Homeಚಳವಳಿಗಳಿಸಿಕೊಂಡಿದ್ದನ್ನೂ ಕಳೆದುಕೊಳ್ಳಬೇಕಿರುವ ಟ್ರಾನ್ಸ್-ಕ್ವಿಯರ್ ಸಮುದಾಯ : ಕಾರ್ತಿಕ್ ಬಿಟ್ಟು

ಗಳಿಸಿಕೊಂಡಿದ್ದನ್ನೂ ಕಳೆದುಕೊಳ್ಳಬೇಕಿರುವ ಟ್ರಾನ್ಸ್-ಕ್ವಿಯರ್ ಸಮುದಾಯ : ಕಾರ್ತಿಕ್ ಬಿಟ್ಟು

- Advertisement -
- Advertisement -

ಪಾದರಸದಂತಹ ವ್ಯಕ್ತಿತ್ವದ ಕಾರ್ತಿಕ್ ಬಿಟ್ಟು ಹುಟ್ಟಿದ್ದು ಬೆಂಗಳೂರಿನಲ್ಲಿ. ದೆಹಲಿಯಲ್ಲಿ ಬೆಳೆದು ಹಾರ್ವರ್ಡ್‍ನಲ್ಲಿ ನ್ಯೂರೋ ಬಿಹೇವಿಯರ್ ವಿಜ್ಞಾನದಲ್ಲಿ ಪಿಎಚ್‍ಡಿ ಮಾಡಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಸಿಡಿಯುವ ಸಂಗಾತಿ, ಸ್ಥಳೀಯ ದುರ್ಬಲ ಸಮುದಾಯಗಳ ಪರವಾಗಿ ಕೆಲಸ ಮಾಡಲು ಆದ್ಯತೆ. ರೋಹಿತ್ ವೇಮುಲಾ ಆತ್ಮಹತ್ಯೆಯಾದಾಗ ಅದೇ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಿದ್ದು, ದನಿಯೆತ್ತಿದ್ದರು. ಇದೀಗ ಅಶೋಕಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರು ಮತ್ತು ವಿಜ್ಞಾನಿ. ಕರ್ನಾಟಕ ಜನಶಕ್ತಿ, ಡಬ್ಲ್ಯುಎಸ್‍ಎಸ್ ಮತ್ತು ಟ್ರಾನ್ಸ್‍ಜೆಂಡರ್ ಸಂಘಟನೆಗಳ ಸದಸ್ಯರು. ಇವರ ಈ ಲೇಖನವನ್ನು ಕನ್ನಡಕ್ಕೆ ರಾಜಶೇಖರ್ ಅಕ್ಕಿಯವರು ಅನುವಾದ ಮಾಡಿದ್ದಾರೆ.

ಇಂದು ಭಾರತದ ಟ್ರಾನ್ಸ್‌ಜೆಂಡರ್ ಮತ್ತು ಕ್ವೀಯರ್ (ಲೈಂಗಿಕ ಅಲ್ಪಸಂಖ್ಯಾತ) ಸಮುದಾಯಗಳು ಸಂದಿಗ್ಧದಲ್ಲಿ ಇದ್ದಾರೆ. ಒಂದೆಡೆ ಭಾರತೀಯ ನ್ಯಾಯಾಲಯಗಳು ಎನ್‍ಎಎಲ್‍ಎಸ್‍ಏ ತೀರ್ಪಿನ ಅಡಿಯಲ್ಲಿ ನಮಗೆ ಹಿಂದೆಂದೂ ಇಲ್ಲದಂತಹ ನಮ್ಮನ್ನು ನಾವು ನಾವೇ ಇಚ್ಛಿಸಿದ ಲಿಂಗದೊಂದಿಗೆ ಗುರುತಿಸಿಕೊಳ್ಳುವ ಹಕ್ಕನ್ನು ನೀಡಿದ್ದಾರೆ. ಇದರಿಂದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ನಮ್ಮ ದೇಹಗಳು ಹೇಗೆ ಕಾಣಿಸಿಕೊಂಡರೂ ನಮ್ಮ ಗುರುತಿನ ದಾಖಲೆಗಳಲ್ಲಿಯೂ ನಮ್ಮ ಆಯ್ಕೆಯ ಲಿಂಗದೊಂದಿಗೆ ಗುರುತಿಸಕೊಳ್ಳಬಹುದಾಗಿದೆ. ಈ ತೀರ್ಪಿನ ಮುಖಾಂತರ ಉಚ್ಚ ನ್ಯಾಯಾಲಯವು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಈ ದೇಶದಲ್ಲಿ ಆದ ಅನ್ಯಾಯವನ್ನು ಗುರುತಿಸಿದೆ ಹಾಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ, ಉಚಿತ ಆರೋಗ್ಯ ಸೇವೆ, ವಸತಿ ಮುಂತಾದ ಸವಲತ್ತುಗಳನ್ನು ನೀಡಬೇಕೆಂದು ಹೇಳಿದೆ. ಸೆಕ್ಷನ್ 377ಅನ್ನು ತೆಗೆದುಹಾಕುವುದರಿಂದ ನ್ಯಾಯಾಲಯಗಳು ಒಂದು ಬಲವಾದ ಸಂದೇಶವನ್ನೂ ನೀಡಿದಂತಾಗಿದೆ.

