Homeಕರ್ನಾಟಕದಲಿತ ಚಳವಳಿಯನ್ನು ಹೊಸ ತಲೆಮಾರು ಒಗ್ಗೂಡಿಸಬೇಕು: ಪ್ರೊ. ನಟರಾಜ್ ಹುಳಿಯಾರ್

ದಲಿತ ಚಳವಳಿಯನ್ನು ಹೊಸ ತಲೆಮಾರು ಒಗ್ಗೂಡಿಸಬೇಕು: ಪ್ರೊ. ನಟರಾಜ್ ಹುಳಿಯಾರ್

- Advertisement -
- Advertisement -

ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಪ್ರಕ್ರಿಯೆ ಪ್ರಸ್ತುತ ಒಂದು ಹಂತಕ್ಕೆ ಬಂದಿದೆ; ಈ ವಿಷಯ ಪರಿಹಾರದ ಬಳಿಕ ಹೊಸ ತಲೆಮಾರು ದಲಿತ ಚಳುವಳಿಯನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಪ್ರೊ. ನಟರಾಜ್ ಹುಳಿಯಾರ್ ಕರೆಕೊಟ್ಟರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪ್ರೊ. ಬಿ.ಕೃಷ್ಣಪ್ಪ ಅವರ 88ನೇ ಜನ್ಮದಿನದ ಪ್ರಯುಕ್ತ ನಡೆದ ‘ನಾಗರಿಕ ಹಕ್ಕು ರಕ್ಷಣಾ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ. ಬಿ.ಕೃಷ್ಣಪ್ಪ ಅವರು ಟೀಚರ್ ಆಗಿ ಚಳವಳಿ ಹೇಗೆ ನಡೆಸಬೇಕು ಎಂದು ಒಂದು ಮಾದರಿ ಹಾಕಿಕೊಟ್ಟರು. ಕನ್ನಡ ಸಾಹಿತ್ಯದಲ್ಲಿ ದಲಿತ ವಿಮರ್ಶೆ ಹೇಗಿರಬೇಕು? ವಿದ್ಯಾರ್ಥಿಗಳ ನಡುವೆ ಚಳವಳಿ ಹೇಗೆ ಕಟ್ಟಬೇಕು ಎಂದು ಹೇಳಿಕೊಟ್ಟರು. ಇಂದು ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಕೃಷ್ಣಪ್ಪ ಅವರ ಮಾದರಿ ನಮ್ಮ ಎದುರಿಗಿದೆ. ದಲಿತ ಚಳವಳಿಗೆ ಮಾತ್ರವಲ್ಲ, ಕರ್ನಾಟಕಕ್ಕೆ ಅವರ ಮಾದರಿ ಹಬ್ಬಿದೆ ಎಂದರು.

ಭದ್ರಾವತಿಯಲ್ಲಿ ವಿಎಸ್ಎನ್ಎಲ್ ಕಾರ್ಖಾನೆಯಲ್ಲಿ ದಲಿತ ನೌಕರರಿಗೆ ಪ್ರತ್ಯೇಕ ಚಹಾ ನೀಡಲಾಗುತ್ತಿತ್ತು. ಪ್ರಬಲ ಜಾತಿ ನೌಕರರೊಬ್ಬರು ಬಂದು ಎಲ್ಲರಿಗೂ ಚಹಾ ನೀಡಬೇಕಾಗಿತ್ತು. ಅದನ್ನು ವಿರೋಧಿಸುವ ಮೂಲಕ  ಹೋರಾಟ ಕಟ್ಟಿದರು. ಅಲ್ಲಿಂದ ಅವರು ಅಸ್ಪೃಶ್ಯತೆ ವಿರೋಧಿ ಹೋರಾಟಕ್ಕೆ ಚಾಲನೆ ಕೊಟ್ಟರು. 70ರ ದಶಕದಲ್ಲಿ ಕೃಷ್ಣಪ್ಪ ಅವರು ಸಮಾಜ ಕಲ್ಯಾಣ ಇಲಾಖೆ ಕೆಲಸದ ಬಗ್ಗೆ ಹಾಗೂ ರಾಜ್ಯ ಬಜೆಟ್ ಬಗ್ಗೆ ಚರ್ಚೆ ಮಾಡುತ್ತಿದ್ದರು. ಸಮಾಜ ಕಲ್ಯಾಣ ಇಲಾಖೆ ಏನೆಲ್ಲಾ ಮಾಡಬೇಕು ಎಂದು ಸಲಹೆ ಕೊಡುತ್ತಿದ್ದರು. ಅಂದು ಕೃಷ್ಣಪ್ಪ ಅವರು ಮಾಡಿದ ಹೋರಾಟದ ಪರಿಣಾಮವಾಗಿ ಸರ್ಕಾರ ಈಗ ದಲಿತರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಟ್ಟಿದೆ ಎಂದು ಹೇಳಿದರು.

