Homeಮುಖಪುಟಅಯೋಧ್ಯೆ ಅಭಿವೃದ್ಧಿ: ಆತಂಕದಲ್ಲಿರುವ ವ್ಯಾಪಾರಿಗಳ ಕೂಗು ಬಿಜೆಪಿಗೆ ಮುಳುವಾಗುವುದೇ?

ಅಯೋಧ್ಯೆ ಅಭಿವೃದ್ಧಿ: ಆತಂಕದಲ್ಲಿರುವ ವ್ಯಾಪಾರಿಗಳ ಕೂಗು ಬಿಜೆಪಿಗೆ ಮುಳುವಾಗುವುದೇ?

- Advertisement -
- Advertisement -

ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನದಿಂದ ಸಲ್ಪ ದೂರದಲ್ಲಿ 45 ವರ್ಷದ ರಂಜಿತಾ ಗುಪ್ತಾ ಅವರು ಕಲಾಕೃತಿಗಳನ್ನು ಮಾರಾಟ ಮಾಡುವ ಸಣ್ಣ ಅಂಗಡಿಯನ್ನು ನಡೆಸುತ್ತಿದ್ದಾರೆ.

ರಾಮಮಂದಿರದ ಭಾಗವಾಗಿ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ರಸ್ತೆ ವಿಸ್ತರಣೆ ಯೋಜನೆಯಿಂದಾಗಿ ರಂಜಿತಾ ತಮ್ಮ ಅಂಗಡಿಯನ್ನು ಕಳೆದುಕೊಳ್ಳುವ ಆತಂಕದಲ್ಲಿ ಕಳೆದ ಕೆಲವು ತಿಂಗಳುಗಳಿಂದಲೂ ಇದ್ದಾರೆ.

ರಂಜಿತಾ ಅವರಿಗೆ ತೊದಲು ಸಮಸ್ಯೆ ಇದೆ. ಹೀಗಾಗಿ ಅವರು ಮದುವೆಯಾಗುವುದು ಕಷ್ಟವಾಯಿತು. ಸಹೋದರನೇ ರಂಜಿತಾ ಅವರನ್ನು ಪೋಷಣೆ ಮಾಡುತ್ತಿದ್ದು, ರಂಜಿತಾ ಅಂಗಡಿಯನ್ನು ನಡೆಸುತ್ತಿದ್ದಾರೆ.

ರಾಮಮಂದಿರಕ್ಕೆ ತೆರಳುವ ಮುನ್ನ, ಹನುಮಂತನ ಬೃಹತ್ ರಚನೆಯನ್ನು ಹೊಂದಿರುವ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಭಕ್ತರು ಮೊದಲು ಭೇಟಿ ನೀಡಬೇಕೆಂಬ ಸಂಪ್ರದಾಯ ಇಲ್ಲಿದೆ. ಹೀಗಾಗಿ ಇಲ್ಲಿನ ವ್ಯಾಪಾರಿಗಳ ಜೀವನ ನೆಮ್ಮದಿಯಾಗಿ ಇತ್ತು.

ರಂಜಿತಾ ಅವರ ಅಂಗಡಿಯನ್ನು ಅವರ ಅಜ್ಜ ನಿರ್ಮಿಸಿದರು. ನಂತರ ಅವರ ತಂದೆ ನಡೆಸುತ್ತಿದ್ದರು. ತಂದೆಯ ಮರಣದ ನಂತರ, ರಂಜಿತಾ ತನ್ನ ಸಹೋದರನೊಂದಿಗೆ ಅಂಗಡಿಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿರಿ: ಭೂ ಹಗರಣ, ಬ್ರಾಹ್ಮಣರ ಮತಗಳು ಕೈ ತಪ್ಪುವ ಭಯ: ಅಯೋಧ್ಯೆಯ ಟಿಕೆಟ್‌ ಯೋಗಿ ಕಳೆದುಕೊಳ್ಳಲು ಕಾರಣವೇ?

ಭಗವಾನ್ ರಾಮನ ಫೋಟೋಗಳೊಂದಿಗೆ ಫೋಟೋ ಫ್ರೇಮ್‌ಗಳು, ಬ್ಯಾಗ್‌ಗಳು, ಧೂಪದ್ರವ್ಯದ ತುಂಡುಗಳು ಮತ್ತು ಇತರ ಕೆಲವು ವರ್ಣರಂಜಿತ ಪೂಜಾ ವಸ್ತುಗಳನ್ನು ಈ ಸಣ್ಣ ಅಂಗಡಿಯಲ್ಲಿ ಕಾಣಬಹುದು. ರಂಜಿತಾ ಮಾರಾಟ ಮಾಡುತ್ತಿರುವ ಬ್ಯಾಗ್‌‌ ಒಂದರ ಮೇಲೆ ‘ಜೈ ಶ್ರೀರಾಮ್‌’ ಎಂದಿರುವುದನ್ನು ನೋಡಬಹುದು.