ಇದೇ ಹೊತ್ತಿನಲ್ಲಿ ಶಾಸಕಾಂಗವು ಟ್ರಾನ್ಸ್‌ಜೆಂಡರ್ ಸಮುದಾಯವನ್ನು ಅಪರಾಧೀಕರಿಸುವ ಮಸೂದೆಗಳನ್ನು ಅತ್ಯಂತ ತ್ವರಿತ ಗತಿಯಲ್ಲಿ ಜಾರಿ ಮಾಡುತ್ತಿದೆ; ಇದರಿಂದ ಪರಿಸ್ಥಿತಿ ಮೊದಲಿಗಿಂತಲೂ ಹದಗೆಡಲಿದೆ. ಬಿಜೆಪಿ ಸರಕಾರವು 2015ರಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ರಕ್ಷಣೆ) ಮಸೂದೆ ರಚಿಸಿತು. ಈ ಮಸೂದೆಯ ಹೆಸರೇ ಅತ್ಯಂತ ಗೊಂದಲಮಯವಾಗಿದೆ; ಏಕೆಂದರೆ, ರಾಜ್ಯಸಭೆಯಲ್ಲಿ ಡಿಎಮ್‍ಕೆಯ ತಿರುಚಾ ಶಿವ ಅವರು, ಟ್ರಾನ್ಸ್‌ಜೆಂಡರ್ ಸಮುದಾಯ ಸಹಾಯದಿಂದ ಇದೇ ಹೆಸರಿನಲ್ಲಿ ರಚಿಸಲಾದ ಮಸೂದೆಯನ್ನು ಮಂಡಿಸಿದ್ದರು. ಆದರೆ ಲೋಕಸಭೆಯಲ್ಲಿ ಈ ಮಸೂದೆಯನ್ನು ತಂದಾಗ ಮೂಲ ಮಸೂದೆಯಲ್ಲಿದ್ದ ಎಲ್ಲಾ ಸಕಾರಾತ್ಮಕ ಅಂಶಗಳು ಕಣ್ಮರೆಯಾಗಿದ್ದವು. ಲೋಕಸಭೆಯಲ್ಲಿ ಮಂಡಿಸಿದ ಮಸೂದೆಯಲ್ಲಿ ಆರೋಗ್ಯ ಸೇವೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ತಾರತಮ್ಯ ಮಾಡಿದರೆ ಇರಬೇಕಾದ ದಂಡ ಇರಲಿಲ್ಲ ಹಾಗೂ ಈ ಕ್ಷೇತ್ರಗಳಲ್ಲಿ ಮೀಸಲಾತಿ ಅವಕಾಶವನ್ನು ಕಲ್ಪಿಸದೇ ಸಾಂಪ್ರದಾಯಿಕ ಭಿಕ್ಷಾಟನೆಯನ್ನು ಅಪರಾಧೀಕರಿಸಲಾಯಿತು. ಟ್ರಾನ್ಸ್‌ಜೆಂಡರ್ ಸಮುದಾಯವು ದೀರ್ಘಕಾಲಿಕ ಹೋರಾಟ ನಡೆಸಿದ ನಂತರ 2019ರ ಅವೃತ್ತಿಯಲ್ಲಿ ಆ ತಿದ್ದುಪಡಿಗಳನ್ನು ಹಿಂಪಡೆಯಲಾಯಿತು.

