Homeಮುಖಪುಟತಂಡದ ನಾಯಕರು ಹೀಗೆ ನಡೆದುಕೊಂಡಲ್ಲಿ ಆರೋಗ್ಯಕರ ವಾತಾವರಣ ಮತ್ತು ಗೆಲುವು ಸಾಧ್ಯ..

ತಂಡದ ನಾಯಕರು ಹೀಗೆ ನಡೆದುಕೊಂಡಲ್ಲಿ ಆರೋಗ್ಯಕರ ವಾತಾವರಣ ಮತ್ತು ಗೆಲುವು ಸಾಧ್ಯ..

- Advertisement -
- Advertisement -

ಜೀವನ ಕಲೆಗಳು: ಅಂಕಣ-28

ತಂಡದಂತೆ ಕೆಲಸ ಮಾಡುವ ಕಲೆ

ತಂಡ (ಟೀಂ –TEAM) ರಚಿಸುವುದು ಒಂದು ಕಲೆಯಾದರೆ, ಈ ತಂಡವನ್ನು ಒಂದು ತಂಡದಂತೆ ಕಾರ್ಯ ನಿರ್ವಹಿಸುವಂತೆ ನಿರ್ದೇಶಿಸುವುದು ಇನ್ನೊಂದು ಕಲೆ. ತಂಡ ಏಕೆ ಬೇಕು ಎಂಬುದು ನಿಮ್ಮ ಪ್ರಶ್ನೆಯಾಗಿದ್ದಲ್ಲಿ, ಎಲ್ಲರೂ ಒಟ್ಟಾಗಿ ಅಸಾಧ್ಯವಾದುದನ್ನು ಮಾಡಬಹುದು ಎಂಬುದನ್ನು ನೆನಪಿಡಿ.

ನಮ್ಮಲ್ಲಿ ಬಹಳ ಪ್ರತಿಭಾವಂತ ವ್ಯಕ್ತಿಗಳು ಇರುತ್ತಾರೆ, ಆದರೆ ಅವರ ಪ್ರದರ್ಶನ ವೈಯುಕ್ತಿಕ ಪ್ರತಿಭೆಯ ದರ್ಶನವಾಗಿರುತ್ತದೆ. ಅದು ಸಂಗೀತದಲ್ಲಿರಬಹುದು, ಕ್ರೀಡೆಯಲ್ಲಿರಬಹುದು ಅಥವಾ ಬೇರೆ ಯಾವುದೇ ಕ್ಷೇತ್ರದಲ್ಲಿರಬಹುದು. ಸಾಮೂಹಿಕ ಪ್ರದರ್ಶನದಲ್ಲಿಯೂ ವೈಯುಕ್ತಿಕ ಪ್ರತಿಭೆ ತೋರಿಸುವ ಅವಕಾಶವಿರುತ್ತದೆ ಆದರೆ ಇಡೀ ತಂಡ ಸೋತು ಒಬ್ಬರು ಉತ್ತಮ ಆಟಗಾರ ಎಂಬ ಪ್ರಶಸ್ತಿ ಪಡೆಯುವುದರಲ್ಲಿ ಅರ್ಥವಿರುವುದಿಲ್ಲ. ವೈಯುಕ್ತಿಕ ಪ್ರತಿಭೆ ತಮ್ಮ ತಂಡವನ್ನು ಗೆಲ್ಲಿಸುವ ಪ್ರದರ್ಶನವಾಗಬೇಕು.

