Homeಎಕಾನಮಿಯೋಜನೆಯೇ ಇಲ್ಲದ ಮೋದಿ ಲಾಕ್‌ಡೌನ್ : ವೈರಸ್ ಕೊಲ್ಲದಿದ್ದರೂ, ಆರ್ಥಿಕತೆಯ ಮರಣ ನಿಶ್ಚಿತ!

ಯೋಜನೆಯೇ ಇಲ್ಲದ ಮೋದಿ ಲಾಕ್‌ಡೌನ್ : ವೈರಸ್ ಕೊಲ್ಲದಿದ್ದರೂ, ಆರ್ಥಿಕತೆಯ ಮರಣ ನಿಶ್ಚಿತ!

ಅತ್ಯಂತ ಕೆಟ್ಟದಾಗಿ ಯೋಜಿಸಲಾದ ಅಥವಾ ನಿರ್ದಿಷ್ಟವಾದ ಯೋಜನೆಯೇ ಇಲ್ಲದ ಮೋದಿಯ ರಾಷ್ಟ್ರೀಯ ಕರ್ಫ್ಯೂ ಅಥವಾ ಲಾಕ್‌ಡೌನ್ ಭಾರತೀಯರನ್ನು ಹಸಿವಿನಿಂದ ಕೊಲ್ಲಬಹುದೇ ಹೊರತು, ಅದು ವೈರಸ್‌ನಿಂದ ಅವರನ್ನು ರಕ್ಷಿಸುವುದು ಕಷ್ಟಸಾಧ್ಯ.

- Advertisement -
- Advertisement -

ಶಿವಂ ವಿಜ್

ಅನುವಾದ: ನಿಖಿಲ್ ಕೋಲ್ಪೆ

ಕೊರೋನ ವೈರಸ್ ನಿಯಂತ್ರಣದಲ್ಲಿ ಈ ತನಕ ಬಹಳಷ್ಟು ಒಳ್ಳೆಯ ಸಾಧನೆ ತೋರಿದ ದೇಶಗಳು ಸಂಪೂರ್ಣ, ದೇಶವ್ಯಾಪಿ ಕರ್ಫ್ಯೂ ಮಾದರಿಯ ಲಾಕ್‌ಡೌನ್ ಹೇರಿಲ್ಲ ಎಂದು ಗಮನಿಸುವುದು ಅಗತ್ಯ. ಈ ದೇಶಗಳಲ್ಲಿ ಸಿಂಗಾಪುರ, ತೈವಾನ್, ಜರ್ಮನಿ ಮತ್ತು ತುರ್ಕಿ ಸೇರಿವೆ. ಇವೆಲ್ಲವೂ ಆರಂಭವಾದ ಚೀನಾದಲ್ಲಿಯೂ ಹ್ಯುಬೆಯ್ ಪ್ರಾಂತ್ಯವನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿತ್ತಾದರೂ, ಇಡೀ ದೇಶದಲ್ಲಿ ಅದನ್ನು ಮಾಡಿರಲಿಲ್ಲ.

ಆದರೆ, ಪ್ರಧಾನಿ ನರೇಂದ್ರ ಮೋದಿ 130 ಕೋಟಿ ಜನರನ್ನು ಕರ್ಫ್ಯೂ ಮಾದರಿಯ ಲಾಕ್‌ಡೌನ್‌ನಲ್ಲಿ ಇರಿಸಿದ್ದಾರೆ. ಪಾಸ್‌ಗಳನ್ನು ನೀಡುವಾಗ ಅಧಿಕಾರಿಗಳು ‘ಕರ್ಫ್ಯೂ’ ಎಂಬ ಪದವನ್ನು ಬಳಸುತ್ತಿರುವುದರಿಂದ ಅದನ್ನು ರಾಷ್ಟ್ರೀಯ ಕರ್ಫ್ಯೂ ಎಂದು ಕರೆಯುವುದೇ ಸಮಂಜಸವಾಗಿದೆ.

