Homeಡೇಟಾ ಖೋಲಿಪೀಕ ವಿಮೆ ದಂಧೀ ಒಳಗಾ ಲಾಭ ನಷ್ಟದ ಕತಿ : ಬೈ ಡೇಟಾಮ್ಯಾಟಿಕ್ಸ್

ಪೀಕ ವಿಮೆ ದಂಧೀ ಒಳಗಾ ಲಾಭ ನಷ್ಟದ ಕತಿ : ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

ನಾವು ಕಷ್ಟಪಟ್ಟು ಬೆಳೆದ ಪೀಕ ‘ದೇವರ ಕೈ’ ಆಟದಿಂದ ಹಾಳಾಗಿ ಹೋದರ ಸರಕಾರನೋ, ಖಾಸಗಿ ಕಂಪನಿನೋ ನಮ್ಮ ನಷ್ಟ ಭರ್ತಿ ಮಾಡಿಕೊಡೋ ವ್ಯವಸ್ಥೆಗೆ ಬೆಳೆವಿಮೆ ಅಂತ ಹೆಸರು. (ಈ ‘ದೇವರ ಕೈ’ ಅನ್ನೋದು ರಾಷ್ಟ್ರೀಯ ಬೆಳೆವಿಮೆ ಯೋಜನೆಯ ತಾಕೀತುಗಳಲ್ಲಿ ಒಂದು.)

ಹಂಗಾರ ಇತರ ತಾಕೀತುಗಳೇನು? ಈ ಯೋಜನೆಯ ವಿವರಗಳು ಏನು?

ಮೊದಲಿಗೆ ಈ ಯೋಜನೆ ಬಂದಿದ್ದು ಇಂದಿರಾಗಾಂಧಿಯವರ ನಿಧನದ ನಂತರ ಬಂದ ಕಾಂಗ್ರೆಸ್ ಸರಕಾರದ ತಲಿಯೊಳಗ. 1985ರಾಗ ಈ ಯೋಜನೆ ತಂದಾಗ ಬರೇ 7 ಶೇಕಡಾ ರೈತರು ಇದರ ಉಪಯೋಗ ಪಡದರು. ನಂತರ 2000ದೊಳಗ 10 ಶೇಕಡಾ ಹಾಗೂ 2018ರೊಳಗ 26 ಶೇಕಡಾ ರೈತರು ಇದರೊಳಗ ಇದ್ದಾರ. 2016ಕ್ಕೆ ಹೋಲಿಸಿದರ ಶೇಕಡಾ 15 ರೈತರು ಈ ಯೋಜನೆಯಿಂದ ಹಿಂದ ಸರದಾರ. ಭಾರತದ ಶೇಕಡಾ 30ಕ್ಕೂ ಕಮ್ಮಿ ಕೃಷಿಭೂಮಿ ಇಂತಹ ಯೋಜನೆಗಳ ಕೆಳಗ ಅದ.

ನಮಗೆಲ್ಲಾರಿಗೂ ಗೊತ್ತಿರೋ ಎಲ್‍ಐಸಿ ಹಂಗನ, ಬೆಳೆ ವಿಮೆಗೆ ಏಐಸಿ (ಅಗ್ರಿಕಲ್ಚರ್ ಇನ್ಷುರನ್ಸ ಕಾರ್ಪೊರೇಷನ್ನು ‘ಕೃವಿನಿ’) ಅಂತ ಒಂದು ಅದ. ನರೇಂದ್ರ ಅವತಾರದ ಸರಕಾರ ಬರೋವರೆಗೂ ಇಡೀ ದೇಶದ ಕೃಷಿವಿಮೆ ಜವಾಬುದಾರಿ ಅದಕ್ಕ ಇತ್ತು. ಹಂಗ ಇರಬಾರದು ಖಾಸಗಿ ಕಂಪನಿಗಳಿಗೂ ಸೇವೆಯ ಅವಕಾಶ ಸಿಗಲಿ ಅಂತಹೇಳಿ ಅವರನ್ನು ಇದರೊಳಗ ಬರಮಾಡಲಾಯಿತು. ಸುಮಾರು ಹತ್ತು ಖಾಸಗಿ ಕಂಪನಿಗಳಿಗೆ ದೇಶವನ್ನು ಕೃಷಿ -ಹವಾಮಾನ ಘಟಕಗಳಾಗಿ ಹಂಚಿಕೊಡಲಾಯಿತು. ಅದರೊಳಗ ಐಸಿಐಸಿಐ, ಇಫ್ಕೋ ಟೋಕಿಯೋ, ಎಚ್‍ಡಿಎಫ್‍ಸಿ, ಚೋಲಮಂಡಲಂ, ಬಜಾಜು, ರಿಲೈಯನ್ಸ್, ಟಾಟಾ, ಎಸ್‍ಬಿಐ, ಫ್ಯೂಚರ್, ಯುನಿವರ್ಸಲ್ ಸೊಂಪೋ ಮುಂತಾದ ಸಂಪಾದ ಕಂಪನಿಗಳು ಇದ್ದವು.

