Homeಕರ್ನಾಟಕದಲಿತ ಚಳವಳಿಯಲ್ಲಿ ಬಿ.ಕೃಷ್ಣಪ್ಪ ನಮ್ಮ ಕೈಹಿಡಿದು ನಡೆಸಿದರು: ಮಾವಳ್ಳಿ ಶಂಕರ್

ದಲಿತ ಚಳವಳಿಯಲ್ಲಿ ಬಿ.ಕೃಷ್ಣಪ್ಪ ನಮ್ಮ ಕೈಹಿಡಿದು ನಡೆಸಿದರು: ಮಾವಳ್ಳಿ ಶಂಕರ್

- Advertisement -
- Advertisement -

ಬಿ.ಕೃಷ್ಣಪ್ಪ ಅವರು ಹಾಡುತ್ತಿದ್ದ ಹೋರಾಟದ ಹಾಡುಗಳ ಮೂಲಕ ನಾವು ಚಳವಳಿಯ ಭಾಗವಾದವರು. ಅವರ ಕನಸು ಮತ್ತು ಚಿಂತನೆಗಳನ್ನು ನಾವು ಮೈಗೂಡಿಸಿಕೊಂಡೆವು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಹೇಳಿದರು.

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆಯೋಜಿಸಿದ್ದ ಪ್ರೊ. ಬಿ.ಕೃಷ್ಣಪ್ಪ ಅವರ 87 ವರ್ಷದ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, “ಅಂಬೇಡ್ಕರ್ ನಿಧನದ ಬಳಿಕ ದೇಶದ ದಲಿತ ಸಮುದಾಯಗಳಲ್ಲಿ ಸ್ಮಶಾನ ಮೌನ ಆವರಿಸಿತ್ತು. ಅದರ ನಂತರ ಮಹಾರಾಷ್ಟ್ರದಲ್ಲಿ 1972ರ ದಶಕದಲ್ಲಿ ‘ದಲಿತ್ ಪ್ಯಾಂಥರ್ಸ್‌’ ಆರಂಭವಾಗಿತ್ತು. ಅದು ವ್ಯಕ್ತಿಗತವಾಗಿದ್ದರಿಂದ ಕ್ರಮೇಣ ಅದರ ವೇಗ ಕ್ಷೀಣಿಸಿತು. ಆದರೆ, ಕರ್ನಾಟಕದಲ್ಲಿ ದಲಿತ ಚಳಚಳಿ ಎಲ್ಲರನ್ನು ಒಳಗೊಂಡಿತ್ತು, ಎಲ್ಲರನ್ನು ಪೊರೆಯುವ ತಾಯ್ತನ ದಲಿತ ಸಂಘರ್ಷ ಸಮಿತಿಗೆ ಇತ್ತು” ಎಂದರು.

“ದಸಂಸ ಎಲ್ಲ ಜಾತಿಯ ನೊಂದವರನ್ನು ತನ್ನ ಒಡಲೊಳಗೆ ಇಟ್ಟುಕೊಂಡಿತ್ತು, ಅಂತಹ ತಾಯ್ತನದಿಂದ ಎಲ್ಲರನ್ನೂ ಪೊರೆದ ದೊಡ್ಡ ಚಳವಳಿಯೇ ದಲಿತ ಸಂಘರ್ಷ ಸಮಿತಿ. ಬಿ.ಕೃಷ್ಣಪ್ಪ, ಸಿದ್ದಲಿಂಗಯ್ಯ, ದೇವನೂರ ಮಹಾದೇವ ಸೇರಿದಂತೆ ಅನೇಮಕ ಕವಿಗಳು, ಕಲಾವಿದರು, ಹಾಡುಗಾರರು ಈ ಚಳವಳಿಯನ್ನು ಮುನ್ನಡೆಸಿದರು. ಯಾರೂ ಕೂಡ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಯೋಚನೆ ಮಾಡಿದವರಲ್ಲ; ಅಂಬೇಡ್ಕರ್ ಚಿಂತನೆ ಹಡರುವುದು ಮಾತ್ರ ಅವರ ಗುರಿಯಾಗಿತ್ತು; ದಲಿತರ ಮೇಲೆಲಿನ ದೌರ್ಜನ್ಯ ತಡೆಯುವುದಾಗಿತ್ತು. ಆದರೆ, ದೌರ್ಜನ ಇಂದಿಗೂ ನಿಂತಿಲ್ಲ” ಎಂದು ಹೇಳಿದರು.

