Homeಚಳವಳಿಗಳಿಸಿಕೊಂಡಿದ್ದನ್ನೂ ಕಳೆದುಕೊಳ್ಳಬೇಕಿರುವ ಟ್ರಾನ್ಸ್-ಕ್ವಿಯರ್ ಸಮುದಾಯ : ಕಾರ್ತಿಕ್ ಬಿಟ್ಟು

ಗಳಿಸಿಕೊಂಡಿದ್ದನ್ನೂ ಕಳೆದುಕೊಳ್ಳಬೇಕಿರುವ ಟ್ರಾನ್ಸ್-ಕ್ವಿಯರ್ ಸಮುದಾಯ : ಕಾರ್ತಿಕ್ ಬಿಟ್ಟು

- Advertisement -
- Advertisement -

ಪಾದರಸದಂತಹ ವ್ಯಕ್ತಿತ್ವದ ಕಾರ್ತಿಕ್ ಬಿಟ್ಟು ಹುಟ್ಟಿದ್ದು ಬೆಂಗಳೂರಿನಲ್ಲಿ. ದೆಹಲಿಯಲ್ಲಿ ಬೆಳೆದು ಹಾರ್ವರ್ಡ್‍ನಲ್ಲಿ ನ್ಯೂರೋ ಬಿಹೇವಿಯರ್ ವಿಜ್ಞಾನದಲ್ಲಿ ಪಿಎಚ್‍ಡಿ ಮಾಡಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಸಿಡಿಯುವ ಸಂಗಾತಿ, ಸ್ಥಳೀಯ ದುರ್ಬಲ ಸಮುದಾಯಗಳ ಪರವಾಗಿ ಕೆಲಸ ಮಾಡಲು ಆದ್ಯತೆ. ರೋಹಿತ್ ವೇಮುಲಾ ಆತ್ಮಹತ್ಯೆಯಾದಾಗ ಅದೇ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಿದ್ದು, ದನಿಯೆತ್ತಿದ್ದರು. ಇದೀಗ ಅಶೋಕಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರು ಮತ್ತು ವಿಜ್ಞಾನಿ. ಕರ್ನಾಟಕ ಜನಶಕ್ತಿ, ಡಬ್ಲ್ಯುಎಸ್‍ಎಸ್ ಮತ್ತು ಟ್ರಾನ್ಸ್‍ಜೆಂಡರ್ ಸಂಘಟನೆಗಳ ಸದಸ್ಯರು. ಇವರ ಈ ಲೇಖನವನ್ನು ಕನ್ನಡಕ್ಕೆ ರಾಜಶೇಖರ್ ಅಕ್ಕಿಯವರು ಅನುವಾದ ಮಾಡಿದ್ದಾರೆ.

ಇಂದು ಭಾರತದ ಟ್ರಾನ್ಸ್‌ಜೆಂಡರ್ ಮತ್ತು ಕ್ವೀಯರ್ (ಲೈಂಗಿಕ ಅಲ್ಪಸಂಖ್ಯಾತ) ಸಮುದಾಯಗಳು ಸಂದಿಗ್ಧದಲ್ಲಿ ಇದ್ದಾರೆ. ಒಂದೆಡೆ ಭಾರತೀಯ ನ್ಯಾಯಾಲಯಗಳು ಎನ್‍ಎಎಲ್‍ಎಸ್‍ಏ ತೀರ್ಪಿನ ಅಡಿಯಲ್ಲಿ ನಮಗೆ ಹಿಂದೆಂದೂ ಇಲ್ಲದಂತಹ ನಮ್ಮನ್ನು ನಾವು ನಾವೇ ಇಚ್ಛಿಸಿದ ಲಿಂಗದೊಂದಿಗೆ ಗುರುತಿಸಿಕೊಳ್ಳುವ ಹಕ್ಕನ್ನು ನೀಡಿದ್ದಾರೆ. ಇದರಿಂದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ನಮ್ಮ ದೇಹಗಳು ಹೇಗೆ ಕಾಣಿಸಿಕೊಂಡರೂ ನಮ್ಮ ಗುರುತಿನ ದಾಖಲೆಗಳಲ್ಲಿಯೂ ನಮ್ಮ ಆಯ್ಕೆಯ ಲಿಂಗದೊಂದಿಗೆ ಗುರುತಿಸಕೊಳ್ಳಬಹುದಾಗಿದೆ. ಈ ತೀರ್ಪಿನ ಮುಖಾಂತರ ಉಚ್ಚ ನ್ಯಾಯಾಲಯವು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಈ ದೇಶದಲ್ಲಿ ಆದ ಅನ್ಯಾಯವನ್ನು ಗುರುತಿಸಿದೆ ಹಾಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ, ಉಚಿತ ಆರೋಗ್ಯ ಸೇವೆ, ವಸತಿ ಮುಂತಾದ ಸವಲತ್ತುಗಳನ್ನು ನೀಡಬೇಕೆಂದು ಹೇಳಿದೆ. ಸೆಕ್ಷನ್ 377ಅನ್ನು ತೆಗೆದುಹಾಕುವುದರಿಂದ ನ್ಯಾಯಾಲಯಗಳು ಒಂದು ಬಲವಾದ ಸಂದೇಶವನ್ನೂ ನೀಡಿದಂತಾಗಿದೆ.

