Homeಮುಖಪುಟತುಳು ರಂಗಭೂಮಿಯ ಸಾಕ್ಷಿಪ್ರಜ್ಞೆ ಅರವಿಂದ ಬೋಳಾರ್

ತುಳು ರಂಗಭೂಮಿಯ ಸಾಕ್ಷಿಪ್ರಜ್ಞೆ ಅರವಿಂದ ಬೋಳಾರ್

- Advertisement -
- Advertisement -

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕನ್ನಡದ ಎಲ್ಲಾ ಚಾನೆಲ್‌ಗಳು ದ್ವೇಷ ಬಿತ್ತುತ್ತಾ ಜನರನ್ನು ಭಯಭೀತರನ್ನಾಗಿಸುತ್ತಿದ್ದಾಗ ಮಂಗಳೂರಿನ ಸ್ಥಳೀಯ ಚಾನೆಲ್ ಆದ ದೈಜಿ ವರ್ಲ್ಡ್ ವಿನೂತನ ಪ್ರಯೋಗವೊಂದನ್ನು ಹುಟ್ಟುಹಾಕಿತು. ಪ್ರತಿಭಾವಂತ ಕಾರ್ಯಕ್ರಮ ನಿರೂಪಕರಾದ ವಾಲ್ಟರ್ ನಂದಳಿಕೆಯವರು ನಡೆಸಿಕೊಟ್ಟ “ಕೊರೊನಾ ಗೆಲ್ಲೋಣ” ಎಂಬ ಕಾರ್ಯಕ್ರಮದಲ್ಲಿ ತುಳುನಾಡಿನ ವಿವಿಧ ಕಲಾವಿದರನ್ನು ಸ್ಟುಡಿಯೋಗೆ ಕರೆಸಿ ಜನಜಾಗೃತಿ, ಮನರಂಜನೆಯ ಜೊತೆಗೆ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಅಗತ್ಯವಿರುವ ಕುಟುಂಬಗಳಿಗೆ ಕಿಟ್ ವಿತರಿಸುವುದರ ಮೂಲಕ ಬಡವರ ಸಂಕಷ್ಟಕ್ಕೆ ಸ್ಪಂದಿಸಿತು.

ಇದರ ಜೊತೆಗೆ ಪ್ರತಿ ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ಪ್ರಸಾರವಾಗುವ ಪ್ರೈವೇಟ್ ಚಾಲೆಂಜ್” ಎಂಬ ಕಾರ್ಯಕ್ರಮದಲ್ಲಿ ತೀಕ್ಷ್ಣವಾದ ವ್ಯಂಗ್ಯ, ವಿಡಂಬನೆಯೊಂದಿಗೆ ರಾಜಕೀಯ, ಸಾಮಾಜಿಕ ವಿಚಾರಗಳನ್ನೆತ್ತಿಕೊಂಡು ಚಿಕಿತ್ಸಕ ದೃಷ್ಟಿಯಲ್ಲಿ ವಿಶ್ಲೇಷಿಸುವ ಹೊಸ ವಿಧಾನಕ್ಕೆ ಕೈ ಹಾಕಿತು. ಸ್ಥಳೀಯ ಚಾನೆಲ್‌ವೊಂದರ ಇಂತಹ ಕಾರ್ಯಕ್ರಮ ಹೃಸ್ವ ಅವಧಿಯಲ್ಲಿ ಸುಮಾರು ಮೂರು ಲಕ್ಷದಷ್ಟು ವೀಕ್ಷಕರನ್ನು ಸಂಪಾದಿಸಲು ಸಾಧ್ಯವಾಗಿದೆಯೆಂದರೆ ಅದು ಆ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿ.

