Homeಸಾಹಿತ್ಯ-ಸಂಸ್ಕೃತಿಕವನಭಾಷೆಯ ರದ್ದು: ಮೂರು ಭಾಷೆಗಳನ್ನು ದಾಟಿ ಬಂದ ಕವನ

ಭಾಷೆಯ ರದ್ದು: ಮೂರು ಭಾಷೆಗಳನ್ನು ದಾಟಿ ಬಂದ ಕವನ

- Advertisement -
- Advertisement -

(“ಇತ್ತೀಚೆಗೆ ಭಾಷಾಧಿಪತ್ಯದ ಧೊರಣೆಯ ಬಗ್ಗೆ ರಹೀಂ ಪೊನ್ನಾಡ್ ಬರೆದ ಮಲೆಯಾಳಂ ಕವನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬಂದ ಹಿಂದೀ ಅನುವಾದವನ್ನು ನೋಡಿ ತೆಲುಗಿಗೆ ಅನುವಾದ ಮಾಡದೇ ಇರಲು ಸಾಧ್ಯವಾಗಲಿಲ್ಲ” ಎಂದು ಕವನವನ್ನು ತೆಲುಗಿಗೆ ಅನುವಾದ ಮಾಡಿದ ಮುಖಪುಟದ ಗೆಳೆಯ ಎನ್. ವೇಣುಗೋಪಾಲ್ ಬರೆದುಕೊಂಡಿದ್ದಾರೆ. ನನ್ನ ಸ್ಥಿತಿಯು ಸಹಾ ಅಂಥದ್ದೇ ಆಗಿರುವುದರಿಂದ ಕನ್ನಡಾನುವಾದ ನಮ್ಮೆಲ್ಲರಿಗಾಗಿ…)

ಒಂದು ದಿನ ಅರ್ಧ ರಾತ್ರಿ
ಆತ ಭಾಷೆಯ ಮೇಲೆ ನಿಷೇಧವೇರಿದ
‘ಇಂದಿನಿಂದ ಎಲ್ಲರದ್ದೂ ಒಂದೇ ಭಾಷೆ”
ಹಳೇ ಭಾಷಾ ಪದಗಳು ನಿಮ್ಮಲ್ಲಿದ್ದರೆ
ಅಂಚೆ ಕಚೇರಿಯಲ್ಲಿ ಬದಲಾಯಿಸಿ ಕೊಳ್ಳಬಹುದು’
ಎಂಬ ಗಂಭೀರ ಪ್ರಕಟಣೆ ಹೊರಡಿತು

ಅರ್ಧ ನಿದ್ರೆಯಲ್ಲಿದ್ದ ಜನರು
ಬೆಚ್ಚಿಬಿದ್ದು
ಓಟ ಶುರುಮಾಡಿದರು
ಪ್ರತಿಯೊಂದು ಜಾಗದಲ್ಲೂ ನಿಶ್ಶಬ್ಧ
ತಾಯಂದಿರು ಮಕ್ಕಳ ಬಾಯನ್ನು ಕೈಗಳಿಂದ ಮುಚ್ಚಿದ್ದಾರೆ
ಮುದುಕರ ಮುಖಗಳನ್ನು ಬಟ್ಟೆಯಿಂದ ಮರೆಮಾಚಿದ್ದಾರೆ
ದೇವಾಲಯಗಳಲ್ಲಿ ಹಾಡುಗಳು ನಿಂತುಹೋಗಿವೆ
ಮಸೀದಿಯಲ್ಲಿ ಅಜಾನ್ ಸಹಾ ಕೇಳಿಸುತ್ತಿಲ್ಲ
ರೇಡಿಯೋದಲ್ಲಿ ವೀಣಾ ವಾದನೆ ಬಿಟ್ಟರೆ ಮತ್ತೇನೂ ಕೇಳಿಸುತ್ತಿಲ್ಲ
ಟೀವಿ ಪರದೆಯ ಮೇಲೆ ಸನ್ನೆಯ ಭಾಷೆಯಲ್ಲೇ ವಾರ್ತೆಗಳು ಬರುತ್ತಿವೆ
ಪತ್ರಿಕೆಗಳ ಹೆಸರಲ್ಲಿ
ಸಂತೆಗೆ ಬಂದಿರುವುದು ಎಂಟು ಕಾಲಂಗಳು ಖಾಲಿ ಇರುವ ಬಿಳಿ ಕಾಗದಗಳು
ಎಲ್ಲಾ ಕೀಬೋರ್ಡ್‍ಗಳು ಮೌನತಾಳಿವೆ
ಮೊಬೈಲ್ ಸ್ಕ್ರೀನ್‍ಗಳ ಮೇಲೆ
ಗೊಂಬೆಗಳು ಮಾತ್ರ ಉಳಿದಿವೆ

