Homeಅಂಕಣಗಳುಮನ್ ಕಿ ಬಾತ್ ಬಿಟ್ಟು, ದಯವಿಟ್ಟು ಆಲಿಸಿ - ದೇವನೂರ ಮಹಾದೇವ

ಮನ್ ಕಿ ಬಾತ್ ಬಿಟ್ಟು, ದಯವಿಟ್ಟು ಆಲಿಸಿ – ದೇವನೂರ ಮಹಾದೇವ

ರಾಷ್ಟ್ರ ಎಂದರೆ- ಅಹಂ, ಪ್ರತಿಷ್ಠೆ. ದೇಶವೆಂದರೆ- ಜನರು. ಇನ್ನೂ ಸ್ಪಷ್ಟಪಡಿಸಬೇಕು ಎಂದರೆ, ರಾಷ್ಟ್ರವು ಪ್ರತಿಷ್ಠೆಯನ್ನು ಹಿಂಬಾಲಿಸುತ್ತದೆ. ಆದರೆ ದೇಶವು ಜನರ ಹಿತ, ಕಲ್ಯಾಣವನ್ನು ಹಿಂಬಾಲಿಸುತ್ತದೆ.

- Advertisement -
- Advertisement -

‘ವ್ಯಾಪಾರಂ ದ್ರೋಹ ಚಿಂತನಂ’ ಎಂಬ ಮಾತಿದೆ. ಇದು ಒಂದು ಸೂಕ್ತಿಯೊ ಅಥವಾ ಜನ ಸಾಮಾನ್ಯರು ವ್ಯಾಪಾರದ ಚಹರೆ ನೋಡಿ ಈ ನುಡಿಗಟ್ಟನ್ನು ಚಾಲ್ತಿ ಮಾಡಿದರೋ ನನಗೆ ಗೊತ್ತಿಲ್ಲ. ಜಾಗತೀಕರಣದ ಅನಂತರ ವ್ಯಾಪಾರವು ದ್ರೋಹವೇ ಆಗಿ ಕುಪ್ಪಳಿಸುತ್ತಿದೆ. ವ್ಯಾಪಾರಕ್ಕೆ ಈಗ ಬುದ್ಧಿಯೂ ಕೂಡಿಕೊಂಡು ಇದೇ ಜ್ಞಾನ ಅನ್ನಿಸಿಕೊಂಡುಬಿಟ್ಟಿದೆ. ಈ ಎರಡೂ ಸೇರಿ ಭೂಮಿಗೇನೆ ಸುಲಿಗೆ ಬಲೆ ಹೆಣೆಯುತ್ತಿವೆ. ಕುತಂತ್ರವೇ ತಂತ್ರಗಾರಿಕೆಯಾಗಿದೆ. ಇದನ್ನು ನಿರ್ವಹಿಸುವವರು ಚಾಣಾಕ್ಷ ಅನ್ನಿಸಿಕೊಳ್ಳುತ್ತಿದ್ದಾರೆ. ಇದು ಘೋರ ದುರಂತ. ಹಾಗಾಗೇ ಇಂದು ಆಳ್ವಿಕೆಯೇ ವ್ಯಾಪಾರದ ಕೈಯಲ್ಲಿದೆ. ದ್ರೋಹ ಮತ್ತು ಕುತಂತ್ರಗಳು ಆಳ್ವಿಕೆ ನಡೆಸುತ್ತಿವೆ. ಜಾಗತೀಕರಣದ ಜಗತ್ತಿನಲ್ಲಿ ವ್ಯಾಪಾರವೇ ಯುದ್ಧವಾಗಿದೆ.

