Homeಕರ್ನಾಟಕವಿಧಾನಸಭೆಗೆ ಯಡಿಯೂರಪ್ಪ ವಿದಾಯ: ಶಿಕಾರಿಪುರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಬಹುದೆ?

ವಿಧಾನಸಭೆಗೆ ಯಡಿಯೂರಪ್ಪ ವಿದಾಯ: ಶಿಕಾರಿಪುರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಬಹುದೆ?

ಬಿ.ವೈ ವಿಜಯೇಂದ್ರರಿಗೆ ಪೈಪೋಟಿ ಕೊಡಲು ಸಜ್ಜಾಗಿದ್ದಾರೆ ಸಾದಲಿಂಗಾಯಿತ ಸಮುದಾಯದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜಗೌಡ...

- Advertisement -
- Advertisement -

ಶಿಕಾರಿಪುರ ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿ ಬಿಜೆಪಿ ಪಕ್ಷದ ಯಡಿಯೂರಪ್ಪ ತಮ್ಮ ಮಗ ವಿಜಯೇಂದ್ರರಿಗೆ ಬಿಟ್ಟುಕೊಡುವ ಘೋಷಣೆ ಮಾಡಿದ ಕ್ಷಣದಿಂದ ಇಲ್ಲಿನ ಚಟುವಟಿಕೆಗಳು ತೀವ್ರಗೊಂಡಿದೆ. ಈ ನಡುವೆ ಟಿಕೆಟ್ ಆಕಾಂಕ್ಷಿಗಳು ಎರಡು ಲಕ್ಷ ರೂಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಕಾಂಗ್ರೆಸ್ ಸುತ್ತೋಲೆ ಹೊರಡಿಸಿದ ಮೇಲೆ ಶಿಕಾರಿಪುರದಿಂದ ಬಳ್ಳಿಗಾವಿಯ ಪುಷ್ಪ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಇವರ ಪತಿ ಪಿ.ಓ ಶಿವಕುಮಾರ್ ಎಂಬ ನಿವೃತ್ತ ಪೊಲೀಸ್ ಅಧಿಕಾರಿ. ಪುಷ್ಪ ಅವರ ಮಾವ ಕಡೂರು ಕ್ಷೇತ್ರದ ಶಾಸಕರಾಗಿದ್ದ ಓಂಕಾರ ಮೂರ್ತಿಯವರು. ಪಿ.ಓ ಶಿವಕುಮಾರ್ ತಮ್ಮ ಬಹುಪಾಲು ಸರ್ವಿಸ್‌ಅನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದವರು. ಆಳುವ ಪಕ್ಷದ ನಿಷ್ಠಾವಂತ ಸೇವಕರಾದ ಇವರು ಯಡಿಯೂರಪ್ಪನವರಿಗೆ ಹಿಂದಿನಿಂದಲೂ ನಿಷ್ಠರು. ಚುನಾವಣಾ ಖರ್ಚಿಗೆ ಬೇಕಾದಕ್ಕಿಂತಲೂ ಹೆಚ್ಚಿನ ಹಣವೂ ಇವರ ಬಳಿ ಇದೆ. ಆದರೆ, ಪುಷ್ಪರ ಚುನಾವಣಾ ಖರ್ಚನ್ನು ಯಡಿಯೂರಪ್ಪನವರೇ ನಿಭಾಯಿಸಬಲ್ಲರು. ಕುತೂಹಲವೆಂದರೆ ಪುಷ್ಪ ಸಾದಲಿಂಗಾಯಿತ ಸಮುದಾಯದವರೇ ಕೂಡ. ಅವರು ಕಾಂಗ್ರೆಸ್ ಕ್ಯಾಂಡಿಡೇಟ್ ಆಗಲು ಯಡಿಯೂರಪ್ಪನವರೇ ಸಂಚು ಮಾಡಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ, ಮಗನನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಲು, ಕಾಂಗ್ರೆಸ್‌ನಿಂದ ದುರ್ಬಲ ಕ್ಯಾಂಡಿಡೇಟ್ ನಿಲ್ಲಿಸಿ ಅಖಾಡ ನಿರ್ಮಿಸುವ ಚಾಣಾಕ್ಷತನ ಯಡಿಯೂರಪ್ಪನವರದು ಎಂಬ ಗುಲ್ಲಿದೆ. ಹೇಗಿದ್ದರೂ ಸಿದ್ದರಾಮಯ್ಯ ಯಡಿಯೂರಪ್ಪನವರ ನಡುವೆ ಸಂಬಂಧ ಚೆನ್ನಾಗಿದೆ; ಇನ್ನು ಡಿ.ಕೆ ಶಿವಕುಮಾರರೊಡನೆ ವ್ಯಾವಹಾರಿಕ ಸಂಬಂಧವೂ ಇದೆಯಂತೆ. ಆದ್ದರಿಂದ ಕಾಂಗ್ರೆಸ್‌ನಿಂದ ದುರ್ಬಲವಾದ ಅಭ್ಯರ್ಥಿ ನಿಲ್ಲಿಸುತ್ತಾರೆಂಬುದು ಶಿಕಾರಿಪುರದ ಜನಗಳ ಊಹೆ.

ಶಿಕಾರಿಪುರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕುರುಬ ಜನಾಂಗದ ಗೋಣಿ ಮಾಲತೇಶ್ ಶಕ್ತಿವಂತ ಅಭ್ಯರ್ಥಿಯಾದರೂ ವಿಜಯೇಂದ್ರ ಎದುರು ಗೆಲ್ಲಲಾಗುವುದಿಲ್ಲ. ಗೆಲ್ಲಬೇಕಾದರೆ ಇಲ್ಲಿನ ಬಹುಸಂಖ್ಯಾತರಾದ ಸಾದಲಿಂಗಾಯಿತರ ಓಟು ಪಡೆಯಬೇಕು. ಸಾದರು ತಮ್ಮ ಜನಾಂಗದ ಅಭ್ಯರ್ಥಿಯನ್ನು ಬಿಟ್ಟು ಇತರರಿಗೆ ಓಟು ಮಾಡಿದ ಇತಿಹಾಸವಿಲ್ಲ. ಈ ಹಿಂದೆ ಅಂತಹದೊಂದು ಇತಿಹಾಸ ಜರುಗುವುದಿತ್ತು. ಯಡಿಯೂರಪ್ಪ ಎದುರು ನಿಂತಿದ್ದ ನಗರದ ಮಹದೇವಪ್ಪ (1989-ಪಕ್ಷೇತರ ಅಭ್ಯರ್ಥಿ) ಕಡಿಮೆ ಅಂತರದಿಂದ (2274 ಮತಗಳು) ಸೋತರು. ಕಾಂಗ್ರೆಸ್‌ನವರು ಅಂದು ಮಹದೇವಪ್ಪನವರಿಗೆ ಸಹಾಯ ಮಾಡಿದ್ದರೆ ಗೆದ್ದುಬಿಡುತ್ತಿದ್ದರು. ಅದೊಂದು ಇತಿಹಾಸವಾಗಿ ದಾಖಲಾಗುತ್ತಿತ್ತು. ಅದಾಗಲಿಲ್ಲ. ಆದರೆ, ಆ ನಂತರ ಇನ್ನೊಂದು ಪ್ರಯೋಗವನ್ನು ಬಂಗಾರಪ್ಪ ಮಾಡಿದರು.

