Homeಮುಖಪುಟಈರುಳ್ಳಿ ಬೆಲೆ ನಿಯಂತ್ರಿಸಲು ಸರ್ಕಾರ ಮಾಡಬೇಕಾದುದೇನು? ಆದರೆ ಮಾಡುತ್ತಿರುವುದೇನು?

ಈರುಳ್ಳಿ ಬೆಲೆ ನಿಯಂತ್ರಿಸಲು ಸರ್ಕಾರ ಮಾಡಬೇಕಾದುದೇನು? ಆದರೆ ಮಾಡುತ್ತಿರುವುದೇನು?

- Advertisement -
- Advertisement -
  • ಅಶೋಕ್ ಗುಲಾತಿ, ಹರ್ಷವರ್ಧನ್
  • ಅನುವಾದ: ಟಿ.ಎಸ್‌ ವೇಣುಗೋಪಾಲ್‌

ಈರುಳ್ಳಿ ಬೆಲೆ ಏರುವುದನ್ನು ತಪ್ಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದು ಒಂದು ದೊಡ್ಡ ದುಸ್ವಪ್ನವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಹಿಂದೆ ಯುಪಿಎ ಸರ್ಕಾರವನ್ನು ಇದೇ ಕಾರಣಕ್ಕಾಗಿ ಟೀಕಿಸಿದ್ದ ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಪ್ರಧಾನ ಮಂತ್ರಿಯವರು “ಈಗ ನಾವು ಈರುಳ್ಳಿಗಾಗಿಯೂ ಒಂದು ಲಾಕರ್ ತೆರೆಯಬೇಕು. ಅದರಲ್ಲಿ ಈರುಳ್ಳಿಯನ್ನು ಬೀಗ ಹಾಕಿ ಕಾಪಾಡಿಕೊಳ್ಳಬೇಕು . . . ಅತಿಥಿಗಳು ಬಂದಾಗ ಬರೀ ಅದರ ವಾಸನೆಯನ್ನು ಬಡಿಸಬೇಕು . .. ಈ ಯುಪಿಎ ಸರ್ಕಾರಕ್ಕೆ ಈರುಳ್ಳಿಯಿಲ್ಲದೆಯೇ ಕಣ್ಣೀರು ಬರಿಸುವ ಸಾಮರ್ಥ್ಯವಿದೆ. ಅವರು ಮಾಡಿರುವ ಪಾಪಗಳನ್ನು ನೋಡಿ. ಜೋಳ/ಗೋದಿ/ಬಾಜ್ರ ಇವುಗಳನ್ನು ಈರುಳ್ಳಿಯೊಂದಿಗೆ ತಿಂದು ಬದುಕುತ್ತಿದ್ದ ಭಾರತದ ಬಡವರಿಂದ ಈರುಳ್ಳಿಯನ್ನು ಕಸಿದುಕೊಂಡಿದೆ. ಅವರ ಅಧಿಕಾರವನ್ನು ಇಡೀ ಭಾರತದಿಂದ ನಿರ್ಮೂಲನ ಮಾಡಬೇಕಾಗಿದೆ.” ಈಗ ಅವರೇ ಅಧಿಕಾರದಲ್ಲಿದ್ದಾಗ ಈರುಳ್ಳಿ ಬೆಲೆ ಗಗನಕ್ಕೆ ಹೋಗಿದೆ. ಪ್ರಧಾನಿಯವರು ಮೌನವಾಗಿದ್ದಾರೆ.

ಇದರರ್ಥ ಇಷ್ಟೆ. ಬೇರೆಯವರನ್ನು ಟೀಕಿಸುವುದು ಸುಲಭ. ನೀತಿಗಳನ್ನು ರೂಪಿಸುವುದು ಕಷ್ಟದ ಕೆಲಸ. ಅದಕ್ಕೆ ವಿನಯ ಬೇಕು. ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು. ಬೇಕಾದ ಸಂಪನ್ಮೂಲವನ್ನು ಕ್ರೋಡಿಕರಿಸಿಕೊಳ್ಳಬೇಕು. ಅನಂತರ ಅದಕ್ಕೆ ತಕ್ಕ ನೀತಿಯನ್ನು ಜಾರಿಗೊಳಿಸಬೇಕು. ಅದು ಬಾಳುವಂತಿರಬೇಕು.
ಅಂತಹ ನೀತಿ ರೂಪಿಸುವುದಕ್ಕೆ ಸಾಧ್ಯವಿದೆ. ಈರುಳ್ಳಿಗೆ ಸಂಬಂಧಿಸಿದ ಹಾಗೆ ಮತ್ತೆ ಇಂತಹ ಅನಾಹುತ ಆಗದ ಹಾಗೆ ಹೇಗೆ ನೋಡಿಕೊಳ್ಳಬಹುದು ಎಂಬುದನ್ನು ಚರ್ಚಿಸೋಣ.

