Homeಕರ್ನಾಟಕಪತ್ರಿಕೆಯ ಮೂಲಕ ಜನಪರ ಹೋರಾಟಕ್ಕೆ ಆಖಾಡ ಸಿದ್ಧ!...

ಪತ್ರಿಕೆಯ ಮೂಲಕ ಜನಪರ ಹೋರಾಟಕ್ಕೆ ಆಖಾಡ ಸಿದ್ಧ!…

- Advertisement -
- Advertisement -

ಜನವಾಹಿನಿಯ ನೆನಪುಗಳು: ಅಂಕಣ-7
ನಿಖಿಲ್ ಕೋಲ್ಪೆ

ಕೃಪೆ: ’ಆರ್ಸೋ’ ಕೊಂಕಣಿ ಪತ್ರಿಕೆ

ಮೊದಲೇ ಹೇಳಿದಂತೆ ಕಂಪ್ಯೂಟರ್ ಇತ್ಯಾದಿ ಬಂದಿದ್ದರೂ, ಆಗ ಆನ್ಲೈನ್ ಎಡಿಟಿಂಗ್ ಹೊಸ ವಿಷಯವಾಗಿದ್ದುದರಿಂದ ಅದಕ್ಕಾಗಿಯೇ ಕಂಪ್ಯೂಟರ್ ಮತ್ತು ಸಾಫ್ಟ್‌ವೇರ್ ಪೂರೈಸಿದ ಕಂಪೆನಿಯವರು ವಿಶೇಷ ತರಬೇತಿ ಏರ್ಪಡಿಸಿದ್ದರು.

ನಮ್ಮಲ್ಲಿ ಕೆಲವರು ಪೇಜ್‍ಮೇಕರ್ ಇತ್ಯಾದಿಗಳಲ್ಲಿ ನಿಷ್ಣಾತರಾಗಿದ್ದರೂ, ನನ್ನನ್ನೂ ಸೇರಿದಂತೆ ಕೆಲವರಿಗೆ ಕನ್ನಡ ಟೈಪಿಂಗ್ ಕೂಡಾ ಬರುತ್ತಿರಲಿಲ್ಲ! ವಿಭಾಗ ಮುಖ್ಯಸ್ಥರು ಸುದ್ದಿಗಳನ್ನು ಆಯ್ಕೆ ಮಾಡಿ, ಉಪಸಂಪಾದಕರಿಗೆ ಹಂಚಬೇಕು. ಉಪಸಂಪಾದಕರು ಟೈಪ್ ಮಾಡಿದ್ದನ್ನು ಮತ್ತೊಮ್ಮೆ ಓದಿ ವಿಭಾಗ ಮುಖ್ಯಸ್ಥರಿಗೆ ಆಂತರಿಕ ನೆಟ್ವರ್ಕ್ ಮೂಲಕ ಕಳಿಸಬೇಕು. ಅದನ್ನವರು ಪರಿಶೀಲಿಸಿ, ಹೆಡ್ಡಿಂಗ್ ಇತ್ಯಾದಿ ಸರಿಪಡಿಸಿ ಮರಳಿ ಪೇಜ್ ಮಾಡಲು ಕಳಿಸಬೇಕು. ಪೇಜ್ ಮಾಡಿದ ಬಳಿಕ ಅದರ ಪ್ರಿಂಟ್ ತೆಗೆದು ಮತ್ತೆ ಮುಖ್ಯಸ್ಥರಿಗೆ ತೋರಿಸಿ, ಅವರು ಅಂಗೀಕರಿಸಿದ ಬಳಿಕ ಎ3 ಪ್ರಿಂಟರಲ್ಲಿ ಬಟರ್‍ಶೀಟ್‍ನಲ್ಲಿ, ಬಣ್ಣದ ಪುಟವಾಗಿದ್ದರೆ ಫಿಲ್ಮ್ ಶೀಟ್‌ನಲ್ಲಿ ಪ್ರಿಂಟ್ ತೆಗೆದು ಪ್ರೀಪ್ರೆಸ್‍ಗೆ ಕಳುಹಿಸಬೇಕು. ಅಲ್ಲಿ ಪ್ಲೇಟ್ ತಯಾರಿಸಿ ಮುದ್ರಣ ವಿಭಾಗಕ್ಕೆ ಕಳಿಸುತ್ತಾರೆ. ಇದಕ್ಕಾಗಿ ಎಲ್ಲಾ ಕಂಪ್ಯೂಟರ್‌ಗಳಿಗೆ ಸಿರಿಯಲ್ ನಂಬರ್ ನೀಡಲಾಯಿತು. (ನಂತರ ಬಣ್ಣದ ಪುಟಗಳಿಗೆ ದುಬಾರಿ ಬೆಲೆಯ ಆ ಕಾಲದಲ್ಲಿ ಅತ್ಯಾಧುನಿಕ ಎನಿಸಿದ ಇಮೇಜ್ ಸೆಟ್ಟರ್ ಬಂತು. ಅದು ಕಲರ್ ಸೆಪರೇಶನ್ ಮಾಡಿ ಇಡೀ ಪುಟದ ಫಿಲ್ಮ್ ಹೊರತೆಗೆಯುತ್ತಿತ್ತು.)

