Homeಮುಖಪುಟನಕ್ಕು ನಗಿಸುವ ಕಲೆ ಬಗ್ಗೆ ನಿಮಗೆ ಗೊತ್ತಾ? ಇದರಿಂದಾಗುವ ಪ್ರಯೋಜನಗಳು ಬಹಳ

ನಕ್ಕು ನಗಿಸುವ ಕಲೆ ಬಗ್ಗೆ ನಿಮಗೆ ಗೊತ್ತಾ? ಇದರಿಂದಾಗುವ ಪ್ರಯೋಜನಗಳು ಬಹಳ

- Advertisement -
- Advertisement -

ಜೀವನ ಕಲೆಗಳು: ಅಂಕಣ -30

ನಕ್ಕು ನಗಿಸುವ ಕಲೆ

ಇದೂ ಕಲಿಯುವಂತಹ ಕಲೆಯೇ ಎಂದು ನೀವು ಆಶ್ಚರ್ಯದಿಂದ ಕೇಳಬಹುದು. ಹೌದು, ಇದೂ ಸಹ ಕಲಿಯಬಹುದಾದಂತಹ ಜೀವನಾವಶ್ಯಕ ಕಲೆ. ನಕ್ಕು ನಗಿಸುವ ಕಲೆ (ಸೆನ್ಸ್ ಆಫ್ ಹ್ಯೂಮರ್) ಇಲ್ಲದ ಮಾನವ ರಸ ಹಿಂಡಿದ ಕಬ್ಬಿನ ಜಲ್ಲೆಯಂತೆ, ಹೆಚ್ಚು ಪ್ರಯೋಜನವಿಲ್ಲ. ಆದರೆ ನಾವು ಹೇಗೆ, ಏಕೆ ನಗುತ್ತೇವೆ ಮತ್ತು ಇತರರನ್ನು ನಗಿಸುತ್ತೇವೆ ಅದರ ಮೇಲೆ ನಮ್ಮ ವ್ಯಕ್ತಿತ್ವದ ಪರೀಕ್ಷೆಯೂ ಆಗುತ್ತದೆ. ನಗುವುದರಿಂದ ಹಲವು ರೋಗಗಳೂ ಸಹ ತಾವಾಗಿಯೇ ಗುಣವಾಗುತ್ತವೆ ಎಂಬುದು ಹಲವರ ಅಭಿಪ್ರಾಯ.

ಇಂದಿನ ಜೀವನದಲ್ಲಿ ಹಾಸ್ಯರಸವನ್ನು ಆಸ್ವಾದಿಸುವ ಮುನ್ನ ನಿಮ್ಮ ಹಾಸ್ಯದಿಂದ ಅಥವಾ ಆಸ್ವಾದನೆಯಿಂದ ಇನ್ನೊಬ್ಬರಿಗೆ ಕಷ್ಟವಾಗುತ್ತಿದೆಯೇ ಇಲ್ಲವೇ ಎಂಬುದನ್ನು ಮೊದಲು ಅರಿಯಿರಿ.

·         ಮೊದಲು ನಿಮ್ಮ ಮುಖದಲ್ಲಿ ನಗುವಿರಲಿ, ಆದರೆ ನಿಮ್ಮ ಹಾಸ್ಯವನ್ನು ಹಂಚಿಕೊಳ್ಳುವಾಗ ಮಿಕ್ಕವರಿಗಿಂತ ನೀವೇ ಹೆಚ್ಚಾಗಿ/ಜೋರಾಗಿ ನಗಬೇಡಿ.

·         ಹಾಸ್ಯವನ್ನು ಹುಡುಕುವ ಪ್ರಯತ್ನ ಸತತವಾಗಿ ಮಾಡುತ್ತಿರಿ. ಹಾಸ್ಯ ಸಾಹಿತ್ಯ ಓದಿ, ಕಾಮೆಡಿ ಶೋ ನೋಡಿ.

