Homeಮುಖಪುಟತುಳು ರಂಗಭೂಮಿಯ ಸಾಕ್ಷಿಪ್ರಜ್ಞೆ ಅರವಿಂದ ಬೋಳಾರ್

ತುಳು ರಂಗಭೂಮಿಯ ಸಾಕ್ಷಿಪ್ರಜ್ಞೆ ಅರವಿಂದ ಬೋಳಾರ್

- Advertisement -
- Advertisement -

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕನ್ನಡದ ಎಲ್ಲಾ ಚಾನೆಲ್‌ಗಳು ದ್ವೇಷ ಬಿತ್ತುತ್ತಾ ಜನರನ್ನು ಭಯಭೀತರನ್ನಾಗಿಸುತ್ತಿದ್ದಾಗ ಮಂಗಳೂರಿನ ಸ್ಥಳೀಯ ಚಾನೆಲ್ ಆದ ದೈಜಿ ವರ್ಲ್ಡ್ ವಿನೂತನ ಪ್ರಯೋಗವೊಂದನ್ನು ಹುಟ್ಟುಹಾಕಿತು. ಪ್ರತಿಭಾವಂತ ಕಾರ್ಯಕ್ರಮ ನಿರೂಪಕರಾದ ವಾಲ್ಟರ್ ನಂದಳಿಕೆಯವರು ನಡೆಸಿಕೊಟ್ಟ “ಕೊರೊನಾ ಗೆಲ್ಲೋಣ” ಎಂಬ ಕಾರ್ಯಕ್ರಮದಲ್ಲಿ ತುಳುನಾಡಿನ ವಿವಿಧ ಕಲಾವಿದರನ್ನು ಸ್ಟುಡಿಯೋಗೆ ಕರೆಸಿ ಜನಜಾಗೃತಿ, ಮನರಂಜನೆಯ ಜೊತೆಗೆ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಅಗತ್ಯವಿರುವ ಕುಟುಂಬಗಳಿಗೆ ಕಿಟ್ ವಿತರಿಸುವುದರ ಮೂಲಕ ಬಡವರ ಸಂಕಷ್ಟಕ್ಕೆ ಸ್ಪಂದಿಸಿತು.

ಇದರ ಜೊತೆಗೆ ಪ್ರತಿ ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ಪ್ರಸಾರವಾಗುವ ಪ್ರೈವೇಟ್ ಚಾಲೆಂಜ್” ಎಂಬ ಕಾರ್ಯಕ್ರಮದಲ್ಲಿ ತೀಕ್ಷ್ಣವಾದ ವ್ಯಂಗ್ಯ, ವಿಡಂಬನೆಯೊಂದಿಗೆ ರಾಜಕೀಯ, ಸಾಮಾಜಿಕ ವಿಚಾರಗಳನ್ನೆತ್ತಿಕೊಂಡು ಚಿಕಿತ್ಸಕ ದೃಷ್ಟಿಯಲ್ಲಿ ವಿಶ್ಲೇಷಿಸುವ ಹೊಸ ವಿಧಾನಕ್ಕೆ ಕೈ ಹಾಕಿತು. ಸ್ಥಳೀಯ ಚಾನೆಲ್‌ವೊಂದರ ಇಂತಹ ಕಾರ್ಯಕ್ರಮ ಹೃಸ್ವ ಅವಧಿಯಲ್ಲಿ ಸುಮಾರು ಮೂರು ಲಕ್ಷದಷ್ಟು ವೀಕ್ಷಕರನ್ನು ಸಂಪಾದಿಸಲು ಸಾಧ್ಯವಾಗಿದೆಯೆಂದರೆ ಅದು ಆ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿ.