ಆಗ ಈಗಿನಂತೆ ಎಲ್ಲವೂ ಡಿಜಿಟಲ್ ಫೋಟೋಗಳಾಗಿರಲಿಲ್ಲ. ಪ್ರಿಂಟ್‍ಗಳೂ ಇರುತ್ತಿದ್ದವು. ಅವುಗಳನ್ನು ತಾಂತ್ರಿಕ ವಿಭಾಗಕ್ಕೆ ಕಳುಹಿಸಿದರೆ, ಅಲ್ಲಿ ಸ್ಕ್ಯಾನ್ ಮಾಡಿ ಆಯಾ ಫೋಲ್ಡರ್‌ಗಳಿಗೆ ಹಾಕುತ್ತಿದ್ದರು. ದೇಶ, ವಿದೇಶಗಳ ಫೋಟೋಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಅವು ಸಂಜೆಯ ಹೊತ್ತಿಗೆ ಇಂಟರ್‌ನೆಟ್ ಮೂಲಕ ಬರುತ್ತಿದ್ದವು. ನೆಟ್‍ಗಾಗಿಯೇ ಡೆಡಿಕೇಟೆಡ್ ಕೇಬಲ್ ಅಳವಡಿಸಲಾಗಿತ್ತು. ಆದರೂ, ಆಗಿನ ಸ್ಪೀಡ್ ನೆನೆಸಿಕೊಂಡರೆ ನಗು ಬರುತ್ತದೆ! ಒಂದು ಫೋಟೋ ಬರಲು ಹೆಂಡತಿಯ ಹೆರಿಗೆಗಾಗಿ ಆಸ್ಪತ್ರೆಯಲ್ಲಿ ಕಾಯುವ ಗಂಡನ ಸ್ಥಿತಿ!

ಇವೆಲ್ಲವೂ ಈಗ ನೆನಸುವಷ್ಟು ಸುಲಭವಾಗಿ ಇರಲಿಲ್ಲ! ಇದಕ್ಕೆ ಹೊಂದಿಕೊಳ್ಳಲು ಕೆಲವು ದಿನಗಳೇ ಹಿಡಿದವು! ಅದಕ್ಕಾಗಿಯೇ ತರಬೇತಿ. ಕಂಪೆನಿಯಿಂದ ಸೌರಭ್ ಎಂಬ ಯುವಕ ಬಂದಿದ್ದರು. ಆತ ಒಳ್ಳೆಯ ಶಿಕ್ಷಕ. ನಡುವೆ ಪ್ರಶ್ನೆಗಳನ್ನು ಕೇಳಿ ಸರಿ ಉತ್ತರ ಹೇಳಿದವರಿಗೆ ಒಂದು ಚಾಕಲೇಟ್ ಬಹುಮಾನ! ಕಂಪ್ಯೂಟರ್ ಅಜ್ಞಾನಿಯಾಗಿದ್ದ ನನಗೆ ಮೂರು ಚಾಕಲೇಟ್ ಸಿಕ್ಕಿದ್ದು ಇವತ್ತೂ ನೆನಪಿದೆ. ನಾವೆಲ್ಲ ಬಿಡುವಿನ ಸಂದರ್ಭದಲ್ಲಿ ಕನ್ನಡ ಟೈಪಿಂಗ್ ಕಲಿತೆವು. ಮೊದಲೇ ಹೇಳಿದಂತೆ DOS ಆಧರಿತ ‘ಪ್ರಕಾಶಕ್’ ಎಂಬ ಸಾಫ್ಟ್‌ವೇರ್. ಕಲಿಯಲು ಕಷ್ಟ. ಯಾಕೆಂದರೆ ಕೀ ಬೋರ್ಡ್ ಅಸಂಬದ್ಧ ಎಂಬಂತೆ ಕಾಣುತ್ತಿತ್ತು. ಇಂಗ್ಲೀಷ್ ಅಕ್ಷರಗಳಿಗೂ ಅದಕ್ಕೂ ಸಂಬಂಧವೇ ಇಲ್ಲ! ಒಮ್ಮೆ ಕಲಿತರೆ ಅತ್ಯಂತ ಸರಳ ಮತ್ತು ಅನುಕೂಲಕರ. ನಾನಂತೂ ಸ್ವಲ್ಪ ಸಮಯದಲ್ಲೇ ಹೆಚ್ಚುಕಡಿಮೆ ಮಾತಿನ ವೇಗದಲ್ಲಿ ಟೈಪ್ ಮಾಡಲು ಕಲಿತೆ! ಆಗ ಕಲಿತ ಒಂದು ಪಾಠವೆಂದರೆ, ಏನನ್ನಾದರೂ ಕಲಿಯಲು ಇರುವ ಅಡ್ಡಿಯೆಂದರೆ ಮಾನಸಿಕ ಹಿಂಜರಿಕೆ (mental block). ಇದನ್ನು ನಿವಾರಿಸಿದ್ದಕ್ಕಾಗಿ ಸೌರಭ್‌ರನ್ನು ನೆನಪಿಸಿಕೊಳ್ಳುತ್ತೇನೆ.