ಇದರಲ್ಲಿ ನಾಯಕರ ಪಾತ್ರ ಬಹಳ ಮುಖ್ಯವಾದುದು. ನಾಯಕರಿಗೆ ಎಲ್ಲಾ ಕಲೆಗಳು ಬರುತ್ತಿರಬೇಕು ಅಥವಾ ಅವನೇ ಸದಾ ಮಿಂಚಬೇಕು ಎಂದೇನೂ ಇಲ್ಲ, ಆದರೆ ತನ್ನ ತಂಡದಲ್ಲಿರುವ ಪ್ರತಿಭೆಯನ್ನು ಆತ ಸರಿಯಾಗಿ ಬಳಸಿಕೊಂಡು ತಂಡವನ್ನು ಗೆಲ್ಲಿಸಬೇಕು ಮತ್ತು ವೈಯುಕ್ತಿಕ ಪ್ರತಿಭೆಯ ಪ್ರದರ್ಶನಕ್ಕೂ ಅವಕಾಶ ಮಾಡಿಕೊಡಬೇಕು. ನಾಯಕನ ಪಾತ್ರದಷ್ಟೇ ತಂಡ ರಚನಾಕಾರರ ಭೂಮಿಕೆಯೂ ಮಹತ್ವದ್ದಾಗಿರುತ್ತದೆ. ಅವರು ತಂಡ ರಚನೆಯ ಸಮಯದಲ್ಲಿ ಎಲ್ಲಾ ಅಂಶಗಳನ್ನು ಪರಿಗಣಿಸಿಲ್ಲದಿದ್ದರೆ ನಾಯಕ ಆಟದ ಮೈದಾನ/ರಣಭೂಮಿಯಲ್ಲಿ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಇದನ್ನು ನಾವು ಆಗಿಂದಾಗ್ಯೆ ನಮ್ಮ ದೇಶದ ಕ್ರಿಕೆಟ್ ತಂಡದ ಪ್ರದರ್ಶನದಲ್ಲಿ, ಸೆಲೆಕ್ಟರ್ಗಳು ಹೇಗೆ ಸರಿಯಾದ ಆಟಗಾರರನ್ನು ಆರಿಸದೆ ನಾಯಕನ ಕೈ ಕಟ್ಟಿ ಹಾಕಿದರು, ಎಂಬುದನ್ನು ನೋಡಬಹುದು. ಅದೇ ರೀತಿ ನಮ್ಮ ಪೋಲಿಸರಿಗೆ ಸರಿಯಾದ ಗುಂಡು-ರಕ್ಷಕ ಕವಚವಿಲ್ಲದೆ, ಉಗ್ರವಾದಿಗಳ ದಾಳಿಗೆ ಅವರು ಅನ್ಯಾಯವಾಗಿ ಬಲಿಯಾದರೆಂಬುದನ್ನೂ ಸಹ ನಾವು 26/11ರ ಘಟನೆಯಲ್ಲಿ ನೋಡಿದ್ದೇವೆ.

ಇವರಿಬ್ಬರ ನಂತರ ತಂಡದ ಮಿಕ್ಕ ಸದಸ್ಯರ ಪಾತ್ರವೂ ಕಡಿಮೆ ಏನಿಲ್ಲ. ಎಲ್ಲರೂ ತಮ್ಮ ತಮ್ಮ ಶಕ್ತ್ಯಾನುಸಾರ ತಂಡದ ಗೆಲುವಿಗೆ (ಅಥವಾ ಸೋಲಿಗೆ) ಕಾರಣರಾಗಿರುತ್ತಾರೆ. ತಂಡದ ಎಲ್ಲಾ ಸದಸ್ಯರು ಸೇರಿ ತಂಡವನ್ನು ಒಂದೇ ದಿಕ್ಕಿನಲ್ಲಿ ನಡೆಸಿಕೊಂಡು ಹೋದಲ್ಲಿ ಮಾತ್ರ ತಂಡ ತನ್ನ ಗುರಿ ತಲಪುತ್ತದೆ, ಎಲ್ಲರೂ ಒಂದೊಂದು ದಿಕ್ಕಿನಲ್ಲಿ ಎಳೆದಲ್ಲಿ, ತಂಡ ಎಲ್ಲಿಗೂ ಸೇರುವುದಿಲ್ಲ, ಏನೂ ಸಾಧಿಸುವುದಿಲ್ಲ.

ನಾಯಕರ ಪಾತ್ರ:

·         ನಿಮ್ಮ ಸ್ವಂತ ಉದಾಹರಣೆಯಿಂದ ಮಿಕ್ಕವರಿಗೆ ಮಾರ್ಗದರ್ಶನ ಮಾಡಿ.