21 ದಿನಗಳ ರಾಷ್ಟ್ರೀಯ ಕರ್ಫ್ಯೂ ಖಂಡಿತವಾಗಿಯೂ ಈ ಮಾರಣಾಂತಿಕ ವೈರಸ್‌ನ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಬಹಳಷ್ಟು ನೆರವಾಗಲಿದೆ. ಆದರೆ, 21 ದಿನಗಳ ನಂತರ ಏನಾಗಲಿದೆ? ಆ ಬಳಿಕ ವೈರಸೇನೂ ಮಾಯವಾಗುವುದಿಲ್ಲ- ಕನಿಷ್ಟ ನಮಗೆ ಲಸಿಕೆ ಸಿಗುವ ತನಕ. ಲಸಿಕೆಯನ್ನು ಅಭಿವೃದ್ಧಿಪಡಿಸಿದ ಮೇಲೂ ಪ್ರತೀ ಭಾರತೀಯನಿಗೆ ಲಸಿಕೆ ಹಾಕಲು ಕೆಲವು ತಿಂಗಳುಗಳೇ ಬೇಕು. ಈ ಕೆಲವು ತಿಂಗಳುಗಳು ಎಂಬುದು ಒಂದು ಆಶಾವಾದಿ ಅಂದಾಜು. ಬೇರೆ ಮಾತುಗಳಲ್ಲಿ ಹೇಳುವುದಾದಲ್ಲಿ ಕೆಲವು ವರ್ಷಗಳ ಕಾಲ ನಾವು ಈ ಗೋಜಲಿನಲ್ಲಿ ಇರಲಿದ್ದೇವೆ.

ಆದುದರಿಂದ, 21 ದಿನಗಳ ರಾಷ್ಟ್ರೀಯ ಲಾಕ್‌ಡೌನನ್ನು ಭಾರಿ ಪ್ರಮಾಣದ ಪರೀಕ್ಷಾ ಸೌಲಭ್ಯಗಳ ನಿರ್ಮಾಣಕ್ಕೆ ಕಾಲಾವಕಾಶ ಪಡೆಯುವ ಪ್ರಯತ್ನ ಎಂಬಂತೆ ಕಾಣಬೇಕಾಗಿದೆ. ಇದರಿಂದ ರೋಗಲಕ್ಷಣ ರಹಿತರನ್ನೂ ಪರೀಕ್ಷಿಸಿ, ಶಂಕಿತರನ್ನು ಪ್ರತ್ಯೇಕಿಸಬಹುದು. ನಮಗೆ ಸೂಕ್ತ ಔಷಧಿಗಳು ಮತ್ತು ಸಾಮೂಹಿಕವಾಗಿ ಹಾಕಲು ಬೇಕಾದಷ್ಟು ಲಸಿಕೆ ಸಿಗುವ ವರೆಗೆ ಇದೊಂದೇ ಕೊರೋನ ವೈರಸ್ ಪಿಡುಗನ್ನು ನಿಯಂತ್ರಿಸಲು ಇರುವ ಹಾದಿ.

ಈ ಪೆಡಂಭೂತದ ವಿವರಗಳು

ದುರದೃಷ್ಟವಶಾತ್, ನರೇಂದ್ರ ಮೋದಿ ತನ್ನ ಎರಡೂ ಭಾಷಣಗಳಲ್ಲಿ ಭಾರತವು ಸಾಮೂಹಿಕ ಪರೀಕ್ಷೆಯ ಹಾದಿಯನ್ನು ಹಿಡಿಯದೇ ಇರುವ ಆತಂಕದ ವಿಷಯದ ಬಗ್ಗೆ ಏನನ್ನೂ ಹೇಳಿಲ್ಲ. ನಮಗೆ ತ್ವರಿತ, ಅಗ್ಗದ, ಸುಲಭವಾಗಿ ಲಭ್ಯವಾಗುವ ಪರೀಕ್ಷೆಗಳು ಬೇಕು. ಒಬ್ಬ ವ್ಯಕ್ತಿಯಲ್ಲಿ ರೋಗ ಲಕ್ಷಣಗಳು ಕಂಡುಬಂದ ತಕ್ಷಣವೇ, ಆ ವ್ಯಕ್ತಿ ವೈದ್ಯಕೀಯ ಸಿಬ್ಬಂದಿ ಮತ್ತು ಕುಟುಂಬದ ಇತರ ಸದಸ್ಯರೂ ಸೇರಿದಂತೆ ಬೇರೆಯವರಿಗೆ ಅದನ್ನು ಹರಡದಂತೆ ತಡೆಯಲು ಉತ್ತಮವಾದ ಪ್ರತ್ಯೇಕಿಸುವ (quarantine) ವ್ಯವಸ್ಥೆ ಬೇಕು.