ಮೊದಲೇ ದುಬಾರಿ ಕಂಪ್ಯೂಟರ್! ಏನು ಮಾಡಿದರೆ ಏನು ಹಾಳಾಗುತ್ತದೋ ಎಂಬ ಭಯ ಬೇರೆ! “ನೀವು ಇದನ್ನು ಎತ್ತಿ ಹಾಕದ ಹೊರತು ಏನೂ ಆಗುವುದಿಲ್ಲ. ಪ್ರೋಗ್ರಾಂ ಫೈಲ್ಸ್ ಮುಟ್ಟಬೇಡಿ. ಮುಟ್ಟಿದರೂ ಅದು ಕನ್ಫರ್ಮೇಶನ್ ಕೇಳುತ್ತದೆ. ಡಿಲೀಟ್ ಮಾಡಬೇಡಿ. ಉಳಿದಂತೆ ನೀವು ಕಂಪ್ಯೂಟರ್ ಹಾಳು ಮಾಡಿ ತೋರಿಸಿ. ನಾನು ಬೇರೆ ಕಂಪ್ಯೂಟರ್ ಕೊಡುತ್ತೇನೆ” ಎಂದು ಅವರು ಧೈರ್ಯ ತುಂಬಿದ್ದರು! ಇದರಿಂದ ಮುಂದೆ ನಾವಾಗಿಯೇ ಒಂದೊಂದನ್ನೇ ಧೈರ್ಯವಾಗಿ ಕಲಿಯಲು ಸಾಧ್ಯವಾಯಿತು.

ಎಷ್ಟರ ಮಟ್ಟಿಗೆ ಎಂದರೆ, ಅವರು ಫೈಲ್ ಶೇರಿಂಗ್ ಮಾಡಲು ಇ-ಮೈಲ್‍ನಂತಹ ಸಾಫ್ಟ್‌ವೇರ್ ಕೊಟ್ಟಿದ್ದರು. ಅದು ಕಿರಿಕಿರಿ ಉಂಟು ಮಾಡುತ್ತಿತ್ತು! ಮುಂದೆ ನಾವೇ explorer ಮೂಲಕ ಕಾಪಿ ಪೇಸ್ಟ್ ಮಾಡುವ ಸರಳ ಉಪಾಯ ಕಂಡು ಹಿಡಿದೆವು!

