Homeಕರ್ನಾಟಕವಿಧಾನಸಭೆಗೆ ಯಡಿಯೂರಪ್ಪ ವಿದಾಯ: ಶಿಕಾರಿಪುರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಬಹುದೆ?

ವಿಧಾನಸಭೆಗೆ ಯಡಿಯೂರಪ್ಪ ವಿದಾಯ: ಶಿಕಾರಿಪುರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಬಹುದೆ?

ಬಿ.ವೈ ವಿಜಯೇಂದ್ರರಿಗೆ ಪೈಪೋಟಿ ಕೊಡಲು ಸಜ್ಜಾಗಿದ್ದಾರೆ ಸಾದಲಿಂಗಾಯಿತ ಸಮುದಾಯದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜಗೌಡ...

- Advertisement -
- Advertisement -

ಶಿಕಾರಿಪುರ ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿ ಬಿಜೆಪಿ ಪಕ್ಷದ ಯಡಿಯೂರಪ್ಪ ತಮ್ಮ ಮಗ ವಿಜಯೇಂದ್ರರಿಗೆ ಬಿಟ್ಟುಕೊಡುವ ಘೋಷಣೆ ಮಾಡಿದ ಕ್ಷಣದಿಂದ ಇಲ್ಲಿನ ಚಟುವಟಿಕೆಗಳು ತೀವ್ರಗೊಂಡಿದೆ. ಈ ನಡುವೆ ಟಿಕೆಟ್ ಆಕಾಂಕ್ಷಿಗಳು ಎರಡು ಲಕ್ಷ ರೂಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಕಾಂಗ್ರೆಸ್ ಸುತ್ತೋಲೆ ಹೊರಡಿಸಿದ ಮೇಲೆ ಶಿಕಾರಿಪುರದಿಂದ ಬಳ್ಳಿಗಾವಿಯ ಪುಷ್ಪ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಇವರ ಪತಿ ಪಿ.ಓ ಶಿವಕುಮಾರ್ ಎಂಬ ನಿವೃತ್ತ ಪೊಲೀಸ್ ಅಧಿಕಾರಿ. ಪುಷ್ಪ ಅವರ ಮಾವ ಕಡೂರು ಕ್ಷೇತ್ರದ ಶಾಸಕರಾಗಿದ್ದ ಓಂಕಾರ ಮೂರ್ತಿಯವರು. ಪಿ.ಓ ಶಿವಕುಮಾರ್ ತಮ್ಮ ಬಹುಪಾಲು ಸರ್ವಿಸ್‌ಅನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದವರು. ಆಳುವ ಪಕ್ಷದ ನಿಷ್ಠಾವಂತ ಸೇವಕರಾದ ಇವರು ಯಡಿಯೂರಪ್ಪನವರಿಗೆ ಹಿಂದಿನಿಂದಲೂ ನಿಷ್ಠರು. ಚುನಾವಣಾ ಖರ್ಚಿಗೆ ಬೇಕಾದಕ್ಕಿಂತಲೂ ಹೆಚ್ಚಿನ ಹಣವೂ ಇವರ ಬಳಿ ಇದೆ. ಆದರೆ, ಪುಷ್ಪರ ಚುನಾವಣಾ ಖರ್ಚನ್ನು ಯಡಿಯೂರಪ್ಪನವರೇ ನಿಭಾಯಿಸಬಲ್ಲರು. ಕುತೂಹಲವೆಂದರೆ ಪುಷ್ಪ ಸಾದಲಿಂಗಾಯಿತ ಸಮುದಾಯದವರೇ ಕೂಡ. ಅವರು ಕಾಂಗ್ರೆಸ್ ಕ್ಯಾಂಡಿಡೇಟ್ ಆಗಲು ಯಡಿಯೂರಪ್ಪನವರೇ ಸಂಚು ಮಾಡಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ, ಮಗನನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಲು, ಕಾಂಗ್ರೆಸ್‌ನಿಂದ ದುರ್ಬಲ ಕ್ಯಾಂಡಿಡೇಟ್ ನಿಲ್ಲಿಸಿ ಅಖಾಡ ನಿರ್ಮಿಸುವ ಚಾಣಾಕ್ಷತನ ಯಡಿಯೂರಪ್ಪನವರದು ಎಂಬ ಗುಲ್ಲಿದೆ. ಹೇಗಿದ್ದರೂ ಸಿದ್ದರಾಮಯ್ಯ ಯಡಿಯೂರಪ್ಪನವರ ನಡುವೆ ಸಂಬಂಧ ಚೆನ್ನಾಗಿದೆ; ಇನ್ನು ಡಿ.ಕೆ ಶಿವಕುಮಾರರೊಡನೆ ವ್ಯಾವಹಾರಿಕ ಸಂಬಂಧವೂ ಇದೆಯಂತೆ. ಆದ್ದರಿಂದ ಕಾಂಗ್ರೆಸ್‌ನಿಂದ ದುರ್ಬಲವಾದ ಅಭ್ಯರ್ಥಿ ನಿಲ್ಲಿಸುತ್ತಾರೆಂಬುದು ಶಿಕಾರಿಪುರದ ಜನಗಳ ಊಹೆ.

ಶಿಕಾರಿಪುರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕುರುಬ ಜನಾಂಗದ ಗೋಣಿ ಮಾಲತೇಶ್ ಶಕ್ತಿವಂತ ಅಭ್ಯರ್ಥಿಯಾದರೂ ವಿಜಯೇಂದ್ರ ಎದುರು ಗೆಲ್ಲಲಾಗುವುದಿಲ್ಲ. ಗೆಲ್ಲಬೇಕಾದರೆ ಇಲ್ಲಿನ ಬಹುಸಂಖ್ಯಾತರಾದ ಸಾದಲಿಂಗಾಯಿತರ ಓಟು ಪಡೆಯಬೇಕು. ಸಾದರು ತಮ್ಮ ಜನಾಂಗದ ಅಭ್ಯರ್ಥಿಯನ್ನು ಬಿಟ್ಟು ಇತರರಿಗೆ ಓಟು ಮಾಡಿದ ಇತಿಹಾಸವಿಲ್ಲ. ಈ ಹಿಂದೆ ಅಂತಹದೊಂದು ಇತಿಹಾಸ ಜರುಗುವುದಿತ್ತು. ಯಡಿಯೂರಪ್ಪ ಎದುರು ನಿಂತಿದ್ದ ನಗರದ ಮಹದೇವಪ್ಪ (1989-ಪಕ್ಷೇತರ ಅಭ್ಯರ್ಥಿ) ಕಡಿಮೆ ಅಂತರದಿಂದ (2274 ಮತಗಳು) ಸೋತರು. ಕಾಂಗ್ರೆಸ್‌ನವರು ಅಂದು ಮಹದೇವಪ್ಪನವರಿಗೆ ಸಹಾಯ ಮಾಡಿದ್ದರೆ ಗೆದ್ದುಬಿಡುತ್ತಿದ್ದರು. ಅದೊಂದು ಇತಿಹಾಸವಾಗಿ ದಾಖಲಾಗುತ್ತಿತ್ತು. ಅದಾಗಲಿಲ್ಲ. ಆದರೆ, ಆ ನಂತರ ಇನ್ನೊಂದು ಪ್ರಯೋಗವನ್ನು ಬಂಗಾರಪ್ಪ ಮಾಡಿದರು.

