Homeಮುಖಪುಟತುಳು ರಂಗಭೂಮಿಯ ಸಾಕ್ಷಿಪ್ರಜ್ಞೆ ಅರವಿಂದ ಬೋಳಾರ್

ತುಳು ರಂಗಭೂಮಿಯ ಸಾಕ್ಷಿಪ್ರಜ್ಞೆ ಅರವಿಂದ ಬೋಳಾರ್

- Advertisement -
- Advertisement -

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕನ್ನಡದ ಎಲ್ಲಾ ಚಾನೆಲ್‌ಗಳು ದ್ವೇಷ ಬಿತ್ತುತ್ತಾ ಜನರನ್ನು ಭಯಭೀತರನ್ನಾಗಿಸುತ್ತಿದ್ದಾಗ ಮಂಗಳೂರಿನ ಸ್ಥಳೀಯ ಚಾನೆಲ್ ಆದ ದೈಜಿ ವರ್ಲ್ಡ್ ವಿನೂತನ ಪ್ರಯೋಗವೊಂದನ್ನು ಹುಟ್ಟುಹಾಕಿತು. ಪ್ರತಿಭಾವಂತ ಕಾರ್ಯಕ್ರಮ ನಿರೂಪಕರಾದ ವಾಲ್ಟರ್ ನಂದಳಿಕೆಯವರು ನಡೆಸಿಕೊಟ್ಟ “ಕೊರೊನಾ ಗೆಲ್ಲೋಣ” ಎಂಬ ಕಾರ್ಯಕ್ರಮದಲ್ಲಿ ತುಳುನಾಡಿನ ವಿವಿಧ ಕಲಾವಿದರನ್ನು ಸ್ಟುಡಿಯೋಗೆ ಕರೆಸಿ ಜನಜಾಗೃತಿ, ಮನರಂಜನೆಯ ಜೊತೆಗೆ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಅಗತ್ಯವಿರುವ ಕುಟುಂಬಗಳಿಗೆ ಕಿಟ್ ವಿತರಿಸುವುದರ ಮೂಲಕ ಬಡವರ ಸಂಕಷ್ಟಕ್ಕೆ ಸ್ಪಂದಿಸಿತು.

ಇದರ ಜೊತೆಗೆ ಪ್ರತಿ ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ಪ್ರಸಾರವಾಗುವ ಪ್ರೈವೇಟ್ ಚಾಲೆಂಜ್” ಎಂಬ ಕಾರ್ಯಕ್ರಮದಲ್ಲಿ ತೀಕ್ಷ್ಣವಾದ ವ್ಯಂಗ್ಯ, ವಿಡಂಬನೆಯೊಂದಿಗೆ ರಾಜಕೀಯ, ಸಾಮಾಜಿಕ ವಿಚಾರಗಳನ್ನೆತ್ತಿಕೊಂಡು ಚಿಕಿತ್ಸಕ ದೃಷ್ಟಿಯಲ್ಲಿ ವಿಶ್ಲೇಷಿಸುವ ಹೊಸ ವಿಧಾನಕ್ಕೆ ಕೈ ಹಾಕಿತು. ಸ್ಥಳೀಯ ಚಾನೆಲ್‌ವೊಂದರ ಇಂತಹ ಕಾರ್ಯಕ್ರಮ ಹೃಸ್ವ ಅವಧಿಯಲ್ಲಿ ಸುಮಾರು ಮೂರು ಲಕ್ಷದಷ್ಟು ವೀಕ್ಷಕರನ್ನು ಸಂಪಾದಿಸಲು ಸಾಧ್ಯವಾಗಿದೆಯೆಂದರೆ ಅದು ಆ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿ.