·         ಯಾರಾದರೂ ನಿಮ್ಮನ್ನು ಕೋಪ ಬರುವಂತೆ ಮಾಡಿದಲ್ಲಿ, ಅವರಿಗೆ ನಿಮ್ಮ ಕೋಪದ ಶಕ್ತಿ ತೋರಿಸದೆ, ನಿಮ್ಮ ಹಾಸ್ಯದ ರುಚಿ ತೋರಿಸಿ.

·         ನಿಮ್ಮ ಜೀವನದ ಅತ್ಯಂತ ಹೀನಾಯಕರ (embarassing) ಕ್ಷಣದ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. ಇದರಿಂದ ನಿಮ್ಮ ಮೇಲೆ ನೀವೇ ನಗುವುದನ್ನು ಕಲಿಯಬಹುದು.

·         ಇತರರು ನಿಮಗೆ ಹಾಸ್ಯ ಪ್ರಸಂಗ ತಿಳಿಸಿದಾಗ ಸಕ್ರಿಯವಾಗಿ ಕೇಳಿಸಿಕೊಳ್ಳುವುದನ್ನು ಮತ್ತು ನಗುವುದನ್ನು ಕಲಿಯಿರಿ.

ಹಾಸ್ಯ ಒಂದು ರೀತಿಯ ಸಮಾನತೆ ತರುವ ವ್ಯವಸ್ಥೆ. ನಮ್ಮನ್ನು ನಗಿಸುತ್ತಿರುವ ವ್ಯಕ್ತಿಯ ಮೇಲೆ ನಾವು ಸಹಜವಾಗಿ ಕೋಪ ಮಾಡಿಕೊಳ್ಳುವುದು ಕಷ್ಟ, ತನ್ನ ಚೇಷ್ಟೆಯಿಂದ ಅವಾಂತರ ಮಾಡಿದ ಮಗು ನಿಮ್ಮದೇ ಆಗಿರಬಹುದು. ಒಮ್ಮೆ ಅದರ ಹಿಂದಿರುವ ಹಾಸ್ಯವನ್ನು ಅರ್ಥ ಮಾಡಿಕೊಂಡರೆ, ನಾವೂ ಅವರೊಂದಿಗೆ ನಗಲು ಪ್ರಾರಂಭಿಸಬಹುದು. ಹೀಗೆ ಹಾಸ್ಯವನ್ನು ಹಂಚಿಕೊಳ್ಳುವುದರಿಂದ ಸ್ನೇಹವೂ, ಸೌಹಾರ್ದವೂ ಬೆಳೆಯುತ್ತದೆ.

ಹಾಸ್ಯ ಯಾರಿಗೆ ತಾನೇ ಇಷ್ಟವಾಗುದಿಲ್ಲ, ಚಿಕ್ಕ ಮಕ್ಕಳು ಕಾರ್ಟೂನ್ ಟಿವಿ ಮುಂದೆ ಮೈಮರೆತು ನೋಡುತ್ತ ಕುಳಿತಿರುವುದನ್ನು, ಮತ್ತೆ ಅದೇ ಸಮಯದಲ್ಲಿ, ತಾಯಿ ಅವರಿಗೆ ತಿಳಿಯದಂತೆಯೇ ಅವರಿಗೆ ಇಷ್ಟವಾಗದ ತಿನಿಸುಗಳನ್ನು ತಿನ್ನಿಸಿದರೂ, ತಿನ್ನುವ ದೃಶ್ಯವನ್ನು ಬಹುತೇಕ ಮನೆಗಳಲ್ಲಿ ಕಂಡಿದ್ದೇವೆ. ಆಗ ಅವರಿಗೆ ಇಷ್ಟವಾಗುವುದು ದೈಹಿಕ ಹಾಸ್ಯ, ಅಂದರೆ ಯಾರೋ ಜಾರಿ ಬೀಳುವುದು, ಬೀಳಿಸುವುದು, ಸೊಟ್ಟ ಮೂತಿಗಳನ್ನು ಮಾಡುವುದು, ಬೇರೆಯವರನ್ನು ಅಣಕಿಸುವುದು ಇತ್ಯಾದಿ. ಶಾಲೆಯ ಮಕ್ಕಳೂ ಸಹ ಸ್ವಲ್ಪ ದೊಡ್ಡವರಾದ ಮೇಲೆ, ಭಾಷೆಯ ಅಂಗವಾಗಿ, ನಗೆಹನಿ ಮುಂತಾದುದನ್ನು ಸಂಗ್ರಹಿಸುವ ಮತ್ತು ಸ್ನೇಹಿತರ ಜೊತೆ ಅದನ್ನು ಹಂಚಿಕೊಳ್ಳುವ ಕೆಲಸ ಪ್ರಾರಂಭಿಸುತ್ತಾರೆ. ಆದರೆ ಯಾವುದು ಚಿಕ್ಕಂದಿನಲ್ಲಿ ಹಾಸ್ಯ ಎಂದು ಅನಿಸುತ್ತಿತ್ತೋ ಅದು ದೊಡ್ಡವರಾದಂತೆ ಹಾಸ್ಯ ಎಂದು ಅನಿಸುವುದಿಲ್ಲ. ಹಾಗಾಗಿ ಭಾಷೆಯಲ್ಲಿ, ಸಾಹಿತ್ಯದಲ್ಲಿ, ಸನ್ನಿವೇಶದಲ್ಲಿ, ಸಿನಿಮಾ, ನಾಟಕ, ಟಿವಿ ಸೀರಿಯಲ್ ಇವುಗಳಲ್ಲಿ ಹಾಸ್ಯ ಹುಡುಕುವ ಕೆಲಸ ಮುಂದುವರೆಯುತ್ತದೆ.