ಈಗಿನ ಈರುಳ್ಳಿ ಬೆಲೆಯ ಏರಿಕೆಯನ್ನು ಊಹಿಸಬಹುದಿತ್ತು. ಕಳೆದ ಕೆಲವು ತಿಂಗಳುಗಳಲ್ಲಿ ಈರುಳ್ಳಿ ಬೆಲೆ ಹಿಡಿದ ದಾರಿಯನ್ನು ಗಮನಿಸೋಣ. ಸೆಪ್ಟೆಂಬರ್- ಅಕ್ಟೋಬರಿನಲ್ಲಿ ಈರುಳ್ಳಿ ಬೆಲೆ ಕೆಜಿಗೆ 50-60ರೂಪಾಯಿ ಆಯಿತು. ಸರ್ಕಾರ ಕನಿಷ್ಠ ರಫ್ತು ಬೆಲೆಯನ್ನು ವಿಧಿಸಿತು (ಎಂಇಪಿ), ಚಿಲ್ಲರೆ ಹಾಗೂ ಸಗಟು ವ್ಯಾಪಾರಿಗಳ ಸಂಗ್ರಹದ ಮೇಲೆ ಮಿತಿಯನ್ನು ಹಾಕಿತು. ಅನಂತರ ಈರುಳ್ಳಿ ರಫ್ತನ್ನು ನಿಷೇದಿಸಿತು. ಆದರೆ ಈ ಕ್ರಮಗಳಿಂದ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಆಗ ವ್ಯಾಪಾರಿಗಳ ಮೇಲೆ ವರಮಾನ ತೆರಿಗೆ ದಾಳಿಯನ್ನು ಕೂಡ ನಡೆಸಲಾಯಿತು. ನೀತಿಯನ್ನು ರೂಪಿಸುವಲ್ಲಿನ ದಿವಾಳಿತನವನ್ನು ಇದು ತೋರಿಸುತ್ತದೆ.

