Homeಮುಖಪುಟನಕ್ಕು ನಗಿಸುವ ಕಲೆ ಬಗ್ಗೆ ನಿಮಗೆ ಗೊತ್ತಾ? ಇದರಿಂದಾಗುವ ಪ್ರಯೋಜನಗಳು ಬಹಳ

ನಕ್ಕು ನಗಿಸುವ ಕಲೆ ಬಗ್ಗೆ ನಿಮಗೆ ಗೊತ್ತಾ? ಇದರಿಂದಾಗುವ ಪ್ರಯೋಜನಗಳು ಬಹಳ

- Advertisement -
- Advertisement -

ಜೀವನ ಕಲೆಗಳು: ಅಂಕಣ -30

ನಕ್ಕು ನಗಿಸುವ ಕಲೆ

ಇದೂ ಕಲಿಯುವಂತಹ ಕಲೆಯೇ ಎಂದು ನೀವು ಆಶ್ಚರ್ಯದಿಂದ ಕೇಳಬಹುದು. ಹೌದು, ಇದೂ ಸಹ ಕಲಿಯಬಹುದಾದಂತಹ ಜೀವನಾವಶ್ಯಕ ಕಲೆ. ನಕ್ಕು ನಗಿಸುವ ಕಲೆ (ಸೆನ್ಸ್ ಆಫ್ ಹ್ಯೂಮರ್) ಇಲ್ಲದ ಮಾನವ ರಸ ಹಿಂಡಿದ ಕಬ್ಬಿನ ಜಲ್ಲೆಯಂತೆ, ಹೆಚ್ಚು ಪ್ರಯೋಜನವಿಲ್ಲ. ಆದರೆ ನಾವು ಹೇಗೆ, ಏಕೆ ನಗುತ್ತೇವೆ ಮತ್ತು ಇತರರನ್ನು ನಗಿಸುತ್ತೇವೆ ಅದರ ಮೇಲೆ ನಮ್ಮ ವ್ಯಕ್ತಿತ್ವದ ಪರೀಕ್ಷೆಯೂ ಆಗುತ್ತದೆ. ನಗುವುದರಿಂದ ಹಲವು ರೋಗಗಳೂ ಸಹ ತಾವಾಗಿಯೇ ಗುಣವಾಗುತ್ತವೆ ಎಂಬುದು ಹಲವರ ಅಭಿಪ್ರಾಯ.

ಇಂದಿನ ಜೀವನದಲ್ಲಿ ಹಾಸ್ಯರಸವನ್ನು ಆಸ್ವಾದಿಸುವ ಮುನ್ನ ನಿಮ್ಮ ಹಾಸ್ಯದಿಂದ ಅಥವಾ ಆಸ್ವಾದನೆಯಿಂದ ಇನ್ನೊಬ್ಬರಿಗೆ ಕಷ್ಟವಾಗುತ್ತಿದೆಯೇ ಇಲ್ಲವೇ ಎಂಬುದನ್ನು ಮೊದಲು ಅರಿಯಿರಿ.

·         ಮೊದಲು ನಿಮ್ಮ ಮುಖದಲ್ಲಿ ನಗುವಿರಲಿ, ಆದರೆ ನಿಮ್ಮ ಹಾಸ್ಯವನ್ನು ಹಂಚಿಕೊಳ್ಳುವಾಗ ಮಿಕ್ಕವರಿಗಿಂತ ನೀವೇ ಹೆಚ್ಚಾಗಿ/ಜೋರಾಗಿ ನಗಬೇಡಿ.

·         ಹಾಸ್ಯವನ್ನು ಹುಡುಕುವ ಪ್ರಯತ್ನ ಸತತವಾಗಿ ಮಾಡುತ್ತಿರಿ. ಹಾಸ್ಯ ಸಾಹಿತ್ಯ ಓದಿ, ಕಾಮೆಡಿ ಶೋ ನೋಡಿ.

·         ಯಾರಾದರೂ ನಿಮ್ಮನ್ನು ಕೋಪ ಬರುವಂತೆ ಮಾಡಿದಲ್ಲಿ, ಅವರಿಗೆ ನಿಮ್ಮ ಕೋಪದ ಶಕ್ತಿ ತೋರಿಸದೆ, ನಿಮ್ಮ ಹಾಸ್ಯದ ರುಚಿ ತೋರಿಸಿ.