ಸದರಿ ಕಾರ್ಯಕ್ರಮದ ವಿಶೇಷ ವ್ಯಕ್ತಿ “ತುಳುನಾಡ ಮಾಣಿಕ್ಯ” ಎಂದೇ ಮನೆಮಾತಾಗಿರುವ ಅರವಿಂದ ಬೋಳಾರ್. ಇವರನ್ನು ತುಳುನಾಡಿನ ಚಾರ್ಲಿ ಚಾಪ್ಲಿನ್ ಎಂದರೆ ತಪ್ಪಾಗಲಾರದು. ಚಾರ್ಲಿ ಹೇಗೆ ತನ್ನ ಅದ್ಭುತ ನಟನೆಯ ಮೂಲಕ ವ್ಯವಸ್ಥೆಯನ್ನು ಅಣಕಿಸಿದನೋ ಅದೇ ರೀತಿ ಬೋಳಾರ್ ತನ್ನನ್ನು ತಾನು ಹಾಸ್ಯದ ವಸ್ತುವಾಗಿಸಿ ಬಹಳ ಸರಳವಾಗಿ, ಅಷ್ಟೇ ಸಹಜವಾಗಿ ಸೃಜನಶೀಲ ಮಾತುಗಾರಿಕೆಯಿಂದ, ಆಯಾಯ ಪಾತ್ರಗಳಿಗೆ ಸೂಕ್ತವೆನಿಸುವ ಕಾಸ್ಟ್ಯೂಮ್‌ಗಳನ್ನು ಧರಿಸಿ ಪ್ರಸ್ತುತ ಕಾಲಘಟ್ಟದೊಂದಿಗೆ ಮುಖಾಮುಖಿಯಾಗುತ್ತಾರೆ. ಚಾರ್ಲಿ ಚಾಪ್ಲಿನ್, ಕನ್ನಡದ ನರಸಿಂಹರಾಜು, ಅವರ ನಟನೆ, ಅವರುಗಳ ಮುಖ ನೋಡಿದ ಕೂಡಲೇ ಹೇಗೆ ನಗು ಉಕ್ಕಿ ಬರುತ್ತಿತ್ತೋ, ಹಾಗೆಯೇ ತುಳುರಂಗ ಭೂಮಿಯ ಬೋಳಾರರನ್ನು ಕಂಡ ಕೂಡಲೇ ಜನ ಬಿದ್ದು ಬಿದ್ದು ನಗತೊಡಗುತ್ತಾರೆ.


ಇದನ್ನೂ ಓದಿ: ಜ್ಯೋತಿಷಿ ವಿಡಂಬನೆ ಮಾಡಿದ ಅರವಿಂದ್ ಬೋಳಾರ್ ಮೇಲೆ ಕೇಸ್; ಕಲಾವಿದನ ಬೆನ್ನಿಗೆ ನಿಂತ ಕರಾವಳಿ


ದಕ್ಷಿಣ ಕನ್ನಡ ಜಿಲ್ಲೆಯ ಪ್ರಾದೇಶಿಕ ಭಾಷೆಗಳಾದ ತುಳು, ಬ್ಯಾರಿ, ಕೊಂಕಣಿಯನ್ನು ನಿರರ್ಗಳವಾಗಿ ಮಾತನಾಡಬಲ್ಲ ಬೋಳಾರರೆಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಬೋಳಾರ್ ತಮ್ಮ ಸಹಜ ಪ್ರತಿಭೆಯ ಮೂಲಕ ತುಳುರಂಗಭೂಮಿಯಲ್ಲಿ ಮಿಂಚತೊಡಗಿದರು. ನಾನು ವಿದ್ಯಾರ್ಥಿನಿಯಾಗಿದ್ದಾಗ ತುಳು ನಾಟಕಗಳಲ್ಲಿ ಎಂತಹ ಆಸಕ್ತಿಯಿತ್ತೆಂದರೆ ದೇವದಾಸ್ ಕಾಪಿಕಾಡ್, ನವೀನ್.ಡಿ.ಪಡೀಲರ ತುಳು ನಾಟಕಗಳ ಆಡಿಯೋ ಕ್ಯಾಸೆಟ್‌ಗಳನ್ನು ತಂದು ಟೇಪ್‌ರೆಕಾರ್ಡರ್‌ನಲ್ಲಿ ಹಾಕಿ ಆಲಿಸುತ್ತಿದ್ದೆ. ಅಷ್ಟೇ ಏಕೆ, ಅವರ ಪಂಚಿಂಗ್ ಡೈಲಾಗ್‌ಗಳನ್ನು ಯಥಾವತ್ತಾಗಿ ಅನುಕರಿಸುತ್ತಿದ್ದೆ. ನನಗಲ್ಲಿ ಹಾಸ್ಯದ ಹೊರತಾಗಿ ಮತ್ತೇನನ್ನೂ ಕೇಳಿಸಿಕೊಂಡ ನೆನಪಿಲ್ಲ. ಬಹುಶಃ ನನ್ನ ಆ ವಯಸ್ಸಿನ ಅರಿವಿನ ಇತಿಮಿತಿಗೆ ಗಂಭೀರ ವಿಚಾರಗಳು ಅರ್ಥವಾಗದಿದ್ದಿರಲೂಬಹುದು.