ಅಂಚೆ ಕಚೇರಿಯ ಮುಂದೆ ನಿಶ್ಶಬ್ದವಾಗಿ ನಿಂತ ಉದ್ದನೆಯ ಕ್ಯೂ
ದಿನಕ್ಕೆರಡು ಪದಗಳನ್ನು ಮಾತ್ರ ಬದಲಾಯಿಸಿಕೊಳ್ಳಲು
ಅನುಮೋದನೆ ನೀಡಲಾಗಿದೆ
ಆದರೆ ಕೆಲವರು ಚೀಲಗಳ ತುಂಬಾ ಶಬ್ದಗಳನ್ನು ತುಂಬಿಕೊಂಡು ಬಂದಿದ್ದಾರೆ
ಟಿಫಿನ್ ಬಾಕ್ಸ್‌ಗಳಲ್ಲಿ ಬ್ಯಾಗುಗಳಲ್ಲಿ ಮಾತುಗಳನ್ನು
ತುಂಬಿಕೊಂಡು ಬಂದ ಪುಟಾಣಿ ಮಕ್ಕಳು ಕೂಡಾ ಕ್ಯೂನಲ್ಲಿ ನಿಂತಿದ್ದಾರೆ

‘ಅಮ್ಮ’ ಎಂಬ ಮಾತು ಕೊಟ್ಟವರಿಗೆ
‘ಮಾ’ ಎಂಬ ಮಾತು ಸಿಕ್ಕಿದೆ
‘ಅಪ್ಪ’ ಎಂಬ ಮಾತಿಗೆ
‘ಬಾಪ್‘ ಎಂಬ ಮಾತು ಸಿಕ್ಕಿತು
ಚಾಕೊಲೇಟ್, ಗೇಮ್ ಎಂಬ ಪದಗಳನ್ನು ಬದಲಾಯಿಸಿಕೊಳ್ಳಲು ಬಂದ ಮಕ್ಕಳನ್ನು
ಕೌಂಟರ್‌ನಿಂದ ಕಳುಹಿಸೇಬಿಟ್ಟರು
ಇಲ್ಲಿ ಭಾಷೆಯನ್ನು ಮಾತ್ರ ಬದಲಾಯಿಸಿಕೊಳ್ಳಬಹುದು ಎಂದರು

ಬದಲಾಯಿಸಲು ಶಬ್ಧಗಳಿಲ್ಲ ಎಂಬ ಕಾರಣಕ್ಕಾಗಿ
‘ಅಸಂತೃಪ್ತಿ’ ಎಂಬ ಪದವನ್ನು
‘ಹೆಣದ ವಸ್ತ್ರ’ ಎಂಬ ಪದವನ್ನು ಹಿಂದಕ್ಕೆ ಕಳುಹಿಸಿದರು