ಸಾದಲಿಂಗಾಯಿತರ ಮಹಾಲಿಂಗಪ್ಪನವರನ್ನು (1999-ಕಾಂಗ್ರೆಸ್) ಗೆಲ್ಲಿಸಿ ಎಸ್‌ಎಂ ಕೃಷ್ಣರಿಗೆ ವಿರೋಧ ಪಕ್ಷವೇ ಇಲ್ಲದಂತೆ ಮಾಡಿದ್ದರು. ಈಗ ಕಾಲ ಸರಿದಿದೆ; ಮತದಾರ ಹಳೆ ಕ್ಯಾಂಡಿಡೇಟ್‌ಗಳನ್ನ ಗುಜರಿಗೆ ಹಾಕಿ ಹೊಸ ಮುಖಗಳಿಗಾಗಿ ಹಂಬಲಿಸುತ್ತಿದ್ದಾರೆ. ಇಂತಹ ವೇಳೆಯಲ್ಲಿ ಯಡಿಯೂರಪ್ಪ ಭ್ರಷ್ಟ ಆರೋಪಗಳನ್ನು ಹಾಸುಹೊದ್ದಿರುವ ವಿಜಯೇಂದ್ರರನ್ನು ಶಿಕಾರಿಪುರಕ್ಕೆ ತಂದಿದ್ದಾರೆ. ಯಡಿಯೂರಪ್ಪ ಶಿಕಾರಿಪುರಕ್ಕೆ ತಂದಿರುವ ಕಟ್ಟಡಗಳನ್ನ ನೋಡಿದರೆ ವಿಜಯೇಂದ್ರ ಅನಾಯಾಸವಾಗಿ ಗೆಲ್ಲಬಹುದು. ಆದರೆ ಅದಾಗುವುದಿಲ್ಲ ಏಕೆಂದರೆ ವಿಜಯೇಂದ್ರ ಶಾಸಕ, ಮಂತ್ರಿ ಇದ್ಯಾವುದೂ ಆಗದೆ ಭ್ರಷ್ಟತೆಯ ಆರೋಪ ಹೊತ್ತಿದ್ದಾರೆ. ನಲವತ್ತು ಪರಸೆಂಟ್ ಕಮಿಷನ್ ದೂರು ಇವರ ಕೈಗೂ ಅಂಟಿದೆ. ಅದಕ್ಕಿಂತಲೂ ಸರಕಾರದ ಮಟ್ಟದ ಬಹುದೊಡ್ಡ ಹಗರಣಗಳಲ್ಲೂ ಇವರ ಹೆಸರು ಕೇಳಿಬಂದಿದೆ. ಕ್ಷೇತ್ರದ ಅನುದಾನಕ್ಕಾಗಿ ಶಾಸಕರು ಇವರೆದುರು ಕೈಕಟ್ಟಿ ವಿಧೇಯತೆಯಿಂದ ನಿಂತ ಉದಾಹರಣೆಗಳಿವೆ. ಆದ್ದರಿಂದ ಇವರ ಗೆಲುವು ಸ್ವಪಕ್ಷೀಯರಿಗೇ ಬೇಕಿಲ್ಲ. ಇನ್ನು ಕ್ಷೇತ್ರದ ಮತದಾರರ ಅಭಿಪ್ರಾಯ ಕೇಳಿದರೆ, ’ಎಲ್ಲೊ ಹೋಗುತ್ತಿದ್ದವರು ಇಲ್ಲಿ ಇಳಿದುಹೋಗಬಲ್ಲರೇ ಹೊರತು ಶಿಕಾರಿಪುರಕ್ಕೂ ಇವರಿಗೂ ಸಂಬಂಧ ಬೆಳೆಯಲಾರದು’ ಎನ್ನುತ್ತಾರೆ.

ನಾಗರಾಜಗೌಡ

ಯಡಿಯೂರಪ್ಪ ಕ್ಷೇತ್ರಕ್ಕೆ ಮಂಜೂರು ಮಾಡಿದ ಕಾರ್ಯಕ್ರಮಗಳು, ಒಂದು ಪಾರ್ಟಿ ಮತ್ತು ಒಂದು ವರ್ಗಕ್ಕೆ ಸೀಮಿತವಾಗಿ ಹಂಚಿಕೆಯಾಗಿದೆ. ಅದರಲ್ಲೂ ಲಂಚ ನಡೆದಿದೆಯೆಂದ ಆರೋಪವಿದೆ; ಗಂಗಾಕಲ್ಯಾಣದಂತಹ ಕಾರ್ಯಕ್ರಮದಲ್ಲೂ ಕೂಡ. ಯಡಿಯೂರಪ್ಪನವರ ಬಗ್ಗೆ ನೀವೆಂತಹ ಆಪಾದನೆ ಮಾಡಿದರೂ ಅದವರಿಗೆ ತಾಗುವುದಿಲ್ಲ. ಏಕೆಂದರೆ ಅವರ ರಾಜಕಾರಣದ ಹಿನ್ನೆಲೆಯೇ ಹಾಗಿದೆ. ಶಿಕಾರಿಪುರ, ಶಿವಮೊಗ್ಗ, ಬೆಂಗಳೂರಿನಿಂದ ಹಿಡಿದು ವಿದೇಶದವರೆಗೂ ಅವರ ಆಸ್ತಿ ಬೆಳೆದಿದೆ. ಆದ್ದರಿಂದ ನಮ್ಮ ಕಷ್ಟಸುಖದ ವಿಷಯಕ್ಕೆ ಸ್ಥಳೀಯ ನಾಯಕ ಬೇಕು ಎಂಬುದು ಸ್ಥಳೀಯರ ವಾದ. ಅದಕ್ಕಾಗಿ ಸ್ಥಳೀಯವಾಗಿ ನಾಗರಾಜಗೌಡ ಎಂಬ ಯುವಕನನ್ನು ಪ್ರಜ್ಞಾವಂತ ಮತದಾರರು ಮುಂದುಮಾಡಿದ್ದಾರೆ.

