Homeಚಳವಳಿಕನಸುಗಾರ್ತಿಯೊಬ್ಬಳ ಕಣ್ಣೀರು : ಆತಿಶಿ ಮರ್ಲೀನಾ ಎಂಬ ಶೈಕ್ಷಣಿಕ ಚೈತನ್ಯದ ಕುರಿತು

ಕನಸುಗಾರ್ತಿಯೊಬ್ಬಳ ಕಣ್ಣೀರು : ಆತಿಶಿ ಮರ್ಲೀನಾ ಎಂಬ ಶೈಕ್ಷಣಿಕ ಚೈತನ್ಯದ ಕುರಿತು

ದೆಹಲಿ ಸರ್ಕಾರಿ ಶಾಲೆಗಳ ಅಭಿವೃದ್ದಿಯ ಹಿಂದಿನ ಪ್ರೇರಕ ಶಕ್ತಿ ಇವರು.

- Advertisement -
- Advertisement -

| ಪುರುಷೋತ್ತಮ ಬಿಳಿಮಲೆ |

 

ನಾಡಿದ್ದು ಜೂನ್ 8ನೇ ತಾರೀಕಿಗೆ 39 ವರ್ಷ ತುಂಬಲಿರುವ ಆತಿಶಿ ಮರ್ಲಿನಾ ಅವರನ್ನು ಅವರ ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿ ನಾನು ಹತ್ತಿರದಿಂದ ಬಲ್ಲೆ. ಜೆ ಎನ್ ಯುವಿನ ಚರ್ಚೆಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಆಕೆಗೆ ಭಾರತೀಯ ಇತಿಹಾಸ ಮತ್ತು ವರ್ತಮಾನದ ಬಗ್ಗೆ ಆಳವಾದ ತಿಳುವಳಿಕೆಯಿದೆ. ಅವಳ ತಂದೆಯ ಹೆಸರು ಪ್ರೊ. ವಿಜಯ್ ಸಿಂಗ್ , ತಾಯಿ ತೃಪ್ತಿ ವಹಿ. ಇಬ್ಬರೂ ದೆಹಲಿ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದರು. ಎಡಪಂಥೀಯ ಒಲವಿರುವ ಈ ದಂಪತಿಗಳು ಮಾರ್ಕ್ಸ್ ಮತ್ತು ಲೆನಿನ್ ಅವರ ನೆನಪಿಗಾಗಿ ಅತಿಶಿ ಹೆಸರಿಗೆ ಮರ್ಲೀನಾ ಸೇರಿಸಿದರು.

ದೆಹಲಿಯ ಸ್ಪ್ರಿಂಗ್ ಡೇಲ್ ಶಾಲೆಯಲ್ಲಿ ಹೈಸ್ಕೂಲು ಕಲಿತ ಅತಿಶಿಯು ತನ್ನ ಸ್ವಂತ ಪ್ರತಿಭೆಯಿಂದ ದೆಹಲಿಯ ಪ್ರಖ್ಯಾತವಾದ ಸೈಂಟ್ ಸ್ಟೀಫನ್ ನಲ್ಲಿ ಪ್ರವೇಶ ಪಡೆದು, 2001ರಲ್ಲಿ ದೆಹಲಿ ವಿವಿಗೇ ಪ್ರಥಮಳಾಗಿ ಇತಿಹಾಸದಲ್ಲಿ ಪದವಿ ಪಡೆದಳು. ತಕ್ಷಣ ಅವಳಿಗೆ ಬ್ರಿಟನ್ನಿನ ಚೀವಿನಿಂಗ್ ( Chevening Scholarship) ಶಿಷ್ಯವೇತನ ದೊರೆತದ್ದರಿಂದ ಮುಂದಿನ ಶಿಕ್ಷಣಕ್ಕಾಗಿ ಆಕೆ ಆಕ್ಸಫರ್ಡ್ ವಿವಿಗೆ ತೆರಳಿ, 2003ರಲ್ಲಿ ಇತಿಹಾಸದಲ್ಲಿ ಎಂ ಎ ಪದವಿ ಪಡೆದಳು.

ದೆಹಲಿಯ ಸರ್ಕಾರಿ ಶಾಲೆ

ಮುಂದೆ ರೋಡ್ ಸ್ಕಾಲರ್ ಶಿಪ್ ಪಡೆಯುವಲ್ಲಿ ಯಶಸ್ವಿಯಾದ ಆಕೆ 2005ರವರೆಗೆ ಲಂಡನ್ನಿನ ಅತ್ಯಂತ ಶ್ರೀಮಂತವಾದ ಮೆಗ್ಡಲಿನ್ ಕಾಲೇಜಿನಲ್ಲಿ ( Magdalen College) ತನ್ನ ಸಂಶೋಧನೆ ಮತ್ತು ಅಧ್ಯಾಪನವನ್ನು ಮುಂದುವರಿಸಿ, 2006ರಲ್ಲಿ ಭಾರತಕ್ಕೆ ಹಿಂದಿರುಗಿ, ಸ್ವಲ್ಪ ಕಾಲ ಆಂಧ್ರದ ಋಷಿವ್ಯಾಲಿ ಶಾಲೆಯಲ್ಲಿ ಇತಿಹಾಸ ಮತ್ತು ಇಂಗ್ಲಿಷ್ ಅಧ್ಯಾಪಕಿಯಾಗಿ ಕೆಲಸ ಮಾಡಿದಳು.

