Homeಕರ್ನಾಟಕವಿಧಾನಸಭೆಗೆ ಯಡಿಯೂರಪ್ಪ ವಿದಾಯ: ಶಿಕಾರಿಪುರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಬಹುದೆ?

ವಿಧಾನಸಭೆಗೆ ಯಡಿಯೂರಪ್ಪ ವಿದಾಯ: ಶಿಕಾರಿಪುರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಬಹುದೆ?

ಬಿ.ವೈ ವಿಜಯೇಂದ್ರರಿಗೆ ಪೈಪೋಟಿ ಕೊಡಲು ಸಜ್ಜಾಗಿದ್ದಾರೆ ಸಾದಲಿಂಗಾಯಿತ ಸಮುದಾಯದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜಗೌಡ...

- Advertisement -
- Advertisement -

ಶಿಕಾರಿಪುರ ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿ ಬಿಜೆಪಿ ಪಕ್ಷದ ಯಡಿಯೂರಪ್ಪ ತಮ್ಮ ಮಗ ವಿಜಯೇಂದ್ರರಿಗೆ ಬಿಟ್ಟುಕೊಡುವ ಘೋಷಣೆ ಮಾಡಿದ ಕ್ಷಣದಿಂದ ಇಲ್ಲಿನ ಚಟುವಟಿಕೆಗಳು ತೀವ್ರಗೊಂಡಿದೆ. ಈ ನಡುವೆ ಟಿಕೆಟ್ ಆಕಾಂಕ್ಷಿಗಳು ಎರಡು ಲಕ್ಷ ರೂಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಕಾಂಗ್ರೆಸ್ ಸುತ್ತೋಲೆ ಹೊರಡಿಸಿದ ಮೇಲೆ ಶಿಕಾರಿಪುರದಿಂದ ಬಳ್ಳಿಗಾವಿಯ ಪುಷ್ಪ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಇವರ ಪತಿ ಪಿ.ಓ ಶಿವಕುಮಾರ್ ಎಂಬ ನಿವೃತ್ತ ಪೊಲೀಸ್ ಅಧಿಕಾರಿ. ಪುಷ್ಪ ಅವರ ಮಾವ ಕಡೂರು ಕ್ಷೇತ್ರದ ಶಾಸಕರಾಗಿದ್ದ ಓಂಕಾರ ಮೂರ್ತಿಯವರು. ಪಿ.ಓ ಶಿವಕುಮಾರ್ ತಮ್ಮ ಬಹುಪಾಲು ಸರ್ವಿಸ್‌ಅನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದವರು. ಆಳುವ ಪಕ್ಷದ ನಿಷ್ಠಾವಂತ ಸೇವಕರಾದ ಇವರು ಯಡಿಯೂರಪ್ಪನವರಿಗೆ ಹಿಂದಿನಿಂದಲೂ ನಿಷ್ಠರು. ಚುನಾವಣಾ ಖರ್ಚಿಗೆ ಬೇಕಾದಕ್ಕಿಂತಲೂ ಹೆಚ್ಚಿನ ಹಣವೂ ಇವರ ಬಳಿ ಇದೆ. ಆದರೆ, ಪುಷ್ಪರ ಚುನಾವಣಾ ಖರ್ಚನ್ನು ಯಡಿಯೂರಪ್ಪನವರೇ ನಿಭಾಯಿಸಬಲ್ಲರು. ಕುತೂಹಲವೆಂದರೆ ಪುಷ್ಪ ಸಾದಲಿಂಗಾಯಿತ ಸಮುದಾಯದವರೇ ಕೂಡ. ಅವರು ಕಾಂಗ್ರೆಸ್ ಕ್ಯಾಂಡಿಡೇಟ್ ಆಗಲು ಯಡಿಯೂರಪ್ಪನವರೇ ಸಂಚು ಮಾಡಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ, ಮಗನನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಲು, ಕಾಂಗ್ರೆಸ್‌ನಿಂದ ದುರ್ಬಲ ಕ್ಯಾಂಡಿಡೇಟ್ ನಿಲ್ಲಿಸಿ ಅಖಾಡ ನಿರ್ಮಿಸುವ ಚಾಣಾಕ್ಷತನ ಯಡಿಯೂರಪ್ಪನವರದು ಎಂಬ ಗುಲ್ಲಿದೆ. ಹೇಗಿದ್ದರೂ ಸಿದ್ದರಾಮಯ್ಯ ಯಡಿಯೂರಪ್ಪನವರ ನಡುವೆ ಸಂಬಂಧ ಚೆನ್ನಾಗಿದೆ; ಇನ್ನು ಡಿ.ಕೆ ಶಿವಕುಮಾರರೊಡನೆ ವ್ಯಾವಹಾರಿಕ ಸಂಬಂಧವೂ ಇದೆಯಂತೆ. ಆದ್ದರಿಂದ ಕಾಂಗ್ರೆಸ್‌ನಿಂದ ದುರ್ಬಲವಾದ ಅಭ್ಯರ್ಥಿ ನಿಲ್ಲಿಸುತ್ತಾರೆಂಬುದು ಶಿಕಾರಿಪುರದ ಜನಗಳ ಊಹೆ.

ಶಿಕಾರಿಪುರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕುರುಬ ಜನಾಂಗದ ಗೋಣಿ ಮಾಲತೇಶ್ ಶಕ್ತಿವಂತ ಅಭ್ಯರ್ಥಿಯಾದರೂ ವಿಜಯೇಂದ್ರ ಎದುರು ಗೆಲ್ಲಲಾಗುವುದಿಲ್ಲ. ಗೆಲ್ಲಬೇಕಾದರೆ ಇಲ್ಲಿನ ಬಹುಸಂಖ್ಯಾತರಾದ ಸಾದಲಿಂಗಾಯಿತರ ಓಟು ಪಡೆಯಬೇಕು. ಸಾದರು ತಮ್ಮ ಜನಾಂಗದ ಅಭ್ಯರ್ಥಿಯನ್ನು ಬಿಟ್ಟು ಇತರರಿಗೆ ಓಟು ಮಾಡಿದ ಇತಿಹಾಸವಿಲ್ಲ. ಈ ಹಿಂದೆ ಅಂತಹದೊಂದು ಇತಿಹಾಸ ಜರುಗುವುದಿತ್ತು. ಯಡಿಯೂರಪ್ಪ ಎದುರು ನಿಂತಿದ್ದ ನಗರದ ಮಹದೇವಪ್ಪ (1989-ಪಕ್ಷೇತರ ಅಭ್ಯರ್ಥಿ) ಕಡಿಮೆ ಅಂತರದಿಂದ (2274 ಮತಗಳು) ಸೋತರು. ಕಾಂಗ್ರೆಸ್‌ನವರು ಅಂದು ಮಹದೇವಪ್ಪನವರಿಗೆ ಸಹಾಯ ಮಾಡಿದ್ದರೆ ಗೆದ್ದುಬಿಡುತ್ತಿದ್ದರು. ಅದೊಂದು ಇತಿಹಾಸವಾಗಿ ದಾಖಲಾಗುತ್ತಿತ್ತು. ಅದಾಗಲಿಲ್ಲ. ಆದರೆ, ಆ ನಂತರ ಇನ್ನೊಂದು ಪ್ರಯೋಗವನ್ನು ಬಂಗಾರಪ್ಪ ಮಾಡಿದರು.

