Homeಮುಖಪುಟತುಳು ರಂಗಭೂಮಿಯ ಸಾಕ್ಷಿಪ್ರಜ್ಞೆ ಅರವಿಂದ ಬೋಳಾರ್

ತುಳು ರಂಗಭೂಮಿಯ ಸಾಕ್ಷಿಪ್ರಜ್ಞೆ ಅರವಿಂದ ಬೋಳಾರ್

- Advertisement -
- Advertisement -

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕನ್ನಡದ ಎಲ್ಲಾ ಚಾನೆಲ್‌ಗಳು ದ್ವೇಷ ಬಿತ್ತುತ್ತಾ ಜನರನ್ನು ಭಯಭೀತರನ್ನಾಗಿಸುತ್ತಿದ್ದಾಗ ಮಂಗಳೂರಿನ ಸ್ಥಳೀಯ ಚಾನೆಲ್ ಆದ ದೈಜಿ ವರ್ಲ್ಡ್ ವಿನೂತನ ಪ್ರಯೋಗವೊಂದನ್ನು ಹುಟ್ಟುಹಾಕಿತು. ಪ್ರತಿಭಾವಂತ ಕಾರ್ಯಕ್ರಮ ನಿರೂಪಕರಾದ ವಾಲ್ಟರ್ ನಂದಳಿಕೆಯವರು ನಡೆಸಿಕೊಟ್ಟ “ಕೊರೊನಾ ಗೆಲ್ಲೋಣ” ಎಂಬ ಕಾರ್ಯಕ್ರಮದಲ್ಲಿ ತುಳುನಾಡಿನ ವಿವಿಧ ಕಲಾವಿದರನ್ನು ಸ್ಟುಡಿಯೋಗೆ ಕರೆಸಿ ಜನಜಾಗೃತಿ, ಮನರಂಜನೆಯ ಜೊತೆಗೆ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಅಗತ್ಯವಿರುವ ಕುಟುಂಬಗಳಿಗೆ ಕಿಟ್ ವಿತರಿಸುವುದರ ಮೂಲಕ ಬಡವರ ಸಂಕಷ್ಟಕ್ಕೆ ಸ್ಪಂದಿಸಿತು.

ಇದರ ಜೊತೆಗೆ ಪ್ರತಿ ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ಪ್ರಸಾರವಾಗುವ ಪ್ರೈವೇಟ್ ಚಾಲೆಂಜ್” ಎಂಬ ಕಾರ್ಯಕ್ರಮದಲ್ಲಿ ತೀಕ್ಷ್ಣವಾದ ವ್ಯಂಗ್ಯ, ವಿಡಂಬನೆಯೊಂದಿಗೆ ರಾಜಕೀಯ, ಸಾಮಾಜಿಕ ವಿಚಾರಗಳನ್ನೆತ್ತಿಕೊಂಡು ಚಿಕಿತ್ಸಕ ದೃಷ್ಟಿಯಲ್ಲಿ ವಿಶ್ಲೇಷಿಸುವ ಹೊಸ ವಿಧಾನಕ್ಕೆ ಕೈ ಹಾಕಿತು. ಸ್ಥಳೀಯ ಚಾನೆಲ್‌ವೊಂದರ ಇಂತಹ ಕಾರ್ಯಕ್ರಮ ಹೃಸ್ವ ಅವಧಿಯಲ್ಲಿ ಸುಮಾರು ಮೂರು ಲಕ್ಷದಷ್ಟು ವೀಕ್ಷಕರನ್ನು ಸಂಪಾದಿಸಲು ಸಾಧ್ಯವಾಗಿದೆಯೆಂದರೆ ಅದು ಆ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿ.

