Homeಮುಖಪುಟವಿರೋಧ ಅಂದರೇನು, ವಿರೋಧ ಪಕ್ಷ ಅಂದರ ಏನು? ನಿಮಗೇನಾರ ಗೊತ್ತಾ?

ವಿರೋಧ ಅಂದರೇನು, ವಿರೋಧ ಪಕ್ಷ ಅಂದರ ಏನು? ನಿಮಗೇನಾರ ಗೊತ್ತಾ?

- Advertisement -
- Advertisement -

ನಿಮ್ಮಲ್ಲಿ ವಿರೋಧ ಪಕ್ಷದ ಪರವಾಗಿ ಇರುವವರು ಯಾರು? ಹೋಗಲಿ ವಿರೋಧ ಪಕ್ಷ ಅಂದರ ಏನು? ಹೋಗಲಿ ಆತಲಾಗ ವಿರೋಧ ಅಂದ್ರ ಏನು ?

ಈ ಗಹನವಾದ ವಿಷಯ ಇಂದಿನ ಖೋಲಿಯ ವಸ್ತು.

ರಾಜಕೀಯ ಶಾಸ್ತ್ರ ಓದೋ ಹುಡುಗರ ನಡುವ ಒಂದು ಬಹುಚರ್ಚಿತ ಮಾತು ಐತಿ : “ನಮ್ಮ ಸಂವಿಧಾನದಾಗ ಆಡಳಿತ ಪಕ್ಷ ಅನ್ನೋ ಪದ ಇಲ್ಲಾ. ಆದರ ವಿರೋಧ ಪಕ್ಷ ಅನ್ನೋ ಪದ ಐತಿ’. ಈ ಮಾತು ಯಾಕ ಹೇಳತಾರ ಅಂದ್ರ, “ಭಾರತ ಅನ್ನೋದು ಆಡಳಿತ ಪಕ್ಷ ಕೇಂದ್ರಿತ ಪ್ರಜಾಪ್ರಭುತ್ವ ಅಲ್ಲ, ಅದು ಸಮ್ಮಿಳಿತ ಪ್ರಜಾಪ್ರಭುತ್ವ, ಇದರಲ್ಲಿ ವಿರೋಧ ಪಕ್ಷಕ್ಕೆ ಭಾಳ ಪ್ರಾಮುಖ್ಯತೆ ಇದೆ’ ಅಂತ ತಿಳಿಸಲಿಕ್ಕೆ.

ಬ್ರಿಟಿಷ್ ಸರ್ಕಾರದಾಗ ವಿರೋಧ ಪಕ್ಷ ಅಂದ್ರ ಬಹಳ ಗೌರವ. ವಿರೋಧ ಪಕ್ಷದ ನಾಯಕನಿಗೆ ಛಾಯಾ ಪ್ರಧಾನಿ ಅಂತ, ಇತರ ನಾಯಕರಿಗೆ ಛಾಯಾ ಕೃಷಿ ಸಚಿವ, ಛಾಯಾ ಹಣಕಾಸು ಸಚಿವ, ಛಾಯಾ ರಕ್ಷಣಾ ಸಚಿವ, ಇತ್ಯಾದಿ ಹೆಸರುಗಳಿಂದ ಕರೀತಾರ.

ಅವರು ತಮಗೆ ವಹಿಸಿಕೊಟ್ಟ ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಸಂಸತ್ತಿನಲ್ಲಿ ಮಾತಾಡತಾರ. ಅಲ್ಲದೇ ಪ್ರತಿ ಬಾರಿ ಆ ಕ್ಷೇತ್ರದ ಬಗ್ಗೆ ಸರಕಾರ ಏನಾದರೂ ಹೊಸಾ ನೀತಿ ಮಾಡಿದರ, ಅಥವಾ ಬದಲಾವಣೆ ಮಾಡಿದರ, ಅದಕ್ಕ ಸಂಬಂಧ ಪಟ್ಟ ಛಾಯಾ ಸಚಿವರು ಮಾತಾಡತಾರ. ನಮ್ಮಲ್ಲಿ ಹಂಗ ಯಾರಾರರ, ಏನೇನರ ತಲಿಯೊಳಗ ಒಂದು- ಒಂದು ಮಾತಾಡೋದಿಲ್ಲ.