·         ಸದಾ ಸಕಾರಾತ್ಮಕವಾಗಿರಿ. ನಿಮ್ಮ ಉತ್ಸಾಹದಿಂದ ಮಿಕ್ಕವರಿಗೆ ಸ್ಫೂರ್ತಿ ಬರುವಂತಿರಲಿ.

·         ತಂಡದ ಸದಸ್ಯರಲ್ಲಿ ಪರಸ್ಪರ ವಿಶ್ವಾಸ ಮತ್ತು ಗೌರವ ಬರುವಂತೆ ಅವರ ಪರಿಚಯ ಮಾಡಿಸಿ.

·         ತಂಡದ ಸದಸ್ಯರಲ್ಲಿ ನಿಮಗೂ ವಿಶ್ವಾಸವಿರಲಿ. ಯಾವುದೇ ಅಪನಂಬಿಕೆಗೆ ಆಸ್ಪದ ಕೊಡಬೇಡಿ.

·         ಸದಸ್ಯರಲ್ಲಿ ಸ್ನೇಹ, ಬಾಂಧವ್ಯ, ಸೌಹಾರ್ದತೆ ಬೆಳೆಯುವಂತೆ ಮಾಡಿ.

·         ಮುಕ್ತ ಸಂವಹನೆಗೆ ಅವಕಾಶ ಮಾಡಿಕೊಡಿ.

·         ಎಲ್ಲರ ಕೆಲಸ ಮತ್ತು ಜವಾಬ್ದಾರಿ ಸ್ಪಷ್ಟವಾಗಿ ತಿಳಿಸಿ.

·         ತಂಡದ ಪ್ರಕ್ರಿಯೆಯನ್ನು ಸುಲಲಿತಗೊಳಿಸಿ.

·         ತಂಡದ ಗುರಿ ಎಲ್ಲರಿಗೂ, ಸದಾ ಕಾಲ, ತಿಳಿದಿರುವಂತೆ ನೋಡಿಕೊಳ್ಳಿ.

·         ಅವಶ್ಯಕತೆ ಬಿದ್ದಲ್ಲಿ ಸನ್ನಿವೇಶ ಕೈ ತಪ್ಪದಂತೆ ಮಧ್ಯಸ್ತಿಕೆ ವಹಿಸಿ.

·         ಸದಸ್ಯರಿಗೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಿ.

·         ಸದಸ್ಯರ ಕೆಲಸ ಮತ್ತು ಆಟದ ನಡುವೆ ಸಮತೋಲನವಿರಲಿ. ತಂಡದ ಸದಸ್ಯರಿಗೆ ವಿಶ್ರಾಂತಿ ಮತ್ತು ಮನೋರಂಜನೆಯ ಅವಶ್ಯಕತೆಯೂ ಇರುತ್ತದೆ ಎಂಬುದನ್ನು ಮರೆಯಬೇಡಿ. ಒಟ್ಟಾಗಿ ತಂಡ ಕಟ್ಟುವ ಯಾವುದೇ ಆಟದಲ್ಲಿ ಸದಸ್ಯರು ತೊಡಗಿದ್ದಾಗಲೂ ಸಹ ತಂಡದ ನದುವೆ ಸೌಹಾರ್ದ, ಸಹಕಾರ ಉತ್ತಮಗೊಳ್ಳುತ್ತಿರುತ್ತದೆ ಎಂಬುದನ್ನು ನೆನಪಿಡಿ. ಇಂತಹ ಸಾಮೂಹಿಕ ಆಟಕ್ಕೆ ಅವಕಾಶ ಕಲ್ಪಿಸಿ.