ಸದರಿ ಕಾರ್ಯಕ್ರಮದ ವಿಶೇಷ ವ್ಯಕ್ತಿ “ತುಳುನಾಡ ಮಾಣಿಕ್ಯ” ಎಂದೇ ಮನೆಮಾತಾಗಿರುವ ಅರವಿಂದ ಬೋಳಾರ್. ಇವರನ್ನು ತುಳುನಾಡಿನ ಚಾರ್ಲಿ ಚಾಪ್ಲಿನ್ ಎಂದರೆ ತಪ್ಪಾಗಲಾರದು. ಚಾರ್ಲಿ ಹೇಗೆ ತನ್ನ ಅದ್ಭುತ ನಟನೆಯ ಮೂಲಕ ವ್ಯವಸ್ಥೆಯನ್ನು ಅಣಕಿಸಿದನೋ ಅದೇ ರೀತಿ ಬೋಳಾರ್ ತನ್ನನ್ನು ತಾನು ಹಾಸ್ಯದ ವಸ್ತುವಾಗಿಸಿ ಬಹಳ ಸರಳವಾಗಿ, ಅಷ್ಟೇ ಸಹಜವಾಗಿ ಸೃಜನಶೀಲ ಮಾತುಗಾರಿಕೆಯಿಂದ, ಆಯಾಯ ಪಾತ್ರಗಳಿಗೆ ಸೂಕ್ತವೆನಿಸುವ ಕಾಸ್ಟ್ಯೂಮ್‌ಗಳನ್ನು ಧರಿಸಿ ಪ್ರಸ್ತುತ ಕಾಲಘಟ್ಟದೊಂದಿಗೆ ಮುಖಾಮುಖಿಯಾಗುತ್ತಾರೆ. ಚಾರ್ಲಿ ಚಾಪ್ಲಿನ್, ಕನ್ನಡದ ನರಸಿಂಹರಾಜು, ಅವರ ನಟನೆ, ಅವರುಗಳ ಮುಖ ನೋಡಿದ ಕೂಡಲೇ ಹೇಗೆ ನಗು ಉಕ್ಕಿ ಬರುತ್ತಿತ್ತೋ, ಹಾಗೆಯೇ ತುಳುರಂಗ ಭೂಮಿಯ ಬೋಳಾರರನ್ನು ಕಂಡ ಕೂಡಲೇ ಜನ ಬಿದ್ದು ಬಿದ್ದು ನಗತೊಡಗುತ್ತಾರೆ.


ಇದನ್ನೂ ಓದಿ: ಜ್ಯೋತಿಷಿ ವಿಡಂಬನೆ ಮಾಡಿದ ಅರವಿಂದ್ ಬೋಳಾರ್ ಮೇಲೆ ಕೇಸ್; ಕಲಾವಿದನ ಬೆನ್ನಿಗೆ ನಿಂತ ಕರಾವಳಿ


ದಕ್ಷಿಣ ಕನ್ನಡ ಜಿಲ್ಲೆಯ ಪ್ರಾದೇಶಿಕ ಭಾಷೆಗಳಾದ ತುಳು, ಬ್ಯಾರಿ, ಕೊಂಕಣಿಯನ್ನು ನಿರರ್ಗಳವಾಗಿ ಮಾತನಾಡಬಲ್ಲ ಬೋಳಾರರೆಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಬೋಳಾರ್ ತಮ್ಮ ಸಹಜ ಪ್ರತಿಭೆಯ ಮೂಲಕ ತುಳುರಂಗಭೂಮಿಯಲ್ಲಿ ಮಿಂಚತೊಡಗಿದರು. ನಾನು ವಿದ್ಯಾರ್ಥಿನಿಯಾಗಿದ್ದಾಗ ತುಳು ನಾಟಕಗಳಲ್ಲಿ ಎಂತಹ ಆಸಕ್ತಿಯಿತ್ತೆಂದರೆ ದೇವದಾಸ್ ಕಾಪಿಕಾಡ್, ನವೀನ್.ಡಿ.ಪಡೀಲರ ತುಳು ನಾಟಕಗಳ ಆಡಿಯೋ ಕ್ಯಾಸೆಟ್‌ಗಳನ್ನು ತಂದು ಟೇಪ್‌ರೆಕಾರ್ಡರ್‌ನಲ್ಲಿ ಹಾಕಿ ಆಲಿಸುತ್ತಿದ್ದೆ. ಅಷ್ಟೇ ಏಕೆ, ಅವರ ಪಂಚಿಂಗ್ ಡೈಲಾಗ್‌ಗಳನ್ನು ಯಥಾವತ್ತಾಗಿ ಅನುಕರಿಸುತ್ತಿದ್ದೆ. ನನಗಲ್ಲಿ ಹಾಸ್ಯದ ಹೊರತಾಗಿ ಮತ್ತೇನನ್ನೂ ಕೇಳಿಸಿಕೊಂಡ ನೆನಪಿಲ್ಲ. ಬಹುಶಃ ನನ್ನ ಆ ವಯಸ್ಸಿನ ಅರಿವಿನ ಇತಿಮಿತಿಗೆ ಗಂಭೀರ ವಿಚಾರಗಳು ಅರ್ಥವಾಗದಿದ್ದಿರಲೂಬಹುದು.

