Homeಎಕಾನಮಿಬಡತನ ನಿವಾರಣೆ: ವಾಸ್ತವಿಕ ಒಳನೋಟಗಳಿಗೆ ಸಂದ ನೊಬೆಲ್ - ಡಿ ಉಮಾಪತಿ

ಬಡತನ ನಿವಾರಣೆ: ವಾಸ್ತವಿಕ ಒಳನೋಟಗಳಿಗೆ ಸಂದ ನೊಬೆಲ್ – ಡಿ ಉಮಾಪತಿ

- Advertisement -
- Advertisement -

ಇಂದಿರಾಗಾಂಧೀ ಸರ್ಕಾರದ ನೀತಿ ನಿರ್ಧಾರಗಳ ವಿರುದ್ಧ ಟೀಕೆಗಳು ಪ್ರತಿಭಟನೆಗಳು ಜೆ.ಎನ್.ಯು.ವಿನಲ್ಲಿ ಅಂದು ಸರ್ವೇಸಾಧಾರಣವಾಗಿದ್ದವು. ಬ್ಯಾನರ್ಜಿ ಇವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ 1980ರಿಂದ 2016ರ ತನಕ ಪ್ರತಿಕೂಲಗಳ ನಡುವೆಯೂ ಎಲ್ಲ ಬಗೆಯ ಅಭಿವ್ಯಕ್ತಿಗಳನ್ನೂ ಆಲಿಸಿ ಅವುಗಳಿಗೆ ಅನುವು ಮಾಡಿಕೊಟ್ಟಿತ್ತು.

ತಾನು ಅಧಿಕಾರಕ್ಕೆ ಬಂದರೆ ದೇಶದ ಐದು ಕೋಟಿ ಅತಿ ಬಡ ಕುಟುಂಬಗಳಿಗೆ ವರ್ಷಕ್ಕೆ ತಲಾ 72 ಸಾವಿರ ರುಪಾಯಿಗಳಷ್ಟು ಕನಿಷ್ಠ ಆದಾಯವನ್ನು ವಿತರಿಸುವುದಾಗಿ ಕಾಂಗ್ರೆಸ್ ಪಕ್ಷ ಇತ್ತೀಚಿನ ಲೋಕಸಭಾ ಚುನಾವಣೆಗಳಲ್ಲಿ ಘೋಷಿಸಿತ್ತು.

`ನ್ಯಾಯ್’ ಎಂದು ಕರೆಯಲಾಗಿದ್ದ ಈ ಕನಿಷ್ಠ ಆದಾಯ ಯೋಜನೆಯ ಒಟ್ಟು ವೆಚ್ಚವನ್ನು 3.6 ಲಕ್ಷ ಕೋಟಿ ರುಪಾಯಿ ಎಂದು ಅಂದಾಜು ಮಾಡಲಾಗಿತ್ತು. ಅತಿ ಬಡ ಕುಟುಂಬಗಳ 25 ಕೋಟಿ ಮಂದಿಯನ್ನು ಈ ಯೋಜನೆಯ ಫಲಾನುಭವಿಗಳು ಎಂದು ಆ ಪಕ್ಷ ಹೇಳಿತ್ತು. ಚುನಾವಣೆಗಳ ಹೊಸ್ತಿಲಿನಲ್ಲಿ ರಾಜಕೀಯ ಪಕ್ಷಗಳು ಅಲ್ಲಿಯ ತನಕ ಇಂತಹ ಮಹತ್ವಾಕಾಂಕ್ಷೆಯ ಅತಿ ದೊಡ್ಡ ಯೋಜನೆಯ ಭರವಸೆ ನೀಡಿರಲಿಲ್ಲ.