·         ನಿಮ್ಮ ಜೀವನದ ಅತ್ಯಂತ ಹೀನಾಯಕರ (embarassing) ಕ್ಷಣದ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. ಇದರಿಂದ ನಿಮ್ಮ ಮೇಲೆ ನೀವೇ ನಗುವುದನ್ನು ಕಲಿಯಬಹುದು.

·         ಇತರರು ನಿಮಗೆ ಹಾಸ್ಯ ಪ್ರಸಂಗ ತಿಳಿಸಿದಾಗ ಸಕ್ರಿಯವಾಗಿ ಕೇಳಿಸಿಕೊಳ್ಳುವುದನ್ನು ಮತ್ತು ನಗುವುದನ್ನು ಕಲಿಯಿರಿ.

ಹಾಸ್ಯ ಒಂದು ರೀತಿಯ ಸಮಾನತೆ ತರುವ ವ್ಯವಸ್ಥೆ. ನಮ್ಮನ್ನು ನಗಿಸುತ್ತಿರುವ ವ್ಯಕ್ತಿಯ ಮೇಲೆ ನಾವು ಸಹಜವಾಗಿ ಕೋಪ ಮಾಡಿಕೊಳ್ಳುವುದು ಕಷ್ಟ, ತನ್ನ ಚೇಷ್ಟೆಯಿಂದ ಅವಾಂತರ ಮಾಡಿದ ಮಗು ನಿಮ್ಮದೇ ಆಗಿರಬಹುದು. ಒಮ್ಮೆ ಅದರ ಹಿಂದಿರುವ ಹಾಸ್ಯವನ್ನು ಅರ್ಥ ಮಾಡಿಕೊಂಡರೆ, ನಾವೂ ಅವರೊಂದಿಗೆ ನಗಲು ಪ್ರಾರಂಭಿಸಬಹುದು. ಹೀಗೆ ಹಾಸ್ಯವನ್ನು ಹಂಚಿಕೊಳ್ಳುವುದರಿಂದ ಸ್ನೇಹವೂ, ಸೌಹಾರ್ದವೂ ಬೆಳೆಯುತ್ತದೆ.

ಹಾಸ್ಯ ಯಾರಿಗೆ ತಾನೇ ಇಷ್ಟವಾಗುದಿಲ್ಲ, ಚಿಕ್ಕ ಮಕ್ಕಳು ಕಾರ್ಟೂನ್ ಟಿವಿ ಮುಂದೆ ಮೈಮರೆತು ನೋಡುತ್ತ ಕುಳಿತಿರುವುದನ್ನು, ಮತ್ತೆ ಅದೇ ಸಮಯದಲ್ಲಿ, ತಾಯಿ ಅವರಿಗೆ ತಿಳಿಯದಂತೆಯೇ ಅವರಿಗೆ ಇಷ್ಟವಾಗದ ತಿನಿಸುಗಳನ್ನು ತಿನ್ನಿಸಿದರೂ, ತಿನ್ನುವ ದೃಶ್ಯವನ್ನು ಬಹುತೇಕ ಮನೆಗಳಲ್ಲಿ ಕಂಡಿದ್ದೇವೆ. ಆಗ ಅವರಿಗೆ ಇಷ್ಟವಾಗುವುದು ದೈಹಿಕ ಹಾಸ್ಯ, ಅಂದರೆ ಯಾರೋ ಜಾರಿ ಬೀಳುವುದು, ಬೀಳಿಸುವುದು, ಸೊಟ್ಟ ಮೂತಿಗಳನ್ನು ಮಾಡುವುದು, ಬೇರೆಯವರನ್ನು ಅಣಕಿಸುವುದು ಇತ್ಯಾದಿ. ಶಾಲೆಯ ಮಕ್ಕಳೂ ಸಹ ಸ್ವಲ್ಪ ದೊಡ್ಡವರಾದ ಮೇಲೆ, ಭಾಷೆಯ ಅಂಗವಾಗಿ, ನಗೆಹನಿ ಮುಂತಾದುದನ್ನು ಸಂಗ್ರಹಿಸುವ ಮತ್ತು ಸ್ನೇಹಿತರ ಜೊತೆ ಅದನ್ನು ಹಂಚಿಕೊಳ್ಳುವ ಕೆಲಸ ಪ್ರಾರಂಭಿಸುತ್ತಾರೆ. ಆದರೆ ಯಾವುದು ಚಿಕ್ಕಂದಿನಲ್ಲಿ ಹಾಸ್ಯ ಎಂದು ಅನಿಸುತ್ತಿತ್ತೋ ಅದು ದೊಡ್ಡವರಾದಂತೆ ಹಾಸ್ಯ ಎಂದು ಅನಿಸುವುದಿಲ್ಲ. ಹಾಗಾಗಿ ಭಾಷೆಯಲ್ಲಿ, ಸಾಹಿತ್ಯದಲ್ಲಿ, ಸನ್ನಿವೇಶದಲ್ಲಿ, ಸಿನಿಮಾ, ನಾಟಕ, ಟಿವಿ ಸೀರಿಯಲ್ ಇವುಗಳಲ್ಲಿ ಹಾಸ್ಯ ಹುಡುಕುವ ಕೆಲಸ ಮುಂದುವರೆಯುತ್ತದೆ.