ತುಳು ರಂಗಭೂಮಿಯೆಂಬುವುದು ಕಮರ್ಷಿಯಲ್ ಸಿನಿಮಾಗಳಿದ್ದಂತೆ. ಒಟ್ಟಿನಲ್ಲಿ ತುಳು ರಂಗಭೂಮಿಯಲ್ಲಿ ಹಾಸ್ಯವೇ ಪ್ರಧಾನ. ಪ್ರೇಕ್ಷಕರ ಅಭಿರುಚಿಯ ನಾಡಿಮಿಡಿತ ಅರಿತು ಸ್ಕ್ರಿಪ್ಟ್ ಬರೆಯಲಾಗುತ್ತದೆ. ಕೆಲವು ನಾಟಕಗಳಲ್ಲಿ ಅಲ್ಲಲ್ಲಿ ದ್ವಂದ್ವಾರ್ಥದ ಹಾಸ್ಯಗಳನ್ನು ತುರುಕಲಾಗುತ್ತಿತ್ತು. ಇದರಿಂದಾಗಿ ಬುದ್ಧಿವಂತರೆನಿಸಿದ ಗಂಭೀರ ಪ್ರೇಕ್ಷಕರು ವಿಶೇಷ ಸಂದೇಶವಿರದ ತುಳುನಾಟಕಗಳಿಂದ ವಿಮುಖರಾದದ್ದೂ ಇದೆ.

ಆ ಬಳಿಕ ಹಾಸ್ಯಪ್ರಧಾನ ತುಳು ಸಿನಿಮಾಗಳು ಒಂದರ ಮೇಲೊಂದರಂತೆ ತೆರೆಗೆ ಬರತೊಡಗಿದಾಗ ತುಳು ನಾಟಕ ಪ್ರೇಮಿಗಳು ಅವುಗಳತ್ತಲೂ ಆಕರ್ಷಿತರಾಗತೊಡಗಿದರು. ಸಾಮಾಜಿಕ ಜಾಲತಾಣಗಳ ಬಳಕೆಯು ವ್ಯಾಪಕವಾಗುತ್ತಿದ್ದಂತೆಯೇ ತುಳುನಾಟಕಗಳ ಹಾಸ್ಯಮಯ ಕ್ಲಿಪ್‌ಗಳು ಹೆಚ್ಚೆಚ್ಚು ಹರಿದಾಡತೊಡಗಿದವು.

ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ರಾಜಕಾರಣಿಗಳನ್ನು, ವ್ಯವಸ್ಥೆಯನ್ನು ವ್ಯಂಗ್ಯವಾಡಲು ಜನ ಬೋಳಾರರ ಭಾವಚಿತ್ರವನ್ನು ಬಳಸತೊಡಗಿದರು. ಅವುಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ವಿರೋಧೀ ರಾಜಕೀಯ ಪಕ್ಷಗಳನ್ನು ವ್ಯಂಗ್ಯವಾಡಲು ಬೋಳಾರರ ಹಾಸ್ಯತುಣುಕುಗಳನ್ನು ಬಳಸತೊಡಗಿದರು. (ಎಲ್ಲವೂ ಅವರವರಿಗೆ ಬೇಕಾದಂತೆ).