ಹಾಸ್ಯ ಹೇಗಿರಬೇಕು? ಎಲ್ಲರೂ ಒಟ್ಟಾಗಿ ಕೂತು ಅದನ್ನು ಆಸ್ವಾದಿಸುವಂತಿರಬೇಕು. ಒಬ್ಬರಿಗೆ ಅಥವಾ ಕೆಲವರಿಗೆ ಹಿಂಸೆ ಕೊಡುವಂತಹ ಪ್ರಯತ್ನ ಹಾಸ್ಯವಲ್ಲ. ಒಬ್ಬರನ್ನು ಅಥವಾ ಒಂದು ಗುಂಪು/ಸಮುದಾಯವನ್ನು ಹೀಯಾಳಿಸುವುದು ಹಾಸ್ಯವಲ್ಲ. ಇನ್ನೊಬ್ಬರ ದೈಹಿಕ ನ್ಯೂನತೆಯನ್ನು ಅಣಕಿಸುವುದು, ಅದರ ಮೇಲೆ ಟೀಕೆ ಟಿಪ್ಪಣಿ ಮಾಡುವುದು ಹಾಸ್ಯವಲ್ಲ.ಅದರ ಸೃಷ್ಟಿ ಹೇಗೆ ಮತ್ತು ಏಕೆ ಆಗಿದೆ ಎಂಬುದರ ಮೇಲೆಯೂ ಹಾಸ್ಯದ ಗುಣಮಟ್ಟ ನಿರ್ಧಾರವಾಗುತ್ತದೆ. ಎಲ್ಲಾ ಹಾಸ್ಯವೂ ಜನರು ಗಹಗಹಿಸಿ ನಗುವಂತಹ ರೀತಿಯದ್ದಾಗಿರಬೇಕಿಲ್ಲ. ಬಿಗುಪಿನ ವಾತಾವರಣವನ್ನು ತಿಳಿಗೊಳಿಸುವ ಮಂದಹಾಸ್ಯವೂ ಪ್ರಯೋಜನಕಾರಿ. ಒಬ್ಬರ ಅಥವಾ ಒಂದು ವ್ಯವಸ್ಥೆಯ ದೌರ್ಬಲ್ಯವನ್ನು ಹಾಸ್ಯದ ಮೂಲಕ ತೋರಿಸಿ, ಅದನ್ನು ಸರಿಪಡಿಸುವ ಅಥವಾ ಇತರರಿಗೆ ತಿಳಿಸುವ ಪ್ರಯತ್ನದಲ್ಲಿ ಹಾಸ್ಯ ಮಾಧ್ಯಮವಾದಲ್ಲಿ ಅದಕ್ಕೆ ಬೆಲೆ ಇರುತ್ತದೆ.

