Homeಮುಖಪುಟಕಟ್ಟೆಪುರಾಣ: ಮೋದಿಗೆ ಬುದ್ದಿಲ್ಲ, ಶಾಗೆ ತಲಿಲ್ಲ. ಅದ್ಕೆ ಇಂತ ಕಾನೂನು!

ಕಟ್ಟೆಪುರಾಣ: ಮೋದಿಗೆ ಬುದ್ದಿಲ್ಲ, ಶಾಗೆ ತಲಿಲ್ಲ. ಅದ್ಕೆ ಇಂತ ಕಾನೂನು!

- Advertisement -
- Advertisement -

ಉಗ್ರ ಚಿಂತಾಕ್ರಾಂತನಾಗಿ ಕುಳಿತಿದ್ದುದನ್ನು ಗಮನಿಸಿದ ಜುಮ್ಮಿ.

ಅದ್ಯಾಕ್ಲ ಹೆಂಡತಿ ಸತ್ತೋನಂಗೆ ತಲೆಮ್ಯಾಲೆ ಕೈ ಹೊತ್ತಗಂಡು ಕುಂತಿದ್ದಿ ಎಂದಳು.

ಹೇಳಿದ್ರೆ ನಿನಿಗೆ ಅರ್ಥಾಗದಿಲ್ಲ ಕಣೆ ಎಂದ.

ವಾಟಿಸ್ಸೆ ಬಂದ ಅವುನ್ನೇ ಕೇಳ್ತಿನಿ ಬುಡು.

ಗುಡಮಾನಿಂಗು ಕಣಕ್ಕ.

ಗೂಡೆ ಮಾರಮ್ಮನೂ ಬ್ಯಾಡ ಕ್ವಾಟೆ ಮಾರಮ್ಮನೂ ಬ್ಯಾಡ. ಈ ಉಗ್ರಿ ಊದಿಕಂಡು ಕುಂತವುನೆ. ಯಾಕ್ಲ ಅಂದ್ರೆ, ಹೇಳದ್ರೆ ನಿನಿಗೆ ಗೊತ್ತಾಗದಿಲ್ಲ ಅಂತನೆ ಅದೇನಾಗ್ಯದೆ ನೀನಾರ ಹೇಳ್ಳ ವಾಟಿಸ್ಸೆ.

ಏನಾಗ್ಯದೆ ಅಂತ ಇವತ್ತೇಳಿದ್ರೆ ಗೊತ್ತಾಗದಿಲ್ಲ ಕಣಕ್ಕ ಬಿಜೆಪಿಗಳು ಅಧಿಕಾರಕ್ಕೆ ಬಂದಾಗ್ಲೆ ಸುರುವಾಗ್ಯದೆ. ಈಗ ವರ್ಕು ಪಾಸ್ಟಾಗ್ಯದೆ ಅಷ್ಟೇ ಕಣಕ್ಕ.

ಅದೇನು ವರಕಲಾ.

ಅದೇನವ್ವ ಅಂದ್ರೆ ಬಿಜೆಪಿಗಳು ದೇಶನೆ ಸರ್ವನಾಶ ಮಾಡಕ್ಕೆ ವಂಟಿದ್ರಲ್ಲಕ್ಕ. ಈಗ ರೈತರನೇ ಮುಗಸೋ ಕಾನೂನು ತತ್ತಾ ಅವುರೆ.

ಅದೇನು ಅಂತ ಕಾನೂನು.

ಅದೇನವ್ವ ಅಂದ್ರೆ ರೈತೆಲ್ಲದೋರು ಭೂಮಿಕೊಳ್ಳಂಗಿರಲಿಲ್ಲ. ಈಗ ಬಂದೂ ನಮ್ಮ ಭೂಮಿ ಕೊಳ್ಳಬವುದಂತೆ ಅಂತ ಕಾನೂನು ಬತ್ತಾ ಅದೆ.

ರೈತರಲ್ಲದೊರು ಅಂದ್ರೆ ಅದ್ಯಾರ್ಲ.