ಸದರಿ ಕಾರ್ಯಕ್ರಮದ ವಿಶೇಷ ವ್ಯಕ್ತಿ “ತುಳುನಾಡ ಮಾಣಿಕ್ಯ” ಎಂದೇ ಮನೆಮಾತಾಗಿರುವ ಅರವಿಂದ ಬೋಳಾರ್. ಇವರನ್ನು ತುಳುನಾಡಿನ ಚಾರ್ಲಿ ಚಾಪ್ಲಿನ್ ಎಂದರೆ ತಪ್ಪಾಗಲಾರದು. ಚಾರ್ಲಿ ಹೇಗೆ ತನ್ನ ಅದ್ಭುತ ನಟನೆಯ ಮೂಲಕ ವ್ಯವಸ್ಥೆಯನ್ನು ಅಣಕಿಸಿದನೋ ಅದೇ ರೀತಿ ಬೋಳಾರ್ ತನ್ನನ್ನು ತಾನು ಹಾಸ್ಯದ ವಸ್ತುವಾಗಿಸಿ ಬಹಳ ಸರಳವಾಗಿ, ಅಷ್ಟೇ ಸಹಜವಾಗಿ ಸೃಜನಶೀಲ ಮಾತುಗಾರಿಕೆಯಿಂದ, ಆಯಾಯ ಪಾತ್ರಗಳಿಗೆ ಸೂಕ್ತವೆನಿಸುವ ಕಾಸ್ಟ್ಯೂಮ್‌ಗಳನ್ನು ಧರಿಸಿ ಪ್ರಸ್ತುತ ಕಾಲಘಟ್ಟದೊಂದಿಗೆ ಮುಖಾಮುಖಿಯಾಗುತ್ತಾರೆ. ಚಾರ್ಲಿ ಚಾಪ್ಲಿನ್, ಕನ್ನಡದ ನರಸಿಂಹರಾಜು, ಅವರ ನಟನೆ, ಅವರುಗಳ ಮುಖ ನೋಡಿದ ಕೂಡಲೇ ಹೇಗೆ ನಗು ಉಕ್ಕಿ ಬರುತ್ತಿತ್ತೋ, ಹಾಗೆಯೇ ತುಳುರಂಗ ಭೂಮಿಯ ಬೋಳಾರರನ್ನು ಕಂಡ ಕೂಡಲೇ ಜನ ಬಿದ್ದು ಬಿದ್ದು ನಗತೊಡಗುತ್ತಾರೆ.


ಇದನ್ನೂ ಓದಿ: ಜ್ಯೋತಿಷಿ ವಿಡಂಬನೆ ಮಾಡಿದ ಅರವಿಂದ್ ಬೋಳಾರ್ ಮೇಲೆ ಕೇಸ್; ಕಲಾವಿದನ ಬೆನ್ನಿಗೆ ನಿಂತ ಕರಾವಳಿ


ದಕ್ಷಿಣ ಕನ್ನಡ ಜಿಲ್ಲೆಯ ಪ್ರಾದೇಶಿಕ ಭಾಷೆಗಳಾದ ತುಳು, ಬ್ಯಾರಿ, ಕೊಂಕಣಿಯನ್ನು ನಿರರ್ಗಳವಾಗಿ ಮಾತನಾಡಬಲ್ಲ ಬೋಳಾರರೆಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಬೋಳಾರ್ ತಮ್ಮ ಸಹಜ ಪ್ರತಿಭೆಯ ಮೂಲಕ ತುಳುರಂಗಭೂಮಿಯಲ್ಲಿ ಮಿಂಚತೊಡಗಿದರು. ನಾನು ವಿದ್ಯಾರ್ಥಿನಿಯಾಗಿದ್ದಾಗ ತುಳು ನಾಟಕಗಳಲ್ಲಿ ಎಂತಹ ಆಸಕ್ತಿಯಿತ್ತೆಂದರೆ ದೇವದಾಸ್ ಕಾಪಿಕಾಡ್, ನವೀನ್.ಡಿ.ಪಡೀಲರ ತುಳು ನಾಟಕಗಳ ಆಡಿಯೋ ಕ್ಯಾಸೆಟ್‌ಗಳನ್ನು ತಂದು ಟೇಪ್‌ರೆಕಾರ್ಡರ್‌ನಲ್ಲಿ ಹಾಕಿ ಆಲಿಸುತ್ತಿದ್ದೆ. ಅಷ್ಟೇ ಏಕೆ, ಅವರ ಪಂಚಿಂಗ್ ಡೈಲಾಗ್‌ಗಳನ್ನು ಯಥಾವತ್ತಾಗಿ ಅನುಕರಿಸುತ್ತಿದ್ದೆ. ನನಗಲ್ಲಿ ಹಾಸ್ಯದ ಹೊರತಾಗಿ ಮತ್ತೇನನ್ನೂ ಕೇಳಿಸಿಕೊಂಡ ನೆನಪಿಲ್ಲ. ಬಹುಶಃ ನನ್ನ ಆ ವಯಸ್ಸಿನ ಅರಿವಿನ ಇತಿಮಿತಿಗೆ ಗಂಭೀರ ವಿಚಾರಗಳು ಅರ್ಥವಾಗದಿದ್ದಿರಲೂಬಹುದು.