ಸದರಿ ಕಾರ್ಯಕ್ರಮದ ವಿಶೇಷ ವ್ಯಕ್ತಿ “ತುಳುನಾಡ ಮಾಣಿಕ್ಯ” ಎಂದೇ ಮನೆಮಾತಾಗಿರುವ ಅರವಿಂದ ಬೋಳಾರ್. ಇವರನ್ನು ತುಳುನಾಡಿನ ಚಾರ್ಲಿ ಚಾಪ್ಲಿನ್ ಎಂದರೆ ತಪ್ಪಾಗಲಾರದು. ಚಾರ್ಲಿ ಹೇಗೆ ತನ್ನ ಅದ್ಭುತ ನಟನೆಯ ಮೂಲಕ ವ್ಯವಸ್ಥೆಯನ್ನು ಅಣಕಿಸಿದನೋ ಅದೇ ರೀತಿ ಬೋಳಾರ್ ತನ್ನನ್ನು ತಾನು ಹಾಸ್ಯದ ವಸ್ತುವಾಗಿಸಿ ಬಹಳ ಸರಳವಾಗಿ, ಅಷ್ಟೇ ಸಹಜವಾಗಿ ಸೃಜನಶೀಲ ಮಾತುಗಾರಿಕೆಯಿಂದ, ಆಯಾಯ ಪಾತ್ರಗಳಿಗೆ ಸೂಕ್ತವೆನಿಸುವ ಕಾಸ್ಟ್ಯೂಮ್‌ಗಳನ್ನು ಧರಿಸಿ ಪ್ರಸ್ತುತ ಕಾಲಘಟ್ಟದೊಂದಿಗೆ ಮುಖಾಮುಖಿಯಾಗುತ್ತಾರೆ. ಚಾರ್ಲಿ ಚಾಪ್ಲಿನ್, ಕನ್ನಡದ ನರಸಿಂಹರಾಜು, ಅವರ ನಟನೆ, ಅವರುಗಳ ಮುಖ ನೋಡಿದ ಕೂಡಲೇ ಹೇಗೆ ನಗು ಉಕ್ಕಿ ಬರುತ್ತಿತ್ತೋ, ಹಾಗೆಯೇ ತುಳುರಂಗ ಭೂಮಿಯ ಬೋಳಾರರನ್ನು ಕಂಡ ಕೂಡಲೇ ಜನ ಬಿದ್ದು ಬಿದ್ದು ನಗತೊಡಗುತ್ತಾರೆ.


ಇದನ್ನೂ ಓದಿ: ಜ್ಯೋತಿಷಿ ವಿಡಂಬನೆ ಮಾಡಿದ ಅರವಿಂದ್ ಬೋಳಾರ್ ಮೇಲೆ ಕೇಸ್; ಕಲಾವಿದನ ಬೆನ್ನಿಗೆ ನಿಂತ ಕರಾವಳಿ


ದಕ್ಷಿಣ ಕನ್ನಡ ಜಿಲ್ಲೆಯ ಪ್ರಾದೇಶಿಕ ಭಾಷೆಗಳಾದ ತುಳು, ಬ್ಯಾರಿ, ಕೊಂಕಣಿಯನ್ನು ನಿರರ್ಗಳವಾಗಿ ಮಾತನಾಡಬಲ್ಲ ಬೋಳಾರರೆಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಬೋಳಾರ್ ತಮ್ಮ ಸಹಜ ಪ್ರತಿಭೆಯ ಮೂಲಕ ತುಳುರಂಗಭೂಮಿಯಲ್ಲಿ ಮಿಂಚತೊಡಗಿದರು. ನಾನು ವಿದ್ಯಾರ್ಥಿನಿಯಾಗಿದ್ದಾಗ ತುಳು ನಾಟಕಗಳಲ್ಲಿ ಎಂತಹ ಆಸಕ್ತಿಯಿತ್ತೆಂದರೆ ದೇವದಾಸ್ ಕಾಪಿಕಾಡ್, ನವೀನ್.ಡಿ.ಪಡೀಲರ ತುಳು ನಾಟಕಗಳ ಆಡಿಯೋ ಕ್ಯಾಸೆಟ್‌ಗಳನ್ನು ತಂದು ಟೇಪ್‌ರೆಕಾರ್ಡರ್‌ನಲ್ಲಿ ಹಾಕಿ ಆಲಿಸುತ್ತಿದ್ದೆ. ಅಷ್ಟೇ ಏಕೆ, ಅವರ ಪಂಚಿಂಗ್ ಡೈಲಾಗ್‌ಗಳನ್ನು ಯಥಾವತ್ತಾಗಿ ಅನುಕರಿಸುತ್ತಿದ್ದೆ. ನನಗಲ್ಲಿ ಹಾಸ್ಯದ ಹೊರತಾಗಿ ಮತ್ತೇನನ್ನೂ ಕೇಳಿಸಿಕೊಂಡ ನೆನಪಿಲ್ಲ. ಬಹುಶಃ ನನ್ನ ಆ ವಯಸ್ಸಿನ ಅರಿವಿನ ಇತಿಮಿತಿಗೆ ಗಂಭೀರ ವಿಚಾರಗಳು ಅರ್ಥವಾಗದಿದ್ದಿರಲೂಬಹುದು.

