ಶಿವ ಅವರು, ಟ್ರಾನ್ಸ್‌ಜೆಂಡರ್ ಸಮುದಾಯ ಸಹಾಯದಿಂದ ಇದೇ ಹೆಸರಿನಲ್ಲಿ ರಚಿಸಲಾದ ಮಸೂದೆಯನ್ನು ಮಂಡಿಸಿದ್ದರು. ಆದರೆ ಲೋಕಸಭೆಯಲ್ಲಿ ಈ ಮಸೂದೆಯನ್ನು ತಂದಾಗ ಮೂಲ ಮಸೂದೆಯಲ್ಲಿದ್ದ ಎಲ್ಲಾ ಸಕಾರಾತ್ಮಕ ಅಂಶಗಳು ಕಣ್ಮರೆಯಾಗಿದ್ದವು. ಲೋಕಸಭೆಯಲ್ಲಿ ಮಂಡಿಸಿದ ಮಸೂದೆಯಲ್ಲಿ ಆರೋಗ್ಯ ಸೇವೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ತಾರತಮ್ಯ ಮಾಡಿದರೆ ಇರಬೇಕಾದ ದಂಡ ಇರಲಿಲ್ಲ ಹಾಗೂ ಈ ಕ್ಷೇತ್ರಗಳಲ್ಲಿ ಮೀಸಲಾತಿ ಅವಕಾಶವನ್ನು ಕಲ್ಪಿಸದೇ ಸಾಂಪ್ರದಾಯಿಕ ಭಿಕ್ಷಾಟನೆಯನ್ನು ಅಪರಾಧೀಕರಿಸಲಾಯಿತು. ಟ್ರಾನ್ಸ್‌ಜೆಂಡರ್ ಸಮುದಾಯವು ದೀರ್ಘಕಾಲಿಕ ಹೋರಾಟ ನಡೆಸಿದ ನಂತರ 2019ರ ಅವೃತ್ತಿಯಲ್ಲಿ ಆ ತಿದ್ದುಪಡಿಗಳನ್ನು ಹಿಂಪಡೆಯಲಾಯಿತು.

ಆದರೂ, ಸುಪ್ರೀಂಕೋರ್ಟಿನ ಎನ್‍ಏಎಲ್‍ಎಸ್‍ಏ ತೀರ್ಪಿನಲ್ಲಿ ಅಡಕವಾದ ಸ್ವ ಇಚ್ಛೆಯಿಂದ ತಮಗಿಷ್ಟವಾದ ಲಿಂಗವನ್ನು ಗುರುತಿಸುವ ಹಕ್ಕನ್ನು ಈ ಮಸೂದೆ ಉಲ್ಲಂಘಿಸುತ್ತದೆ. ಈಗ ಆ ವ್ಯಕ್ತಿಗಳು ಮೊದಲು ತಾವು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳೆಂದು ಸರಕಾರಕ್ಕೆ ಬಹಿರಂಗಪಡಿಸಬೇಕು ಹಾಗೂ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತಮ್ಮ ಗುರುತಿನ ದಾಖಲೆಗಳನ್ನು ಪಡೆಯಲು ಮನವಿ ಸಲ್ಲಿಸಬೇಕು ಎನ್ನುವುದನ್ನು ಕಡ್ಡಾಯಗೊಳಿಸಿದೆ. ಹಾಗೂ ನಮ್ಮ ಆಯ್ಕೆಯ ಯಾವುದೇ ಇತರ ಲಿಂಗದಲ್ಲಿ ಗುರುತಿನ ದಾಖಲೆಗಳನ್ನು ಪಡೆಯಬೇಕಾದರೆ ಶಸ್ತ್ರಚಿಕಿತ್ಸೆಯ ದಾಖಲೆಗಳನ್ನು ಸಲ್ಲಿಸಬೇಕು ಎಂತಲೂ ಹೇಳಿದೆ. ಇದರ ಅರ್ಥ, ಒಬ್ಬ ಟ್ರಾನ್ಸ್ ಪುರುಷ, ಹಾರ್ಮೋನುಗಳನ್ನು ಸೇವಿಸಿ, ಗಡ್ಡವನ್ನು ಬೆಳೆಸಿದರೂ, ಒಂದು ವೇಳೆ ಆತ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಇಚ್ಛಿಸದಿದ್ದರೆ ತನ್ನ ಆಯ್ಕೆಯ ಲಿಂಗಕ್ಕೆ ವಿರುದ್ಧವಾದ ಲಿಂಗದ ಗುರುತಿನೊಂದಿಗೇ ಜೀವಿಸಬೇಕಾಗುತ್ತದೆ. ಈ ಮಸೂದೆಯು ಬೇರೆ ಬೇರೆ ರೀತಿಯ ಟ್ರಾನ್ಸ್ ವ್ಯಕ್ತಿಗಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಬೇರೆ ಬೇರೆ ಪ್ರಮಾಣದ ಶಿಕ್ಷೆ ನೀಡುವ ತಾರತಮ್ಯವನ್ನೂ ಹೊಂದಿದೆ.