ಸಾದಲಿಂಗಾಯಿತರ ಮಹಾಲಿಂಗಪ್ಪನವರನ್ನು (1999-ಕಾಂಗ್ರೆಸ್) ಗೆಲ್ಲಿಸಿ ಎಸ್‌ಎಂ ಕೃಷ್ಣರಿಗೆ ವಿರೋಧ ಪಕ್ಷವೇ ಇಲ್ಲದಂತೆ ಮಾಡಿದ್ದರು. ಈಗ ಕಾಲ ಸರಿದಿದೆ; ಮತದಾರ ಹಳೆ ಕ್ಯಾಂಡಿಡೇಟ್‌ಗಳನ್ನ ಗುಜರಿಗೆ ಹಾಕಿ ಹೊಸ ಮುಖಗಳಿಗಾಗಿ ಹಂಬಲಿಸುತ್ತಿದ್ದಾರೆ. ಇಂತಹ ವೇಳೆಯಲ್ಲಿ ಯಡಿಯೂರಪ್ಪ ಭ್ರಷ್ಟ ಆರೋಪಗಳನ್ನು ಹಾಸುಹೊದ್ದಿರುವ ವಿಜಯೇಂದ್ರರನ್ನು ಶಿಕಾರಿಪುರಕ್ಕೆ ತಂದಿದ್ದಾರೆ. ಯಡಿಯೂರಪ್ಪ ಶಿಕಾರಿಪುರಕ್ಕೆ ತಂದಿರುವ ಕಟ್ಟಡಗಳನ್ನ ನೋಡಿದರೆ ವಿಜಯೇಂದ್ರ ಅನಾಯಾಸವಾಗಿ ಗೆಲ್ಲಬಹುದು. ಆದರೆ ಅದಾಗುವುದಿಲ್ಲ ಏಕೆಂದರೆ ವಿಜಯೇಂದ್ರ ಶಾಸಕ, ಮಂತ್ರಿ ಇದ್ಯಾವುದೂ ಆಗದೆ ಭ್ರಷ್ಟತೆಯ ಆರೋಪ ಹೊತ್ತಿದ್ದಾರೆ. ನಲವತ್ತು ಪರಸೆಂಟ್ ಕಮಿಷನ್ ದೂರು ಇವರ ಕೈಗೂ ಅಂಟಿದೆ. ಅದಕ್ಕಿಂತಲೂ ಸರಕಾರದ ಮಟ್ಟದ ಬಹುದೊಡ್ಡ ಹಗರಣಗಳಲ್ಲೂ ಇವರ ಹೆಸರು ಕೇಳಿಬಂದಿದೆ. ಕ್ಷೇತ್ರದ ಅನುದಾನಕ್ಕಾಗಿ ಶಾಸಕರು ಇವರೆದುರು ಕೈಕಟ್ಟಿ ವಿಧೇಯತೆಯಿಂದ ನಿಂತ ಉದಾಹರಣೆಗಳಿವೆ. ಆದ್ದರಿಂದ ಇವರ ಗೆಲುವು ಸ್ವಪಕ್ಷೀಯರಿಗೇ ಬೇಕಿಲ್ಲ. ಇನ್ನು ಕ್ಷೇತ್ರದ ಮತದಾರರ ಅಭಿಪ್ರಾಯ ಕೇಳಿದರೆ, ’ಎಲ್ಲೊ ಹೋಗುತ್ತಿದ್ದವರು ಇಲ್ಲಿ ಇಳಿದುಹೋಗಬಲ್ಲರೇ ಹೊರತು ಶಿಕಾರಿಪುರಕ್ಕೂ ಇವರಿಗೂ ಸಂಬಂಧ ಬೆಳೆಯಲಾರದು’ ಎನ್ನುತ್ತಾರೆ.

ನಾಗರಾಜಗೌಡ

ಯಡಿಯೂರಪ್ಪ ಕ್ಷೇತ್ರಕ್ಕೆ ಮಂಜೂರು ಮಾಡಿದ ಕಾರ್ಯಕ್ರಮಗಳು, ಒಂದು ಪಾರ್ಟಿ ಮತ್ತು ಒಂದು ವರ್ಗಕ್ಕೆ ಸೀಮಿತವಾಗಿ ಹಂಚಿಕೆಯಾಗಿದೆ. ಅದರಲ್ಲೂ ಲಂಚ ನಡೆದಿದೆಯೆಂದ ಆರೋಪವಿದೆ; ಗಂಗಾಕಲ್ಯಾಣದಂತಹ ಕಾರ್ಯಕ್ರಮದಲ್ಲೂ ಕೂಡ. ಯಡಿಯೂರಪ್ಪನವರ ಬಗ್ಗೆ ನೀವೆಂತಹ ಆಪಾದನೆ ಮಾಡಿದರೂ ಅದವರಿಗೆ ತಾಗುವುದಿಲ್ಲ. ಏಕೆಂದರೆ ಅವರ ರಾಜಕಾರಣದ ಹಿನ್ನೆಲೆಯೇ ಹಾಗಿದೆ. ಶಿಕಾರಿಪುರ, ಶಿವಮೊಗ್ಗ, ಬೆಂಗಳೂರಿನಿಂದ ಹಿಡಿದು ವಿದೇಶದವರೆಗೂ ಅವರ ಆಸ್ತಿ ಬೆಳೆದಿದೆ. ಆದ್ದರಿಂದ ನಮ್ಮ ಕಷ್ಟಸುಖದ ವಿಷಯಕ್ಕೆ ಸ್ಥಳೀಯ ನಾಯಕ ಬೇಕು ಎಂಬುದು ಸ್ಥಳೀಯರ ವಾದ. ಅದಕ್ಕಾಗಿ ಸ್ಥಳೀಯವಾಗಿ ನಾಗರಾಜಗೌಡ ಎಂಬ ಯುವಕನನ್ನು ಪ್ರಜ್ಞಾವಂತ ಮತದಾರರು ಮುಂದುಮಾಡಿದ್ದಾರೆ.