ಸಾದಲಿಂಗಾಯಿತರ ಮಹಾಲಿಂಗಪ್ಪನವರನ್ನು (1999-ಕಾಂಗ್ರೆಸ್) ಗೆಲ್ಲಿಸಿ ಎಸ್‌ಎಂ ಕೃಷ್ಣರಿಗೆ ವಿರೋಧ ಪಕ್ಷವೇ ಇಲ್ಲದಂತೆ ಮಾಡಿದ್ದರು. ಈಗ ಕಾಲ ಸರಿದಿದೆ; ಮತದಾರ ಹಳೆ ಕ್ಯಾಂಡಿಡೇಟ್‌ಗಳನ್ನ ಗುಜರಿಗೆ ಹಾಕಿ ಹೊಸ ಮುಖಗಳಿಗಾಗಿ ಹಂಬಲಿಸುತ್ತಿದ್ದಾರೆ. ಇಂತಹ ವೇಳೆಯಲ್ಲಿ ಯಡಿಯೂರಪ್ಪ ಭ್ರಷ್ಟ ಆರೋಪಗಳನ್ನು ಹಾಸುಹೊದ್ದಿರುವ ವಿಜಯೇಂದ್ರರನ್ನು ಶಿಕಾರಿಪುರಕ್ಕೆ ತಂದಿದ್ದಾರೆ. ಯಡಿಯೂರಪ್ಪ ಶಿಕಾರಿಪುರಕ್ಕೆ ತಂದಿರುವ ಕಟ್ಟಡಗಳನ್ನ ನೋಡಿದರೆ ವಿಜಯೇಂದ್ರ ಅನಾಯಾಸವಾಗಿ ಗೆಲ್ಲಬಹುದು. ಆದರೆ ಅದಾಗುವುದಿಲ್ಲ ಏಕೆಂದರೆ ವಿಜಯೇಂದ್ರ ಶಾಸಕ, ಮಂತ್ರಿ ಇದ್ಯಾವುದೂ ಆಗದೆ ಭ್ರಷ್ಟತೆಯ ಆರೋಪ ಹೊತ್ತಿದ್ದಾರೆ. ನಲವತ್ತು ಪರಸೆಂಟ್ ಕಮಿಷನ್ ದೂರು ಇವರ ಕೈಗೂ ಅಂಟಿದೆ. ಅದಕ್ಕಿಂತಲೂ ಸರಕಾರದ ಮಟ್ಟದ ಬಹುದೊಡ್ಡ ಹಗರಣಗಳಲ್ಲೂ ಇವರ ಹೆಸರು ಕೇಳಿಬಂದಿದೆ. ಕ್ಷೇತ್ರದ ಅನುದಾನಕ್ಕಾಗಿ ಶಾಸಕರು ಇವರೆದುರು ಕೈಕಟ್ಟಿ ವಿಧೇಯತೆಯಿಂದ ನಿಂತ ಉದಾಹರಣೆಗಳಿವೆ. ಆದ್ದರಿಂದ ಇವರ ಗೆಲುವು ಸ್ವಪಕ್ಷೀಯರಿಗೇ ಬೇಕಿಲ್ಲ. ಇನ್ನು ಕ್ಷೇತ್ರದ ಮತದಾರರ ಅಭಿಪ್ರಾಯ ಕೇಳಿದರೆ, ’ಎಲ್ಲೊ ಹೋಗುತ್ತಿದ್ದವರು ಇಲ್ಲಿ ಇಳಿದುಹೋಗಬಲ್ಲರೇ ಹೊರತು ಶಿಕಾರಿಪುರಕ್ಕೂ ಇವರಿಗೂ ಸಂಬಂಧ ಬೆಳೆಯಲಾರದು’ ಎನ್ನುತ್ತಾರೆ.

ನಾಗರಾಜಗೌಡ

ಯಡಿಯೂರಪ್ಪ ಕ್ಷೇತ್ರಕ್ಕೆ ಮಂಜೂರು ಮಾಡಿದ ಕಾರ್ಯಕ್ರಮಗಳು, ಒಂದು ಪಾರ್ಟಿ ಮತ್ತು ಒಂದು ವರ್ಗಕ್ಕೆ ಸೀಮಿತವಾಗಿ ಹಂಚಿಕೆಯಾಗಿದೆ. ಅದರಲ್ಲೂ ಲಂಚ ನಡೆದಿದೆಯೆಂದ ಆರೋಪವಿದೆ; ಗಂಗಾಕಲ್ಯಾಣದಂತಹ ಕಾರ್ಯಕ್ರಮದಲ್ಲೂ ಕೂಡ. ಯಡಿಯೂರಪ್ಪನವರ ಬಗ್ಗೆ ನೀವೆಂತಹ ಆಪಾದನೆ ಮಾಡಿದರೂ ಅದವರಿಗೆ ತಾಗುವುದಿಲ್ಲ. ಏಕೆಂದರೆ ಅವರ ರಾಜಕಾರಣದ ಹಿನ್ನೆಲೆಯೇ ಹಾಗಿದೆ. ಶಿಕಾರಿಪುರ, ಶಿವಮೊಗ್ಗ, ಬೆಂಗಳೂರಿನಿಂದ ಹಿಡಿದು ವಿದೇಶದವರೆಗೂ ಅವರ ಆಸ್ತಿ ಬೆಳೆದಿದೆ. ಆದ್ದರಿಂದ ನಮ್ಮ ಕಷ್ಟಸುಖದ ವಿಷಯಕ್ಕೆ ಸ್ಥಳೀಯ ನಾಯಕ ಬೇಕು ಎಂಬುದು ಸ್ಥಳೀಯರ ವಾದ. ಅದಕ್ಕಾಗಿ ಸ್ಥಳೀಯವಾಗಿ ನಾಗರಾಜಗೌಡ ಎಂಬ ಯುವಕನನ್ನು ಪ್ರಜ್ಞಾವಂತ ಮತದಾರರು ಮುಂದುಮಾಡಿದ್ದಾರೆ.