“ಕೃಷ್ಣಪ್ಪ ಅವರು ದಲಿತ ಚಳವಳಿಯಲ್ಲಿದ್ದಾಗ ಮಾವಳ್ಳಿ ಕೇಂದ್ರ ಸ್ಥಾನವಾಗಿತ್ತು. ಬಿಕೆ ಅವರ ಜೊತೆಗೆ ಸಿದ್ದಲಿಂಗಯ್ಯ, ದೇವನೂರು ಮಹಾದೇವ, ತ್ಯಾಗಿ ಸೇರಿದಂತೆ ಅನೇಕರು ಮಾವಳ್ಳಿಯ ಸತ್ಯಮ್ಮನ ಗುಡಿಯಲ್ಲಿ ಕೂರುತ್ತಿದ್ದರು. ಕೃಷ್ಣಪ್ಪ ಅವರು ಅದ್ಭುತವಾಗಿ ಹೋರಾಟದ ಹಾಡುಗಳನ್ನು ಹಾಡುತ್ತಿದ್ದರು. ಬಿಕೆ ಹಾಡುಗಳ ಮೂಲಕ ನಾವು ದಲಿತ ಚಳವಳಿಯ ಭಾಗವಾದವರು. ಅವರ ಕನಸು ಮತ್ತು ಚಿಂತನೆಗಳನ್ನು ನಾವು ಮೈಗೂಡಿಸಿಕೊಂಡೆವು. ಗದಗಿಗೆ (ಸಾವನ್ನಪ್ಪಿದ ಸ್ಥಳ) ಹೊರಡುವ ಹಿಂದಿನ ದಿನ ಅವರನ್ನು ನಾನು ಬೆಂಗಳೂರಿನಿಂದ ಬಸ್‌ ಹತ್ತಿಸಿದೆ. ದಲಿತ ಚಳವಳಿಯ ಆರಂಭದ ದಿನದಿಂದಲೂ ಅವರ ಕೊನೆಯ ದಿನದವರೆಗೆ ನಮ್ಮನ್ನು ಕೈಹಿಡಿದು ನಡೆಸಿದರು” ಎಂದರು.

“ತಮ್ಮ ಜೀವನವನ್ನು ದಲಿತ ಚಳವಳಿಗೆ ಮೀಸಲಿಟ್ಟಿದ್ದ ಅನೇಕ ಹೋರಾಟಗಾರರನ್ನು ಇಂದು ನಾವು ಕಳೆದುಕೊಂಡಿದ್ದೇವೆ. ನಮ್ಮ ಹಿರಿಯರನ್ನು ನಾವು ನೆನೆಪಿಸಿಕೊಳ್ಳುವ ಜೊತೆಗೆ ಅವರ ಚಿಂತನೆಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