ನರೇಂದ್ರ ಮೋದಿ ಸರ್ಕಾರ ಪಾಕಿಸ್ತಾನದ ಮೇಲೆ ನಡೆಸಿದ ‘ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್’, ದೇಶದ ಜನಮಾನಸವನ್ನು ಆವರಿಸಿದ ಹೊತ್ತಿನಲ್ಲಿ ಕಾಂಗ್ರೆಸ್ ಈ ಆಶ್ವಾಸನೆಯನ್ನು ಅನಾವರಣಗೊಳಿಸಿತ್ತು. ಬಡತನದ ಮೇಲೆ ತಮ್ಮ ಪಕ್ಷ ಸಾರಿದ ಅತಿ ದೊಡ್ಡ ‘ಸರ್ಜಿಕಲ್ ಸ್ಟ್ರೈಕ್’ ಎಂದು ರಾಹುಲ್ ಗಾಂಧಿ ಬಣ್ಣಿಸಿದ್ದರು.

ಪುಲ್ವಾಮಾ- ಬಾಲಾಕೋಟ್ ದಾಳಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಚುನಾವಣೆ ಪ್ರಚಾರಕ್ಕೆ ಮಂಕು ಕವಿಸಿತ್ತು.

ಪಾಕಿಸ್ತಾನವೆಂಬ ವೈರಿಯ ಮನೆಗೆ ನುಗ್ಗಿ ಬಾಂಬ್ ಕೆಡವಿ ಪಾಠ ಕಲಿಸಿದೆವು ಎಂಬುದಾಗಿ ಆಕ್ರಮಣಕಾರಿ ಹಿಂದೂ ರಾಷ್ಟ್ರವಾದ ಮತ್ತು ಹುಸಿ ‘ದೇಶಭಕ್ತಿ’ಯ ಸುತ್ತ ‘ಮೋಶಾ’ ಸರ್ಕಾರ ಬಲಿಷ್ಠ ಕಥನ ಕಟ್ಟಿತ್ತು. ಆದರೆ ಈ ಬಲಿಷ್ಠ ಭಾವೋದ್ದೀಪಕ ಕಥನವನ್ನು ದೇಶದ ಬಹುಪಾಲು ಜನರ ನಿತ್ಯ ಬದುಕನ್ನು ಕಾಡಿರುವ ನಿಜ ಸಮಸ್ಯೆಗಳ ವಾಸ್ತವದತ್ತ ವಾಪಸು ಕರೆ ತರುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸಿತ್ತು.

ಕಾಂಗ್ರೆಸ್ ಪಕ್ಷದ ಈ ಯೋಜನೆ ಅಭಿವೃದ್ಧಿಯನ್ನೇನೋ ಚಿಗುರಿಸಬಲ್ಲದು. ಆದರೆ ಸದ್ಯದ ಆರ್ಥಿಕ ದುಸ್ಥಿತಿಯು ಈ ಯೋಜನೆಯ ಜಾರಿಗೆ ಪೂರಕ ಅಲ್ಲ ಎಂಬುದಾಗಿ ಭಾರತೀಯ ರಿಸರ್ವ್ ಬ್ಯಾಂಕ್‍ನ ನಿವೃತ್ತ ಗೌರ್ನರ್ ರಘುರಾಮ್ ರಾಜನ್ ವಿಮರ್ಶಿಸಿದ್ದರು. ಅಭಿವೃದ್ಧಿ- ಉದ್ಯೋಗಾವಕಾಶಗಳ ಸೃಷ್ಟಿಯೊಂದೇ ಬಡತನ ನಿವಾರಣೆಯ ನೇರ ದಾರಿ. ನೇರನಗದು ನೀಡಿಕೆ ದಿವ್ಯ ಔಷಧ ಅಲ್ಲ ಎಂಬ ಪ್ರತಿಕ್ರಿಯೆಗಳು ಕಾಂಗ್ರೆಸ್ ಯೋಜನೆ ಕುರಿತು ಕೇಳಿ ಬಂದಿದ್ದವು. ಚುನಾವಣೆಗಳಲ್ಲಿ ಮೋದಿ ಇನ್ನಷ್ಟು ಘನವಾಗಿ ಗೆದ್ದರು. ಕಾಂಗ್ರೆಸ್ ಮತ್ತಷ್ಟು ಶೋಚನೀಯವಾಗಿ ಸೋತಿತು.

