Homeಮುಖಪುಟಅಯೋಧ್ಯೆ ಅಭಿವೃದ್ಧಿ: ಆತಂಕದಲ್ಲಿರುವ ವ್ಯಾಪಾರಿಗಳ ಕೂಗು ಬಿಜೆಪಿಗೆ ಮುಳುವಾಗುವುದೇ?

ಅಯೋಧ್ಯೆ ಅಭಿವೃದ್ಧಿ: ಆತಂಕದಲ್ಲಿರುವ ವ್ಯಾಪಾರಿಗಳ ಕೂಗು ಬಿಜೆಪಿಗೆ ಮುಳುವಾಗುವುದೇ?

- Advertisement -
- Advertisement -

ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನದಿಂದ ಸಲ್ಪ ದೂರದಲ್ಲಿ 45 ವರ್ಷದ ರಂಜಿತಾ ಗುಪ್ತಾ ಅವರು ಕಲಾಕೃತಿಗಳನ್ನು ಮಾರಾಟ ಮಾಡುವ ಸಣ್ಣ ಅಂಗಡಿಯನ್ನು ನಡೆಸುತ್ತಿದ್ದಾರೆ.

ರಾಮಮಂದಿರದ ಭಾಗವಾಗಿ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ರಸ್ತೆ ವಿಸ್ತರಣೆ ಯೋಜನೆಯಿಂದಾಗಿ ರಂಜಿತಾ ತಮ್ಮ ಅಂಗಡಿಯನ್ನು ಕಳೆದುಕೊಳ್ಳುವ ಆತಂಕದಲ್ಲಿ ಕಳೆದ ಕೆಲವು ತಿಂಗಳುಗಳಿಂದಲೂ ಇದ್ದಾರೆ.

ರಂಜಿತಾ ಅವರಿಗೆ ತೊದಲು ಸಮಸ್ಯೆ ಇದೆ. ಹೀಗಾಗಿ ಅವರು ಮದುವೆಯಾಗುವುದು ಕಷ್ಟವಾಯಿತು. ಸಹೋದರನೇ ರಂಜಿತಾ ಅವರನ್ನು ಪೋಷಣೆ ಮಾಡುತ್ತಿದ್ದು, ರಂಜಿತಾ ಅಂಗಡಿಯನ್ನು ನಡೆಸುತ್ತಿದ್ದಾರೆ.

ರಾಮಮಂದಿರಕ್ಕೆ ತೆರಳುವ ಮುನ್ನ, ಹನುಮಂತನ ಬೃಹತ್ ರಚನೆಯನ್ನು ಹೊಂದಿರುವ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಭಕ್ತರು ಮೊದಲು ಭೇಟಿ ನೀಡಬೇಕೆಂಬ ಸಂಪ್ರದಾಯ ಇಲ್ಲಿದೆ. ಹೀಗಾಗಿ ಇಲ್ಲಿನ ವ್ಯಾಪಾರಿಗಳ ಜೀವನ ನೆಮ್ಮದಿಯಾಗಿ ಇತ್ತು.

ರಂಜಿತಾ ಅವರ ಅಂಗಡಿಯನ್ನು ಅವರ ಅಜ್ಜ ನಿರ್ಮಿಸಿದರು. ನಂತರ ಅವರ ತಂದೆ ನಡೆಸುತ್ತಿದ್ದರು. ತಂದೆಯ ಮರಣದ ನಂತರ, ರಂಜಿತಾ ತನ್ನ ಸಹೋದರನೊಂದಿಗೆ ಅಂಗಡಿಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿರಿ: ಭೂ ಹಗರಣ, ಬ್ರಾಹ್ಮಣರ ಮತಗಳು ಕೈ ತಪ್ಪುವ ಭಯ: ಅಯೋಧ್ಯೆಯ ಟಿಕೆಟ್‌ ಯೋಗಿ ಕಳೆದುಕೊಳ್ಳಲು ಕಾರಣವೇ?