ಆದರೂ, ಸುಪ್ರೀಂಕೋರ್ಟಿನ ಎನ್‍ಏಎಲ್‍ಎಸ್‍ಏ ತೀರ್ಪಿನಲ್ಲಿ ಅಡಕವಾದ ಸ್ವ ಇಚ್ಛೆಯಿಂದ ತಮಗಿಷ್ಟವಾದ ಲಿಂಗವನ್ನು ಗುರುತಿಸುವ ಹಕ್ಕನ್ನು ಈ ಮಸೂದೆ ಉಲ್ಲಂಘಿಸುತ್ತದೆ. ಈಗ ಆ ವ್ಯಕ್ತಿಗಳು ಮೊದಲು ತಾವು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳೆಂದು ಸರಕಾರಕ್ಕೆ ಬಹಿರಂಗಪಡಿಸಬೇಕು ಹಾಗೂ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತಮ್ಮ ಗುರುತಿನ ದಾಖಲೆಗಳನ್ನು ಪಡೆಯಲು ಮನವಿ ಸಲ್ಲಿಸಬೇಕು ಎನ್ನುವುದನ್ನು ಕಡ್ಡಾಯಗೊಳಿಸಿದೆ. ಹಾಗೂ ನಮ್ಮ ಆಯ್ಕೆಯ ಯಾವುದೇ ಇತರ ಲಿಂಗದಲ್ಲಿ ಗುರುತಿನ ದಾಖಲೆಗಳನ್ನು ಪಡೆಯಬೇಕಾದರೆ ಶಸ್ತ್ರಚಿಕಿತ್ಸೆಯ ದಾಖಲೆಗಳನ್ನು ಸಲ್ಲಿಸಬೇಕು ಎಂತಲೂ ಹೇಳಿದೆ. ಇದರ ಅರ್ಥ, ಒಬ್ಬ ಟ್ರಾನ್ಸ್ ಪುರುಷ, ಹಾರ್ಮೋನುಗಳನ್ನು ಸೇವಿಸಿ, ಗಡ್ಡವನ್ನು ಬೆಳೆಸಿದರೂ, ಒಂದು ವೇಳೆ ಆತ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಇಚ್ಛಿಸದಿದ್ದರೆ ತನ್ನ ಆಯ್ಕೆಯ ಲಿಂಗಕ್ಕೆ ವಿರುದ್ಧವಾದ ಲಿಂಗದ ಗುರುತಿನೊಂದಿಗೇ ಜೀವಿಸಬೇಕಾಗುತ್ತದೆ. ಈ ಮಸೂದೆಯು ಬೇರೆ ಬೇರೆ ರೀತಿಯ ಟ್ರಾನ್ಸ್ ವ್ಯಕ್ತಿಗಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಬೇರೆ ಬೇರೆ ಪ್ರಮಾಣದ ಶಿಕ್ಷೆ ನೀಡುವ ತಾರತಮ್ಯವನ್ನೂ ಹೊಂದಿದೆ.

