Homeಗೌರಿ ಕಣ್ಣೋಟಲಿಂಗ ತಾರತಮ್ಯ ಕುರಿತು ಮೆಚ್ಚುಗೆ ಪಡೆದ ಆಸ್ಟ್ರೇಲಿಯಾದ ಪ್ರಥಮ ಮಹಿಳಾ ಪ್ರಧಾನಿ ಜೂಲಿಯಾ ಭಾಷಣ

ಲಿಂಗ ತಾರತಮ್ಯ ಕುರಿತು ಮೆಚ್ಚುಗೆ ಪಡೆದ ಆಸ್ಟ್ರೇಲಿಯಾದ ಪ್ರಥಮ ಮಹಿಳಾ ಪ್ರಧಾನಿ ಜೂಲಿಯಾ ಭಾಷಣ

ಜೂಲಿಯಾ ಮಾಡಿದ ಭಾಷಣ ಎಲ್ಲಾ ಪುರುಷ ಪ್ರಧಾನ ಸಮಾಜಗಳಲ್ಲಿ ಲಿಂಗಭೇದ ಮತ್ತು ಸ್ರೀದ್ವೇಷಿ ಚಿಂತನೆಗಳು ಹೇಗೆ ಹಾಸುಹೊಕ್ಕಿದೆ ಎಂದು ತೋರಿಸುತ್ತದೆ.

- Advertisement -
- Advertisement -

ಜೂಲಿಯಾ ಗಿಲ್ಲಾರ್ಡ್ ಆಸ್ಟ್ರೇಲಿಯಾ ದೇಶದ ಪ್ರಥಮ ಮಹಿಳಾ ಪ್ರಧಾನಿ. ವಿದ್ಯಾರ್ಥಿನಿ ಆಗಿದ್ದಾಗಲೇ ರಾಜಕೀಯದಲ್ಲಿ ಆಸಕ್ತಿ ಹೊಂದಿದ ಜೂಲಿಯಾ ಸಮಾಜವಾದದಲ್ಲಿ ನಂಬಿಕೆ ಇಟ್ಟವಳು. ಆ ಕಾರಣಕ್ಕೆ ಆಸ್ಟ್ರೇಲಿಯಾದ ಎಡಪಂಥೀಯ ಒಲವನ್ನು ಹೊಂದಿರುವ ಲೇಬರ್ ಪಾರ್ಟಿಯನ್ನು ಸೇರಿಕೊಂಡು ಒಂದೊAದೇ ಮೆಟ್ಟಿಲುಗಳನ್ನು ಏರುತ್ತಾ ಹೋದರು. ಹಿಂದಿನ ಪ್ರಧಾನಿ ಕೆವಿನ್ ರುಡ್ ಅವರು ತಮ್ಮ ಲೇಬರ್ ಪಕ್ಷದ ಸದಸ್ಯರ ಬೆಂಬಲವನ್ನು ಕಳೆದುಕೊಂಡಾಗ ಜೂಲಿಯಾ ಅವರನ್ನು ಪ್ರಧಾನಿಯಾಗಿ ಆ ಪಕ್ಷದ ಸಂಸದರು ಮನಸಿಲ್ಲದ ಮನಸ್ಸಿನೊಂದಿಗೆ ಆಯ್ಕೆ ಮಾಡಿದ್ದರು. ಅವರ ಹಿಂಜರಿಕೆಗೆ ಕಾರಣ ಜೂಲಿಯಾ ಆ ಸ್ಥಾನಕ್ಕೆ ಬೇಕಾದ ಅರ್ಹತೆಗಳನ್ನು ಹೊಂದಿದ್ದಾರೋ ಇಲ್ಲವೂ ಎಂಬುದಾಗಿರಲಿಲ್ಲ. ಬದಲಾಗಿ ಈ ಮಹಿಳೆಗಿಂತ ಸೂಕ್ತವಾದ ಪುರುಷ ತಮ್ಮ ಮುಂದೆ ಇಲ್ಲವಲ್ಲ ಎಂಬ ಲಿಂಗ ತಾರತಮ್ಯ.

