Homeಮುಖಪುಟಈ ತಿಂಗಳು ಬರಲಿರುವ ಅಯೋಧ್ಯೆ ಪ್ರಕರಣದ ತೀರ್ಪನ್ನು ಹೇಗೆ ಸ್ವೀಕರಿಸಬೇಕು: ಯೋಗೇಂದ್ರ ಯಾದವ್‌

ಈ ತಿಂಗಳು ಬರಲಿರುವ ಅಯೋಧ್ಯೆ ಪ್ರಕರಣದ ತೀರ್ಪನ್ನು ಹೇಗೆ ಸ್ವೀಕರಿಸಬೇಕು: ಯೋಗೇಂದ್ರ ಯಾದವ್‌

‘ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು’ ಮಾದರಿಯ ಸೆಕ್ಯುಲರಿಸಂ ಬೇಡ, ತತ್ವನಿಷ್ಠ ಸೆಕ್ಯುಲರಿಸಂ ಪಾಲಿಸೋಣ

- Advertisement -
- Advertisement -

ಸೆಕ್ಯುಲರ್ ರಾಜಕೀಯಕ್ಕೆ ಈ ನವೆಂಬರ್ ತಿಂಗಳು ಹಲವು ಕಠಿಣ ಪರೀಕ್ಷೆಗಳನ್ನೊಡ್ಡಲಿದೆ. ಸರ್ವೋಚ್ಚ ನ್ಯಾಯಲಯವು ಬಹುದಿನಗಳಿಂದ ಕಾಯುತ್ತಿದ್ದ ಅಯೋಧ್ಯೆ ತೀರ್ಪನ್ನು ಈ ತಿಂಗಳು ನೀಡಲಿದೆ. ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು ಇಡೀ ದೇಶಕ್ಕೆ ಯಾವುದೇ ಸಮಯದಲ್ಲಾದರೂ ವಿಸ್ತರಿಸಬಹುದು. ಲೋಕಸಭೆಯ ಚಳಿಗಾಲದ ಅಧಿವೇಶನವೂ ಇದೇ ತಿಂಗಳು ಶುರುವಾಗಲಿದೆ. ಸರಕಾರವು ಅತ್ಯಂತ ಮಹತ್ವದ ಮೂರು ಮಸೂದೆಗಳನ್ನು ಪ್ರಸ್ತಾಪ ಮಾಡುವ, ಪರಿಚಯಿಸುವ ಅಥವಾ ಅಂಗೀಕರಿಸುವ ಸಾಧ್ಯತೆಗಳಿವೆ; ಏಕರೂಪ ನಾಗರಿಕ ಸಂಹಿತೆ (ಯುನಿಫಾರ್ಮ್ ಸಿವಿಲ್ ಕೋಡ್/ಯುಸಿಸಿ), ಕೇಂದ್ರೀಯ ಮತಾಂತರ ವಿರೋಧಿ ಕಾಯಿದೆ (ಸೆಂಟ್ರಲ್ ಅ್ಯಂಟಿ-ಕನ್ವರ್ಷನ್ ಆ್ಯಕ್ಟ್/ಎಸಿಎ) ಹಾಗೂ ಪೌರತ್ವ ತಿದ್ದುಪಡಿ ಮಸೂದೆ (ಸಿಟಿಜನ್‌ಶಿಪ್ ಅಮೆಂಡ್‌ಮೆಂಟ್ ಬಿಲ್/ಸಿಎಬಿ).