ನಾಗರಾಜಗೌಡ ಸಾದಲಿಂಗಾಯಿತ ಸಮುದಾಯದವರಾಗಿದ್ದು ಮೂರು ಬಾರಿ ಕೌನ್ಸಿಲರ್ ಆಗಿದ್ದರು; ಈಗ ಕಾಂಗ್ರೆಸ್ಸಿನ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ನಾಗರಾಜಗೌಡರ ತಂದೆ ಹಾಗೂ ಚಿಕ್ಕಪ್ಪ ಶಾಂತವೀರಪ್ಪಗೌಡ ಯಡಿಯೂರಪ್ಪನವರ ಜೊತೆಯಲ್ಲೇ ರಾಜಕಾರಣ ಮಾಡಿದವರು; ಮತ್ತು ಅವರ ಸಂಚುಗಳಿಗೆ ಬಲಿಯಾದವರು ಎಂದು ಆರೋಪಿಸಲಾಗುತ್ತದೆ. ಈಗ ತಮ್ಮ ಮಗನನ್ನೇ ತಂದು ಪ್ರತಿಷ್ಠಾಪಿಸುವುದರ ವಿರುದ್ಧ ಇವರೆಲ್ಲಾ ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೊಡಬೇಕಾದರೆ ಕ್ಷೇತ್ರದ ಸಮೀಕ್ಷೆ ಮಾಡಿ ಜನಾಭಿಪ್ರಾಯ ಸಂಗ್ರಹಿಸುತ್ತದೆ ಎಂಬ ಸುದ್ದಿಯಿಂದ ಸೌಮ್ಯ ಸ್ವಭಾವದ ನಾಗರಾಜಗೌಡ ಈಗಾಗಲೇ ಕ್ಷೇತ್ರ ಸುತ್ತಿ ಸಮೀಕ್ಷಕರ ತೀರ್ಪಿಗಾಗಿ ಕಾಯುತ್ತಿದ್ದಾರೆ. ಶಿಕಾರಿಪುರದಲ್ಲಿ ಸಾದಲಿಂಗಾಯಿತರು, ಕುರುಬರು ಮತ್ತು ಮುಸ್ಲಿಮರು ಒಮ್ಮುಖವಾಗಿ ಮತಚಲಾಯಿಸಿದರೆ ಸಾಕು ಆ ಅಭ್ಯರ್ಥಿ ಗೆಲುವು ಸಲೀಸಾದಂತೆಯೇ!