ಇಂಥ ವಿಷಮ ಪರಿಸ್ಥಿತಿಯಲ್ಲಿ- ಭಾರತವೂ 16 ದೇಶಗಳ ಮುಕ್ತ ವ್ಯಾಪಾರಕ್ಕೆ ಸಹಿ ಮಾಡಲು ಹೊರಟಿದೆ. ಇದು ವಿವೇಕ ವಿವೇಚನೆ ಇಲ್ಲದವರು ಮಾಡುವ ಕೆಲಸ. ಯಾಕೆಂದರೆ ಇದರಿಂದಾಗಿ ಈಗಾಗಲೇ ಕುಸಿಯುತ್ತಿರುವ ಉದ್ಯೋಗಗಳು ಮತ್ತೂ ಕುಸಿದು ಹೋಗುತ್ತವೆ. ದಯವಿಟ್ಟು ಪ್ರಧಾನಮಂತ್ರಿಗಳೇ, ದಡ್ಡನಿಗೆ ಧೈರ್ಯ ಜಾಸ್ತಿ ಎಂಬಂತೆ ದುಡುಕಿ ಸಹಿ ಮಾಡಬೇಡಿ. ನಮ್ಮ ಮಾತು ನೀವು ಕೇಳದಿದ್ದರೂ ಪರವಾಗಿಲ್ಲ. ಕನಿಷ್ಠ ಆರ್‌ಎಸ್‍ಎಸ್‍ನ ಸೋದರ ಸಂಘಟನೆಯಾದ ಸ್ವದೇಶಿ ಜಾಗರಣಾ ಮಂಚ್ ಸಂಘಟನೆಯು, ಹೈನುಗಾರಿಕೆ ಉಲ್ಲೇಖಿಸಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ರುಜು ಮಾಡುವ ಬಗ್ಗೆ ಹೇಳುವ ಮಾತುಗಳನ್ನಾದರೂ, ನಿಮ್ಮ ಮನ್ ಕಿ ಬಾತ್ ಬಿಟ್ಟು, ಆಲಿಸಿ.

ಸ್ವದೇಶಿ ಜಾಗರಣಾ ಮಂಚ್ ಹೇಳುತ್ತದೆ- “ಇದು ಕೇಂದ್ರ ಸರ್ಕಾರದ ಅತ್ಯಂತ ಆತ್ಮಹತ್ಯಾತ್ಮಕ ನಡೆ, ಸ್ವಾತಂತ್ರ್ಯ ಬಂದಾಗಲಿಂದಲೂ ಇಂಥದೊಂದು ಆತ್ಮಹತ್ಯಾತ್ಮಕ ನಡೆ ಸಂಭವಿಸಿರಲಿಲ್ಲ” ಎಂದು. ಇದೇ ಮಾತುಗಳನ್ನು ಬೇರೆಯವರು ಹೇಳಿದ್ದರೆ ನೀವು ಮತ್ತು ನಿಮ್ಮ ಹಿಂಬಾಲಕರು ಹೇಳುವವರನ್ನು ದೇಶದ್ರೋಹಿಗಳೆಂದು ಹಣೆಪಟ್ಟಿ ಕಟ್ಟಿ ಥರಾವರಿ ಹಿಂಸೆ ಮಾಡುತ್ತಿದ್ದಿರಿ. ಈಗ? ಆರ್‌ಎಸ್‍ಎಸ್‍ನ ಸೋದರ ಸಂಘಟನೆ ಸ್ವದೇಶಿ ಜಾಗರಣಾ ಮಂಚ್ ಹೇಳುತ್ತಿದೆ. ಅವರನ್ನು ದೇಶದ್ರೋಹಿಗಳೆಂದು ಕರೆಯುವ ಧೈರ್ಯವನ್ನು ನೀವು ಮಾಡಲಾರಿರಿ ಎಂಬ ನಂಬಿಕೆ ನನಗಿದೆ. ನೆನಪಿಟ್ಟುಕೊಳ್ಳಿ, ಬಡತನ ನಿರ್ಮೂಲನೆ ಎಂದರೆ ಬಡವರನ್ನು ಸಾವಿನ ದವಡೆಗೆ ನೂಕುವುದಲ್ಲ. ಇಂದು ದುಡಿಯುವ ವರ್ಗ ಎಂದರೆ ಉಂಡು ಎಸೆಯುವ ಬಾಳೆ ಎಲೆ ಆಗಿಬಿಟ್ಟಿದ್ದಾರೆ.