ತುಳು ರಂಗಭೂಮಿಯೆಂಬುವುದು ಕಮರ್ಷಿಯಲ್ ಸಿನಿಮಾಗಳಿದ್ದಂತೆ. ಒಟ್ಟಿನಲ್ಲಿ ತುಳು ರಂಗಭೂಮಿಯಲ್ಲಿ ಹಾಸ್ಯವೇ ಪ್ರಧಾನ. ಪ್ರೇಕ್ಷಕರ ಅಭಿರುಚಿಯ ನಾಡಿಮಿಡಿತ ಅರಿತು ಸ್ಕ್ರಿಪ್ಟ್ ಬರೆಯಲಾಗುತ್ತದೆ. ಕೆಲವು ನಾಟಕಗಳಲ್ಲಿ ಅಲ್ಲಲ್ಲಿ ದ್ವಂದ್ವಾರ್ಥದ ಹಾಸ್ಯಗಳನ್ನು ತುರುಕಲಾಗುತ್ತಿತ್ತು. ಇದರಿಂದಾಗಿ ಬುದ್ಧಿವಂತರೆನಿಸಿದ ಗಂಭೀರ ಪ್ರೇಕ್ಷಕರು ವಿಶೇಷ ಸಂದೇಶವಿರದ ತುಳುನಾಟಕಗಳಿಂದ ವಿಮುಖರಾದದ್ದೂ ಇದೆ.

ಆ ಬಳಿಕ ಹಾಸ್ಯಪ್ರಧಾನ ತುಳು ಸಿನಿಮಾಗಳು ಒಂದರ ಮೇಲೊಂದರಂತೆ ತೆರೆಗೆ ಬರತೊಡಗಿದಾಗ ತುಳು ನಾಟಕ ಪ್ರೇಮಿಗಳು ಅವುಗಳತ್ತಲೂ ಆಕರ್ಷಿತರಾಗತೊಡಗಿದರು. ಸಾಮಾಜಿಕ ಜಾಲತಾಣಗಳ ಬಳಕೆಯು ವ್ಯಾಪಕವಾಗುತ್ತಿದ್ದಂತೆಯೇ ತುಳುನಾಟಕಗಳ ಹಾಸ್ಯಮಯ ಕ್ಲಿಪ್‌ಗಳು ಹೆಚ್ಚೆಚ್ಚು ಹರಿದಾಡತೊಡಗಿದವು.

ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ರಾಜಕಾರಣಿಗಳನ್ನು, ವ್ಯವಸ್ಥೆಯನ್ನು ವ್ಯಂಗ್ಯವಾಡಲು ಜನ ಬೋಳಾರರ ಭಾವಚಿತ್ರವನ್ನು ಬಳಸತೊಡಗಿದರು. ಅವುಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ವಿರೋಧೀ ರಾಜಕೀಯ ಪಕ್ಷಗಳನ್ನು ವ್ಯಂಗ್ಯವಾಡಲು ಬೋಳಾರರ ಹಾಸ್ಯತುಣುಕುಗಳನ್ನು ಬಳಸತೊಡಗಿದರು. (ಎಲ್ಲವೂ ಅವರವರಿಗೆ ಬೇಕಾದಂತೆ).