ರೈತರು ಕೇವಲ ಶೇಕಡಾ ಎರಡು ವಿಮೆ ಕಂತು ತುಂಬಬೇಕು, ಕೇಂದ್ರ ಹಾಗೂ ರಾಜ್ಯ ತಲಾ ಶೇಕಡಾ 49 ತುಂಬಬೇಕು. ನಷ್ಟದ ಅಂದಾಜನ್ನು ರಾಜ್ಯ ಸರಕಾರ ಮಾಡಬೇಕು. ಪರಿಹಾರಧನವನ್ನು ರೈತರಿಗೆ ವಿಮಾ ಕಂಪನಿಗಳು ನೀಡಬೇಕು ಅಂತ ಯೋಜನೆ ತಯಾರಿಸಿ ಅದನ್ನು ಪ್ರಧಾನಮಂತ್ರಿಗಳ ಬ್ರ್ಯಾಂಡಿನ ಮ್ಯಾಲೆ ಹಾರಿ ಬಿಡಲಾಯಿತು. ರಾಮಾಯಣದಾಗ ಕಲ್ಲಿನ ಮ್ಯಾಲೆ ರಾಮ ಅಂತ ಬರದರ ಅವು ನೀರಾಗ ತೇಲತಿದ್ದವಂತ. ನಾಮ ಬಲ ಅಂದರ ಅಷ್ಟು ದೊಡ್ಡದು. ಹಿಂತಾ ಚಮತ್ಕಾರ ಈ ಕಲಿಯುಗದೊಳಗ ನಡೀಲೀ ಅಂತ ಅದರ ಹೆಸರು ಬದಲಾವಣೆ ಆತು. ಆ ಯೋಜನೆ ತೇಲಿತೋ ಮುಳುಗಿತೋ, ಪ್ರವಾಹದಾಗ ಬೆಳಿ ಕಳಕೊಂಡ ರೈತರ ಹೇಳಬೇಕು.

ಕಂತಿನ ಹಣ ಕೃಷಿ, ನೀರಾವರಿ ಹಾಗೂ ತೋಟಗಾರಿಕೆ ಭೂಮಿಯೊಳಗ ಪರಿಹಾರದ ಶೇಕಡಾ 1.5, 2 ಹಾಗೂ 5 ಅಂತ ನಿಗದಿ ಮಾಡಲಾಯಿತು. ಆದರ ಅದರಾಗ ಕೆಲವು ಸಮಸ್ಯಾ ಇದ್ದವು. ಉದಾಹರಣೆಗೆ ರೈತ ಹಾನಿಯಾದ 48 ಗಂಟೆಯೊಳಗ ವಿಮಾ ಕಂಪನಿಗೆ ಫೋನು ಮಾಡಿ ತಿಳಿಸಬೇಕು. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಪ್ರವಾಹ ಬಂದಾಗ ರೈತರು 28 ಗಂಟೆ ಮಟಾ ಗಿಡದ ಕೊಂಬಿಗೆ ಜೋತಾಡುತ್ತಾ ಇದ್ದರು. ಅವರು ಹೆಂಗ ಫೋನು ಮಾಡ್ಯಾರು? ಆದರೂ ಈ ಮೂರು ವರ್ಷದೊಳಗ ಕಂಪನಿಗಳು ಬಂಗಾರದ ಅದಿರಿನ ಹಿಂದೆ ಬಿದ್ದ ದಾಹಿಗಳಂಗ ನಿರಾಸೆ ವ್ಯಕ್ತ ಪಡಿಸಿದರು.