ಭಗವಾನ್ ರಾಮನ ಫೋಟೋಗಳೊಂದಿಗೆ ಫೋಟೋ ಫ್ರೇಮ್‌ಗಳು, ಬ್ಯಾಗ್‌ಗಳು, ಧೂಪದ್ರವ್ಯದ ತುಂಡುಗಳು ಮತ್ತು ಇತರ ಕೆಲವು ವರ್ಣರಂಜಿತ ಪೂಜಾ ವಸ್ತುಗಳನ್ನು ಈ ಸಣ್ಣ ಅಂಗಡಿಯಲ್ಲಿ ಕಾಣಬಹುದು. ರಂಜಿತಾ ಮಾರಾಟ ಮಾಡುತ್ತಿರುವ ಬ್ಯಾಗ್‌‌ ಒಂದರ ಮೇಲೆ ‘ಜೈ ಶ್ರೀರಾಮ್‌’ ಎಂದಿರುವುದನ್ನು ನೋಡಬಹುದು.

ರಾಮ ಮಂದಿರ ರಸ್ತೆ ವಿಸ್ತರಣೆ ಯೋಜನೆಯಿಂದಾಗಿ ತನ್ನ ಅಂಗಡಿ ಶೀಘ್ರದಲ್ಲೇ ನೆಲಸಮವಾಗಲಿದೆ ಎಂದು ರಂಜಿತಾ ನೋವು ತೋಡಿಕೊಂಡರು.

PC: The Wire, Ismat Ara

ಅಯೋಧ್ಯೆ ಅಭಿವೃದ್ಧಿ ಯೋಜನೆ

ಅಯೋಧ್ಯೆಯ ಅಭಿವೃದ್ಧಿ ಯೋಜನೆಯ ಭಾಗವಾಗಿ ಹನುಮಾನ್ ಗರ್ಹಿ ಮಾರ್ಗದಲ್ಲಿನ ನೂರಾರು ಅಂಗಡಿಗಳಿರುವ ರಸ್ತೆಯ ಅಗಲೀಕರಣ ಮಾಡಲು ಉದ್ದೇಶಿಸಲಾಗಿದೆ. ಇದರ ವಿರುದ್ಧ 2021ರಲ್ಲಿಯೇ ವ್ಯಾಪಾರಿಗಳು ಪ್ರತಿಭಟಿಸಿದರು.

ಅಂಗಡಿಗಳ ಮಾಲೀಕರು ಹಲವಾರು ಮೆರವಣಿಗೆಗಳನ್ನು ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಹೊರಗೆ ಧರಣಿ ಕುಳಿತರು. ನಂತರ ಪತ್ರಗಳನ್ನೂ ಬರೆದರು. ಸುಮಾರು ಒಂದು ವರ್ಷ ವರ್ಷದಿಂದಲೂ ವ್ಯಾಪಾರಿಗಳು ಆಡಳಿತದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ತೆರವುಗೊಳಿಸುವ ಅಂಗಡಿಗಳಿಗೆ ನೀಡುವ ಪರಿಹಾರದ ಬಗ್ಗೆಯಾಗಲೀ, ಸ್ಥಳಾಂತರಗೊಳ್ಳುವವರಿಗೆ ಹೊಸ ಅಂಗಡಿಗಳಾಗಲಿ ನೀಡುವ ಕುರಿತು ಸ್ಪಷ್ಟತೆ ಇಲ್ಲ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.

2019ರಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಬಾಬರಿ ಮಸೀದಿ ಭೂಮಿಯನ್ನು ಸುಪ್ರೀಂ ಕೋರ್ಟ್ ನೀಡಿದ ನಂತರ ರಾಮಮಂದಿರ ನಿರ್ಮಾಣ ಯೋಜನೆ ತ್ವರಿತವಾಗಿ ಪ್ರಗತಿಯಲ್ಲಿದೆ.