ಹಾಸ್ಯ ಹೇಗಿರಬೇಕು? ಎಲ್ಲರೂ ಒಟ್ಟಾಗಿ ಕೂತು ಅದನ್ನು ಆಸ್ವಾದಿಸುವಂತಿರಬೇಕು. ಒಬ್ಬರಿಗೆ ಅಥವಾ ಕೆಲವರಿಗೆ ಹಿಂಸೆ ಕೊಡುವಂತಹ ಪ್ರಯತ್ನ ಹಾಸ್ಯವಲ್ಲ. ಒಬ್ಬರನ್ನು ಅಥವಾ ಒಂದು ಗುಂಪು/ಸಮುದಾಯವನ್ನು ಹೀಯಾಳಿಸುವುದು ಹಾಸ್ಯವಲ್ಲ. ಇನ್ನೊಬ್ಬರ ದೈಹಿಕ ನ್ಯೂನತೆಯನ್ನು ಅಣಕಿಸುವುದು, ಅದರ ಮೇಲೆ ಟೀಕೆ ಟಿಪ್ಪಣಿ ಮಾಡುವುದು ಹಾಸ್ಯವಲ್ಲ.ಅದರ ಸೃಷ್ಟಿ ಹೇಗೆ ಮತ್ತು ಏಕೆ ಆಗಿದೆ ಎಂಬುದರ ಮೇಲೆಯೂ ಹಾಸ್ಯದ ಗುಣಮಟ್ಟ ನಿರ್ಧಾರವಾಗುತ್ತದೆ. ಎಲ್ಲಾ ಹಾಸ್ಯವೂ ಜನರು ಗಹಗಹಿಸಿ ನಗುವಂತಹ ರೀತಿಯದ್ದಾಗಿರಬೇಕಿಲ್ಲ. ಬಿಗುಪಿನ ವಾತಾವರಣವನ್ನು ತಿಳಿಗೊಳಿಸುವ ಮಂದಹಾಸ್ಯವೂ ಪ್ರಯೋಜನಕಾರಿ. ಒಬ್ಬರ ಅಥವಾ ಒಂದು ವ್ಯವಸ್ಥೆಯ ದೌರ್ಬಲ್ಯವನ್ನು ಹಾಸ್ಯದ ಮೂಲಕ ತೋರಿಸಿ, ಅದನ್ನು ಸರಿಪಡಿಸುವ ಅಥವಾ ಇತರರಿಗೆ ತಿಳಿಸುವ ಪ್ರಯತ್ನದಲ್ಲಿ ಹಾಸ್ಯ ಮಾಧ್ಯಮವಾದಲ್ಲಿ ಅದಕ್ಕೆ ಬೆಲೆ ಇರುತ್ತದೆ.