ಸಿಟ್ಟಿನಿಂದ ಅಥವಾ ಗಂಭೀರವಾಗಿ ಮಾಡಿದ ವಿಮರ್ಶಾತ್ಮಕ ಟೀಕೆಗಿಂತಲೂ ಹಾಸ್ಯದಿಂದ ಮಾಡಿದ ಟೀಕೆ ಎದುರಾಳಿಯ ಗಂಟಲಿಗೆ ಸಿಕ್ಕಿಕೊಳ್ಳದೆ ಸಲೀಸಾಗಿ ಮನಸ್ಸಿಗೆ ಇಳಿಯುತ್ತದೆ. ಸಂವಹನದಲ್ಲಿ ಕಷ್ಟಕರ ಸಂದೇಶವನ್ನು ಸಮರ್ಪಕವಾಗಿ  ತಲುಪಿಸಲು ಹಾಸ್ಯ ಸಹಕಾರಿಯಾಗುತ್ತದೆ. ಹಾಸ್ಯ ಅವಮಾನ ಅಥವಾ ಅವಹೇಳನಕಾರಿಯಾಗಿರಬಾರದು.

ಹಾಸ್ಯದಲ್ಲಿ ಸನ್ನಿವೇಶ ಮುಖ್ಯ ಪಾತ್ರ ವಹಿಸುತ್ತದೆ. ಒಂದೇ ತರಹದ ಹಾಸ್ಯ ಎಲ್ಲಾ ಸನ್ನಿವೇಶದಲ್ಲೂ ಸರಿಹೊಂದುವುದಿಲ್ಲ. ನಿಮ್ಮ ಹಾಸ್ಯದ ಗುರಿ ಯಾರು? ಇದರಿಂದ ಕೇಳುವವರಲ್ಲಿ ಯಾವ ಭಾವನೆ ಜಾಗೃತವಾಗುತ್ತದೆ ಮತ್ತು ಅದು ಇಲ್ಲಿ ಕೇಳಿಸಿಕೊಳ್ಳುತ್ತಿರುವ ಗುಂಪಿಗೆ ಸೂಕ್ತವೇ? ಇದೇ ಹಾಸ್ಯ ಮುಂದೆ ಬೇರೆಯವರಿಗೆ ತಲುಪಿದರೆ ಅದರ ಪರಿಣಾಮ ಏನು? ಹಾಸ್ಯಕ್ಕೆ ಇದು ಸರಿಯಾದ ಸಮಯವೇ? ಇವುಗಳನ್ನು ಪರಿಗಣಿಸಿನಿಮ್ಮ ಹಾಸ್ಯದ ಬತ್ತಳಿಕೆಯನ್ನು ಬಿಚ್ಚಿ. ಅಕಸ್ಮಾತ್ ನಿಮ್ಮ ಹಾಸ್ಯದ ಪ್ರಯತ್ನ ಸರಿಹೋಗಲಿಲ್ಲವೆಂದರೆ ಕೂಡಲೇ ಪರಿಸ್ಥಿತಿಯನ್ನು ನಿಯಂತ್ರಿಸಿ. ಯಾರಿಗೆ ಅದರಿಂದ ನೋವಾಗಿದೆಯೋ ಅವರ ಕ್ಷಮೆ ಕೋರಿ.