ಚುನಾವಣಾ ರಾಜಕೀಯ

ಜಿಲ್ಲೆಯಲ್ಲಿ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದ್ದು, ಪ್ರತಿಪಕ್ಷಗಳು ವ್ಯಾಪಾರಿಗಳ ಆಗ್ರಹವನ್ನು ಚುನಾವಣಾ ವಿಷಯವನ್ನಾಗಿ ಬಳಸುತ್ತಿವೆ.

ಬಿಜೆಪಿ ಅಭ್ಯರ್ಥಿ ವಿವೇಕ್ ಪ್ರಕಾಶ್ ಗುಪ್ತಾ ವಿರುದ್ಧ ಮತದಾರರನ್ನು ಒಗ್ಗೂಡಿಸಲು ಅಯೋಧ್ಯೆಯ ಇಂಡಸ್ಟ್ರಿ ಅಂಡ್ ಬ್ಯುಸಿನೆಸ್ ಟ್ರಸ್ಟ್‌ನ ಮುಖ್ಯಸ್ಥ ಸಮಾಜವಾದಿ ಪಕ್ಷದ ನಂದ್ ಕುಮಾರ್ ಗುಪ್ತಾ ಮುಂದಾಗಿದ್ದಾರೆ.

“ಅನೇಕ ವ್ಯಾಪಾರಿಗಳು, ವಿಶೇಷವಾಗಿ ಸಣ್ಣ ಸಣ್ಣ ವ್ಯಾಪಾರಿಗಳು ಬಿಜೆಪಿಯಿಂದ ಭ್ರಮನಿರಸನಗೊಂಡಿದ್ದಾರೆ. ಏಕೆಂದರೆ ಅಭಿವೃದ್ಧಿ ಯೋಜನೆಯು ವ್ಯಾಪಾರಿಗಳ ಜೀವನೋಪಾಯದ ಮೇಲೆ ನೇರವಾಗಿ ದಾಳಿ ಮಾಡುತ್ತಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿರಿ: ಉತ್ತರ ಪ್ರದೇಶ: 2004ರ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ 18 ಪೊಲೀಸರ ವಿರುದ್ಧ FIR ದಾಖಲು

ಆಗಸ್ಟ್ 5, 2020ರಂದು ರಾಮ ಮಂದಿರದ ಉದ್ಘಾಟನಾ ದಿನದಂದು (ಭೂಮಿ ಪೂಜೆಯಂದು) ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ನೀಡುತ್ತಿದ್ದಾರೆಂದು ಸಣ್ಣ ಅಂಗಡಿಗಳನ್ನು ರಸ್ತೆಬದಿಯಿಂದ ತೆರವುಗೊಳಿಸಲಾಯಿತು ಎಂದು ಅವರು ದೂರುತ್ತಾರೆ.

“ಬಿಜೆಪಿ ನಿರ್ಮಿಸಲು ಬಯಸುವ ಈ ಹೊಸ ಮಾಲ್‌ನಂತಹ ಅಯೋಧ್ಯೆಯಲ್ಲಿ ವ್ಯಾಪಾರಿಗಳ ಸ್ಥಾನ ಎಲ್ಲಿದೆ?” ನಂದಕುಮಾರ್‌ ಪ್ರಶ್ನಿಸುತ್ತಾರೆ.

ವ್ಯಾಪಾರಿಗಳಿಗೆ ಪರಿಹಾರ ಸಿಗದಿರುವ ಆತಂಕ, ಆಡಳಿತದಿಂದ ಯಾವುದೇ ಅಧಿಕೃತ ಭರವಸೆ ಇಲ್ಲದಿರುವುದರಿಂದ ವ್ಯಾಪಾರಿ ವರ್ಗದ ಮತಗಳು ಬಿಜೆಪಿಯ ಕೈತಪ್ಪುವ ಸಾಧ್ಯತೆಯನ್ನು ಊಹಿಸಲಾಗಿದೆ.