2007ರಲ್ಲಿ ಆಕೆ ಮಧ್ಯಪ್ರದೇಶದ ಹಳ್ಳಿಯೊಂದಕ್ಕೆ ತೆರಳಿ ಸಾವಯವ ಕೃಷಿ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ತನ್ನನ್ನು ತೊಡಗಿಸಿಕೊಂಡಳು. ಅಲ್ಲಿಯ ಸಂಭಾವನಾ ಸಂಸ್ಥೆಯನ್ನು ( Sambhavana Institute of Public policy) ಆಕೆ ಬೆಳೆಸಿದ ರೀತಿ ಅನನ್ಯವಾದುದು. 2015ರಲ್ಲಿ ನಡೆದ ಖಾಂಡ್ವಾ ಸತ್ಯಾಗ್ರಹದ ಪ್ರೇರಕ ಶಕ್ತಿ ಈಕೆಯೇ.

ಮಧ್ಯಪ್ರದೇಶದಿಂದ ಆಕೆಯನ್ನು ಬಿಡಿಸಿದ ಪ್ರೊ. ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ ಅವರು 2011ರಲ್ಲಿ ಅವಳನ್ನು ದೆಹಲಿಗೆ ಕರೆತಂದರು. ಆತಿಶಿ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ತನ್ನನ್ನು ತೀವ್ರವಾಗಿ ತೊಡಗಿಸಿಕೊಂಡು 2013ರಲ್ಲಿ ಆಪ್ ( AAP)ನ ಸೈದ್ಧಾಂತಿಕೆಯನ್ನು ರೂಪಿಸುವ ಸಮಿತಿಗಳಲ್ಲಿ ಆಳವಾಗಿ ಕೆಲಸ ಮಾಡಿದಳು. ಆಪ್ ನ ಪರವಾಗಿ ಆಕೆ ಟೆಲಿವಿಷನ್ ಚ್ಯಾನೆಲ್ ಗಳಲ್ಲಿ ಮಾತಾಡುತ್ತಿದ್ದ ರೀತಿಯಿಂದ ಆಕೆ ವಿಶ್ವದಾದ್ಯಂತ ಜನರ ಗಮನ ಸೆಳೆದಳು. ಒಳ್ಳೆಯ ಭಾಷೆ, ಆಳವಾದ ತಿಳುವಳಿಕೆ, ನಿರುದ್ವಿಗ್ನವಾಗದ ವಿಷಯ ಮಂಡನೆ, ಇದಿರಾಳಿಯ ಮಾತಿಗೂ ಸಂಯಮದಿಂದ ಕಿವಿಗೊಡುತ್ತಿದ್ದ ರೀತಿಯಿಂದ ಆಕೆ ದೆಹಲಿಯಲ್ಲಿ ಅಪಾರ ಜನಪ್ರಿಯತೆಯನ್ನು ಪಡೆದಳು.

ದೆಹಲಿಯಲ್ಲಿ ಆಪ್ ಸರಕಾರ ರಚನೆಯಾದ ಮೇಲೆ ಮುಖ್ಯಮಂತ್ರಿ ಕೇಜ್ರಿವಾಲ್, ಆತಿಶಿ ಅವರನ್ನು ಶಿಕ್ಷಣ ಮಂತ್ರಿ ಮನೀಶ್ ಸಿಸೋಡಿಯಾ ಅವರ ಶೈಕ್ಷಣಿಕ ಸಲಹೆಗಾರರೆಂದು ನೇಮಕ ಮಾಡಿದರು. ಜುಲಾಯಿ 2015ರಿಂದ ಎಪ್ರಿಲ್ 17, 2018ರವರೆಗೆ ಈ ಹುದ್ದೆಯಲ್ಲಿ ಅಭೂತಪೂರ್ವವಾಗಿ ಕೆಲಸ ಮಾಡಿ, ದೆಹಲಿಯ ಸರಕಾರೀ ಶಾಲೆಗಳ ಸ್ವರೂಪವನ್ನೇ ಅತಿಶಿ ಬದಲು ಮಾಡಿದಳು. ಆದರೆ ಆತಿಶಿಯ ನೇಮಕಾತಿಯೇ ಕಾನೂನು ಬಾಹಿರ ಎಂದು ಹೇಳಿದ ಕೇಂದ್ರ ಸರಕಾರವು ಆಕೆಯ ನೇಮಕಾತಿಯನ್ನೇ ರದ್ದುಗೊಳಿಸಿತು. ಸುಮಾರು ಎರಡು ವರ್ಷಗಳ ತನ್ನ ಸೇವಾವಧಿಯಲ್ಲಿ ಆಕೆ ತಿಂಗಳಿಗೆ ಕೇವಲ ಒಂದು ರೂಪಾಯಿ ಸಂಭಾವನೆ ಮಾತ್ರ ಪಡೆಯುತ್ತಿದ್ದಳು.