‘ಇದು ನಮಗ ಲಾಭದಾಯಕ ಅಲ್ಲ, ನಮ್ಮ ಮರು ವಿಮೆ ಹಾಗೂ ಆಡಳಿತ ವೆಚ್ಚಗಳು ಭಾಳ ಆಗತಾವ. ಲಾಭಾಂಶ ಕಮ್ಮಿ. ಇದು ನಮಗ ಬ್ಯಾಡ ಅಂತ ಹೇಳಿದರು. ಸರಕಾರಿ ಸಂಸ್ಥೆಗಳಿಗೆನ ಇದರ ನೊಗ ಹೊರಸರಿ ನಾವು ಒಲ್ಲಿವಿ, ಅಂತ ಆಟ ಗೂಟ ಜೈ’ ಅಂದರು.

ಹಿಂಗಾರ ಅವರಿಗೆ ಆದ ನಷ್ಟ ಏನು ನೋಡುಣು ಬನ್ರಿಪಾ.

ಪ್ರಧಾನ ಮಂತ್ರಿ ಫಸಲು ಬೀಮಾ ಯೋಜನೆ ಆರಂಭವಾದ ಮೂರು ವರ್ಷದಾಗ (ನಂತರದ ವರ್ಷಗಳ ಡೇಟಾ ಸರಕಾರದಿಂದ ಇನ್ನೂ ಲಭ್ಯ ಆಗಿಲ್ಲ)- ಈ ಕಂಪನಿಗಳು ಸುಮಾರು 76 ಸಾವಿರ ಕೋಟಿ ಕಂತು ವಸೂಲು ಮಾಡ್ಯಾವು. ಇದರೊಳಗ ಸುಮಾರು 75 ಸಾವಿರ ಕೋಟಿ ತೆರಿಗೆದಾರರ ದುಡ್ಡು. ಬೆಳೆ ನಾಶ, ಬರ, ಪ್ರವಾಹ ಮುಂತಾದ ವೈಪರೀತ್ಯಗಳಾಗಿದ್ದಕ್ಕ ರೈತರಿಗೆ ಸಿಕ್ಕ ಪರಿಹಾರ ಸುಮಾರು 56 ಸಾವಿರ ಕೋಟಿ. ಅಂದರ ಈ ಕಂಪನಿಗಳು ನಿವ್ವಳ 27 ಶೇಕಡಾ ಲಾಭದಾಗ ಇದ್ದಾವು. ಅವು ಮರು ವಿಮೆ ಮೊತ್ತ ಶೇಕಡಾ 10 ಹಾಗೂ ಆಡಳಿತ ವೆಚ್ಚ ಶೇಕಡಾ 5 ಇದ್ದದ್ದರಿಂದ ಶೇಕಡಾ 12 ಲಾಭ ಗಳಿಸಿದಂಗ. ಆದರ ಇದು ಅವುಗಳ ಶೇರುದಾರರಿಗೆ ಕಮ್ಮಿ ಅನ್ನಿಸಿದ್ದಕ್ಕ ಆ ಮೊದಲಿನ ಹತ್ತು ಕಂಪನಿಗಳಲ್ಲಿ ಕೆಲವು ಈ ಯೋಜನೆಯಿಂದ ಹಿಂದ ಸರದಾವ. ಇನ್ನೂ ಸುಮಾರು ನಾಕು ಸಾವಿರ ಕೋಟಿ ಪರಿಹಾರ ಧನ ಕೊಡೋ ಬಾಕಿ ಉಳದೈತಿ.