ನಾವು ಸೀನಿಯರ್‌ಗಳಿಗೆ ಈ ತರಬೇತಿಗಳಲ್ಲಿ ನಿರಂತರ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದೆ. ಕಾರಣ ನಾವು ಪತ್ರಿಕೆಯಲ್ಲಿ ಇರಬೇಕಾದ ಸ್ಥಿರ ಶೀರ್ಷಿಕೆ, ವಿಭಾಗಗಳು ಇತ್ಯಾದಿಗಳ ಬಗ್ಗೆ ತಲೆಕೆರೆದುಕೊಳ್ಳುತ್ತಿದ್ದೆವು. ಪಟ್ಟಣಗಳ ಸುದ್ದಿ ಪುಟಗಳಿಗೆ ‘ಪೇಟೆ-ಪಟ್ಟಣ’, ಗ್ರಾಮೀಣ ಸುದ್ದಿಗಳ ಪುಟಗಳಿಗೆ ’ಊರು-ಕೇರಿ’, ಕ್ರೀಡಾಪುಟಗಳಿಗೆ ‘ಆಟ-ಕೂಟ’ ಹೀಗೆ ಹೆಸರುಗಳನ್ನು ಪಟ್ಟಿ ಮಾಡಿ ಅಂತಿಮಗೊಳಿಸುವುದೂ ದೊಡ್ಡ ಕೆಲಸವಾಗಿತ್ತು.

ಇನ್ನೊಂದು ದೊಡ್ಡ ಕೆಲಸವೆಂದರೆ ಬೇರೆ ಬೇರೆ ಆವೃತ್ತಿಗಳನ್ನು ಯೋಜಿಸುವುದು! ಆಗಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಉಡುಪಿಗೆ ಒಂದು, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯಕ್ಕೆ ಒಂದು, ಮಂಗಳೂರಿಗೆ ಒಂದು ಮತ್ತು ಅಂತಿಮವಾಗಿ ಲೇಟ್ ಸಿಟಿ ಎಡಿಷನ್! ಜೊತೆಗೆ ಉತ್ತರ ಕನ್ನಡ, ಶಿವಮೊಗ್ಗ ಇತ್ಯಾದಿ ಜಿಲ್ಲೆಗಳಿಗೆ ಪ್ರತ್ಯೇಕ- ಹೀಗೆ ಹಲವು ಆವೃತ್ತಿಗಳು! ಇವುಗಳು ಎಷ್ಟು ದೂರ ಇವೆ, ಎಷ್ಟು ಗಂಟೆಗೆ ತಲುಪಬೇಕು, ಪುಟ ಎಷ್ಟು ಗಂಟೆಗೆ ಮುಗಿಯಬೇಕು, ಅದಕ್ಕೆ ತಕ್ಕಂತೆ ಸಿಬ್ಬಂದಿಗಳಿಗೆ ಶಿಫ್ಟ್ ಮತ್ತು ಕೆಲಸಕ್ಕೆ ಹಾಜರಾಗುವ ಸಮಯ ನಿಗದಿ ಪಡಿಸುವುದು ಇತ್ಯಾದಿಯಾಗಿ ಹಲವಾರು ತಲೆನೋವಿನ ಕೆಲಸಗಳು ನಮಗಿದ್ದವು!

ಇವೆಲ್ಲವನ್ನು ಅನುಷ್ಠಾನಕ್ಕೆ ತರಲು ಬೇರೆಬೇರೆ ವಿಭಾಗಗಳನ್ನು ರಚಿಸಲಾಯಿತು. ಆ ಕುರಿತು ಮತ್ತು ಅವುಗಳಲ್ಲಿ ನನಗೆ ನೆನಪಿರುವಂತೆ ಇದ್ದವರು ಯಾರು ಇತ್ಯಾದಿಗಳ ಕುರಿತು ಮುಂದೆ ಬರೆಯುತ್ತೇನೆ.
***

ಕಚೇರಿಯೇ ಮನೆಯಾಯಿತು!