ಭಾರತದ ಕೊರೋನ ವೈರಸ್ ಸೋಂಕಿತರ ಅಧಿಕೃತ ಸಂಖ್ಯೆಯನ್ನು ನಂಬಿದರೆ ನೀವು ನಿಜಕ್ಕೂ ಮುಗ್ಧರು. ಪರೀಕ್ಷೆಯೇ ಇಲ್ಲದೆ, ಕೊರೋನ ವೈರಸ್ ಸಾವು ಎಂಬ ಗಣನೆಗೂ ಬಾರದೆ, ಏಕಾಏಕಿಯಾಗಿ ನ್ಯುಮೋನಿಯಾಕ್ಕೆ ಬಲಿಯಾದವರಿದ್ದಾರೆ.

ವ್ಯಾಪಕವಾದ ಪರೀಕ್ಷಾ ಸೌಲಭ್ಯ ಮತ್ತು ವೈದ್ಯರಿಗೆ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ)ಗಳ ಕೊರತೆ ಒಂದು ಹಗರಣವೇ ಸರಿ. ಈ 21 ದಿನಗಳು ಈ ಎರಡು ಸಮಸ್ಯೆಗಳನ್ನು ಪರಿಹರಿಸಲು ಮೋದಿಗಿರುವ ಕೊನೆಯ ಅವಕಾಶ. ಎಲ್ಲರಿಗಿಂತಲೂ ಹೆಚ್ಚಿನ ಜವಾಬ್ದಾರಿ ಇರಬೇಕಾದುದು ಅವರಿಗೇ. ಜೊತೆಗೆ ರಾಜ್ಯ ಸರಕಾರಗಳು ಕೂಡಾ ಪರೀಕ್ಷೆಗೆ ಒಳಪಡಲಿವೆ.

ದುಃಖದ ವಿಷಯವೆಂದರೆ, ಯೋಜನೆ ಮತ್ತು ಅನುಷ್ಟಾನದ ವಿವರಗಳನ್ನು ಕುರಿತು ಚಿಂತಿಸಲು ಮೋದಿ ಸರಕಾರಕ್ಕೆ ಸಾಮರ್ಥ್ಯವಿಲ್ಲ ಎಂದು ಸಾಕ್ಷ್ಯಾಧಾರಗಳು ಸೂಚಿಸುತ್ತವೆ. ನೌಟಂಕಿಯನ್ನು ಸಾಧನೆ ಎಂದು ಭಾವಿಸುವ ಮೋದಿಯ ಟಿಪಿಕಲ್ ಸಮಸ್ಯೆಯಿಂದಾಗಿ, ಇದು ಇನ್ನೊಂದು ನೋಟು ಅಮಾನ್ಯೀಕರಣದ ರೂಪ ಪಡೆಯುತ್ತಿದೆ.