ಕೃಷ್ಣಪ್ಪ ಅವರ ಹೋರಾಟದ ಫಲದಿಂದ ಇಂದು ದಲಿತರ ಭೂಮಿ ಪರಭಾರೆ ಬಗ್ಗೆ ಕಾನೂನಾಗಿದೆ. ಕೃಷ್ಣಪ್ಪ ಅವರ ಗತಕಾಲವನ್ನು ನೆನೆಪಿಸಿಕೊಂಡು ನಾವು ಇಂದು ವಿಷಾದ ವ್ಯಕ್ತಪಡಿಸುತ್ತಿದ್ದೇವೆ. ದಲಿತ ಚಳವಳಿಗೆ ಸಾಹಿತಿಗಳು, ಬರಹಗಾರರು, ಶಿಕ್ಷಕರು, ರಾಜಕಾರಣಿಗಳು ಸೇರಿದಂತೆ ಎಲ್ಲ ವಲಯದಿಂದ ಪ್ರತಿನಿಧಿಗಳು ಇದ್ದರು. ಇಂದು ದಲಿತ ಚಳವಳಿಗೆ ಅವರೆಲ್ಲರ ಸಂಪರ್ಕ ಕಡಿಮೆಯಾಗಿದೆ. ದಲಿತ ಚಳವಳಿಗೆ ವಿವಿಧ ವಲಯಗಳಿಂದ ಬರುತ್ತಿದ್ದ ಬೆಂಬಲ ಕ್ಷೀಣಿಸಿದೆ. ದಲಿತ ಚಳವಳಿಗೆ ಕೃಷ್ಣಪ್ಪ ಅವರು ಕೊಟ್ಟ ನುಡಿಗಟ್ಟುಗಳು ಈಗಲೂ ನಮ್ಮ ಬಳಿಯಲ್ಲಿ ಇದೆ; ಎಲ್ಲ ವಲಯಗಳ ಬುದ್ದಿಜೀವಿಗಳು ದಲಿತ ಚಳವಳಿ ಜೊತೆಗೆ ಸೇರಬೇಕು. ಏಕೆಂದರೆ, ಅಮೆರಿಕದಲ್ಲಿ ಒಬಾಮ ಎರಡು ಅವಧಿಗೆ ಅಧ್ಯಕ್ಷರಾಗಲೂ ಇದೇ ಕಾರಣ. ಅಲ್ಲಿನ ಸಾಂಸ್ಕೃತಿಕ ಅಧಿಕಾರದಿಂದ ಇದು ಸಾಧ್ಯವಾಯಿತು. ಸಿನಿಮಾ, ಹಾಡುಗಾರರು, ಬರಹಗಾರರು ಸೇರಿದಂತೆ ಎಲ್ಲರೂ ಕಪ್ಪು ಜನರ ಬಗ್ಗೆ ಮಾತನಾಡಿದರು ಎಂದರು.