ನಾಗರಾಜಗೌಡ ಸಾದಲಿಂಗಾಯಿತ ಸಮುದಾಯದವರಾಗಿದ್ದು ಮೂರು ಬಾರಿ ಕೌನ್ಸಿಲರ್ ಆಗಿದ್ದರು; ಈಗ ಕಾಂಗ್ರೆಸ್ಸಿನ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ನಾಗರಾಜಗೌಡರ ತಂದೆ ಹಾಗೂ ಚಿಕ್ಕಪ್ಪ ಶಾಂತವೀರಪ್ಪಗೌಡ ಯಡಿಯೂರಪ್ಪನವರ ಜೊತೆಯಲ್ಲೇ ರಾಜಕಾರಣ ಮಾಡಿದವರು; ಮತ್ತು ಅವರ ಸಂಚುಗಳಿಗೆ ಬಲಿಯಾದವರು ಎಂದು ಆರೋಪಿಸಲಾಗುತ್ತದೆ. ಈಗ ತಮ್ಮ ಮಗನನ್ನೇ ತಂದು ಪ್ರತಿಷ್ಠಾಪಿಸುವುದರ ವಿರುದ್ಧ ಇವರೆಲ್ಲಾ ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೊಡಬೇಕಾದರೆ ಕ್ಷೇತ್ರದ ಸಮೀಕ್ಷೆ ಮಾಡಿ ಜನಾಭಿಪ್ರಾಯ ಸಂಗ್ರಹಿಸುತ್ತದೆ ಎಂಬ ಸುದ್ದಿಯಿಂದ ಸೌಮ್ಯ ಸ್ವಭಾವದ ನಾಗರಾಜಗೌಡ ಈಗಾಗಲೇ ಕ್ಷೇತ್ರ ಸುತ್ತಿ ಸಮೀಕ್ಷಕರ ತೀರ್ಪಿಗಾಗಿ ಕಾಯುತ್ತಿದ್ದಾರೆ. ಶಿಕಾರಿಪುರದಲ್ಲಿ ಸಾದಲಿಂಗಾಯಿತರು, ಕುರುಬರು ಮತ್ತು ಮುಸ್ಲಿಮರು ಒಮ್ಮುಖವಾಗಿ ಮತಚಲಾಯಿಸಿದರೆ ಸಾಕು ಆ ಅಭ್ಯರ್ಥಿ ಗೆಲುವು ಸಲೀಸಾದಂತೆಯೇ!