ಸಿಟ್ಟಿನಿಂದ ಅಥವಾ ಗಂಭೀರವಾಗಿ ಮಾಡಿದ ವಿಮರ್ಶಾತ್ಮಕ ಟೀಕೆಗಿಂತಲೂ ಹಾಸ್ಯದಿಂದ ಮಾಡಿದ ಟೀಕೆ ಎದುರಾಳಿಯ ಗಂಟಲಿಗೆ ಸಿಕ್ಕಿಕೊಳ್ಳದೆ ಸಲೀಸಾಗಿ ಮನಸ್ಸಿಗೆ ಇಳಿಯುತ್ತದೆ. ಸಂವಹನದಲ್ಲಿ ಕಷ್ಟಕರ ಸಂದೇಶವನ್ನು ಸಮರ್ಪಕವಾಗಿ  ತಲುಪಿಸಲು ಹಾಸ್ಯ ಸಹಕಾರಿಯಾಗುತ್ತದೆ. ಹಾಸ್ಯ ಅವಮಾನ ಅಥವಾ ಅವಹೇಳನಕಾರಿಯಾಗಿರಬಾರದು.

ಹಾಸ್ಯದಲ್ಲಿ ಸನ್ನಿವೇಶ ಮುಖ್ಯ ಪಾತ್ರ ವಹಿಸುತ್ತದೆ. ಒಂದೇ ತರಹದ ಹಾಸ್ಯ ಎಲ್ಲಾ ಸನ್ನಿವೇಶದಲ್ಲೂ ಸರಿಹೊಂದುವುದಿಲ್ಲ. ನಿಮ್ಮ ಹಾಸ್ಯದ ಗುರಿ ಯಾರು? ಇದರಿಂದ ಕೇಳುವವರಲ್ಲಿ ಯಾವ ಭಾವನೆ ಜಾಗೃತವಾಗುತ್ತದೆ ಮತ್ತು ಅದು ಇಲ್ಲಿ ಕೇಳಿಸಿಕೊಳ್ಳುತ್ತಿರುವ ಗುಂಪಿಗೆ ಸೂಕ್ತವೇ? ಇದೇ ಹಾಸ್ಯ ಮುಂದೆ ಬೇರೆಯವರಿಗೆ ತಲುಪಿದರೆ ಅದರ ಪರಿಣಾಮ ಏನು? ಹಾಸ್ಯಕ್ಕೆ ಇದು ಸರಿಯಾದ ಸಮಯವೇ? ಇವುಗಳನ್ನು ಪರಿಗಣಿಸಿನಿಮ್ಮ ಹಾಸ್ಯದ ಬತ್ತಳಿಕೆಯನ್ನು ಬಿಚ್ಚಿ. ಅಕಸ್ಮಾತ್ ನಿಮ್ಮ ಹಾಸ್ಯದ ಪ್ರಯತ್ನ ಸರಿಹೋಗಲಿಲ್ಲವೆಂದರೆ ಕೂಡಲೇ ಪರಿಸ್ಥಿತಿಯನ್ನು ನಿಯಂತ್ರಿಸಿ. ಯಾರಿಗೆ ಅದರಿಂದ ನೋವಾಗಿದೆಯೋ ಅವರ ಕ್ಷಮೆ ಕೋರಿ.

