Homeಮುಖಪುಟಕಟ್ಟೆಪುರಾಣ: ಮೋದಿಗೆ ಬುದ್ದಿಲ್ಲ, ಶಾಗೆ ತಲಿಲ್ಲ. ಅದ್ಕೆ ಇಂತ ಕಾನೂನು!

ಕಟ್ಟೆಪುರಾಣ: ಮೋದಿಗೆ ಬುದ್ದಿಲ್ಲ, ಶಾಗೆ ತಲಿಲ್ಲ. ಅದ್ಕೆ ಇಂತ ಕಾನೂನು!

- Advertisement -
- Advertisement -

ಉಗ್ರ ಚಿಂತಾಕ್ರಾಂತನಾಗಿ ಕುಳಿತಿದ್ದುದನ್ನು ಗಮನಿಸಿದ ಜುಮ್ಮಿ.

ಅದ್ಯಾಕ್ಲ ಹೆಂಡತಿ ಸತ್ತೋನಂಗೆ ತಲೆಮ್ಯಾಲೆ ಕೈ ಹೊತ್ತಗಂಡು ಕುಂತಿದ್ದಿ ಎಂದಳು.

ಹೇಳಿದ್ರೆ ನಿನಿಗೆ ಅರ್ಥಾಗದಿಲ್ಲ ಕಣೆ ಎಂದ.

ವಾಟಿಸ್ಸೆ ಬಂದ ಅವುನ್ನೇ ಕೇಳ್ತಿನಿ ಬುಡು.

ಗುಡಮಾನಿಂಗು ಕಣಕ್ಕ.

ಗೂಡೆ ಮಾರಮ್ಮನೂ ಬ್ಯಾಡ ಕ್ವಾಟೆ ಮಾರಮ್ಮನೂ ಬ್ಯಾಡ. ಈ ಉಗ್ರಿ ಊದಿಕಂಡು ಕುಂತವುನೆ. ಯಾಕ್ಲ ಅಂದ್ರೆ, ಹೇಳದ್ರೆ ನಿನಿಗೆ ಗೊತ್ತಾಗದಿಲ್ಲ ಅಂತನೆ ಅದೇನಾಗ್ಯದೆ ನೀನಾರ ಹೇಳ್ಳ ವಾಟಿಸ್ಸೆ.

ಏನಾಗ್ಯದೆ ಅಂತ ಇವತ್ತೇಳಿದ್ರೆ ಗೊತ್ತಾಗದಿಲ್ಲ ಕಣಕ್ಕ ಬಿಜೆಪಿಗಳು ಅಧಿಕಾರಕ್ಕೆ ಬಂದಾಗ್ಲೆ ಸುರುವಾಗ್ಯದೆ. ಈಗ ವರ್ಕು ಪಾಸ್ಟಾಗ್ಯದೆ ಅಷ್ಟೇ ಕಣಕ್ಕ.

ಅದೇನು ವರಕಲಾ.

ಅದೇನವ್ವ ಅಂದ್ರೆ ಬಿಜೆಪಿಗಳು ದೇಶನೆ ಸರ್ವನಾಶ ಮಾಡಕ್ಕೆ ವಂಟಿದ್ರಲ್ಲಕ್ಕ. ಈಗ ರೈತರನೇ ಮುಗಸೋ ಕಾನೂನು ತತ್ತಾ ಅವುರೆ.

ಅದೇನು ಅಂತ ಕಾನೂನು.

ಅದೇನವ್ವ ಅಂದ್ರೆ ರೈತೆಲ್ಲದೋರು ಭೂಮಿಕೊಳ್ಳಂಗಿರಲಿಲ್ಲ. ಈಗ ಬಂದೂ ನಮ್ಮ ಭೂಮಿ ಕೊಳ್ಳಬವುದಂತೆ ಅಂತ ಕಾನೂನು ಬತ್ತಾ ಅದೆ.

ರೈತರಲ್ಲದೊರು ಅಂದ್ರೆ ಅದ್ಯಾರ್ಲ.