ಹಂಗಾರ ನಮ್ಮ ಹಿರಿಯರೆಲ್ಲ – ಯಾರು ಯಾರು ಈ ದೇಶದ ಸ್ವಾತಂತ್ರ್ಯದ ಸಲುವಾಗಿ ಮನಿ ಬಿಟ್ಟು ಓಡಿಹೋಗಿ, ಸಾಲಿ, ನೌಕರಿ ಬಿಟ್ಟು ವರ್ಷಗಟ್ಟಲೆ ತಪ್ಪಿಸಿಕೊಂಡು ಅಡ್ಡಾಡಿದವರು- ಈ ದೇಶದ ಸರ್ಕಾರದ ಸ್ವರೂಪ ಹೆಂಗ ಇರಬೇಕು ಅಂತ ನಿರ್ಧಾರ ಮಾಡಿದಾಗ ಅವರ ತಲಿಯೊಳಗ ಏನು ಇತ್ತು?

ಅವರಿಗೆ ಈ ದೇಶ ಬಹಳ ದೊಡ್ಡದು, ಅದನ್ನ ಸರಿಯಾಗಿ ನಡಸಬೇಕು ಅಂದ್ರ ಇದು ಬಹುಜನರ ಸರಕಾರದಿಂದ ಮಾತ್ರ ಸಾಧ್ಯ ಅನ್ನೋದು ಗೊತ್ತಿತ್ತು. ಚುನಾವಣೆ ಅನ್ನೋದು ಲಕ್ ಬೈ ಛಾನ್ಸ್ ಅನ್ನೋದು ಗೊತ್ತಿತ್ತು. ಬರೇ ಒಂದು ವೋಟಿನಿಂದ ಗೆದ್ದ ಮನಿಶಾ ಜನರ ಪ್ರತಿನಿಧಿ ಆಗಿಬಿಡೋದು, ಸೋತವ ಮೂಲಿ ಒಳಗ ಕೂಡೋದು, ಅದು ತಪ್ಪು ಅಂತ ಅವರಿಗೆ ಗೊತ್ತಿತ್ತು.

ನಮ್ಮ ದೇಶದ ಮುಂದಿನ ದಾರಿ ನಿರ್ಧಾರ ಮಾಡೋವಾಗ ಎಲ್ಲಾ ಮತದಾರರ ಅಭಿಪ್ರಾಯವನ್ನೂ ಪರಿಗಣಿಸಬೇಕು, ವಿರೋಧ ಪಕ್ಷದವರೂ ಇಲ್ಲಿ ಅಮುಖ್ಯರಲ್ಲ ಅಂತ ಅವರು ಠರಾವಿಸಿದ್ದರು.

ಹೀಂಗೇ ಮುಂದುವರೆದು ಸರಕಾರ ಅಂದ್ರ ಬರೇ ಕಾಯಾಂಗ ಅಲ್ಲ. ಅದರಾಗ ಮೂರು ಅಂಗ ಆದವು. ಅವು ಎಲ್ಲವೂ ಮುಖ್ಯ ಅಂದ್ರು. ಒಂದು ಹೆಜ್ಜಿ ಮುಂದ ಹೋಗಿ ಶಾಸಕಾಂಗ ಅನ್ನೋದು ಕಾಯಾಂಗಕ್ಕಿಂತ ಮುಖ್ಯ ಅಂತ ತಿಳಿಸಿ ಹೇಳಿದರು. ಕಾಯಾಂಗ ಅನ್ನೋದು ಶಾಸಕಾಂಗದ ಕೈ ಗೊಂಬೆ, ಅದನ್ನು ಇದು ಯಾವಾಗ ಬೇಕಾದಾದರೂ ಬೀಳಿಸಬಹುದು ಅಂತ ಸಾರಿದರು.