ನಮ್ಮ ಸೋದರಮಾವ ಅರವತ್ತರ ದಶಕದಲ್ಲಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾರತ-ಚೀನ ಯುದ್ಧದ ನಂತರದ ರೇಷನ್ ಕಾಲ. ಇನ್ನೂ ಮದುವೆಯಾಗದ ಮಾವನ ರೇಷನ್ ಕಾರ್ಡಿನಲ್ಲಿದ್ದುದು ಒಂದೇ ಹೆಸರು. ಕಾಫಿ ಮಾತ್ರ ಮನೆಯಲ್ಲಿ ಮಾಡಿಕೊಂಡು ಊಟಕ್ಕೆ ಖಾನಾವಳಿ ಆಶ್ರಯಿಸಿದ್ದರು. ಸಕ್ಕರೆ ಹೊರಗೆ ಮಾರುಕಟ್ಟೆಯಲ್ಲಿ ಸಿಗುವ ವಸ್ತುವಾಗಿರಲಿಲ್ಲ. ಒಬ್ಬರಿಗೆ ಒಂದು ತಿಂಗಳಿಗೆ ಕೇವಲ ಒಂದು ಪೌಂಡ್ (454 ಗ್ರಾಂ) ಸಕ್ಕರೆ ಸಿಗುತ್ತಿತ್ತು. ಅದನ್ನು ಪ್ರತಿ ವಾರ ಪಡಿತರ ಅಂಗಡಿಯ ಸರದಿಯಲ್ಲಿ ನಿಂತು, ಕಾಯ್ದು ತರಬೇಕಿತ್ತು. ಇವರ ಸರದಿ ಬಂದಾಗ ಕೇವಲ ಸಕ್ಕರೆ ಎಂದಿದ್ದು ನೋಡಿ, ಅಂಗಡಿಯವನು ಲೆಕ್ಕ ಹಾಕಿ ಇವರ ಪಾಲಿನ ಸಕ್ಕರೆಯನ್ನು ಕಾಗದದ ಪೊಟ್ಟಣದಲ್ಲಿ ಕಟ್ಟುವ ಮುನ್ನ ಕೇಳಿದ “ಇದನ್ನು ಇಲ್ಲೇ ತಿನ್ನುತ್ತೀರೋ ಅಥವಾ ಮನೆಗೆ ಒಯ್ಯುತ್ತೀರೋ” ಎಂದು ಕೇಳಿದನಂತೆ. ಏಕೆಂದರೆ ಅವರಿಗೆ ಸಿಗುತ್ತಿದ್ದದ್ದು ಕೇವಲ 113 ಗ್ರಾಂ ಸಕ್ಕರೆ. ಅದನ್ನು ಮಾವ ಒಂದು ವಾರಕ್ಕೆ ಸಾಕಾಗುವಂತೆ ನಿರ್ವಹಣೆ ಮಾಡಿಕೊಳ್ಳಬೇಕಾಗಿತ್ತು. ಇದರಲ್ಲಿ ಹಾಸ್ಯ ಎಲ್ಲಿದೆ ಎಂದು ಕೆಲವರಿಗೆ ಅನಿಸಬಹುದು.

ಹಾಸ್ಯ ಎಲ್ಲೆಡೆ ಹರಡಿರುತ್ತದೆ. ಅದನ್ನು ಸರಿಯಾಗಿ ಹೆಕ್ಕಿ, ತೊಳೆದು, ಸರಿಯಾದ ಸ್ಥಳದಲ್ಲಿ ಮಿಂಚುವಂತೆ ಪ್ರದರ್ಶಿಸಿದರೆ ಅದು ನಗೆ ಹನಿಯಾಗುತ್ತದೆ. ಹೆಚ್ಚಿನ ಅಳತೆಯಲ್ಲಿದ್ದರೆ ನಗೆಯ ಹೊಳೆಯಾಗುತ್ತದೆ. ನಮ್ಮ ದಿನನಿತ್ಯದ ಜೀವನದಲ್ಲಿ ಅನೇಕ ಸ್ವಾರಸ್ಯಕರ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವನ್ನು ಅಷ್ಟೇ ರೋಚಕವಾಗಿ ಇನ್ನೊಬ್ಬರಿಗೆ ಬಣ್ಣಿಸುವುದೇ ಓರ್ವ ಹಾಸ್ಯ ಕಲಾವಿದನ ಸಾಮರ್ಥ್ಯ. ಎಲ್ಲರೂ ಹಾಸ್ಯ ಕಲಾವಿದರಾಗಬೇಕಿಲ್ಲ, ಹಾಸ್ಯವನ್ನು ಗುರುತಿಸಿ, ಸವಿದು ಇತರರೊಂದಿಗೆ ಹಂಚಿಕೊಂಡರೆ ಸಾಕು.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಥಳಾಂತರಗೊಂಡ ಅಕ್ಬರ್ ನಗರ ನಿವಾಸಿಗಳನ್ನು SIR ನಿಂದ ಹೊರಗಿಟ್ಟಿರುವ ಬಗ್ಗೆ ಪರಿಶೀಲಿಸಲು ಲಕ್ನೋ ಚುನಾವಣಾ ಅಧಿಕಾರಿಗೆ ಸುಪ್ರೀಂ ಸೂಚನೆ

ಉತ್ತರ ಪ್ರದೇಶದಲ್ಲಿ ತಮ್ಮ ಮನೆಗಳನ್ನು ನೆಲಸಮಗೊಳಿಸಿ, ಸ್ಥಳಾಂತರದ ನಂತರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಿಂದ ತಮ್ಮನ್ನು ಹೊರಗಿಡಲಾಗಿದೆ ಎಂದು ಆರೋಪಿಸಿ ಅಕ್ಬರ್ ನಗರದ ಮಾಜಿ ನಿವಾಸಿಗಳು ಎತ್ತಿರುವ ದೂರುಗಳನ್ನು...