ಇದೇ ಹೊತ್ತಿನಲ್ಲಿ ಶಾಸಕಾಂಗವು ಟ್ರಾನ್ಸ್‌ಜೆಂಡರ್ ಸಮುದಾಯವನ್ನು ಅಪರಾಧೀಕರಿಸುವ ಮಸೂದೆಗಳನ್ನು ಅತ್ಯಂತ ತ್ವರಿತ ಗತಿಯಲ್ಲಿ ಜಾರಿ ಮಾಡುತ್ತಿದೆ; ಇದರಿಂದ ಪರಿಸ್ಥಿತಿ ಮೊದಲಿಗಿಂತಲೂ ಹದಗೆಡಲಿದೆ. ಬಿಜೆಪಿ ಸರಕಾರವು 2015ರಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ರಕ್ಷಣೆ) ಮಸೂದೆ ರಚಿಸಿತು. ಈ ಮಸೂದೆಯ ಹೆಸರೇ ಅತ್ಯಂತ ಗೊಂದಲಮಯವಾಗಿದೆ; ಏಕೆಂದರೆ, ರಾಜ್ಯಸಭೆಯಲ್ಲಿ ಡಿಎಮ್‍ಕೆಯ ತಿರುಚಾ ಶಿವ ಅವರು, ಟ್ರಾನ್ಸ್‌ಜೆಂಡರ್ ಸಮುದಾಯ ಸಹಾಯದಿಂದ ಇದೇ ಹೆಸರಿನಲ್ಲಿ ರಚಿಸಲಾದ ಮಸೂದೆಯನ್ನು ಮಂಡಿಸಿದ್ದರು. ಆದರೆ ಲೋಕಸಭೆಯಲ್ಲಿ ಈ ಮಸೂದೆಯನ್ನು ತಂದಾಗ ಮೂಲ ಮಸೂದೆಯಲ್ಲಿದ್ದ ಎಲ್ಲಾ ಸಕಾರಾತ್ಮಕ ಅಂಶಗಳು ಕಣ್ಮರೆಯಾಗಿದ್ದವು. ಲೋಕಸಭೆಯಲ್ಲಿ ಮಂಡಿಸಿದ ಮಸೂದೆಯಲ್ಲಿ ಆರೋಗ್ಯ ಸೇವೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ತಾರತಮ್ಯ ಮಾಡಿದರೆ ಇರಬೇಕಾದ ದಂಡ ಇರಲಿಲ್ಲ ಹಾಗೂ ಈ ಕ್ಷೇತ್ರಗಳಲ್ಲಿ ಮೀಸಲಾತಿ ಅವಕಾಶವನ್ನು ಕಲ್ಪಿಸದೇ ಸಾಂಪ್ರದಾಯಿಕ ಭಿಕ್ಷಾಟನೆಯನ್ನು ಅಪರಾಧೀಕರಿಸಲಾಯಿತು. ಟ್ರಾನ್ಸ್‌ಜೆಂಡರ್ ಸಮುದಾಯವು ದೀರ್ಘಕಾಲಿಕ ಹೋರಾಟ ನಡೆಸಿದ ನಂತರ 2019ರ ಅವೃತ್ತಿಯಲ್ಲಿ ಆ ತಿದ್ದುಪಡಿಗಳನ್ನು ಹಿಂಪಡೆಯಲಾಯಿತು.

