Homeಕರ್ನಾಟಕಡಿ.ಜೆ. ಹಳ್ಳಿ ಗಲಭೆ: ಹಿಂದೂ ವಿರೋಧಿ ಪೋಸ್ಟ್‌ಗೆ ಉತ್ತರವಾಗಿ ಪಿ. ನವೀನ್ ಪ್ರವಾದಿ ನಿಂದನೆ ಪೋಸ್ಟ್...

ಡಿ.ಜೆ. ಹಳ್ಳಿ ಗಲಭೆ: ಹಿಂದೂ ವಿರೋಧಿ ಪೋಸ್ಟ್‌ಗೆ ಉತ್ತರವಾಗಿ ಪಿ. ನವೀನ್ ಪ್ರವಾದಿ ನಿಂದನೆ ಪೋಸ್ಟ್ ಹಾಕಿದ್ದನೆ?

ಡಿ.ಜೆ. ಹಳ್ಳಿ ಗಲಭೆಯ ಆರೋಪಿ ಪಿ. ನವೀನ್ ಹಿಂದೂ ವಿರೋಧಿ ಪೊಸ್ಟ್ ಒಂದಕ್ಕೆ ಉತ್ತರಿಸಿದ್ದರು, ಆದರೆ ಆ ಹಿಂದೂ ವಿರೋಧಿ ಪೋಸ್ಟ್ ಅನ್ನು ನಿರ್ಲಕ್ಷಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

- Advertisement -
- Advertisement -

ಈ ವಾರ ಬೆಂಗಳೂರಿನ ಹಿಂಸಾಚಾರಕ್ಕೆ ಕಾರಣವಾದ ಪಿ ನವೀನ್ ಕುಮಾರ್ ಎನ್ನುವವರು ತಮ್ಮ ಫೇಸ್‌ಬುಕ್ ಪೋಸ್ಟ್ ನಲ್ಲಿ ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನಿಸಿದ್ದು, ಹಿಂದೂ ದೇವತೆಯ ಬಗ್ಗೆ ಮುಸ್ಲಿಂ ವ್ಯಕ್ತಿಯೊಬ್ಬರು ಮಾಡಿದ ಅವಹೇಳನಕಾರಿ ಪೋಸ್ಟ್‌ಗೆ ಉತ್ತರವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅವರ ಪ್ರಕಾರ, ನವೀನ್ ಕುಮಾರ್ ಅವರ ಪೋಸ್ಟ್ ಅನ್ನು ಗುರಿ ಮಾಡಿ ಟೀಕಿಸಿದವರು, ಮುಸ್ಲಿಂ ವ್ಯಕ್ತಿ ಮಾಡಿದ ಅವಹೇಳನಕಾರಿ ಪೋಸ್ಟನ್ನು ನಿರ್ಲಕ್ಷಿಸಲಾಗಿದೆ. ಆದರೆ ಈ ಕುರಿತು ಫ್ಯಾಕ್ಟ್‌ ಚೆಕ್‌ ನಡೆಸಿದಾಗ ಇವುಗಳಲ್ಲಿ ಯಾವುದೂ ನಿಜವಲ್ಲ ಎಂದು ಕಂಡುಬಂದಿದೆ ಮತ್ತು ಫೋಟೊಶಾಪ್ ಮಾಡಿದ ಫೋಟೊವನ್ನು ಹರಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಗಲಭೆಯಲ್ಲಿ ಮೂರು ಜನರು ಸಾವನ್ನಪ್ಪಿದರು ಮತ್ತು 50 ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದೇನು?

ಬಶೀರ್ ಅಡ್ಯಾರ್ ಎಂಬ ವ್ಯಕ್ತಿಯು ಹಿಂದೂ ದೇವತೆ ಲಕ್ಷ್ಮಿಯನ್ನು ಅವಮಾನಿಸುವ ಮೂಲಕ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿದ್ದಾನೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಅದರೊಳಗೆ ತಂದು ಆ ಫೋಟೋ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಪೋಸ್ಟ್ ನಲ್ಲಿ ಲಕ್ಷ್ಮಿ ದೇವಿಯ ಬಗ್ಗೆ ಪ್ರಸಿದ್ಧ ಕವಿತೆಯ ಅವಹೇಳನಕಾರಿ ಆವೃತ್ತಿಯೂ ಇದೆ.

ಹಾಗಾಗಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ  ಸೋದರಳಿಯ 34 ವರ್ಷದ ನವೀನ್ ಈ ಪೋಸ್ಟ್ ಗೆ ಪ್ರವಾದಿ ಮೊಹಮ್ಮದ್ ಅವರ ಅವಹೇಳನಕಾರಿ ವ್ಯಂಗ್ಯಚಿತ್ರದೊಂದಿಗೆ ಉತ್ತರಿಸಿದ್ದರು ಎಂದು ಸಮರ್ಥಿಸಲಾಗಿದೆ.

ಇದೆ ರೀತಿಯ ಪೋಸ್ಟ್ ಗಳನ್ನು ಅನೇಕ ಸಾಮಾಜಿಕ ಜಾಲತಾಣದ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ ಅವುಗಳು ತೀರಾ ಅವಹೇಳನಕಾರಿಯಾಗಿರುವುದರಿಂದ ಇಲ್ಲಿ ಪ್ರಕಟಿಸಲಾಗುವುದಿಲ್ಲ.

ಫ್ಯಾಕ್ಟ್ ಚೆಕ್

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್‌ನ ಸ್ಕ್ರೀನ್‌ಶಾಟ್ ನಿಜವಲ್ಲ. ಅದರಲ್ಲಿ ಎಡಿಟ್ ಮಾಡಿರುವುದು ಕಂಡುಬಂದಿದೆ.

ವಾಸ್ತವದಲ್ಲಿ ಒಂದು ಪೋಸ್ಟ್‌ನ ನಂತರ ಕೆಳಗಿನ ಚಿತ್ರದಲ್ಲಿ ಇರುವಂತೆ ಕಾಮೆಂಟ್‌ಗಳು ಕಾಣಿಸಿಕೊಳ್ಳುವ ಮೊದಲು ತುಸು ಅಂತರದ ಜೊತೆಗೆ ಕಾಮೆಂಟ್‌ಗಳು, ಲೈಕ್‍ಗಳು ಮತ್ತು ಶೇರ್ ಗಳು ಎಂದು ಕಾಣುತ್ತದೆ.

ಇದಲ್ಲದೆ, ಕನ್ನಡದಲ್ಲಿ ಕೀವರ್ಡ್ ಗಳೊಂದಿಗೆ ಫೇಸ್‌ಬುಕ್‌ನಲ್ಲಿ ಹುಡುಕಿದಾಗ, ಬಶೀರ್ ಅಡ್ಯಾರ್ ಪೋಸ್ಟ್ ಅನ್ನು ಹಂಚಿದ ಹಲವಾರು ಬಳಕೆದಾರರನ್ನು ಕಾಣಬಹುದಾಗಿದೆ. ಆದರೆ ಅದು ಜೂನ್ 2018 ರಲ್ಲಿ ಮಾಡಿದ ಪೋಸ್ಟ್ ಗಳಾಗಿದೆ.

ಈ ಪೋಸ್ಟ್ ಗಳು ಬಶೀರ್ ಅಡ್ಯಾರ್ ಎಂಬ ವ್ಯಕ್ತಿ ಲಕ್ಷ್ಮಿ ದೇವತೆ ಮತ್ತು ಪ್ರಧಾನಿ ಮೋದಿ ಬಗ್ಗೆ ಅಶ್ಲೀಲ ಮತ್ತು ಅವಹೇಳನಕಾರಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾನೆ ಮತ್ತು ಭಕ್ತಿಗೀತೆಯ ಸಾಹಿತ್ಯವನ್ನು ಅಶ್ಲೀಲವಾಗಿ ತಿರುಚಿದ್ದಾನೆ ಎಂದು ಪೋಸ್ಟ್‌ಗಳು ತಿಳಿಸಿವೆ.

ಇದರ ಆರ್ಕೈವ್ ಗೆ ಇಲ್ಲಿ ಕ್ಲಿಕ್ ಮಾಡಿ

ಇದಲ್ಲದೆ, ಕನ್ನಡದಲ್ಲಿ ಬಶೀರ್ ಅಡ್ಯಾರ್ ಎಂದು ಗೂಗಲ್‌ನಲ್ಲಿ ಹುಡುಕಿದಾಗ, ಜೂನ್ 17, 2018 ರ ಕನ್ನಡ ದಿನಪತ್ರಿಕೆ ಪ್ರಜಾವಾಣಿ ದಿನಪತ್ರಿಕೆಯ ವರದಿಯನ್ನು ನೋಡಬಹುದಾಗಿದೆ.