ಆದರೆ ಈ ಯೋಜನೆಯ ಹಿಂದಿದ್ದ ಆಲೋಚನೆ ಅಭಿಜಿತ್ ಬ್ಯಾನರ್ಜಿ ಅವರದಾಗಿತ್ತು. ಬ್ಯಾನರ್ಜಿ ಮತ್ತು ಎಸ್ತರ್ ಡಫ್ಲೋ ಹಾಗೂ ಮೈಕೇಲ್ ಕ್ರೆಮರ್‍ರಿಗೆ 2019ರ ಅರ್ಥಶಾಸ್ತ್ರ ನೊಬೆಲ್ ಪಾರಿತೋಷಕ ಸಂದಿದೆ. ಈ ಪಾರಿತೋಷಕದ ನಗದು ಬಹುಮಾನದ ಮೊತ್ತ ಆರೂವರೆ ಕೋಟಿ ರುಪಾಯಿ. 46 ವರ್ಷ ವಯಸ್ಸಿನ ಡಫ್ಲೋ ಅವರು ಬ್ಯಾನರ್ಜಿ ಅವರ ಪತ್ನಿ ಕೂಡ. ಈವರೆಗೆ ಅರ್ಥಶಾಸ್ತ್ರ ನೊಬೆಲ್ ಪಡೆದವರ ಪೈಕಿ ಅತಿ ಕಿರಿಯ ವಯಸ್ಸಿನ ಮಹಿಳೆ. ಬಡತನ ನಿವಾರಣೆಯ ದಿಕ್ಕಿನಲ್ಲಿ ಈ ಮೂರು ಮಂದಿ ಭಾರತವೂ ಸೇರಿದಂತೆ 81 ದೇಶಗಳಲ್ಲಿ ನಡೆಸಿದ ವಿಸ್ತೃತ ಕ್ಷೇತ್ರ ಪ್ರಯೋಗಗಳ ಸಂಶೋಧನೆಗೆ ದೊರೆತಿರುವ ಮಾನ್ಯತೆಯಿದು.

ಯೋಜನೆ ಮತ್ತು ಅದರ ಅನುಷ್ಠಾನಗಳ ನಡುವೆ ಬಹಳಷ್ಟು ಕಳೆದು ಹೋಗುವ ಇಲ್ಲವೇ ಸೋರಿ ಹೋಗುವ ಸಂಕೀರ್ಣ ಅನುಭವ ಭಾರತದ ಸನ್ನಿವೇಶದ್ದು. ಹೀಗಾಗಿ ನೀತಿ ನಿರ್ಧಾರಗಳ ವಿನ್ಯಾಸ ಬಹು ಮಹತ್ವದ್ದು. ಯಶಸ್ಸು ಮತ್ತು ವೈಫಲ್ಯಗಳ ನಡುವಿನ ಅಂತರವನ್ನು ನಿರ್ಧರಿಸುವಂತಹುದು. ಜಗತ್ತಿನಲ್ಲಿ ಹೆಚ್ಚುತ್ತಲೇ ನಡೆದಿರುವ ಆದಾಯ ತಾರತಮ್ಯಗಳ ಹಿಂದಿನ ಕಾರಣಗಳ ಮೇಲೆ ಬೆಳಕು ಚೆಲ್ಲಿರುವ ಸಂಶೋಧನೆಯಿದು. ಶಿಕ್ಷಣ, ಆರೋಗ್ಯ ಹಾಗೂ ಇತರೆ ಯೋಜನೆಗಳಿಗೆ ಬಡವರ ಪ್ರತಿಕ್ರಿಯೆಗಳ ವಾಸ್ತವಿಕ ಒಳನೋಟಗಳನ್ನು ಕಟ್ಟಿ ಕೊಟ್ಟಿದೆ. ಜಗತ್ತಿನಾದ್ಯಂತ 70 ಕೋಟಿ ಜನ ಕಿತ್ತು ತಿನ್ನುವ ಬಡತನದಲ್ಲಿ ಉಸಿರಾಡಿದ್ದಾರೆ. ಇವರ ಉದ್ಧಾರದ ಹೆಸರಿನಲ್ಲಿ ಸಾವಿರಾರು ಕೋಟಿ ರುಪಾಯಿಗಳನ್ನು ಸುರಿಯುವ ಸರ್ಕಾರಗಳು, ಹೀಗೆ ಸುರಿದ ಹಣ ಗುರಿ ಮುಟ್ಟಿಸಿತೇ ಎಂದು ತಲೆ ಕೆಡಿಸಿಕೊಳ್ಳುತ್ತಿಲ್ಲ.