ದೊಡ್ಡ ಕೈಗಾರಿಕೋದ್ಯಮಿಗಳಿಗೆ ಅಯೋಧ್ಯೆಯಲ್ಲಿ ಅವಕಾಶಗಳನ್ನು ನೀಡುವ ದೊಡ್ಡ ಯೋಜನೆ ರೂಪಿಸಲಾಗಿದೆ ಎಂದು ನಂದ್ ಕುಮಾರ್ ದೂರುತ್ತಾರೆ.

“ಅವರು ಅಯೋಧ್ಯೆಯಿಂದ ಇತರ ಆಟಗಾರರನ್ನು ಹೊರ ಹಾಕಲು ಬಯಸುತ್ತಾರೆ. ಏಕಾಂಗಿಯಾಗಿ ಆಡಳಿತ ನಡೆಸಲು ಇಚ್ಛಿಸುತ್ತಾರೆ” ಎನ್ನುವ ನಂದಕುಮಾರ್‌, “ಬುಲ್ಡೋಜರ್ ಪೆ ಸೈಕಲ್ ಭರಿ (ಬುಲ್ಡೋಜರ್‌ಅನ್ನು ಸೈಕಲ್ ಸೋಲಿಸುತ್ತದೆ)” ಎಂದಿದ್ದಾರೆ.

“ನಾವೂ ರಾಮನ ಸೇವೆ ಮಾಡಿದ್ದೇವೆ…”

ರಾಮಮಂದಿರ ಚಳವಳಿಯ ನಂತರ ಅಯೋಧ್ಯೆ ಅವಕಾಶಗಳ ಕೇಂದ್ರವಾಗಿದೆ ಎಂದು ಮುಖಂಡ ಅಭಯ್ ಕುಮಾರ್ ಪಾಂಡೆ ಅಭಿಪ್ರಾಯಪಡುತ್ತಾರೆ.

ಹಲವು ತಲೆಮಾರಿನ ಕುಟುಂಬಗಳ ಒಡೆತನದ ಈ ಅಂಗಡಿಗಳ ಭಾವನಾತ್ಮಕ ಮೌಲ್ಯವನ್ನು ಹಣದಿಂದ ಸರಿದೂಗಿಸಲು ಸಾಧ್ಯವಿಲ್ಲವಾದರೂ, ಅಯೋಧ್ಯೆಯ ಅಭಿವೃದ್ಧಿಯಿಂದ ವ್ಯಾಪಾರಿಗಳು ಸಹ ಪ್ರಯೋಜನ ಪಡೆಯುವಂತೆ ಆಡಳಿತವು ಖಾತ್ರಿಪಡಿಸಬೇಕು ಎಂದು ಪಾಂಡೆ ಹೇಳುತ್ತಾರೆ.

“ರಾಮಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ಕರಸೇವಕರಿಗೆ ನೀರು, ಅನ್ನ ಬಡಿಸಿದ್ದು ನಾವು. ಶ್ರೀರಾಮನನ್ನು ಗೌರವಿಸಿದ ಜನರಿಗೆ ಜೀವನೋಪಾಯದ ಮಾರ್ಗವಿಲ್ಲವಾದರೆ, ಅವರು ಬಿಜೆಪಿಗೆ ಏಕೆ ಮತ ಹಾಕುತ್ತಾರೆ?” ಎಂದು ಅವರು ಪ್ರಶ್ನಿಸುತ್ತಾರೆ.