ದೇಸದಲ್ಲಿ ಪ್ಯಾಗುಟ್ರಿ ಮಡಗಿರೊ ಸಾವುಕಾರ್ರ್‍ಅವುರೆ, ಮಾರವಾಡಿಗಳವುರೆ, ಐಎಎಸ್, ಐಪಿಎಸ್ ಅಧಿಕಾರಿಗಳವುರೆ, ಬಿಜೆಪಿಗಳವುರೆ. ಅವರಿಗ್ಯಲ್ಲ ಭೂಮಿ ಬೇಕಾದ್ರೆ ಬಂದು ಕೇಳಿದಷ್ಟು ದುಡ್ಡು ಕೊಟ್ಟು ತಗತರೆ.

ತಗಂಡೇನು ಮಾಡ್ಯರೂ.

ಗೆಣಸು ಬ್ಯಳಿತರೆ, ಕಡ್ಳೆಕಾಯಿ ಬ್ಯಳಿತರೆ, ರಾಗಿ ಬ್ಯಳಿತರೆ.

ಸರಿಯಾಗೇಳ್ಳ ಅಣಕ ವಡಿಬ್ಯಾಡ.

ಏನು ಮಾಡ್ತರೆ ಗೊತ್ತೇನಕ್ಕಾ. ಈ ಉಗ್ರಿ ನಾನು ನೀನು ಸೀರಪ್ಪನಂಥೋರು ಮಾರಿಕತ್ತೀವಿ ಅನ್ನು. ಟೋಟ್ಲು ೨೦ ಯಕರೆ ಆಯ್ತು ಅನ್ನು. ಅದಕ್ಯಲ್ಲ ತಂತಿಬೇಲಿ ಹಾಕ್ತನೆ. ಅಮ್ಯಾಲೆ ಬಂದು ಟೀಕ್ ಮರನೋ, ಸಾಗುವಾನಿ ಮರನೋ ನೆಟ್ಟು ಒಂದು ಪಾರಂ ಹೌಸ್ ಮಾಡಿ, ಒಬ್ಬ ವಾಚ್ ಮ್ಯಾನ್ ಇಟ್ಟು ವಂಟೋಯ್ತನೆ. ಇಲ್ಲ ಹಾಳು ಬುಡ್ತನೆ.

ಅಂಗೆ ಮಾಡ್ತರೇನ್ಲ.

ನಮ್ಮೂರಿಗೂ ಬೆಂಗಳೂರಿಗೂ ಕಾರಲ್ಲಿ ಒಂದೂವರೆಗಂಟೆ ಜರ್ನಿ. ಅಲ್ಲಿಂದ ಬಂದು ಇಲ್ಲಿ ಪಾರ್ಟಿ ಮಾಡಿಕಂಡು, ನಾಟಿಕೋಳಿ ತಿಂದು, ಯಾರಾದ್ರು ಲೇಡಿ ಸಿಕ್ಕಿದ್ರೆ ರಾತ್ರಿ ಅವುಳ ಜೊತೆ ಇದ್ದು, ವಂಟೋಯ್ತರೆ ಕಣಕ್ಕ.

ಥೂ ಅವುರ ಮನಿಯಾಳಾಗ ಅಂಥೋರ ಸೇರುಸಬಾರ್ದು ಕಂಡ್ಳ ಇಲ್ಲೀ.

ಅಂಗಂತ ಎಡೂರಪ್ಪನಿಗೇಳು.

ಅವುನ ಕಾಲಾಗ್ಲೆ ಅತ್ತಮುಂದಾಗ್ಯವೆ ಅವುನಿಗೇನೇಳ್ತಿಯೊ ಎಂದ ಉಗ್ರಿ ಸಿಟ್ಟಿನಿಂದ.

ಇದರಲ್ಲವುಂದೇನು ತೆಪ್ಪಿಲ್ಲ ಕಣೋ. ಮೋದಿ ಶಾಗಳು ಹೇಳಿದ್ದ ಮಾಡ್ತ ಅವುನೆ.

ಅವುರ್‍ಯಾಕ್ಲ ಅಂಗೆ ಮಾಡ್ತ ಅವುರೆ.