“ಮೂರು ದಶಕಗಳ ಕಾಲ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ದಸಂಸ ನಿರಂತರವಾಗಿ ಮಾತನಾಡುತ್ತಿತ್ತು. ಇದರಿಂದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಸಿಆರ್‌ಇ) ಸೆಲ್ ಆರಂಭವಾಯಿತು. ನಮಗೆ ಅಧಿಕಾರ ಇಲ್ಲ, ನಮ್ಮಿಂದ ಎಫ್‌ಐಆರ್‌ ಹಾಕಲು ಸಾಧ್ಯವಿಲ್ಲ ಎಂದು ಎಂದು ಅಲ್ಲಿನ ಎಸ್‌ಪಿ-ಡಿಸಿಪಿಗಳು ಹೇಳುತ್ತಿದ್ದರು. ಅವರಿಗೆ ಅಧಿಕಾರ ಕೊಡಿ ಎಂದು ನಾವು ಹಲವು ಭಾರಿ ಒತ್ತಾಯಿಸಿದ್ದೇವೆ. ದಲಿತ ಚಳವಳಿ ಎತ್ತಿದ ಪ್ರಶ್ನೆಗೆ ಡಿಸಿಆರ್‌ಇ (ವಿಶೇಷ ಪೊಲೀಸ್ ಠಾಣೆ) ಸೆಲ್ ಆರಂಭಿಸುವ ಮೂಲಕ ಮಹದೇವಪ್ಪ ಇಂದು ಉತ್ತರಿಸಿದ್ದಾರೆ. ದಲಿತ ಸಮುದಾಯದ ರಕ್ಷಣೆಗೆ ದೇಶದಲ್ಲೇ ಅತ್ಯಂತ ವ್ಯವಸ್ಥಿತಿ ಪೊಲೀಸ್ ಠಾಣೆ ಅರಂಭಿಸಿರುವುದು ಕರ್ನಾಟಕ ಸರ್ಕಾರ ಮಾತ್ರ; 32 ಡಿಸಿಆರ್‌ಇ ಸೆಲ್ ಪೊಲೀಸ್ ಠಾಣೆಗಳನ್ನು ಸರ್ಕಾರ ಆರಂಭಿಸಿದೆ. ದಸಂಸದ ಬೇಡಿಕೆಯನ್ನು ಜಾರಿ ಮಾಡುವ ಇಚ್ಛಾಶಕ್ತಿ ಈವರೆಗೆ ಯಾರಿಗೂ ಇರಲಿಲ್ಲ, ಅದನ್ನು ಜಾರಿಗೆ ತಂದ ಮಹದೇವಪ್ಪ ಅವರನ್ನು ನಾವು ಅಭಿನಂದಿಸಲೇಬೇಕು” ಎಂದು ಪ್ರಶಂಸಿದರು.

“ದಲಿತರಿಗೆ ಭೂಮಿ ಇದ್ದಿದ್ದರೆ ಅವರ ಮೇಲಿನ ದೌರ್ಜನ್ಯಗಳು ಕಡಿಮೆ ಆಗುತ್ತಿದ್ದವು; ಭೂಮಿ ಎಂಬುದು ಒಂದು ಸಾಧನವಾಗಿದೆ. ದಲಿತ ಚಳವಳಿ ಆರಂಭಿಸಿದ ಪಿಟಿಎಸ್‌ಎಲ್‌ ಮೂಲಕ ಒಂದಷ್ಟು ಭೂಮಿ ಸಿಕ್ಕಿದೆ. ಅದನ್ನೂ ಪ್ರಬಲ ಜಾತಿಗಳು ವಿರೋಧಿಸಿವೆ. ಪಿಟಿಸಿಎಲ್‌ ಕಾಯ್ದೆಯನ್ನು ಸುಪ್ರೀಂ ಕೋರ್ಟಿನಲ್ಲಿ ನಮ್ಮ ಪ್ರಯತ್ನವಾಗಿ ಮಾಡಲು ಸರ್ಕಾರ ಕೆಲಸ ಮಾಡುತ್ತಿದೆ. ಲಕ್ಷಲಕ್ಷ ದರಕಾಸ್ತು ಭೂಮಿ ಅರ್ಜಿಗಳು ಕೊಳೆಯುತ್ತಾ ಬಿದ್ದಿವೆ. ಈ ಬಗ್ಗೆ ಯಾವ ಶಾಸಕರೂ ಮಂತ್ರಿಗಳು ಸಭೆ ನಡೆಸುತ್ತಿಲ್ಲ. ಅರಣ್ಯ ಇಲಾಖೆ ದಲಿತರ ಭೂಮಿಗಳನ್ನು ಬಲವಂತವಾಗಿ ಕಿತ್ತುಕೊಂಡು ಸಾಮಾಜಿಕ ಅರಣ್ಯ ಮಾಡುತ್ತಿವೆ. ಅದನ್ನು ಕೇಳಿದವರನ್ನು ಹಿಡಿದು ಜೈಲಿಗೆ ಹಾಕುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.

ದಲಿತ ಚಳವಳಿಯನ್ನು ಹೊಸ ತಲೆಮಾರು ಒಗ್ಗೂಡಿಸಬೇಕು: ಪ್ರೊ. ನಟರಾಜ್ ಹುಳಿಯಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...