ಜೂಲಿಯಾ ಅವರಿಗೆ ಈಗ 51 ವರ್ಷ ವಯಸ್ಸು. ಮದುವೆ ಆಗಿರದ ಆಕೆ ಯಾವ ಮುಚ್ಚುಮರೆ ಇಲ್ಲದೆ ತನ್ನ ಪುರುಷ ಸಂಗಾತಿಯೊಂದಿಗೆ ವಾಸಿಸುತ್ತಿದ್ದಾರೆ. ಇತರೆ ದೇಶಗಳ ಮಹಿಳೆಯರಂತೆ ಜೂಲಿಯಾ ಕೂಡ ತನ್ನ ವೃತ್ತಿ ಬದುಕಿನಲ್ಲಿ ಲಿಂಗಬೇಧವನ್ನು ಎದುರಿಸುತ್ತಲೇ ಮುಂದೆ ಬಂದವರು. ಈಗ ಅವರು ಪ್ರಧಾನಿ ಆಗಿದ್ದರೂ ಆಕೆ ಮಹಿಳೆ ಆಗಿರುವುದರಿಂದಲೇ ಆಕೆಯನ್ನು ಟೀಕೆ ಮಾಡುವವರಿಗೆ ಲೆಕ್ಕವಿಲ್ಲ. ಜೂಲಿಯಾ ಅವರ ಆತ್ಮಸ್ಥೈರ್ಯವನ್ನು ಮುರಿದು ಹಾಕಲು ಆಕೆಯ ಟೀಕಾಕಾರರು ಮಾಡಿರುವ ಪ್ರಯತ್ನಗಳಲ್ಲಿ ಹಲವು ಹೇಸಿಗೆ ಹುಟ್ಟಿಸುವಂತಹವು. ಉದಾಹರಣೆಗೆ ಜೂಲಿಯಾ ಅವರು ಮಕ್ಕಳನ್ನು ಹೆತ್ತಿಲ್ಲ. ಅದನ್ನೇ ಅಸ್ತ್ರವಾಗಿಸಿಕೊಂಡು ಕೆಲವರು ಅವರನ್ನು “ಬೇಕಂತಲೇ ಬಂಜೆ ಆಗಿರುವವಳು’’ ಎಂದು ಜರಿಯುವ ಮಟ್ಟಕ್ಕೆ ಹೋಗಿದ್ದೂ ಉಂಟು. ಜೊತೆಗೆ “Ditch the Bitch’’ (ಈ ಹಾದರಗಿತ್ತಿಯನ್ನು ತೊಲಗಿಸಿ) ಎಂಬ ಕರೆ ಕೊಟ್ಟು ಆಕೆಯ ವಿರುದ್ಧ ಚುನಾವಣಾ ಪ್ರಚಾರವನ್ನೂ ಮಾಡಲಾಗಿತ್ತು.

ಜೂಲಿಯಾ ಮಾಡಿದ ಭಾಷಣ ಎಲ್ಲಾ ಪುರುಷ ಪ್ರಧಾನ ಸಮಾಜಗಳಲ್ಲಿ ಲಿಂಗಭೇದ ಮತ್ತು ಸ್ರೀದ್ವೇಷಿ ಚಿಂತನೆಗಳು ಹೇಗೆ ಹಾಸುಹೊಕ್ಕಿದೆ ಎಂದು ತೋರುವುದರಿಂದ ಅವರ ಸಾರಾಂಶವನ್ನು ಇಲ್ಲಿ ನೀಡುತ್ತಿದ್ದೇನೆ.