ಅದರಲ್ಲಿ 2018 ರ ಜೂನ್‌ನಲ್ಲಿ ಬಶೀರ್ ಅಡ್ಯಾರ್ ಎಂಬ ಪ್ರೊಫೈಲ್‌ನಿಂದ ಅಪ್‌ಲೋಡ್ ಮಾಡಿದ ಈ ಅವಹೇಳನಕಾರಿ ಪೋಸ್ಟ್ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದೆ ಎಂದು ಹೇಳಿದೆ. ಅದೇ ಖಾತೆಯು ಛತ್ರಪತಿ ಶಿವಾಜಿಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಅನ್ನು ಅಪ್ಲೋಡ್ ಮಾಡಿದೆ ಎಂದು ಲೇಖನದಲ್ಲಿ ತಿಳಿಸಲಾಗಿದೆ.

ಜೂನ್ 2018 ರ ದಿ ಹಿಂದೂ ಲೇಖನವೊಂದರ ಪ್ರಕಾರ, ಮಂಗಳೂರಿನ ಪೊಲೀಸರು ಸ್ವಯಂ ಪ್ರೇರಿತ ದೂರನ್ನು ದಾಖಲಿಸಿದ್ದಾರೆ ಮತ್ತು ಬಶೀರ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಎ) ಮತ್ತು 505 (2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದಲ್ಲದೆ ಇದೆ ಹೇಳಿಕೆಯನ್ನು ಮಂಗಳೂರು ಟೈಮ್ಸ್ ಆಫ್ ಇಂಡಿಯಾದ ಪತ್ರಕರ್ತರ ಟ್ವೀಟ್ ನಲ್ಲಿ ಕೂಡಾ ಕಾಣಬಹುದಾಗಿದೆ.

ಆದ್ದರಿಂದ, ಹಿಂದೂ ದೇವತೆಗಳ ಬಗ್ಗೆ ಈ ಅವಹೇಳನಕಾರಿ ಪೋಸ್ಟ್ ಮಾಡಿದ್ದು ನಿಜವಾಗಿದ್ದರೂ, ಅದು ಇತ್ತೀಚಿನದಲ್ಲ ಅದು ಜೂನ್ 2018 ರ ಹಿಂದಿನದು ಎಂಬುದು ಸ್ಪಷ್ಟವಾಗಿದೆ. ಇದಲ್ಲದೆ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿದ ಖಾತೆಯ ಯಾವುದೇ ಕುರುಹು ಕೂಡಾ ಸಿಗಲಿಲ್ಲ. ಅದು ಹಿಂದೂವೊಬ್ಬರ ಪೋಸ್ಟ್ ಆಗಿದ್ದು ಬಶೀರ್ ಎಂಬ ಹೆಸರಿನಲ್ಲಿ ತೆರೆಯಲಾಗಿದೆ ಎಂಬ ಆರೋಪ ಕೂಡ ಇದೆ.

ಆದ್ದರಿಂದ ಫೇಸ್‌ಬುಕ್‌ನಲ್ಲಿ ಅಸ್ತಿತ್ವದಲ್ಲಿರದ ಪೋಸ್ಟ್‌ಗೆ ನವೀನ್ ಉತ್ತರಿಸಿರುವ ಸಾಧ್ಯತೆಯೆ ಇಲ್ಲ. ಇದು ಸುಳ್ಳು ಪ್ರಚಾರ ಮಾಡುವ ಸಲುವಾಗಿ 2018 ರ ಫೇಸ್‌ಬುಕ್ ಪೋಸ್ಟ್‌ನ ಫೋಟೋವನ್ನು ಡಾಕ್ಟರೇಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.


ಓದಿ: ಫ್ಯಾಕ್ಟ್‌‌ಚೆಕ್: ಹರಿಯಾಣ ಬಿಜೆಪಿ ಶಾಸಕನ ಮೇಲೆ ಹಲ್ಲೆ ನಡೆದಿದ್ದು ನಿಜವೆ?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಂದುವರಿದ ಬಿಜೆಪಿ ನಾಯಕರ ದ್ವೇಷ ಭಾಷಣ; ‘ಕಾಂಗ್ರೆಸ್ ದೇಶದಲ್ಲಿ ಷರಿಯಾ ಕಾನೂನು ಜಾರಿಗೆ ತರಲಿದೆ’...

0
ಸಂಪತ್ತು ಮರು ಹಂಚಿಕೆ ಕುರಿತು ದ್ವೇಷ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ನಂತರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಮಂಗಳವಾರ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 'ಕಾಂಗ್ರೆಸ್...