ಸಂವಿಧಾನದ ಪ್ರಕಾರ ವಿರೋಧ ಪಕ್ಷದ ಕೆಲಸ ಏನು ಅಂದರೆ ೧. ಸರ್ಕಾರದ ನೀತಿ- ನಿಯಮಗಳ ಸರಿ- ತಪ್ಪುಗಳ ವಿಮರ್ಶೆ ಮಾಡೋದು, ೨. ಯೋಜನೆ ಜಾರಿ ಬಗ್ಗೆ ತಮ್ಮ ಅಭಿಪ್ರಾಯ ತಿಳಸೋದು, ೩. ಸದನದೊಳಗ ಜನರ ದನಿ ಆಗೋದು ೪. ತೆರಿಗೆ ಹಣದ ಸರಿಯಾದ ಬಳಕೆ ಅಗೇದೋ ಇಲ್ಲೋ ನೋಡೋದು, ಮತ್ತು ಆಳುವವರು ಶಾಸಕರ ವಿಶ್ವಾಸ ಕಳೆದುಕೊಂಡರ ಅವರನ್ನ ತಕ್ಷಣಕ್ಕೆ ಮನಿಗೆ ಕಳಸೋದು, ಹೊಸಾ ನಾಯಕನ್ನ ಆಯ್ಕೆ ಮಾಡೋದು.

ಸರಕಾರ ಅನ್ನುವುದು, ಅದು ಯಾರದೇ ಇರಲಿ, ಅದನ್ನ, ಅದರ ಸರಿ- ತಪ್ಪುಗಳನ್ನ, ಅದರ ಜನಪರ ಹಾಗೂ ಜನ ವಿರೋಧಿ ನೀತಿ, ಅಥವಾ ಕಾರ್ಯಕ್ರಮಗಳ ಜಾರಿಗಳ ಬಗ್ಗೆ ಮಾತಾಡುವುದು ವಿರೋಧ ಪಕ್ಷದ ಮೂಲಭೂತ ಹಕ್ಕು. ಬಾಹುಳ್ಯದ ಪ್ರಜಾಪ್ರಭುತ್ವದಲ್ಲಿ ಇದು ಅವರ ಪವಿತ್ರ ಹಕ್ಕು. ಅದನ್ನು ಮಾಡದಿದ್ದರೆ ಅವರು ತಪ್ಪು ಮಾಡಿದಂಗೆ. ಅವರು ಜನರಿಗೆ ನೀಡಿದ ಜವಾಬುದಾರಿಯನ್ನು ತಪ್ಪಿಸಿಕೊಂಡಂತೆ.

ಇದನ್ನೆಲ್ಲಾ ಯಾಕ ಹೇಳಬೇಕಾತು ಅಂದ್ರ ಮೊನ್ನೆ ನಮ್ಮ ಗೃಹ ಸಚಿವ ಅಮಿತ್ ಷಾ ಅವರು ಆಡಳಿತ ಪಕ್ಷದ ಬಗ್ಗೆ ಮಾತಾಡೋ ವಿರೋಧ ಪಕ್ಷದವರು ಮೊದಲು ತಾವು ಏನು ಮಾಡಿದಾರ ಅನ್ನೋದು ತೋರಿಸಕೊಡಬೇಕು ಅಂತ ಫರಮಾನು ಕೊಟ್ಟಾರ.

ಅಂತವರಿಗೆ ಒಂಚೂರು ಬ್ರಿಟನ್‌ನ ಗಾರ್ಡಿಯನ ಪತ್ರಿಕೆಯ ಬಗ್ಗೆ ಹೇಳಬೇಕು. ಅವರು ಪ್ರತಿ ಚುನಾವಣೆಯ ನಂತರ ಈ ಪಕ್ಷ ಬಹುಮತ ಪಡೆದು ಆಳುವ ಪಕ್ಷವಾಗಿದೆ. ಆ ಪಕ್ಷ ವಿರೋಧ ಪಕ್ಷವಾಗಿ ಜನರ ಪಕ್ಷವಾಗಿದೆ ಅಂತ ಘೋಷಿಸುವ ಪರಂಪರೆ ಹೊಂದಿದೆ. ತನ್ನನ್ನು ತಾನು ಸರ್ವಕಾಲಿಕ ವಿರೋಧ ಪಕ್ಷ ಅಂತ ಹೇಳಿಕೊಂಡಿದೆ.

ಇದು ಸದನದ ಎಡಗಡೆ, ಬಲಗಡೆ ಕೂಡುವ ಎಲ್ಲರಿಗೂ ತಿಳಿಯಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...