ರಾಮ ಮಂದಿರ ರಸ್ತೆ ವಿಸ್ತರಣೆ ಯೋಜನೆಯಿಂದಾಗಿ ತನ್ನ ಅಂಗಡಿ ಶೀಘ್ರದಲ್ಲೇ ನೆಲಸಮವಾಗಲಿದೆ ಎಂದು ರಂಜಿತಾ ನೋವು ತೋಡಿಕೊಂಡರು.

PC: The Wire, Ismat Ara

ಅಯೋಧ್ಯೆ ಅಭಿವೃದ್ಧಿ ಯೋಜನೆ

ಅಯೋಧ್ಯೆಯ ಅಭಿವೃದ್ಧಿ ಯೋಜನೆಯ ಭಾಗವಾಗಿ ಹನುಮಾನ್ ಗರ್ಹಿ ಮಾರ್ಗದಲ್ಲಿನ ನೂರಾರು ಅಂಗಡಿಗಳಿರುವ ರಸ್ತೆಯ ಅಗಲೀಕರಣ ಮಾಡಲು ಉದ್ದೇಶಿಸಲಾಗಿದೆ. ಇದರ ವಿರುದ್ಧ 2021ರಲ್ಲಿಯೇ ವ್ಯಾಪಾರಿಗಳು ಪ್ರತಿಭಟಿಸಿದರು.

ಅಂಗಡಿಗಳ ಮಾಲೀಕರು ಹಲವಾರು ಮೆರವಣಿಗೆಗಳನ್ನು ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಹೊರಗೆ ಧರಣಿ ಕುಳಿತರು. ನಂತರ ಪತ್ರಗಳನ್ನೂ ಬರೆದರು. ಸುಮಾರು ಒಂದು ವರ್ಷ ವರ್ಷದಿಂದಲೂ ವ್ಯಾಪಾರಿಗಳು ಆಡಳಿತದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ತೆರವುಗೊಳಿಸುವ ಅಂಗಡಿಗಳಿಗೆ ನೀಡುವ ಪರಿಹಾರದ ಬಗ್ಗೆಯಾಗಲೀ, ಸ್ಥಳಾಂತರಗೊಳ್ಳುವವರಿಗೆ ಹೊಸ ಅಂಗಡಿಗಳಾಗಲಿ ನೀಡುವ ಕುರಿತು ಸ್ಪಷ್ಟತೆ ಇಲ್ಲ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.

2019ರಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಬಾಬರಿ ಮಸೀದಿ ಭೂಮಿಯನ್ನು ಸುಪ್ರೀಂ ಕೋರ್ಟ್ ನೀಡಿದ ನಂತರ ರಾಮಮಂದಿರ ನಿರ್ಮಾಣ ಯೋಜನೆ ತ್ವರಿತವಾಗಿ ಪ್ರಗತಿಯಲ್ಲಿದೆ.

ಚುನಾವಣಾ ರಾಜಕೀಯ

ಜಿಲ್ಲೆಯಲ್ಲಿ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದ್ದು, ಪ್ರತಿಪಕ್ಷಗಳು ವ್ಯಾಪಾರಿಗಳ ಆಗ್ರಹವನ್ನು ಚುನಾವಣಾ ವಿಷಯವನ್ನಾಗಿ ಬಳಸುತ್ತಿವೆ.

ಬಿಜೆಪಿ ಅಭ್ಯರ್ಥಿ ವಿವೇಕ್ ಪ್ರಕಾಶ್ ಗುಪ್ತಾ ವಿರುದ್ಧ ಮತದಾರರನ್ನು ಒಗ್ಗೂಡಿಸಲು ಅಯೋಧ್ಯೆಯ ಇಂಡಸ್ಟ್ರಿ ಅಂಡ್ ಬ್ಯುಸಿನೆಸ್ ಟ್ರಸ್ಟ್‌ನ ಮುಖ್ಯಸ್ಥ ಸಮಾಜವಾದಿ ಪಕ್ಷದ ನಂದ್ ಕುಮಾರ್ ಗುಪ್ತಾ ಮುಂದಾಗಿದ್ದಾರೆ.