ತುಳು ರಂಗಭೂಮಿಯೆಂಬುವುದು ಕಮರ್ಷಿಯಲ್ ಸಿನಿಮಾಗಳಿದ್ದಂತೆ. ಒಟ್ಟಿನಲ್ಲಿ ತುಳು ರಂಗಭೂಮಿಯಲ್ಲಿ ಹಾಸ್ಯವೇ ಪ್ರಧಾನ. ಪ್ರೇಕ್ಷಕರ ಅಭಿರುಚಿಯ ನಾಡಿಮಿಡಿತ ಅರಿತು ಸ್ಕ್ರಿಪ್ಟ್ ಬರೆಯಲಾಗುತ್ತದೆ. ಕೆಲವು ನಾಟಕಗಳಲ್ಲಿ ಅಲ್ಲಲ್ಲಿ ದ್ವಂದ್ವಾರ್ಥದ ಹಾಸ್ಯಗಳನ್ನು ತುರುಕಲಾಗುತ್ತಿತ್ತು. ಇದರಿಂದಾಗಿ ಬುದ್ಧಿವಂತರೆನಿಸಿದ ಗಂಭೀರ ಪ್ರೇಕ್ಷಕರು ವಿಶೇಷ ಸಂದೇಶವಿರದ ತುಳುನಾಟಕಗಳಿಂದ ವಿಮುಖರಾದದ್ದೂ ಇದೆ.

ಆ ಬಳಿಕ ಹಾಸ್ಯಪ್ರಧಾನ ತುಳು ಸಿನಿಮಾಗಳು ಒಂದರ ಮೇಲೊಂದರಂತೆ ತೆರೆಗೆ ಬರತೊಡಗಿದಾಗ ತುಳು ನಾಟಕ ಪ್ರೇಮಿಗಳು ಅವುಗಳತ್ತಲೂ ಆಕರ್ಷಿತರಾಗತೊಡಗಿದರು. ಸಾಮಾಜಿಕ ಜಾಲತಾಣಗಳ ಬಳಕೆಯು ವ್ಯಾಪಕವಾಗುತ್ತಿದ್ದಂತೆಯೇ ತುಳುನಾಟಕಗಳ ಹಾಸ್ಯಮಯ ಕ್ಲಿಪ್‌ಗಳು ಹೆಚ್ಚೆಚ್ಚು ಹರಿದಾಡತೊಡಗಿದವು.

ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ರಾಜಕಾರಣಿಗಳನ್ನು, ವ್ಯವಸ್ಥೆಯನ್ನು ವ್ಯಂಗ್ಯವಾಡಲು ಜನ ಬೋಳಾರರ ಭಾವಚಿತ್ರವನ್ನು ಬಳಸತೊಡಗಿದರು. ಅವುಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ವಿರೋಧೀ ರಾಜಕೀಯ ಪಕ್ಷಗಳನ್ನು ವ್ಯಂಗ್ಯವಾಡಲು ಬೋಳಾರರ ಹಾಸ್ಯತುಣುಕುಗಳನ್ನು ಬಳಸತೊಡಗಿದರು. (ಎಲ್ಲವೂ ಅವರವರಿಗೆ ಬೇಕಾದಂತೆ).