ಅವುರು ಮಾರವಾಡಿಗಳ ರಾಜ್ಯ ಗುಜರಾತಿಂದ ಬಂದೋರು ಕಣ್ಣಕ್ಕ. ಯಾವುದೇ ವಿಷಯ ತಗಂಡ್ರೂ ಮಾರವಾಡಿಗಳ ತರ ಲಾಭ-ನಷ್ಟ ನೋಡ್ತರೆ. ಅದ್ಕೆ ರೈತರು ಬೇಸಾಯದಲ್ಲಿ ನಷ್ಟ ಮಾಡಿಕತ್ತಾ ಅವುರೆ ಅಂದ್ರೇ, ಅಂಗರೆ ಮಾರಿಬುಡಿ, ಕೈತುಂಬಾ ದುಡ್ಡು ಸಿಗತದೆ ಅರಾಮಾಗಿರಿ ಅಂತರೆ.

ಅಲ್ಲಾ ಕಂಡ್ಳ, ಜಮೀನ ನಾವ್ಯಾವತ್ತು ಲಾಭ ನಷ್ಟದಲ್ಲಿ ನೋಡಿದ್ದವೀ. ಅದರ ಜ್ವತೆ ಬುದುಕ್ತಯಿದ್ದೀವಿ. ಬೇಜಾರಾದ್ರೆ ವಲ್ತಕ್ಕೋಯ್ತಿವಿ. ದನ ಮೇಸ್ತಿವಿ, ಯಮ್ಮೆ ಮೇಸ್ತಿವಿ, ಆಡುಕುರಿ ಮೇಸ್ತಿವಿ. ಅವುನ್ಯಲ್ಲ ಮೇಸಕ್ಕೆ ಜಮೀನು ಬ್ಯಾಡವೇ?

ಬೇಕವ್ವ. ಅದು ಮೋದಿಶಾಗೆ ಹೊಳಿಬೇಕಲ್ಲ. ಮೋದಿಗೆ ಬುದ್ದಿಲ್ಲ. ಶಾಗೆ ತಲಿಲ್ಲ. ಅದ್ಕೆ ಇಂತ ಮನಿಯಾಳ ಕಾನೂನು ತಂದು ಇಡೀ ದೇಶದ ರೈತರು ದಿಕ್ಕು ದೆಸೆಯಿಲ್ದೆ ನ್ಯಲೆ ಕಳಕಂಡು ಅಲಿಯಂಗೆ ಮಾಡ್ತ ಅವುರೆ.

ಇದ ತಡಿಯಕ್ಕಾಗದಿಲವೆ.

ತಡಿಬೇಕಾದ್ರೆ, ರೈತದು ಬೀದಿಗೆ ಬರಬೇಕು. ಚಳುವಳಿ ಮಾಡಬೇಕು. ಆದ್ರೆ ಕರೊನ ಬಂದು ಹಟಕಾಯಿಸಿಗಂಡದೆ. ಅಂಗಾಗಿ ಯಾರೂ ಬೀದಿಗ ಬರಂಗಿಲ್ಲ. ಅದ್ಕೆ, ಇದೇ ಸರಿಯಾದ ಟೈಮು ಅಂತ, ಬಿಜೆಪಿಗಳು ಯೋಚನೆ ಮಾಡಿ, ಎಪಿಎಂಸಿ ಕತೆ ಮುಗಿಸಿದ್ರು. ಈಗ ರೈತರ ಕತೆ ಮುಗುಸ್ತ ಅವುರೆ.

ಅಂಗಾದ್ರೆ ಗತಿಯೇನ್ಲಾ.

ಗತಿ ಇನ್ನೇನು, ಈಗಾಗ್ಲೆ ಬೆಂಗಳೂರಿಂದ ಕುಬೇರ್ರು ಬಂದು ಜಮೀನ ಹುಡುಕ್ತ ಇದ್ದರಂತೆ. ಇನ್ನುಮುಂದೆ ರೈತರೆಲ್ಲ ಹೋಗಿ ಕೃಷಿ ಕಾರ್ಮಿಕರಾಯ್ತರೆ, ಅಷ್ಟೇಯ.

ಅಯ್ಯೋ ಅವುರ ಮನಿಯಾಳಾಗ ಹೋಗು. ಇವುರ ಸೊಲ್ಲು ಯಾವತ್ತಡಗತದ್ಲ.

  • ಬಿ.ಚಂದ್ರೇಗೌಡ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...