Homeಕರ್ನಾಟಕದಲಿತ ಚಳವಳಿಯಲ್ಲಿ ಬಿ.ಕೃಷ್ಣಪ್ಪ ನಮ್ಮ ಕೈಹಿಡಿದು ನಡೆಸಿದರು: ಮಾವಳ್ಳಿ ಶಂಕರ್

ದಲಿತ ಚಳವಳಿಯಲ್ಲಿ ಬಿ.ಕೃಷ್ಣಪ್ಪ ನಮ್ಮ ಕೈಹಿಡಿದು ನಡೆಸಿದರು: ಮಾವಳ್ಳಿ ಶಂಕರ್

- Advertisement -
- Advertisement -

ಬಿ.ಕೃಷ್ಣಪ್ಪ ಅವರು ಹಾಡುತ್ತಿದ್ದ ಹೋರಾಟದ ಹಾಡುಗಳ ಮೂಲಕ ನಾವು ಚಳವಳಿಯ ಭಾಗವಾದವರು. ಅವರ ಕನಸು ಮತ್ತು ಚಿಂತನೆಗಳನ್ನು ನಾವು ಮೈಗೂಡಿಸಿಕೊಂಡೆವು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಹೇಳಿದರು.

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆಯೋಜಿಸಿದ್ದ ಪ್ರೊ. ಬಿ.ಕೃಷ್ಣಪ್ಪ ಅವರ 87 ವರ್ಷದ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, “ಅಂಬೇಡ್ಕರ್ ನಿಧನದ ಬಳಿಕ ದೇಶದ ದಲಿತ ಸಮುದಾಯಗಳಲ್ಲಿ ಸ್ಮಶಾನ ಮೌನ ಆವರಿಸಿತ್ತು. ಅದರ ನಂತರ ಮಹಾರಾಷ್ಟ್ರದಲ್ಲಿ 1972ರ ದಶಕದಲ್ಲಿ ‘ದಲಿತ್ ಪ್ಯಾಂಥರ್ಸ್‌’ ಆರಂಭವಾಗಿತ್ತು. ಅದು ವ್ಯಕ್ತಿಗತವಾಗಿದ್ದರಿಂದ ಕ್ರಮೇಣ ಅದರ ವೇಗ ಕ್ಷೀಣಿಸಿತು. ಆದರೆ, ಕರ್ನಾಟಕದಲ್ಲಿ ದಲಿತ ಚಳಚಳಿ ಎಲ್ಲರನ್ನು ಒಳಗೊಂಡಿತ್ತು, ಎಲ್ಲರನ್ನು ಪೊರೆಯುವ ತಾಯ್ತನ ದಲಿತ ಸಂಘರ್ಷ ಸಮಿತಿಗೆ ಇತ್ತು” ಎಂದರು.

“ದಸಂಸ ಎಲ್ಲ ಜಾತಿಯ ನೊಂದವರನ್ನು ತನ್ನ ಒಡಲೊಳಗೆ ಇಟ್ಟುಕೊಂಡಿತ್ತು, ಅಂತಹ ತಾಯ್ತನದಿಂದ ಎಲ್ಲರನ್ನೂ ಪೊರೆದ ದೊಡ್ಡ ಚಳವಳಿಯೇ ದಲಿತ ಸಂಘರ್ಷ ಸಮಿತಿ. ಬಿ.ಕೃಷ್ಣಪ್ಪ, ಸಿದ್ದಲಿಂಗಯ್ಯ, ದೇವನೂರ ಮಹಾದೇವ ಸೇರಿದಂತೆ ಅನೇಮಕ ಕವಿಗಳು, ಕಲಾವಿದರು, ಹಾಡುಗಾರರು ಈ ಚಳವಳಿಯನ್ನು ಮುನ್ನಡೆಸಿದರು. ಯಾರೂ ಕೂಡ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಯೋಚನೆ ಮಾಡಿದವರಲ್ಲ; ಅಂಬೇಡ್ಕರ್ ಚಿಂತನೆ ಹಡರುವುದು ಮಾತ್ರ ಅವರ ಗುರಿಯಾಗಿತ್ತು; ದಲಿತರ ಮೇಲೆಲಿನ ದೌರ್ಜನ್ಯ ತಡೆಯುವುದಾಗಿತ್ತು. ಆದರೆ, ದೌರ್ಜನ ಇಂದಿಗೂ ನಿಂತಿಲ್ಲ” ಎಂದು ಹೇಳಿದರು.