ಈ ಮೂರೂ ನಡೆಗಳನ್ನು ಒಂದೆಡೆ ಸೇರಿಸಿ ತರಲಾಗುತ್ತೋ ಅಥವಾ ಬಿಡಿಬಿಡಿಯಾಗಿ ಹಂತಹಂತವಾಗಿ ತರಲಾಗುತ್ತೋ ನಮಗೆ ತಿಳಿದಿಲ್ಲ. ಆದರೆ, ನಮಗೆ ಖಚಿತವಾಗಿ ತಿಳಿದಿರುವುದೇನೆಂದರೆ, ಇವೆಲ್ಲವುಗಳ ಒಟ್ಟಾರೆ ಪರಿಣಾಮ ಹಿಂದುತ್ವಕ್ಕೆ ದೊಡ್ಡ ಒತ್ತು ನೀಡುವುದಾಗಿರುತ್ತದೆ. ಇವೆಲ್ಲವೂ ಮಾಧ್ಯಮಗಳ ಗದ್ದಲದೊಂದಿಗೆ ಜಾರಿಯಾಗುತ್ತದೆ ಎಂಬುದನ್ನೂ ಮರೆಯಲಾಗದು. ಅಯೋಧ್ಯೆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಲಯ ಯಾವುದೇ ತೀರ್ಪು ನೀಡಿದರೂ (ಈ ಪ್ರಕರಣವನ್ನು ನೇರವಾದ ಭೂಪ್ರಕರಣ ಎಂದು ಪರಿಗಣಿಸಿ, ವಕ್ಫ್ ಬೋರ್ಡ್ಗೆ ಒಡೆತನವನ್ನು ಹಿಂದಿರುಗಿಸುವ ಅನಿರೀಕ್ಷಿತ ತೀರ್ಪು ನೀಡುವಂತಹ ಒಂದನ್ನು ಹೊರತುಪಡಿಸಿ) ಆ ತೀರ್ಪನ್ನು ಹಿಂದುಗಳಿಗೆ ಆದ ಒಂದು ದೊಡ್ಡ ವಿಜಯವನ್ನಾಗಿ ಬಿತ್ತರಿಸಿ ಮಾರ್ಪಡಿಸಲಾಗುತ್ತದೆ. ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಮತ್ತು 1955ರ ಪೌರತ್ವ ಕಾಯಿದೆಯ ತಿದ್ದುಪಡಿಗಳನ್ನು ಮುಸ್ಲಿಮ್ ವಲಸಿಗರ ಸಮಸ್ಯೆಗೆ ಅಂತಿಮ ಪರಿಹಾರ ಎಂದು ಬಿಂಬಿಸಲಾಗುವುದು. ಯುಸಿಸಿ ಮತ್ತು ಏಸಿಏಗಳನ್ನು ಸಂವಿಧಾನದಲ್ಲಿ ಇರುವ ಹಿಂದೂವಿರೋಧಿ ಪಕ್ಷಪಾತವನ್ನು ಸರಿಪಡಿಸಲು ಮಾಡಬೇಕಾದ ಕ್ರಮಗಳೆಂದು ಬಿಂಬಿಸಲಾಗುವುದು. ಸ್ಥೂಲವಾಗಿ ನೋಡುವುದಾದರೆ, ಆಳುತ್ತಿರುವ ಕೂಟವು ‘ಹಿಂದೂ ಹಿತಾಸಕ್ತಿಗಳ ಪರಮ ರಕ್ಷಕ’ನಾಗಿ ತನ್ನ ಶಕ್ತಿಯನ್ನು ಸಾಬೀತುಪಡಿಸುವ ಪ್ರಯತ್ನ ಮಾಡುತ್ತದೆ.