ಹಂಗಾರ ಈ ಧಂದೇನ ಹಿಂಗೇನು ಮತ್ತ? ಹಂಗೇನಿಲ್ಲ. ಸರಕಾರಿ ವಿಮಾ ಕಂಪನಿಯ ಲೆಕ್ಕ ಪಟ್ಟಿ ನೋಡಿದರ ಇದು ಗೊತ್ತಾಗತದ. ಏಐಸಿ ಅಥವಾ ‘ಕೃವಿನಿ’ ಕಳೆದ ವರ್ಷ ಸುಮಾರು 7893 ಕೋಟಿ ರೂಪಾಯಿ ಕಂತು ಪಡೆದು 7040 ಕೋಟಿ ರೂಪಾಯಿ ಪರಿಹಾರ ಕೊಟ್ಟದ. ಇದು ಸುಮಾರು ಶೇಕಡಾ 90ರಷ್ಟು. ಇವರಿಗೂ ಮರುವಿಮೆ ಹಾಗೂ ಆಡಳಿತ ವೆಚ್ಚ ಅಂತ ಅದಾವು. ಸರಕಾರಿ ಸಂಸ್ಥೆ ಆದ್ದರಿಂದ ಸಿಬ್ಬಂದಿ ವೆಚ್ಚನೂ ಅದಾನಿ- ಅಂಬಾನಿಗಿಂತ ಹೆಚ್ಚು. ಆದರೂ ಇವರು ಯಾಕ ಹೆಚ್ಚು ಕೊಡಲಿಕ್ಕೆ ಆಯಿತು. ಅವರು ಇಷ್ಟೇ ಮೊತ್ತದ ಪರಿಹಾರ ಕೊಡತಿದ್ದರು ಅಂದರ ಇವರನ್ನ ತಗದು ಖಾಸಗಿ ಕಂಪನಿಗಳನ್ನು ಕರದು ಕರದು ಕೊಟ್ಟಿದ್ದು ಯಾಕೆ? ಮೊದಲ ಮೂರು ವರ್ಷ 76 ಸಾವಿರ ಕೋಟಿ ಹಣ ಹೊಡದುಕೊಂಡು ಆಮ್ಯಾಲೆ ನಾವಲ್ಲ ಅಂದರಲ್ಲಾ, ಅದನ್ನು ಮೊದಲೇ ಯಾಕೆ ಊಹಿಸಲಿಲ್ಲ? ಐದು ವರ್ಷ- ಹತ್ತು ವರ್ಷದ ದೀರ್ಘಕಾಲೀನ ಕರಾರಿನ ಕಂಟ್ರಾಕ್ಟಗಳನ್ನ ಯಾಕೆ ಕರೀಲಿಲ್ಲ? ಸರಕಾರಿ ಸಂಸ್ಥೆಗೆ ಕೇವಲ ಶೇಕಡಾ 10 ರಷ್ಟು ಕೃಷಿಭೂಮಿಯನ್ನ ಮಾತ್ರ ಬಿಟ್ಟು ಕೊಟ್ಟರು?

ಇಲಿಗಳ ರಾಜ್ಯದಲ್ಲಿ ಬೆಕ್ಕಿಗೆ ಗಂಟೀ ಕಟ್ಟೂದಲ್ಲಾ, ಅದಕ್ಕ ಸವಾಲು ಕೇಳೋದೂ ಸಹಿತ ಸಾಧ್ಯವಿಲ್ಲ.

ವಿವರಗಳಿಗೆ:mhttps://pmfby.gov.inwww.aicofindia.com

ಪೀಕ (ಹೆಚ್ಚು ಕಡಿಮೆ ಪೀಕ್ ಎಂದು ಉಚ್ಚರಿಸುವ ಪೀಕ ಅಂದ್ರ ಬೆಳಿ – ಬೆಳೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...