ಆಡಳಿತವನ್ನು ಜನರ ಹತ್ತಿರ ಕೊಂಡೊಯ್ಯುವ ಆಕೆಯ ಮೊಹಲ್ಲಾ ಸಭಾ ( ಅದರ ಕೆಲವು ಪ್ರಾಯೋಗಿಕ ಸಭೆಗಳಲ್ಲಿ ನಾನು ಭಾಗಿಯಾಗಿದ್ದೆ) ಯೋಜನೆಯನ್ನು ದೆಹಲಿಯ ರಾಜ್ಯಪಾಲರು ಕೊನೆಗೂ ಅಂಗೀಕರಿಸಲೇ ಇಲ್ಲ.

ಇಂಥ ಕನಸುಕಂಗಳ , ಹೋರಾಟಗಾರ್ತಿ ಅತಿಶಿ ಇವತ್ತು ಸಾರ್ವಜನಿಕರೆದುರು ಕಣ್ಣೀರು ಸುರಿಸುವಂಥ ವಾತಾವರಣ ನಿರ್ಮಾಣವಾಗಿದೆ. ಉತ್ತರ ದೆಹಲಿಯಲ್ಲಿ ಆಕೆ ಲೋಕ ಸಭೆಗೆ ಸ್ಪರ್ಧಿಸುವ ಪ್ರದೇಶಗಳಲ್ಲಿ ಆಕೆಯ ಚಾರಿತ್ರ್ಯ ಹರಣ ಮಾಡುವಂಥ ಅಶ್ಲೀಲ ಕರಪತ್ರಗಳನ್ನು ಹಂಚಲಾಗಿದೆ. ಅವಳ ಹೆಸರಿನ ಮುಂದಿರುವ ಮಾರ್ಲೀನಾ ಪದವನ್ನು ಗಮನಿಸಿ, ಆಕೆ ಬೇರಾವುದೋ ಧರ್ಮದವಳೆಂದು ಭಾವಿಸಿ, ಜನರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡಲಾಗಿದೆ. ಇಂಥ ಕೆಲಸಗಳನ್ನು ಯಾರು ಮಾಡುತ್ತಾರೆ ಎಂದು ನಾನೇನೂ ಹೇಳಬೇಕಾಗಿಲ್ಲವಲ್ಲ! ಅವಳ ಇದಿರಾಳಿ ಕ್ರಿಕೆಟಿಗ ಗೌತಮ್ ಗಂಭೀರ್ ಇಂಥ ಲುಚ್ಛ ಕೆಲಸ ಮಾಡಿರಲಾರ, ಆದರೆ ಕರಪತ್ರವನ್ನು ಖಂಡಿಸುವ ಘನತೆಯನ್ನೂ ಆತ ತೋರಿಲ್ಲ.

ದೆಹಲಿಯಲ್ಲಿ ನನ್ನ ಕಣ್ಣೆದುರೇ ಬೆಳೆದವರು ಇಬ್ಬರು- ಒಬ್ಬ ಕನ್ನಯ್ಯ ಕುಮಾರ್ ಮತ್ತು ಇನ್ನೊಬ್ಬರು ಆತಿಶಿ. ಅವರು ಎಷ್ಟು ಒಳ್ಳೆಯವರು, ಸಾಮಾಜಿಕ ಕಳಕಳಿಯುಳ್ಳವರು ಮತ್ತು ಪ್ರತಿಭಾವಂತರೆಂಬುದೆಂಬುದನ್ನು ನಾನು ಹತ್ತಿರದಿಂದ ಬಲ್ಲೆ. ಈ ಪ್ರತಿಭೆಗಳನ್ನು ಎಳವೆಯಲ್ಲಿಯೇ ಮಟ್ಟ ಹಾಕಲು ಎಷ್ಟೊಂದು ಶಕ್ತಿಗಳು, ಎಷ್ಟೊಂದು ಬಗೆಯಲ್ಲಿ ಕೆಲಸ ಮಾಡುತ್ತಿವೆ ಎಂಬುದನ್ನು ನೋಡಿದಾಗ ನಿಜಕ್ಕೂ ದಿಗ್ಭ್ರಮೆಯಾಗುತ್ತದೆ.
ನಮ್ಮ ದೇಶಕ್ಕೆ ನಿಜಕ್ಕೂ ಏನು ಬೇಕಾಗಿದೆ ಎಂದೇ ತಿಳಿಯುತ್ತಿಲ್ಲ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...