ಸೆಕ್ಯುಲರ್ ಶಕ್ತಿಗಳ ಪ್ರತಿಕ್ರಿಯೆಯನ್ನೂ ಇಷ್ಟೇ ಸುಲಭವಾಗಿ ಊಹಿಸಬಹುದಾಗಿದೆ. ಸರ್ವೋಚ್ಚ ನ್ಯಾಯಲಯದ ತೀರ್ಪನ್ನು ಬಹುಸಂಖ್ಯಾತರ ಪಕ್ಷಪಾತಿ ಎಂದೂ ಟೀಕಿಸಬಹುದು. ಯುಸಿಸಿಯನ್ನು ಅಲ್ಪಸಂಖ್ಯಾತರ ಹಿತಾಸಕ್ತಿಗಳಿಗೆ ಸಂವೇದನಾಶೀಲವಾಗಿಲ್ಲವೆಂದು ವಿರೋಧಿಸಬಹುದು ಹಾಗೂ ಏಸಿಏ (ಮತಾಂತರ ವಿರೋಧಿ ಮಸೂದೆ)ಅನ್ನು ತಮ್ಮ ಧರ್ಮವನ್ನು ಪ್ರಸಾರ ಮಾಡುವ ಸಾಂವಿಧಾನಿಕ ಹಕ್ಕನ್ನು ರದ್ದುಪಡಿಸುವ ಕ್ರಮವೆಂದು ವಿರೋಧಿಸಬಹುದು ಹಾಗೂ ಸಿಏಬಿಯು ಮುಸ್ಲಿಮರನ್ನು ಗುರಿಮಾಡುವ ಒಂದು ಭವ್ಯ ವಿನ್ಯಾಸ ಎಂದು ತಿರಸ್ಕರಿಸಬಹುದಾಗಿದೆ. ಒಟ್ಟಾರೆಯಾಗಿ ಸೆಕ್ಯುಲರ್ ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳು ಈ ಎಲ್ಲ ಕ್ರಮಗಳನ್ನು ಅಲ್ಪಸಂಖ್ಯಾತ ವಿರೋಧಿ ಹಾಗೂ ಹಿಂದು ರಾಷ್ಟ್ರದೆಡೆಗೆ ಇಟ್ಟ ಹೆಜ್ಜೆಗಳು ಎಂದು ವಿರೋಧಿಸುವ ಲಕ್ಷಣಗಳಿವೆ.

ಇವರೆಲ್ಲ ಇದನ್ನೇ ಮಾಡಲಿ, ಹೀಗೇ ಮಾಡಲಿ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಬಯಸುತ್ತವೆ.

ಭಾರತದ ಬಲಪಂಥೀಯ ಶಕ್ತಿಗಳು ಸೆಕ್ಯುಲರ್ ರಾಜಕೀಯಕ್ಕೆ ಪದೇಪದೇ ಇಂತಹುದೇ ಬಲೆಯ ಜಾಲವನ್ನು ಬಹುಕಾಲದಿಂದ ಹೆಣೆದಿವೆ. ಸೆಕ್ಯುಲರ್ ರಾಜಕೀಯವು ಆ ಬಲೆಯಲ್ಲೇ ತನ್ನ ಕಾಲನ್ನಿರಿಸಿ ಅವರು ಬಯಸುವುದನ್ನೇ ಮಾಡಿದೆ. ಇದಕ್ಕೆ ತ್ರಿವಳಿ ತಲಾಕ್ ಪ್ರಕರಣ ಒಳ್ಳೆಯ ಉದಾಹರಣೆಯಾಗಿದೆ. ಸಂಘಪರಿವಾರದ ಹುನ್ನಾರಕ್ಕೆ ಸೆಕ್ಯುಲರಿಸ್ಟ್‌ಗಳ ತಕ್ಷಣದ ಅನೈಚ್ಛಿಕ ಪ್ರತಿಕ್ರಿಯೆಯು ಸುಲಭವಾಗಿ ಬಲಿಬೀಳುವಂಥದ್ದಾಗಿರುತ್ತದೆ. ಸೆಕ್ಯುಲರ್ ವಲಯದ ಚುನಾವಣಾ ಶಕ್ತಿಗಳು ‘ಅಲ್ಪಸಂಖ್ಯಾತಪರ ನಡೆ’ಯನ್ನು ಪದೇಪದೇ ಕಡ್ಡಾಯವಾದ ಪ್ರದರ್ಶಿಸುತ್ತಾ ಬಂದಿವೆ, ವೋಟ್ ಬ್ಯಾಂಕ್ ರಾಜಕಾರಣದ ಅಸ್ತ್ರವಾಗಿ. ಇತ್ತೀಚೆಗೆ, ಚುನಾವಣಾ ರಾಜಕೀಯದ ಒತ್ತಡದ ಕಾರಣಕ್ಕೆ ಕಾಂಗ್ರೆಸ್‌ನಂತಹ ‘ಸೆಕ್ಯುಲರ್’ ಪಕ್ಷಗಳು ಸೆಕ್ಯುಲರಿಸಂನಿಂದ ಸ್ವಲ್ಪ ವಿನಾಯತಿ ಪಡೆದು ಹಿಂದುತ್ವದ ಭಾವನೆಗಳನ್ನು ಪುರಸ್ಕರಿಸಿದ್ದೂ ಇದೆ. ಈ ಆಚರಣೆಯನ್ನು ಮೃದು ಹಿಂದುತ್ವ ಎಂದು ಸರಿಯಾಗಿಯೇ ಕರೆಯಲಾಗಿದೆ. ಇವೆಲ್ಲದರ ಫಲವಾಗಿ ಜಾತ್ಯತೀತತೆಯ ಪವಿತ್ರ ಸಾಂವಿಧಾನಿಕ ತತ್ವವನ್ನು ‘ಮೋಸದ ಲೆಕ್ಕಾಚಾರದಿಂದ ತುಂಬಿದ ರಾಜಕೀಯ ಜಾತ್ಯತೀತತೆ’ ಎಂದು ಬಿಂಬಿಸುವುದು ಸುಲಭವಾಗಿದೆ.