“ಅನೇಕ ವ್ಯಾಪಾರಿಗಳು, ವಿಶೇಷವಾಗಿ ಸಣ್ಣ ಸಣ್ಣ ವ್ಯಾಪಾರಿಗಳು ಬಿಜೆಪಿಯಿಂದ ಭ್ರಮನಿರಸನಗೊಂಡಿದ್ದಾರೆ. ಏಕೆಂದರೆ ಅಭಿವೃದ್ಧಿ ಯೋಜನೆಯು ವ್ಯಾಪಾರಿಗಳ ಜೀವನೋಪಾಯದ ಮೇಲೆ ನೇರವಾಗಿ ದಾಳಿ ಮಾಡುತ್ತಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿರಿ: ಉತ್ತರ ಪ್ರದೇಶ: 2004ರ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ 18 ಪೊಲೀಸರ ವಿರುದ್ಧ FIR ದಾಖಲು

ಆಗಸ್ಟ್ 5, 2020ರಂದು ರಾಮ ಮಂದಿರದ ಉದ್ಘಾಟನಾ ದಿನದಂದು (ಭೂಮಿ ಪೂಜೆಯಂದು) ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ನೀಡುತ್ತಿದ್ದಾರೆಂದು ಸಣ್ಣ ಅಂಗಡಿಗಳನ್ನು ರಸ್ತೆಬದಿಯಿಂದ ತೆರವುಗೊಳಿಸಲಾಯಿತು ಎಂದು ಅವರು ದೂರುತ್ತಾರೆ.

“ಬಿಜೆಪಿ ನಿರ್ಮಿಸಲು ಬಯಸುವ ಈ ಹೊಸ ಮಾಲ್‌ನಂತಹ ಅಯೋಧ್ಯೆಯಲ್ಲಿ ವ್ಯಾಪಾರಿಗಳ ಸ್ಥಾನ ಎಲ್ಲಿದೆ?” ನಂದಕುಮಾರ್‌ ಪ್ರಶ್ನಿಸುತ್ತಾರೆ.

ವ್ಯಾಪಾರಿಗಳಿಗೆ ಪರಿಹಾರ ಸಿಗದಿರುವ ಆತಂಕ, ಆಡಳಿತದಿಂದ ಯಾವುದೇ ಅಧಿಕೃತ ಭರವಸೆ ಇಲ್ಲದಿರುವುದರಿಂದ ವ್ಯಾಪಾರಿ ವರ್ಗದ ಮತಗಳು ಬಿಜೆಪಿಯ ಕೈತಪ್ಪುವ ಸಾಧ್ಯತೆಯನ್ನು ಊಹಿಸಲಾಗಿದೆ.

ದೊಡ್ಡ ಕೈಗಾರಿಕೋದ್ಯಮಿಗಳಿಗೆ ಅಯೋಧ್ಯೆಯಲ್ಲಿ ಅವಕಾಶಗಳನ್ನು ನೀಡುವ ದೊಡ್ಡ ಯೋಜನೆ ರೂಪಿಸಲಾಗಿದೆ ಎಂದು ನಂದ್ ಕುಮಾರ್ ದೂರುತ್ತಾರೆ.

“ಅವರು ಅಯೋಧ್ಯೆಯಿಂದ ಇತರ ಆಟಗಾರರನ್ನು ಹೊರ ಹಾಕಲು ಬಯಸುತ್ತಾರೆ. ಏಕಾಂಗಿಯಾಗಿ ಆಡಳಿತ ನಡೆಸಲು ಇಚ್ಛಿಸುತ್ತಾರೆ” ಎನ್ನುವ ನಂದಕುಮಾರ್‌, “ಬುಲ್ಡೋಜರ್ ಪೆ ಸೈಕಲ್ ಭರಿ (ಬುಲ್ಡೋಜರ್‌ಅನ್ನು ಸೈಕಲ್ ಸೋಲಿಸುತ್ತದೆ)” ಎಂದಿದ್ದಾರೆ.

“ನಾವೂ ರಾಮನ ಸೇವೆ ಮಾಡಿದ್ದೇವೆ…”

ರಾಮಮಂದಿರ ಚಳವಳಿಯ ನಂತರ ಅಯೋಧ್ಯೆ ಅವಕಾಶಗಳ ಕೇಂದ್ರವಾಗಿದೆ ಎಂದು ಮುಖಂಡ ಅಭಯ್ ಕುಮಾರ್ ಪಾಂಡೆ ಅಭಿಪ್ರಾಯಪಡುತ್ತಾರೆ.