ಇದೀಗ ದೈಜಿ ವರ್ಲ್ಡ್ ಚಾನೆಲ್‌ನ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮದಲ್ಲಿ ಪ್ರತೀ ಭಾನುವಾರವೂ ಒಂದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುವ ಬೋಳಾರರ ವೇಷಭೂಷಣ, ಮಾತುಗಾರಿಕೆ, ಹಾವಭಾವಗಳೆಲ್ಲವೂ ಆಯಾ ಪಾತ್ರಕ್ಕೆ ಜೀವತುಂಬುತ್ತದೆ. ಶಾಲೆಯ ಮುಖ್ಯೋಪಾಧ್ಯಾಯನಾಗಿ, ಬ್ಯಾಂಕ್ ಒಂದರ ಎಂ.ಡಿ.ಯಾಗಿ, ಮಹಿಳಾ ರಾಜಕಾರಣಿಯಾಗಿ, ನಕಲಿ ವೈದ್ಯನಾಗಿ, ಜ್ಯೋತಿಷಿಯಾಗಿ, ಡ್ರೋನ್ ಪ್ರಚಂಡ ಎಂಬ ಪಾತ್ರದಲ್ಲಿ, ಚೀನಾ ಅಧ್ಯಕ್ಷನಾಗಿ ಹೀಗೆ ಆಯಾ ಪಾತ್ರವೇ ಆಗಿ ಬರುವ ಬೋಳಾರರಿಗೆ ಕಾರ್ಯಕ್ರಮ ನಿರೂಪಕ ಹಾಸ್ಯಮಿಶ್ರಿತವಾಗಿ ಗಂಭೀರ ಪ್ರಶ್ನೆಗಳನ್ನೆಸೆಯುತ್ತಾರೆ. ತನ್ನ ಪಾತ್ರವನ್ನೇ ವ್ಯಂಗ್ಯವಾಡುತ್ತಾ ವ್ಯವಸ್ಥೆ, ಪ್ರಭುತ್ವ, ರಾಜಕೀಯ ಕುತಂತ್ರ, ಇತ್ಯಾದಿಗಳನ್ನೆಲ್ಲಾ ತೀಕ್ಷ್ಣ ಹಾಸ್ಯದ ಮೂಲಕ ಬೋಳಾರ್ ವಿಡಂಬಿಸುತ್ತಾರೆ. ಈ ಕಾರ್ಯಕ್ರಮ ಮೇಲ್ನೋಟಕ್ಕೆ ಬರೀ ತಮಾಷೆಯಂತೆ ಕಂಡರೂ ಆಳದಲ್ಲಿ ಸಾಮಾಜಿಕ, ರಾಜಕೀಯ ಪ್ರಜ್ಞೆಯಿಂದ ಕೂಡಿದ ವ್ಯಂಗ್ಯ ತುಳುನಾಡಿನ ಸೋ ಕಾಲ್ಡ್ ಬುದ್ಧಿವಂತ ಜನರಲ್ಲಿ ಜಾಗೃತಿ ಮೂಡಿಸಬಹುದೇನೋ ಎಂಬ ಆಶಾಭಾವನೆ ಹುಟ್ಟುಹಾಕಿದೆ.

ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮಕ್ಕೆ ಕಾರಾಗೃಹ ಸಚಿವೆಯ ಪಾತ್ರದಲ್ಲಿ ಬಂದು ಹೆಣದ ರಾಜಕೀಯವನ್ನು ಹೇಗೆ ವಿಡಂಬಿಸುತ್ತಾರೆಂದರೆ ಇಲ್ಲಿ ಜಾತಿ, ಧರ್ಮ, ಹೆಣದ ರಾಜಕೀಯ ಮಾಡಲು ಬಲು ಸುಲಭ. ಇಲ್ಲಿರುವುದೇ ಹೆಣಗಳು ಎಂದು ಜನರ ಸಂವೇದನಾರಾಹಿತ್ಯವನ್ನು ವ್ಯಂಗ್ಯವಾಡುತ್ತಾರೆ. ಮಂತ್ರಿಯಾಗಲು ಬೇಕಾದ ಅರ್ಹತೆಯೇನು ಎಂಬ ನಿರೂಪಕನ ಪ್ರಶ್ನೆಗೆ “ಉದ್ರೇಕಕಾರಿಯಾಗಿ ಮಾತನಾಡಲು ಗೊತ್ತಿದ್ದರೆ ಸಾಕು” ಎಂದು ಮಾರ್ಮಿಕ ಉತ್ತರ ನೀಡುತ್ತಾರೆ. ವೀಕ್ಷಕಿಯೊಬ್ಬಳು ಕರೆ ಮಾಡಿ ತನ್ನ ಗಂಡ ಮಂಗವೊಂದನ್ನು ಕೊಂದ ತಪ್ಪಿಗಾಗಿ ಆರು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ ಎಂದು ಅಳಲು ತೋಡಿಕೊಂಡಾಗ “ಬುದ್ಧಿಯಿದ್ದವರು ಯಾರಾದರೂ ಮಂಗನನ್ನು ಕೊಲ್ಲುತ್ತಾರೆಯೇ..? ಬದಲಾಗಿ ಮನುಷ್ಯನನ್ನು ಕೊಂದಿದ್ದರೆ ಆರಾಮವಾಗಿ ತಿರುಗಾಡಬಹುದಿತ್ತು. ಮನುಷ್ಯರನ್ನು ಕೊಂದು ಜೈಲು ಸೇರಿದವರಿಗಿಂತ ಪ್ರಾಣಿಗಳನ್ನು ಕೊಂದು ಜೈಲು ಸೇರಿದವರೇ ಹೆಚ್ಚು” ಎಂದು ವ್ಯವಸ್ಥೆಯನ್ನು ಅಣಕಿಸುತ್ತಾರೆ.

ಕೋವಿಡ್-19ನ್ನು ಚೈನೀಸ್ ವೈರಸ್ ಎಂದಿದ್ದ ಟ್ರಂಪ್‌ಗೆ ಉತ್ತರವಾಗಿ ಚೀನಾದ ಅಧ್ಯಕ್ಷನ ಪಾತ್ರದಲ್ಲಿ ಬಂದ ಬೋಳಾರ್ ಅಮೆರಿಕಾದ ಜನತೆಯೇ ಆತನಿಗೆ ಕವಡೆ ಕಾಸಿನ ಬೆಲೆ ಕೊಡುವುದಿಲ್ಲ, ಇನ್ನು ನಾನ್ಯಾಕೆ ಆತನಿಗೆ ಉತ್ತರ ಕೊಟ್ಟು ಪ್ರಚಾರ ನೀಡಲಿ ಎಂದು ಮರುಪ್ರಶ್ನೆ ಹಾಕುತ್ತಾರೆ. ಚೀನಾದಲ್ಲಿ ಅವ್ಯಾಹತವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯಲಾಗುತ್ತಿದೆ ಎಂಬ ನಿರೂಪಕನ ಪ್ರಶ್ನೆಗೆ ಉತ್ತರಿಸುತ್ತಾ “ನಿಮ್ಮಲ್ಲೇನು ಕಡಿಮೆಯೇ..? ಆಳುವವರ ತಪ್ಪುಗಳ ವಿರುದ್ಧ ಮಾತನಾಡಿದರೆ ದೇಶದ್ರೋಹದ ಪಟ್ಟ ಕಟ್ಟಿ ಜೈಲಿಗಟ್ಟುವುದಿಲ್ಲವೇ..?” ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಸಮಕಾಲೀನ ಭಾರತದ ರಾಜಕೀಯ ವ್ಯವಸ್ಥೆಯನ್ನು ವಿಮರ್ಶಿಸುತ್ತಾರೆ.