ತುಳು ರಂಗಭೂಮಿಯೆಂಬುವುದು ಕಮರ್ಷಿಯಲ್ ಸಿನಿಮಾಗಳಿದ್ದಂತೆ. ಒಟ್ಟಿನಲ್ಲಿ ತುಳು ರಂಗಭೂಮಿಯಲ್ಲಿ ಹಾಸ್ಯವೇ ಪ್ರಧಾನ. ಪ್ರೇಕ್ಷಕರ ಅಭಿರುಚಿಯ ನಾಡಿಮಿಡಿತ ಅರಿತು ಸ್ಕ್ರಿಪ್ಟ್ ಬರೆಯಲಾಗುತ್ತದೆ. ಕೆಲವು ನಾಟಕಗಳಲ್ಲಿ ಅಲ್ಲಲ್ಲಿ ದ್ವಂದ್ವಾರ್ಥದ ಹಾಸ್ಯಗಳನ್ನು ತುರುಕಲಾಗುತ್ತಿತ್ತು. ಇದರಿಂದಾಗಿ ಬುದ್ಧಿವಂತರೆನಿಸಿದ ಗಂಭೀರ ಪ್ರೇಕ್ಷಕರು ವಿಶೇಷ ಸಂದೇಶವಿರದ ತುಳುನಾಟಕಗಳಿಂದ ವಿಮುಖರಾದದ್ದೂ ಇದೆ.

ಆ ಬಳಿಕ ಹಾಸ್ಯಪ್ರಧಾನ ತುಳು ಸಿನಿಮಾಗಳು ಒಂದರ ಮೇಲೊಂದರಂತೆ ತೆರೆಗೆ ಬರತೊಡಗಿದಾಗ ತುಳು ನಾಟಕ ಪ್ರೇಮಿಗಳು ಅವುಗಳತ್ತಲೂ ಆಕರ್ಷಿತರಾಗತೊಡಗಿದರು. ಸಾಮಾಜಿಕ ಜಾಲತಾಣಗಳ ಬಳಕೆಯು ವ್ಯಾಪಕವಾಗುತ್ತಿದ್ದಂತೆಯೇ ತುಳುನಾಟಕಗಳ ಹಾಸ್ಯಮಯ ಕ್ಲಿಪ್‌ಗಳು ಹೆಚ್ಚೆಚ್ಚು ಹರಿದಾಡತೊಡಗಿದವು.

ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ರಾಜಕಾರಣಿಗಳನ್ನು, ವ್ಯವಸ್ಥೆಯನ್ನು ವ್ಯಂಗ್ಯವಾಡಲು ಜನ ಬೋಳಾರರ ಭಾವಚಿತ್ರವನ್ನು ಬಳಸತೊಡಗಿದರು. ಅವುಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ವಿರೋಧೀ ರಾಜಕೀಯ ಪಕ್ಷಗಳನ್ನು ವ್ಯಂಗ್ಯವಾಡಲು ಬೋಳಾರರ ಹಾಸ್ಯತುಣುಕುಗಳನ್ನು ಬಳಸತೊಡಗಿದರು. (ಎಲ್ಲವೂ ಅವರವರಿಗೆ ಬೇಕಾದಂತೆ).