ಸೆಕ್ಯುಲರ್ ರಾಜಕೀಯ ಇವೆಲ್ಲಕ್ಕೂ ಭಿನ್ನವಾಗಿ ಪ್ರತಿಕ್ರಿಯಿಸಲು ಸಾಧ್ಯವೇ? ಮೃದು ಹಿಂದುತ್ವ ಅಥವಾ ತಕ್ಷಣದ ಅನೈಚ್ಛಿಕ ಅಲ್ಪಸಂಖ್ಯಾತವಾದದ ಬದಲಿಗೆ ನಾವುಗಳು ಈ ಐದು ನಡೆಗಳಿಗೆ ತತ್ವಾಧಾರಿತ ಸೆಕ್ಯುಲರ್ ಪ್ರತಿಕ್ರಿಯೆಯ ಬಗ್ಗೆ ಚಿಂತಿಸಬಹುದೆ?

ಹೌದು, ನಮಗಿದು ಸಾಧ್ಯವಿದೆ. ನನ್ನ ಪ್ರಕಾರ, ಸೆಕ್ಯುಲರಿಸಂನ ಉಳಿವು ಮೇಲೆ ಹೆಸರಿಸಿದ ಇಂತಹ ಪ್ರಕರಣಗಳಿಗೆ ತತ್ವಾಧಾರಿತ ಪ್ರತಿಕ್ರಿಯೆಯನ್ನು ರೂಪಿಸುವುದರಲ್ಲಿಯೇ ಇದೆ. ಹಾಗಾಗಿ, ಈ ಐದು ಪ್ರಕರಣಗಳಿಗೆ ಪ್ರತಿಕ್ರಿಯಿಸಲು ಒಂದು ವಿಧಾನವನ್ನು ಪ್ರಸ್ತಾಪಿಸಲು ಅವಕಾಶ ಮಾಡಿಕೊಡಬೇಕೆಂದು ಕೋರುತ್ತೇನೆ. ನಾವುಗಳು ಸಂಘಪರಿವಾರದ ಈ ನಡೆಗಳನ್ನು ಒಂದೇ ಉಸಿರಿನಲ್ಲಿ ತಿರಸ್ಕರಿಸುವುದರ ಬದಲಿಗೆ, ಪ್ರತೀ ನಡೆಗಳಿಗೆ ಭಿನ್ನವಾದ ಮತ್ತು ಹಂತಹಂತವಾದ ಪ್ರತಿಕ್ರಿಯೆಯನ್ನು ರೂಪಿಸಬೇಕಿದೆ.

