Homeಡೇಟಾ ಖೋಲಿಪೀಕ ವಿಮೆ ದಂಧೀ ಒಳಗಾ ಲಾಭ ನಷ್ಟದ ಕತಿ : ಬೈ ಡೇಟಾಮ್ಯಾಟಿಕ್ಸ್

ಪೀಕ ವಿಮೆ ದಂಧೀ ಒಳಗಾ ಲಾಭ ನಷ್ಟದ ಕತಿ : ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

ನಾವು ಕಷ್ಟಪಟ್ಟು ಬೆಳೆದ ಪೀಕ ‘ದೇವರ ಕೈ’ ಆಟದಿಂದ ಹಾಳಾಗಿ ಹೋದರ ಸರಕಾರನೋ, ಖಾಸಗಿ ಕಂಪನಿನೋ ನಮ್ಮ ನಷ್ಟ ಭರ್ತಿ ಮಾಡಿಕೊಡೋ ವ್ಯವಸ್ಥೆಗೆ ಬೆಳೆವಿಮೆ ಅಂತ ಹೆಸರು. (ಈ ‘ದೇವರ ಕೈ’ ಅನ್ನೋದು ರಾಷ್ಟ್ರೀಯ ಬೆಳೆವಿಮೆ ಯೋಜನೆಯ ತಾಕೀತುಗಳಲ್ಲಿ ಒಂದು.)

ಹಂಗಾರ ಇತರ ತಾಕೀತುಗಳೇನು? ಈ ಯೋಜನೆಯ ವಿವರಗಳು ಏನು?

ಮೊದಲಿಗೆ ಈ ಯೋಜನೆ ಬಂದಿದ್ದು ಇಂದಿರಾಗಾಂಧಿಯವರ ನಿಧನದ ನಂತರ ಬಂದ ಕಾಂಗ್ರೆಸ್ ಸರಕಾರದ ತಲಿಯೊಳಗ. 1985ರಾಗ ಈ ಯೋಜನೆ ತಂದಾಗ ಬರೇ 7 ಶೇಕಡಾ ರೈತರು ಇದರ ಉಪಯೋಗ ಪಡದರು. ನಂತರ 2000ದೊಳಗ 10 ಶೇಕಡಾ ಹಾಗೂ 2018ರೊಳಗ 26 ಶೇಕಡಾ ರೈತರು ಇದರೊಳಗ ಇದ್ದಾರ. 2016ಕ್ಕೆ ಹೋಲಿಸಿದರ ಶೇಕಡಾ 15 ರೈತರು ಈ ಯೋಜನೆಯಿಂದ ಹಿಂದ ಸರದಾರ. ಭಾರತದ ಶೇಕಡಾ 30ಕ್ಕೂ ಕಮ್ಮಿ ಕೃಷಿಭೂಮಿ ಇಂತಹ ಯೋಜನೆಗಳ ಕೆಳಗ ಅದ.

ನಮಗೆಲ್ಲಾರಿಗೂ ಗೊತ್ತಿರೋ ಎಲ್‍ಐಸಿ ಹಂಗನ, ಬೆಳೆ ವಿಮೆಗೆ ಏಐಸಿ (ಅಗ್ರಿಕಲ್ಚರ್ ಇನ್ಷುರನ್ಸ ಕಾರ್ಪೊರೇಷನ್ನು ‘ಕೃವಿನಿ’) ಅಂತ ಒಂದು ಅದ. ನರೇಂದ್ರ ಅವತಾರದ ಸರಕಾರ ಬರೋವರೆಗೂ ಇಡೀ ದೇಶದ ಕೃಷಿವಿಮೆ ಜವಾಬುದಾರಿ ಅದಕ್ಕ ಇತ್ತು. ಹಂಗ ಇರಬಾರದು ಖಾಸಗಿ ಕಂಪನಿಗಳಿಗೂ ಸೇವೆಯ ಅವಕಾಶ ಸಿಗಲಿ ಅಂತಹೇಳಿ ಅವರನ್ನು ಇದರೊಳಗ ಬರಮಾಡಲಾಯಿತು. ಸುಮಾರು ಹತ್ತು ಖಾಸಗಿ ಕಂಪನಿಗಳಿಗೆ ದೇಶವನ್ನು ಕೃಷಿ -ಹವಾಮಾನ ಘಟಕಗಳಾಗಿ ಹಂಚಿಕೊಡಲಾಯಿತು. ಅದರೊಳಗ ಐಸಿಐಸಿಐ, ಇಫ್ಕೋ ಟೋಕಿಯೋ, ಎಚ್‍ಡಿಎಫ್‍ಸಿ, ಚೋಲಮಂಡಲಂ, ಬಜಾಜು, ರಿಲೈಯನ್ಸ್, ಟಾಟಾ, ಎಸ್‍ಬಿಐ, ಫ್ಯೂಚರ್, ಯುನಿವರ್ಸಲ್ ಸೊಂಪೋ ಮುಂತಾದ ಸಂಪಾದ ಕಂಪನಿಗಳು ಇದ್ದವು.