ಇಂತಹ ಪರಿಸ್ಥಿತಿ ವರ್ಷ ಬಿಟ್ಟು ವರ್ಷ ನಡೆಯುತ್ತಲೇ ಇದೆ. ಆದರೆ ನಾವು ಇದರಿಂದ ಕಲಿಯಲು ತಯಾರಿಲ್ಲ. ದಿವಂಗತ ಅರುಣ್ ಜೇಟ್ಲಿ “ಆಪರೇಷನ್ ಗ್ರೀನ್”ಗಾಗಿ 500 ಕೋಟಿ ರೂಪಾಯಿಗಳನ್ನು 2018ರ ಬಜೆಟ್ಟಿನಲ್ಲಿ ಘೋಷಿಸಿದರು. ಟೊಮೆಟೊ, ಈರುಳ್ಳಿ ಹಾಗೂ ಆಲೂಗೆಡ್ಡೆಯ ಬೆಲೆಗಳನ್ನು ಸ್ಥಿರಗೊಳಿಸುವ ಉದ್ದೇಶಕ್ಕಾಗಿ ಇದನ್ನು ಮಾಡಲಾಗಿತ್ತು. ಆಹಾರ ಸಂಸ್ಕರಣಾ ಮಂತ್ರಾಲಯ ಇದನ್ನು ಜಾರಿಗೊಳಿಸಬೇಕಾಗಿತ್ತು. ಆದರೆ ಈ ಹಣ ಇಲ್ಲಿಯವರಗೆ ಬಿಡುಗಡೆಯಾಗಿಲ್ಲ. ಮಂತ್ರಾಲಯದ ವೆಬ್ ಸೈಟ್ ನೋಡಿದರೆ ಇದು ಸ್ಪಷ್ಟವಾಗುತ್ತದೆ.
ಈಗಿನ ಈರುಳ್ಳಿ ಬೆಲೆ ಏರಿಕೆಯನ್ನು ಊಹಿಸಬಹುದಿತ್ತು. ತೋಟಗಾರಿಕಾ ಇಲಾಖೆಯು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಈರುಳ್ಳಿಯನ್ನು ಪ್ರಧಾನವಾಗಿ ಬೆಳೆಯುವ ರಾಜ್ಯಗಳಲ್ಲಿ (ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ಗುಜರಾತ್ ಮತ್ತು ರಾಜಾಸ್ಥಾನ) ಈ ವರ್ಷ ಖಾರೀಫ್ ಇಳುವರಿ ಶೇಕಡ 7ರಷ್ಟು ಕಡಿಮೆಯಾಗುತ್ತದೆ ಎಂದು ಅಂದಾಜು ಮಾಡಿತ್ತು. ಸೆಪ್ಟೆಂಬರ್/ಅಕ್ಟೋಬರಿನಲ್ಲಿ ಬಂದ ತೀವ್ರ ಮಳೆಯಿಂದಾಗಿ ಮಧ್ಯಪ್ರದೇಶದಲ್ಲಿ ಶೇಕಡ 58ರಷ್ಟು, ಕರ್ನಾಟಕದಲ್ಲಿ ಶೇಕಡ 18ರಷ್ಟು, ಆಂಧ್ರದಲ್ಲಿ ಶೇಕಡ 2ರಷ್ಟು ಬೆಳೆಗಳು ನಾಶವಾದವು. ನಿರಂತರ ಮಳೆಯಿಂದಾಗಿ ಮಹಾರಾಷ್ಟ್ರದಲ್ಲಿ ಈರುಳ್ಳಿ ಕುಯಿಲು ನಿಧಾನವಾಯಿತು. ಸರ್ಕಾರ ನಿಧಾನವಾಗಿ ಎಚ್ಚರಗೊಂಡಿತು. ಎಂಎಂಟಿಸಿಗೆ ಒಂದು ಲಕ್ಷ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ನಿರ್ದೇಶಿಸಿತು. ಆಫ್ಗಾನಿಸ್ತಾನ, ಟರ್ಕಿ, ಮತ್ತು ಈಜಿಪ್ಟಿನಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಯಿತು. ಈರುಳ್ಳಿಯನ್ನು ಯಾವ ಬೆಲೆಯಲ್ಲಿ ಆಮದು ಮಾಡಿಕೊಂಡು ಭಾರತದ ಮಾರುಕಟ್ಟೆಯಲ್ಲಿ ಸುರಿಯಲಾಯಿತು ಎಂಬ ಪ್ರಶ್ನೆ ಹಾಗೆ ಉಳಿಯುತ್ತದೆ.

ಇಂಡಿಯಾ ಜಗತ್ತಿನಲ್ಲೇ ಈರುಳ್ಳಿ ರಫ್ತು ಮಾಡುವ ದೊಡ್ಡ ದೇಶ. ಭಾರತ ಪ್ರತಿವರ್ಷ ಎರಡು ಮಿಲಿಯನ್ ಮೆಟ್ರಿಕ್ ಟನ್ ರಫ್ತು ಮಾಡುತ್ತದೆ (ಚಿತ್ರ 2). ರಫ್ತನ್ನು ನಿಷೇಧಿಸುವ ಬದಲು ಆಮದಿಗೆ ಅವಕಾಶವನ್ನು ಮುಕ್ತವಾಗಿ ಇಟ್ಟುಕೊಂಡರೆ, ದೇಶದಲ್ಲಿ ಈರುಳ್ಳೆ ಬೆಲೆ ಸಿಕ್ಕಾಪಟ್ಟೆ ಏರಿದ ಸಂದರ್ಭದಲ್ಲಿ, ಖಾಸಗಿ ವ್ಯಾಪಾರಿಗಳು ಬೇಕಾದಾಗ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಬಹುದು. ಸರ್ಕಾರದ ನಿಧಾನದ ತೀರ್ಮಾನಕ್ಕೆ ಕಾಯಬೇಕಾಗಿಲ್ಲ. ಹೀಗೆ ಮಾಡುವುದರಿಂದ ಭಾರತ ರಫ್ತುದಾರನಾಗಿ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದರಿಂದ ರೈತರಿಗೆ ನಿರಂತರವಾಗಿ ಒಳ್ಳೆಯ ಬೆಲೆ ಸಿಗುತ್ತದೆ. ದಿಢೀರನೆ ರಫ್ತನ್ನು ನಿಷೇದಿಸುವುದು ರೈತ ವಿರೋಧಿ ಮಾತ್ರವಲ್ಲ ಅದು ನಿಜವಾಗಿ ಸರ್ಕಾರದ ನೀತಿಯ ವೈಫಲ್ಯವನ್ನು ತೋರಿಸುತ್ತದೆ. ಗ್ರಾಹಕರ ಆಸಕ್ತಿಯನ್ನು ಈಡೇರಿಸುವ ದೃಷ್ಟಿಯಿಂದ ಭಾರತ “ಆಪರೇಷನ್ ಗ್ರೀನ್” ಯೋಜನೆಗೆ ಸಂಬಂಧಿಸಿದಂತೆ ಸೂಕ್ತ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು.