ನಾನು ಪ್ರಧಾನಿಯಾಗಿ ಈ ಕುರ್ಚಿಯಲ್ಲಿ ಕೂರುವ ನನ್ನ ಎದುರು ವಿರೋಧ ಪಕ್ಷದ ನಾಯಕರಾಗಿ ಕೂರುವ ಈ ಮನುಷ್ಯ ಮೊದಲಿನಿಂದಲೂ ಸ್ತ್ರೀದ್ವೇಷ ನೀತಿಯನ್ನೇ ಪ್ರದರ್ಶಿಸುತ್ತಾ ಬಂದಿದ್ದಾರೆ. ಉದಾಹರಣೆಗೆ ಒಮ್ಮೆ ಈ ಸಂಸತ್ತಿನಲ್ಲಿ ಮಾತನಾಡುತ್ತಾ ನಾನು ’ಗೌರವಾರ್ಹ ಮಹಿಳೆ’ಯಂತೆ ವರ್ತಿಸಬೇಕು ಎಂದಿದ್ದರು. ನನ್ನ ಜಾಗದಲ್ಲಿ ಪುರುಷನೊಬ್ಬ ಕೂತಿದ್ದರೆ ಆತನ ಬಗ್ಗೆ ಇಂತಹ ಪದಗಳನ್ನು ಉಪಯೋಗಿಸುತ್ತಿದ್ದರೆ? ಇಲ್ಲ. ವಿರೋಧ ಪಕ್ಷದ ನಾಯಕರು ಒಮ್ಮೆ ಸಂಸತ್ತಿನ ಹೊರಗಡೆ ನನ್ನ ವಿರುದ್ಧ ’Ditch the Bitch’ ಎಂದು ಬರೆಯಲಾಗಿದ್ದ ಪೋಸ್ಟರ್ ಪಕ್ಕ ನಿಂತರು. ಹಾಗೆಯೇ ಇನ್ನೊಮ್ಮೆ ನನ್ನನ್ನು ಯಾವುದೋ ಪುರಷನ ಹಾದರಗಿತ್ತಿ ಎಂದು ಬಣ್ಣಿಸಿದ್ದ ಪೋಸ್ಟರ್ ಪಕ್ಕ ನಿಂತರು. ಅದು ಮಹಿಳಾ ದ್ವೇಷ ನಿಲುವಲ್ಲದೆ ಇನ್ನೇನು? ಪ್ರತಿದಿನ, ಪ್ರತಿಹಂತದಲ್ಲಿ, ವಿವಿಧ ತರಹದಲ್ಲಿ ನಾನು ಈ ವ್ಯಕ್ತಿಯಿಂದ ಸ್ತ್ರೀದ್ವೇಷಿ ನಿಲುವನ್ನು, ಲಿಂಗಬೇಧ ತಾರತಮ್ಯವನ್ನು ಎದುರಿಸುತ್ತಿದ್ದೇನೆ.

ಇಂತಹ ಮನುಷ್ಯ ಈ ಸಂಸತನ್ನು ಪ್ರವೇಶಿಸಿ ಆಸ್ಟ್ರೇಲಿಯಾದ ಮಹಿಳೆಯರಲ್ಲಿ ಕ್ಷಮೆ ಕೇಳಿಲ್ಲ. ನನ್ನನ್ನು ಪದೇಪದೇ ಅವಮಾನಿಸಿದ್ದಕ್ಕೆ ನನಗೆ ಸಾರಿ ಹೇಳಿಲ್ಲ. ಆದರೆ ಇವತ್ತು ರಾಜಕೀಯ ದುರುದ್ದೇಶದಿಂದ ಮಹಿಳೆಯರ ಪರ ನಿಂತಿರುವುದಾಗಿ ಪೋಸು ಕೊಡುತ್ತಿದ್ದಾರೆ. ಇಂತಹ ಇಬ್ಬಂದಿ ನೀತಿಯನ್ನು ಯಾರೂ ಸಹಿಸಕೂಡದು.

ಆಕೆಯ ಭಾಷಣ ನನಗೆ ಇಷ್ಟವಾಗಿದ್ದರಿಂದ ಅದರ ಮುಖ್ಯ ಭಾಗಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ….

– ಗೌರಿ ಲಂಕೇಶ್

ಅಕ್ಟೋಬರ್ 31, 2012


ಇದನ್ನೂ ಓದಿ: ದೈಹಿಕ ಸೌಂದರ್ಯ & ಧಾರ್ಮಿಕ ನಂಬಿಕೆ: ಆದರ್ಶ ಹುಡುಗಿಯ ಕುರಿತು ಗೌರಿ ಲಂಕೇಶ್‌ ಬರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...