ಬಹುಶಃ ನಮ್ಮ ಹಕ್ಕುಗಳ ಮೇಲೆ ಇಂತಹ ಕಾನೂನು ದಾಳಿಗೆ ಪ್ರತಿಕ್ರಿಯೆಯಾಗಿಯೇ, ನಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳ ಅವಶ್ಯಕತೆ ಎಲ್ಲರಿಗೂ ಕಾಣಿಸುವಂತಾಗಲಿ ಎಂದು ಟ್ರಾನ್ಸ್‌ಜೆಂಡರ್ ಸಮುದಾಯವು 2019ರ ಚುನಾವಣೆಗಳಲ್ಲಿ ಗಟ್ಟಿಯಾಗಿ ತೊಡಗಿಸಿಕೊಂಡಿತ್ತು. ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರು ಚುನಾವಣೆಯಲ್ಲಿ ಬಹಳ ಹಿಂದಿನಿಂದ ಭಾಗವಹಿಸುತ್ತಿದ್ದರೂ, 2019ರ ಚುನಾವಣೆ ಮುಂಚೆಗಿಂತ ಭಿನ್ನವಾಗಿತ್ತು. ದೇಶದ ವಿವಿಧೆಡೆಯಲ್ಲಿ 2019ರ ಚುನಾವಣೆಯಲ್ಲಿ ಭಾಗವಹಿಸಿದ ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರ ಸಂಖ್ಯೆ ಗಣನೀಯವಾಗಿತ್ತು. ಹಾಗೂ ಅದಕ್ಕಿಂತ ಮುಖ್ಯವಾಗಿ ಟ್ರಾನ್ಸ್‌ಜೆಂಡರ್ ಸಮುದಾಯದ ವಿಷಯಗಳನ್ನು ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲಿ ವಿವರವಾಗಿ ಉಲ್ಲೇಖಸಿದ್ದು 2019ರ ಚುನಾವಣೆಗಳಲ್ಲಿ.

ಪ್ರಸ್ತುತ ಮಸೂದೆಯ ವಿರುದ್ಧ ಹೋರಾಟ ಮಾಡುವ ಭರವಸೆಯನ್ನು ಕೆಲವು ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಸ್ಪಷ್ಟವಾಗಿ ಹೇಳಿದವು; ಕಾಂಗ್ರೆಸ್ ಪಕ್ಷ, ಸಿಪಿಎಮ್ ಹಾಗೂ ಹೊಸದಾಗಿ ರಚಿತಗೊಂಡ ವಂಚಿತ್ ಬಹುಜನ್ ಅಘಾಡಿ ಪಕ್ಷದ ಪ್ರಣಾಳಿಕೆಗಳು ಈ ಭರವಸೆಯನ್ನು ಒಳಗೊಂಡ ಕೆಲವು ಪಕ್ಷಗಳು. ಅದರೊಂದಿಗೆ, ಹಲವಾರು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ಚುನಾವಣೆಗೂ ಸ್ಪರ್ಧಿಸಿದರು; ಅಲಹಾಬಾದ್‍ನಲ್ಲಿ ಭವಾನಿ ಸಿಂಗ್ ಆಪ್‍ನಿಂದ ಸ್ಪರ್ಧಿಸಿದರೆ, ಇತರ ಅಭ್ಯರ್ಥಿಗಳು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದರು; ಅವರೆಂದರೆ ಎರ್ನಾಕುಲಮ್‍ದಿಂದ ‘ಚಿಂಚು’ ಅಸ್ವಥಿ ರಾಜಪ್ಪನ್, ಅಹ್ಮದಾಬಾದ್‍ನಿಂದ ರಾಜು ಮಾತಾಜಿ, ಮುಂಬಯಿಯಲ್ಲಿ ಜತಿನ್ ರಂಗರಾವ್ ಹರ್ನೆ ಮತ್ತು ಸ್ನೇಹಾ ಕಾಳೆ ಹಾಗೂ ಚೆನ್ನೈನಿಂದ ಎಮ್.ರಾಧಾ.