ಆದರೂ, ಸುಪ್ರೀಂಕೋರ್ಟಿನ ಎನ್‍ಏಎಲ್‍ಎಸ್‍ಏ ತೀರ್ಪಿನಲ್ಲಿ ಅಡಕವಾದ ಸ್ವ ಇಚ್ಛೆಯಿಂದ ತಮಗಿಷ್ಟವಾದ ಲಿಂಗವನ್ನು ಗುರುತಿಸುವ ಹಕ್ಕನ್ನು ಈ ಮಸೂದೆ ಉಲ್ಲಂಘಿಸುತ್ತದೆ. ಈಗ ಆ ವ್ಯಕ್ತಿಗಳು ಮೊದಲು ತಾವು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳೆಂದು ಸರಕಾರಕ್ಕೆ ಬಹಿರಂಗಪಡಿಸಬೇಕು ಹಾಗೂ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತಮ್ಮ ಗುರುತಿನ ದಾಖಲೆಗಳನ್ನು ಪಡೆಯಲು ಮನವಿ ಸಲ್ಲಿಸಬೇಕು ಎನ್ನುವುದನ್ನು ಕಡ್ಡಾಯಗೊಳಿಸಿದೆ. ಹಾಗೂ ನಮ್ಮ ಆಯ್ಕೆಯ ಯಾವುದೇ ಇತರ ಲಿಂಗದಲ್ಲಿ ಗುರುತಿನ ದಾಖಲೆಗಳನ್ನು ಪಡೆಯಬೇಕಾದರೆ ಶಸ್ತ್ರಚಿಕಿತ್ಸೆಯ ದಾಖಲೆಗಳನ್ನು ಸಲ್ಲಿಸಬೇಕು ಎಂತಲೂ ಹೇಳಿದೆ. ಇದರ ಅರ್ಥ, ಒಬ್ಬ ಟ್ರಾನ್ಸ್ ಪುರುಷ, ಹಾರ್ಮೋನುಗಳನ್ನು ಸೇವಿಸಿ, ಗಡ್ಡವನ್ನು ಬೆಳೆಸಿದರೂ, ಒಂದು ವೇಳೆ ಆತ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಇಚ್ಛಿಸದಿದ್ದರೆ ತನ್ನ ಆಯ್ಕೆಯ ಲಿಂಗಕ್ಕೆ ವಿರುದ್ಧವಾದ ಲಿಂಗದ ಗುರುತಿನೊಂದಿಗೇ ಜೀವಿಸಬೇಕಾಗುತ್ತದೆ. ಈ ಮಸೂದೆಯು ಬೇರೆ ಬೇರೆ ರೀತಿಯ ಟ್ರಾನ್ಸ್ ವ್ಯಕ್ತಿಗಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಬೇರೆ ಬೇರೆ ಪ್ರಮಾಣದ ಶಿಕ್ಷೆ ನೀಡುವ ತಾರತಮ್ಯವನ್ನೂ ಹೊಂದಿದೆ.