ರೈತರು ಕೇವಲ ಶೇಕಡಾ ಎರಡು ವಿಮೆ ಕಂತು ತುಂಬಬೇಕು, ಕೇಂದ್ರ ಹಾಗೂ ರಾಜ್ಯ ತಲಾ ಶೇಕಡಾ 49 ತುಂಬಬೇಕು. ನಷ್ಟದ ಅಂದಾಜನ್ನು ರಾಜ್ಯ ಸರಕಾರ ಮಾಡಬೇಕು. ಪರಿಹಾರಧನವನ್ನು ರೈತರಿಗೆ ವಿಮಾ ಕಂಪನಿಗಳು ನೀಡಬೇಕು ಅಂತ ಯೋಜನೆ ತಯಾರಿಸಿ ಅದನ್ನು ಪ್ರಧಾನಮಂತ್ರಿಗಳ ಬ್ರ್ಯಾಂಡಿನ ಮ್ಯಾಲೆ ಹಾರಿ ಬಿಡಲಾಯಿತು. ರಾಮಾಯಣದಾಗ ಕಲ್ಲಿನ ಮ್ಯಾಲೆ ರಾಮ ಅಂತ ಬರದರ ಅವು ನೀರಾಗ ತೇಲತಿದ್ದವಂತ. ನಾಮ ಬಲ ಅಂದರ ಅಷ್ಟು ದೊಡ್ಡದು. ಹಿಂತಾ ಚಮತ್ಕಾರ ಈ ಕಲಿಯುಗದೊಳಗ ನಡೀಲೀ ಅಂತ ಅದರ ಹೆಸರು ಬದಲಾವಣೆ ಆತು. ಆ ಯೋಜನೆ ತೇಲಿತೋ ಮುಳುಗಿತೋ, ಪ್ರವಾಹದಾಗ ಬೆಳಿ ಕಳಕೊಂಡ ರೈತರ ಹೇಳಬೇಕು.

ಕಂತಿನ ಹಣ ಕೃಷಿ, ನೀರಾವರಿ ಹಾಗೂ ತೋಟಗಾರಿಕೆ ಭೂಮಿಯೊಳಗ ಪರಿಹಾರದ ಶೇಕಡಾ 1.5, 2 ಹಾಗೂ 5 ಅಂತ ನಿಗದಿ ಮಾಡಲಾಯಿತು. ಆದರ ಅದರಾಗ ಕೆಲವು ಸಮಸ್ಯಾ ಇದ್ದವು. ಉದಾಹರಣೆಗೆ ರೈತ ಹಾನಿಯಾದ 48 ಗಂಟೆಯೊಳಗ ವಿಮಾ ಕಂಪನಿಗೆ ಫೋನು ಮಾಡಿ ತಿಳಿಸಬೇಕು. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಪ್ರವಾಹ ಬಂದಾಗ ರೈತರು 28 ಗಂಟೆ ಮಟಾ ಗಿಡದ ಕೊಂಬಿಗೆ ಜೋತಾಡುತ್ತಾ ಇದ್ದರು. ಅವರು ಹೆಂಗ ಫೋನು ಮಾಡ್ಯಾರು? ಆದರೂ ಈ ಮೂರು ವರ್ಷದೊಳಗ ಕಂಪನಿಗಳು ಬಂಗಾರದ ಅದಿರಿನ ಹಿಂದೆ ಬಿದ್ದ ದಾಹಿಗಳಂಗ ನಿರಾಸೆ ವ್ಯಕ್ತ ಪಡಿಸಿದರು.