ಈ ವಿದ್ವಾಂಸರ ಸಂಶೋಧನೆಯು ಜಾಗತಿಕ ಬಡತನವನ್ನು ತೊಲಗಿಸುವ ನಮ್ಮ ಸಾಮಥ್ರ್ಯವನ್ನು ಗಣನೀಯವಾಗಿ ಸುಧಾರಿಸಿದೆ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರವನ್ನು ರೂಪಾಂತರಗೊಳಿಸಿದೆ ಎಂದು ನೊಬೆಲ್ ಪಾರಿತೋಷಕದ ಗುಣಕಥನವು ಬ್ಯಾನರ್ಜಿ-ಎಸ್ತರ್-ಕ್ರೇಮರ್ ಅವರ ಸಾಧನೆಯನ್ನು ಕೊಂಡಾಡಿದೆ. ನವ ಉದಾರವಾದಿ ಅರ್ಥನೀತಿಯು ಜಗತ್ತಿನಾದ್ಯಂತ ಬಡ ಜನಸಮುದಾಯಗಳ ಮೇಲೆ ಇತ್ತೀಚಿನ ದಶಕಗಳಲ್ಲಿ ನಡೆಸಿರುವ ಪ್ರಹಾರ ಅಮಾನವೀಯ. ಬ್ಯಾನರ್ಜಿ ಸಂಗಾತಿಗಳ ಸಂಶೋಧನೆಯು ಈ ಕ್ರೌರ್ಯದ ಕುರಿತು ಪರೋಕ್ಷವಾಗಿಯಾದರೂ ಜಗದ ಕಣ್ಣು ತೆರೆಸಿದೆ.

ತಮ್ಮನ್ನು ಸೆಳೆದದ್ದು ಜೆ.ಎನ್.ಯು.ವಿನ ಬೌದ್ಧಿಕ ವಾತಾವರಣ ಎಂದು ಬ್ಯಾನರ್ಜಿ ಹೇಳಿಕೊಂಡಿದ್ದಾರೆ. ಎಂಭತ್ತರ ಆರಂಭದ ದಶಕಗಳಲ್ಲಿ ಜೆ.ಎನ್.ಯು.ವಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದ ಅಭಿಜಿತ್, ವಿದ್ಯಾರ್ಥಿ ಆಂದೋಲನದಲ್ಲಿ ಭಾಗವಹಿಸಿದ್ದರು. ದಸ್ತಗಿರಿಯಾಗಿ ಹತ್ತು ದಿನ ತಿಹಾರದ ಜೈಲಿನಲ್ಲಿ ಬಡವರ ಊಟದ ರುಚಿ ನೋಡಿದ್ದುಂಟು. ಮರಾಠೀ ತಾಯಿ ಮತ್ತು ಬಂಗಾಳಿ ತಂದೆಯ ಈ ಮಗ ಅರ್ಥಶಾಸ್ತ್ರಜ್ಞ ಆಗಿದ್ದು ಆಕಸ್ಮಿಕ. ಆತ ಅತ್ಯುತ್ತಮ ಬಾಣಸಿಗ. ಬಂಗಾಳೀ ಮತ್ತು ಮರಾಠೀ ಅಡುಗೆಯಲ್ಲಿ ನಿಪುಣ. ಮುಂದಿನ ವಾರ ತನ್ನ ಎರಡನೆಯ ಪುಸ್ತಕದ ಬಿಡುಗಡೆಗೆಂದು ಭಾರತಕ್ಕೆ ಬರಲಿದ್ದಾನೆ ಎಂದು ಸಂತಸ ಹಂಚಿಕೊಂಡಿದ್ದಾರೆ ತಾಯಿ ನಿರ್ಮಲಾ ಬ್ಯಾನರ್ಜಿ.