ಬಹುಶಃ ನಮ್ಮ ಹಕ್ಕುಗಳ ಮೇಲೆ ಇಂತಹ ಕಾನೂನು ದಾಳಿಗೆ ಪ್ರತಿಕ್ರಿಯೆಯಾಗಿಯೇ, ನಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳ ಅವಶ್ಯಕತೆ ಎಲ್ಲರಿಗೂ ಕಾಣಿಸುವಂತಾಗಲಿ ಎಂದು ಟ್ರಾನ್ಸ್‌ಜೆಂಡರ್ ಸಮುದಾಯವು 2019ರ ಚುನಾವಣೆಗಳಲ್ಲಿ ಗಟ್ಟಿಯಾಗಿ ತೊಡಗಿಸಿಕೊಂಡಿತ್ತು. ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರು ಚುನಾವಣೆಯಲ್ಲಿ ಬಹಳ ಹಿಂದಿನಿಂದ ಭಾಗವಹಿಸುತ್ತಿದ್ದರೂ, 2019ರ ಚುನಾವಣೆ ಮುಂಚೆಗಿಂತ ಭಿನ್ನವಾಗಿತ್ತು. ದೇಶದ ವಿವಿಧೆಡೆಯಲ್ಲಿ 2019ರ ಚುನಾವಣೆಯಲ್ಲಿ ಭಾಗವಹಿಸಿದ ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರ ಸಂಖ್ಯೆ ಗಣನೀಯವಾಗಿತ್ತು. ಹಾಗೂ ಅದಕ್ಕಿಂತ ಮುಖ್ಯವಾಗಿ ಟ್ರಾನ್ಸ್‌ಜೆಂಡರ್ ಸಮುದಾಯದ ವಿಷಯಗಳನ್ನು ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲಿ ವಿವರವಾಗಿ ಉಲ್ಲೇಖಸಿದ್ದು 2019ರ ಚುನಾವಣೆಗಳಲ್ಲಿ.

ಪ್ರಸ್ತುತ ಮಸೂದೆಯ ವಿರುದ್ಧ ಹೋರಾಟ ಮಾಡುವ ಭರವಸೆಯನ್ನು ಕೆಲವು ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಸ್ಪಷ್ಟವಾಗಿ ಹೇಳಿದವು; ಕಾಂಗ್ರೆಸ್ ಪಕ್ಷ, ಸಿಪಿಎಮ್ ಹಾಗೂ ಹೊಸದಾಗಿ ರಚಿತಗೊಂಡ ವಂಚಿತ್ ಬಹುಜನ್ ಅಘಾಡಿ ಪಕ್ಷದ ಪ್ರಣಾಳಿಕೆಗಳು ಈ ಭರವಸೆಯನ್ನು ಒಳಗೊಂಡ ಕೆಲವು ಪಕ್ಷಗಳು. ಅದರೊಂದಿಗೆ, ಹಲವಾರು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ಚುನಾವಣೆಗೂ ಸ್ಪರ್ಧಿಸಿದರು; ಅಲಹಾಬಾದ್‍ನಲ್ಲಿ ಭವಾನಿ ಸಿಂಗ್ ಆಪ್‍ನಿಂದ ಸ್ಪರ್ಧಿಸಿದರೆ, ಇತರ ಅಭ್ಯರ್ಥಿಗಳು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದರು; ಅವರೆಂದರೆ ಎರ್ನಾಕುಲಮ್‍ದಿಂದ ‘ಚಿಂಚು’ ಅಸ್ವಥಿ ರಾಜಪ್ಪನ್, ಅಹ್ಮದಾಬಾದ್‍ನಿಂದ ರಾಜು ಮಾತಾಜಿ, ಮುಂಬಯಿಯಲ್ಲಿ ಜತಿನ್ ರಂಗರಾವ್ ಹರ್ನೆ ಮತ್ತು ಸ್ನೇಹಾ ಕಾಳೆ ಹಾಗೂ ಚೆನ್ನೈನಿಂದ ಎಮ್.ರಾಧಾ.