ಯುಸಿಸಿ (ಏಕರೂಪ ನಾಗರಿಕ ಸಂಹಿತೆ)ಗೆ ಸೆಕ್ಯುಲರ್ ಪ್ರತಿಕ್ರಿಯೆಯು ನಿಸ್ಸಂದಿಗ್ಧವಾದ ಸ್ವೀಕಾರ ಮತ್ತು ಸ್ವಾಗತವಾಗಿರಬೇಕು. ವಿವಾಹ, ವಿಚ್ಛೇದನ, ಉತ್ತರಾಧಿಕಾರಿಗಳಿಗೆ ಆಸ್ತಿಯ ಹಸ್ತಾಂತರ (ಇನ್‌ಹೆರಿಟೆನ್ಸ್) ಇತ್ಯಾದಿಗಳನ್ನು ನಿಯಂತ್ರಿಸುವ ಎಲ್ಲಾ ಕುಟುಂಬ ಕಾಯಿದೆಗಳು ಸಂವಿಧಾನವು ಶಿಫಾರಸು ಮಾಡುವ ತತ್ವಗಳಿಗೆ ಅನುಗುಣವಾಗಿರಬೇಕು; ಸೆಕ್ಯುಲರ್ ತತ್ವಗಳಿಗೆ ಅನುಗುಣವಾಗಿರುವ ಆಶಯಗಳಿಗೇ ಒಳಪಟ್ಟಿರಬೇಕು. ಏಕರೂಪ ನಾಗರಿಕ ಸಂಹಿತೆಯು ಎರಡು ಸ್ವರೂಪಗಳನ್ನು ಪಡೆದುಕೊಳ್ಳಬಹುದಾಗಿದೆ. ಭಿನ್ನ ಭಿನ್ನ ಧಾರ್ಮಿಕ ಸಮುದಾಯಗಳನ್ನು ನಿಯಂತ್ರಿಸುವ ಪ್ರತ್ಯೇಕ ಕುಟುಂಬ ಕಾನೂನುಗಳನ್ನು ರದ್ದುಪಡಿಸುವುದು ಮತ್ತು ಅವುಗಳ ಬದಲಿಗೆ ಒಂದೇ ಕಾನೂನು ರಚಿಸುವುದು ಮೊದಲನೆಯ ಆಯ್ಕೆ. ಇದು ಅತ್ಯಂತ ಸುದೀರ್ಘವಾದ ತೊಡಕಿನ ಕ್ರಮವಾಗಿದ್ದು ಆ ಆಯ್ಕೆಯನ್ನು ಕೈಬಿಡುವುದು ಒಳ್ಳೆಯದು. ಇದಕ್ಕಿಂತ ಒಳ್ಳೆಯ ಮಾರ್ಗವೆಂದರೆ, ಪ್ರತ್ಯೇಕ ಕುಟುಂಬ ಕಾನೂನುಗಳನ್ನು ಹಾಗೆಯೇ ಉಳಿಸಿಕೊಂಡು ಅವೆಲ್ಲದರಲ್ಲಿ ಇರುವ ಮಹಿಳಾವಿರೋಧಿಯಾದ ಮತ್ತು ಅನ್ಯಾಯದ ಕಲಮುಗಳನ್ನು ತೆಗೆದುಹಾಕುವುದು. ಒಂದೇ ಧಾರ್ಮಿಕ ಸಮುದಾಯದ ಕುಟುಂಬ ಕಾಯಿದೆಗಳನ್ನು ಇತರರ ಮೇಲೆ ಹೇರದೇ ಇದ್ದರೆ ಈ ಎರಡೂ ಆಯ್ಕೆಗಳು ಸೆಕ್ಯುಲರಿಸಂಗೆಗೆ ಅನುಗುಣವಾಗಿಯೇ ಇರುತ್ತವೆ.