ಇಂದಿರಾಗಾಂಧೀ ಸರ್ಕಾರದ ನೀತಿ ನಿರ್ಧಾರಗಳ ವಿರುದ್ಧ ಟೀಕೆಗಳು ಪ್ರತಿಭಟನೆಗಳು ಜೆ.ಎನ್.ಯು.ವಿನಲ್ಲಿ ಅಂದು ಸರ್ವೇಸಾಧಾರಣವಾಗಿದ್ದವು. ಬ್ಯಾನರ್ಜಿ ಇವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ 1980ರಿಂದ 2016ರ ತನಕ ಪ್ರತಿಕೂಲಗಳ ನಡುವೆಯೂ ಎಲ್ಲ ಬಗೆಯ ಅಭಿವ್ಯಕ್ತಿಗಳನ್ನೂ ಆಲಿಸಿ ಅವುಗಳಿಗೆ ಅನುವು ಮಾಡಿಕೊಟ್ಟಿತ್ತು. ಜೆ.ಎನ್.ಯು. ಒದಗಿಸಿದ್ದ ಚಿಂತನೆ-ಅಭಿವ್ಯಕ್ತಿ-ಸಂಸ್ಕೃತಿಯ ಸ್ವಾತಂತ್ರ್ಯವು ಅಭಿಜಿತ್ ಬ್ಯಾನರ್ಜಿಯವರಂತಹ ಮೇಧಾವಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. 2016ಕ್ಕೆ ಮುನ್ನ ಇದ್ದ ಶೈಕ್ಷಣಿಕ ಸ್ವಾತಂತ್ರ್ಯ ಇಲ್ಲಿ ಮರೆಯಾಗಿದೆ. ಕೇಂದ್ರ ಸರ್ಕಾರವು ಕೊಡಲಿ ಹಿಡಿದು ಈ ವಿಶ್ವವಿದ್ಯಾಲಯದ ಹೆಸರಿಗೆ ಮಸಿ ಬಳಿದು ಅದರ ಬುಡ ಕಡಿಯತೊಡಗಿರುವ ಇಂದಿನ ದಿನಗಳಲ್ಲಿ ಮತ್ತೊಬ್ಬ ಅಭಿಜಿತ್ ಬ್ಯಾನರ್ಜಿ ಇಲ್ಲಿ ರೂಪುಗೊಳ್ಳುವುದು ಅಸಾಧ್ಯ ಎನ್ನುತ್ತಾರೆ ಪ್ರೊ.ಅನುರಾಧಾ ಚಿನಾಯ್.

ಭಾರೀ ಮೊತ್ತದ ಬಹುಮಾನದ ಹಣವನ್ನು ಏನು ಮಾಡಲಿದ್ದೀರಿ ಎಂಬ ಪ್ರಶ್ನೆಗೆ ಎಸ್ತರ್ ಡಫ್ಲೋ ಉತ್ತರ- 1903ರಲ್ಲಿ ಮೇರಿ ಕ್ಯೂರಿ ಭೌತಶಾಸ್ತ್ರಕ್ಕೆ ನೊಬೆಲ್ ಬಹುಮಾನ ಪಡೆದಾಗ ಅದೇ ಹಣದಿಂದ ತನ್ನ ಭವಿಷ್ಯದ ಸಂಶೋಧನೆಗೆ ಅಗತ್ಯವಿರುವ ಒಂದು ಗ್ರಾಂ ರೇಡಿಯಂ ಖರೀದಿಸಿದ್ದಳು. ನಮ್ಮ ಆ ‘ಒಂದು ಗ್ರಾಂ ರೇಡಿಯಂ’ ಏನು ಎಂದು ನಾವು ಮೂರೂ ಮಂದಿ ಚರ್ಚಿಸಿ ತೀರ್ಮಾನಿಸಲಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...