ಇದೀಗ ದೈಜಿ ವರ್ಲ್ಡ್ ಚಾನೆಲ್‌ನ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮದಲ್ಲಿ ಪ್ರತೀ ಭಾನುವಾರವೂ ಒಂದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುವ ಬೋಳಾರರ ವೇಷಭೂಷಣ, ಮಾತುಗಾರಿಕೆ, ಹಾವಭಾವಗಳೆಲ್ಲವೂ ಆಯಾ ಪಾತ್ರಕ್ಕೆ ಜೀವತುಂಬುತ್ತದೆ. ಶಾಲೆಯ ಮುಖ್ಯೋಪಾಧ್ಯಾಯನಾಗಿ, ಬ್ಯಾಂಕ್ ಒಂದರ ಎಂ.ಡಿ.ಯಾಗಿ, ಮಹಿಳಾ ರಾಜಕಾರಣಿಯಾಗಿ, ನಕಲಿ ವೈದ್ಯನಾಗಿ, ಜ್ಯೋತಿಷಿಯಾಗಿ, ಡ್ರೋನ್ ಪ್ರಚಂಡ ಎಂಬ ಪಾತ್ರದಲ್ಲಿ, ಚೀನಾ ಅಧ್ಯಕ್ಷನಾಗಿ ಹೀಗೆ ಆಯಾ ಪಾತ್ರವೇ ಆಗಿ ಬರುವ ಬೋಳಾರರಿಗೆ ಕಾರ್ಯಕ್ರಮ ನಿರೂಪಕ ಹಾಸ್ಯಮಿಶ್ರಿತವಾಗಿ ಗಂಭೀರ ಪ್ರಶ್ನೆಗಳನ್ನೆಸೆಯುತ್ತಾರೆ. ತನ್ನ ಪಾತ್ರವನ್ನೇ ವ್ಯಂಗ್ಯವಾಡುತ್ತಾ ವ್ಯವಸ್ಥೆ, ಪ್ರಭುತ್ವ, ರಾಜಕೀಯ ಕುತಂತ್ರ, ಇತ್ಯಾದಿಗಳನ್ನೆಲ್ಲಾ ತೀಕ್ಷ್ಣ ಹಾಸ್ಯದ ಮೂಲಕ ಬೋಳಾರ್ ವಿಡಂಬಿಸುತ್ತಾರೆ. ಈ ಕಾರ್ಯಕ್ರಮ ಮೇಲ್ನೋಟಕ್ಕೆ ಬರೀ ತಮಾಷೆಯಂತೆ ಕಂಡರೂ ಆಳದಲ್ಲಿ ಸಾಮಾಜಿಕ, ರಾಜಕೀಯ ಪ್ರಜ್ಞೆಯಿಂದ ಕೂಡಿದ ವ್ಯಂಗ್ಯ ತುಳುನಾಡಿನ ಸೋ ಕಾಲ್ಡ್ ಬುದ್ಧಿವಂತ ಜನರಲ್ಲಿ ಜಾಗೃತಿ ಮೂಡಿಸಬಹುದೇನೋ ಎಂಬ ಆಶಾಭಾವನೆ ಹುಟ್ಟುಹಾಕಿದೆ.

ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮಕ್ಕೆ ಕಾರಾಗೃಹ ಸಚಿವೆಯ ಪಾತ್ರದಲ್ಲಿ ಬಂದು ಹೆಣದ ರಾಜಕೀಯವನ್ನು ಹೇಗೆ ವಿಡಂಬಿಸುತ್ತಾರೆಂದರೆ ಇಲ್ಲಿ ಜಾತಿ, ಧರ್ಮ, ಹೆಣದ ರಾಜಕೀಯ ಮಾಡಲು ಬಲು ಸುಲಭ. ಇಲ್ಲಿರುವುದೇ ಹೆಣಗಳು ಎಂದು ಜನರ ಸಂವೇದನಾರಾಹಿತ್ಯವನ್ನು ವ್ಯಂಗ್ಯವಾಡುತ್ತಾರೆ. ಮಂತ್ರಿಯಾಗಲು ಬೇಕಾದ ಅರ್ಹತೆಯೇನು ಎಂಬ ನಿರೂಪಕನ ಪ್ರಶ್ನೆಗೆ “ಉದ್ರೇಕಕಾರಿಯಾಗಿ ಮಾತನಾಡಲು ಗೊತ್ತಿದ್ದರೆ ಸಾಕು” ಎಂದು ಮಾರ್ಮಿಕ ಉತ್ತರ ನೀಡುತ್ತಾರೆ. ವೀಕ್ಷಕಿಯೊಬ್ಬಳು ಕರೆ ಮಾಡಿ ತನ್ನ ಗಂಡ ಮಂಗವೊಂದನ್ನು ಕೊಂದ ತಪ್ಪಿಗಾಗಿ ಆರು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ ಎಂದು ಅಳಲು ತೋಡಿಕೊಂಡಾಗ “ಬುದ್ಧಿಯಿದ್ದವರು ಯಾರಾದರೂ ಮಂಗನನ್ನು ಕೊಲ್ಲುತ್ತಾರೆಯೇ..? ಬದಲಾಗಿ ಮನುಷ್ಯನನ್ನು ಕೊಂದಿದ್ದರೆ ಆರಾಮವಾಗಿ ತಿರುಗಾಡಬಹುದಿತ್ತು. ಮನುಷ್ಯರನ್ನು ಕೊಂದು ಜೈಲು ಸೇರಿದವರಿಗಿಂತ ಪ್ರಾಣಿಗಳನ್ನು ಕೊಂದು ಜೈಲು ಸೇರಿದವರೇ ಹೆಚ್ಚು” ಎಂದು ವ್ಯವಸ್ಥೆಯನ್ನು ಅಣಕಿಸುತ್ತಾರೆ.

ಕೋವಿಡ್-19ನ್ನು ಚೈನೀಸ್ ವೈರಸ್ ಎಂದಿದ್ದ ಟ್ರಂಪ್‌ಗೆ ಉತ್ತರವಾಗಿ ಚೀನಾದ ಅಧ್ಯಕ್ಷನ ಪಾತ್ರದಲ್ಲಿ ಬಂದ ಬೋಳಾರ್ ಅಮೆರಿಕಾದ ಜನತೆಯೇ ಆತನಿಗೆ ಕವಡೆ ಕಾಸಿನ ಬೆಲೆ ಕೊಡುವುದಿಲ್ಲ, ಇನ್ನು ನಾನ್ಯಾಕೆ ಆತನಿಗೆ ಉತ್ತರ ಕೊಟ್ಟು ಪ್ರಚಾರ ನೀಡಲಿ ಎಂದು ಮರುಪ್ರಶ್ನೆ ಹಾಕುತ್ತಾರೆ. ಚೀನಾದಲ್ಲಿ ಅವ್ಯಾಹತವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯಲಾಗುತ್ತಿದೆ ಎಂಬ ನಿರೂಪಕನ ಪ್ರಶ್ನೆಗೆ ಉತ್ತರಿಸುತ್ತಾ “ನಿಮ್ಮಲ್ಲೇನು ಕಡಿಮೆಯೇ..? ಆಳುವವರ ತಪ್ಪುಗಳ ವಿರುದ್ಧ ಮಾತನಾಡಿದರೆ ದೇಶದ್ರೋಹದ ಪಟ್ಟ ಕಟ್ಟಿ ಜೈಲಿಗಟ್ಟುವುದಿಲ್ಲವೇ..?” ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಸಮಕಾಲೀನ ಭಾರತದ ರಾಜಕೀಯ ವ್ಯವಸ್ಥೆಯನ್ನು ವಿಮರ್ಶಿಸುತ್ತಾರೆ.