ಇದೀಗ ದೈಜಿ ವರ್ಲ್ಡ್ ಚಾನೆಲ್‌ನ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮದಲ್ಲಿ ಪ್ರತೀ ಭಾನುವಾರವೂ ಒಂದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುವ ಬೋಳಾರರ ವೇಷಭೂಷಣ, ಮಾತುಗಾರಿಕೆ, ಹಾವಭಾವಗಳೆಲ್ಲವೂ ಆಯಾ ಪಾತ್ರಕ್ಕೆ ಜೀವತುಂಬುತ್ತದೆ. ಶಾಲೆಯ ಮುಖ್ಯೋಪಾಧ್ಯಾಯನಾಗಿ, ಬ್ಯಾಂಕ್ ಒಂದರ ಎಂ.ಡಿ.ಯಾಗಿ, ಮಹಿಳಾ ರಾಜಕಾರಣಿಯಾಗಿ, ನಕಲಿ ವೈದ್ಯನಾಗಿ, ಜ್ಯೋತಿಷಿಯಾಗಿ, ಡ್ರೋನ್ ಪ್ರಚಂಡ ಎಂಬ ಪಾತ್ರದಲ್ಲಿ, ಚೀನಾ ಅಧ್ಯಕ್ಷನಾಗಿ ಹೀಗೆ ಆಯಾ ಪಾತ್ರವೇ ಆಗಿ ಬರುವ ಬೋಳಾರರಿಗೆ ಕಾರ್ಯಕ್ರಮ ನಿರೂಪಕ ಹಾಸ್ಯಮಿಶ್ರಿತವಾಗಿ ಗಂಭೀರ ಪ್ರಶ್ನೆಗಳನ್ನೆಸೆಯುತ್ತಾರೆ. ತನ್ನ ಪಾತ್ರವನ್ನೇ ವ್ಯಂಗ್ಯವಾಡುತ್ತಾ ವ್ಯವಸ್ಥೆ, ಪ್ರಭುತ್ವ, ರಾಜಕೀಯ ಕುತಂತ್ರ, ಇತ್ಯಾದಿಗಳನ್ನೆಲ್ಲಾ ತೀಕ್ಷ್ಣ ಹಾಸ್ಯದ ಮೂಲಕ ಬೋಳಾರ್ ವಿಡಂಬಿಸುತ್ತಾರೆ. ಈ ಕಾರ್ಯಕ್ರಮ ಮೇಲ್ನೋಟಕ್ಕೆ ಬರೀ ತಮಾಷೆಯಂತೆ ಕಂಡರೂ ಆಳದಲ್ಲಿ ಸಾಮಾಜಿಕ, ರಾಜಕೀಯ ಪ್ರಜ್ಞೆಯಿಂದ ಕೂಡಿದ ವ್ಯಂಗ್ಯ ತುಳುನಾಡಿನ ಸೋ ಕಾಲ್ಡ್ ಬುದ್ಧಿವಂತ ಜನರಲ್ಲಿ ಜಾಗೃತಿ ಮೂಡಿಸಬಹುದೇನೋ ಎಂಬ ಆಶಾಭಾವನೆ ಹುಟ್ಟುಹಾಕಿದೆ.

ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮಕ್ಕೆ ಕಾರಾಗೃಹ ಸಚಿವೆಯ ಪಾತ್ರದಲ್ಲಿ ಬಂದು ಹೆಣದ ರಾಜಕೀಯವನ್ನು ಹೇಗೆ ವಿಡಂಬಿಸುತ್ತಾರೆಂದರೆ ಇಲ್ಲಿ ಜಾತಿ, ಧರ್ಮ, ಹೆಣದ ರಾಜಕೀಯ ಮಾಡಲು ಬಲು ಸುಲಭ. ಇಲ್ಲಿರುವುದೇ ಹೆಣಗಳು ಎಂದು ಜನರ ಸಂವೇದನಾರಾಹಿತ್ಯವನ್ನು ವ್ಯಂಗ್ಯವಾಡುತ್ತಾರೆ. ಮಂತ್ರಿಯಾಗಲು ಬೇಕಾದ ಅರ್ಹತೆಯೇನು ಎಂಬ ನಿರೂಪಕನ ಪ್ರಶ್ನೆಗೆ “ಉದ್ರೇಕಕಾರಿಯಾಗಿ ಮಾತನಾಡಲು ಗೊತ್ತಿದ್ದರೆ ಸಾಕು” ಎಂದು ಮಾರ್ಮಿಕ ಉತ್ತರ ನೀಡುತ್ತಾರೆ. ವೀಕ್ಷಕಿಯೊಬ್ಬಳು ಕರೆ ಮಾಡಿ ತನ್ನ ಗಂಡ ಮಂಗವೊಂದನ್ನು ಕೊಂದ ತಪ್ಪಿಗಾಗಿ ಆರು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ ಎಂದು ಅಳಲು ತೋಡಿಕೊಂಡಾಗ “ಬುದ್ಧಿಯಿದ್ದವರು ಯಾರಾದರೂ ಮಂಗನನ್ನು ಕೊಲ್ಲುತ್ತಾರೆಯೇ..? ಬದಲಾಗಿ ಮನುಷ್ಯನನ್ನು ಕೊಂದಿದ್ದರೆ ಆರಾಮವಾಗಿ ತಿರುಗಾಡಬಹುದಿತ್ತು. ಮನುಷ್ಯರನ್ನು ಕೊಂದು ಜೈಲು ಸೇರಿದವರಿಗಿಂತ ಪ್ರಾಣಿಗಳನ್ನು ಕೊಂದು ಜೈಲು ಸೇರಿದವರೇ ಹೆಚ್ಚು” ಎಂದು ವ್ಯವಸ್ಥೆಯನ್ನು ಅಣಕಿಸುತ್ತಾರೆ.

ಕೋವಿಡ್-19ನ್ನು ಚೈನೀಸ್ ವೈರಸ್ ಎಂದಿದ್ದ ಟ್ರಂಪ್‌ಗೆ ಉತ್ತರವಾಗಿ ಚೀನಾದ ಅಧ್ಯಕ್ಷನ ಪಾತ್ರದಲ್ಲಿ ಬಂದ ಬೋಳಾರ್ ಅಮೆರಿಕಾದ ಜನತೆಯೇ ಆತನಿಗೆ ಕವಡೆ ಕಾಸಿನ ಬೆಲೆ ಕೊಡುವುದಿಲ್ಲ, ಇನ್ನು ನಾನ್ಯಾಕೆ ಆತನಿಗೆ ಉತ್ತರ ಕೊಟ್ಟು ಪ್ರಚಾರ ನೀಡಲಿ ಎಂದು ಮರುಪ್ರಶ್ನೆ ಹಾಕುತ್ತಾರೆ. ಚೀನಾದಲ್ಲಿ ಅವ್ಯಾಹತವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯಲಾಗುತ್ತಿದೆ ಎಂಬ ನಿರೂಪಕನ ಪ್ರಶ್ನೆಗೆ ಉತ್ತರಿಸುತ್ತಾ “ನಿಮ್ಮಲ್ಲೇನು ಕಡಿಮೆಯೇ..? ಆಳುವವರ ತಪ್ಪುಗಳ ವಿರುದ್ಧ ಮಾತನಾಡಿದರೆ ದೇಶದ್ರೋಹದ ಪಟ್ಟ ಕಟ್ಟಿ ಜೈಲಿಗಟ್ಟುವುದಿಲ್ಲವೇ..?” ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಸಮಕಾಲೀನ ಭಾರತದ ರಾಜಕೀಯ ವ್ಯವಸ್ಥೆಯನ್ನು ವಿಮರ್ಶಿಸುತ್ತಾರೆ.