ಹಾಗಾದರೆ ರೈತರ ಹಾಗೂ ಗ್ರಾಹಕರ ಆಸಕ್ತಿಯನ್ನು ಕಾಪಾಡುವುದಕ್ಕೆ ಏನು ಮಾಡಬೇಕು?
ಮೊದಲಿಗೆ ರಾಬಿ ಈರುಳ್ಳಿಯನ್ನು ಸಂಗ್ರಹಿಸಿಡುವುದಕ್ಕೆ ಬೃಹತ್ ಪ್ರಮಾಣದಲ್ಲಿ ಸೌಲಭ್ಯ ಕಲ್ಪಿಸಬೇಕು. ರೈತರು ಮತ್ತು ವ್ಯಾಪಾರಿಗಳ ಮಟ್ಟದಲ್ಲಿ ಇದು ನಡೆಯಬೇಕು. ಏಪ್ರಿಲ್ -ಮೇ ತಿಂಗಳಿನಲ್ಲಿ ಈರುಳ್ಳಿ ಬೆಲೆ ಕೆಜಿಗೆ 4-5 ರೂಪಾಯಿ ಇದ್ದಾಗ ಈರುಳ್ಳಿಯನ್ನು ಉದಾಹರಣೆಗೆ ಕೆಜಿಗೆ 10ರೂಪಾಯಿನಂತೆ ಕೊಂಡುಕೊಳ್ಳಬೇಕು. ಆಧುನಿಕ ಖಾಸಗೀ ಕ್ಷೇತ್ರದ ಗೋದಾಮುಗಳಲ್ಲಿ ಶೇಖರಿಸಿಡಬೇಕು. ಪದೇ ಪದೇ ಸಂಗ್ರಹಣೆಯ ಮಿತಿಯನ್ನು ಹೇರುವುದು ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸುವುದು ಇವೆಲ್ಲಾ ಆಧುನಿಕ ಶೀತಸಂಗ್ರಹದಲ್ಲಿ ಖಾಸಗಿಯವರಿಗೆ ಹಣ ಹೂಡುವ ಉತ್ಸಾಹವನ್ನು ಕುಂದಿಸುತ್ತದೆ. ಖಾಸಗಿ ಸಂಗ್ರಹವನ್ನು ಉತ್ತೇಜಿಸಬೇಕು. ಅದಕ್ಕಾಗಿ ಅವಶ್ಯಕ ಸರಕು ಕಾಯ್ದೆ ಹೋಗಬೇಕು. ವ್ಯಾಪಾರಿಗಳು ಒಂದಾಗಿ ಬೆಲೆನಿಯಂತ್ರಿಸುವುದನ್ನು ತಪ್ಪಿಸುವುದಕ್ಕೆ ಭಾರತೀಯ ಸ್ಪರ್ಧಾ ಸಮಿತಿ (ಕಾಂಪಿಟೇಷನ್ ಕಮೀಷನ್ ಆಪ್ ಇಂಡಿಯಾ) ಕಾರ್ಯೋನ್ಮುಖವಾಗಬೇಕು. ಆದಾಯ ತೆರಿಗೆ ಸಿಬ್ಬಂದಿಗಳು ಇದರಲ್ಲಿ ಕೈಹಾಕಬಾರದು.