ದೇಸದಲ್ಲಿ ಪ್ಯಾಗುಟ್ರಿ ಮಡಗಿರೊ ಸಾವುಕಾರ್ರ್‍ಅವುರೆ, ಮಾರವಾಡಿಗಳವುರೆ, ಐಎಎಸ್, ಐಪಿಎಸ್ ಅಧಿಕಾರಿಗಳವುರೆ, ಬಿಜೆಪಿಗಳವುರೆ. ಅವರಿಗ್ಯಲ್ಲ ಭೂಮಿ ಬೇಕಾದ್ರೆ ಬಂದು ಕೇಳಿದಷ್ಟು ದುಡ್ಡು ಕೊಟ್ಟು ತಗತರೆ.

ತಗಂಡೇನು ಮಾಡ್ಯರೂ.

ಗೆಣಸು ಬ್ಯಳಿತರೆ, ಕಡ್ಳೆಕಾಯಿ ಬ್ಯಳಿತರೆ, ರಾಗಿ ಬ್ಯಳಿತರೆ.

ಸರಿಯಾಗೇಳ್ಳ ಅಣಕ ವಡಿಬ್ಯಾಡ.

ಏನು ಮಾಡ್ತರೆ ಗೊತ್ತೇನಕ್ಕಾ. ಈ ಉಗ್ರಿ ನಾನು ನೀನು ಸೀರಪ್ಪನಂಥೋರು ಮಾರಿಕತ್ತೀವಿ ಅನ್ನು. ಟೋಟ್ಲು ೨೦ ಯಕರೆ ಆಯ್ತು ಅನ್ನು. ಅದಕ್ಯಲ್ಲ ತಂತಿಬೇಲಿ ಹಾಕ್ತನೆ. ಅಮ್ಯಾಲೆ ಬಂದು ಟೀಕ್ ಮರನೋ, ಸಾಗುವಾನಿ ಮರನೋ ನೆಟ್ಟು ಒಂದು ಪಾರಂ ಹೌಸ್ ಮಾಡಿ, ಒಬ್ಬ ವಾಚ್ ಮ್ಯಾನ್ ಇಟ್ಟು ವಂಟೋಯ್ತನೆ. ಇಲ್ಲ ಹಾಳು ಬುಡ್ತನೆ.

ಅಂಗೆ ಮಾಡ್ತರೇನ್ಲ.

ನಮ್ಮೂರಿಗೂ ಬೆಂಗಳೂರಿಗೂ ಕಾರಲ್ಲಿ ಒಂದೂವರೆಗಂಟೆ ಜರ್ನಿ. ಅಲ್ಲಿಂದ ಬಂದು ಇಲ್ಲಿ ಪಾರ್ಟಿ ಮಾಡಿಕಂಡು, ನಾಟಿಕೋಳಿ ತಿಂದು, ಯಾರಾದ್ರು ಲೇಡಿ ಸಿಕ್ಕಿದ್ರೆ ರಾತ್ರಿ ಅವುಳ ಜೊತೆ ಇದ್ದು, ವಂಟೋಯ್ತರೆ ಕಣಕ್ಕ.

ಥೂ ಅವುರ ಮನಿಯಾಳಾಗ ಅಂಥೋರ ಸೇರುಸಬಾರ್ದು ಕಂಡ್ಳ ಇಲ್ಲೀ.

ಅಂಗಂತ ಎಡೂರಪ್ಪನಿಗೇಳು.

ಅವುನ ಕಾಲಾಗ್ಲೆ ಅತ್ತಮುಂದಾಗ್ಯವೆ ಅವುನಿಗೇನೇಳ್ತಿಯೊ ಎಂದ ಉಗ್ರಿ ಸಿಟ್ಟಿನಿಂದ.

ಇದರಲ್ಲವುಂದೇನು ತೆಪ್ಪಿಲ್ಲ ಕಣೋ. ಮೋದಿ ಶಾಗಳು ಹೇಳಿದ್ದ ಮಾಡ್ತ ಅವುನೆ.

ಅವುರ್‍ಯಾಕ್ಲ ಅಂಗೆ ಮಾಡ್ತ ಅವುರೆ.