‘ವಯಸ್ಕರು ಒಟ್ಟಿಗೆ ವಾಸಿಸಲು ನಿರ್ಧರಿಸುವುದು ಅಪರಾಧವಲ್ಲ..’; ಅಂತರಧರ್ಮೀಯ ಜೋಡಿ ಕುರಿತು ಕೋರ್ಟ್ ಮಹತ್ವದ ತೀರ್ಪು

"ಅಂತರ್ಧರ್ಮೀಯರಾದ ಇಬ್ಬರು ವಯಸ್ಕ ವ್ಯಕ್ತಿಗಳು, ಅವರು ತಮ್ಮ ಸ್ವತಂತ್ರ ಇಚ್ಛೆಯಿಂದ ಒಟ್ಟಿಗೆ ವಾಸಿಸಲು ನಿರ್ಧರಿಸುತ್ತಾರೆ, ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾನೂನು ಅವರನ್ನು ತಡೆಯಲು ಅಥವಾ ಅಂತರಧರ್ಮೀಯ ವಿವಾಹಗಳನ್ನು ನಿಷೇಧಿಸಲು ಸಾಧ್ಯವಿಲ್ಲ" ಎಂದು...

ಗೋರಖ್‌ಪುರದ ಏಮ್ಸ್‌ನಲ್ಲಿ ನಾಗಾಲ್ಯಾಂಡ್ ವೈದ್ಯೆಗೆ ಕಿರುಕುಳ; ಜನಾಂಗೀಯ ನಿಂದನೆ

ಉತ್ತರ ಪ್ರದೇಶದ ಗೋರಖ್‌ಪುರದ ಏಮ್ಸ್‌ನಲ್ಲಿ ನಿಯೋಜಿತರಾಗಿದ್ದ ನಾಗಾಲ್ಯಾಂಡ್‌ನ ಮೂರನೇ ವರ್ಷದ ನಿವಾಸಿ ವೈದ್ಯರ ಮೇಲೆ ಭಾನುವಾರ ಸಂಜೆ ಸಂಸ್ಥೆಯ ಆವರಣದ ಬಳಿ ಮೂವರು ಜನಾಂಗೀಯ ನಿಂದನೆ, ಕಿರುಕುಳ ಮತ್ತು ದೈಹಿಕ ಹಲ್ಲೆ ನಡೆಸಿದ್ದಾರೆ...

‘2026 ರಲ್ಲಿ ಸಮುದ್ರವನ್ನು ಪ್ರಾಬಲ್ಯಗೊಳಿಸುತ್ತೇವೆ’: ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸೈಫುಲ್ಲಾ ಕಸೂರಿಯಿಂದ ಭಾರತಕ್ಕೆ ಬಹಿರಂಗ ಬೆದರಿಕೆ

2008ರ ಮುಂಬೈ ದಾಳಿಯ ಭೀಕರತೆಯನ್ನು ಪ್ರತಿಧ್ವನಿಸುವ ಕಟು ಬೆದರಿಕೆಯಲ್ಲಿ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (LeT) ಭಾರತದಲ್ಲಿ ಮತ್ತೊಮ್ಮೆ ಸಮುದ್ರ ಮಾರ್ಗವನ್ನು ಬಳಸಿಕೊಂಡು 26/11 ಮಾದರಿಯ ದಾಳಿಯನ್ನು ನಡೆಸುವುದಾಗಿ ಬೆದರಿಕೆ ಹಾಕಿದೆ...

ಕೇರಳ ಹೆಸರು ಇನ್ನು ಮುಂದೆ ‘ಕೇರಳಂ’; ಕೇಂದ್ರ ಸಚಿವ ಸಂಪುಟ ಅನುಮೋದನೆ

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾಯಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. "ಕೇರಳವನ್ನು ಕೇರಳಂ ಎಂದು ಮರುನಾಮಕರಣ ಮಾಡಲು ಕೇಂದ್ರ...