“ಮೆಹೆಂಗಾಯಿ ತೋ ರೋಕ್ ನಹೀಂ ಪಯೇಂಗೇ, ಮಗರ್ ಹುಮಾರಾ ಉತ್ಪಿದನ್ ರೋಕ್ ಸಕ್ತೇ ಹೈಂ (ಅವರು ಯಾವಾಗಲೂ ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಅವರು ಮಾಡಬಹುದಾದ ಕೆಲಸವೆಂದರೆ ನಮ್ಮ ಸಂಕಟವನ್ನು ತಡೆಯುವುದು)” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಅಯೋಧ್ಯೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ವಿವೇಕ್ ಪ್ರಕಾಶ್ ಗುಪ್ತಾ, ಎಸ್‌ಪಿಯ ತೇಜ್ ನಾರಾಯಣ ಪಾಂಡೆ ಮತ್ತು ಬಿಎಸ್‌ಪಿಯ ರವಿ ಮೌರ್ಯ ನಡುವೆ ಹಣಾಹಣಿ ನಡೆಯಲಿದೆ. ಕಾಂಗ್ರೆಸ್‌ನ ರೀತಾ ಮೌರ್ಯ ಮತ್ತು ಆಪ್‌ನ ಶುಭಂ ಶ್ರೀವಾಸ್ತವ ಕೂಡ ಕಣದಲ್ಲಿದ್ದಾರೆ.

ಮೂಲ: ದಿ ವೈರ್‌ (ಇಸ್ಮತ್ ಅರಾ)


ಇದನ್ನೂ ಓದಿರಿ: ಯೋಗಿ ಆದಿತ್ಯನಾಥ್‌ಗೆ ಅಯೋಧ್ಯೆಯಲ್ಲಿ ಹೆಚ್ಚು ವಿರೋಧವಿದೆ: ರಾಮ ಮಂದಿರದ ಪ್ರಧಾನ ಅರ್ಚಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬಾಬ್ರಿ ಮಸೀದಿ ಧ್ವಂಸ ಮಾಡಿದ ಕರಸೇವಕರಿಗೆ ಸಕಲ ಸವಲತ್ತು ಪೂರೈಸಿದ ಬೀದಿ ವ್ಯಾಪಾರಿಗಳಿಗೆ ಶ್ರೀ ರಾಮನೇ ಶಿಕ್ಷೆ ವಿಧಿಸುತ್ತಿದ್ದಾನೆಂದು ಆತ್ಮ ವಿಮರ್ಶೆ ಮಾಡಿ ಕೊಳ್ಳುವುದು.

LEAVE A REPLY

Please enter your comment!
Please enter your name here

- Advertisment -

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...

ಯುಪಿ: ಮೊಹರಂ ಮೆರವಣಿಗೆಯಲ್ಲಿ ಪಿತೂರಿ: ಪಾಕ್ ಪರ ಘೋಷಣೆಯ ಸುಳ್ಳು ವಿಡಿಯೋ ಹರಿಬಿಟ್ಟ ಇಬ್ಬರು ಹಿಂದುತ್ವವಾದಿಗಳ ಬಂಧನ 

ಬರೇಲಿ (ಉತ್ತರ ಪ್ರದೇಶ): ಮೊಹರಂ ಮೆರವಣಿಗೆಯೊಂದರಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಎಂದು ದೇಶವಿರೋಧಿ ಘೋಷಣೆ ಕೂಗಲಾಗಿದೆ ಎಂಬ ನಕಲಿ ವೀಡಿಯೋ ಸೃಷ್ಟಿಸಿ, ಮುಸ್ಲಿಂ ಸಮುದಾಯದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿದ ಇಬ್ಬರು ಹಿಂದುತ್ವವಾದಿ...

ಮಕ್ಕಳಿಗೆ ಆರ್‌ಎಸ್‌ಎಸ್‌ ತರಬೇತಿ ನೀಡುವುದನ್ನು ಟೀಕಿಸಿ ವಿಡಿಯೋ ಹಂಚಿಕೆ : ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ರಾಜಸ್ಥಾನದ ಜುಂಜುನು ಜಿಲ್ಲೆಯ ನವೀನ್ ಚೌಧರಿ ಎಂಬ 25 ವರ್ಷದ ಯುವಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. 'ಜುಂಜುನು ಎಕ್ಸ್‌ಪ್ರೆಸ್' ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ...

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...