·         ವಿಷಯ ಚರ್ಚೆಯ ಸಭೆಗಳು ಕೆಲಸಕ್ಕೆ ಅಡ್ಡಿಯಾಗದಂತೆ ಕರೆಯಿರಿ. ಕೆಲಸ ಹಂಚುವಾಗ ಸದಸ್ಯರಿಗೆ ವೈವಿಧ್ಯತೆ ಇರುವಂತೆ ತೋರಲಿ. ಒಂದೇ ರೀತಿಯ ಕೆಲಸ ಏಕತಾನತೆ ತರುತ್ತದೆ ಮತ್ತು ಉತ್ಪಾದನೆ ಕಡಿಮೆಯಾಗುತ್ತದೆ.

·         ಸನ್ನಿವೇಶಗಳನ್ನು, ಅವಶ್ಯಕತೆ ಇದ್ದಲ್ಲಿ, ಸೂಕ್ಷ್ಮವಾಗಿ ನಿರ್ವಹಣೆ ಮಾಡಿ (ಮೈಕ್ರೋ ಮ್ಯಾನೇಜ್) ಆದರೆ ಸದಸ್ಯರನ್ನು ಸೂಕ್ಷ್ಮವಾಗಿ ನಿರ್ವಹಣೆ ಮಾಡಲು ಯತ್ನಿಸಬೇಡಿ.

·         ಸದಸ್ಯರಿಗೆ ಅವರವರ ಅವಶ್ಯಕತೆಗೆ ತಕ್ಕಂತೆ ಸ್ಥಳಾವಕಾಶ ನೀಡಿ.

·         ತಂಡದ ವೈವಿಧ್ಯತೆಯನ್ನು ಅದರ ಶಕ್ತಿ ಎನ್ನುವಂತೆ ಪ್ರದರ್ಶಿಸಿ. ವಿವಿಧ ಹಿನ್ನೆಲೆಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಅನುಭವದ ಸದಸ್ಯರು ಒಂದೆಡೆ ಸೇರಿದಾಗ ಮತ್ತು ತಮ್ಮ ಅನಿಸಿಕೆ/ಸಲಹೆಗಳನ್ನು ಹಂಚಿಕೊಂಡಾಗ, ಪ್ರತಿ ವಿಷಯದಲ್ಲೂ ಇನ್ನೊಂದು ಹೊಸ ಪಾರ್ಶ್ವ ನೋಡಲು ಸಿಗುತ್ತದೆ. ಇದರಿಂದ ಹೊಸ ಯೋಚನೆಗಳು ಉತ್ಪನ್ನವಾಗಲು ಸಹಾಯಕವಾಗುತ್ತವೆ. ಸಮಸ್ಯೆ ಮತ್ತು ವ್ಯಾಜ್ಯ ಪರಿಹಾರಕ್ಕೂ ಇದರಿಂದ ಮಾರ್ಗಗಳು ಕಂಡುಬರುತ್ತವೆ.

·         ತಂಡದ ಸದಸ್ಯರನ್ನು ಪ್ರೇರೇಪಿಸುವಾಗ ಅವರಿಗೆ ಸತತವಾಗಿ ಪ್ರತ್ಯಾದಾನ (ಫೀಡ್-ಬ್ಯಾಕ್) ನೀಡುತ್ತಿರಿ.

·         ಯಾರನ್ನಾದರೂ ಹೊಗಳಬೇಕಾದಾಗ ಮುಕ್ತವಾಗಿ ಎಲ್ಲರೆದುರಿಗೆ ಹೊಗಳಿ ಆದರೆ ಅದರಿಂದ ಬೇರೆಯವರಿಗೆ ಅಸೂಯೆ ಹುಟ್ಟುವಂತೆ ಆಗದಿರಲಿ.

·         ಸದಸ್ಯರ ನಡತೆ ಅಥವಾ ಕೆಲಸವನ್ನು ತಿದ್ದಬೇಕಾದ ಅವಶ್ಯಕತೆ ಇದ್ದಾಗ, ಅದನ್ನು ಎಲ್ಲರ ಮುಂದೆ ಮಾಡದೇ, ಪ್ರತ್ಯೇಕವಾಗಿ ಏಕಾಂತದಲ್ಲಿ ತಿಳಿಸಿ.