ಅಖಿಲ ಭಾರತ ಮತಾಂತರ ವಿರೋಧಿ ಮಸೂದೆಗೆ ಶರತ್ತುಬದ್ಧ ಸ್ವೀಕಾರದೊಂದಿಗೆ ಪ್ರತಿಕ್ರಿಯಿಸಬೇಕು. ಈ ಸಲಹೆ ವಿವಾದಾತ್ಮವಾಗಿದೆ ಎನ್ನುವ ಅರಿವು ನನಗಿದೆ. ಸಂವಿಧಾನ ರಚನಾ ಸಭೆಯಲ್ಲಿ ಈ ಪರಿಕಲ್ಪನೆಗೆ ಯಾವುದೇ ಪ್ರೋತ್ಸಾಹ ಸಿಗಲಿಲ್ಲ ಎನ್ನುವುದು ಸತ್ಯ. ಇದನ್ನು ಒಬ್ಬರ ಧರ್ಮಪ್ರಸಾರ ಮಾಡುವ ಸಂವಿಧಾನಾತ್ಮಕ ಹಕ್ಕಿನ ಉಲ್ಲಂಘನೆಯೆಂದು ನೋಡಬಹುದು. ನನಗನ್ನಿಸುವುದು ಈ ಸೀಮಿತ ನೋಟವು ಬಲವಂತದ, ಮೋಸದ ಅಥವಾ ಆರ್ಥಿಕ ಸೆಳೆತದಿಂದ ಸಾಧಿಸಿದ ಮತಾಂತರ ಅಥವಾ ಮರುಮತಾಂತರಗಳನ್ನು ನಿಷೇಧಿಸುವ ಅಗತ್ಯಗಳನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಹಿಂದುಯಿಸಂ ಹಾಗೂ ಅನೇಕ ಆದಿವಾಸಿ ಧರ್ಮಗಳು ಒಂದು ಕಟ್ಟುನಿಟ್ಟಿನ ಗಡಿಯನ್ನು ಹೊಂದಿಲ್ಲ ಹಾಗೂ ಅವು ಸಾಂಸ್ಥಿಕ ಆಕ್ರಮಣಕ್ಕೆ ಗುರಿಯಾಗುವ ಸಾಧ್ಯತೆಗಳು ಇರುತ್ತವೆ. ಇಂತಹ ಮತಾಂತರಗಳನ್ನು ನಿಷೇಧಿಸುವ ಕಾನೂನು ಈಗಾಗಲೇ 11 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ಇದಕ್ಕೆ ಇರಬೇಕಾದ ಒಂದೇ ಷರತ್ತು, ಇಂತಹ ಕಾನೂನನ್ನು ದೇಶಾದ್ಯಂತ ವಿಸ್ತರಿಸಬೇಕಾದರೆ, ಇದು ಕೇವಲ ಮತಾಂತರಗಳಿಗೆ ಅನ್ವಯಿಸದೇ ಮರುಮತಾಂತರಕ್ಕೂ ಅನ್ವಯಿಸಬೇಕು ಹಾಗೂ ಹಿಂದೂಗಳನ್ನಷ್ಟೇ ರಕ್ಷಿಸದೇ, ಭಾರತದ ಜನಗಣತಿಯಿಂದ ಪಟ್ಟಿ ಮಾಡಿದ ಎಲ್ಲಾ ಧರ್ಮಗಳನ್ನು ರಕ್ಷಿಸುವಂತಾಗಬೇಕು.