“ಕೃಷ್ಣಪ್ಪ ಅವರು ದಲಿತ ಚಳವಳಿಯಲ್ಲಿದ್ದಾಗ ಮಾವಳ್ಳಿ ಕೇಂದ್ರ ಸ್ಥಾನವಾಗಿತ್ತು. ಬಿಕೆ ಅವರ ಜೊತೆಗೆ ಸಿದ್ದಲಿಂಗಯ್ಯ, ದೇವನೂರು ಮಹಾದೇವ, ತ್ಯಾಗಿ ಸೇರಿದಂತೆ ಅನೇಕರು ಮಾವಳ್ಳಿಯ ಸತ್ಯಮ್ಮನ ಗುಡಿಯಲ್ಲಿ ಕೂರುತ್ತಿದ್ದರು. ಕೃಷ್ಣಪ್ಪ ಅವರು ಅದ್ಭುತವಾಗಿ ಹೋರಾಟದ ಹಾಡುಗಳನ್ನು ಹಾಡುತ್ತಿದ್ದರು. ಬಿಕೆ ಹಾಡುಗಳ ಮೂಲಕ ನಾವು ದಲಿತ ಚಳವಳಿಯ ಭಾಗವಾದವರು. ಅವರ ಕನಸು ಮತ್ತು ಚಿಂತನೆಗಳನ್ನು ನಾವು ಮೈಗೂಡಿಸಿಕೊಂಡೆವು. ಗದಗಿಗೆ (ಸಾವನ್ನಪ್ಪಿದ ಸ್ಥಳ) ಹೊರಡುವ ಹಿಂದಿನ ದಿನ ಅವರನ್ನು ನಾನು ಬೆಂಗಳೂರಿನಿಂದ ಬಸ್‌ ಹತ್ತಿಸಿದೆ. ದಲಿತ ಚಳವಳಿಯ ಆರಂಭದ ದಿನದಿಂದಲೂ ಅವರ ಕೊನೆಯ ದಿನದವರೆಗೆ ನಮ್ಮನ್ನು ಕೈಹಿಡಿದು ನಡೆಸಿದರು” ಎಂದರು.

“ತಮ್ಮ ಜೀವನವನ್ನು ದಲಿತ ಚಳವಳಿಗೆ ಮೀಸಲಿಟ್ಟಿದ್ದ ಅನೇಕ ಹೋರಾಟಗಾರರನ್ನು ಇಂದು ನಾವು ಕಳೆದುಕೊಂಡಿದ್ದೇವೆ. ನಮ್ಮ ಹಿರಿಯರನ್ನು ನಾವು ನೆನೆಪಿಸಿಕೊಳ್ಳುವ ಜೊತೆಗೆ ಅವರ ಚಿಂತನೆಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