‘ಇದು ನಮಗ ಲಾಭದಾಯಕ ಅಲ್ಲ, ನಮ್ಮ ಮರು ವಿಮೆ ಹಾಗೂ ಆಡಳಿತ ವೆಚ್ಚಗಳು ಭಾಳ ಆಗತಾವ. ಲಾಭಾಂಶ ಕಮ್ಮಿ. ಇದು ನಮಗ ಬ್ಯಾಡ ಅಂತ ಹೇಳಿದರು. ಸರಕಾರಿ ಸಂಸ್ಥೆಗಳಿಗೆನ ಇದರ ನೊಗ ಹೊರಸರಿ ನಾವು ಒಲ್ಲಿವಿ, ಅಂತ ಆಟ ಗೂಟ ಜೈ’ ಅಂದರು.

ಹಿಂಗಾರ ಅವರಿಗೆ ಆದ ನಷ್ಟ ಏನು ನೋಡುಣು ಬನ್ರಿಪಾ.

ಪ್ರಧಾನ ಮಂತ್ರಿ ಫಸಲು ಬೀಮಾ ಯೋಜನೆ ಆರಂಭವಾದ ಮೂರು ವರ್ಷದಾಗ (ನಂತರದ ವರ್ಷಗಳ ಡೇಟಾ ಸರಕಾರದಿಂದ ಇನ್ನೂ ಲಭ್ಯ ಆಗಿಲ್ಲ)- ಈ ಕಂಪನಿಗಳು ಸುಮಾರು 76 ಸಾವಿರ ಕೋಟಿ ಕಂತು ವಸೂಲು ಮಾಡ್ಯಾವು. ಇದರೊಳಗ ಸುಮಾರು 75 ಸಾವಿರ ಕೋಟಿ ತೆರಿಗೆದಾರರ ದುಡ್ಡು. ಬೆಳೆ ನಾಶ, ಬರ, ಪ್ರವಾಹ ಮುಂತಾದ ವೈಪರೀತ್ಯಗಳಾಗಿದ್ದಕ್ಕ ರೈತರಿಗೆ ಸಿಕ್ಕ ಪರಿಹಾರ ಸುಮಾರು 56 ಸಾವಿರ ಕೋಟಿ. ಅಂದರ ಈ ಕಂಪನಿಗಳು ನಿವ್ವಳ 27 ಶೇಕಡಾ ಲಾಭದಾಗ ಇದ್ದಾವು. ಅವು ಮರು ವಿಮೆ ಮೊತ್ತ ಶೇಕಡಾ 10 ಹಾಗೂ ಆಡಳಿತ ವೆಚ್ಚ ಶೇಕಡಾ 5 ಇದ್ದದ್ದರಿಂದ ಶೇಕಡಾ 12 ಲಾಭ ಗಳಿಸಿದಂಗ. ಆದರ ಇದು ಅವುಗಳ ಶೇರುದಾರರಿಗೆ ಕಮ್ಮಿ ಅನ್ನಿಸಿದ್ದಕ್ಕ ಆ ಮೊದಲಿನ ಹತ್ತು ಕಂಪನಿಗಳಲ್ಲಿ ಕೆಲವು ಈ ಯೋಜನೆಯಿಂದ ಹಿಂದ ಸರದಾವ. ಇನ್ನೂ ಸುಮಾರು ನಾಕು ಸಾವಿರ ಕೋಟಿ ಪರಿಹಾರ ಧನ ಕೊಡೋ ಬಾಕಿ ಉಳದೈತಿ.