ಇದನ್ನೂ ಓದಿ: ವಿಚಾರಕ್ರಾಂತಿಗೆ ಆಹ್ವಾನ: ಆಗ- ಈಗ

ಯಡಿಯೂರಪ್ಪರ ಬಗೆಗಿನ ಭ್ರಮನಿರಸನಕ್ಕೆ ಕಾರಣಗಳಿವೆ; ಅವರ ಅಧಿಕಾರಾವಧಿಯಲ್ಲಿ ಬೃಹತ್ ಕಟ್ಟಡಗಳು ಬಂದಿವೆ. ರಸ್ತೆ ಅಗಲೀಕರಣಗೊಂಡಿದೆ. ಆಸ್ಪತ್ರೆ ಕಟ್ಟಡವೂ ಇದೆ. ಕಲೆ ಸಾಹಿತ್ಯ ಸಂಗೀತದಿಂದ ದೂರವಿರುವ ಯಡಿಯರಪ್ಪನವರಿಗೂ ಇವುಗಳಿಗೆ ಸಂಬಂಧಿಸಿದ ಮಂದಿರಗಳಿಗೂ ಸಂಬಂಧವಿಲ್ಲ, ಹಾಗಾಗಿ ಇವೆಲ್ಲಾ ಹಾಳುಬಿದ್ದಿವೆ. ಅಲ್ಲದೆ, ಯಡಿಯೂರಪ್ಪ ರೈತರನ್ನು ಮುಂದಿಟ್ಟುಕೊಂಡು ಮಾಡಿದ ಚಳವಳಿ ಮಣ್ಣು ಸೇರಿದೆ; ಯಾವ ಬಗರ್ ಹುಕುಂ ರೈತರನ್ನ ಸಂಘಟಿಸಿ ಒಮ್ಮೆ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಜಾಥ ತೆಗೆದರೋ, ಅವರೇ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಕಡೆ ತಿರುಗಿಯೂ ನೋಡಲಿಲ್ಲ. ಆಗ ರೈತನಾಯಕ ಕಡಿದಾಳು ಶಾಮಣ್ಣನವರ ನೇತೃತ್ವದಲ್ಲಿ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಕಾಲ್ನಡಿಗೆಯಲ್ಲ ರೈತರ ಜಾಥ ನಡೆಯಿತು. ಈಗೇನಾಗಿದೆ ಎಂದರೆ ಬಗರ್ ಹುಕುಂ ರೈತರು ಒಕ್ಕಲೇಳುವಂತಾಗಿದೆ. ಇವರನ್ನು ಭೂಗಳ್ಳರು ಎಂದು ಪಟ್ಟಿಮಾಡಿ ನೋಟಿಸ್ ಜಾರಿಮಾಡಲು ತಯಾರಿ ನಡೆದಿತ್ತು. ಆದರೆ ರಾಜಕೀಯ ಕಾರಣಕ್ಕಾಗಿ ಅಪ್ಪಮಕ್ಕಳು ತಡೆಹಿಡಿಸಿದ್ದಾರೆ. ಈ ತಾತ್ಕಾಲಿಕ ತಡೆಯಿದ್ದರೂ ರೈತರ ಭಯವೇನೂ ಕಮ್ಮಿಯಾಗಿಲ್ಲ. ಇದು ಯಡಿಯೂರಪ್ಪನವರ ಮಗನ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ. ಶರಾವತಿ ಮುಳುಗಡೆಯ ರೈತರೂ ಇಲ್ಲಿದ್ದಾರೆ. ಅಲ್ಲಿ ಹತ್ತು ಎಕರೆ ಕಳೆದುಕೊಂಡವರು ಇಲ್ಲಿ ಎರಡು ಎಕರೆ ಮಾಲೀಕರು; ಅದೂ ಸರಕಾರಿ ಭೂಮಿ. ಮತ್ತು ಕೂಡ್ಲಿ ಶೃಂಗೇರಿ ಮಠದ ಆರುನೂರು ಎಕರೆ ಭೂಮಿಯಲ್ಲಿ ಸಂತ್ರಸ್ತರು ಬಗರ್ ಹುಕುಂ ಬೇಸಾಯ ಮಾಡುತ್ತಿದ್ದಾರೆ. ಶಿಕಾರಿಪುರ ಫಲವತ್ತಾದ ಭೂಪ್ರದೇಶ. ಇಲ್ಲಿ ಭೂಮಿ ನೀಡಿದರೆ ಸಾಕು, ಎರಡು ಎಕರೆಯಲ್ಲಿ ಬೇಕಾದರೂ ಜೀವಿಸಬಹುದು; ಆದರೆ ಅದಕ್ಕೂ ಸಂಚಕಾರ ಬಂದಿದೆ. ತಮ್ಮ ಬಹುದೀರ್ಘ ರಾಜಕಾರಣಕ್ಕೆ ಇಲ್ಲಿನ ರೈತರನ್ನು ಬಳಸಿಕೊಂಡು ಮೇಲೆ ಬಂದು ನಾಲ್ಕು ಬಾರಿ ಮುಖ್ಯಮಂತ್ರಿಯಾದ ಯಡಿಯೂರಪ್ಪ ತಮ್ಮ ಬಗರ್ ಹುಕುಂ ಕ್ಷೇತ್ರಕ್ಕೆ ವಾರಸುದಾರನನ್ನು ಸ್ಥಾಪಿಸಿ, ಆತನ ಖಾತೆಗೆ ಶಿಕಾರಿಪುರ ಕ್ಷೇತ್ರವನ್ನು ಸೇರಿಸುವ ಸಂಚಿನ ವಿರುದ್ಧ ಇಲ್ಲಿನ ಮತದಾರ ಸಿಡಿದೆದ್ದಿದ್ದಾನೆ. ಈ ಸಮಯದಲ್ಲಿ ಕಾಂಗ್ರೆಸ್ ಎಚ್ಚರಿಕೆಯಿಂದ ನಡೆದುಕೊಳ್ಳಬಹುದಾಗಿದೆ; ಏಕೆಂದರೆ ವಿಜಯೇಂದ್ರ ಮತ್ತು ನಾಗರಾಜಗೌಡ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟರೆ, ಮಧ್ಯೆ ಒಬ್ಬ ಸೋಲುವ ನಾಮಕಾವಸ್ಥೆಯ ಅಭ್ಯರ್ಥಿಯನ್ನು ಹಾಕಲು ಕುಮಾರಸ್ವಾಮಿ ಸಿದ್ಧವಾಗುವ ಸಾಧ್ಯತೆಯಿದೆ.

ಶಿಕಾರಿಪುರದ ಸಂಪೂರ್ಣ ಸಮೀಕ್ಷೆ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿಕಾರಿಪುರ: ಯಡಿಯೂರಪ್ಪ ಸಂಸ್ಥಾನದಲ್ಲಿ ಬಿಜೆಪಿಯೇ ಕಾಣೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...