ಇದೀಗ ದೈಜಿ ವರ್ಲ್ಡ್ ಚಾನೆಲ್‌ನ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮದಲ್ಲಿ ಪ್ರತೀ ಭಾನುವಾರವೂ ಒಂದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುವ ಬೋಳಾರರ ವೇಷಭೂಷಣ, ಮಾತುಗಾರಿಕೆ, ಹಾವಭಾವಗಳೆಲ್ಲವೂ ಆಯಾ ಪಾತ್ರಕ್ಕೆ ಜೀವತುಂಬುತ್ತದೆ. ಶಾಲೆಯ ಮುಖ್ಯೋಪಾಧ್ಯಾಯನಾಗಿ, ಬ್ಯಾಂಕ್ ಒಂದರ ಎಂ.ಡಿ.ಯಾಗಿ, ಮಹಿಳಾ ರಾಜಕಾರಣಿಯಾಗಿ, ನಕಲಿ ವೈದ್ಯನಾಗಿ, ಜ್ಯೋತಿಷಿಯಾಗಿ, ಡ್ರೋನ್ ಪ್ರಚಂಡ ಎಂಬ ಪಾತ್ರದಲ್ಲಿ, ಚೀನಾ ಅಧ್ಯಕ್ಷನಾಗಿ ಹೀಗೆ ಆಯಾ ಪಾತ್ರವೇ ಆಗಿ ಬರುವ ಬೋಳಾರರಿಗೆ ಕಾರ್ಯಕ್ರಮ ನಿರೂಪಕ ಹಾಸ್ಯಮಿಶ್ರಿತವಾಗಿ ಗಂಭೀರ ಪ್ರಶ್ನೆಗಳನ್ನೆಸೆಯುತ್ತಾರೆ. ತನ್ನ ಪಾತ್ರವನ್ನೇ ವ್ಯಂಗ್ಯವಾಡುತ್ತಾ ವ್ಯವಸ್ಥೆ, ಪ್ರಭುತ್ವ, ರಾಜಕೀಯ ಕುತಂತ್ರ, ಇತ್ಯಾದಿಗಳನ್ನೆಲ್ಲಾ ತೀಕ್ಷ್ಣ ಹಾಸ್ಯದ ಮೂಲಕ ಬೋಳಾರ್ ವಿಡಂಬಿಸುತ್ತಾರೆ. ಈ ಕಾರ್ಯಕ್ರಮ ಮೇಲ್ನೋಟಕ್ಕೆ ಬರೀ ತಮಾಷೆಯಂತೆ ಕಂಡರೂ ಆಳದಲ್ಲಿ ಸಾಮಾಜಿಕ, ರಾಜಕೀಯ ಪ್ರಜ್ಞೆಯಿಂದ ಕೂಡಿದ ವ್ಯಂಗ್ಯ ತುಳುನಾಡಿನ ಸೋ ಕಾಲ್ಡ್ ಬುದ್ಧಿವಂತ ಜನರಲ್ಲಿ ಜಾಗೃತಿ ಮೂಡಿಸಬಹುದೇನೋ ಎಂಬ ಆಶಾಭಾವನೆ ಹುಟ್ಟುಹಾಕಿದೆ.

ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮಕ್ಕೆ ಕಾರಾಗೃಹ ಸಚಿವೆಯ ಪಾತ್ರದಲ್ಲಿ ಬಂದು ಹೆಣದ ರಾಜಕೀಯವನ್ನು ಹೇಗೆ ವಿಡಂಬಿಸುತ್ತಾರೆಂದರೆ ಇಲ್ಲಿ ಜಾತಿ, ಧರ್ಮ, ಹೆಣದ ರಾಜಕೀಯ ಮಾಡಲು ಬಲು ಸುಲಭ. ಇಲ್ಲಿರುವುದೇ ಹೆಣಗಳು ಎಂದು ಜನರ ಸಂವೇದನಾರಾಹಿತ್ಯವನ್ನು ವ್ಯಂಗ್ಯವಾಡುತ್ತಾರೆ. ಮಂತ್ರಿಯಾಗಲು ಬೇಕಾದ ಅರ್ಹತೆಯೇನು ಎಂಬ ನಿರೂಪಕನ ಪ್ರಶ್ನೆಗೆ “ಉದ್ರೇಕಕಾರಿಯಾಗಿ ಮಾತನಾಡಲು ಗೊತ್ತಿದ್ದರೆ ಸಾಕು” ಎಂದು ಮಾರ್ಮಿಕ ಉತ್ತರ ನೀಡುತ್ತಾರೆ. ವೀಕ್ಷಕಿಯೊಬ್ಬಳು ಕರೆ ಮಾಡಿ ತನ್ನ ಗಂಡ ಮಂಗವೊಂದನ್ನು ಕೊಂದ ತಪ್ಪಿಗಾಗಿ ಆರು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ ಎಂದು ಅಳಲು ತೋಡಿಕೊಂಡಾಗ “ಬುದ್ಧಿಯಿದ್ದವರು ಯಾರಾದರೂ ಮಂಗನನ್ನು ಕೊಲ್ಲುತ್ತಾರೆಯೇ..? ಬದಲಾಗಿ ಮನುಷ್ಯನನ್ನು ಕೊಂದಿದ್ದರೆ ಆರಾಮವಾಗಿ ತಿರುಗಾಡಬಹುದಿತ್ತು. ಮನುಷ್ಯರನ್ನು ಕೊಂದು ಜೈಲು ಸೇರಿದವರಿಗಿಂತ ಪ್ರಾಣಿಗಳನ್ನು ಕೊಂದು ಜೈಲು ಸೇರಿದವರೇ ಹೆಚ್ಚು” ಎಂದು ವ್ಯವಸ್ಥೆಯನ್ನು ಅಣಕಿಸುತ್ತಾರೆ.

ಕೋವಿಡ್-19ನ್ನು ಚೈನೀಸ್ ವೈರಸ್ ಎಂದಿದ್ದ ಟ್ರಂಪ್‌ಗೆ ಉತ್ತರವಾಗಿ ಚೀನಾದ ಅಧ್ಯಕ್ಷನ ಪಾತ್ರದಲ್ಲಿ ಬಂದ ಬೋಳಾರ್ ಅಮೆರಿಕಾದ ಜನತೆಯೇ ಆತನಿಗೆ ಕವಡೆ ಕಾಸಿನ ಬೆಲೆ ಕೊಡುವುದಿಲ್ಲ, ಇನ್ನು ನಾನ್ಯಾಕೆ ಆತನಿಗೆ ಉತ್ತರ ಕೊಟ್ಟು ಪ್ರಚಾರ ನೀಡಲಿ ಎಂದು ಮರುಪ್ರಶ್ನೆ ಹಾಕುತ್ತಾರೆ. ಚೀನಾದಲ್ಲಿ ಅವ್ಯಾಹತವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯಲಾಗುತ್ತಿದೆ ಎಂಬ ನಿರೂಪಕನ ಪ್ರಶ್ನೆಗೆ ಉತ್ತರಿಸುತ್ತಾ “ನಿಮ್ಮಲ್ಲೇನು ಕಡಿಮೆಯೇ..? ಆಳುವವರ ತಪ್ಪುಗಳ ವಿರುದ್ಧ ಮಾತನಾಡಿದರೆ ದೇಶದ್ರೋಹದ ಪಟ್ಟ ಕಟ್ಟಿ ಜೈಲಿಗಟ್ಟುವುದಿಲ್ಲವೇ..?” ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಸಮಕಾಲೀನ ಭಾರತದ ರಾಜಕೀಯ ವ್ಯವಸ್ಥೆಯನ್ನು ವಿಮರ್ಶಿಸುತ್ತಾರೆ.