ನೋಟು ಅಮಾನ್ಯೀಕರಣದಿಂದಾಗಿ ಜನತೆ ಅನುಭವಿಸಿದ ಸಂಕಷ್ಟಗಳನ್ನು, ಬ್ಯಾಂಕ್‌ಗಳ ಒಳಗುಟ್ಟುಗಳನ್ನು ಬ್ಯಾಂಕ್ ಎಂ.ಡಿ.ಪಾತ್ರದಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ. 2000 ನೋಟಿನಲ್ಲಿ ಚಿಪ್ ಇದೆ ಎಂದು ಥಕ ಥಕ ಕುಣಿದಿದ್ದವರಿಗೆ ನಾಟುವಂತೆ ಚಿಪ್ಪುಲಾ ಇಜ್ಜಿ, ಮರುವಾಯಿಲಾ ಇಜ್ಜಿ (ಮರುವಾಯಿ ಅಂದರೆ ಒಂದು ಬಗೆಯ ಚಿಪ್ಪು ಮೀನು) ಎನ್ನುತ್ತಾರೆ.

ಖಾಸಗಿ ಶಾಲಾ ಮುಖ್ಯೋಪಾಧ್ಯಾಯನಾಗಿ ಬಂದಾಗ ಆನ್‌ಲೈನ್ ಶಿಕ್ಷಣ ಹಾಗೂ ಗ್ರಾಮೀಣ ಭಾರತದ ವಾಸ್ತವವನ್ನು ತೆರೆದಿಡುತ್ತಾರೆ. ಆಗಾಗ ಟಿಆರ್‌ಪಿಯ ಬಗ್ಗೆ ಕುಟುಕುತ್ತಾ ನನ್ನನ್ನಿಲ್ಲಿ ಕೂರಿಸಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ನಿಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳುತ್ತೀರಿ ಎಂದು ಟಿವಿ ಚಾನೆಲ್‌ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಮಾಧ್ಯಮಗಳು ಪ್ರಭುತ್ವದ ಅಡಿಯಾಳಾಗಿರುವ ಇಂದಿನ ವಿಷಮಕಾಲದಲ್ಲಿ ಮಾಧ್ಯಮದ ಜವಾಬ್ದಾರಿಯೇನೆಂದು ತೋರಿಸಿಕೊಟ್ಟ ದೈಜಿ ವರ್ಲ್ಡ್ ಮತ್ತು ಕಲಾವಿದನಾಗಿ ತನ್ನ ಸಾಮಾಜಿಕ ಜವಾಬ್ದಾರಿಯೇನೆಂದು ತೋರಿಸಿಕೊಟ್ಟ ಬೋಳಾರರ ನಡೆ ಇಡೀ ದೇಶಕ್ಕೆ ಮಾದರಿ. ಒಂದು ಸ್ಥಳೀಯ ಚಾನೆಲ್ ಸ್ಥಳೀಯ ಭಾಷೆಯಲ್ಲಿ (ತುಳು) ನಡೆಸಿಕೊಡುವ ಈ ಕಾರ್ಯಕ್ರಮ ರಾಜ್ಯದಲ್ಲೇ ಒಂದು ಅಪೂರ್ವ ಮಾಧ್ಯಮ ಪ್ರಯೋಗ.


ಇದನ್ನೂ ಓದಿ: ಪ್ರವಾಹ, ಕೊರೊನಾ ಸಂದರ್ಭದಲ್ಲಿ ಕಣ್ಮರೆ, ಗಲಭೆ ಆದಾಗ ಪ್ರತ್ಯಕ್ಷ: ಯಾರಿವರು ಗೊತ್ತೇ? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...