ನಾವು ಅಂಬೇಡ್ಕರ್‌ವಾದವನ್ನು ಪ್ರಚಾರ ಮಾಡಬೇಕು. ಅಂಬೇಡ್ಕರ್ ಅವರ ವೈಚಾರಿಕತೆ ಸಮಾಜದಲ್ಲಿ ಹಬ್ಬದ ಕಾರಣಕ್ಕೆ ಇಂದು ದೇಶದಲ್ಲಿ ಹಲವೆಡೆ ಕಾಲ್ತುಳಿತ ಆಗುತ್ತಿದೆ. ಅಂಬೇಡ್ಕರ್ ಅವರ ಜಾತಿ ವಿನಾಶದ ಮಾದರಿಯನ್ನು ಮರೆತಿರುವ ನಾವು, ಜಾತಿ ಉಪಜಾತಿಗಳನ್ನು ಪೋಷಿಸಿಕೊಂಡು ಹೋಗುತ್ತಿದ್ದೇವೆ. ಜಾತಿ ಪ್ರಜ್ಞೆಯನ್ನು ನಾವು ನಮ್ಮ ತಲೆಯಿಂದ ಹೋಗಲಾಡಿಸಬೇಕು. ಜಾತಿ ಇಂದು ಎಲ್ಲವನ್ನೂ ನಿಯಂತ್ರಣ ಮಾಡುತ್ತಿದೆ. ಊಳಿಗಮಾನ್ಯ ಜಾತಿ ಹಾಗೂ ಪಕ್ಷಗಳು ದಲಿತ ರಾಜಕಾರಣಿಗಳ ವಿರುದ್ಧ ಮಾತನಾಡಲು ದಲಿತ ರಾಜಕಾರಣಿಗೇ ಸುಪಾರಿ ನೀಡುತ್ತಿವೆ. ಅದಕ್ಕೆ ನಮ್ಮ ಮಾಧ್ಯಮಗಳೂ ಹೆಚ್ಚು ಪ್ರಚಾರ ಕೊಡುತ್ತಿವೆ ಎಂದು ಹೇಳಿದರು.

ದಲಿತ ಚಳವಳಿಯ ಯುಜನರಿಗೆ ನನ್ನದೊಂದು ಸಲಹೆ. ಒಳ ಮೀಸಲಾತಿ ಜಾರಿ ಪ್ರಕ್ರಿಯೆ ಒಂದು ಹಂತಕ್ಕೆ ಬಂದಿದೆ. ಅದು ಪರಿಹಾರ ಆದ ನಂತರ ಹೊಸ ತಲೆಮಾರು ದಲಿತ ಚಳುವಳಿಯನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದರು ಕಿವಿಮಾತು ಹೇಳಿದರು.

ಸಿದ್ಧಾಂತಗಳಿಗೆ ಮಾತ್ರ ಜಗತ್ತು ಬದಲಿಸುವ ಶಕ್ತಿ ಇದೆ

ಯಾವ ಬಾಂಬು-ಬಂದೂಕಿಗೂ ಜಗತ್ತನ್ನು ಬದಲಾಯಿಸುವ ಶಕ್ತಿ ಇಲ್ಲ. ಗಟ್ಟಿ ಸಿದ್ಧಾಂತಗಳಿಗೆ ಮಾತ್ರ ಆ ಶಕ್ತಿ ಇದೆ ಎಂದು ಚಿಂತಕರು ಹಾಗೂ ಮುಖ್ಯಮಂತ್ರಿಗಳ ಆಪ್ತ ಕಾರ್ಯರ್ಶಿಗಳಾದ ಡಾ. ಎನ್.ವೆಂಕಟೇಶಯ್ಯ ಪ್ರತಿಪಾದಿಸಿದರು.

ಅಂಬೇಡ್ಕರ್‌ವಾದ ವಿಶೇಷಾಂಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, “ದಲಿತ ಚಳವಳಿಗೆ ಈಗ 51 ವರ್ಷ ತುಂಬುತ್ತಿದೆ. ಜಗತ್ತನ್ನು ಬದಲಾಯಿಸುವ ಶಕ್ತಿ ಗಟ್ಟಿ ಸಿದ್ಧಾಂತಗಳಿಗೆ ಮಾತ್ರ ಇದೆ. ಯಾವುದೇ ಬಾಂಬು-ಬಂದೂಕುಗಳಿಗೆ ಅಲ್ಲ. ಸಿದ್ಧಾಂತವು ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಸಿದ್ಧಾಂತವು ಸಮಾಜದ ಬದಲಾವಣೆಗೆ ಸದಾ ಶ್ರಮಿಸುತ್ತದೆ; ಇಲ್ಲದಿದ್ದರೆ ಆ ಸಿದ್ದಾಂತ ಜೀವಂತ ಇರುವುದಿಲ್ಲ ಎಂದರು.