ಎರಡನೆಯದಾಗಿ ಸರ್ಕಾರ ಒಣಗಿಸಿದ ಈರುಳ್ಳಿ (ಪುಡಿ, ಚೂರು ಇತ್ಯಾದಿ ರೂಪದಲ್ಲಿ) ಬಳಸುವುದಕ್ಕೆ ನಗರಗಳಲ್ಲಿ ಹಾಗೂ ದೊಡ್ಡ ಪ್ರಮಾಣದ ಬಳಕೆದಾರರನ್ನು (ಮಿಲಿಟರಿ, ಆಸ್ಪತ್ರೆ, ಹೋಟಿಲ್ ಇತ್ಯಾದಿಗಳಲ್ಲಿ) ಉತ್ತೇಜಿಸಬೇಕು. ಈರುಳ್ಳಿ ಸೂಕ್ಷ್ಮ ಸರಕಾದ್ದರಿಂದ ಸರ್ಕರ ಕೂಡ ಒಣಗಿದ ಈರುಳ್ಳಿಯನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು. ಅದನ್ನು ಹೆಚ್ಚು ಕಾಲ ಇಟ್ಟುಕೊಳ್ಳಬಹುದು. ಗುಜರಾತಿನ ಮಹುವಾ ಈಗಾಗಲೇ ಒಣಗಿಸಿದ ಈರುಳ್ಳಿಯ ದೊಡ್ಡ ಕೇಂದ್ರವಾಗಿದೆ. ನೂರಕ್ಕಿಂತ ಹೆಚ್ಚು ಘಟಕಗಳು ಅಲ್ಲಿ ಕೆಲಸಮಾಡುತ್ತಿವೆ. ಆದರೆ ಅದಕ್ಕೆ ಆಂತರರಾಷ್ಟ್ರೀಯ ಮಾರುಕಟ್ಟೆಯ ಕೊರತೆಯಿದೆ. ಸ್ಥಳೀಯವಾಗಿಯೂ ಬೇಡಿಕೆ ಇಲ್ಲ. ಹಾಗಾಗಿ ಕಳೆದ ವರ್ಷದ ಸಂಗ್ರಹವೇ ಇನ್ನೂ ಮಾರಾಟವಾಗದೇ ಹಾಗೇ ಉಳಿದಿದೆ. ಇದಕ್ಕೆ ವ್ಯತಿರಿಕ್ತವಾಗಿ ಜೈನ್ ಇರಿಗೇಷನ್ ಇಂದು ಭಾರತದಲ್ಲಿ ಅತಿದೊಡ್ಡ ಈರುಳ್ಳಿ ಒಣಗಿಸುವ ಕಂಪೆನಿಯಾಗಿದೆ. ರೈತರಿಗೆ ಕೊಡುವ ಬೆಲೆ ಬೀಜ ಹಾಕುವುದಕ್ಕಿಂತ ಮೊದಲೇ ನಿರ್ಧರಿತವಾಗಿರುತ್ತದೆ. ನಿರ್ಧಾರಿತ ಬೆಲೆಗಿಂತ ಮಾರುಕಟ್ಟೆಯ ಬೆಲೆ ಜಾಸ್ತಿಯಾದರೆ ರೈತರಿಗೆ ಮಾರುಕಟ್ಟೆ ಬೆಲೆಗಿಂತ 60 ಪೈಸೆ ಕಡಿಮೆಮಾಡಿಕೊಂಡು ಹಣ ಕೊಡಲಾಗುತ್ತದೆ. ಅಂತಹ ಒಪ್ಪಂದದ ಕೃಷಿ ಮಾದರಿ ಮಾರುಕಟ್ಟೆಯ ರಿಸ್ಕನ್ನು ಕಮ್ಮಿ ಮಾಡುತ್ತದೆ. ಇದನ್ನು ಹೆಚ್ಚು ವಿಸ್ತರಿಸಬೇಕಾದ ಅವಶ್ಯಕತೆಯಿದೆ.