ಎನ್‌ಆರ್‌ಸಿ ವಿಷಯಕ್ಕೆ ಬಂದರೆ, ಅಲ್ಲಿ ಒಂದು ಅರ್ಹವಾದ ಆಕ್ಷೇಪಣೆ ಇರಬೇಕಿದೆ. ತನ್ನ ಪ್ರಜೆಗಳ ಒಂದು ನವೀಕರಿಸಿದ ಮತ್ತು ಪರಿಶೀಲಿಸಿದ ಪಟ್ಟಿಯನ್ನು ಹೊಂದಲು ಸರಕಾರ ಮಾಡುವ ಪ್ರಯತ್ನದಲ್ಲಿ ತಾತ್ವಿಕವಾಗಿ ಯಾವುದೇ ತಪ್ಪು ಕಾಣುವುದಿಲ್ಲ. ಎನ್‌ಆರ್‌ಸಿ ಎನ್ನುವುದು ಮುಸ್ಲಿಮ್‌ವಿರೋಧಿ ಪಿತೂರಿ ಎಂದು ಹೇಳುವುದು ಸರಿಯಲ್ಲ. ಎನ್‌ಆರ್‌ಸಿಯನ್ನು ದೇಶಾದ್ಯಂತ ವಿಸ್ತರಿಸುವ ಯಾವುದೇ ಪ್ರಯತ್ನಕ್ಕೆ ಇರುವ ನಿಜವಾದ ಸಮಸ್ಯೆ ಉದ್ಭವಿಸುವುದು ಯಾವಾಗ ಅಂದರೆ, ಆ ನಿಯಮಗಳು ಮತ್ತು ಕಾರ್ಯವಿಧಾನಗಳು ಪಕ್ಷಪಾತಿಯಾಗಿದ್ದಲ್ಲಿ ಹಾಗೂ ಆಸ್ಸಾಮ್‌ನಲ್ಲಿ ಆದಂತೆ ತನ್ನ ಪೌರತ್ವವನ್ನು ಸಾಬೀತುಪಡಿಸುವ ಹೊರೆ ಪ್ರಜೆಗಳ ಮೇಲೆ ಬಿದ್ದಾಗ ಸಮಸ್ಯೆ ಉದ್ಭವಿಸುತ್ತವೆ. ಇಂತಹ ನೀತಿಯು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ನರಕ ಸೃಷ್ಟಿಸುವುದಿಲ್ಲ. ಅದರೊಂದಿಗೆ ಸಾಕ್ಷ್ಯಗಳನ್ನು, ಪುರಾವೆಗಳನ್ನು ಹೊಂದಿಸಲು ಸಾಧ್ಯವಾಗದ ಕೋಟ್ಯಾಂತರ ಬಡ ಜನರು ಮತ್ತು ಇತರರ ಮೇಲೂ ನರಕ ಹೊರೆಸಿದಂತಾಗುತ್ತದೆ. ಈ ಅಂಶವನ್ನು ಸೆಕ್ಯುಲರ್ ಶಕ್ತಿಗಳು ಆಕ್ಷೇಪಿಸಬೇಕು.

ಅಯೋಧ್ಯೆಯ ವಿವಾದ ಈ ಎಲ್ಲಾ ವಿಷಯಗಳಿಗಿಂತ ಕ್ಲಿಷ್ಟ್ಟಕರವಾಗಿದೆ. ಹಾಗೂ ಒಂದು ಗೌರವಯುತ ಸಂಧಾನ/ರಾಜಿ ಮನೋಭಾವವನ್ನು ಅದು ಅಪೇಕ್ಷಿಸುತ್ತದೆ. ಒಂದು ಕಾಲದಲ್ಲಿ ಬಾಬ್ರಿ ಮಸೀದಿ ನಿಂತ ಜಾಗದ ಒಡೆತನದ ಸರಳ ಭೂಪ್ರಕರಣದ ಸಮಸ್ಯೆ ಎಂದು ನೋಡಿದಲ್ಲಿ ವಕ್ಫ್ ಬೋರ್ಡ್ಗೆ ಮಾತ್ರ ನಿಜವಾದ ಹಕ್ಕಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಸೆಕ್ಯುಲರ್ ಶಕ್ತಿಗಳು ಈ ಕಿರಿದಾದ ಸಂಕುಚಿತ ಕಾನೂನಾತ್ಮಕ ನೋಟವನ್ನು ತೆಗೆದುಕೊಳ್ಳುವ ಸುಲಭ ದಾರಿಯನ್ನು ಹಿಡಿಯಬಾರದು. ಅದರಂತೆ ನ್ಯಾಯಾಲಯವೂ ಮಸೀದಿಗಿಂತ ಮುಂಚೆ ಅಲ್ಲಿ ಏನಿತ್ತು ಎನ್ನುವುದನ್ನು ಕಂಡುಹಿಡಿಯುವ ದಾರಿಯನ್ನು ಹಿಡಿಯಬಾರದು. ಸುಲಭವಾಗಿ ಸರಿಪಡಿಸಲಾಗದ ಈ ವಿವಾದದ ಸಂಕೀರ್ಣತೆಯನ್ನು ಗಮನದಲ್ಲಿಟ್ಟುಕೊಂಡು, ಒಂದು ಮಹತ್ವದ ಒಪ್ಪಂದವನ್ನು ಒಪ್ಪಿಕೊಳ್ಳುವುದು ಅತ್ಯುತ್ತಮ ದಾರಿ. ನ್ಯಾಯಾಲಯದ ತೀರ್ಪಿನ ತಪ್ಪುಒಪ್ಪುಗಳನ್ನು ಒತ್ತಿಹೇಳುವ ಬದಲಿಗೆ, ಸರ್ವೋಚ್ಚ ನ್ಯಾಯಲಯ ಸೂಚಿಸಿದ ಗೌರವಯುತ ಮತ್ತು ನ್ಯಾಯಯುತ ರಾಜಿಸಂಧಾನವನ್ನು ಸ್ವೀಕರಿಸಲು ಮುಕ್ತವಾಗಿರಬೇಕು. ಅದು ಇಂತಹ ಎಲ್ಲಾ ವಿವಾದಗಳನ್ನು ಅಂತಿಮಗೊಳಿಸುವಂತಿದ್ದರೆ ಮಾತ್ರ.