ಪತ್ರಿಕೆಗಾಗಿ ಯೋಜನೆ, ತರಬೇತಿ ನಡೆಯುತ್ತಿದ್ದಾಗ ಮತ್ತು ನಂತರ ಪತ್ರಿಕೆ ಆರಂಭಗೊಂಡ ಬಳಿಕವೂ ನಾವು ಕೆಲವರು ಕಚೇರಿಯಲ್ಲಿಯೇ ಮಲಗುತ್ತಿದ್ದೆವು. ಕೆಲಸ ಅಷ್ಟಿತ್ತು! ಮುಖಪುಟ ನೋಡಿಕೊಳ್ಳಬೇಕಾಗಿದ್ದ ನನಗಂತೂ ನಿತ್ಯ ರಾತ್ರಿ ಪಾಳಿ ಖಾಯಂ! ರಾತ್ರಿ ಎಡಿಷನ್ ಮುಗಿಸಿ ಪತ್ರಿಕೆ ಪ್ರಕಟವಾಗಿ ಬಂಟ್ವಾಳ ಎಡಿಷನ್ ಸಾಗಿಸುವ ಕಾರಿನಲ್ಲಿ ಹೋಗಿ ಪಾಣೆಮಂಗಳೂರಿನಲ್ಲಿ ಇಳಿದು ಎರಡು ಕಿ.ಮೀ. ನಿಶಾಚರ ಪಿಶಾಚಿಯಂತೆ ನಡೆದು ಮನೆ ಸೇರಬೇಕು. ಮತ್ತೆ ನಿದ್ದೆಯ ಶಾಸ್ತ್ರ ಮಾಡಿ ಮರುದಿನ ಹಾಜರಾಗಬೇಕು. ಪ್ರಯಾಣದ ಸಮಯವೂ ವ್ಯರ್ಥ! ವಿಲ್ಫ್ರೆಡ್ ಡಿ’ಸೋಜಾ ಅವರಿಗೆ ಇನ್ನೂ ದೂರ- ಉಪ್ಪಿನಂಗಡಿ ದಾಟಿ ಹೋಗಬೇಕು. ಅಲ್ಲದೆ ಉಳಿದವರೂ ಬೈಕಂಪಾಡಿಯಿಂದ ರಾತ್ರಿ ಹೊತ್ತು ಸ್ವಂತ ವಾಹನವಿಲ್ಲದೇ ಹೊರಡುವುದು ಕಷ್ಟ. ನಗರದೊಳಗಿನ ಸಿಬ್ಬಂದಿಗೆ ವಾಹನ ವ್ಯವಸ್ಥೆ ಇತ್ತು.

ಒಂದು ದಿನ ಬೆಳ್ಳಂಬೆಳಗೆ ಆಡಳಿತ ನಿರ್ದೇಶಕ ಸ್ಯಾಮುಯೆಲ್ ಸಿಕ್ವೇರಾ ಕಚೇರಿಗೆ ಬಂದವರೇ ದಂಗು ಬಡಿದುಹೋದರು! ನಾವು ಕೆಲವರು ಕಚೇರಿಯಲ್ಲಿಯೇ ಸಿಕ್ಕಸಿಕ್ಕಲ್ಲಿ ಪೇಪರ್ ಹಾಸಿ ಮಲಗಿದ್ದೆವು. “ಹಾಂ! ನೀವು ಇಲ್ಲಿಯೇ ಮಲಗುತ್ತಿದ್ದೀರಾ!?” ಎಂದವರೇ, ಆಗ ಅವರ ಬಳಿ ಮಾತ್ರವಿದ್ದ ವಾಕಿಟಾಕಿ ಗಾತ್ರದ ಮೊಬೈಲ್ ಫೋನಿನಲ್ಲಿ ಮಾತನಾಡಲಾರಂಭಿಸಿದರು.

ಮಧ್ಯಾಹ್ನದ ಹೊತ್ತಿಗೆ ನಮ್ಮ ದೊಡ್ಡ ಹಾಲ್‍ನಲ್ಲಿ ಪಾರ್ಟಿಷನ್ ಆಯಿತು. ಫ್ಯಾನ್‍ಗಳು ಫಿಕ್ಸ್ ಆದವು. ಐದು ಮಂಚಗಳು, ಹಾಸಿಗೆ, ದಿಂಬು, ಹೊದಿಕೆ, ಬಟ್ಟೆಬರೆ ಇಡಲು ಲಾಕರ್ ಎಲ್ಲವೂ ಬಂದವು. ಅದೇ ರಾತ್ರಿಯಿಂದ ನಮ್ಮ ಪೇಪರ್ ಹಾಸಿಗೆಗೆ ವಿದಾಯ ಹೇಳಿದೆವು. ಇದಕ್ಕಾಗಿಯೇ ನಾನವರನ್ನು ಇಂದೂ ನೆನಪಿಸಿಕೊಳ್ಳುತ್ತೇನೆ. ನಾವೂ ಕೂಡಾ ಇಮ್ಮಡಿ ಪ್ರೀತಿಯಿಂದ ದುಡಿಯಲಾರಂಭಿಸಿದೆವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Thanks for this great write up on Janawahini by Nikhil Kolpe sir.. it manifests their struggle to get the newspaper published in time with perfection must be applauded.. Waiting for further episodes.

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...