ಅವುರು ಮಾರವಾಡಿಗಳ ರಾಜ್ಯ ಗುಜರಾತಿಂದ ಬಂದೋರು ಕಣ್ಣಕ್ಕ. ಯಾವುದೇ ವಿಷಯ ತಗಂಡ್ರೂ ಮಾರವಾಡಿಗಳ ತರ ಲಾಭ-ನಷ್ಟ ನೋಡ್ತರೆ. ಅದ್ಕೆ ರೈತರು ಬೇಸಾಯದಲ್ಲಿ ನಷ್ಟ ಮಾಡಿಕತ್ತಾ ಅವುರೆ ಅಂದ್ರೇ, ಅಂಗರೆ ಮಾರಿಬುಡಿ, ಕೈತುಂಬಾ ದುಡ್ಡು ಸಿಗತದೆ ಅರಾಮಾಗಿರಿ ಅಂತರೆ.

ಅಲ್ಲಾ ಕಂಡ್ಳ, ಜಮೀನ ನಾವ್ಯಾವತ್ತು ಲಾಭ ನಷ್ಟದಲ್ಲಿ ನೋಡಿದ್ದವೀ. ಅದರ ಜ್ವತೆ ಬುದುಕ್ತಯಿದ್ದೀವಿ. ಬೇಜಾರಾದ್ರೆ ವಲ್ತಕ್ಕೋಯ್ತಿವಿ. ದನ ಮೇಸ್ತಿವಿ, ಯಮ್ಮೆ ಮೇಸ್ತಿವಿ, ಆಡುಕುರಿ ಮೇಸ್ತಿವಿ. ಅವುನ್ಯಲ್ಲ ಮೇಸಕ್ಕೆ ಜಮೀನು ಬ್ಯಾಡವೇ?

ಬೇಕವ್ವ. ಅದು ಮೋದಿಶಾಗೆ ಹೊಳಿಬೇಕಲ್ಲ. ಮೋದಿಗೆ ಬುದ್ದಿಲ್ಲ. ಶಾಗೆ ತಲಿಲ್ಲ. ಅದ್ಕೆ ಇಂತ ಮನಿಯಾಳ ಕಾನೂನು ತಂದು ಇಡೀ ದೇಶದ ರೈತರು ದಿಕ್ಕು ದೆಸೆಯಿಲ್ದೆ ನ್ಯಲೆ ಕಳಕಂಡು ಅಲಿಯಂಗೆ ಮಾಡ್ತ ಅವುರೆ.

ಇದ ತಡಿಯಕ್ಕಾಗದಿಲವೆ.

ತಡಿಬೇಕಾದ್ರೆ, ರೈತದು ಬೀದಿಗೆ ಬರಬೇಕು. ಚಳುವಳಿ ಮಾಡಬೇಕು. ಆದ್ರೆ ಕರೊನ ಬಂದು ಹಟಕಾಯಿಸಿಗಂಡದೆ. ಅಂಗಾಗಿ ಯಾರೂ ಬೀದಿಗ ಬರಂಗಿಲ್ಲ. ಅದ್ಕೆ, ಇದೇ ಸರಿಯಾದ ಟೈಮು ಅಂತ, ಬಿಜೆಪಿಗಳು ಯೋಚನೆ ಮಾಡಿ, ಎಪಿಎಂಸಿ ಕತೆ ಮುಗಿಸಿದ್ರು. ಈಗ ರೈತರ ಕತೆ ಮುಗುಸ್ತ ಅವುರೆ.

ಅಂಗಾದ್ರೆ ಗತಿಯೇನ್ಲಾ.

ಗತಿ ಇನ್ನೇನು, ಈಗಾಗ್ಲೆ ಬೆಂಗಳೂರಿಂದ ಕುಬೇರ್ರು ಬಂದು ಜಮೀನ ಹುಡುಕ್ತ ಇದ್ದರಂತೆ. ಇನ್ನುಮುಂದೆ ರೈತರೆಲ್ಲ ಹೋಗಿ ಕೃಷಿ ಕಾರ್ಮಿಕರಾಯ್ತರೆ, ಅಷ್ಟೇಯ.

ಅಯ್ಯೋ ಅವುರ ಮನಿಯಾಳಾಗ ಹೋಗು. ಇವುರ ಸೊಲ್ಲು ಯಾವತ್ತಡಗತದ್ಲ.

  • ಬಿ.ಚಂದ್ರೇಗೌಡ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...