‘ಚೂರಿ’ ಪದವನ್ನು ಬದಲಾಯಿಸಲು ಬಂದವರನ್ನು ಓಡಿಸಿಬಿಟ್ಟರು
‘ಮದ್ದುಗುಂಡು’ ಎಂಬ ಪದ ಬದಲಾಯಿಸಿ ಎಂದರೆ
ಪೊಲೀಸರು ಸೆರೆ ಹಿಡಿದರು
ಕ್ಯೂನಲ್ಲಿ ನಿಂತು ನಿಂತು ಸುಸ್ತಾದ ಮುದುಕರು
ಕುಡಿಯಲು ನೀರು ಕೇಳಿದರೆ
ತುಪಾಕಿ ತೋಟಾಗಳಿಂದ ಬಾಯಿ ಮುಚ್ಚಿಸಿದರು

ಇದೆಲ್ಲವನ್ನೂ ನೋಡಿ ನೋಡಿ
ಸಾಕಾಗಿ ಮನೆಗೆ ಬಂದರೆ
ಮನೆ ಅಂಗಳದಲ್ಲಿ ಮಾತುಗಳ ರಾಶಿ ಬಿದ್ದಿದೆ
ಹೊಸ ಪದಗಳು, ಹಳೆ ಪದಗಳು, ಲಿಪಿ ಇಲ್ಲದ ಪದಗಳು
ಬದಲಾಯಿಸಿಕೊಂಡು ತರಬೇಕಾದ ಪದಗಳು

ಮನೆಯವರು ಎಲ್ಲವನ್ನೂ ರಾಶಿರಾಶಿಯಾಗಿ ಸುರಿದಿದ್ದಾರೆ
ಅಪ್ಪ ತನ್ನ ತಲೆದಿಂಬು ಒಳಗಿಂದ ತೆಗೆದ ಪದಗಳು
ನನಗೆ ಅರ್ಥವೇ ಆಗಲಿಲ್ಲ
ಅಮ್ಮ ತನ್ನ ಮಡಿಲಲ್ಲಿ ತುಂಬಿಕೊಂಡಿರುವ ಪದಗಳನ್ನು ನಾನೆಂದೂ ಕೇಳಲೇ ಇಲ್ಲ
ನನ್ನ ಹೆಂಡತಿ ಅಡುಗೆ ಮನೆಯಿಂದ ಎಳೆದುತಂದ ಪದಗಳನ್ನು ನೋಡಿದರೆ
ಅಷ್ಟು ಮಾತುಗಳ ಮಧ್ಯದಲ್ಲೇ ಆಕೆ ಅಡುಗೆ ಮಾಡುತ್ತಿದ್ದಳು ಅನಿಸಿತು
ನನ್ನ ಮಗಳ ಶಾಲೆಯ ಬ್ಯಾಗಿನಲ್ಲಿ ಹೋಂವರ್ಕ್ ಪದಗಳು
ನನ್ನ ಮಗನ ಪೆಟ್ಟಿಗೆಯಲ್ಲಿ ಹರಡಿರುವ ಜೋಷಿನ ಮಾತುಗಳು
ಎಷ್ಟೇ ಪದಗಳಿದ್ದರೂ ಬದಲಾಗಿ ಎರಡೇ ಎರಡು ಮಾತುಗಳು
ಮಾತ್ರ ಸಿಗುತ್ತವೆ ಎಂದು ಹೇಗೆ ಹೇಳಲಿ?

ಆ ಮಾತುಗಳ ಗಂಟಿನಲ್ಲಿ ತುಂಬಾ ಹುಡುಕಿದೆ
ಬಹಳ ಕಷ್ಟಪಟ್ಟ ಮೇಲೆ
ನನ್ನ ಕೈಗೆ ಎರಡು ಪದಗಳು ಸಿಕ್ಕವು
ಇರೋ ಬರೋ ಶಕ್ತಿ ಎಲ್ಲಾ ಬಳಸಿ
ಆ ಮಾತುಗಳನ್ನು ಹೊರಗೆ ಎಳೆದಿದೆ
ಒಂದು “ಪ್ರಜಾತಂತ್ರ” ಮತ್ತೊಂದು “ಬಹುಳ”