ಬಹುಶಃ ನಮ್ಮ ಹಕ್ಕುಗಳ ಮೇಲೆ ಇಂತಹ ಕಾನೂನು ದಾಳಿಗೆ ಪ್ರತಿಕ್ರಿಯೆಯಾಗಿಯೇ, ನಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳ ಅವಶ್ಯಕತೆ ಎಲ್ಲರಿಗೂ ಕಾಣಿಸುವಂತಾಗಲಿ ಎಂದು ಟ್ರಾನ್ಸ್‌ಜೆಂಡರ್ ಸಮುದಾಯವು 2019ರ ಚುನಾವಣೆಗಳಲ್ಲಿ ಗಟ್ಟಿಯಾಗಿ ತೊಡಗಿಸಿಕೊಂಡಿತ್ತು. ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರು ಚುನಾವಣೆಯಲ್ಲಿ ಬಹಳ ಹಿಂದಿನಿಂದ ಭಾಗವಹಿಸುತ್ತಿದ್ದರೂ, 2019ರ ಚುನಾವಣೆ ಮುಂಚೆಗಿಂತ ಭಿನ್ನವಾಗಿತ್ತು. ದೇಶದ ವಿವಿಧೆಡೆಯಲ್ಲಿ 2019ರ ಚುನಾವಣೆಯಲ್ಲಿ ಭಾಗವಹಿಸಿದ ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರ ಸಂಖ್ಯೆ ಗಣನೀಯವಾಗಿತ್ತು. ಹಾಗೂ ಅದಕ್ಕಿಂತ ಮುಖ್ಯವಾಗಿ ಟ್ರಾನ್ಸ್‌ಜೆಂಡರ್ ಸಮುದಾಯದ ವಿಷಯಗಳನ್ನು ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲಿ ವಿವರವಾಗಿ ಉಲ್ಲೇಖಸಿದ್ದು 2019ರ ಚುನಾವಣೆಗಳಲ್ಲಿ.

ಪ್ರಸ್ತುತ ಮಸೂದೆಯ ವಿರುದ್ಧ ಹೋರಾಟ ಮಾಡುವ ಭರವಸೆಯನ್ನು ಕೆಲವು ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಸ್ಪಷ್ಟವಾಗಿ ಹೇಳಿದವು; ಕಾಂಗ್ರೆಸ್ ಪಕ್ಷ, ಸಿಪಿಎಮ್ ಹಾಗೂ ಹೊಸದಾಗಿ ರಚಿತಗೊಂಡ ವಂಚಿತ್ ಬಹುಜನ್ ಅಘಾಡಿ ಪಕ್ಷದ ಪ್ರಣಾಳಿಕೆಗಳು ಈ ಭರವಸೆಯನ್ನು ಒಳಗೊಂಡ ಕೆಲವು ಪಕ್ಷಗಳು. ಅದರೊಂದಿಗೆ, ಹಲವಾರು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ಚುನಾವಣೆಗೂ ಸ್ಪರ್ಧಿಸಿದರು; ಅಲಹಾಬಾದ್‍ನಲ್ಲಿ ಭವಾನಿ ಸಿಂಗ್ ಆಪ್‍ನಿಂದ ಸ್ಪರ್ಧಿಸಿದರೆ, ಇತರ ಅಭ್ಯರ್ಥಿಗಳು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದರು; ಅವರೆಂದರೆ ಎರ್ನಾಕುಲಮ್‍ದಿಂದ ‘ಚಿಂಚು’ ಅಸ್ವಥಿ ರಾಜಪ್ಪನ್, ಅಹ್ಮದಾಬಾದ್‍ನಿಂದ ರಾಜು ಮಾತಾಜಿ, ಮುಂಬಯಿಯಲ್ಲಿ ಜತಿನ್ ರಂಗರಾವ್ ಹರ್ನೆ ಮತ್ತು ಸ್ನೇಹಾ ಕಾಳೆ ಹಾಗೂ ಚೆನ್ನೈನಿಂದ ಎಮ್.ರಾಧಾ.