ಬಿಜೆಪಿಯ ಗೆಲವು ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಇನ್ನಷ್ಟು ದುಗುಡವನ್ನು ತಂದಿದೆ. ಈ ಕಾರಣದಿಂದಲೇ ಅವರ ನೀತಿಗಳ ವಿರುದ್ಧ ಸಮುದಾಯದ ರಾಜಕೀಯ ಪಾಲ್ಗೊಳ್ಳುವಿಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಬಹುದು. ಬಿಜೆಪಿಯ ಪ್ರಣಾಳಿಕೆಯು ತುಂಬಾ ನಯವಾಗಿ ‘ಸೂಕ್ತ ಸಾಮಾಜಿಕ, ಆರ್ಥಿಕ ಮತ್ತು ನೀತಿಗಳ ಕ್ರಮಗಳ’ ಮೂಲಕ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳನ್ನು ಮುಖ್ಯವಾಹಿನಿ ತರಲಾಗುವುದು’, ‘ಸ್ವ-ಉದ್ಯೋಗ’ ಮತ್ತು ‘ಕೌಶಲ್ಯ ಅಭಿವೃದ್ಧಿ’ಯನ್ನು ಸುನಿಶ್ಚಿತಗೊಳಿಸಲಾಗುವುದು ಎಂದೂ ಹೇಳಿತು. ಆದರೆ, ಭಿಕ್ಷಾಟನೆ ಮತ್ತು ಲೈಂಗಿಕ ವೃತ್ತಿಯ ರೂಪದಲ್ಲಿ ಸಮುದಾಯವು ಸ್ವ-ಉದ್ಯೋಗದಲ್ಲಿಯೇ ತೊಡಗಿದೆ, ಇವರೆಡೂ ಸಂಕಷ್ಟದಿಂದ ಹುಟ್ಟಿಕೊಂಡ ಸ್ವಯಂ-ಸಂಘಟಿತ ಜೀವನೋಪಾಯಗಳಾಗಿವೆ.

ಮುಂದಿನ ದಿನಗಳು ಅಷ್ಟು ಚೆನ್ನಾಗಿರುವುದಿಲ್ಲವೆಂಬುದು ಖಚಿತ. ಆರ್ಥಿಕ ಬಿಕ್ಕಟ್ಟಿನೆದುರು, ಫ್ಯಾಸಿಸ್ಟ್ ತತ್ವಾಧಾರಿತ ಹಿಂದೂ ಬಹುಸಂಖ್ಯಾತವಾದಿ ಸಂಘಟನೆಯಿಂದ ಆಳಲ್ಪಡುತ್ತಿರುವ ಈ ದೇಶವು ಒಂದು ದೀರ್ಘ ಸಾಮಾಜಿಕ ರಾಜಕೀಯ ಪ್ರಕ್ರಿಯೆಯ ಮೂಲಕ ಹಾದುಹೋಗಲೇಬೇಕಿದೆ ಎಂಬುದು ಸ್ಪಷ್ಟ.

ಅಂಕಿಅಂಶಗಳ ಪ್ರಕಾರ ಎಲ್‍ಜಿಬಿಟಿಕ್ಯುಐಏ (LGBTQIA) ಎಂದು ಗುರುತಿಸಿಕೊಂಡವರ ಸಂಖ್ಯೆ ಭಾರತದ ಜನಸಂಖ್ಯೆಯ ಶೇ.4-11ರಷ್ಟಿದೆ. ಅಂದರೆ, ಈ ಸಮುದಾಯ ವೋಟ್ ಬ್ಯಾಂಕ್ ಎಂದು ಪರಿಗಣಿಸುವಷ್ಟು ದೊಡ್ಡದಾಗಿದೆ. ಆದರೆ ನನ್ನ ಚಿಂತೆ LGBTQIA ಸಮುದಾಯದ ಸದಸ್ಯರ ಮತ್ತು ಅವರ ಹೆಚ್ಚುತ್ತಿರುವ ಸಾರ್ವಜನಿಕ ಅಸ್ತಿತ್ವ ಅಲ್ಲ; ತುಳಿತಕೊಳಪಟ್ಟ ಇತರ ಸಮುದಾಯಗಳೊಂದಿಗೆ ಈ ಸಮುದಾಯವು ಹೇಗೆ ಸಹ-ಸಂಬಂಧವನ್ನು ಸಾಧಿಸಬಹುದು ಎನ್ನುವುದು ನನ್ನ ಚಿಂತೆ. ಸ್ವ-ವಿಮೋಚನೆಯ ಒಂದು ಸಂಕುಚಿತ ರೂಪಕ್ಕಾಗಿ ಹೋರಾಡುವುದು ನಮ್ಮ ಗುರಿಯಾಗಬಾರದು. ಅದರ ಬದಲಿಗೆ ಇಂದು ಇರುವ ಕ್ರೂರ, ಅಸಮಾನ ಸಮಾಜದಿಂದ ಎಲ್ಲರನ್ನೂ ವಿಮೋಚನೆಗೊಳಿಸುವುದು ನಮ್ಮ ಗುರಿಯಾಗಿರಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...