ನಾಗರಾಜಗೌಡ ಸಾದಲಿಂಗಾಯಿತ ಸಮುದಾಯದವರಾಗಿದ್ದು ಮೂರು ಬಾರಿ ಕೌನ್ಸಿಲರ್ ಆಗಿದ್ದರು; ಈಗ ಕಾಂಗ್ರೆಸ್ಸಿನ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ನಾಗರಾಜಗೌಡರ ತಂದೆ ಹಾಗೂ ಚಿಕ್ಕಪ್ಪ ಶಾಂತವೀರಪ್ಪಗೌಡ ಯಡಿಯೂರಪ್ಪನವರ ಜೊತೆಯಲ್ಲೇ ರಾಜಕಾರಣ ಮಾಡಿದವರು; ಮತ್ತು ಅವರ ಸಂಚುಗಳಿಗೆ ಬಲಿಯಾದವರು ಎಂದು ಆರೋಪಿಸಲಾಗುತ್ತದೆ. ಈಗ ತಮ್ಮ ಮಗನನ್ನೇ ತಂದು ಪ್ರತಿಷ್ಠಾಪಿಸುವುದರ ವಿರುದ್ಧ ಇವರೆಲ್ಲಾ ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೊಡಬೇಕಾದರೆ ಕ್ಷೇತ್ರದ ಸಮೀಕ್ಷೆ ಮಾಡಿ ಜನಾಭಿಪ್ರಾಯ ಸಂಗ್ರಹಿಸುತ್ತದೆ ಎಂಬ ಸುದ್ದಿಯಿಂದ ಸೌಮ್ಯ ಸ್ವಭಾವದ ನಾಗರಾಜಗೌಡ ಈಗಾಗಲೇ ಕ್ಷೇತ್ರ ಸುತ್ತಿ ಸಮೀಕ್ಷಕರ ತೀರ್ಪಿಗಾಗಿ ಕಾಯುತ್ತಿದ್ದಾರೆ. ಶಿಕಾರಿಪುರದಲ್ಲಿ ಸಾದಲಿಂಗಾಯಿತರು, ಕುರುಬರು ಮತ್ತು ಮುಸ್ಲಿಮರು ಒಮ್ಮುಖವಾಗಿ ಮತಚಲಾಯಿಸಿದರೆ ಸಾಕು ಆ ಅಭ್ಯರ್ಥಿ ಗೆಲುವು ಸಲೀಸಾದಂತೆಯೇ!