ಪ್ರಸ್ತುತ ಎಂದರೆ, ಎಷ್ಟು ಜನ ಮೋದಿಯ ಸಲಹೆಯಂತೆ ಜಾಗಟೆ ಬಡಿದರು, ಎಷ್ಟು ಜನ ಮನೆಯೊಳಗೆ ಉಳಿದರು ಎಂಬುದಲ್ಲ. ಪ್ರಸ್ತುತ ಎಂದರೆ, ಎಷ್ಟು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ, ಎಷ್ಟು ವೈದ್ಯರಿಗೆ ಸುರಕ್ಷಾ ಸಾಧನಗಳನ್ನು ಒದಗಿಸಲಾಗಿದೆ, ತಕ್ಷಣದಲ್ಲಿ ಸರಕಾರ ಎಷ್ಟು ವೆಂಟಿಲೇಟರ್‌ಗಳನ್ನು ಉತ್ಪಾದಿಸಿದೆ ಅಥವಾ ಖರೀದಿಸಿದೆ ಎಂಬುದಾಗಿದೆ. ಇತರ ಪ್ರಸ್ತುತ ವಿಷಯಗಳೆಂದರೆ, ಪ್ರತ್ಯೇಕಿಸುವ ಕೇಂದ್ರಗಳು, ಒಳಾಂಗಣ ಕ್ರೀಡಾಂಗಣ ಅಥವಾ ಮಾನವ ವಾಸಕ್ಕೆ ಯೋಗ್ಯವಾದ ಕಟ್ಟಡಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳು ಮತ್ತು ಪ್ರತ್ಯೇಕಿಸುವ ಕೇಂದ್ರಗಳು.

ಮೋದಿಗೆ ಇಂತಹಾ ವಿವರಗಳನ್ನು ಪರಿಶೀಲಿಸುವ ತಾಳ್ಮೆಯಾಗಲೀ, ಆಸಕ್ತಿಯಾಗಲೀ ಇದ್ದಂತಿಲ್ಲ. ಬಹುಶಃ ಆತ ತನ್ನ ವಾಕ್ಚಾತುಯರ್ಯಕ್ಕೆ ಚಪ್ಪಾಳೆ ಗಿಟ್ಟಿಸುವ ಮುಂದಿನ “ರಾಷ್ಟ್ರವನ್ನುದ್ದೇಶಿಸಿ ಭಾಷಣ”ದ ತಯಾರಿಯಲ್ಲಿ ತೊಡಗಿರಬಹುದು. ಆತ ಕಷ್ಟಕರ ಕೆಲಸಗಳನ್ನು ರಾಜ್ಯ ಸರಕಾರಗಳ ಹೆಗಲಿಗೆ ತಳ್ಳಿ, ಈ ಕಷ್ಟಕಾಲದಲ್ಲಿ ತನ್ನ ರಾಜಕೀಯ ರೇಟಿಂಗ್‌ ಉಳಿಸಿಕೊಳ್ಳುವ ಪ್ರಚಾರ ತಂತ್ರಗಳ ಮೇಲೆ ಗಮನಹರಿಸಬಹುದು.

ವೈರಸ್ ನಿಮ್ಮನ್ನು ಕೊಲ್ಲದಿದ್ದಲ್ಲಿ…

ಒಂದು ವೇಳೆ ನಾವು ಈ ಪಿಡುಗಿನಿಂದ ಪಾರಾದರೂ, ಮುಂದೆ ಬರಲಿರುವ ಆರ್ಥಿಕ ಕುಸಿತದಿಂದ ಪಾರಾಗಲಾರೆವು. ಆರ್ಥಿಕತೆ ಕೂಡಾ ಮೋದಿಯ ಗಮನದಲ್ಲಿಲ್ಲ. ಕಳೆದ 45 ವರ್ಷಗಳಲ್ಲೇ ಹೆಚ್ಚಿನ ನಿರುದ್ಯೋಗ ದರಕ್ಕೆ ಕಾರಣವಾದ ದುರಂತಕಾರಿ ಆರ್ಥಿಕ ನೀತಿಗಳ ಹೊರತಾಗಿಯೂ ಆತ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹಾಗಿರುವಾಗ ಆತ ಆರ್ಥಿಕತೆಯ ಕುರಿತು ಏಕೆ ಚಿಂತಿಸಬೇಕು?