“ಮೂರು ದಶಕಗಳ ಕಾಲ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ದಸಂಸ ನಿರಂತರವಾಗಿ ಮಾತನಾಡುತ್ತಿತ್ತು. ಇದರಿಂದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಸಿಆರ್‌ಇ) ಸೆಲ್ ಆರಂಭವಾಯಿತು. ನಮಗೆ ಅಧಿಕಾರ ಇಲ್ಲ, ನಮ್ಮಿಂದ ಎಫ್‌ಐಆರ್‌ ಹಾಕಲು ಸಾಧ್ಯವಿಲ್ಲ ಎಂದು ಎಂದು ಅಲ್ಲಿನ ಎಸ್‌ಪಿ-ಡಿಸಿಪಿಗಳು ಹೇಳುತ್ತಿದ್ದರು. ಅವರಿಗೆ ಅಧಿಕಾರ ಕೊಡಿ ಎಂದು ನಾವು ಹಲವು ಭಾರಿ ಒತ್ತಾಯಿಸಿದ್ದೇವೆ. ದಲಿತ ಚಳವಳಿ ಎತ್ತಿದ ಪ್ರಶ್ನೆಗೆ ಡಿಸಿಆರ್‌ಇ (ವಿಶೇಷ ಪೊಲೀಸ್ ಠಾಣೆ) ಸೆಲ್ ಆರಂಭಿಸುವ ಮೂಲಕ ಮಹದೇವಪ್ಪ ಇಂದು ಉತ್ತರಿಸಿದ್ದಾರೆ. ದಲಿತ ಸಮುದಾಯದ ರಕ್ಷಣೆಗೆ ದೇಶದಲ್ಲೇ ಅತ್ಯಂತ ವ್ಯವಸ್ಥಿತಿ ಪೊಲೀಸ್ ಠಾಣೆ ಅರಂಭಿಸಿರುವುದು ಕರ್ನಾಟಕ ಸರ್ಕಾರ ಮಾತ್ರ; 32 ಡಿಸಿಆರ್‌ಇ ಸೆಲ್ ಪೊಲೀಸ್ ಠಾಣೆಗಳನ್ನು ಸರ್ಕಾರ ಆರಂಭಿಸಿದೆ. ದಸಂಸದ ಬೇಡಿಕೆಯನ್ನು ಜಾರಿ ಮಾಡುವ ಇಚ್ಛಾಶಕ್ತಿ ಈವರೆಗೆ ಯಾರಿಗೂ ಇರಲಿಲ್ಲ, ಅದನ್ನು ಜಾರಿಗೆ ತಂದ ಮಹದೇವಪ್ಪ ಅವರನ್ನು ನಾವು ಅಭಿನಂದಿಸಲೇಬೇಕು” ಎಂದು ಪ್ರಶಂಸಿದರು.

“ದಲಿತರಿಗೆ ಭೂಮಿ ಇದ್ದಿದ್ದರೆ ಅವರ ಮೇಲಿನ ದೌರ್ಜನ್ಯಗಳು ಕಡಿಮೆ ಆಗುತ್ತಿದ್ದವು; ಭೂಮಿ ಎಂಬುದು ಒಂದು ಸಾಧನವಾಗಿದೆ. ದಲಿತ ಚಳವಳಿ ಆರಂಭಿಸಿದ ಪಿಟಿಎಸ್‌ಎಲ್‌ ಮೂಲಕ ಒಂದಷ್ಟು ಭೂಮಿ ಸಿಕ್ಕಿದೆ. ಅದನ್ನೂ ಪ್ರಬಲ ಜಾತಿಗಳು ವಿರೋಧಿಸಿವೆ. ಪಿಟಿಸಿಎಲ್‌ ಕಾಯ್ದೆಯನ್ನು ಸುಪ್ರೀಂ ಕೋರ್ಟಿನಲ್ಲಿ ನಮ್ಮ ಪ್ರಯತ್ನವಾಗಿ ಮಾಡಲು ಸರ್ಕಾರ ಕೆಲಸ ಮಾಡುತ್ತಿದೆ. ಲಕ್ಷಲಕ್ಷ ದರಕಾಸ್ತು ಭೂಮಿ ಅರ್ಜಿಗಳು ಕೊಳೆಯುತ್ತಾ ಬಿದ್ದಿವೆ. ಈ ಬಗ್ಗೆ ಯಾವ ಶಾಸಕರೂ ಮಂತ್ರಿಗಳು ಸಭೆ ನಡೆಸುತ್ತಿಲ್ಲ. ಅರಣ್ಯ ಇಲಾಖೆ ದಲಿತರ ಭೂಮಿಗಳನ್ನು ಬಲವಂತವಾಗಿ ಕಿತ್ತುಕೊಂಡು ಸಾಮಾಜಿಕ ಅರಣ್ಯ ಮಾಡುತ್ತಿವೆ. ಅದನ್ನು ಕೇಳಿದವರನ್ನು ಹಿಡಿದು ಜೈಲಿಗೆ ಹಾಕುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.

ದಲಿತ ಚಳವಳಿಯನ್ನು ಹೊಸ ತಲೆಮಾರು ಒಗ್ಗೂಡಿಸಬೇಕು: ಪ್ರೊ. ನಟರಾಜ್ ಹುಳಿಯಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...