ಹಂಗಾರ ಈ ಧಂದೇನ ಹಿಂಗೇನು ಮತ್ತ? ಹಂಗೇನಿಲ್ಲ. ಸರಕಾರಿ ವಿಮಾ ಕಂಪನಿಯ ಲೆಕ್ಕ ಪಟ್ಟಿ ನೋಡಿದರ ಇದು ಗೊತ್ತಾಗತದ. ಏಐಸಿ ಅಥವಾ ‘ಕೃವಿನಿ’ ಕಳೆದ ವರ್ಷ ಸುಮಾರು 7893 ಕೋಟಿ ರೂಪಾಯಿ ಕಂತು ಪಡೆದು 7040 ಕೋಟಿ ರೂಪಾಯಿ ಪರಿಹಾರ ಕೊಟ್ಟದ. ಇದು ಸುಮಾರು ಶೇಕಡಾ 90ರಷ್ಟು. ಇವರಿಗೂ ಮರುವಿಮೆ ಹಾಗೂ ಆಡಳಿತ ವೆಚ್ಚ ಅಂತ ಅದಾವು. ಸರಕಾರಿ ಸಂಸ್ಥೆ ಆದ್ದರಿಂದ ಸಿಬ್ಬಂದಿ ವೆಚ್ಚನೂ ಅದಾನಿ- ಅಂಬಾನಿಗಿಂತ ಹೆಚ್ಚು. ಆದರೂ ಇವರು ಯಾಕ ಹೆಚ್ಚು ಕೊಡಲಿಕ್ಕೆ ಆಯಿತು. ಅವರು ಇಷ್ಟೇ ಮೊತ್ತದ ಪರಿಹಾರ ಕೊಡತಿದ್ದರು ಅಂದರ ಇವರನ್ನ ತಗದು ಖಾಸಗಿ ಕಂಪನಿಗಳನ್ನು ಕರದು ಕರದು ಕೊಟ್ಟಿದ್ದು ಯಾಕೆ? ಮೊದಲ ಮೂರು ವರ್ಷ 76 ಸಾವಿರ ಕೋಟಿ ಹಣ ಹೊಡದುಕೊಂಡು ಆಮ್ಯಾಲೆ ನಾವಲ್ಲ ಅಂದರಲ್ಲಾ, ಅದನ್ನು ಮೊದಲೇ ಯಾಕೆ ಊಹಿಸಲಿಲ್ಲ? ಐದು ವರ್ಷ- ಹತ್ತು ವರ್ಷದ ದೀರ್ಘಕಾಲೀನ ಕರಾರಿನ ಕಂಟ್ರಾಕ್ಟಗಳನ್ನ ಯಾಕೆ ಕರೀಲಿಲ್ಲ? ಸರಕಾರಿ ಸಂಸ್ಥೆಗೆ ಕೇವಲ ಶೇಕಡಾ 10 ರಷ್ಟು ಕೃಷಿಭೂಮಿಯನ್ನ ಮಾತ್ರ ಬಿಟ್ಟು ಕೊಟ್ಟರು?

ಇಲಿಗಳ ರಾಜ್ಯದಲ್ಲಿ ಬೆಕ್ಕಿಗೆ ಗಂಟೀ ಕಟ್ಟೂದಲ್ಲಾ, ಅದಕ್ಕ ಸವಾಲು ಕೇಳೋದೂ ಸಹಿತ ಸಾಧ್ಯವಿಲ್ಲ.

ವಿವರಗಳಿಗೆ:mhttps://pmfby.gov.inwww.aicofindia.com

ಪೀಕ (ಹೆಚ್ಚು ಕಡಿಮೆ ಪೀಕ್ ಎಂದು ಉಚ್ಚರಿಸುವ ಪೀಕ ಅಂದ್ರ ಬೆಳಿ – ಬೆಳೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...