ಬಿಜೆಪಿಯ ಗೆಲವು ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಇನ್ನಷ್ಟು ದುಗುಡವನ್ನು ತಂದಿದೆ. ಈ ಕಾರಣದಿಂದಲೇ ಅವರ ನೀತಿಗಳ ವಿರುದ್ಧ ಸಮುದಾಯದ ರಾಜಕೀಯ ಪಾಲ್ಗೊಳ್ಳುವಿಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಬಹುದು. ಬಿಜೆಪಿಯ ಪ್ರಣಾಳಿಕೆಯು ತುಂಬಾ ನಯವಾಗಿ ‘ಸೂಕ್ತ ಸಾಮಾಜಿಕ, ಆರ್ಥಿಕ ಮತ್ತು ನೀತಿಗಳ ಕ್ರಮಗಳ’ ಮೂಲಕ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳನ್ನು ಮುಖ್ಯವಾಹಿನಿ ತರಲಾಗುವುದು’, ‘ಸ್ವ-ಉದ್ಯೋಗ’ ಮತ್ತು ‘ಕೌಶಲ್ಯ ಅಭಿವೃದ್ಧಿ’ಯನ್ನು ಸುನಿಶ್ಚಿತಗೊಳಿಸಲಾಗುವುದು ಎಂದೂ ಹೇಳಿತು. ಆದರೆ, ಭಿಕ್ಷಾಟನೆ ಮತ್ತು ಲೈಂಗಿಕ ವೃತ್ತಿಯ ರೂಪದಲ್ಲಿ ಸಮುದಾಯವು ಸ್ವ-ಉದ್ಯೋಗದಲ್ಲಿಯೇ ತೊಡಗಿದೆ, ಇವರೆಡೂ ಸಂಕಷ್ಟದಿಂದ ಹುಟ್ಟಿಕೊಂಡ ಸ್ವಯಂ-ಸಂಘಟಿತ ಜೀವನೋಪಾಯಗಳಾಗಿವೆ.

ಮುಂದಿನ ದಿನಗಳು ಅಷ್ಟು ಚೆನ್ನಾಗಿರುವುದಿಲ್ಲವೆಂಬುದು ಖಚಿತ. ಆರ್ಥಿಕ ಬಿಕ್ಕಟ್ಟಿನೆದುರು, ಫ್ಯಾಸಿಸ್ಟ್ ತತ್ವಾಧಾರಿತ ಹಿಂದೂ ಬಹುಸಂಖ್ಯಾತವಾದಿ ಸಂಘಟನೆಯಿಂದ ಆಳಲ್ಪಡುತ್ತಿರುವ ಈ ದೇಶವು ಒಂದು ದೀರ್ಘ ಸಾಮಾಜಿಕ ರಾಜಕೀಯ ಪ್ರಕ್ರಿಯೆಯ ಮೂಲಕ ಹಾದುಹೋಗಲೇಬೇಕಿದೆ ಎಂಬುದು ಸ್ಪಷ್ಟ.

ಅಂಕಿಅಂಶಗಳ ಪ್ರಕಾರ ಎಲ್‍ಜಿಬಿಟಿಕ್ಯುಐಏ (LGBTQIA) ಎಂದು ಗುರುತಿಸಿಕೊಂಡವರ ಸಂಖ್ಯೆ ಭಾರತದ ಜನಸಂಖ್ಯೆಯ ಶೇ.4-11ರಷ್ಟಿದೆ. ಅಂದರೆ, ಈ ಸಮುದಾಯ ವೋಟ್ ಬ್ಯಾಂಕ್ ಎಂದು ಪರಿಗಣಿಸುವಷ್ಟು ದೊಡ್ಡದಾಗಿದೆ. ಆದರೆ ನನ್ನ ಚಿಂತೆ LGBTQIA ಸಮುದಾಯದ ಸದಸ್ಯರ ಮತ್ತು ಅವರ ಹೆಚ್ಚುತ್ತಿರುವ ಸಾರ್ವಜನಿಕ ಅಸ್ತಿತ್ವ ಅಲ್ಲ; ತುಳಿತಕೊಳಪಟ್ಟ ಇತರ ಸಮುದಾಯಗಳೊಂದಿಗೆ ಈ ಸಮುದಾಯವು ಹೇಗೆ ಸಹ-ಸಂಬಂಧವನ್ನು ಸಾಧಿಸಬಹುದು ಎನ್ನುವುದು ನನ್ನ ಚಿಂತೆ. ಸ್ವ-ವಿಮೋಚನೆಯ ಒಂದು ಸಂಕುಚಿತ ರೂಪಕ್ಕಾಗಿ ಹೋರಾಡುವುದು ನಮ್ಮ ಗುರಿಯಾಗಬಾರದು. ಅದರ ಬದಲಿಗೆ ಇಂದು ಇರುವ ಕ್ರೂರ, ಅಸಮಾನ ಸಮಾಜದಿಂದ ಎಲ್ಲರನ್ನೂ ವಿಮೋಚನೆಗೊಳಿಸುವುದು ನಮ್ಮ ಗುರಿಯಾಗಿರಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...