ಅಮಾನ್ಯೀಕರಣ ಮತ್ತು ಜಿಎಸ್‌ಟಿಗಳು ಬೇಡಿಕೆಯನ್ನು ಕೊಂದವು. ಕೆಟ್ಟದಾಗಿ ಯೋಜಿಸಲಾದ ಈ ರಾಷ್ಟ್ರೀಯ ಕರ್ಫ್ಯೂ ಪೂರೈಕೆ ಜಾಲಗಳನ್ನು ಕೊಲ್ಲಲಿದೆ. ಕೊನೆಯಲ್ಲಿ ನಮಗೆ ಭಾರತದ ಅತ್ಯಂತ ದೊಡ್ಡ ಆವಿಷ್ಕಾರವಾಗಿರುವ “ಸೊನ್ನೆ” ಮಾತ್ರ ಉಳಿಯಲಿದೆ.

ಮೋದಿ ಹೆಚ್ಚಿನ ಸಮಯವನ್ನೇ ಕೊಡದೆ ರಾಷ್ಟ್ರೀಯ ಕರ್ಫ್ಯೂ ಘೋಷಿಸಿದರು. ರಾತ್ರಿ 8.00 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ಮಧ್ಯ ರಾತ್ರಿಯಿಂದಲೇ ಕರ್ಫ್ಯೂ ಜಾರಿಗೆ ಬಂತು. ಅಮಾನ್ಯೀಕರಣದ ರೀತಿಯಲ್ಲೇ. ಆತ ಜನರಿಗೆ ಸ್ವಲ್ಪ ಕಾಲಾವಕಾಶವನ್ನು ಏಕೆ ಕೊಡಲಿಲ್ಲ? ಬೆಳಿಗ್ಗೆ 8.00 ಗಂಟೆಗೆ ಭಾಷಣ ಮಾಡಬಹುದಿತ್ತಲ್ಲವೆ? ನೋಡಿ, ಇದು ಟಿ.ವಿ.ಯ ಪ್ರೈಮ್ ಟೈಮ್‌ನ ಗರಿಷ್ಟ ಪ್ರಚಾರ ಗಿಟ್ಟಿಸುವುದಕ್ಕಾಗಿ.

ಗೃಹ ಸಚಿವಾಲಯವು ಕೆಲವು ವಿನಾಯಿತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಆದರೆ, ಅದನ್ನು ರಸ್ತೆಯಲ್ಲಿರುವ ಪೊಲೀಸರಿಗೆ ವಿವರಿಸಲು ಹೋಗಿ ನೋಡಿ. ಭಾರತೀಯ ಪೊಲೀಸರು ತಮಗೆ ಅತ್ಯಂತ ಪ್ರಿಯವಾದ ಕೆಲಸವನ್ನೇ ಮಾಡುತ್ತಿದ್ದಾರೆ. ಅದೆಂದರೆ, ಭಾರತೀಯ ಪ್ರಜೆಗಳಿಗೇ ಲಾಠಿಯಲ್ಲಿ ಥಳಿಸುವುದು. ಇದೇ ವೇಳೆಗೆ ಸಾವಿರಾರು ಟ್ರಕ್‌ಗಳು ರಾಜ್ಯಗಳ ಗಡಿಗಳಲ್ಲಿ ಸಿಕ್ಕಿಬಿದ್ದಿವೆ. ಔಷಧಿ, ಹಾಲು, ದಿನಸಿ, ಆಹಾರ ಮತ್ತು ಪತ್ರಿಕೆಗಳಂತಹ ಅತ್ಯಂತ ಆವಶ್ಯಕ ವಸ್ತುಗಳ ಪೂರೈಕೆ ಜಾಲಗಳು ಬುಡಮೇಲಾಗಿವೆ. ಕಟಾವಿನ ಅಂದರೆ, ರಾಬಿ ಋತುವಿನಲ್ಲಿ ಈ ಕೆಲಸವನ್ನು ರಾಷ್ಟ್ರೀಯ ಕರ್ಫ್ಯೂ ನಡುವೆ ಹೇಗೆ ನಡೆಸುವುದು ಎಂದು ಲಕ್ಷಾಂತರ ರೈತರು ಚಿಂತಿತರಾಗಿದ್ದಾರೆ ಎಂಬ ವಿಷಯ ಪ್ರಧಾನಿಯ ಕಚೇರಿಯಲ್ಲಿ ಯಾರಿಗೂ ಗೊತ್ತಿರುವಂತಿಲ್ಲ. ದೇಶವು ಒಂದು ಸಾಂಕ್ರಾಮಿಕ ಪಿಡುಗನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೇ ದೇಶದ ವೈದ್ಯಕೀಯ ಜಾಲವನ್ನು ಬುಡಮೇಲುಗೊಳಿಸುವುದು ಕೇವಲ ಮೋದಿಗಷ್ಟೇ ಸಾಧ್ಯ.