ಇದನ್ನೂ ಓದಿ: ವಿಚಾರಕ್ರಾಂತಿಗೆ ಆಹ್ವಾನ: ಆಗ- ಈಗ

ಯಡಿಯೂರಪ್ಪರ ಬಗೆಗಿನ ಭ್ರಮನಿರಸನಕ್ಕೆ ಕಾರಣಗಳಿವೆ; ಅವರ ಅಧಿಕಾರಾವಧಿಯಲ್ಲಿ ಬೃಹತ್ ಕಟ್ಟಡಗಳು ಬಂದಿವೆ. ರಸ್ತೆ ಅಗಲೀಕರಣಗೊಂಡಿದೆ. ಆಸ್ಪತ್ರೆ ಕಟ್ಟಡವೂ ಇದೆ. ಕಲೆ ಸಾಹಿತ್ಯ ಸಂಗೀತದಿಂದ ದೂರವಿರುವ ಯಡಿಯರಪ್ಪನವರಿಗೂ ಇವುಗಳಿಗೆ ಸಂಬಂಧಿಸಿದ ಮಂದಿರಗಳಿಗೂ ಸಂಬಂಧವಿಲ್ಲ, ಹಾಗಾಗಿ ಇವೆಲ್ಲಾ ಹಾಳುಬಿದ್ದಿವೆ. ಅಲ್ಲದೆ, ಯಡಿಯೂರಪ್ಪ ರೈತರನ್ನು ಮುಂದಿಟ್ಟುಕೊಂಡು ಮಾಡಿದ ಚಳವಳಿ ಮಣ್ಣು ಸೇರಿದೆ; ಯಾವ ಬಗರ್ ಹುಕುಂ ರೈತರನ್ನ ಸಂಘಟಿಸಿ ಒಮ್ಮೆ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಜಾಥ ತೆಗೆದರೋ, ಅವರೇ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಕಡೆ ತಿರುಗಿಯೂ ನೋಡಲಿಲ್ಲ. ಆಗ ರೈತನಾಯಕ ಕಡಿದಾಳು ಶಾಮಣ್ಣನವರ ನೇತೃತ್ವದಲ್ಲಿ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಕಾಲ್ನಡಿಗೆಯಲ್ಲ ರೈತರ ಜಾಥ ನಡೆಯಿತು. ಈಗೇನಾಗಿದೆ ಎಂದರೆ ಬಗರ್ ಹುಕುಂ ರೈತರು ಒಕ್ಕಲೇಳುವಂತಾಗಿದೆ. ಇವರನ್ನು ಭೂಗಳ್ಳರು ಎಂದು ಪಟ್ಟಿಮಾಡಿ ನೋಟಿಸ್ ಜಾರಿಮಾಡಲು ತಯಾರಿ ನಡೆದಿತ್ತು. ಆದರೆ ರಾಜಕೀಯ ಕಾರಣಕ್ಕಾಗಿ ಅಪ್ಪಮಕ್ಕಳು ತಡೆಹಿಡಿಸಿದ್ದಾರೆ. ಈ ತಾತ್ಕಾಲಿಕ ತಡೆಯಿದ್ದರೂ ರೈತರ ಭಯವೇನೂ ಕಮ್ಮಿಯಾಗಿಲ್ಲ. ಇದು ಯಡಿಯೂರಪ್ಪನವರ ಮಗನ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ. ಶರಾವತಿ ಮುಳುಗಡೆಯ ರೈತರೂ ಇಲ್ಲಿದ್ದಾರೆ. ಅಲ್ಲಿ ಹತ್ತು ಎಕರೆ ಕಳೆದುಕೊಂಡವರು ಇಲ್ಲಿ ಎರಡು ಎಕರೆ ಮಾಲೀಕರು; ಅದೂ ಸರಕಾರಿ ಭೂಮಿ. ಮತ್ತು ಕೂಡ್ಲಿ ಶೃಂಗೇರಿ ಮಠದ ಆರುನೂರು ಎಕರೆ ಭೂಮಿಯಲ್ಲಿ ಸಂತ್ರಸ್ತರು ಬಗರ್ ಹುಕುಂ ಬೇಸಾಯ ಮಾಡುತ್ತಿದ್ದಾರೆ. ಶಿಕಾರಿಪುರ ಫಲವತ್ತಾದ ಭೂಪ್ರದೇಶ. ಇಲ್ಲಿ ಭೂಮಿ ನೀಡಿದರೆ ಸಾಕು, ಎರಡು ಎಕರೆಯಲ್ಲಿ ಬೇಕಾದರೂ ಜೀವಿಸಬಹುದು; ಆದರೆ ಅದಕ್ಕೂ ಸಂಚಕಾರ ಬಂದಿದೆ. ತಮ್ಮ ಬಹುದೀರ್ಘ ರಾಜಕಾರಣಕ್ಕೆ ಇಲ್ಲಿನ ರೈತರನ್ನು ಬಳಸಿಕೊಂಡು ಮೇಲೆ ಬಂದು ನಾಲ್ಕು ಬಾರಿ ಮುಖ್ಯಮಂತ್ರಿಯಾದ ಯಡಿಯೂರಪ್ಪ ತಮ್ಮ ಬಗರ್ ಹುಕುಂ ಕ್ಷೇತ್ರಕ್ಕೆ ವಾರಸುದಾರನನ್ನು ಸ್ಥಾಪಿಸಿ, ಆತನ ಖಾತೆಗೆ ಶಿಕಾರಿಪುರ ಕ್ಷೇತ್ರವನ್ನು ಸೇರಿಸುವ ಸಂಚಿನ ವಿರುದ್ಧ ಇಲ್ಲಿನ ಮತದಾರ ಸಿಡಿದೆದ್ದಿದ್ದಾನೆ. ಈ ಸಮಯದಲ್ಲಿ ಕಾಂಗ್ರೆಸ್ ಎಚ್ಚರಿಕೆಯಿಂದ ನಡೆದುಕೊಳ್ಳಬಹುದಾಗಿದೆ; ಏಕೆಂದರೆ ವಿಜಯೇಂದ್ರ ಮತ್ತು ನಾಗರಾಜಗೌಡ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟರೆ, ಮಧ್ಯೆ ಒಬ್ಬ ಸೋಲುವ ನಾಮಕಾವಸ್ಥೆಯ ಅಭ್ಯರ್ಥಿಯನ್ನು ಹಾಕಲು ಕುಮಾರಸ್ವಾಮಿ ಸಿದ್ಧವಾಗುವ ಸಾಧ್ಯತೆಯಿದೆ.

ಶಿಕಾರಿಪುರದ ಸಂಪೂರ್ಣ ಸಮೀಕ್ಷೆ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿಕಾರಿಪುರ: ಯಡಿಯೂರಪ್ಪ ಸಂಸ್ಥಾನದಲ್ಲಿ ಬಿಜೆಪಿಯೇ ಕಾಣೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...