ಕೃಷ್ಣಪ್ಪ ಅವರ ಹೋರಾಟದ ಮಾರ್ಗಗಳು ಭೂಮಿ, ವಸತಿ ಶಾಲೆ, ಮೂಢನಂಬಿಕೆ ಮತ್ತು ಅಸ್ಪೃಶ್ಯತೆ ವಿರೊಧಿಯಾಗಿತ್ತು. ಅವರು ಪ್ರಮುಖವಾಗಿ ನಾಲ್ಕೈದು ಹೋರಾಟಗಳನ್ನು ರೂಪಿಸಿದರು. 70ರ ದಶಕದಲ್ಲಿ ಅವರು ನಡೆಸಿದ ಭೂಮಿ ಹೋರಾಟದಿಂದ ಇಂದು ಲಕ್ಷಾಂತರ ಜನ ಭೂ ಹಿಡುವಳಿದಾರರಾಗಿದ್ದಾರೆ; ಅದರಲ್ಲಿ ಬಹುತೇಕರು ದಲಿತರಿದ್ದಾರೆ. ‘ಹೆಂಡ ಬೇಡ, ವಸತಿ ಶಾಲೆ ಕೊಡಿ’ ಎಂಬ ಚಳವಳಿಯಿಂದ ಇಂದು ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಮಾತ್ರ 8.35 ಲಕ್ಷ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಕಲಿಯುತ್ತಿದ್ದಾರೆ. ವಿಶೇಷವೆಂದರೆ ಈ ಶಾಲೆಗಳಲ್ಲಿ ಫಲಿತಾಂಶ ಕೂಡ ಉತ್ತಮವಾಗಿದೆ. ವಸತಿ ಶಾಲೆಗಳಲ್ಲಿ ಓದಿದ ಮಕ್ಕಳು ಇಂದು ಐಎಎಸ್-ಐಪಿಎಸ್ ಆಗಿದ್ದಾರೆ. ಶೇ.98ರಷ್ಟು ಮಕ್ಕಳು ಪ್ರತಿವರ್ಷ ಉತ್ತೀರ್ಣರಾಗುತ್ತಿದ್ದಾರೆ. ದಲಿತ ಚಳವಳಿ ಮತ್ತು ಕೃಷ್ಣಪ್ಪ ಅವರ ಮುಂದಾಲೋಚನೆಗಳೇ ಇದಕ್ಕೆಲ್ಲಾ ಕಾರಣ. ಅಂದರೆ ಒಂದು ಗಟ್ಟಿ ಸಿದ್ಧಾಂತದಿಂದ ಮಾತ್ರ ಇದೆಲ್ಲ ಸಾಧ್ಯ” ಎಂದರು.

ಹಾವೇರಿ| ಪೌರ ಕಾರ್ಮಿಕರ ಮೇಲೆ ಹಲ್ಲೆ: ಆರೋಪಿಗಳ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...

ಯುಪಿ: ಮೊಹರಂ ಮೆರವಣಿಗೆಯಲ್ಲಿ ಪಿತೂರಿ: ಪಾಕ್ ಪರ ಘೋಷಣೆಯ ಸುಳ್ಳು ವಿಡಿಯೋ ಹರಿಬಿಟ್ಟ ಇಬ್ಬರು ಹಿಂದುತ್ವವಾದಿಗಳ ಬಂಧನ 

ಬರೇಲಿ (ಉತ್ತರ ಪ್ರದೇಶ): ಮೊಹರಂ ಮೆರವಣಿಗೆಯೊಂದರಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಎಂದು ದೇಶವಿರೋಧಿ ಘೋಷಣೆ ಕೂಗಲಾಗಿದೆ ಎಂಬ ನಕಲಿ ವೀಡಿಯೋ ಸೃಷ್ಟಿಸಿ, ಮುಸ್ಲಿಂ ಸಮುದಾಯದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿದ ಇಬ್ಬರು ಹಿಂದುತ್ವವಾದಿ...

ಮಕ್ಕಳಿಗೆ ಆರ್‌ಎಸ್‌ಎಸ್‌ ತರಬೇತಿ ನೀಡುವುದನ್ನು ಟೀಕಿಸಿ ವಿಡಿಯೋ ಹಂಚಿಕೆ : ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ರಾಜಸ್ಥಾನದ ಜುಂಜುನು ಜಿಲ್ಲೆಯ ನವೀನ್ ಚೌಧರಿ ಎಂಬ 25 ವರ್ಷದ ಯುವಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. 'ಜುಂಜುನು ಎಕ್ಸ್‌ಪ್ರೆಸ್' ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ...

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...