ನಾಡೋಜ ಗೌರವ ತಿರಸ್ಕರಿಸಿದ ಹಿರಿಯ ಚಿಂತಕ ಡಾ ಜಿ. ರಾಮಕೃಷ್ಣ; ರಾಜ್ಯಪಾಲರಿಂದ ಗೌರವ ಸ್ವೀಕರಿಸದಿರಲು ನಿರ್ಧಾರ

ಹಿರಿಯ ಚಿಂತಕ ಡಾ.ಜಿ.ರಾಮಕೃಷ್ಣ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ನಾಡೋಜ ಪ್ರಶಸ್ತಿಯನ್ನು ರಾಜ್ಯಪಾಲರಿಂದ ಸ್ವೀಕರಿಸಲು ನಿರಾಕರಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರಣ್ಯ ಕ್ಯಾಂಪಸ್‌ನ ‘ನವರಂಗ’ ಬಯಲು ರಂಗಮಂದಿರದಲ್ಲಿ ಮಂಗಳವಾರ ನಡೆಯುವ 34ನೇ ನುಡಿಹಬ್ಬದಲ್ಲಿ...

‘ಕೇರಳ ಸಂಪೂರ್ಣ ಸಾಮರಸ್ಯದಿಂದ ಬದುಕುತ್ತಿದೆ, ಸಿನಿಮಾದಲ್ಲಿ ತಪ್ಪು ಚಿತ್ರಣವಿದೆ’: ‘ದಿ ಕೇರಳ ಸ್ಟೋರಿ 2’ ಕುರಿತು ಕೇರಳ ಹೈಕೋರ್ಟ್

ವಿವಾದಾತ್ಮಕ 'ದಿ ಕೇರಳ ಸ್ಟೋರಿ 2 -ಗೋಸ್ ಬಿಯಾಂಡ್' ಸಿನಿಮಾಗೆ ಸರ್ಟಿಫಿಕೇಟ್ ನೀಡಿರುವ ಕುರಿತು ಕೇರಳ ಹೈಕೋರ್ಟ್ ಮಂಗಳವಾರ (ಫೆ.24) ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು (ಸಿಬಿಎಫ್‌ಸಿ) ಪ್ರಶ್ನಿಸಿದೆ ಎಂದು ಕಾನೂನು ಸುದ್ದಿ...

‘ಸರ್ವಾಧಿಕಾರಿ ಪ್ರವೃತ್ತಿ, ಹೇಡಿತನಕ್ಕೆ ಸಾಕ್ಷಿ’ : ಯುವ ಕಾಂಗ್ರೆಸ್‌ ನಾಯಕರ ಬಂಧನ ಖಂಡಿಸಿದ ರಾಹುಲ್ ಗಾಂಧಿ

ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ಪಕ್ಷದ ಇತರ ಸದಸ್ಯರ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, "ಇದು ಸರ್ವಾಧಿಕಾರಿ ಪ್ರವೃತ್ತಿ ಮತ್ತು...

‘ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ’; ನ್ಯಾಯಮೂರ್ತಿ ಉಜ್ವಲ್  ಭೂಯಾನ್

ಹೊಸದಿಲ್ಲಿ: ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನತೆ ಮತ್ತು ಘನತೆಯ ಭರವಸೆ ನೀಡುತ್ತದೆ. ಆದರೆ ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ...

ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ಆರೋಪ; ಎಎಸ್ಎ ಪ್ರತಿಭಟನೆ

ದಲಿತ ವಿದ್ಯಾರ್ಥಿಯ ಮೇಲೆ ಜಾತಿ ಆಧಾರಿತ ಹಲ್ಲೆ ನಡೆದಿದ್ದರೂ ಪ್ರಕರಣದಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದ (ಯುಒಎಚ್) ಆಡಳಿತಾತ್ಮಕ ನಿಷ್ಕ್ರಿಯತೆ ಇದೆ ಎಂದು ಆರೋಪಿಸಿ, ಅಂಬೇಡ್ಕರ್ ವಿದ್ಯಾರ್ಥಿ ಸಂಘ (ಎಎಸ್ಎ) ಸೋಮವಾರ (ಫೆ.23) ಪ್ರತಿಭಟನೆ ನಡೆಸಿತು...