ಕೊನೆಗೊಂದು ಮಾತು. ರಾಷ್ಟ್ರಕ್ಕೂ ದೇಶಕ್ಕೂ ಏನು ವ್ಯತ್ಯಾಸ ಎಂದು ಯಾರೋ ಕೇಳಿದರು. ಏನು ಹೇಳುವುದು? ಸರಳವಾಗಿ, ರಾಷ್ಟ್ರ ಎಂದರೆ- ಅಹಂ, ಪ್ರತಿಷ್ಠೆ. ದೇಶವೆಂದರೆ- ಜನರು. ಇನ್ನೂ ಸ್ಪಷ್ಟಪಡಿಸಬೇಕು ಎಂದರೆ, ರಾಷ್ಟ್ರವು ಪ್ರತಿಷ್ಠೆಯನ್ನು ಹಿಂಬಾಲಿಸುತ್ತದೆ. ಆದರೆ ದೇಶವು ಜನರ ಹಿತ, ಕಲ್ಯಾಣವನ್ನು ಹಿಂಬಾಲಿಸುತ್ತದೆ. ಅಥವಾ ಹೀಗೂ ಹೇಳಬಹುದು. ರಾಷ್ಟ್ರ ಎಂದರೆ- ಜುಟ್ಟಿಗೆ ಮಲ್ಲಿಗೆ ಹೂ. ದೇಶ ಎಂದರೆ ಹೊಟ್ಟೆಗೆ ಹಿಟ್ಟು. ಇದುವರೆಗೂ ಜುಟ್ಟಿಗೆ ಮಲ್ಲಿಗೆ ಹೂ ಸಿಕ್ಕಿಸಿಕೊಂಡು ಓಡಾಡಿದ್ದು ಸಾಕು ಎಂದು ತಮ್ಮಲ್ಲಿ ವಿನಂತಿಸುವೆ.

ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಿದೇಶಿ ವಸ್ತ್ರ ಸುಡುವ ಆಂದೋಲನದಿಂದಾಗಿ ಇಂಗ್ಲೆಂಡಿನ ಲ್ಯಾಂಕಾಶೈರ್‍ನ ಗಿರಣಿ ಮುಚ್ಚುವಂತಾಗಿ ಅಲ್ಲಿನ ನಿರುದ್ಯೋಗಿ ಕಾರ್ಮಿಕರು ಗಾಂಧಿಯೊಡನೆ ಅವರ ಬವಣೆ ಹೇಳಿಕೊಂಡಾಗ ಗಾಂಧಿ ಹೇಳುತ್ತಾರೆ- “ಭಾರತದಲ್ಲಿ ಉದ್ಯೋಗವಿಲ್ಲದ ಲಕ್ಷಾಂತರ ಅರೆಹೊಟ್ಟೆಯ ಜನರ ಜೀವ (ಹಸಿವಿನಿಂದ) ಕೊನೆಗೊಂಡರೆ ಉಳಿದವರು ಬದುಕಬಹುದು ಅನ್ನುವ ಗುಂಪೂ ಇದೆ”. ಈ ಗುಂಪಿಗೆ ನೀವು, ನಿಮ್ಮ ಪಕ್ಷ, ನಿಮ್ಮ ಸಂಘ ಮತ್ತು ಅದರ ಪರಿವಾರ ಸೇರ್ಪಡೆಯಾಗದಿರಲಿ ಎಂದು ಆಶಿಸುತ್ತೇನೆ. ಈಗ ಭಾರತಕ್ಕೆ ಬೇಕಾಗಿರುವುದು- ಗೌರವಯುತ ಉದ್ಯೋಗ ಮತ್ತು ಸ್ವಾವಲಂಬನೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...