ಬಿಜೆಪಿಯ ಗೆಲವು ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಇನ್ನಷ್ಟು ದುಗುಡವನ್ನು ತಂದಿದೆ. ಈ ಕಾರಣದಿಂದಲೇ ಅವರ ನೀತಿಗಳ ವಿರುದ್ಧ ಸಮುದಾಯದ ರಾಜಕೀಯ ಪಾಲ್ಗೊಳ್ಳುವಿಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಬಹುದು. ಬಿಜೆಪಿಯ ಪ್ರಣಾಳಿಕೆಯು ತುಂಬಾ ನಯವಾಗಿ ‘ಸೂಕ್ತ ಸಾಮಾಜಿಕ, ಆರ್ಥಿಕ ಮತ್ತು ನೀತಿಗಳ ಕ್ರಮಗಳ’ ಮೂಲಕ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳನ್ನು ಮುಖ್ಯವಾಹಿನಿ ತರಲಾಗುವುದು’, ‘ಸ್ವ-ಉದ್ಯೋಗ’ ಮತ್ತು ‘ಕೌಶಲ್ಯ ಅಭಿವೃದ್ಧಿ’ಯನ್ನು ಸುನಿಶ್ಚಿತಗೊಳಿಸಲಾಗುವುದು ಎಂದೂ ಹೇಳಿತು. ಆದರೆ, ಭಿಕ್ಷಾಟನೆ ಮತ್ತು ಲೈಂಗಿಕ ವೃತ್ತಿಯ ರೂಪದಲ್ಲಿ ಸಮುದಾಯವು ಸ್ವ-ಉದ್ಯೋಗದಲ್ಲಿಯೇ ತೊಡಗಿದೆ, ಇವರೆಡೂ ಸಂಕಷ್ಟದಿಂದ ಹುಟ್ಟಿಕೊಂಡ ಸ್ವಯಂ-ಸಂಘಟಿತ ಜೀವನೋಪಾಯಗಳಾಗಿವೆ.

ಮುಂದಿನ ದಿನಗಳು ಅಷ್ಟು ಚೆನ್ನಾಗಿರುವುದಿಲ್ಲವೆಂಬುದು ಖಚಿತ. ಆರ್ಥಿಕ ಬಿಕ್ಕಟ್ಟಿನೆದುರು, ಫ್ಯಾಸಿಸ್ಟ್ ತತ್ವಾಧಾರಿತ ಹಿಂದೂ ಬಹುಸಂಖ್ಯಾತವಾದಿ ಸಂಘಟನೆಯಿಂದ ಆಳಲ್ಪಡುತ್ತಿರುವ ಈ ದೇಶವು ಒಂದು ದೀರ್ಘ ಸಾಮಾಜಿಕ ರಾಜಕೀಯ ಪ್ರಕ್ರಿಯೆಯ ಮೂಲಕ ಹಾದುಹೋಗಲೇಬೇಕಿದೆ ಎಂಬುದು ಸ್ಪಷ್ಟ.

ಅಂಕಿಅಂಶಗಳ ಪ್ರಕಾರ ಎಲ್‍ಜಿಬಿಟಿಕ್ಯುಐಏ (LGBTQIA) ಎಂದು ಗುರುತಿಸಿಕೊಂಡವರ ಸಂಖ್ಯೆ ಭಾರತದ ಜನಸಂಖ್ಯೆಯ ಶೇ.4-11ರಷ್ಟಿದೆ. ಅಂದರೆ, ಈ ಸಮುದಾಯ ವೋಟ್ ಬ್ಯಾಂಕ್ ಎಂದು ಪರಿಗಣಿಸುವಷ್ಟು ದೊಡ್ಡದಾಗಿದೆ. ಆದರೆ ನನ್ನ ಚಿಂತೆ LGBTQIA ಸಮುದಾಯದ ಸದಸ್ಯರ ಮತ್ತು ಅವರ ಹೆಚ್ಚುತ್ತಿರುವ ಸಾರ್ವಜನಿಕ ಅಸ್ತಿತ್ವ ಅಲ್ಲ; ತುಳಿತಕೊಳಪಟ್ಟ ಇತರ ಸಮುದಾಯಗಳೊಂದಿಗೆ ಈ ಸಮುದಾಯವು ಹೇಗೆ ಸಹ-ಸಂಬಂಧವನ್ನು ಸಾಧಿಸಬಹುದು ಎನ್ನುವುದು ನನ್ನ ಚಿಂತೆ. ಸ್ವ-ವಿಮೋಚನೆಯ ಒಂದು ಸಂಕುಚಿತ ರೂಪಕ್ಕಾಗಿ ಹೋರಾಡುವುದು ನಮ್ಮ ಗುರಿಯಾಗಬಾರದು. ಅದರ ಬದಲಿಗೆ ಇಂದು ಇರುವ ಕ್ರೂರ, ಅಸಮಾನ ಸಮಾಜದಿಂದ ಎಲ್ಲರನ್ನೂ ವಿಮೋಚನೆಗೊಳಿಸುವುದು ನಮ್ಮ ಗುರಿಯಾಗಿರಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...