ಮೂರನೆಯದಾಗಿ, ರೈತ-ಉತ್ಪಾದಕರ ಸಂಘಟನೆಯಲ್ಲಿ ಸಣ್ಣ ರೈತರನ್ನು ಸಂಘಟಿಸಬೇಕು ಮತ್ತು ಸಂಘಟಿತ ಚಿಲ್ಲರೆ ವ್ಯಾಪಾರಿಗಳು ಒಪ್ಪಂದದ ಬೇಸಾಯದ ಮೂಲಕ ನೇರವಾಗಿ ಕೊಳ್ಳಲು ಪ್ರೋತ್ಸಾಹಿಸಬೇಕು. ಮಂಡಿ ವ್ಯವಸ್ಥೆಯನ್ನು ಮೀರಿಕೊಳ್ಳುವುದಕ್ಕೆ ಸಾಧ್ಯವಾಗಬೇಕು. ಜೊತೆಗೆ ಈಗಿರುವ ಎಪಿಎಂಸಿ ಮಂಡಿಗಳ ಮೂಲಸೌಕರ್ಯವನ್ನು ಸಂಪೂರ್ಣ ಸುಧಾರಿಸಬೇಕು. ಇದರೊಂದಿಗೆ ಮಾರುಕಟ್ಟೆ ಸುಧಾರಣೆಯನ್ನು ತರಬೇಕು. ಮೋದಿ ಸರ್ಕಾರ ತನ್ನ ಆಳ್ವಿಕೆಯಲ್ಲಿರುವ ಹಲವಾರು ರಾಜ್ಯಗಳಲ್ಲಿ ಎಪಿಎಂಸಿ ಸುಧಾರಣೆಯನ್ನು ಮಾಡುವುದಕ್ಕೆ ಇದ್ದ ಸೊಗಸಾದ ಅವಕಾಶವನ್ನು ಕಳೆದುಕೊಂಡಿದೆ. ಅಷ್ಟೇ ಅಲ್ಲ ಅಂತಹ ಅವಕಾಶಗಳು ದಿನದಿಂದ ದಿನಕ್ಕೆ ಕೈತಪ್ಪಿಹೋಗುತ್ತಿದೆ. ಅದು ಸಾಧ್ಯವಾಗದೆ ಎಲ್ಲವನ್ನೂ ಸೇರಿಸಿಕೊಂಡು ರಾಷ್ಟ್ರೀಯ ಮಾರುಕಟ್ಟೆಗಳನ್ನು ಸ್ಥಾಪಿಸುವ, ಬೆಲೆಗಳನ್ನು ಸ್ಥಿರಗೊಳಿಸುವುದಾಗಲಿ ಅಥವಾ ರೈತರಿಗೆ ಮತ್ತು ಗ್ರಾಹಕರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡುವ ಸಾಧ್ಯತೆ ಕಡಿಮೆ. ಇನ್ನಾದರೂ ಈರುಳ್ಳಿ ದುಸ್ವಪ್ನದಿಂದ ಎಚ್ಚರಗೊಂಡು ಬಾಳಿಕೆಯ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ಒಳ್ಳೆಯದು. ಯೋಚನೆ ಮಾಡದೆ ತಕ್ಷಣಕ್ಕೆ ತೆಗೆದುಕೊಳ್ಳುವ ಕ್ರಮಗಳಿಂದ ಏನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ.

(ಈ ಲೇಖನವು ಮೊದಲ ಬಾರಿಗೆ ಡಿಸೆಂಬರ್ 23, 2019 ರಂದು “ಕೆಲವು ಈರುಳ್ಳಿ ಪಾಠಗಳು” ಎಂಬ ಶೀರ್ಷಿಕೆಯಡಿಯಲ್ಲಿ ಮುದ್ರಣ ಆವೃತ್ತಿಯಲ್ಲಿ ಪ್ರಕಟವಾಯಿತು. ಗುಲಾತಿ ಇನ್ಫೋಸಿಸ್ ಚೇರ್ ಪ್ರೊಫೆಸರ್ ಫಾರ್ ಅಗ್ರಿಕಲ್ಚರ್ ಮತ್ತು ಹರ್ಷವರ್ಧನ್ ಐಸಿಆರ್‌ಐಇಆರ್ ನಲ್ಲಿ ಸಲಹೆಗಾರರಾಗಿದ್ದಾರೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...