·         ತಂಡದಲ್ಲಿ ಏನಾದರೂ ಬಹುಮಾನ ಪಡೆಯುವ ಅವಕಾಶವಿದ್ದಾಗ ಪಡೆಯುವ ಪ್ರಕ್ರಿಯೆ ಸರಳವಾಗಿಡಿ. ಎಲ್ಲರೂ ಭಾಗವಹಿಸಲು ಆಗುವಂತೆ ಮತ್ತು ಎಲ್ಲರೂ ಸ್ವಲ್ಪ ಅಧಿಕ ಪರಿಶ್ರಮದಿಂದ,  ಗುರಿಯನ್ನು ತಲುಪಲು ಸಾಧ್ಯವಾಗುವಂತೆ ನಿಯಮಾವಳಿ ರೂಪಿಸಿ. ತೀರಾ ಸುಲಭವಾದಲ್ಲಿ ಅದರಲ್ಲಿ ಏನೂ ಸ್ವಾರಸ್ಯ/ಪ್ರತಿಸ್ಪರ್ಧೆ ಇರುವುದಿಲ್ಲ ಮತ್ತು ತೀರಾ ಕಠಿಣವಾದಲ್ಲಿ ಯಾರೂ ಸ್ಪರ್ಧಿಸುವುದಿಲ್ಲ.

·         ಪ್ರತಿಯೊಬ್ಬರಿಗೂ ಮಿಂಚಲು ಅವಕಾಶ ಕೊಡಿ.

·         ಸದಸ್ಯರನ್ನು ಭೇಟಿಯಾಗಬೇಕಾದಾಗ ಅವರ ಕಾರ್ಯಸ್ಥಾನಕ್ಕೆ ಹೋಗಿ ಭೇಟಿ ಮಾಡಿ.

·         ಸದಸ್ಯರ ಹಿತ ರಕ್ಷಕರ ಕೆಲಸ ನೀವು ಮಾಡಿ. ನೀವು ಮಾಡಿದ ಸಣ್ಣ ಸಹಾಯವೂ ಅವರು ನಿಮ್ಮನ್ನು ಸದಾ ಗೌರವಿಸುವಂತೆ ಮಾಡುತ್ತದೆ.

·         ಸದಸ್ಯರಿಗೆ ಎಲ್ಲವೂ ಗೊತ್ತಿರಬೇಕು ಎಂದೇನಿಲ್ಲ, ಅದಕ್ಕೆ ಬೇಕಾದ ತರಬೇತಿ ನೀಡಿ ಅಥವಾ ಮಾರ್ಗದರ್ಶನ ನೀವು ಮಾಡಿ.

·         ಗಲಿಬಿಲಿ ನಿವಾರಿಸಿ. ನಾಯಕರಾಗಿ ನೀವು ಎತ್ತರದ, ಜವಾಬ್ದಾರಿಯುತ ಸ್ಥಾನದಲ್ಲಿ ಇರುವದರಿಂದ ಸರಿಯಾದ ಮಾಹಿತಿ ತಂಡಕ್ಕೆ ಸಿಗುವಂತೆ ಮಾಡಿ, ಅವರಲ್ಲಿರುವ ಸಂದೇಹ/ಗಲಿಬಿಲಿ ಹೋಗಲಾಡಿಸಿ.

·         ತಂಡದ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿ.

ಮೇಲಿನ ಅಂಶಗಳನ್ನು ನಾನು ತಂಡದ ನಾಯಕನ ಕೆಲಸ ಎಂದು ಬರೆದಿದ್ದೇನೆ ಆದರೆ ತಂಡದ ಸದಸ್ಯರೂ ಸಹ ಇದನ್ನು ಮನದಟ್ಟು ಮಾಡಿಕೊಂಡಲ್ಲಿ, ತಂಡದ ಸಮನ್ವಯತೆ ಹೆಚ್ಚಾಗಿ, ಪರಸ್ಪರ ಸಹಕಾರ, ಸೌಹಾರ್ದತೆ ಬೆಳೆಯುತ್ತದೆ.

ವಿಜಯಶಾಲೀ ತಂಡ ನಿಮ್ಮದಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...