ನಮ್ಮ ಸೋದರಮಾವ ಅರವತ್ತರ ದಶಕದಲ್ಲಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾರತ-ಚೀನ ಯುದ್ಧದ ನಂತರದ ರೇಷನ್ ಕಾಲ. ಇನ್ನೂ ಮದುವೆಯಾಗದ ಮಾವನ ರೇಷನ್ ಕಾರ್ಡಿನಲ್ಲಿದ್ದುದು ಒಂದೇ ಹೆಸರು. ಕಾಫಿ ಮಾತ್ರ ಮನೆಯಲ್ಲಿ ಮಾಡಿಕೊಂಡು ಊಟಕ್ಕೆ ಖಾನಾವಳಿ ಆಶ್ರಯಿಸಿದ್ದರು. ಸಕ್ಕರೆ ಹೊರಗೆ ಮಾರುಕಟ್ಟೆಯಲ್ಲಿ ಸಿಗುವ ವಸ್ತುವಾಗಿರಲಿಲ್ಲ. ಒಬ್ಬರಿಗೆ ಒಂದು ತಿಂಗಳಿಗೆ ಕೇವಲ ಒಂದು ಪೌಂಡ್ (454 ಗ್ರಾಂ) ಸಕ್ಕರೆ ಸಿಗುತ್ತಿತ್ತು. ಅದನ್ನು ಪ್ರತಿ ವಾರ ಪಡಿತರ ಅಂಗಡಿಯ ಸರದಿಯಲ್ಲಿ ನಿಂತು, ಕಾಯ್ದು ತರಬೇಕಿತ್ತು. ಇವರ ಸರದಿ ಬಂದಾಗ ಕೇವಲ ಸಕ್ಕರೆ ಎಂದಿದ್ದು ನೋಡಿ, ಅಂಗಡಿಯವನು ಲೆಕ್ಕ ಹಾಕಿ ಇವರ ಪಾಲಿನ ಸಕ್ಕರೆಯನ್ನು ಕಾಗದದ ಪೊಟ್ಟಣದಲ್ಲಿ ಕಟ್ಟುವ ಮುನ್ನ ಕೇಳಿದ “ಇದನ್ನು ಇಲ್ಲೇ ತಿನ್ನುತ್ತೀರೋ ಅಥವಾ ಮನೆಗೆ ಒಯ್ಯುತ್ತೀರೋ” ಎಂದು ಕೇಳಿದನಂತೆ. ಏಕೆಂದರೆ ಅವರಿಗೆ ಸಿಗುತ್ತಿದ್ದದ್ದು ಕೇವಲ 113 ಗ್ರಾಂ ಸಕ್ಕರೆ. ಅದನ್ನು ಮಾವ ಒಂದು ವಾರಕ್ಕೆ ಸಾಕಾಗುವಂತೆ ನಿರ್ವಹಣೆ ಮಾಡಿಕೊಳ್ಳಬೇಕಾಗಿತ್ತು. ಇದರಲ್ಲಿ ಹಾಸ್ಯ ಎಲ್ಲಿದೆ ಎಂದು ಕೆಲವರಿಗೆ ಅನಿಸಬಹುದು.

ಹಾಸ್ಯ ಎಲ್ಲೆಡೆ ಹರಡಿರುತ್ತದೆ. ಅದನ್ನು ಸರಿಯಾಗಿ ಹೆಕ್ಕಿ, ತೊಳೆದು, ಸರಿಯಾದ ಸ್ಥಳದಲ್ಲಿ ಮಿಂಚುವಂತೆ ಪ್ರದರ್ಶಿಸಿದರೆ ಅದು ನಗೆ ಹನಿಯಾಗುತ್ತದೆ. ಹೆಚ್ಚಿನ ಅಳತೆಯಲ್ಲಿದ್ದರೆ ನಗೆಯ ಹೊಳೆಯಾಗುತ್ತದೆ. ನಮ್ಮ ದಿನನಿತ್ಯದ ಜೀವನದಲ್ಲಿ ಅನೇಕ ಸ್ವಾರಸ್ಯಕರ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವನ್ನು ಅಷ್ಟೇ ರೋಚಕವಾಗಿ ಇನ್ನೊಬ್ಬರಿಗೆ ಬಣ್ಣಿಸುವುದೇ ಓರ್ವ ಹಾಸ್ಯ ಕಲಾವಿದನ ಸಾಮರ್ಥ್ಯ. ಎಲ್ಲರೂ ಹಾಸ್ಯ ಕಲಾವಿದರಾಗಬೇಕಿಲ್ಲ, ಹಾಸ್ಯವನ್ನು ಗುರುತಿಸಿ, ಸವಿದು ಇತರರೊಂದಿಗೆ ಹಂಚಿಕೊಂಡರೆ ಸಾಕು.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...