ಹಲವು ತಲೆಮಾರಿನ ಕುಟುಂಬಗಳ ಒಡೆತನದ ಈ ಅಂಗಡಿಗಳ ಭಾವನಾತ್ಮಕ ಮೌಲ್ಯವನ್ನು ಹಣದಿಂದ ಸರಿದೂಗಿಸಲು ಸಾಧ್ಯವಿಲ್ಲವಾದರೂ, ಅಯೋಧ್ಯೆಯ ಅಭಿವೃದ್ಧಿಯಿಂದ ವ್ಯಾಪಾರಿಗಳು ಸಹ ಪ್ರಯೋಜನ ಪಡೆಯುವಂತೆ ಆಡಳಿತವು ಖಾತ್ರಿಪಡಿಸಬೇಕು ಎಂದು ಪಾಂಡೆ ಹೇಳುತ್ತಾರೆ.

“ರಾಮಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ಕರಸೇವಕರಿಗೆ ನೀರು, ಅನ್ನ ಬಡಿಸಿದ್ದು ನಾವು. ಶ್ರೀರಾಮನನ್ನು ಗೌರವಿಸಿದ ಜನರಿಗೆ ಜೀವನೋಪಾಯದ ಮಾರ್ಗವಿಲ್ಲವಾದರೆ, ಅವರು ಬಿಜೆಪಿಗೆ ಏಕೆ ಮತ ಹಾಕುತ್ತಾರೆ?” ಎಂದು ಅವರು ಪ್ರಶ್ನಿಸುತ್ತಾರೆ.

“ಮೆಹೆಂಗಾಯಿ ತೋ ರೋಕ್ ನಹೀಂ ಪಯೇಂಗೇ, ಮಗರ್ ಹುಮಾರಾ ಉತ್ಪಿದನ್ ರೋಕ್ ಸಕ್ತೇ ಹೈಂ (ಅವರು ಯಾವಾಗಲೂ ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಅವರು ಮಾಡಬಹುದಾದ ಕೆಲಸವೆಂದರೆ ನಮ್ಮ ಸಂಕಟವನ್ನು ತಡೆಯುವುದು)” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಅಯೋಧ್ಯೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ವಿವೇಕ್ ಪ್ರಕಾಶ್ ಗುಪ್ತಾ, ಎಸ್‌ಪಿಯ ತೇಜ್ ನಾರಾಯಣ ಪಾಂಡೆ ಮತ್ತು ಬಿಎಸ್‌ಪಿಯ ರವಿ ಮೌರ್ಯ ನಡುವೆ ಹಣಾಹಣಿ ನಡೆಯಲಿದೆ. ಕಾಂಗ್ರೆಸ್‌ನ ರೀತಾ ಮೌರ್ಯ ಮತ್ತು ಆಪ್‌ನ ಶುಭಂ ಶ್ರೀವಾಸ್ತವ ಕೂಡ ಕಣದಲ್ಲಿದ್ದಾರೆ.

ಮೂಲ: ದಿ ವೈರ್‌ (ಇಸ್ಮತ್ ಅರಾ)


ಇದನ್ನೂ ಓದಿರಿ: ಯೋಗಿ ಆದಿತ್ಯನಾಥ್‌ಗೆ ಅಯೋಧ್ಯೆಯಲ್ಲಿ ಹೆಚ್ಚು ವಿರೋಧವಿದೆ: ರಾಮ ಮಂದಿರದ ಪ್ರಧಾನ ಅರ್ಚಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬಾಬ್ರಿ ಮಸೀದಿ ಧ್ವಂಸ ಮಾಡಿದ ಕರಸೇವಕರಿಗೆ ಸಕಲ ಸವಲತ್ತು ಪೂರೈಸಿದ ಬೀದಿ ವ್ಯಾಪಾರಿಗಳಿಗೆ ಶ್ರೀ ರಾಮನೇ ಶಿಕ್ಷೆ ವಿಧಿಸುತ್ತಿದ್ದಾನೆಂದು ಆತ್ಮ ವಿಮರ್ಶೆ ಮಾಡಿ ಕೊಳ್ಳುವುದು.

LEAVE A REPLY

Please enter your comment!
Please enter your name here

- Advertisment -

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....