ನೋಟು ಅಮಾನ್ಯೀಕರಣದಿಂದಾಗಿ ಜನತೆ ಅನುಭವಿಸಿದ ಸಂಕಷ್ಟಗಳನ್ನು, ಬ್ಯಾಂಕ್‌ಗಳ ಒಳಗುಟ್ಟುಗಳನ್ನು ಬ್ಯಾಂಕ್ ಎಂ.ಡಿ.ಪಾತ್ರದಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ. 2000 ನೋಟಿನಲ್ಲಿ ಚಿಪ್ ಇದೆ ಎಂದು ಥಕ ಥಕ ಕುಣಿದಿದ್ದವರಿಗೆ ನಾಟುವಂತೆ ಚಿಪ್ಪುಲಾ ಇಜ್ಜಿ, ಮರುವಾಯಿಲಾ ಇಜ್ಜಿ (ಮರುವಾಯಿ ಅಂದರೆ ಒಂದು ಬಗೆಯ ಚಿಪ್ಪು ಮೀನು) ಎನ್ನುತ್ತಾರೆ.

ಖಾಸಗಿ ಶಾಲಾ ಮುಖ್ಯೋಪಾಧ್ಯಾಯನಾಗಿ ಬಂದಾಗ ಆನ್‌ಲೈನ್ ಶಿಕ್ಷಣ ಹಾಗೂ ಗ್ರಾಮೀಣ ಭಾರತದ ವಾಸ್ತವವನ್ನು ತೆರೆದಿಡುತ್ತಾರೆ. ಆಗಾಗ ಟಿಆರ್‌ಪಿಯ ಬಗ್ಗೆ ಕುಟುಕುತ್ತಾ ನನ್ನನ್ನಿಲ್ಲಿ ಕೂರಿಸಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ನಿಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳುತ್ತೀರಿ ಎಂದು ಟಿವಿ ಚಾನೆಲ್‌ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಮಾಧ್ಯಮಗಳು ಪ್ರಭುತ್ವದ ಅಡಿಯಾಳಾಗಿರುವ ಇಂದಿನ ವಿಷಮಕಾಲದಲ್ಲಿ ಮಾಧ್ಯಮದ ಜವಾಬ್ದಾರಿಯೇನೆಂದು ತೋರಿಸಿಕೊಟ್ಟ ದೈಜಿ ವರ್ಲ್ಡ್ ಮತ್ತು ಕಲಾವಿದನಾಗಿ ತನ್ನ ಸಾಮಾಜಿಕ ಜವಾಬ್ದಾರಿಯೇನೆಂದು ತೋರಿಸಿಕೊಟ್ಟ ಬೋಳಾರರ ನಡೆ ಇಡೀ ದೇಶಕ್ಕೆ ಮಾದರಿ. ಒಂದು ಸ್ಥಳೀಯ ಚಾನೆಲ್ ಸ್ಥಳೀಯ ಭಾಷೆಯಲ್ಲಿ (ತುಳು) ನಡೆಸಿಕೊಡುವ ಈ ಕಾರ್ಯಕ್ರಮ ರಾಜ್ಯದಲ್ಲೇ ಒಂದು ಅಪೂರ್ವ ಮಾಧ್ಯಮ ಪ್ರಯೋಗ.


ಇದನ್ನೂ ಓದಿ: ಪ್ರವಾಹ, ಕೊರೊನಾ ಸಂದರ್ಭದಲ್ಲಿ ಕಣ್ಮರೆ, ಗಲಭೆ ಆದಾಗ ಪ್ರತ್ಯಕ್ಷ: ಯಾರಿವರು ಗೊತ್ತೇ? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...