ಬೇಗ ಬೇಗ ಓಡಿಹೋಗಿ ಅಂಚೆ ಕಚೇರಿಗೆ ತಲುಪುವ ವೇಳೆಗೆ
ಮುಸ್ಸಂಜೆ ಕತ್ತಲಾಗುತ್ತಿತ್ತು
ನನ್ನ ಕೈಯಲ್ಲಿರುವ ಮಾತುಗಳನ್ನು ನೋಡಿ
ಬೆಚ್ಚಿಬಿದ್ದು ಎದ್ದು ನಿಂತರು
ಕೌಂಟರಿನ ಉದ್ಯೋಗಿಗಳು
ನನ್ನ ಕೈಯಲ್ಲಿನ ಮಾತುಗಳು ಜಾರಿ ಕೆಳಗೆ ಬಿದ್ದವು
ತುಂಬಾ ಜನ ಓಡಿ ಬಂದು ಸುತ್ತುವರೆಯುತ್ತಿರುವಂತೆ ಬೂಟು ಹೆಜ್ಜೆಗಳ ಸದ್ದು ಕೇಳಿಸಿತು
ಪ್ರಜ್ಞೆ ತಪ್ಪಿ ಬೀಳುತ್ತಿರುವ ನನಗೆ
ಎರಡೇ ಎರಡು ‘ಮಾತು’ಗಳು ಕೇಳಿಸಿತು
“ಸಾಯಿಸಿಬಿಡಿ” – “ದೇಶದ್ರೋಹಿಯನ್ನ”

ಮಲೆಯಾಳಂ ಮೂಲ : ರಹೀಮ್ ಪೊನ್ನಾಡ್
ಹಿಂದಿ : ಎ. ಆರ್. ಸಿಂಧು, ವೀಣಾ ಗುಪ್ತ
ತೆಲುಗು : ಎನ್.ವೇಣುಗೋಪಾಲ್
ಕನ್ನಡಾನುವಾದ : ಪದ್ಮಾ ಕೆ ರಾಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈಶಾನ್ಯ ಭಾರತದಲ್ಲಿ ಕೇವಲ ನೂರು ವರ್ಷಗಳಲ್ಲಿ ಚರ್ಚ್ 60ಕ್ಕೂ ಅಧಿಕ ಭಾಷೆಗಳನ್ನು ಕೊಂದು ಇಂಗ್ಲಿಷ್ ಅನ್ನು ಸ್ಥಾಪಿಸಿದಾಗ, ಕೇರಳ ಸರಕಾರ ಕಾಸರಗೋಡಿನಲ್ಲಿ ಸಾವಿರಾರು ತುಳು, ಕನ್ನಡ, ಕೊಂಕಣಿ ಸಂಸಾರಗಳನ್ನು ಓಡಿಸಿದಾಗ ರಹೀಮರು ಕವನ ಬರೆಯಲಿಲ್ಲ!! ಮಂಗಳೂರು, ಚೆನ್ನೈ, ಮುಂಬಯಿ ಮುಂತಾದೆಡೆ ಕನ್ನಡ, ತುಳು, ತಮಿಳು, ಮರಾಠಿ ಭಾಷೆಗಳನ್ನು ಬಿಟ್ಟು ಹಿಡಿದದ್ದು ಹಿಂದಿಯನ್ನಲ್ಲ, ಇಂಗ್ಲಿಷನ್ನು!!! ಅವರ ಸಂಖ್ಯೆ ಈಗ ಶೇಕಡಾ 40 ದಾಟಿದೆ!!! ರಹೀಮರ ಪದ್ಯವನ್ನು ಅವರ ಮುಂದೆ ಓದಿದರೆ ಬಿದ್ದು ಬಿದ್ದು ನಗುತ್ತಾರೆ!!!

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...