ಈ ತನಕ ದೊಡ್ಡ ಹಣಕಾಸು ಪ್ಯಾಕೇಜನ್ನು ಘೋಷಿಸದ ಏಕೈಕ ವಿಶ್ವನಾಯಕನೆಂದರೆ ಮೋದಿ. ಹಣಕಾಸು ಸಚಿವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಆತ ತನ್ನ ಮೊದಲ ಭಾಷಣದಲ್ಲಿ ಹೇಳಿದ್ದರು. ಆದರೆ, ಈ ವಿಷಯ ತಮಗೆ ಗೊತ್ತಾದುದೇ ಪ್ರಧಾನಿ ಭಾಷಣದಿಂದ ಎಂದು ಹಣಕಾಸು ಸಚಿವಾಲಯದ ಮೂಲಗಳು ಹೇಳುತ್ತಿವೆ.

ಕೊರೋನದಿಂದ ಉಂಟಾಗುವ ಆರೋಗ್ಯ ವೆಚ್ಚವನ್ನು ಭರಿಸಲು ಹೆಚ್ಚುವರಿ 15,000 ಕೋಟಿ ರೂ.ಗಳನ್ನು ಅವರು ಘೋಷಿಸಿದ್ದಾರೆ. ಆದರೆ ಇದು ಕೇಂದ್ರ ದಿಲ್ಲಿಯನ್ನು ನವೀಕರಿಸುವ ಅನಗತ್ಯವಾದ, ಸ್ವಮೋಹಿ ಯೋಜನೆಗೆ ಆತ ತೆಗೆದಿಟ್ಟ ಹಣಕ್ಕಿಂತ 5,000 ಕೋಟಿ ರೂ. ಕಡಿಮೆ.

ಈ ರೀತಿ ನಡೆದರೆ, ಕೊರೋನ ವೈರಸ್‌ನಿಂದ ಸಾಯುವ ಜನರಿಗಿಂತಲೂ ಹೆಚ್ಚು ಜನರು ಹಸಿವಿನಿಂದ ಸಾಯಬಹುದು. ಮೋದಿಯ ಕಳಪೆ ಆಡಳಿತ ಕೌಶಲ, ವಿವರಗಳ ಕುರಿತು ಶೂನ್ಯ ಗಮನ, ಆಡಳಿತಕ್ಕಿಂತಲೂ ಭಾಷಣಕ್ಕೆ ಮಹತ್ವ ಎಲ್ಲಾ ಸೇರಿ ಈ ಬಿಕ್ಕಟ್ಟನ್ನು ದೊಡ್ಡ ದುರಂತವನ್ನಾಗಿ ಮಾಡಬಹುದು. ಇನ್ನು ಕೆಲವೇ ವಾರಗಳಲ್ಲಿ ಅಧಿಕೃತ ಅಂಕಿಅಂಶಗಳನ್ನು ಮೀರಿದ ಮಹಾಮಾರಿಯನ್ನು ಮತ್ತು 1980 ದಶಕದ ಆರ್ಥಿಕತೆಯನ್ನು ನಾವು ಎದುರು ನೋಡಬೇಕಾಗಿ ಬರಬಹುದು.

(ಲೇಖಕರು ‘ದಿ ಪ್ರಿಂಟ್’ನ ಕಾಂಟ್ರಿಬ್ಯೂಟಿಂಗ್ ಎಡಿಟರ್ ಆಗಿದ್ದು, ಅಭಿಪ್ರಾಯಗಳು ಲೇಖಕರದ್ದು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...