ಇದನ್ನೂ ಓದಿ: ವಿಚಾರಕ್ರಾಂತಿಗೆ ಆಹ್ವಾನ: ಆಗ- ಈಗ

ಯಡಿಯೂರಪ್ಪರ ಬಗೆಗಿನ ಭ್ರಮನಿರಸನಕ್ಕೆ ಕಾರಣಗಳಿವೆ; ಅವರ ಅಧಿಕಾರಾವಧಿಯಲ್ಲಿ ಬೃಹತ್ ಕಟ್ಟಡಗಳು ಬಂದಿವೆ. ರಸ್ತೆ ಅಗಲೀಕರಣಗೊಂಡಿದೆ. ಆಸ್ಪತ್ರೆ ಕಟ್ಟಡವೂ ಇದೆ. ಕಲೆ ಸಾಹಿತ್ಯ ಸಂಗೀತದಿಂದ ದೂರವಿರುವ ಯಡಿಯರಪ್ಪನವರಿಗೂ ಇವುಗಳಿಗೆ ಸಂಬಂಧಿಸಿದ ಮಂದಿರಗಳಿಗೂ ಸಂಬಂಧವಿಲ್ಲ, ಹಾಗಾಗಿ ಇವೆಲ್ಲಾ ಹಾಳುಬಿದ್ದಿವೆ. ಅಲ್ಲದೆ, ಯಡಿಯೂರಪ್ಪ ರೈತರನ್ನು ಮುಂದಿಟ್ಟುಕೊಂಡು ಮಾಡಿದ ಚಳವಳಿ ಮಣ್ಣು ಸೇರಿದೆ; ಯಾವ ಬಗರ್ ಹುಕುಂ ರೈತರನ್ನ ಸಂಘಟಿಸಿ ಒಮ್ಮೆ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಜಾಥ ತೆಗೆದರೋ, ಅವರೇ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಕಡೆ ತಿರುಗಿಯೂ ನೋಡಲಿಲ್ಲ. ಆಗ ರೈತನಾಯಕ ಕಡಿದಾಳು ಶಾಮಣ್ಣನವರ ನೇತೃತ್ವದಲ್ಲಿ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಕಾಲ್ನಡಿಗೆಯಲ್ಲ ರೈತರ ಜಾಥ ನಡೆಯಿತು. ಈಗೇನಾಗಿದೆ ಎಂದರೆ ಬಗರ್ ಹುಕುಂ ರೈತರು ಒಕ್ಕಲೇಳುವಂತಾಗಿದೆ. ಇವರನ್ನು ಭೂಗಳ್ಳರು ಎಂದು ಪಟ್ಟಿಮಾಡಿ ನೋಟಿಸ್ ಜಾರಿಮಾಡಲು ತಯಾರಿ ನಡೆದಿತ್ತು. ಆದರೆ ರಾಜಕೀಯ ಕಾರಣಕ್ಕಾಗಿ ಅಪ್ಪಮಕ್ಕಳು ತಡೆಹಿಡಿಸಿದ್ದಾರೆ. ಈ ತಾತ್ಕಾಲಿಕ ತಡೆಯಿದ್ದರೂ ರೈತರ ಭಯವೇನೂ ಕಮ್ಮಿಯಾಗಿಲ್ಲ. ಇದು ಯಡಿಯೂರಪ್ಪನವರ ಮಗನ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ. ಶರಾವತಿ ಮುಳುಗಡೆಯ ರೈತರೂ ಇಲ್ಲಿದ್ದಾರೆ. ಅಲ್ಲಿ ಹತ್ತು ಎಕರೆ ಕಳೆದುಕೊಂಡವರು ಇಲ್ಲಿ ಎರಡು ಎಕರೆ ಮಾಲೀಕರು; ಅದೂ ಸರಕಾರಿ ಭೂಮಿ. ಮತ್ತು ಕೂಡ್ಲಿ ಶೃಂಗೇರಿ ಮಠದ ಆರುನೂರು ಎಕರೆ ಭೂಮಿಯಲ್ಲಿ ಸಂತ್ರಸ್ತರು ಬಗರ್ ಹುಕುಂ ಬೇಸಾಯ ಮಾಡುತ್ತಿದ್ದಾರೆ. ಶಿಕಾರಿಪುರ ಫಲವತ್ತಾದ ಭೂಪ್ರದೇಶ. ಇಲ್ಲಿ ಭೂಮಿ ನೀಡಿದರೆ ಸಾಕು, ಎರಡು ಎಕರೆಯಲ್ಲಿ ಬೇಕಾದರೂ ಜೀವಿಸಬಹುದು; ಆದರೆ ಅದಕ್ಕೂ ಸಂಚಕಾರ ಬಂದಿದೆ. ತಮ್ಮ ಬಹುದೀರ್ಘ ರಾಜಕಾರಣಕ್ಕೆ ಇಲ್ಲಿನ ರೈತರನ್ನು ಬಳಸಿಕೊಂಡು ಮೇಲೆ ಬಂದು ನಾಲ್ಕು ಬಾರಿ ಮುಖ್ಯಮಂತ್ರಿಯಾದ ಯಡಿಯೂರಪ್ಪ ತಮ್ಮ ಬಗರ್ ಹುಕುಂ ಕ್ಷೇತ್ರಕ್ಕೆ ವಾರಸುದಾರನನ್ನು ಸ್ಥಾಪಿಸಿ, ಆತನ ಖಾತೆಗೆ ಶಿಕಾರಿಪುರ ಕ್ಷೇತ್ರವನ್ನು ಸೇರಿಸುವ ಸಂಚಿನ ವಿರುದ್ಧ ಇಲ್ಲಿನ ಮತದಾರ ಸಿಡಿದೆದ್ದಿದ್ದಾನೆ. ಈ ಸಮಯದಲ್ಲಿ ಕಾಂಗ್ರೆಸ್ ಎಚ್ಚರಿಕೆಯಿಂದ ನಡೆದುಕೊಳ್ಳಬಹುದಾಗಿದೆ; ಏಕೆಂದರೆ ವಿಜಯೇಂದ್ರ ಮತ್ತು ನಾಗರಾಜಗೌಡ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟರೆ, ಮಧ್ಯೆ ಒಬ್ಬ ಸೋಲುವ ನಾಮಕಾವಸ್ಥೆಯ ಅಭ್ಯರ್ಥಿಯನ್ನು ಹಾಕಲು ಕುಮಾರಸ್ವಾಮಿ ಸಿದ್ಧವಾಗುವ ಸಾಧ್ಯತೆಯಿದೆ.

ಶಿಕಾರಿಪುರದ ಸಂಪೂರ್ಣ ಸಮೀಕ್ಷೆ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿಕಾರಿಪುರ: ಯಡಿಯೂರಪ್ಪ ಸಂಸ್ಥಾನದಲ್ಲಿ ಬಿಜೆಪಿಯೇ ಕಾಣೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...