ಸಿಏಬಿ (ಸಿಟಿಝನ್‌ಶಿಪ್ ಅಮೆಂಡ್‌ಮೆಂಟ್ ಬಿಲ್), ದೇಶದ ಪೌರತ್ವ ಕಾನೂನನ್ನು ತಿದ್ದುಪಡಿ ಮಾಡುವ ಪ್ರಸ್ತಾಪಕ್ಕೆ ಸಂಪೂರ್ಣ ಮತ್ತು ದೃಢನಿಶ್ಚಯದ ಪ್ರತಿರೋಧದಿಂದಲೇ ಸ್ವಾಗತಿಸಬೇಕು. ಈ ಮಸೂದೆಯ ಅರ್ಥ, ವಲಸಿಗರಿಗೆ ‘ಮುಸ್ಲಿಮರು ಮಾತ್ರ ಬೇಡ’ ಎಂದು ಹೇಳಿದಂತೆ. ಇದು ಸಮಾನತೆಯ ಹಕ್ಕನ್ನು ಬಿಟ್ಟುಕೊಟ್ಟಂತೆ ಹಾಗೂ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸೆಕ್ಯುಲರ್ ಸಿದ್ಧಾಂತ ರದ್ದುಗೊಳಿಸಿದಂತೆ. ಒಂದು ವೇಳೆ, ಭಾರತೀಯ ಗಣತಂತ್ರದ ಪೌರತ್ವಕ್ಕೆ ಧರ್ಮವನ್ನು ಆಧಾರವಾಗಿ ಒಪ್ಪಿಕೊಂಡಲ್ಲಿ, ನಾವು ದ್ವಿ-ರಾಷ್ಟ್ರ ಸಿದ್ಧಾಂತವನ್ನು ಮರಳಿ ತಂದಂತೆ. ಇದು ಭಾರತದ ಮೂಲ ಪರಿಕಲ್ಪನೆಯ ವಿರುದ್ಧದ ನಡೆಯಾಗಿದೆ. ಒಂದು ವೇಳೆ ಗಾಂಧೀಜಿ ಇಂದು ನಮ್ಮೊಂದಿಗಿದ್ದರೆ, ಈ ವಿಷಯದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಿದ್ದರು ಎನ್ನುವಲ್ಲಿ ಯಾವುದೇ ಸಂಶಯವಿಲ್ಲ. ಈ ವಿಷಯದಲ್ಲಿ ತತ್ವನಿಷ್ಠ ಸೆಕ್ಯುಲರಿಸಂ ತನ್ನ ಮೂಲನೆಲೆಯ ಮೇಲೆ ಗಟ್ಟಿಯಾಗಿ ನಿಂತು ಭಾರತದ ಆತ್ಮವನ್ನು ಉಳಿಸುವ ಯುದ್ಧಕ್ಕೆ ಹೋರಾಟ ಮಾಡಲೇಬೇಕು.

  • ಯೋಗೇಂದ್ರ ಯಾದವ್

ಅನುವಾದ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...