ನೋಟು ಅಮಾನ್ಯೀಕರಣದಿಂದಾಗಿ ಜನತೆ ಅನುಭವಿಸಿದ ಸಂಕಷ್ಟಗಳನ್ನು, ಬ್ಯಾಂಕ್‌ಗಳ ಒಳಗುಟ್ಟುಗಳನ್ನು ಬ್ಯಾಂಕ್ ಎಂ.ಡಿ.ಪಾತ್ರದಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ. 2000 ನೋಟಿನಲ್ಲಿ ಚಿಪ್ ಇದೆ ಎಂದು ಥಕ ಥಕ ಕುಣಿದಿದ್ದವರಿಗೆ ನಾಟುವಂತೆ ಚಿಪ್ಪುಲಾ ಇಜ್ಜಿ, ಮರುವಾಯಿಲಾ ಇಜ್ಜಿ (ಮರುವಾಯಿ ಅಂದರೆ ಒಂದು ಬಗೆಯ ಚಿಪ್ಪು ಮೀನು) ಎನ್ನುತ್ತಾರೆ.

ಖಾಸಗಿ ಶಾಲಾ ಮುಖ್ಯೋಪಾಧ್ಯಾಯನಾಗಿ ಬಂದಾಗ ಆನ್‌ಲೈನ್ ಶಿಕ್ಷಣ ಹಾಗೂ ಗ್ರಾಮೀಣ ಭಾರತದ ವಾಸ್ತವವನ್ನು ತೆರೆದಿಡುತ್ತಾರೆ. ಆಗಾಗ ಟಿಆರ್‌ಪಿಯ ಬಗ್ಗೆ ಕುಟುಕುತ್ತಾ ನನ್ನನ್ನಿಲ್ಲಿ ಕೂರಿಸಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ನಿಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳುತ್ತೀರಿ ಎಂದು ಟಿವಿ ಚಾನೆಲ್‌ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಮಾಧ್ಯಮಗಳು ಪ್ರಭುತ್ವದ ಅಡಿಯಾಳಾಗಿರುವ ಇಂದಿನ ವಿಷಮಕಾಲದಲ್ಲಿ ಮಾಧ್ಯಮದ ಜವಾಬ್ದಾರಿಯೇನೆಂದು ತೋರಿಸಿಕೊಟ್ಟ ದೈಜಿ ವರ್ಲ್ಡ್ ಮತ್ತು ಕಲಾವಿದನಾಗಿ ತನ್ನ ಸಾಮಾಜಿಕ ಜವಾಬ್ದಾರಿಯೇನೆಂದು ತೋರಿಸಿಕೊಟ್ಟ ಬೋಳಾರರ ನಡೆ ಇಡೀ ದೇಶಕ್ಕೆ ಮಾದರಿ. ಒಂದು ಸ್ಥಳೀಯ ಚಾನೆಲ್ ಸ್ಥಳೀಯ ಭಾಷೆಯಲ್ಲಿ (ತುಳು) ನಡೆಸಿಕೊಡುವ ಈ ಕಾರ್ಯಕ್ರಮ ರಾಜ್ಯದಲ್ಲೇ ಒಂದು ಅಪೂರ್ವ ಮಾಧ್ಯಮ ಪ್ರಯೋಗ.


ಇದನ್ನೂ ಓದಿ: ಪ್ರವಾಹ, ಕೊರೊನಾ ಸಂದರ್ಭದಲ್ಲಿ ಕಣ್ಮರೆ, ಗಲಭೆ ಆದಾಗ ಪ್ರತ್ಯಕ್ಷ: ಯಾರಿವರು ಗೊತ್ತೇ? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...