ನೋಟು ಅಮಾನ್ಯೀಕರಣದಿಂದಾಗಿ ಜನತೆ ಅನುಭವಿಸಿದ ಸಂಕಷ್ಟಗಳನ್ನು, ಬ್ಯಾಂಕ್‌ಗಳ ಒಳಗುಟ್ಟುಗಳನ್ನು ಬ್ಯಾಂಕ್ ಎಂ.ಡಿ.ಪಾತ್ರದಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ. 2000 ನೋಟಿನಲ್ಲಿ ಚಿಪ್ ಇದೆ ಎಂದು ಥಕ ಥಕ ಕುಣಿದಿದ್ದವರಿಗೆ ನಾಟುವಂತೆ ಚಿಪ್ಪುಲಾ ಇಜ್ಜಿ, ಮರುವಾಯಿಲಾ ಇಜ್ಜಿ (ಮರುವಾಯಿ ಅಂದರೆ ಒಂದು ಬಗೆಯ ಚಿಪ್ಪು ಮೀನು) ಎನ್ನುತ್ತಾರೆ.

ಖಾಸಗಿ ಶಾಲಾ ಮುಖ್ಯೋಪಾಧ್ಯಾಯನಾಗಿ ಬಂದಾಗ ಆನ್‌ಲೈನ್ ಶಿಕ್ಷಣ ಹಾಗೂ ಗ್ರಾಮೀಣ ಭಾರತದ ವಾಸ್ತವವನ್ನು ತೆರೆದಿಡುತ್ತಾರೆ. ಆಗಾಗ ಟಿಆರ್‌ಪಿಯ ಬಗ್ಗೆ ಕುಟುಕುತ್ತಾ ನನ್ನನ್ನಿಲ್ಲಿ ಕೂರಿಸಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ನಿಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳುತ್ತೀರಿ ಎಂದು ಟಿವಿ ಚಾನೆಲ್‌ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಮಾಧ್ಯಮಗಳು ಪ್ರಭುತ್ವದ ಅಡಿಯಾಳಾಗಿರುವ ಇಂದಿನ ವಿಷಮಕಾಲದಲ್ಲಿ ಮಾಧ್ಯಮದ ಜವಾಬ್ದಾರಿಯೇನೆಂದು ತೋರಿಸಿಕೊಟ್ಟ ದೈಜಿ ವರ್ಲ್ಡ್ ಮತ್ತು ಕಲಾವಿದನಾಗಿ ತನ್ನ ಸಾಮಾಜಿಕ ಜವಾಬ್ದಾರಿಯೇನೆಂದು ತೋರಿಸಿಕೊಟ್ಟ ಬೋಳಾರರ ನಡೆ ಇಡೀ ದೇಶಕ್ಕೆ ಮಾದರಿ. ಒಂದು ಸ್ಥಳೀಯ ಚಾನೆಲ್ ಸ್ಥಳೀಯ ಭಾಷೆಯಲ್ಲಿ (ತುಳು) ನಡೆಸಿಕೊಡುವ ಈ ಕಾರ್ಯಕ್ರಮ ರಾಜ್ಯದಲ್ಲೇ ಒಂದು ಅಪೂರ್ವ ಮಾಧ್ಯಮ ಪ್ರಯೋಗ.


ಇದನ್ನೂ ಓದಿ: ಪ್ರವಾಹ, ಕೊರೊನಾ ಸಂದರ್ಭದಲ್ಲಿ ಕಣ್ಮರೆ, ಗಲಭೆ ಆದಾಗ ಪ್ರತ್ಯಕ್ಷ: ಯಾರಿವರು ಗೊತ್ತೇ? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...